ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ಉಮೇಶ ಮುನವಳ್ಳಿ ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ, ಸೋಲೊಪ್ಪದ ಸಾಹಸಿ ನೀನಾಗಬೇಕು,ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ. ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ. ದಣಿವರಿಯದ ಕಾರ್ಯ ನಿನ್ನ ಕಸರತ್ತು,ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ. ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ. ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,ಬೇಸತ್ತ ಮೇಲೂ ಮತ್ತೆ ಸಾಯುವ ಹಸೆ, ಹನಿಹನಿಯಾಗಿ ***********************

ಗಝಲ್ Read Post »

ಕಾವ್ಯಯಾನ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ ಒಂದು ಹೆಣ್ಣಿನ ಸ್ವಗತ. ನನಗಾರ ಭಯ..!ನಾನು ಜನ್ಮ ಕೊಡುವ ಹೆಣ್ಣು ಮಗುವನ್ನುಈ ಲೋಕದಿ ತರಲು ನನಗಾರ ಭಯ..ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು..ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವಧೈರ್ಯ ನನಗಿಲ್ಲದಿರುವದು..ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..!ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ..ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ..ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳುಅವಳು ಅನುಭವಿಸುವದು ಬೇಡವೆಂದೇ…ಕೆಟ್ಟ ಕಾಮುಕರಿಗೆ ಬಲಿಯಾದೀತೆಂದುದಿಗಿಲುಗೊಂಡೇ…ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದುಭಯಗೊಂಡೆ…ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರದುರುಳುತನಕ್ಕಂಜಿಯೇ… ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು..ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು.ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..!ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ.. ಹೆದರದಿರು ಮನವೇ..ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದುತಿಳಿದಿರು..ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟದಾರಿ ಇದೆ..ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ..ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ..ಹೆಣ್ಣು ಹೆಣ್ಣೆಂದು ಜರೆಯಬೇಡ..ಹೆಣ್ಣು ಹೇರಲು ಅಂಜಬೇಡ..ಹೆಣ್ಣು ‌ಬಾಳಿನ ಕಣ್ಣೆಂಬುದು ಮರೆಯಬೇಡ. ಭರವಸೆಯ ಕಿರಣ. ದೀಪಗಳೆ..ದೀಪಗಳೆಮಿನುಗುವ ಮಿಣುಕು ನಕ್ಷತ್ರಗಳೆಮನದ ಕತ್ತಲೆ ಓಡಿಸಿ ಬೆಳಕುಪಸರಿಸುವ ಚಂದಿರಗಳೆ.. ಬಾನಿಗೂ ಭೂವಿಗೂ ಬೆಸೆದಮಿಂಚಿನ ದಿವ್ಯ ಪ್ರಭೆಗಳೆನಾಲ್ಕು ದಿಕ್ಕಿಗ ಹರಡಿದಅರಿವಿನ ವಿಶ್ವ ಜ್ಯೋತಿಗಳೆ.. ಚಿಂತೆಯ ಕಾರ್ಮೊಡ ಕರಗಿಸುವಹರುಷದ ಹೊನಲುಗಳೆನಿರಾಶೆಯ ಮುಂದೆ ಆಸೆ ತೋರುವವಿಶ್ವಾಸದ ದನಿಗಳೆ.. ಕನಸಿನ ಗೊನೆಗೆ ನೀರೆರೆದುಪೋಷಿಸುವ ಮಿಂಚಿನ ಸಿಂಚನಗಳೆಬದುಕ ಭಾರವನ್ನು ಹಗುರಗೊಳಿಸುವಉಲ್ಲಾಸದ ಕೋಲ್ಮಿಂಚುಗಳೆ.. ಕತ್ತಲು ಕಳೆದು ಬೆಳಗು ಮೂಡಿಸುವಸುಖದ ಕಲ್ಪನೆಗಳೆಮುಸುಕು ಸರಿಸಿ ದಾರಿ ತೋರಿಸಿಗುರಿಮುಟ್ಟಿಸುವ ಹೊಂಗಿರಣಗಳೆ.. ನಿಸ್ತರಂಗದ ಬಾಳಲಿ ಚಲನೆಮೂಡಿಸುವ ಆಶಾ ದೀವಿಗೆಗಳೆಬಾಳ್ ದಾರಿಯಲೆಲ್ಲಾ ಸದಾಜೊತೆಗಿರುವ ಭರವಸೆಯ ಕಿರಣಗಳೆ.. ಅಕ್ಕ. ಅಕ್ಕ…ಚನ್ನನ ಮೇಲೆ ಅದೆಂತಹ ಮೋಹ ನಿನಗೆಆ ಚೆನ್ನ ಸಿಕ್ಕನೇನೆ ನಿನಗೆ.ಕೇಶವನ್ನೆ ಅಂಗಕ್ಕೆ ಮರೆಮಾಡಿಕೊಂಡುಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವನಿಗಾಗಿಕಾಡು ಮೇಡು ಅಲೆದು ದಣಿದ ನಿನಗೆಆ ಚೆನ್ನ ಸಿಕ್ಕನೇನೆ ಕೊನೆಗೆ ದೇಹದ ಮೋಹವನ್ನು ತೋರೆದುಭಯವೆಂಬ ಭವವ ನಿರ್ಬಯದಿ ಹರಿದುಆಡಿಕೊಳ್ಳುವವರ ಮುಂದೆ ಧೈರ್ಯದಿ ಮೆರೆದೆ ನೀನಿನೋಲಿದ ಚನ್ನ ಸಿಕ್ಕನೇನೆ ನಿನಗೆ. ಬೆಟ್ಟು ಮಾಡುವರನ್ನು ದಿಟ್ಟ ನಿಲುವುಗಳಿಂದಬಿಚ್ಚು ಮನಸ್ಸಿನಿಂದ ಬೆರಗುಗೋಳಿಸಿಇಚ್ಚೆ ಪಟ್ಟವನನ್ನು ಅರಸುತ್ತಾಅರಸೊತ್ತಿಗೆ ಬಿಟ್ಟು ಬಂದ ನಿನಗೆಆ ಚನ್ನ ಸಿಕ್ಕನೇನೆ ಅಕ್ಕ.. ಶ್ರೀಶೈಲದ ಕಾಡುಮೇಡು ಅಲೆದುಕದಳಿಯ ಭವ ಘೋರಾರಣ್ಯ ಹೊಕ್ಕುಭವಗೆಟ್ಟು ಹೋದನಿನಗೆ ಬಿಗಿದಪ್ಪಲು ಭವಹರನಾದಆ ಚನ್ನ ಸಿಕ್ಕನೇನೆ ಅಕ್ಕ.. ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದಸೀಮೆಇಲ್ಲದ ನಿಸ್ಸೀಮನಿಗಾಗಿಉಡತಡಿಯಿಂದ ಕಲ್ಯಾಣದ ವರೆಗೆಕದಳಿಯ ಸೀಮೆಯವರೆಗೆ ತ್ರೀಕೂಟವೆಂಬಮಹಾಗಿರಿಯ ಬಟ್ಟಬಯಲೋಳಗೆ ಹುಚ್ಚಾಟದ ಮೇರೆಮೀರಿ ಹುಡುಕಾಡಿಶರಣಸತಿ ಲಿಂಗಪತಿ ಎಂಬ ಭಾವದಲ್ಲಿಕದಳಿಯಲ್ಲಿ ನಿನ್ನ ಚನ್ನನಲ್ಲೆ ಒಂದಾದೆಯಲ್ಲ.. ಕೋನೆಗೂ ನಿನ್ನ ಚನ್ನನನ್ನು ಹುಡುಕೆಬಿಟ್ಟಯಲ್ಲ… *******************

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ Read Post »

ಕಾವ್ಯಯಾನ

ವಿಶಾಲಾ ಆರಾಧ್ಯ ಕಾವ್ಯಗುಚ್ಛ

ವಿಶಾಲಾ ಆರಾಧ್ಯ ಕಾವ್ಯಗುಚ್ಛ ಬುದ್ಧನೊಂದಿಗೊಂದು ದಿನ ನಿನ್ನಂತಾಗಲೂನಾನೇನು ಮಾಡಬೇಕು ?ಕತ್ತಲ ಬದುಕಿನಿಂದೊಡನೆನಡೆದುಬಿಡಲೇ?ಓ..ಓಹ್ಎಂದಾದರೂ ಉಂಟೆ ಬುದ್ಧ ?ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆಕಥೆ ಏನಾಗಿರುತ್ತಿತ್ತು..??ನೀನೇನೋ ಸಿದ್ಧಾರ್ಥನಿಂದಬುದ್ಧನಾಗಿ ಹೋದೆಯಶೋಧರೆಗೆಂತೆಂಥಹ ಪದವಿಬಿರುದು ವಿಜೃಂಭಿಸುತ್ತಿದ್ದವುಬಲ್ಲೆ ಏನು?ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನಸಾವಿತ್ರಿಯ ಸೋಲಿಸೆ ನಿಂದಸಿದ ಯಮಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇಅಂಬರವ ಹರಿದ ಬಣ!ಯಶೋಧರೆಯ ಬೇರಾವ ಅಗ್ನಿನುಡಿಗೀಡುಮಾಡುತ್ತಿದ್ದರೋ..ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!ಪುತ್ರನ ನೆನಪೇನಾದರೂ ಸುಳಿಯಿತೇ?ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನುಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!! ಎಲ್ಲೆ ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆಮಾಡಿದ ಸೈಟು ಬೇಡಿದ ಕಾರುಮಾಡಿದ ಕಾರುಬಾರೆಲ್ಲಾಅವನ ಕೃಪೆಯೇ !ಗೋಡೆಯಲಿ ಇದ್ದಾಗಅಮ್ಮ ಅಪ್ಪನೇ ಗುರುವೇ ಎಂದುವಾರ ಮಾಡಿ ಪಕ್ಷ ಮಾಡಿ ಬೇಡಿ ಕಾಡಿ ಪಡೆದವರೇ .!ಕಾಯಿ ಹೊಡೆದು ಹಣ್ಣನಿತ್ತುದೀಪ ಧೂಪ ಹಚ್ಚಿ ಇಟ್ಟು ವಸ್ತ್ರ ದಕ್ಷಿಣೆಗಳನಿಟ್ಟುಕೈ ಜೋಡಿಸಿ ಬೇಡಿದವರೇ..!ಅವನಿಗಾಗಿ ಜಾತ್ರೆ ಮಾಡಿಅವನ ಹೆಸರಲೇ ಯಾತ್ರೆ ಮಾಡಿದಂಡಿ ದಂಡಿ ದಂಡವಿಟ್ಟುಹರಕೆ ಹೊತ್ತು ಉರುಳಿ ಬಂದು ದೀರ್ಘ ದಂಡ ಹಾಕಿದವರೇ ..!ಅಂಬರಕ್ಕೇ ಅಂಬರವನಿತ್ತುದಯಾಮಯಿಗೇ ದಯೆ ತೋರಿನೆಲೆಯಾದವನಿಗೇ ಗುಡಿಯ ಕಟ್ಟಿಮನೋಹರನಿಗೇ ಉಪಚಾರ ಮಾಡಿ ಕಡೆಗೊಂದು ದಿನಮಾಸಿದನೆಂದೋ ಪಟ ಪಸುಗೆಯಾಯಿತೆಂದೋಮನೆಯಾಚೆ ತಳ್ಳಿ ಜಗನ್ನಾಥನನ್ನೇಅನಾಥಗೊಳಿಸಿದ ಮನುಜ ಭಕ್ತಿಗೇನೆಂಬೆ? ಕುದಿ ಕುದಿಯುವ ಹೂವಿನ ಹೃದಯಗಳಲಿನಗುವಿನ ಆವಿಯ ಚಿತ್ರಣ ತೋರಿಕೆಅಂತರಂಗದ ಕತ್ತಲಾಮಿಷ ಕೋಣೆಗೆಬಹಿರಂಗದಿ ಕಾಣುವ ಬೆಳಕಿನ ಜವನಿಕೆ ಹೂವಿನ ಹುಡುಗನು ಕಟ್ಟುವ ನೂಲಲೇಕೊರಳುಸಿರಿನ ಇರಿತದ ಮತ್ಸರವಿಹುದುಕಸಾಯಿಕಾನೆಯ ಕಟುಕನ ಕಣ್ಣಲೂಕರುಣೆಯ ಕರುಳಿನ ಕರೆಯಿರಬಹುದು ಕಣ್ಣಿಗ್ಹಬ್ಬವಾಗೋ ಅಂದದ ಕಡಲೊಳುಜೀವ ತೆಗೆಯುವ ಸುಂದರ ಜಲಚರಕಸವನೇ ನುಂಗಿದ ಕೆಸರಿನ ಹೊಂಡದಿಪೂಜೆಗೆ ಒದಗುವ ಕಮಲದ ಹಂದರ ಸುಂದರ ಗೋಕುಲ ವೃಂದಾವನದಿ ಗೂಡೊಳಗೊಂದು ವ್ಯಾಘ್ರ ನುಗ್ಗಿದೆಅಂದದೊಂದಿಗೆ ಚಂದದ ಮನದಿಮನದೊಳಗೆ ವಿಷವನೇ ಬಸಿದಿದೆ————- *********************

ವಿಶಾಲಾ ಆರಾಧ್ಯ ಕಾವ್ಯಗುಚ್ಛ Read Post »

ಕಾವ್ಯಯಾನ

ಕವಿತೆಯೆಂದರೆ

ಕವಿತೆ ಪ್ರೇಮಶೇಖರ ಕವಿತೆಯೆಂದರೆ ಏನು?ಏನಲ್ಲ? ಕವಿತೆಯೆಂದರೆ ಕತ್ತಲೆಬೆಳಕಿನಾಟದ ಜೀವನರಂಗಮಂಚ. ಕವಿತೆಯೆಂದರೆ ಸಮುದ್ರತೀರದ ಸತ್ತ ಮೀನುಅರಳಿಸುವ ಮಲ್ಲಿಗೆಸುವಾಸನೆ, ಕವಿತೆಯೆಂದರೆ ಹೆಣ್ಣುನಾಗರಇಟ್ಟ ನೂರೊಂದು ಮೊಟ್ಟೆಗಳೊಡೆದು ಬಂದನವಿಲುಗರಿಗಳು. ಕವಿತೆಯೆಂದರೆ ಪ್ರೇಯಸಿಕೊಟ್ಟ ಮುತ್ತುಒಡೆದುಹೋಗಿಧಾರಾವಾಹಿಯಾದ ನಿರೀಕ್ಷೆ. ಕವಿತೆಯೆಂದರೆ ಬೀಸಣಿಗೆಯ ಬಣ್ಣದ ರೆಕ್ಕೆಯ ಗಿಣಿಮರಿಗೆ ಮಾತು ಕಲಿಸಹೊರಟಮಗು. ಕವಿತೆಯೆಂದರೆ ನಾಳೆಹಾರಿ ಹೋಗುತ್ತದೆಎಂದು ಗೊತ್ತಿದ್ದರೂ ಇಂದುಗುಟುಕು ನೀಡುವತಾಯಿಹಕ್ಕಿ. ಕವಿತೆಯೆಂದರೆ ಅಕ್ಷತಯೋನಿಒಂಬತ್ತು ಹೆತ್ತು ಮೂಲೆಯಲ್ಲಿಕೂತ ಅಡುಗೂಲಜ್ಜಿಕತೆ. ಕವಿತೆಯೆಂದರೆ ತಾಯಿಹುಲ್ಲೆಯನು ಕೊಂದುತಿಂದುಎಳೆಹುಲ್ಲೆಗೆ ತಾಯಿಯಾಗಿ ಹಾಲೂಡಿಸಿದ ಹೆಣ್ಣುಹುಲಿ. ಕವಿತೆಯೆಂದರೆಕೊನೆಗೂ ಏನುಂಟು?ಏನಿಲ್ಲ? ಅಹ್ ಕವಿತೆಯೇ ಅಂತಿಮವಾಗಿ ನೀನೇ ಎಲ್ಲ,ನಾನೆಲ್ಲೂ ಇಲ್ಲ. **********************

ಕವಿತೆಯೆಂದರೆ Read Post »

ಕಾವ್ಯಯಾನ

ಚೈತ್ರಾ ಕಾವ್ಯಗುಚ್ಛ

ಚೈತ್ರಾ ಶಿವಯೋಗಿಮಠ ಕಾವ್ಯಗುಚ್ಛ ಕೊರೋನಾ ಖೈದಿ ದಿನ ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲಉದಯಾಸ್ತಮಾನಗಳ ನಡುವೆಭೂಮ್ಯಾಕಾಶದ ಅಂತರ.ಗಡಿಯಾರದ ಮುಳ್ಳುಗಳುಅಪೌಷ್ಟಿಕತೆಯಿಂದ ನರಳುತ್ತಿವೆಚಲನೆ ಅದೆಷ್ಟು ಕ್ಷೀಣವೆಂದರೆಒಂದು ಹೆಜ್ಜೆ ಇಡಲೂ ಆಗದ,ಕೀಲಿಲ್ಲದ ಮುದುಕಿಯ ಹಾಗೆಕೈಲಾಗದಿದ್ದರೂ ಬೊಬ್ಬಿಡುವುದಕೇನೂಕಡಿಮೆ ಇಲ್ಲ ‘ಟಿಕ್’ ಎಂಬ ಶಬ್ದಮಾತ್ರ ಕಿವಿಯೊಳಗೆ ಕಾದ ಸೀಸಹೊಯ್ದಷ್ಟು ಕಠೋರ. ಆಗೊಮ್ಮೆ-ಈಗೊಮ್ಮೆನರ್ಸಗಳ ಅಡ್ಡಾಡುವಿಕೆ ಮಾತ್ರನಾನಿನ್ನೂ ಮನುಷ್ಯರ ನಡುವಿರುವುದಕೆಪುರಾವೆ.ಖಾನೆಯೊಳಗೆ ಖಾಲಿತನ ತುಂಬಿಉಸಿರಾಟದ ಭದ್ರತೆ ಕಾಯ್ದುಕೊಂಡು ಏಳು ದಿನಗಳನ್ನಏಳು ವರ್ಷಗಳಂತೆ ಕಳೆದು ಬರುವ ಖೈದಿ! ಕಣ್ಣಾಮುಚ್ಚಾಲೆ ತಪ್ಪಿಸಿಕೊಳ್ಳುವುದಕ್ಕೆ ಹೇಳುತ್ತಿದ್ದ ಕುಂಟುನೆಪಗಳಿಂದು ಬಂಧಿಸುವುದಕ್ಕೆಬರುವ ಭಟನಂತೆ.ಜ್ವರವೆಂದು ನರಳುವ ಹಾಗಿಲ್ಲರಾಕ್ಷಸನಂತೆ ಹಗಲಿರುಳೆನ್ನದೆ ದುಡಿದುಒಂದೆರಡು ದಿನವೂ ಮೈಕೈ ನೋವೆಂದುಒದ್ದಾಡುವ ಹಾಗಿಲ್ಲ. ಎಲ್ಲ ರಸ್ತೆಗಳೂಅಲ್ಲಿಗೆ ಎಳೆದುಕೊಂಡು ಹೋಗುತ್ತಿವೆ.ಕಾಲು ಕಿತ್ತು ರಸ್ತೆ ಬದಲಿಸಿದರೂ ಅವುಒಯ್ಯುವುದು ಅಲ್ಲಿಗೇ!ಎಲ್ಲಿಯೂ ಹೋಗದೆ ಒಳಗಿರಲುನನ್ನ ದಾಸ್ತಾನು ಅಕ್ಷಯಪಾತ್ರೆಯೇ?ದುಡಿದು ತುತ್ತಿನ ಚೀಲ ತುಂಬಿಸಿಯೇನೆಂದರೆಎಲ್ಲಿಂದಲೋ ಹಾರಿ ಬಂದು ಕತ್ತುಹಿಸುಕುವ ಅಣುರಕ್ಕಸ. ಎಷ್ಟು ದಿನಈ ಕಣ್ಣಾಮುಚ್ಚಾಲೆಯೋ ? ಕಾಲ ಮುಟ್ಟಿದರೆ, ಮುತ್ತಿಟ್ಟರೆ ಹೆಚ್ಚುತ್ತಿದ್ದಿದ್ದುಪ್ರೀತಿ ಒಲವುಗಳು ಮಾತ್ರ.ಸುರಿವ ಕಣ್ಣೀರಿಗೆ ಅಣೆಕಟ್ಟಾಗಿದ್ದುನೇವರಿಕೆ, ತೆಕ್ಕೆಯ ಮೃದು ಅಪ್ಪುಗೆಕಳೇಬರಕ್ಕೆ ಕೊನೆ ಪೂಜೆಯೇಕಳೆಯಂತೆ, ಕೊನೆಯದಾಗಿ ತಬ್ಬಿಬಿದ್ದು ಹೊರಳಾಡಿ ಅತ್ತರೂ ತೃಪ್ತಿನೀಡುತ್ತಿರಲಿಲ್ಲ ಬೀಳ್ಕೊಡುಗೆ.ತಂದೆ- ತಾಯಿ ಮಕ್ಕಳೆಲ್ಲ ಒಂದೆಡೆಸೇರಿ ಸಂಭ್ರಮಿಸುತ್ತಿದ್ದಿದ್ದು ಹಬ್ಬಗಳುಒಬ್ಬರಿಗೊಬ್ಬರಾದಾಗ ಹರಡುತ್ತಿದ್ದಿದ್ದುಭ್ರಾತೃತ್ವ, ಒಂದೆಂಬ ಭಾವಎಲ್ಲಿಯೋ ಏನೋ ಅವಘಡವಾದರೆಮರುಗುತ್ತಿದ್ದಿದ್ದು ಮೃದು ಮನ. ಎಲ್ಲವೂ ಗತ ವೈಭವವೀಗಮುಟ್ಟುವ ಹಾಗಿಲ್ಲ ತಟ್ಟುವ ಹಾಗಿಲ್ಲನೇವರಿಸಿ ಸಂತೈಸಿದರೆ ಹರಡುವುದುಖಾಯಿಲೆ ಮಾತ್ರ!ಸಂಸ್ಕಾರ ಕಾಣದ ಶವಗಳ ಕನಿಷ್ಠಒಮ್ಮೆ ಕಂಡರೂ ಸೌಭಾಗ್ಯತಂದೆ ತಾಯಿ ಮಕ್ಕಳು ದಿಕ್ಕಿಗೊಬ್ಬರಂತೆಒಬ್ಬರಿಗೊಬ್ಬರಾದರೆ ಹರಡುವುದುಪಿಡುಗಂತೆದಿನವೂ ಒಂದೇ ರುಚಿ ನಾಲಿಗೆಯದುಡ್ಡು ಬೀಳಿಸಿದಂತೆ, ಎಂತಹ ಅನಾಹುತಕ್ಕೂಮನಗಳು ಈಗ ಮರಗಟ್ಟಿ ಹೋಗಿವೆ *************************

ಚೈತ್ರಾ ಕಾವ್ಯಗುಚ್ಛ Read Post »

ಕಾವ್ಯಯಾನ

ಚೇತನಾ ಕುಂಬ್ಳೆ ಕಾವ್ಯಗುಚ್ಚ

ಚೇತನಾ ಕುಂಬ್ಳೆ ಕಾವ್ಯಗುಚ್ಚ ನಿರೀಕ್ಷೆ ನಿನ್ನ ಕೈಹಿಡಿದು ನಡೆದ ದಾರಿಯಲ್ಲಿಹೆಜ್ಜೆಗುರುತುಗಳು ಇನ್ನೂ ಮಾಸಿಲ್ಲನಿನ್ನ ಹೆಸರ ನೆಪದಲ್ಲಿ ಅಂಗೈಯಲ್ಲಿ ಹಚ್ಚಿದಮದರಂಗಿಯ ಬಣ್ಣ ಇನ್ನೂ ಅಳಿಸಿಲ್ಲ ಸಮಯವನ್ನು ದೂಷಿಸುತ್ತಾದಿನ ರಾತ್ರಿಯೆನ್ನದೆಕಾದಿದ್ದೆ ಕಾತರಿಸಿದ್ದೆಬಯಸಿದ್ದೆ ನಿನ್ನ ಸೇರಲು ಕಣ್ಗಳಿಂದುದುರಿದ ಹನಿಗಳುಮಣ್ಣಿನಲ್ಲಿ ನರಳುತ್ತಿದೆತನು ಮನ ತಣ್ಣಗಾಗಿದೆನಿನ್ನ ಬಿಸಿಯುಸಿರ ಬಿಸುಪಿಲ್ಲದೆ ಅದೆಷ್ಟು ಚುಚ್ಚು ಮಾತುಗಳನ್ನಾಲಿಸಿದ್ದೆಎಷ್ಟೊಂದು ಕೆಂಗಣ್ಣುಗಳಿಗೆ ಗುರಿಯಾಗಿದ್ದೆಎದೆ ಸೀಳುವಂತ ನೋವಿದ್ದರೂಬಲವಂತದಿ ತುಟಿಗಳಲ್ಲಿನಗುವ ತರಿಸಿದ್ದು ನಿನಗಾಗಿಯೇ ಜೊತೆಗಿದ್ದ ಒಂದಷ್ಟು ಕ್ಷಣಗಳುನೋವನ್ನು ಮರೆಸುತ್ತವೆನಿನ್ನ ನೆನೆಯುವಾಗಲೆಲ್ಲನೀನಿತ್ತ ನೆನಪುಗಳು ಸಂತೈಸುತ್ತವೆ ಈಗಲೂ ಕಣ್ಣ ನೋಟಗಳುಬಾಗಿಲಿನತ್ತ ಸರಿಯುವುದು ನಿಲ್ಲಲಿಲ್ಲನಿನ್ನಲ್ಲಿಟ್ಟ ನಂಬಿಕೆಗಳುಇನ್ನೂ ಸುಳ್ಳಾಗಲಿಲ್ಲ ಕಾರಣ ನೀನು ಎದೆಯಲ್ಲಿಹಚ್ಚಿದ ಪ್ರೀತಿಯ ದೀಪನಿತ್ಯವೂ ಉರಿಯುತಿದೆಅದರ ಬೆಳಕಿನಲ್ಲೆನಾನು ಉಸಿರಾಡುತ್ತಿರುವೆ ಕವಿತೆ ಬರೆಯುತ್ತೇನೆ ನೋವು ಎದೆಯನ್ನಿರಿಯುವಾಗಸಹಿಸಲಾಗದೆ ಕಣ್ಣೀರು ಹರಿಸುತ್ತೇನೆಪ್ರೀತಿಸುವ ಕೈಗಳು ಒರೆಸಲಿಯೆಂದಲ್ಲಮನಸ್ಸು ಒಂದಿಷ್ಟು ಹಗುರಾಗಲಿಯೆಂದು ಇರುಳ ನಿಶ್ಯಬ್ದತೆಯಲ್ಲಿಕನಸುಗಳನ್ನು ಹೆಣೆಯುತ್ತೇನೆಎಲ್ಲವೂ ನನಸಾಗಲಿಯೆಂದಲ್ಲವಾಸ್ತವವನ್ನು ಕ್ಷಣಹೊತ್ತು ಮರೆಯಲೆಂದು ಮುಸ್ಸಂಜೆ ಮರಳಲ್ಲಿಕುಳಿತುಕೊಳ್ಳುತ್ತೇನೆಅಲೆಗಳ ನರ್ತನವನ್ನು ನೋಡಲು ಮಾತ್ರವಲ್ಲಪ್ರಕೃತಿಯಲ್ಲಿ ಮಿಂಚಿಮರೆಯುವವಿಸ್ಮಯಗಳನ್ನು ಕಣ್ತುಂಬಿಕೊಳ್ಳಲೆಂದು ಮರೆಯಲಾಗದ ಕ್ಷಣಗಳನ್ನುನೆನಪಿನ ಜೋಳಿಗೆಯಲ್ಲಿ ತುಂಬಿಕೊಳ್ಳುತ್ತೇನೆಧೂಳು ಹಿಡಿದು ಮಾಸಲೆಂದಲ್ಲನೆನಪಾದಾಗ ನೆನೆಯಲೆಂದು ಆಗಾಗ ಮೌನಕ್ಕೆ ಶರಣಾಗುತ್ತೇನೆಮಾತು ಬೇಸರವಾಗಿಯಲ್ಲಮೌನದೊಳಗವಿತಿರುವಮಾತುಗಳನಾಲಿಸಲೆಂದು ನಾನು ಕವಿತೆ ಬರೆಯುತ್ತೇನೆಓದುಗರು ಓದಲೆಂದಲ್ಲಭಾವನೆಗಳಿಗೆ ಉಸಿರುಗಟ್ಟುವ ಮೊದಲುಅಕ್ಷರ ರೂಪಕ್ಕಿಳಿಸಿ ಜೀವ ತುಂಬಲೆಂದು ಕರೆಯದೆ ಬರುವ ಅತಿಥಿ ಕರೆಯದೆ ಬರುವ ಅತಿಥಿ ನೀನುಕರೆದರೂ ಕಿವಿ ಕೇಳಿಸದವನುಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ, ಯಾವಾಗ, ಹೇಗೆ, ಯಾಕೆಯಾವ ನಿಮಿಷದಲ್ಲಿ ಯಾವ ರೂಪದಲ್ಲಿನೀನು ಬರುವೆಯೆಂದು ಗೊತ್ತಿಲ್ಲ ನನಗೆಮನ್ಸೂಚನೆ ನೀಡದೆ ಬರುವೆ ನೀನುಎಲ್ಲಿಂದ ಬರುವೆಯೋಎಲ್ಲಿಗೆ ಕರೆದೊಯ್ಯುವೆಯೋಒಂದೂ ತಿಳಿದಿಲ್ಲ ಒಡೆದು ನುಚ್ಚುನೂರು ಮಾಡುವೆಸಣ್ಣಪುಟ್ಟ ಸಂತೋಷಗಳನ್ನುಮನದ ತುಂಬ ವೇದನೆ ನೀಡಿಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಹಿರಿಯರೆಂದೋ, ಕಿರಿಯರೆಂದೋಶ್ರೀಮಂತರೆಂದೋ, ಬಡವರೆಂದೋನೋಡದೆ ಓಡಿ ಬರುವೆಎಲ್ಲರ ಬಳಿಗೆ ಕಾಲಕಾಲಕೆಕಾರಣ,ನಿನ್ನ ಕಣ್ಣಿಗೆ ಸಮಾನರಲ್ಲವೇ ಎಲ್ಲರೂ ಕಣ್ಣೀರು ಕಂಡರೂ,ಕರಗದ ಹೃದಯ ನಿನ್ನದುನೋವನ್ನು ಅರಿತರೂ,ಮಿಡಿಯದ ಮನಸ್ಸು ನಿನ್ನದುಓ ಅತಿಥಿಯೇ….ಯಾಕಿಷ್ಟು ಕ್ರೂರಿಯಾದೆ ನೀನು? ***********************************************************

ಚೇತನಾ ಕುಂಬ್ಳೆ ಕಾವ್ಯಗುಚ್ಚ Read Post »

ಕಾವ್ಯಯಾನ

ನೀನೆಂದರೆ ಆಕಾಶದಾಚೆಯ ಖುಷಿ

ನೀನೆಂದರೆ ಆಕಾಶದಾಚೆಯ ಖುಷಿ ಪ್ರೇಮಾ ಟ.ಎಂ.ಆರ್. ನೀ ಮಡಿಲಲ್ಲಿ ಮಲಗಿದ್ದೆನಿನ್ನ ಮೆತ್ತಗೆ ಸವರಿದೆ ನಾನುಆಕಾಶ ಮುಟ್ಟಿದ ಖುಶಿಯೇಉಹುಂ ಅದು ಕಡಿಮೆಯೇ ಹೋಲಿಕೆಗೆಮುಗಿಲ ಚುಕ್ಕಿನೀನು ಬೊಗಸೆಯೊಳಗಿದ್ದೆನಿನ್ನ ಕಣ್ಣೊಳಗೆ ಬರೀ ನಾನಿದ್ದೆನಿನ್ನ ಕೆಂಪು ಬೆರಳುಗಳ ಪುಟ್ಟ ಬಿಗಿಮುಷ್ಠಿಯೊಳಗೆ ನಾನು ಹುದುಗಿ ಕೂರಬೇಕೆಂದುಕೊಂಡೆ ನಿನಗೆ ಎದೆಯೂಡುತ್ತಿದ್ದೆ ನಾನುಜಗದಾವ ನೋವುಗಳೂ ನಿನ್ನಮುಟ್ಟಕೂಡದೆಂಬ ಕಕ್ಕುಲಾತಿಯಲ್ಲಿನಿನಗೆ ಹಾಲನ್ನದ ತುತ್ತು ಇಕ್ಕುತ್ತಿದ್ದೆಚಂದ್ರ ಚಂದ ನಗೆ ನಗುತ್ತಿದ್ದನಿನಗೆ ಜುಟ್ಟು ಕಟ್ಟುತ್ತಿದ್ದೆ ನಾನುಇನ್ನೊಂದು ಹಡೆವ ಬಯಕೆನನ್ನ ಕಾಡದಿರಲೆಂದುನಿನಗೆಂದೇ ಇರುವ ವಾತ್ಸಲ್ಯಹಂಚಿ ಹೋಗದಿರಲೆಂದು ಅಂದು ನೀ ಕಿತ್ತಾಡಿದ ಪಾತ್ರೆ ಸ್ಟೆಂಡ್ ಚಪ್ಪಲಿಗೂಡು ಅಪ್ಪನ ಬರೆವ ಮೇಜುಲಾಂಡ್ರಿ ಬಕೀಟು ಒಡೆದ ಕಿಟಕಿಯ ಗಾಜುಎತ್ತೊಗೆಯುತ್ತಿದ್ದ ಪುಟ್ಟ ಸೈಕಲ್ಲುಎದೆಯಲ್ಲೆಲ್ಲೋ ಹೇಗಿದ್ದವೋ ಹಾಗೇ ಇದೆ ಒಪ್ಪವಾಗದೇ..ನಿನ್ನ ಕಣ್ಣೀರು ಸಿಂಬಳ ಒರೆಸಿದ ನನ್ನ ಹಳೆಸೀರೆಗಳ ಇಂದಿಗೂಮಡಿಕೆಮಾಡಿ ದಿಂಬಿನಮೇಲೆ ಹಾಸಿಕೊಳ್ಳುತ್ತೇನೆ ಬಿಸಾಡಲಾಗದೇ… ಅಜ್ಜನ ಅಷ್ಟುದ್ದದ ಚಪ್ಪಲಯಲ್ಲಿ ನಿನ್ನಇಟ್ಟೆಇಟ್ಟಿರುವ ಪಾದ ತೂರಿಕೊಂಡುನಡೆಯುವದೆಂದರೆ ನಿನಗೆಷ್ಟು ಮೋಹವೋ ನಾನು ನೀನು ಅಪ್ಪಪುಟ್ಟ ಬಾಡಿಗೆ ಸೂರಿನೊಳಗೆಗೋಡೆ ನೆಲ ಕಿಟಕಿಗಳನ್ನೂಮುಟ್ಟಿ ತಡವಿ ಹಚ್ಚಿಕೊಳ್ಳುತ್ತಹರಟೆಕೊಚ್ಚುತ್ತ…ನೀನು ತಿಂದುಳಿಸಿದ ಅನ್ನ ದೋಸೆ ಅಮೃತವೆಂಬಂತೆ ಬಾಚಿಕೊಳ್ಳುತ್ತನಿನ್ನ ಬಾಯಿಂದ ಜಾರಿಬಿದ್ದಚೋಕಲೇಟ್ ಚೂರುಗಳನ್ನು ಗಬಕ್ಕನೆತ್ತಿಬಾಯಿಗೆಸೆದುಕೊಳ್ಳುತ್ತದೂರದರ್ಶನದ ಜಂಗಲ್ ಬುಕ್ ನೋಡಿಕುಣಿದು ಕುಪ್ಪಳಿಸುತ್ತ ವಾಶಿಂಗ್ ಪೌಡರ್ನಿರ್ಮಾ ಹಾಡು ತೊದಲುತ್ತಹೀಗಿದ್ದೆವು ನಾವುಶಹರದ ಕೃತ್ರಿಮತೆಯೇ ಸೋಂಕದೇ ಇಂದಿಲ್ಲಿ ಬಂಗಲೆಯಿದೆ…ಬದುಕ ಬೆಳಕು ನೀನಲ್ಲಿಇಲ್ಲಿ ದೇಹವಿದೆ ಜೀವ ಭಾವ ನಿನ್ನಲ್ಲಿಇಂದು ನೀನೇ ಕೊಡಿಸಿದನನ್ನ ಮೊಬೈಲ್ ಗೆ ನಿನ್ನ ವಿಡಿಯೋ ಕಾಲ್ನಗುತ್ತಿರುವೆ..ನಗಿಸುತ್ತಿರುವೆಕಣ್ಣೆದುರು ನಡೆದಾಡುತ್ತಿರುವೆ…ನಿನ್ನ ಮುಟ್ಟಲೆಂದು ಕೈ ಚಾಚುತ್ತೇನೆಕಣ್ಣು ಹನಿಯುತ್ತದೆನಿನಗೆ ಕಾಣಗೊಡದೇ ಮತ್ತೆ ಕೇಳುತ್ತೇನೆ ನನ್ನ ನಿನ್ನ ಅದೇ ಗಾಂವ್ಟಿಯಲ್ಲಿ ಯಾವಾಗ ಬತ್ತೆ ಮಗಾ?ನಿನ್ನದು ಅದೇ ಉತ್ತರ ಬರುತ್ತೇನೆಕರೋನಾ ಒಂಚೂರು ಹದಕ್ಕೆ ಬರಲಿನಾ ಅಂಟಿಸಿಕೊಂಡು ತಂದುನಿನಗೆ ಬಂದು..ಅದೆಲ್ಲ ಜಂಜಾಟ ಬೇಡಮ್ಮಾನಿನಗೂ ವಯಸ್ಸಾಯ್ತು… ಕರೋನಾದ ಕುಲಕೋಟಿಗೆ ಶತಕೋಟಿಶಾಪ ಹಾಕುತ್ತಾ ದಿನ ದೂಡುತ್ತಿದ್ದೇನೆ…ನೀ ಬರುವ ದಾರಿಗೆ ದಿಟ್ಟಿಯ ನೆಟ್ಟು ******************************

ನೀನೆಂದರೆ ಆಕಾಶದಾಚೆಯ ಖುಷಿ Read Post »

ಕಾವ್ಯಯಾನ

ಹಂಗೇಕೆ..?

ಕವಿತೆ ಹಂಗೇಕೆ..? ವೀಣಾ ಪಿ. ಹಂಗೇಕೆ..?ಇಹದ ಅಂಗೈಯಹುಣ್ಣಿಗೆಕನ್ನಡಿಯ ಹಂಗೇಕೆ..? ಮೆರುಗು ಮೌನದಮಂದಿರಕೆಮಾತಿನ ಹಂಗೇಕೆ..? ಶುದ್ಧ ಶ್ವೇತದಒನಪಿಗೆರಂಗಿನ ಹಂಗೇಕೆ..? ಗತಿಯ ಗಮ್ಯದನಡುಗೆಗೆಗತದ ಹಂಗೇಕೆ..? ಅಗ್ನಿಗೆದೆಯೊಡ್ಡಿ ಗೆದ್ದಪಾವನೆಗೆಪತಿತತೆಯ ಹಂಗೇಕೆ..? ರಾಗ-ದ್ವೇಷಗಳಳಿದವಿರಕ್ತೆಗೆಅನುರಕ್ತಿಯ ಹಂಗೇಕೆ..? ಬಂಧನವ ಕಳಚಿಟ್ಟ ದಿಟ್ಟಪರಿವ್ರಾಜೆಗೆಸಂಘದ ಹಂಗೇಕೆ..? ಬದ್ಧ ಬದುಕ ಧನ್ಯಾತ್ಮಭಾವಕ್ಕೆಸಾವಿನಾಚಿನ ಮುಕ್ತಿಯ ಹಂಗೇಕೆ..? ***********************************

ಹಂಗೇಕೆ..? Read Post »

ಕಾವ್ಯಯಾನ

ರೇಖಾಭಟ್ ಕಾವ್ಯಗುಚ್ಛ

ರೇಖಾಭಟ್ ಕಾವ್ಯಗುಚ್ಛ ಮರುಹುಟ್ಟು ಇಳಿಯಬೇಕು ನೆನಪಿನಾಳಕೆಮುದಗೊಳ್ಳಬೇಕುಎದುರಿಗೆ ಹಾಸಿ ಹರವಿಕೊಂಡುಚೆನ್ನ ನೆನಪುಗಳಆಯಸ್ಸು ಹೆಚ್ಚಿಸಬೇಕುಮೆತ್ತಗಾದ ಹಪ್ಪಳ ಸಂಡಿಗೆಗಳುಬಿಸಿಲಿಗೆ ಮೈಯೊಡ್ಡಿಗರಿಗರಿಯಾಗಿ ಡಬ್ಬಿ ಸೇರುವಂತೆನೆನಪುಗಳು ಸದಾ ಬೆಚ್ಚಗಿರಬೇಕು ಒತ್ತಿ ತಡೆ ಹಿಡಿದ ನೋವಿಗೂಆಗಾಗ ಬಿಕ್ಕಲುರಂಗ ಸಜ್ಜಿಕೆ ಬೇಕುತುಂಬಿಕೊಂಡ ಮಂಜು ನಂಜುಪೂರ್ತಿ ಹೊರಹೋಗಬೇಕು ಬಾಚಿ ಕರೆಯಬೇಕುನೆನಪೆಂಬ ನೆಂಟನನ್ನುನಿನ್ನೆಯ ನಂಟಿನ ಗಂಟುಗಳಬಿಡಿಸುತ್ತ ಹರಟಬೇಕುಅಂಟಿಯೂ ಅಂಟದಿರುವನೆನಪಿಗೆ ಮೀಸಲಾದಸಾಕ್ಷ್ಯಗಳಹೊರಗೆಳೆದು ಹೊದೆಯಬೇಕು ಇರಬೇಕು ನಿನ್ನೆಗಳಿಗೂನೆನಪುಗಳೆಂಬ ಮರುಹುಟ್ಟುಆಗಾಗ ಹಾಯುತಿರಲಿಇಲ್ಲಸಲ್ಲದ ನೆಪವಿಟ್ಟು.. ಅರ್ಥವಾಗದಿದ್ದರೆ ಹೇಳಿ ಅವನು ನನ್ನ ಕಂಗಳಲ್ಲಿಹೊಳೆಯುತ್ತಾನೆಹೊಳೆಯೂ ಆಗುತ್ತಾನೆಇಷ್ಟು ಸಾಕಲ್ಲವೇ ನಿಮಗೆಅವನು ನನಗೇನೆಂದು ತಿಳಿಯಲು ಅವನ ನಗುವ ಕಂಡು ನಾನುಪೂರ್ತಿ ಖಾಲಿಯಾಗುತ್ತೇನೆಆ ನಗು ನನ್ನ ಸಂಧಿಸಿದಾಗಮತ್ತೆ ತುಂಬಿಕೊಳ್ಳುತ್ತೇನೆನಮ್ಮ ನಡುವಿನ ಸಣ್ಣ ಮೌನಆಕಾಶದ ತಾರೆಗಳುಸದ್ದಿಲ್ಲದೆ ಮಿನುಗಿದಂತೆ ತೋರುತ್ತದೆನಾನು ಅವುಗಳ ಬೊಗಸೆಗೆ ತಂದುಸಂಭ್ರಮಿಸುತ್ತೇನೆ ಒಲವರಾಗ ಸಮ್ಮೋಹಗಳೆಲ್ಲತುಟಿಯ ಖಾಯಂ ರಹವಾಸಿಗಳಾಗಿಅವ ಮಾತಿಗಳಿದರೆಮಾಂತ್ರಿಕ ಲೋಕ ತೆರೆದುಕೊಂಡುನಾ ಕಳೆದೇ ಹೋಗುತ್ತೇನೆಅವನಲ್ಲಿ ಅವತರಿಸಲು ಬಿಡದೇಹವಣಿಸುತ್ತೇನೆ ಈಗ ನಿಮಗೆ ಖಂಡಿತಅರ್ಥವಾಗಿದೆ ಬಿಡಿಅವನು ನನಗೇನೆಂದುಅರ್ಥವಾಗದಿದ್ದರೆನೀವು ನಿಮ್ಮವನ ಒಮ್ಮೆನೆನಪು ಮಾಡಿಕೊಳ್ಳಿಆಮೇಲೆ ಅರ್ಥವಾಗದಿದ್ದರೆ ಹೇಳಿ ಬೆಂಬಲಿಸುವ ಬನ್ನಿ ನಾವು ನದಿಯಾಗಿ ಹರಿಯಬಲ್ಲೆವುಸಾಧ್ಯವಾದರೆ ಮಳೆಯಾಗಿ ಜೊತೆಯಾಗಿಆಣೆಕಟ್ಟು ಕಟ್ಟಿ ಬಳಸಿಕೊಳ್ಳಿಆದರೆ ನಮ್ಮ ಗಮ್ಯದೆಡೆಗಿನಒಂದೆರಡು ಬಾಗಿಲುಗಳನು ತೆರೆದೇ ಇಡಿ ನಾವೂ ಹಕ್ಕಿಯಾಗಿ ಹಾರಬಲ್ಲೆವುನಿಮ್ಮ ಬಾನ ವಿಸರ ನಮಗೂ ಸಲ್ಲಲಿಗಿಡುಗ ಹದ್ದುಗಳನ್ನು ಛೂ ಬಿಡಬೇಡಿನಮ್ಮ ನೆಲೆಗಳನ್ನು ಜೋಪಾನವಾಗಿಡಿಮತ್ತೆ ನಮ್ಮ ಗೂಡು ಒಂದೇ ಆಗಿರಲಿ ಹೊಗಳಿ ಅಟ್ಟದಲ್ಲೇ ಬಂಧಿಸದಿರಿದೇವರ ಪಟ್ಟ ಕಟ್ಟಿತಾಯಿ ಬೇರುಗಳು ಆಳಕ್ಕಿಳಿಯಲುನೆಲದಲ್ಲಿ ಪಾಲು ನೀಡಿಹಸಿರಾಗಿ ಎದ್ದು ನಿಂತಾಗಕೊಡಲಿ ಮಸೆಯದಿರಿ ಮರೆಯಲ್ಲೇ ಇರಿಸದಿರಿನಿಮ್ಮರ್ಧವಾದ ನಾವು ಕಾಣದಂತಿದ್ದರೆ ಹೇಗೆ ಪೂರ್ಣವಾಗುವಿರಿ ನೀವುನಮಗಾಗಿ ಬೇಡಿಕೆಯಲ್ಲ ಇದುಪೂರ್ಣತೆಗಾಗಿಪರಸ್ಪರ ಬೆಂಬಲಿಸುವ ಬನ್ನಿಹೊಸ ಕನಸನು ಹಂಬಲಿಸುವ ಬನ್ನಿ *****************************************

ರೇಖಾಭಟ್ ಕಾವ್ಯಗುಚ್ಛ Read Post »

ಕಾವ್ಯಯಾನ

ಕೆಲವರು ಹಾಗೆ

ಕವಿತೆ ರೇಷ್ಮಾ ಕಂದಕೂರ. ಕೆಲವರು ಹಾಗೆಕೆಲಸ ಸಾಧಿಸುವ ತನಕ ಒಡನಾಡಿಗಳುನಂತರ ಸರಿದುಹೋಗುವ ನರನಾಡಿಗಳು ಕೆಲವರು ಹಾಗೆಗೆಲ್ಲುವ ಕುದುರೆಯಿಂದ ಓಡುತಸಲಾಮು ಮಾಡಿ ಬೇಳೆ ಬೇಯಿಸಿಕೊಳ್ಳುವರು ಕೆಲವರು ಹಾಗೆಮೋಹದ ಬಲೆಯ ಬೀಸಿಕಬಳಿಕೆಯ ನಂತರ ತಿರುಗಿನೋಡದವರು ಕೆಲವರು ಹಾಗೆಮುಂದೊಂದು ನಡೆಯಲಿಹಿಂದೆ ಧೂರ್ತರಾಗಿ ಗುದ್ದುಕೊಡುವರು ಕೆಲವರು ಹಾಗೆನಿಷ್ಟಾವಂತರಂತೆ ನಟಿಸಿಒಳಗೊಳಗೆ ಕೊರೆಯುವ ಕೀಟದಂತವರು ಕೆಲವರು ಹಾಗೆಸತ್ಯ ಗೊತ್ತಿದ್ದರು‌ಸುಳ್ಳಿನ ಬಿಡಾರ ಹೂಡುವರು ಕೆಲವರು ಹಾಗೆನೇಮ ನಿತ್ಯ ಮಾಡುತಕಳ್ಳನೋಟ ಬೀರುವರು ಕೆಲವರು ಹಾಗೆಜೊತೆಗಾರರಂತೆ ಮುಖವಾಡದಿಗುಪ್ತಚರರಂತೆ ಸಂಚನು ಹೂಡುವರು ಕೆಲವರು ಹಾಗೆಗೊತ್ತಿದ್ದರು ಅವರು ನಮ್ಮವರುಎಂಬ ಭ್ರಮೆಯಲಿ ಸಹಿಸಿಕೊಳ್ಳುವರು. *****

ಕೆಲವರು ಹಾಗೆ Read Post »

You cannot copy content of this page

Scroll to Top