ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ವಸುಂಧರಾ ಕಾವ್ಯಗುಚ್ಛ

ವಸುಂಧರಾ ಕದಲೂರು ಕಾವ್ಯಗುಚ್ಛ ಮುಖ್ಯ- ಅಮುಖ್ಯ ಮೇಲುಕೀಳಾಟದ ಯಾವತ್ತೂಯುದ್ಧ ಬೇಕಿಲ್ಲ. ಈ ಹೊತ್ತಿನ ತುತ್ತು;ಎಂದಿಗೆ ಒಲೆ ಹೊತ್ತಿ ಅನ್ನವೋಗಂಜಿಯೋ ಬೆಂದರಾಗುತ್ತಿತ್ತು, ಈಸತ್ಯದ ಬಾಬತ್ತೇ ನಮಗೆ ಮುಖ್ಯ. ಚದುರಂಗದಾಟ ಎಂದೆಣಿಸಿ, ದಾಳಉದುರಿಸಿ, ಗಾಳ ಹಾಕಿ -ದಾಳಿಮಾಡಿ, ಕೋಟೆಗೋಡೆಗಳನು ಕಟ್ಟುತ್ತಾಕೆಡವುತ್ತಾ, ಸಿಂಹಾಸನಾರೋಹಣ,ಪದಾಘಾತ- ಅಧಃಪತನ ಯಾರಿಗಾದರೇನು?ನಮಗೆ ಅಮುಖ್ಯ. ಯುದ್ಧವೆಂದರೆ ಕಂದನ ತೊಟ್ಟಿಲಮೇಲೆ ತೂಗುಬಿದ್ದ ಘಟಸರ್ಪ; ಕಕ್ಕಿದರೂಕುಕ್ಕಿದರೂ ಆಪತ್ತೇ. ಬದುಕು ಕಸಿದಂತೆ,ಆಸೆ ಕುಸಿದಂತೆ ಮಾಡುವೀ ಅಜೀವನ್ಮುಖಿಯುದ್ಧ ನಮಗೆ ಅಮುಖ್ಯ. ಹೂವಿನೊಡಲ ಮಕರಂದಕೆ ಎರವಾಗುವದುಂಬಿಯಾಡುವ ಯುದ್ಧ; ಮಳೆಮೋಡದತಡೆಗೆ ಬೆಟ್ಟ ಸಾಲು ಹೂಡುವ ಹುಸಿ ಯುದ್ಧ,ಹಸಿದ ಒಡಲ ತಣಿಸಲು ಅವ್ವನಂತವರಒಡಲ ಬೇಗುದಿಯ ಯುದ್ಧ ; ದುಡಿಮೆಗಾರರನಿರಂತರ ರಟ್ಟೆ ಯುದ್ಧ ನಮಗೆ ಬಲು ಮುಖ್ಯ. ‘ಅರಿವೇ ಗುರು’ ದೀಪವಾರಿಸಿಬಿಟ್ಟೆ; ಸೂರ್ಯನೂಮುಳುಗಿದ. ಕತ್ತಲೆಂದರೆ-ಕತ್ತಲು, ಒಳಹೊರಗೂ.. ಮೌನಕ್ಕೆ ಶರಣಾಗಿ ಕಿವುಡುಗಿವಿತೆರೆದಿದ್ದೆ, ಶಾಂತಿಯೆಂದರೆಶಾಂತಿ ಒಳಹೊರಗೂ.. ಇತಿಮಿತಿಯ ಅರಿವಾಯ್ತು ಈಗ,ನನ್ನದು ಮತ್ತೂ ಹೆಚ್ಚಾಗಿ ಅವರದು.ಜಾಗರೆಂದರೆ ಜಾಗರೂಕಳೀಗ.. ಮಮತೆ ಕಣ್ತೆರೆದು, ಒಲವಿನಲೆಶುಭನುಡಿಯ ಉಲಿದಾಗಹರುಷವೆಂದರೆ ಹರುಷವೀಗ.. ಮತ್ತೆ ಕಣ್ತೆರೆದುಕೊಂಡೆ, ಒಳಹೊರಗುಅರಿಯುವ ಹಂಬಲದಲಿ ಇರುಳಿನಿಂದೆದ್ದುಬರುವ ತಾಜಾಸೂರ್ಯ ಕಂಡ.ಬೆಳಕೆಂದರೆ ಬೆಳಕೀಗ!! ಪದ- ಪದಕ ಪದಗಳ ಗೀಳು ಹಿಡಿಸಿಕೊಂಡುಪದಗಡಲೊಳಗೆ ಮುಳುಗುಹಾಕಿಗಿರಕಿಹೊಡೆದದ್ದು ಸಾಕೆನಿಸಿ ಮೇಲೆದ್ದುಬಂದರೆ, ಪುನಃ ಪದಗಳೇ ರಾಶಿರಾಶಿದಂಡೆಯಲಿ ಬಿದ್ದಿದ್ದವು ಮರುಳಾಗಿ… ಸದ್ದುಗದ್ದಲದ ಗೂಡ ಹೊರಗೆ ಹಾರಿ,ನಡುಗುಡ್ಡೆ ಕಾನನದೆಡೆ ನೀರವ ಹುಡುಕಿ,ಹಾಗೇ ತಪಸಿಗೆ ಕುಳಿತರೆ ಪದಗಳೇವಿಸ್ತರಿಸಿದವು. ಧ್ಯಾನ ನಿಮೀಲಿತನೇತ್ರದೊಳು ಪದಪತ್ರ ಬಿಂದು!ಕರ್ಣದುಂಬಿತು ಪದೋಚ್ಚಾರಮಂತ್ರಪಠಣ!! ಪದನರಿದು ವಿಸ್ತರಿಸಲು ತೊಡಗಿ,ಅಪೂರ್ಣ ಪದವಾಗಿ, ಪೂರ್ಣಲಯಮೈದಳೆಯದ ಮರೀಚಿಕೆಯಾಗಿ,ಪದಗಳ ಹಳುವ ಸರಿಸಿ, ಕಾನನದಂಚಿನ ಮರುಭೂಮಿ ಎಡೆಗೆ ಓಡೋಡಿ ಬಂದರೂ,ಬೆನ್ನಹತ್ತಿತು ಪದ ಮಾಯಾಮೃಗವಾಗಿ… ಪದವೆಂದರೆ ಮಾಯೆ. ಬಿಟ್ಟ ಮಾಯೆಯಲ್ಲ ಬಿಡಿಸಿಕೊಳುವ ಹುಂಬತನವೂ ನನದಲ್ಲ.ಪದ-ಪದಕವಾಗಿ ಕೊರಳಿಗೆ ಬಿದ್ದು, ಬೆನ್ನಹತ್ತಿ ಬಂದರೆ, ಹೊರೆ ಎನದೆ ನಾ ಹೇಗೆಧರಿಸದಿರಲಿ..? ***************************************

ವಸುಂಧರಾ ಕಾವ್ಯಗುಚ್ಛ Read Post »

ಕಾವ್ಯಯಾನ

ನಾಗರೇಖಾ ಕಾವ್ಯಗುಚ್ಚ

ನಾಗರೇಖಾ ಗಾಂವಕರ್ ಕಾವ್ಯಗುಚ್ಚ ಅಸ್ವಸ್ಥ ಮಂಚದ ಮೇಲೆ ಬೆಳದಿಂಗಳ ರಾತ್ರಿಯಲ್ಲಿಕೊಳ್ಳಿ ದೆವ್ವವೊಂದುಮನೆಯ ಮೂಲೆಯೊಳಗೆ ನುಸುಳಿಬಂದಂತೆತಬ್ಬಿದ ಜಾಡ್ಯ.ಆಸ್ಪತ್ರೆಯ ಮಂಚದ ಮೇಲೆಸೂರು ನೋಡುತ್ತಾ ಬೆದರಿ ಮಲಗಿದಾಗ,ಮೊಣಕೈಗೆ ದಪ್ಪ ಬೆಲ್ಟೊಂದನ್ನುಸುತ್ತಿ, ನರ ಹುಡುಕಲು ಬೆರಳಿಂದಮೊಟಕುವ ದಪ್ಪ ಕನ್ನಡಕದ ನರ್ಸಮ್ಮತತ್ತರಿಸಿ ಬಿದ್ದ ರಕ್ತನಾಳಗಳು ಜಪ್ಪಯ್ಯ ಎನ್ನದೇಅಂಟಿಕೊಂಡು ಸೀರಿಂಜಿಗೂರಕ್ತ ನೀಡಲು ಒಲ್ಲೆ,ಎನ್ನುವಾಗಲೇಕಂಬನಿಯ ತುಟಿಯಲ್ಲಿನುಡಿಯುವ ಕಣ್ಣುಗಳುಒಸರಿದ ರಕ್ತದ ಅಂಟಿದ ಕಲೆಗಳು ಆಯಾಸದ ಬೆನ್ನೇರಿ ಬಂದಗಕ್ಕನೇ ಕಕ್ಕಬೇಕೆನ್ನುವ ಇರಾದೆತರಗುಡುತ್ತಿದ್ದ ದೇಹವನ್ನುಸಂಭಾಳಿಸಲಾಗದೇ ಇರುವಾಗಲೇಮುಲುಗುಡುವ ದೇಹಗಳು ಖಾನೆ ಖಾನೆಗಳಲ್ಲಿಬೇನೆ ತಿನ್ನುವ ವೇದನೆಯ ನರಳಾಟನೋವು ತಿಳಿಯದಂತೆ ಬರಲಿನಿರಾಳ ಸಾವು. ಸಾವೆಂದರೆ ಸಂಭ್ರಮದ ಹಾದಿಎಂದವರೇಕೆ ಅಂಜುತ್ತಲೇಇದಿರುಗೊಳ್ಳುವರೋ? ನಿನ್ನ ಹೆಗಲಮುಟ್ಟಲೇಕೆ ಹಿಂಜರಿಯುವರೋ? ಮನದ ಅಸ್ವಸ್ಥ ಮಂಚದ ಮೇಲೂ ಪ್ರೀತಿಯನಿರಾಕರಣೆಗೆ, ನಿರ್ಲಕ್ಷ್ಯಕ್ಕೆ ತುಟಿ ತೆರೆಯದೇಉಗುಳು ನುಂಗಿ ಸಹಿಸುವುದೆಂದರೆಸಾವಲ್ಲವೇ?ಕಣ್ಣಲ್ಲಿ ಮೂಡಿದ ಚಿತ್ರವನ್ನುಸತ್ಯವಾಗಿಸಲಾಗದ ಅಸಹಾಯಕತೆಸಾವಲ್ಲವೇ? ಬದುಕೆಂದರೆ ಹೀಗೆಹುಚ್ಚಾಗಿ ಹಲಬುವಿಕೆ ಪ್ರೀತಿಗೂಪ್ರೇಮಕ್ಕೂ ಮತ್ತು ಸಾವಿಗೂ. ಇಕೋ, ಗಿರಿಗವ್ವರದ ಹಸಿರೆಲೆಗಳಸಂದಿ ಸಂದಿನಲ್ಲೂ ತೊಟ್ಟ,ನಿತ್ಯ ಸುತ್ತಾಟದಲ್ಲೂ ಹೂವರಳಿಸುವಕಲೆಯಲ್ಲೂ ಬೆರೆತುಹೋದ ಚೆಂದುಳ್ಳಿ ನೀ.ಮೆಲುನಡೆಯ ನಲ್ನುಡಿಯ ಸೊಗಸೇನರಳುತ್ತಲೇ ಇರುವೆತಿರಸ್ಕಾರದ ತೇರು ಹೂಮುಡಿಯಲ್ಲಿ ಹೊತ್ತುಆಯಾಸ ಬಳಲಿಕೆಗಳಮೈ ತುಂಬಾ ಹೊದ್ದು ಹೆಣ್ಣ ಸೌಂದರ್ಯ,ಸಂಗವನ್ನೇ ದ್ವೇಷಿಸಿದವನಪ್ರೀತಿಯ ಆಳದಲ್ಲಿ ಬಿದ್ದುಯುಗಯುಗಗಳಿಂದ ಪರಿತಪಿತೆ, ಪ್ರಲಾಪಿತೆಸ್ವ ಸಂಗತಗಳ ಅಸಂಗತಗಳಲ್ಲಿ ಮರುಳಾದವನಮೋಹದ ಸದ್ದುಸದ್ದಾಗಿಯೇ ಉಳಿದುಹೋದೆ. ನೆಮಿಸೆಸ್ ನಿನ್ನ ನೋವಿಗೆ ಮಿಡಿದಳುನಾರ್ಸಿಸಿಸ್ ತನ್ನ ಪ್ರತಿಬಿಂಬ ಕಂಡುಮರುಳಾಗುವಂತೆ ಮಾಡಿದಳು.ಆತನೋ ಮುದ್ದುಕ್ಕಿ ತನ್ನನ್ನೇ ಮೋಹಿಸಿದಸ್ವಮೋಹಿತ ಮರುಳುತನಕ್ಕೆ ಮದ್ದುಂಟೇ?ಅದೊಂದು ವಿಚಿತ್ರ ಸಮ್ಮೋಹನ ಜಾಲದಂತೆ.ಈಗ ಜಗದ ತುಂಬಾ ಅವನಂತೆಸುರ ಸುಂದರಾಂಗರು,ಪ್ರೀತಿಯ ನೆಪದಲ್ಲಿ ತಮ್ಮ ಹೊರತುಯಾರನ್ನೂ ಪ್ರೀತಿಸರುತಮ್ಮದೇ ಸಾಮ್ರಾಜ್ಯದ ಸುಖದಲ್ಲಿಇತರರ ಸುಖಕಾಣದವರು.ಇಕೋ, ಅಪಾತ್ರನ ಪಾಲಾದ ಪ್ರೀತಿಪಲ್ಲವಿಸಿಸುವುದೆಂತು,ಕಾದಿರುಳು ಕಣ್ಣು ಮುಚ್ಚದೇನಿನ್ನಂತೆ ಬೇಗೆಯಲ್ಲಿ ಬೇಯುವುದೇ ಬಂತು. ಎದೆ ಬೆಳಕು ಮತ್ತು ಕಣ್ಣ ಕಾಡಿಗೆ ನಿನ್ನ ಉತ್ತರೀಯಕ್ಕೆಅರಿವಿಲ್ಲದೇ ಬಳಿದ ನನ್ನ ಕೆಂಪುತುಟಿರಂಗು ಇನ್ನೂ ಹಸಿಹಸಿಆಗಿಯೇ ಇದೆಇಳಿಸಂಜೆಗೆ ಹಬ್ಬಿದ ತೆಳುಮಂಜಿನಂತಹ ಹುಡುಗಮಸುಕಾಗದ ಕನಸೊಂದುಕಣ್ಣಲ್ಲೇ ಕಾದು ಕೂತಿದೆ ನೀನೊಲಿದ ಮರುಗಳಿಗೆಭವದ ಹಂಗು ತೊರೆದೆಮುಖ ನೋಡದೇಮಧುರಭಾವಕ್ಕೆ ಮನನೆಟ್ಟುಒಳಹೃದಯದ ಕವಾಟವಒಪ್ಪಗೊಳಿಸಿ ಮುಗ್ಧಳಾದೆಈಗ ನೆನಪುಗಳ ಮುದ್ದಾಡುತ್ತಿರುವೆ ಮುದ್ದು ಹುಡುಗ, ನಿನ್ನ ಒಲವಿಂದಬರಡಾದ ಒರತೆಗೂ ಹಸಿಹಸಿ ಬಯಕೆಒಣಗಿದ ಎದೆಗೂ ಲಗ್ಗೆ ಇಡುವಹನಿ ಜಿನುಗಿನ ಕುಪ್ಪಳಿಸುವಿಕೆ ಗೊತ್ತೇ ನಿನಗೆ?ಈ ತಂಗಾಳಿಯೂ ತೀರದ ದಿಗಿಲುಹತ್ತಿಸಿಕೊಂಡ ಏಕಾಂಗಿ ಮೃಗದಂತೆಸುಂಯ್ಯನೇ ಹಾಗೇ ಬಂದುಹೀಗೆ ಹೊರಟುಹೋಗುತ್ತದೆಮರೆತ ಕನಸುಗಳಿಗೆ ಕಡಒದಗಿಸಿ ಬೆನ್ನು ಹತ್ತುತ್ತದೆ ಈ ಮಳೆಗೂ ಕರುಣೆಯಿಲ್ಲಹಸಿಮನಗಳಲಿಹುಸಿ ಬಯಕೆಗಳಕುದುರಿಸಿ ಕಾಡುತ್ತದೆ ಇದೆಲ್ಲವನೂ ಹೇಗೆ ಉಲಿಯಲಿ?ಕಂಪು ಹೆಚ್ಚಾಗಿ ಜೋಂಪುಹತ್ತಿದೆ, ಕಣ್ಣುಗಳು ಮತ್ತೇರಿಪಾಪೆಯೊಳಗೆ ಮುದುರಿದೆಕಣ್ಣ್ಗತ್ತಲ ಗುಹೆಯಲ್ಲಿ ಮಿಣುಕುಹಚ್ಚುವ ನಿನ್ನ ಬಿಂಬವಹೇಗೆ ಮರೆಮಾಚಲಿ ಹುಡುಗ? ನೀನಾದರೋ ಭೂವ್ಯೋಮಗಳ ತಬ್ಬಿನಿಂತ ಬೆಳಕ ಕಿರಣಕಣ್ಣ ಕಾಡಿಗೆಯ ಕಪ್ಪು,ಅದಕ್ಕೆ ಎದೆಯೊಳಗೆ ಬೆಳಕ ಹಚ್ಚಿದೆ,ಕಣ್ಣ ಮುಂದೆ ಇಲ್ಲದೆಯೂ ಕಣ್ಣ ಕಾಡಿಗೆಗೆಬಣ್ಣ ಬಳಿದೆ. ಮುದ್ದು ಹುಡುಗ,ಹೀಗಾಗೇ ದಿನಗಳೆದಂತೆನನ್ನ ಕಣ್ಣ ಕೆಳಗಡೆ ಕಪ್ಪು ಬರೀ ಕಪ್ಪು *************************************

ನಾಗರೇಖಾ ಕಾವ್ಯಗುಚ್ಚ Read Post »

ಕಾವ್ಯಯಾನ

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ ನೆನಪುಗಳೇ…… ಬೆಳ್ಳಂಬೆಳಗು ನಸುನಕ್ಕುಮತ್ತೆ ಬಂದಿಹೆನೆಂಬ ಹೊತ್ತಲ್ಲಿಹೊಸ್ತಿಲಲಿ ನಿಂತು ಕಣ್ಣಾಲೆ ತುಂಬಿವರ್ತಮಾನವ ಕದಡದಿರಿಅಂಗಳದ ತುಂಬೆಲ್ಲ ಹಕ್ಕಿಗಳ ಚಿಲಿಪಿಲಿನೋವು ನಲಿವುಗಳ ಚಿತ್ತಾರದ ರಂಗೋಲಿಹಾಲುಕ್ಕಿ ಹರಿದ ಬದುಕಿನಲಿಒಂದೊಂದೇ ಪಾರಿಜಾತಗಳು ಜಾರಿ ಉದುರಿಭೂತದ ನೆರಳುಗಳಿಗೆ ಇಂದುಹೊಸರೆಕ್ಕೆ ಕಟ್ಟಿಅಗಲಿಕೆಯ ನೋವು, ವಿರಹದ ಕಾವುತುಂಬಿಹ ಬೆಂಗಾಡಿನಮಾಯೆ ಮರುಳಿಗೆ ಹೊತ್ತೊಯ್ಯದಿರಿಬರಗಾಲದ ಬಿರು ಬಿಸಿಲಿಗೆನಿಡುಸುಯ್ದ ಈ ಇಹಕ್ಕೆಮರಳಿ ಅರಳುವ ಬಯಕೆನೀರು ಹುಯ್ಯುವವರಿಲ್ಲಒಂಟಿ ಮರಕ್ಕೆಸಂಜೆ ಗಾಳಿಯ ಹಿತಆಳಕ್ಕೆ ಇರಿದ ಕೆಂಪಿನಲಿಮನಸ್ಸರಳಿ ಹಿತವಾಗಿ ನರಳುತ್ತದೆಅವನೆದೆ ಕಾವಿನಲಿ ಕರಗುತ್ತದೆಸೆಟೆದ ನರನಾಡಿಗಳು ಅದುರಿಹಗುರಾಗಿ ಬಿಡುತ್ತವೆಕೂಡಿ ಕಳೆದುಹೋಗುವ ತವಕದಲಿಕಣ್ಣೆವೆ ಭಾರವಾಗುವ ಹೊತ್ತಲ್ಲಿನಿಮ್ಮ ಒತ್ತಾಸೆಯಿರಲಿ ನನಗೆನನ್ನ ಬಿಡದಿರಿ,ಬಿಡದೆ ಕಾಡದಿರಿಅಣಕಿಸದಿರಿ ನೆನಪುಗಳೆ, ಬದುಕಿದುಎಪ್ಪತ್ತರಲಿ ಒಂಟಿ ಮುದುಕಿ. ಭಿಕ್ಷೆಗೆ ಬೀಳದ ಬದ್ಧತೆ… ಬೊಂಬೆಯಂತ ಬೊಂಬೆ ಮಗುವ ಬಟ್ಟೆಯಲಿ ಸುತ್ತಿಸುಡುವ ನೆತ್ತಿ, ಚಪ್ಪಲಿಯಿಲ್ಲದ ಕಾಲಹೆಂಗಸೊಬ್ಬಳುಕಾರ ಕಿಟಕಿಗೆ ಮೈ ತಾಗಿಸಿಭಿಕ್ಷೆಗೆ ಕೈ ಮುಂದೊಡ್ಡೂತ್ತಾಳೆನಿರೀಕ್ಷೆಯಿಲ್ಲದ ಕಣ್ಣುಗಳಆಚೀಚೆ ಸರಿಸುತ್ತ ಮುಂದೆ ಯಾರೆಂದುಮನದಲ್ಲೇ ಲೆಕ್ಕವಿಡುವಾಗ ಎಲ್ಲ ದಿನಗಳುಕೊನೆಯಲಿ ಒಂದೇ ಇರಬೇಕು..ಹೊಟ್ಟೆಪಾಡು, ಕೈ ಗಳ ಜೋಲಿ ಹಾಡುಇಷ್ಟಕ್ಕೇ ಮುಗಿಯುತ್ತಿರಬೇಕು… ದಣಿವಿರದೆ ದುಡಿದ ಇಪ್ಪತ್ತು ವರ್ಷಗಳಕಾಲೇಜಿನಲಿ ಕಳೆದ ಹತ್ತು ವರ್ಷಗಳಮನೆದುಡಿಮೆಯಲಿ ಸುಕ್ಕುಗಟ್ಟಿದ ಕೈಯಲ್ಲಿಹತ್ತು, ನೂರು,ಸಾವಿರದ ನೋಟುಗಳತಡಕುತ್ತ ಅಂಜುತ್ತೇನೆ, ಕೊನೆ ಎಲ್ಲಿಗೆ? “ಬರುತ್ತೀಯೇನು ಕೊಡುತ್ತೇನೆಊಟ, ಬಟ್ಟೆ, ದುಡ್ಡು, ಕೆಲಸಪುಟ್ಟಮಗುವಿಗೆ ಆಟದ ಸಾಮಾನುಶಾಲೆಯ ಜೊತೆ , ತೂಗಲು ಆಶೆಯ ಕಮಾನು? “ಪ್ರಶ್ನೆ ಕೇಳದಂತೆ, ಮುಂದೆ ಮಾತಾಡದಂತೆಮುಖ ತಿರುವಿ ನಡೆಯುತ್ತಾಳೆಇರದಿರುವುದು ಎಂದೋ ಕಳೆದ ನಂಬಿಕೆಯೇ?ಸುಟ್ಟ ಸಂಕಲ್ಪವೆ? ಹಲ್ಲಂಡೆ ಬದುಕಿನಭಾರೀ ಸೆಳೆತವೆ?ತೋರದೆ ಬೆಪ್ಪಾಗುತ್ತೇನೆಮುಂದಿರುವ ಡ್ರೈವರು ಮೀಸೆಯಡಿನಗುವ ತಡೆಹಿಡಿದು ಮುಚ್ಚಿಡುವಾಗಪ್ರಶ್ನೆಗಳು ಮಿನುಗುತ್ತವೆಆದರ್ಶಗಳು ಅಳ್ಳಕವೆ ?ಭಿಕ್ಷೆಯ ಕೈಗಳಿಗೆ ಚಾಚಿದಸಹಾಯ ಹಸ್ತ ಇಷ್ಟು ನಿರರ್ಥಕವೆ?ಬಂಧನಗಳಿಲ್ಲದ ಅವಳ ಬದುಕಿನಲಿಬದ್ಧತೆಯ ಕೇಳಿದ ನನ್ನಭಿಕ್ಷಾ ಪಾತ್ರೆ ಖಾಲಿಯೇ ಉಳಿಯುತ್ತದೆ ! ಗಾಳ ಹಾಕಿ ಕೂತ ಮನಸು…. ಗಾಳ ಹಾಕಿ ಕೂತ ಮನಸಜಾಳು ಜಾಳು ಬಲೆಯ ತುಂಬಸಿಕ್ಕ ನೆನಪುಗಳು ವಿಲ ವಿಲಪರ್ವತಗಳು ಪುಡಿಯಾಗಿ ಸಿಡಿದುಹಡೆದ ಮರುಭೂಮಿಯಲ್ಲಿಸೂರ್ಯ ಉರಿದು ಕರಗಿನಡುಗಿ ಇಳಿಯುತಿರುವಲ್ಲಿಕಡುಗಪ್ಪು ಬಣ್ಣದ ವೃತ್ತಭುವಿಯ ಕುದಿಯೆಲ್ಲ ಉಕ್ಕಿರಂಧ್ರಗನ್ನಡಿ ಕೊರೆದು ಕಣ್ಣೀರಿನಲಿಸೃಷ್ಟಿಸಿದಂತಹ ಪುಟ್ಟ ಕೊಳಸುತ್ತ ಯಾವ ಹೆಜ್ಜೆ ಗುರುತುಗಳಿಲ್ಲದಂಡೆಯಿರದ ತೀರಬೇರೊಂದು ಲೋಕಕ್ಕೆ ಒಯ್ಯಲುತೆರೆದಂತೆ ಬಾಗಿಲಾಗಿ ಕರೆವಲ್ಲಿತಲೆ ಮೇಲೆತ್ತಿ ನೋಡಲುಆಗಸದಲಿ ಮೋಡ, ತಾರೆಗಳಿಲ್ಲಫಳಕ್ಕನೆ ಏನೋ ಮಿಂಚಿ ಹಿಂಡುತ್ತದೆತುಟಿ ಎದೆಗಳಲಿ ವಿದ್ಯುತ್ ಪುಳಕಿಸಿದಂತೆದಶಕಗಳಿಗೂ ಮುಂಚೆಮುಳುಗುವ ಸೂರ್ಯನ ಸಾವಿರ ರಶ್ಮಿಗಳಲಿಒಂದು ಬಾಗಿ ನನ್ನ ತಲೆ ಸವರಿದಂತೆಹಿಡಿದು ಬಿಡಲು ಸೆಣೆಸುತ್ತೇನೆಕಣ್ಣಿಗೆ ಕಂಡಿದ್ದು, ಕೈಗೆ ಸಿಗದಾಯ್ತುಆತಿಡಿದು ಜೋತುಬೀಳಲು ಮನಸಿನಲಿಕನಸುಗಳು ಗೂಡು ಕಟ್ಟಲಾಗಲಿಲ್ಲಮತ್ತೇನೋ ತಡಕುತ್ತದೆ ಬಹುಆಳದ ತಳದಲ್ಲಿ ಭಾರೀ ತೂಕದ ವಸ್ತುಅದರ ನೆನಪೆಲ್ಲ ಹೇಳುವುದು ದುಃಖದಕತೆ, ಅಳಲು, ಅಸಹಾಯಕತೆಕೈ ಚಾಚಿ, ಎದೆ ಚೀಪಿ ಆಳ ಆಳ ಮುಳುಗಿಒಳಗಿಳಿದು ನೋಡಿದರೆ ನನ್ನದೇ ಕಥೆಹೋಗಿ ಸೇರಲು ರಸ್ತೆ ಕಡಿದುಕಣ್ಣೀರಲ್ಲಿ ಕರಗಿದ ನೆನಪುಗಳ ತಲೆ-ಮಾರುಗಳು ಕಳೆದಿವೆ ಮತ್ತೆ ಮರುಕಳಿಸಿಕತ್ತಲು ಸೂರ್ಯನ ಕರಗಿಸಿಬಾನನ್ನು ತಿಂದು ತೇಗಿಪ್ರೇತದಂತಹ ಚಂದ್ರನ ತೂಗುಬಿಟ್ಟಿದೆಗಾಳವನು ಸರಕ್ಕನೆ ಎಳೆದು ತಲೆಯೆತ್ತಿದಕ್ಕಿರದಿದ್ದನ್ನು ಹಿಡಿಯುವ ಚಂಡಿಯಾಗಿಗಾಳವೆಸೆದು ಕೂರುತ್ತೇನೆ ಮತ್ತೆಕೇಳುತ್ತೇನೆ ಕಳೆದುಕೊಳ್ಳಲು ಏನಿದೆ?ಕತ್ತಲ ರಾತ್ರಿ ನುಂಗಲೆಂದು ಕಾಯುತ್ತೇನೆ…. *****************

ಡಾ.ಪ್ರೇಮಲತ ಬಿ. ಕಾವ್ಯ ಗುಚ್ಚ Read Post »

ಕಾವ್ಯಯಾನ

ಅರ್ಪಣಾ ಮೂರ್ತಿ ಕಾವ್ಯಗುಚ್ಛ

ಅರ್ಪಣಾ ಮೂರ್ತಿ ಕಾವ್ಯಗುಚ್ಛ ಕವಿತೆ-ಒಂದು ಸದ್ದುಗದ್ದಲದಬೀದಿಯ ಬದಿಯಬೇಲಿಯ ಹೂಅರಳುವ ಸದ್ದಿಗೆಕಿವಿಯಾಗುವಉತ್ಸುಕತೆ,ಹೂ ಬಾಡಿದಷ್ಟೂಚಿಗುರುತಿದೆ, ಹರಿವನದಿಗಳೆಲ್ಲದರ ಗಮ್ಯಸಾಗರವೇ ಆಗಬೇಕಿಲ್ಲ,ಸಮುದ್ರ ಸೇರುವಮೊದಲೇಭುವಿಯೊಳಗೆ ಇಂಗಿದಅದೆಷ್ಟೋ ನದಿಗಳಆರ್ದ್ರತೆಯ ಗುರುತುಗಳುಕಾಲ್ಮೆತ್ತಿವೆ, ಮೈಸುತ್ತಿದ ನೂಲುತೆರಣಿಯ ಹುಳವನುಂಗಲೇಬೇಕಿಲ್ಲ,ರೇಷಿಮೆಯರೆಕ್ಕೆಯಂಟಿಸಿಕೊಂಡಚಿಟ್ಟೆಹೂವಿನ ತೆಕ್ಕೆಯಲಿನಾಚಿದ ಬಣ್ಣಹೂದಳದ ಮೈಗಂಟಿದೆ, ಕತ್ತಲಿಗಂಟಿದಕನಸುಗಳೆಲ್ಲಕಣ್ಣೊಳಗುಳಿಯುವುದಿಲ್ಲ,ಕನಸು ನುಂಗಿದಅದೆಷ್ಟೋ ಹಗಲುಗಳುನನಸಿಗೆ ಮುಖ ಮಾಡಿನಿಂತಿವೆ…. ಕವಿತೆ-ಎರಡು ನದಿ ತುಂಬಿ ಹರಿದರೆಬಯಲಿಗೆ ನೆಲೆಯೆಲ್ಲಿ,ಬತ್ತಬೇಕುಬರಿದಾಗಬೇಕುಬಯಲಾಗಬೇಕು,ಬರದ ಬದುಕಿನ ಒಳಗೂಇಳಿಯಬೇಕು, ಧರೆ ಕಾದು ಕರಗದೆಮಳೆಯ ಸೊಗಸೆಲ್ಲಿ,ಕಾಯಬೇಕುಕಾದು ಕರಗಬೇಕು,ಮುಗಿಲೇರಿ ಹನಿಕಟ್ಟಿಹನಿಯಬೇಕುಇಳೆ ತಣಿಯಬೇಕು, ಇರುಳು ಕವಿಯದೆಹುಣ್ಣಿಮೆಗೆ ಹೊಳಪೆಲ್ಲಿ,ಕಪ್ಪು ಕತ್ತಲ ನೆಪವುಕಣ್ಣ ಕಟ್ಟಬೇಕು,ರೆಪ್ಪೆ ಮುಟ್ಟಬೇಕುಕನಸು ಹುಟ್ಟಬೇಕು… ಕವಿತೆ-ಮೂರು ಉಸಿರುಗಟ್ಟಿದಮರುಭೂಮಿಯಲಿಬಿರುಗಾಳಿಯಹುಡುಕುವಬರಡುಮರಳ ಹಾಸುಚಿಲುಮೆ ನೀರನುಗುಟುಕಿಸಿಉಸಿರ ಹಿಡಿದುತಂಪು ಗಾಳಿಯಕಾಯುವುದೂಒಲವೇ, ಹಾಯಿದೋಣಿಹಾಯಲಿಲ್ಲನಿಂತ ನೀರ ಕಡಲಲಿ,ಅಲೆಗಳ ನೆಪವೊಡ್ಡಿಸೆಳೆದೊಯ್ಯುವಕಡಲ ಸಂಚಿಗೆನಿಂತುಮುನಿಯುವುದೂಒಲವೇ, ಬೆಳಕು ಮಲಗುವಾಗಎಚ್ಚರಾದ ಇರುಳು,ಚುಕ್ಕಿಗಳ ಬದಿಗಿರಿಸಿಚಂದಿರನ ಹುಡುಕುವಕತ್ತಲ ಮೌನದನೀರವತೆಯೂಒಲವೇ……. *********************************

ಅರ್ಪಣಾ ಮೂರ್ತಿ ಕಾವ್ಯಗುಚ್ಛ Read Post »

ಕಾವ್ಯಯಾನ

ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ

ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ ಹನಿ ಹನಿ ಟ್ರ್ಯಾಪ್ — ಮೆಸೇಜು ವಾಟ್ಸಾಪು ಫೇಸ್ಬುಕ್ಕುಮುಂತೆಲ್ಲ ಮಾಧ್ಯಮಗಳ ತಿಪ್ಪಿಗುಂಡಿಗೆಸೆಯಲುಮೋಹಕ ಪಲ್ಲಕ್ಕಿಯೊಳಗೆ ಶೃಂಗಾರಗೊಳಿಸಿದ ಹೆಣ ಬೀಳಿಸಲು ಗುಟು ಗುಟು ಸುರೆ ಕುಡಿಸಿಪೋಸ್ಟ್ ಮಾರ್ಟಮ್ಮನಕುಟುಕು ಕಾರ್ಯಾಚರಣೆ ನಡೆಸಿಹನಿ ಟ್ರ್ಯಾಪ್ ಹಾಸಿ ಮಲಗಿಸಿದ್ದಾರೆ ನಿದ್ದೆ ಎಚ್ಚರ ಅಳು ನಗು ಮಾತಿನ ಸರಸ ವಿರಸ ಕಲ್ಪನೆಗಳ ವಿಹಾರ ವಿಕಾರ ಎಲ್ಲ ಮಾತ್ರೆಗಳ ಡಬ್ಬ ಹತ್ತಿರವೇ ಇಟ್ಟು ಹನಿಟ್ರ್ಯಾಪ್ದಿಂಬಿಗೊರಗಿಸಿ ಮಲಗಿಸಿದ್ದಾರೆಮಾತ್ರೆಗಳ ಮೂಸಿನೋಡಿದರಷ್ಟೇ ಸಾಕಿಲ್ಲಿಸತ್ತ ನರನಾಡಿಗಳ ಸುತ್ತ ಉಳಿದಿರುವಜೀವವೊಂದು ಅನಾಥವಾಗಿಸಲು ನರಿಜಪದ ಭಂಟರಲ್ಲಿ ಸುಳಿದು ಸುತ್ತಿಹತ್ತಿರ ಬಂದು ಸಂದಿ ಗೊಂದಿ ಹಾದುಮನೆ ಕಚೇರಿ ಎಲ್ಲೆಲ್ಲೂ ಜೊತೆ ಬಂದುಎಂಥ ಬಲ ಕದಿಯುವರುವಾಸನೆ ತಿಳಿದು ಒಳ ಸೇರಿದ ಕಳ್ಳಗಿವಿಗಳುಗಾಳಹಾಕಿ ಹಿಡಿವ ರಣ ಹದ್ದುಗಳು ಎಂಜಲು ನೆಕ್ಕಿ ಜೊಲ್ಲಿಗೆ ಬೊಗಸೆಚಾಚಿಕಾಸಿಗೆ ಕೈಚೀಲ ಹಿಡಿದ ನಿಶಾಚರಿಗಳುಮೋಹನ ಮೋಹಿನಿಯರ ದಂಡುಪಾಳ್ಯತಂತ್ರ ಮಂತ್ರಗಾರರ ವೇಷಧಾರಿಗಳುಪ್ರತಿಭೆ ಕಾಯಕಗಳ ರುಂಡ ಹಾರಿಸಿಕೀರ್ತಿಗರಿಗಳ ಗಾಳಿಪಟವಾಗಿಸಿಕತೆಕಟ್ಟಿ ಬಣ್ಣ ಮೆತ್ತಿಸಿ ಎದೆಯೊಡೆದು ನೀರಾಗಿಸಿಕಣ್ಣೀರು ತುಳುಕಿಸಿ ಕರಿನೆತ್ತರ ಕಕ್ಕಿಸಿಕುಡಿದ ರಕ್ತ ಪಿಪಾಸುಗಳುದೂರ ಕಣ್ಣಿಟ್ಟಿವೆ ಎಲ್ಲ ಹನಿ ಹನಿ ಟ್ರ್ಯಾಪ್ ಗಟ್ಟಿ ತಿಮಿಂಗಿಲಗಳು ಸ್ಟಾರ್ ಫಿಶ್ಗಳು ಬಲೆ ಹರಿದುಅಬ್ಬರದ ಅಲೆಗಳಿಗೆ ಜಗ್ಗದೇ ಜಿಗಿದುಕಳ್ಳ ಬೆಕ್ಕುಗಳ ಬಾಲ ಸುಟ್ಟು ಥಕ ಥಕಕುಣಿಸಿದ್ದಾರೆ ಈಗಷ್ಟೇ ಇಲ್ಲೆಲ್ಲೊ ಅವಿತಿದ್ದನನ್ನೊಳಗಿನ ಕುಸುಮಬಾಲೆಯಾಗಿದ್ದ ಕವಿತೆಬೆಂಕಿಜ್ವಾಲೆಯಾಗಿದ್ದಾಳೆ ಎಲ್ಲ ಹನಿ ಹನಿ ಟ್ರ್ಯಾಪ್ ನಾದಗಾಮಿಗಾಮಿನಿಿ– ಸುಲಭದಲಿ ಒಲಿಯದು ಒಲುಮೆಗಾನತೊತ್ತಾದರಷ್ಟೇ ಒಲವುಗಾನನೆನಪಾಗಿ ಹೊರಟಂತೆ.ನಿನ್ನನ್ನೇ ಮರೆತೆಒಲುಮೆ ಸಂಗೀತಕೆ ಕಾಮನಬಿಲ್ಲುಕಟ್ಟಲು ಹೊರಟೆ ಸಂಜೆ ಸಂಗೀತ ಮೃದಂಗ ಮೇಳಕೆಭಾವ ಕಡಲಿಗೆ ಭಾರ ಇಳಿಸಲುರಾಗದೊಡೆಯನಿದಿರು ಒಡಲುಇಳುಹಲು ಹೊರಟೆ ಸಂಗೀತ ಸುಂದರನಲ್ಲಿ ಶರಣೆಂದು ನಿಂದಂತೆಗುರು ಹೇಳಿದಂತೆ ಶ್ರುತಿ ಹಿಡಿಯಲು ಹೊರಟೆಗಾನ ಗಂಧರ್ವನಿಗೆ ಒಲಿದು ಹೊರಟೆ ಕಲೆಗೆ ತೊತ್ತಾಗಲು ಕಲೆಯ ಆಳಾಗಲು ಹೊರಟೆಸಂಗೀತ ಸಾಧಕನ ನೆರಳಾಗಿಯಕ್ಷಲೋಕದ ಗಂಧರ್ವಕನ್ಯೆಯಾಗಲು ಹೊರಟೆಸಪ್ತಸ್ವರದ ನಾದ ಹೊಮ್ಮಿಸಲು ಹೊರಟೆ ಶರಧಿಯಲಿ ಮುಳುಗಿದರೆ ಮೇಲೇರಿ ಬರದಂತೆಸಾಗರದ ಒಡಲಿಗೆ ಕಿವಿಗೊಟ್ಟು ಹೊರಟೆಅಮೃತಧಾರೆಯ ಅಮೃತಮತಿ !ಲೋಕದೆಲ್ಲೆಯ ವಿಷ ನೋಡದೇ ಹೊರಟೆ ಕಲೆಯೊಳಗೆ ಕಲೆಯಾಗಲು ಹೊರಟೆಮಧುಬನಕೆ ಅಮೃತಕಲಶ ಹೊತ್ತು ಹೊರಟೆಕಲೆಯ ಸಾರ್ವಭೌಮತ್ವ ಸಾರಲು ಹೊರಟೆಸುಖದ ನಶ್ವರತೆ ಅರಿಯಲು ಹೊರಟೆ ಬದುಕಿನ ಸತ್ವ ಬರೆಯಲು ಹೊರಟೆಕಲಾಕಾರರಂತೆ ಬದುಕಲು ಹೊರಟೆಯಶೋಧರತ್ವ ಅಳಿಯಲು ಹೊರಟೆ ಸಾಗರದ ಸೆರಗು ಸೇರಲುಭೂಮಿಯ ಹಂಗು ಹರಿದು ಹೊರಟೆನಾದನಡೆಯ ಅಮೃತಮತಿನಾದಗಂಧವಾಗಲು ಹೊರಟೆ ಭೂಮಿ ತಾಪ — ನಾನಿಲ್ಲಿ ತಪ್ಪು ಮಾಡಿದರೆಆ ಸೂರ್ಯನಿಗೆ ಕೆಂಡದಂತ ಕೋಪವಂತೆಹೆದರೆ ಆ ಭಂಡನ ಕೆಂಡ ಕೋಪಕ್ಕೆನನ್ನೊಳಗಿನ ಬೆಳಗು ಕಳೆಯದ ತನಕ ಅವನೇಕೆ ತಪ್ಪು ಮಾಡುತ್ತಾನಂತೆಪೂರ್ವದಲ್ಲಿ ಹುಟ್ಟುವುದುಪಶ್ಚಿಮದಲ್ಲಿ ಸಾಯುವುದುಅದಕ್ಕೂ ನಾನೇ ಕಾರಣವಂತೆಪೆದ್ದನ ಸಿದ್ಧ ಉತ್ತರ ಅವನ ಹುಟ್ಟಿಗೆ ನಾನ್ಹೇಗೆ ಹೊಣೆಅವನ ಸಾವಿಗೂ ನಾನೇಕೆ ಚಿತೆಬೇಕೇ ಬೇರೆಯವರ ಕಾಯುವುದಕ್ಕೆಜೀವಮಾನದ ತಪಸ್ಸು ಇವನ ಕತ್ತಲು ಬೆಳಕಿನಕಾಲಜ್ಞಾನ ಹಿಡಿತಕ್ಕೆನನ್ನ ರೂಪ ನನಗೇ ನೋಡಲಾಗದೆಉರುಳುತ್ತಿದ್ದೇನೆ ಚಕ್ರವಾಗಿವಿರಾಮಶೂನ್ಯಳಾಗಿ ಅವನ ತಪ್ಪಿಗೆ ನನಗೆ ಶಿಕ್ಷೆಇಲ್ಲಿ ನಾ ಹೆತ್ತ ಹೆಣ್ಣುಗಳ ಶಾಪನಾನೇ ಹೊತ್ತು ನೊಂದಿದ್ದೇನೆಅವನ ತಪ್ಪಿಗೆ ನಾ ಉರಿಯುತ್ತಿದ್ದೇನೆಪ್ರಳಯಕ್ಕಾಗಿ ಕಾಯುತ್ತಿದ್ದೇನೆ *************************************

ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ Read Post »

ಕಾವ್ಯಯಾನ

ನೂತನಾ ಕಾವ್ಯಗುಚ್ಛ

ನೂತನಾ ದೋಶೆಟ್ಟಿ ಕಾವ್ಯಗುಚ್ಛ ಬಟ್ಟಲ ತಳದ ಸಕ್ಕರೆ ಬಟ್ಟಲಲ್ಲಿ ಆಗಷ್ಟೇ ಕಾಯಿಸಿದಬಿಸಿ ಹಾಲುಜೊತೆಗೆ ತುಸು ಸಕ್ಕರೆಹಿತವಾದ ಮಿಲನವಸವಿಯುವ ಪರಿ ಸುಖವೇ ಸಾಕಾರವಾಗಿಬೆಳದಿಂಗಳೊಡಗೂಡಿದತಂಗಾಳಿಯ ಪಯಣಮೆತ್ತನೆಯ ಹಾಸುಕರೆವ ಕೆಂಪು ಹೂಗಳ ಗುಂಪುಕಾಮನ ಬಿಲ್ಲಿಗೂ ಬಣ್ಣ ತುಂಬುವುದೇ? ಬಟ್ಟಲು ಬರಿದಾದಾಗತಳದಲ್ಲುಳಿದ ತುಸುಸಕ್ಕರೆಯನ್ನೇತುದಿ ಬೆರಳಿನಿಂದ ಸವರಿಮೆಲ್ಲಗೆ ಹೀರಿದಾಗಖಾಲಿಯಾಗುವ ಭಯ ಕಾಲನ ದಾರಿಗುಂಟಸವೆಯಬೇಕಾದ ಹಾದಿಮೂಡಿ ಮಸುಕಾಗಿರುವಹೆಜ್ಜೆ ಗುರುತುಬಟ್ಟಲ ತಳದಸಕ್ಕರೆಯಂತೆ. ನಿನಗೆ ನೀನೇ ಸರಿಸಾಟಿ ಮನಸೊಂದುಮಲ್ಲಿಗೆ ಹೂಅಂಗಳದ ಬೆಳ್ಳಿ ರಂಗೋಲಿಅರಳಿದಾಗಬಣ್ಣ ಬಣ್ಣದ ಹೂಗಳಓಕುಳಿಬಿರಿದು ನಕ್ಕಾಗಬಾನ ಚಿಕ್ಕೆಗಳಚೆಲ್ಲಾಟದ ಪರಿ ಮನಸ್ಸೊಂದುಕೋಗಿಲೆಯ ಕೊರಳ ಇಂಪುಕರೆವ ಮಾಘದ ಮಧುರ ಪೆಂಪುಮೌನದ ಮೆಲ್ಲುಸಿರಕರೆಗೆ ಬಾಗುವ ಕ್ಷಣಗೆಜ್ಜೆಯ ಝಣ ಝಣನಾದ ಲಯ ತಾಣ ಮನಸ್ಸೊಂದುಹರಿವ ನೀರ ಬದಿಯ.ಪುಟ್ಟ ಹೂಗಳು ಗುಂಪುಮೆತ್ತಗೆ ಸೋಕಿದಕೈಯ ಕಚಗುಳಿಗೆಅದುರುವನಾಜೂಕು ನವಿರು ಭಾವ ಮನಸ್ಸೊಂದುಬೆಳದಿಂಗಳ ಇರುಳ ಶಾಂತಿಕಣ್ಣು ಮುಚ್ಚಾಲೆಯಾಡುವಚಂದ್ರನ ಬಿಸಿಯುಸಿರುಪುಟ್ಟ ಕಂದನ ಕಿಲ ಕಿಲ ನಗುಕಿಶೋರಿಯ ಬೆಡಗುಅವನು ನೋಟದ ತಣ್ಪು ಮನಸೇನಿನಗೆ ನೀನೇ ಸರಿಸಾಟಿ. ಮಾತೆಂದರೆ ಏನು ಗೂಗಲ್’ ಜಗಮಗಿಸುವ ದೀಪಗಳು ನಗುತ್ತಿವೆಹಾಗೆ ಅನ್ನಿಸುತ್ತಿರಬಹುದೆ?ನದಿಗಳ ಕಣ್ಣೀರು ಕಾಣದಷ್ಟುದೂರದಲ್ಲಿವೆ ಅವು ಮುಗಿಲೆತ್ತರದ ಸಿಮೆಂಟು ಗೋರಿಗಳಲ್ಲಿಸುಖವೋ ಸುಖಹಾಗೆ ಅನ್ನಿಸುತ್ತಿರಬಹುದೆ?ಗುಬ್ಬಿಗಳು ಚದುರಿವೆ ಕಾಗೆಗಳು ಬೆದರಿವೆಉಸಿರಾಡದ ಹಸುರಿಗೆ ಸೋಂಕು ರೋಗ ತಣ್ಣನೆಯ ಗಾಳಿಯೆಂದರೆ ತಾನೆಏರ್ ಕಂಡೀಷನ್ನಿಗೆ ಅನ್ನಿಸಿರಬಹುದೆ?ಅಜ್ಜ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾನೆಮನೆಯಂಗಳದ ಮಾವಿನ ಮರ ಅವನ ಕನಸಿನಲ್ಲಿ ಅವನಿಗೆ ಕತೆ ಹೇಳಲೆಬಾಯಿಪಾಠ ಮಾಡಿಸಲೇಅಜ್ಜಿಗೆ ಅನ್ನಿಸಿರಬಹುದೆ?ಮಾತೆಂದರೆ ಏನು ಗೂಗಲ್ಮೊಮ್ಮಗು ಕೇಳುತ್ತದೆ. ನಾನು ಹೀಗಿದ್ದೆನೆಬದಲಾಗಿಬಿಟ್ಟೆನೆಮಾತಿಗೆ ಅನ್ನಿಸಿರಬಹುದೆ?ಮೈಂಡ್ ಯುವರ್ ಲ್ಯಾಂಗ್ವೇಜ್ಹೆಂಡತಿ ಹೇಳುತ್ತಾಳೆಯೂ ಬಿಚ್ ಎನ್ನುತ್ತಾನೆ ಗಂಡ. ಪಬ್ಬು ಬಾರುಗಳಲ್ಲಿಆ ಹುಡುಗಿಯ ಕುಲುಕಿಗೂ ಬೆಲೆ ಕಟ್ಟುತ್ತಾರೆಹಾಗೆ ಅನ್ನಿಸುತ್ತಿರಬಹುದೆ?ಮನೆಯಲ್ಲಿ ಸೂರೆ ಹೋಗುತ್ತಿರುವ ಸುಖ ಅಣಕಿಸುತ್ತಿದೆ. ಮೌನ ದುಃಖಿಸುತ್ತಿದೆಯೊನಗುತ್ತಿದೆಯೊ?ಕಳೆದುಕೊಳ್ಳುವುದು ದುಃಖಪಡೆಯುವುದು ಸಂತಸವೇಏನು ಕಳೆದದ್ದುಯಾವುದು ಪಡೆದದ್ದು !! ******************************

ನೂತನಾ ಕಾವ್ಯಗುಚ್ಛ Read Post »

ಕಾವ್ಯಯಾನ

ನಾಗರಾಜ ಹರಪನಹಳ್ಳಿ

ನಾಗರಾಜಹರಪನಹಳ್ಳಿ ಕಾವ್ಯಗುಚ್ಛ ಬೆರಳ ತುದಿಗೆ ಕರುಣೆ ಪಿಸುಗುಡುವತನಕ ಕಟ್ಟೆಯ ಮೇಲೆ ಕುಳಿತದ್ದಕ್ಕಕೊಲೆಯಾಯಿತುಉಗ್ಗಿದ ಖಾರದ ಪುಡಿಗೆಇರಿದ ಚೂರಿಗೆಕಣ್ಣು ಕರುಣೆ ಇರಲಿಲ್ಲ ಅಂತಿಂತಹ ಕಟ್ಟೆಯಲ್ಲಮಲ್ಲಿಕಾರ್ಜುನನ ಕಟ್ಟೆಇರಿದವ ಅಹಂಕಾರಿಇರಿಸಿಕೊಂಡದ್ದು ಸಮಾನತೆಒಂದು ಸವರ್ಣಧೀರ್ಘ ಸಂದಿಮತ್ತೊಂದು ಲೋಪಸಂದಿ ಕಣ್ಣು ಕಟ್ಟಿದ ,ಬಾಯಿ ಮುಚ್ಚಿದ ಈ ನಾಡಿನಲ್ಲಿ ಏನೂ ಆಗಬಹುದು ಸ್ವತಃ ದೊರೆ ದೀರ್ಘಾಸನದಲ್ಲಿಶವಾಸನದಲ್ಲಿರುವಾಗಅಹಂಕಾರ ಊರ ಸುತ್ತಿದರೆಅಚ್ಚರಿಯೇನಿಲ್ಲ ಇಲ್ಲಿ ಎಲ್ಲರೂ ಬಾಯಿಗೆ ಬೀಗಜಡಿದು ಕೊಂಡಿರುವಾಗನಿತ್ಯವೂ ಸಮಾನತೆಯ ಹಂಬಲ ಕೊಲೆಯಾಗುತ್ತಿರುತ್ತದೆಮತ್ತೊಮ್ಮೆ ಕರುಣೆಭೂಮಿಯಲ್ಲಿ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ,ನಡೆದಾಡುವ ಮರ ಬರುವತನಕನದಿಯೇ ಮನುಷ್ಯನಾಗಿ ಚೂರಿಯ ಅಹಂಕಾರದ ರಕ್ತ ತೊಳೆಯುವತನಕಇರಿದ ಚೂರಿಯ ತುದಿಗೆಹಿಡಿದ ಬೆರಳ ತುದಿಗೆ ಕರುಣೆಪಿಸುಗುಡುವತನಕ……….. ನಾವಿಬ್ಬರೂ ಮರವಾಗಿದ್ದೇವೆ ನಾವಿಬ್ಬರೂ ಮರವಾಗಿದ್ದೇವೆ ಇದು ನನ್ನ ಮೊದಲ ಹಾಗೂಕೊನೆಯ ಪದ್ಯವೆಂದು ಬರೆಯುವೆಪ್ರತಿ ಅಕ್ಷರಗಳಲ್ಲಿ ಪ್ರೀತಿಯ ಬೆರಸಿ ನಡೆವ ದಾರಿಯಲ್ಲಿ ನಿನ್ನಲ್ಲಿ ನಾ ತುಂಬಿ ಕೊಂಡರೆ ಅದಕ್ಕೆ ಏನೆನ್ನಲಿ?ಅಥವಾ ನನ್ನ ಜೀವನದ ಪ್ರತಿ ಉಸಿರಾಟದಿ ನೀ ತುಂಬಿ ಕೊಂಡಿರುವುದ ಹೇಗೆ ಮನದಟ್ಟು ಮಾಡಲಿ? ಹೀಗೆ ಹೇಳಬಹುದು:ನಿನಗೆ ಕಾಣುವ ಪ್ರತಿ ಗಿಡ ಮರ ಹೂ ಬಿಟ್ಟು ನಗುತ್ತಿದ್ದರೆ ಅದು ನಮ್ಮಿಬ್ಬಿರ ಪ್ರೇಮ ಅತೀ ಕಟ್ಟಕಡೆಯ ಮನುಷ್ಯನ ಮನೆ ಅಂಗಳದಿ ಮಗು ನಗು ಅರಳಿಸಿ ಅದರ ಕಣ್ಣಲ್ಲಿ ಕಾಂತಿ ಕಂಡರೆ ಅದು ನಮ್ಮಿಬ್ಬರ ಪ್ರೇಮ ವಾಸ್ತವವಾಗಿ ನಾವಿಬ್ಬರೂ ವಾಸಿಸುವುದು ಅಂತ್ಯಜರಲ್ಲಿ ಭ್ರಮಾತ್ಮಕ ಅಕ್ಷರ ಲೋಕದ‌ಖೂಳರ ನಾವಿಬ್ಬರೂ ಸೇರಿಒಂದನಿ ರಕ್ತ ಹರಿಸದೆಒಂದಕ್ಷರ ಬರೆಯದೇಮದ್ದು ಗುಂಡು ಸಿಡಿಸದೆಗೊತ್ತೇ ಆಗದಂತೆ ಕೊಲೆ ಮಾಡಿ ಬಂದೆವು ಈಗ ನಾವಿಬ್ಬರೂ ಅಕ್ಕಪಕ್ಕದ ಮರವಾಗಿದ್ದೇವೆನಮ್ಮ ಟೊಂಗೆಗಳಲ್ಲಿ ಹದವಾಗಿ ಬೆಳೆದ ಹಸಿರು ಹೂ ಕಾಯಿ ಕಣ್ಣಲ್ಲಿ ಹಕ್ಕಿಗಳು ಸಂಸಾರ ನಡೆಸಿವೆ ಹು, ಈಗ ; ಕೊನೆಯ ಮಾತುಹಠಾತ್ ನಾ ಇಲ್ಲವಾದರೆಇದ್ದಲ್ಲೇ ಕಣ್ಣೀರಾಗು……… ಗೌರಿ ಮಾತಾಡಲಿಲ್ಲ ಗೌರಿಯನು ತಂದರುಮನೆಯ ಪಡಸಾಲೆಯಲ್ಲಿ ಅದ್ಭುತವಾಗಿ ಅಲಂಕರಿಸಿದರುಗೌರಿ ಮಾತಾಡಲಿಲ್ಲಆಕೆ ಮೌನವಾಗಿದ್ದಳುಆಕೆಗೆ ಮಾತಾಡದಂತೆ ಕಲಿಸಿಲಾಗಿತ್ತು ಆಕೆ ಜೀವಂತ ಮಣ್ಣಿನಮೂರ್ತಿಯಾಗಿದ್ದಳುಅದನ್ನೇ ಸಂಸ್ಕೃತಿ ಅಂದರುಭವ್ಯ ಪರಂಪರೆ ಎಂದರು ಗೌರಿಯ ಭಕ್ತಿ ಭಾವದಿಂದಪೂಜಿಸಿದರುದೀಪ ಹಚ್ಚಿದರುಸಿಹಿ ನೈವೇದ್ಯ ಮಾಡಿದರುನಮಸ್ಕರಿಸಿದರುಪಟಾಕಿ ಹೊಡೆದರುಭಜನೆ ಮಾಡಿದರುಗೌರಿ ಮಾತಾಡಲಿಲ್ಲಮೌನವಾಗಿದ್ದಳುಅದನ್ನು ಸಂಸ್ಕೃತಿ ಅಂದರು ಸಿಹಿ ಹಂಚಿ ತಿಂದರುಕೊನೆಗೆ ಅದೇ ಗೌರಿಯ ನೀರಲ್ಲಿ ಮುಳುಗಿಸಿದರುಗೌರಿ ಆಗಲೂ ಮಾತಾಡಲಿಲ್ಲಅದನ್ನೇ ಸಂಸ್ಕೃತಿ ಎಂದರು ಮಣ್ಣು ಮಣ್ಣ‌ ಸೇರಿತ್ತು…********************************

ನಾಗರಾಜ ಹರಪನಹಳ್ಳಿ Read Post »

ಕಾವ್ಯಯಾನ

ಫಾಲ್ಗುಣ ಗೌಡ ಅಚವೆ

ಫಾಲ್ಗುಣ ಗೌಡ ಅಚವೆ ಕಾವ್ಯಗುಚ್ಛ ಅವ್ಯಕ್ತ ಎದುರಿಗಿದ್ದ ಚಿತ್ರವೊಂದುನೋಡ ನೋಡುತ್ತಿದ್ದಂತೆಪೂರ್ಣಗೊಂಡಿದೆ ಹರಿವ ನೀರಿನಂತಇನ್ನೇನನ್ನೋ ಕೆರಳಿಸುವಕೌತುಕದ ರೂಪಮೂಡಿದಂತೆ ಮೂಡಿ ಮರೆಯಾದಂತೆಆಡಿದಂತೆ ಆಡಿ ಓಡಿ ಹೋದಂತೆಮೈ ಕುಲುಕಿ ಮನಸೆಳೆವ ಹೆಣ್ಣಿನಂತೆಕತ್ತಲಾದರೂ ಅರಳಿಯೇ ಇರುವಅಬ್ಬಲಿ ಹೂವಂತೆಅದರ ಶೋಕಿ ಆಕರ್ಷಣೆಒಳ ಮಿನುಗು ಅಚ್ಚರಿಯೆಂದರೆಅದರ ಹಿಂದೊಂದುಅದರದೇ ರೂಪಸದ್ದಿಲ್ಲದೇ ಅಚ್ಚಾದಂತೆಮಾಡಿದೆಪರಕಾಯ ಪ್ರವೇಶ! ದಂಡೆಯಲ್ಲಿ ಎಲ್ಲ ನೆನಪುಗಳ ಮೂಟೆ ಕಟ್ಟಿಬಾವಿಗೆಸೆದಂತೆಬಾಕಿ ಇರುವ ಲೆಖ್ಖವನ್ನೂಚುಕ್ತಾ ಮಾಡದೇಅಲ್ಲೆಲ್ಲೋ ಮೌನ ದೋಣಿಯಲ್ಲಿಪಯಣ ಹೊರಟೆಒಸರುವುದು ನಿಂತ ನಲ್ಮೆಯೊಸಗೆಯ ಮನಸುನೀರವ ನಿರ್ವಾತ ನಿರ್ವಾಣದೆಡೆಗೆಕೊಂಡೊಯ್ದಿದೆ ದಂಡೆಯಲಿ ಮುಸುಕುವಉಸುಕಿನಲೆಯಲಿ ಕುಳಿತುಕಣ್ಣು ಮುಟ್ಟುವವರೆಗೂ ನೋಟಬರವ ಕಾಯುತ್ತಿದೆನೀ ಸಿಕ್ಕ ಸಂಜೆಯ ರಂಗು ನೋಡುತ್ತ ಅಲ್ಲಿ ನಿನ್ನ ಹೆಜ್ಜೆಗಳು ಅಚ್ಚಾಗಿವೆಯೆಂದುನಾ ಹೆಜ್ಜೆಗಳನಿಡುತ್ತಿರುವೆ ಪ್ರತಿದಿನಅದೇ ಹಳೆಯ ಪ್ರೀತಿ ಗಳಿಗೆಗಳ ಜೊತೆಗೆ ನಡೆವ ಹೆಜ್ಜೆಗಳ ಬೆರಳುಗಳಿಗೆಒಂದು ದೃಷ್ಟಿ ದಿಕ್ಕಿರುತ್ತದಂತೆ?ಮಂದವಾಗಿದೆ ದೃಷ್ಟಿ ಮುಂದೇನು ಕಾಣದೇ?ದಿಕ್ಕೆಟ್ಟ ಒಲವಿನೊಡಲುಕವಲೊಡೆದ ದಾರಿಗಳಲ್ಲಿಮುಸುಗುತ್ತಿದೆ ಪ್ರತಿ ಸಂಜೆ ನನ್ನ ಎದೆ ದಂಡೆಯಲ್ಲಿನೀ ನಡೆದ ಹೆಜ್ಜಗಳ ಹುಡುಕುತ್ತಚಿನ್ನದ ಗೆರೆಗಳ ಅಂಚಿನಲ್ಲಿದೂಡುತ್ತಿದ್ದೇನೆ ದಿನಗಳಬಯಕೆಗಳ ಬದಿಗೊತ್ತಿಉಸಿರು ಬಿಗಿ ಹಿಡಿದು! ನಡೆದಾಡದ ಮರ ಮಾಂಸಲದ ಮೈಯಲ್ಲಿಬಯಕೆ ತೀರದ ತೊಗಲುಹರಿವ ರಕುತದ ಮೇಲ್ತಳಕಿನ ತುಂಬ ಅಸಹ್ಯ ಕೊಳಕು ದೃಷ್ಟಿ ನೇರಾ ನೇರತಾನು ತನ್ನದು ಪಟ್ಟಭದ್ರಕನಸುಗಳ ಗೊಂದಲಪುರ ನಡೆವ ಅಡಿಗಡಿಗೂ ಸ್ವಾರ್ಥದಡಿಗಲ್ಲಿಡುವಮನುಜನಲಿ ಈಗ ಮನಸಿಲ್ಲ ಸುಖದ ನರಳಿಕೆಯ ನಲುಗುವುಸಿರಲ್ಲಿತಿಲಮಾತ್ರವೂ ಧ್ಯಾನದರಿವಿಲ್ಲ!ನೀನು ನಡೆದಾಡೋ ಮರವಲ್ಲ!! ಮರವೋ ನಿಸ್ವಾರ್ಥದಾಗಸಹಸಿರು ಹೂ ಹೀಚು ಕಾಯಿಹಣ್ಣಲ್ಲೂ ನರಳಲ್ಲೂವರ ಕೊಡುವ ಧರ್ಮತಂಪೆರೆವ ಕರ್ಮಎಲ್ಲೋ ಬಿದ್ದ ಮಳೆಯ ಮಣ್ಣ ವಾಸನೆತಂಬೆಲರ ಹಿತ ಸ್ಪರ್ಶಕೆಅಲೆವ ಎಲೆ ಎಲೆಗಳಲಿಸಂತೃಪ್ತ ಬಿಂಬ ಬಯಲು ಬೆಟ್ಟಗಳಲ್ಲಿಜೀವಂತಿಕೆ ಹಿಡಿದಿಟ್ಟುಸದಾ ಉಸಿರೂಡುವ ಮರವೇನೀನು ನಡೆದಾಡದ ಮನುಷ್ಯ!! *****************************

ಫಾಲ್ಗುಣ ಗೌಡ ಅಚವೆ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಯೆಂದರೆ.. ವಿಶಾಲಾ ಆರಾಧ್ಯ ಈ ಪ್ರೀತಿಯೆಂದರೆ ಹೀಗೇನೇಒಮ್ಮೆ ಮೂಡಿತೆಂದರೆ ಮನದಿಸರ್ರನೆ ಧಮನಿಯಲಿ ಹರಿದಾಡಿಮನಸ ಕದವ ತೆರೆದುಕನಸ ತೂಗು ಬಲೆಯಲಿಜಮ್ಮನೆ ಜೀಕುವಜೋಕಾಲಿಯಾಗುತ್ತದೆ..!! ಈ ಪ್ರೀತಿಯೆಂದರೆ ಹೀಗೇನೇಹರಿವ ಹೊನಲಂತೆ ಕಲ್ಲೇನುಮುಳ್ಳೇನು ಹಳ್ಳಕೊಳ್ಳವ ದಾಟಿಪರಿಧಿ ಪಹರೆಯ ಕೊತ್ತಲ ದಾಟಿಸೇರಿ ಕುಣಿಯುತ್ತದೆ ಮಾನಸಸರೋವರದ ಅಲೆಗಳ ಮೀಟಿ..!! ಪ್ರೀತಿ ಎಂದರೆ ಹೀಗೇನೇಕಂಗಳ ಬೆಸುಗೆಗೆ ಕಾವಾದ ಹೃದಯದೆಕಾಪಿಟ್ಟು ಹೆಪ್ಪಾದ ಮುಗಿಲಿನಂತೆಕಾದಲಿನ ತುಡಿತಕೆ ಒಮ್ಮೆ ಸ್ಪಂದನಿಸಿಕೂಡಿತುಂಬಿದ ಮುಗಿಲು ಸುರಿವ ವರುಣಧಾರೆಯ ಮುತ್ತ ಹನಿಗಳಂತೆ..!! *****************

ಕಾವ್ಯಯಾನ Read Post »

ಕಾವ್ಯಯಾನ

ವಿಭಾ ಪುರೋಹಿತ ಕಾವ್ಯಗುಚ್ಛ

ವಿಭಾ ಪುರೋಹಿತ ಕಾವ್ಯಗುಚ್ಛ ವೆಂಟಿಲೇಟರ್ ಮತ್ತು ರಕ್ಷೆ ಭ್ರಾತೃತ್ವದ ಬಾಂಧವ್ಯ ದೆಳೆಯಲ್ಲಿಫ್ಯಾಷನ್ ಗಿಫ್ಟುಗಳ ಮೋಹದನೂಲುಆತ್ಮೀಯತೆ ಗೌಣ ಪ್ರದರ್ಶನಕ್ಕೆಕ್ಲಿಕ್ಕಾಗುವ ಕೆಂಪು ಕೇಸರಿ ಹಳದಿರಕ್ಷೆ ತಾಯಿ ಕರುಳ ಬಣ್ಣ ಅಂಟಿದೆಅದೇಕೋ ಅವಳ ಕುಡಿಗಳ ಬೆರಳು ಕೆಂಪಾಗಿವೆ! ಎಪ್ಪತ್ತು ವರ್ಷಗಳಿಂದಎದೆಯಲ್ಲಿ ಬೆಂಕಿ ಇಟ್ಟು ಕೊಂಡಿದ್ದಾಳೆ ಇತಿಹಾಸ ಗಡಿರೇಖೆಯೆಳೆದಾಗಸಹಸ್ರೋಪಾದಿಯಾಗಿ ಕಂಗಾಲಾದವರನ್ನೆಲ್ಲತನ್ನವರೆಂದು ತೆಕ್ಕೆಬಡಿದುಕೊಂಡಳುಆತ್ಮಸಾಕ್ಷಿಯಾಗಿ ಕಾಲಿಟ್ಟವರೆಷ್ಟೋ ? ಒಂದೇ ಬಳ್ಳಿಯ ಹೂಗಳಂತೆ ಮುಡಿಗಿಟ್ಟಳುಸುಮ್ಮನಿರದ ಶಕುನಿಗಳ ಕ್ಯಾತೆಗೆಹಣ್ಣಾಗಿದ್ದಾಳೆ ಪುಪ್ಪಸನೆಂಬ ಪುತ್ರರಕ್ಕಸರುಉಸಿರಾಡಲು ಬಿಡುತ್ತಿಲ್ಲ ವೆಂಟಿಲೇಟರ್ ಅಭಾವ ,ಕೆಲವೇ ಶುಶ್ರೂಷಕರಸಿಟ್ರಝೀನ್,ಡೊಲೊಗಳಿಂದ ತುಸು ಉಸುರುವಂತಹ ಗತಿಯಿದೆಬೇಕಾಗುವ ವೆಂಟಿಲೇಟರ್ ಸುಲಭದ್ದಲ್ಲ ‘ನಾವು ಭಾರತೀಯರು’ ಎಂಬ ವೆಂಟಿಲೇಟರ್ಯಾವ ಆಸ್ಪತ್ರೆಯ ಯಂತ್ರ ತಂತ್ರಗಳುಯಾವ ಹಬ್ಬದ ಮಂತ್ರ ಸ್ತೋತ್ರಗಳುಈ ಒಕ್ಕೊರಲಿನ ಭಾರತೀಯತೆಯ ಹೆದ್ದೊರೆ ಹರಿಸಲಿವೆ ? ರಾಷ್ಟ್ರ ನಮನ ಭಾರವಾಗಿದೆಯಿಂದು ಗಾಯವಾಗಿದೆ ಕವಿತೆರಕ್ತಕಾರುವದೊಂದೇ ಬಾಕಿ ಲೇಖನಿಯ ಬಾಯಿಂದಮೂರು ಯುದ್ಧಗಳು ಕೊರೊನಾ ರಣಕೇಕೆಗಡಿನೆಲದ ರಣಹಲಿಗೆ ರಾಜಕಾರಣದಕರ್ಮಕಾಂಡ ನಡುವೆ ನರಳುವ ನರರ ಪ್ರಲಾಪ !ಯಾವ ಭೀತಿ ರೀತಿ ನೀತಿಗೂ ಬಗ್ಗುತ್ತಿಲ್ಲಕಾಡುಪಾಪದ ಕಿಂಕಿಣಿಗಡಿಯಲ್ಲಿ ಸಂಚು ನಿತ್ಯ ಗುಂಡಿನ ಸದ್ದುವೀರಗುಂಡಿಗೆಗಳ ಆಹುತಿ ! ವಿಕೋಪದಲ್ಲೂ ವಿಕೃತವ ಮೆರೆವರಾಜಕೀಯ ತೊಗಲು ಗೊಂಬೆಯಾಟಸಾಮಾನ್ಯರ ಮನೋಭೂಮಿಸೋತು ಅರೆ‌ಸತ್ತು ಕಾದಿದೆ ಅಮೃತಘಳಿಗೆಗಿಂದು……. ಚೀನಿಯಾತ್ರಿಕ ಹೂಯಾನ್ ತ್ಸಾಂಗ್ ಅಲ್ಲ ವಕ್ಕರಿಸಿದವ ಅಣುದಾಳಿಕಾರ ಹೊಡೆದೊಡಿಸುವಸಿಡಿಮದ್ದುಗಳು ಸಿದ್ಧವಾಗುತಿವೆಅಶ್ವಿನಿದೇವತೆಗಳ ಸದಯೆಯಲಿ ********************************

ವಿಭಾ ಪುರೋಹಿತ ಕಾವ್ಯಗುಚ್ಛ Read Post »

You cannot copy content of this page

Scroll to Top