ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೂತನಾ ಕಾವ್ಯಗುಚ್ಛ

ನೂತನಾ ದೋಶೆಟ್ಟಿ ಕಾವ್ಯಗುಚ್ಛ ಬಟ್ಟಲ ತಳದ ಸಕ್ಕರೆ ಬಟ್ಟಲಲ್ಲಿ ಆಗಷ್ಟೇ ಕಾಯಿಸಿದಬಿಸಿ ಹಾಲುಜೊತೆಗೆ ತುಸು ಸಕ್ಕರೆಹಿತವಾದ ಮಿಲನವಸವಿಯುವ ಪರಿ ಸುಖವೇ ಸಾಕಾರವಾಗಿಬೆಳದಿಂಗಳೊಡಗೂಡಿದತಂಗಾಳಿಯ ಪಯಣಮೆತ್ತನೆಯ ಹಾಸುಕರೆವ ಕೆಂಪು ಹೂಗಳ ಗುಂಪುಕಾಮನ ಬಿಲ್ಲಿಗೂ ಬಣ್ಣ ತುಂಬುವುದೇ? ಬಟ್ಟಲು ಬರಿದಾದಾಗತಳದಲ್ಲುಳಿದ ತುಸುಸಕ್ಕರೆಯನ್ನೇತುದಿ ಬೆರಳಿನಿಂದ ಸವರಿಮೆಲ್ಲಗೆ ಹೀರಿದಾಗಖಾಲಿಯಾಗುವ ಭಯ ಕಾಲನ ದಾರಿಗುಂಟಸವೆಯಬೇಕಾದ ಹಾದಿಮೂಡಿ ಮಸುಕಾಗಿರುವಹೆಜ್ಜೆ ಗುರುತುಬಟ್ಟಲ ತಳದಸಕ್ಕರೆಯಂತೆ. ನಿನಗೆ ನೀನೇ ಸರಿಸಾಟಿ ಮನಸೊಂದುಮಲ್ಲಿಗೆ ಹೂಅಂಗಳದ ಬೆಳ್ಳಿ ರಂಗೋಲಿಅರಳಿದಾಗಬಣ್ಣ ಬಣ್ಣದ ಹೂಗಳಓಕುಳಿಬಿರಿದು ನಕ್ಕಾಗಬಾನ ಚಿಕ್ಕೆಗಳಚೆಲ್ಲಾಟದ ಪರಿ ಮನಸ್ಸೊಂದುಕೋಗಿಲೆಯ ಕೊರಳ ಇಂಪುಕರೆವ ಮಾಘದ ಮಧುರ ಪೆಂಪುಮೌನದ ಮೆಲ್ಲುಸಿರಕರೆಗೆ ಬಾಗುವ ಕ್ಷಣಗೆಜ್ಜೆಯ ಝಣ ಝಣನಾದ ಲಯ ತಾಣ ಮನಸ್ಸೊಂದುಹರಿವ ನೀರ ಬದಿಯ.ಪುಟ್ಟ ಹೂಗಳು ಗುಂಪುಮೆತ್ತಗೆ ಸೋಕಿದಕೈಯ ಕಚಗುಳಿಗೆಅದುರುವನಾಜೂಕು ನವಿರು ಭಾವ ಮನಸ್ಸೊಂದುಬೆಳದಿಂಗಳ ಇರುಳ ಶಾಂತಿಕಣ್ಣು ಮುಚ್ಚಾಲೆಯಾಡುವಚಂದ್ರನ ಬಿಸಿಯುಸಿರುಪುಟ್ಟ ಕಂದನ ಕಿಲ ಕಿಲ ನಗುಕಿಶೋರಿಯ ಬೆಡಗುಅವನು ನೋಟದ ತಣ್ಪು ಮನಸೇನಿನಗೆ ನೀನೇ ಸರಿಸಾಟಿ. ಮಾತೆಂದರೆ ಏನು ಗೂಗಲ್’ ಜಗಮಗಿಸುವ ದೀಪಗಳು ನಗುತ್ತಿವೆಹಾಗೆ ಅನ್ನಿಸುತ್ತಿರಬಹುದೆ?ನದಿಗಳ ಕಣ್ಣೀರು ಕಾಣದಷ್ಟುದೂರದಲ್ಲಿವೆ ಅವು ಮುಗಿಲೆತ್ತರದ ಸಿಮೆಂಟು ಗೋರಿಗಳಲ್ಲಿಸುಖವೋ ಸುಖಹಾಗೆ ಅನ್ನಿಸುತ್ತಿರಬಹುದೆ?ಗುಬ್ಬಿಗಳು ಚದುರಿವೆ ಕಾಗೆಗಳು ಬೆದರಿವೆಉಸಿರಾಡದ ಹಸುರಿಗೆ ಸೋಂಕು ರೋಗ ತಣ್ಣನೆಯ ಗಾಳಿಯೆಂದರೆ ತಾನೆಏರ್ ಕಂಡೀಷನ್ನಿಗೆ ಅನ್ನಿಸಿರಬಹುದೆ?ಅಜ್ಜ ಮೂಗಿನ ಮೇಲೆ ಬೆರಳಿಟ್ಟು ಕೂತಿದ್ದಾನೆಮನೆಯಂಗಳದ ಮಾವಿನ ಮರ ಅವನ ಕನಸಿನಲ್ಲಿ ಅವನಿಗೆ ಕತೆ ಹೇಳಲೆಬಾಯಿಪಾಠ ಮಾಡಿಸಲೇಅಜ್ಜಿಗೆ ಅನ್ನಿಸಿರಬಹುದೆ?ಮಾತೆಂದರೆ ಏನು ಗೂಗಲ್ಮೊಮ್ಮಗು ಕೇಳುತ್ತದೆ. ನಾನು ಹೀಗಿದ್ದೆನೆಬದಲಾಗಿಬಿಟ್ಟೆನೆಮಾತಿಗೆ ಅನ್ನಿಸಿರಬಹುದೆ?ಮೈಂಡ್ ಯುವರ್ ಲ್ಯಾಂಗ್ವೇಜ್ಹೆಂಡತಿ ಹೇಳುತ್ತಾಳೆಯೂ ಬಿಚ್ ಎನ್ನುತ್ತಾನೆ ಗಂಡ. ಪಬ್ಬು ಬಾರುಗಳಲ್ಲಿಆ ಹುಡುಗಿಯ ಕುಲುಕಿಗೂ ಬೆಲೆ ಕಟ್ಟುತ್ತಾರೆಹಾಗೆ ಅನ್ನಿಸುತ್ತಿರಬಹುದೆ?ಮನೆಯಲ್ಲಿ ಸೂರೆ ಹೋಗುತ್ತಿರುವ ಸುಖ ಅಣಕಿಸುತ್ತಿದೆ. ಮೌನ ದುಃಖಿಸುತ್ತಿದೆಯೊನಗುತ್ತಿದೆಯೊ?ಕಳೆದುಕೊಳ್ಳುವುದು ದುಃಖಪಡೆಯುವುದು ಸಂತಸವೇಏನು ಕಳೆದದ್ದುಯಾವುದು ಪಡೆದದ್ದು !! ******************************

ನೂತನಾ ಕಾವ್ಯಗುಚ್ಛ Read Post »

ಕಾವ್ಯಯಾನ

ನಾಗರಾಜ ಹರಪನಹಳ್ಳಿ

ನಾಗರಾಜಹರಪನಹಳ್ಳಿ ಕಾವ್ಯಗುಚ್ಛ ಬೆರಳ ತುದಿಗೆ ಕರುಣೆ ಪಿಸುಗುಡುವತನಕ ಕಟ್ಟೆಯ ಮೇಲೆ ಕುಳಿತದ್ದಕ್ಕಕೊಲೆಯಾಯಿತುಉಗ್ಗಿದ ಖಾರದ ಪುಡಿಗೆಇರಿದ ಚೂರಿಗೆಕಣ್ಣು ಕರುಣೆ ಇರಲಿಲ್ಲ ಅಂತಿಂತಹ ಕಟ್ಟೆಯಲ್ಲಮಲ್ಲಿಕಾರ್ಜುನನ ಕಟ್ಟೆಇರಿದವ ಅಹಂಕಾರಿಇರಿಸಿಕೊಂಡದ್ದು ಸಮಾನತೆಒಂದು ಸವರ್ಣಧೀರ್ಘ ಸಂದಿಮತ್ತೊಂದು ಲೋಪಸಂದಿ ಕಣ್ಣು ಕಟ್ಟಿದ ,ಬಾಯಿ ಮುಚ್ಚಿದ ಈ ನಾಡಿನಲ್ಲಿ ಏನೂ ಆಗಬಹುದು ಸ್ವತಃ ದೊರೆ ದೀರ್ಘಾಸನದಲ್ಲಿಶವಾಸನದಲ್ಲಿರುವಾಗಅಹಂಕಾರ ಊರ ಸುತ್ತಿದರೆಅಚ್ಚರಿಯೇನಿಲ್ಲ ಇಲ್ಲಿ ಎಲ್ಲರೂ ಬಾಯಿಗೆ ಬೀಗಜಡಿದು ಕೊಂಡಿರುವಾಗನಿತ್ಯವೂ ಸಮಾನತೆಯ ಹಂಬಲ ಕೊಲೆಯಾಗುತ್ತಿರುತ್ತದೆಮತ್ತೊಮ್ಮೆ ಕರುಣೆಭೂಮಿಯಲ್ಲಿ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ,ನಡೆದಾಡುವ ಮರ ಬರುವತನಕನದಿಯೇ ಮನುಷ್ಯನಾಗಿ ಚೂರಿಯ ಅಹಂಕಾರದ ರಕ್ತ ತೊಳೆಯುವತನಕಇರಿದ ಚೂರಿಯ ತುದಿಗೆಹಿಡಿದ ಬೆರಳ ತುದಿಗೆ ಕರುಣೆಪಿಸುಗುಡುವತನಕ……….. ನಾವಿಬ್ಬರೂ ಮರವಾಗಿದ್ದೇವೆ ನಾವಿಬ್ಬರೂ ಮರವಾಗಿದ್ದೇವೆ ಇದು ನನ್ನ ಮೊದಲ ಹಾಗೂಕೊನೆಯ ಪದ್ಯವೆಂದು ಬರೆಯುವೆಪ್ರತಿ ಅಕ್ಷರಗಳಲ್ಲಿ ಪ್ರೀತಿಯ ಬೆರಸಿ ನಡೆವ ದಾರಿಯಲ್ಲಿ ನಿನ್ನಲ್ಲಿ ನಾ ತುಂಬಿ ಕೊಂಡರೆ ಅದಕ್ಕೆ ಏನೆನ್ನಲಿ?ಅಥವಾ ನನ್ನ ಜೀವನದ ಪ್ರತಿ ಉಸಿರಾಟದಿ ನೀ ತುಂಬಿ ಕೊಂಡಿರುವುದ ಹೇಗೆ ಮನದಟ್ಟು ಮಾಡಲಿ? ಹೀಗೆ ಹೇಳಬಹುದು:ನಿನಗೆ ಕಾಣುವ ಪ್ರತಿ ಗಿಡ ಮರ ಹೂ ಬಿಟ್ಟು ನಗುತ್ತಿದ್ದರೆ ಅದು ನಮ್ಮಿಬ್ಬಿರ ಪ್ರೇಮ ಅತೀ ಕಟ್ಟಕಡೆಯ ಮನುಷ್ಯನ ಮನೆ ಅಂಗಳದಿ ಮಗು ನಗು ಅರಳಿಸಿ ಅದರ ಕಣ್ಣಲ್ಲಿ ಕಾಂತಿ ಕಂಡರೆ ಅದು ನಮ್ಮಿಬ್ಬರ ಪ್ರೇಮ ವಾಸ್ತವವಾಗಿ ನಾವಿಬ್ಬರೂ ವಾಸಿಸುವುದು ಅಂತ್ಯಜರಲ್ಲಿ ಭ್ರಮಾತ್ಮಕ ಅಕ್ಷರ ಲೋಕದ‌ಖೂಳರ ನಾವಿಬ್ಬರೂ ಸೇರಿಒಂದನಿ ರಕ್ತ ಹರಿಸದೆಒಂದಕ್ಷರ ಬರೆಯದೇಮದ್ದು ಗುಂಡು ಸಿಡಿಸದೆಗೊತ್ತೇ ಆಗದಂತೆ ಕೊಲೆ ಮಾಡಿ ಬಂದೆವು ಈಗ ನಾವಿಬ್ಬರೂ ಅಕ್ಕಪಕ್ಕದ ಮರವಾಗಿದ್ದೇವೆನಮ್ಮ ಟೊಂಗೆಗಳಲ್ಲಿ ಹದವಾಗಿ ಬೆಳೆದ ಹಸಿರು ಹೂ ಕಾಯಿ ಕಣ್ಣಲ್ಲಿ ಹಕ್ಕಿಗಳು ಸಂಸಾರ ನಡೆಸಿವೆ ಹು, ಈಗ ; ಕೊನೆಯ ಮಾತುಹಠಾತ್ ನಾ ಇಲ್ಲವಾದರೆಇದ್ದಲ್ಲೇ ಕಣ್ಣೀರಾಗು……… ಗೌರಿ ಮಾತಾಡಲಿಲ್ಲ ಗೌರಿಯನು ತಂದರುಮನೆಯ ಪಡಸಾಲೆಯಲ್ಲಿ ಅದ್ಭುತವಾಗಿ ಅಲಂಕರಿಸಿದರುಗೌರಿ ಮಾತಾಡಲಿಲ್ಲಆಕೆ ಮೌನವಾಗಿದ್ದಳುಆಕೆಗೆ ಮಾತಾಡದಂತೆ ಕಲಿಸಿಲಾಗಿತ್ತು ಆಕೆ ಜೀವಂತ ಮಣ್ಣಿನಮೂರ್ತಿಯಾಗಿದ್ದಳುಅದನ್ನೇ ಸಂಸ್ಕೃತಿ ಅಂದರುಭವ್ಯ ಪರಂಪರೆ ಎಂದರು ಗೌರಿಯ ಭಕ್ತಿ ಭಾವದಿಂದಪೂಜಿಸಿದರುದೀಪ ಹಚ್ಚಿದರುಸಿಹಿ ನೈವೇದ್ಯ ಮಾಡಿದರುನಮಸ್ಕರಿಸಿದರುಪಟಾಕಿ ಹೊಡೆದರುಭಜನೆ ಮಾಡಿದರುಗೌರಿ ಮಾತಾಡಲಿಲ್ಲಮೌನವಾಗಿದ್ದಳುಅದನ್ನು ಸಂಸ್ಕೃತಿ ಅಂದರು ಸಿಹಿ ಹಂಚಿ ತಿಂದರುಕೊನೆಗೆ ಅದೇ ಗೌರಿಯ ನೀರಲ್ಲಿ ಮುಳುಗಿಸಿದರುಗೌರಿ ಆಗಲೂ ಮಾತಾಡಲಿಲ್ಲಅದನ್ನೇ ಸಂಸ್ಕೃತಿ ಎಂದರು ಮಣ್ಣು ಮಣ್ಣ‌ ಸೇರಿತ್ತು…********************************

ನಾಗರಾಜ ಹರಪನಹಳ್ಳಿ Read Post »

ಕಾವ್ಯಯಾನ

ಫಾಲ್ಗುಣ ಗೌಡ ಅಚವೆ

ಫಾಲ್ಗುಣ ಗೌಡ ಅಚವೆ ಕಾವ್ಯಗುಚ್ಛ ಅವ್ಯಕ್ತ ಎದುರಿಗಿದ್ದ ಚಿತ್ರವೊಂದುನೋಡ ನೋಡುತ್ತಿದ್ದಂತೆಪೂರ್ಣಗೊಂಡಿದೆ ಹರಿವ ನೀರಿನಂತಇನ್ನೇನನ್ನೋ ಕೆರಳಿಸುವಕೌತುಕದ ರೂಪಮೂಡಿದಂತೆ ಮೂಡಿ ಮರೆಯಾದಂತೆಆಡಿದಂತೆ ಆಡಿ ಓಡಿ ಹೋದಂತೆಮೈ ಕುಲುಕಿ ಮನಸೆಳೆವ ಹೆಣ್ಣಿನಂತೆಕತ್ತಲಾದರೂ ಅರಳಿಯೇ ಇರುವಅಬ್ಬಲಿ ಹೂವಂತೆಅದರ ಶೋಕಿ ಆಕರ್ಷಣೆಒಳ ಮಿನುಗು ಅಚ್ಚರಿಯೆಂದರೆಅದರ ಹಿಂದೊಂದುಅದರದೇ ರೂಪಸದ್ದಿಲ್ಲದೇ ಅಚ್ಚಾದಂತೆಮಾಡಿದೆಪರಕಾಯ ಪ್ರವೇಶ! ದಂಡೆಯಲ್ಲಿ ಎಲ್ಲ ನೆನಪುಗಳ ಮೂಟೆ ಕಟ್ಟಿಬಾವಿಗೆಸೆದಂತೆಬಾಕಿ ಇರುವ ಲೆಖ್ಖವನ್ನೂಚುಕ್ತಾ ಮಾಡದೇಅಲ್ಲೆಲ್ಲೋ ಮೌನ ದೋಣಿಯಲ್ಲಿಪಯಣ ಹೊರಟೆಒಸರುವುದು ನಿಂತ ನಲ್ಮೆಯೊಸಗೆಯ ಮನಸುನೀರವ ನಿರ್ವಾತ ನಿರ್ವಾಣದೆಡೆಗೆಕೊಂಡೊಯ್ದಿದೆ ದಂಡೆಯಲಿ ಮುಸುಕುವಉಸುಕಿನಲೆಯಲಿ ಕುಳಿತುಕಣ್ಣು ಮುಟ್ಟುವವರೆಗೂ ನೋಟಬರವ ಕಾಯುತ್ತಿದೆನೀ ಸಿಕ್ಕ ಸಂಜೆಯ ರಂಗು ನೋಡುತ್ತ ಅಲ್ಲಿ ನಿನ್ನ ಹೆಜ್ಜೆಗಳು ಅಚ್ಚಾಗಿವೆಯೆಂದುನಾ ಹೆಜ್ಜೆಗಳನಿಡುತ್ತಿರುವೆ ಪ್ರತಿದಿನಅದೇ ಹಳೆಯ ಪ್ರೀತಿ ಗಳಿಗೆಗಳ ಜೊತೆಗೆ ನಡೆವ ಹೆಜ್ಜೆಗಳ ಬೆರಳುಗಳಿಗೆಒಂದು ದೃಷ್ಟಿ ದಿಕ್ಕಿರುತ್ತದಂತೆ?ಮಂದವಾಗಿದೆ ದೃಷ್ಟಿ ಮುಂದೇನು ಕಾಣದೇ?ದಿಕ್ಕೆಟ್ಟ ಒಲವಿನೊಡಲುಕವಲೊಡೆದ ದಾರಿಗಳಲ್ಲಿಮುಸುಗುತ್ತಿದೆ ಪ್ರತಿ ಸಂಜೆ ನನ್ನ ಎದೆ ದಂಡೆಯಲ್ಲಿನೀ ನಡೆದ ಹೆಜ್ಜಗಳ ಹುಡುಕುತ್ತಚಿನ್ನದ ಗೆರೆಗಳ ಅಂಚಿನಲ್ಲಿದೂಡುತ್ತಿದ್ದೇನೆ ದಿನಗಳಬಯಕೆಗಳ ಬದಿಗೊತ್ತಿಉಸಿರು ಬಿಗಿ ಹಿಡಿದು! ನಡೆದಾಡದ ಮರ ಮಾಂಸಲದ ಮೈಯಲ್ಲಿಬಯಕೆ ತೀರದ ತೊಗಲುಹರಿವ ರಕುತದ ಮೇಲ್ತಳಕಿನ ತುಂಬ ಅಸಹ್ಯ ಕೊಳಕು ದೃಷ್ಟಿ ನೇರಾ ನೇರತಾನು ತನ್ನದು ಪಟ್ಟಭದ್ರಕನಸುಗಳ ಗೊಂದಲಪುರ ನಡೆವ ಅಡಿಗಡಿಗೂ ಸ್ವಾರ್ಥದಡಿಗಲ್ಲಿಡುವಮನುಜನಲಿ ಈಗ ಮನಸಿಲ್ಲ ಸುಖದ ನರಳಿಕೆಯ ನಲುಗುವುಸಿರಲ್ಲಿತಿಲಮಾತ್ರವೂ ಧ್ಯಾನದರಿವಿಲ್ಲ!ನೀನು ನಡೆದಾಡೋ ಮರವಲ್ಲ!! ಮರವೋ ನಿಸ್ವಾರ್ಥದಾಗಸಹಸಿರು ಹೂ ಹೀಚು ಕಾಯಿಹಣ್ಣಲ್ಲೂ ನರಳಲ್ಲೂವರ ಕೊಡುವ ಧರ್ಮತಂಪೆರೆವ ಕರ್ಮಎಲ್ಲೋ ಬಿದ್ದ ಮಳೆಯ ಮಣ್ಣ ವಾಸನೆತಂಬೆಲರ ಹಿತ ಸ್ಪರ್ಶಕೆಅಲೆವ ಎಲೆ ಎಲೆಗಳಲಿಸಂತೃಪ್ತ ಬಿಂಬ ಬಯಲು ಬೆಟ್ಟಗಳಲ್ಲಿಜೀವಂತಿಕೆ ಹಿಡಿದಿಟ್ಟುಸದಾ ಉಸಿರೂಡುವ ಮರವೇನೀನು ನಡೆದಾಡದ ಮನುಷ್ಯ!! *****************************

ಫಾಲ್ಗುಣ ಗೌಡ ಅಚವೆ Read Post »

ಕಾವ್ಯಯಾನ

ಕಾವ್ಯಯಾನ

ಪ್ರೀತಿಯೆಂದರೆ.. ವಿಶಾಲಾ ಆರಾಧ್ಯ ಈ ಪ್ರೀತಿಯೆಂದರೆ ಹೀಗೇನೇಒಮ್ಮೆ ಮೂಡಿತೆಂದರೆ ಮನದಿಸರ್ರನೆ ಧಮನಿಯಲಿ ಹರಿದಾಡಿಮನಸ ಕದವ ತೆರೆದುಕನಸ ತೂಗು ಬಲೆಯಲಿಜಮ್ಮನೆ ಜೀಕುವಜೋಕಾಲಿಯಾಗುತ್ತದೆ..!! ಈ ಪ್ರೀತಿಯೆಂದರೆ ಹೀಗೇನೇಹರಿವ ಹೊನಲಂತೆ ಕಲ್ಲೇನುಮುಳ್ಳೇನು ಹಳ್ಳಕೊಳ್ಳವ ದಾಟಿಪರಿಧಿ ಪಹರೆಯ ಕೊತ್ತಲ ದಾಟಿಸೇರಿ ಕುಣಿಯುತ್ತದೆ ಮಾನಸಸರೋವರದ ಅಲೆಗಳ ಮೀಟಿ..!! ಪ್ರೀತಿ ಎಂದರೆ ಹೀಗೇನೇಕಂಗಳ ಬೆಸುಗೆಗೆ ಕಾವಾದ ಹೃದಯದೆಕಾಪಿಟ್ಟು ಹೆಪ್ಪಾದ ಮುಗಿಲಿನಂತೆಕಾದಲಿನ ತುಡಿತಕೆ ಒಮ್ಮೆ ಸ್ಪಂದನಿಸಿಕೂಡಿತುಂಬಿದ ಮುಗಿಲು ಸುರಿವ ವರುಣಧಾರೆಯ ಮುತ್ತ ಹನಿಗಳಂತೆ..!! *****************

ಕಾವ್ಯಯಾನ Read Post »

ಕಾವ್ಯಯಾನ

ವಿಭಾ ಪುರೋಹಿತ ಕಾವ್ಯಗುಚ್ಛ

ವಿಭಾ ಪುರೋಹಿತ ಕಾವ್ಯಗುಚ್ಛ ವೆಂಟಿಲೇಟರ್ ಮತ್ತು ರಕ್ಷೆ ಭ್ರಾತೃತ್ವದ ಬಾಂಧವ್ಯ ದೆಳೆಯಲ್ಲಿಫ್ಯಾಷನ್ ಗಿಫ್ಟುಗಳ ಮೋಹದನೂಲುಆತ್ಮೀಯತೆ ಗೌಣ ಪ್ರದರ್ಶನಕ್ಕೆಕ್ಲಿಕ್ಕಾಗುವ ಕೆಂಪು ಕೇಸರಿ ಹಳದಿರಕ್ಷೆ ತಾಯಿ ಕರುಳ ಬಣ್ಣ ಅಂಟಿದೆಅದೇಕೋ ಅವಳ ಕುಡಿಗಳ ಬೆರಳು ಕೆಂಪಾಗಿವೆ! ಎಪ್ಪತ್ತು ವರ್ಷಗಳಿಂದಎದೆಯಲ್ಲಿ ಬೆಂಕಿ ಇಟ್ಟು ಕೊಂಡಿದ್ದಾಳೆ ಇತಿಹಾಸ ಗಡಿರೇಖೆಯೆಳೆದಾಗಸಹಸ್ರೋಪಾದಿಯಾಗಿ ಕಂಗಾಲಾದವರನ್ನೆಲ್ಲತನ್ನವರೆಂದು ತೆಕ್ಕೆಬಡಿದುಕೊಂಡಳುಆತ್ಮಸಾಕ್ಷಿಯಾಗಿ ಕಾಲಿಟ್ಟವರೆಷ್ಟೋ ? ಒಂದೇ ಬಳ್ಳಿಯ ಹೂಗಳಂತೆ ಮುಡಿಗಿಟ್ಟಳುಸುಮ್ಮನಿರದ ಶಕುನಿಗಳ ಕ್ಯಾತೆಗೆಹಣ್ಣಾಗಿದ್ದಾಳೆ ಪುಪ್ಪಸನೆಂಬ ಪುತ್ರರಕ್ಕಸರುಉಸಿರಾಡಲು ಬಿಡುತ್ತಿಲ್ಲ ವೆಂಟಿಲೇಟರ್ ಅಭಾವ ,ಕೆಲವೇ ಶುಶ್ರೂಷಕರಸಿಟ್ರಝೀನ್,ಡೊಲೊಗಳಿಂದ ತುಸು ಉಸುರುವಂತಹ ಗತಿಯಿದೆಬೇಕಾಗುವ ವೆಂಟಿಲೇಟರ್ ಸುಲಭದ್ದಲ್ಲ ‘ನಾವು ಭಾರತೀಯರು’ ಎಂಬ ವೆಂಟಿಲೇಟರ್ಯಾವ ಆಸ್ಪತ್ರೆಯ ಯಂತ್ರ ತಂತ್ರಗಳುಯಾವ ಹಬ್ಬದ ಮಂತ್ರ ಸ್ತೋತ್ರಗಳುಈ ಒಕ್ಕೊರಲಿನ ಭಾರತೀಯತೆಯ ಹೆದ್ದೊರೆ ಹರಿಸಲಿವೆ ? ರಾಷ್ಟ್ರ ನಮನ ಭಾರವಾಗಿದೆಯಿಂದು ಗಾಯವಾಗಿದೆ ಕವಿತೆರಕ್ತಕಾರುವದೊಂದೇ ಬಾಕಿ ಲೇಖನಿಯ ಬಾಯಿಂದಮೂರು ಯುದ್ಧಗಳು ಕೊರೊನಾ ರಣಕೇಕೆಗಡಿನೆಲದ ರಣಹಲಿಗೆ ರಾಜಕಾರಣದಕರ್ಮಕಾಂಡ ನಡುವೆ ನರಳುವ ನರರ ಪ್ರಲಾಪ !ಯಾವ ಭೀತಿ ರೀತಿ ನೀತಿಗೂ ಬಗ್ಗುತ್ತಿಲ್ಲಕಾಡುಪಾಪದ ಕಿಂಕಿಣಿಗಡಿಯಲ್ಲಿ ಸಂಚು ನಿತ್ಯ ಗುಂಡಿನ ಸದ್ದುವೀರಗುಂಡಿಗೆಗಳ ಆಹುತಿ ! ವಿಕೋಪದಲ್ಲೂ ವಿಕೃತವ ಮೆರೆವರಾಜಕೀಯ ತೊಗಲು ಗೊಂಬೆಯಾಟಸಾಮಾನ್ಯರ ಮನೋಭೂಮಿಸೋತು ಅರೆ‌ಸತ್ತು ಕಾದಿದೆ ಅಮೃತಘಳಿಗೆಗಿಂದು……. ಚೀನಿಯಾತ್ರಿಕ ಹೂಯಾನ್ ತ್ಸಾಂಗ್ ಅಲ್ಲ ವಕ್ಕರಿಸಿದವ ಅಣುದಾಳಿಕಾರ ಹೊಡೆದೊಡಿಸುವಸಿಡಿಮದ್ದುಗಳು ಸಿದ್ಧವಾಗುತಿವೆಅಶ್ವಿನಿದೇವತೆಗಳ ಸದಯೆಯಲಿ ********************************

ವಿಭಾ ಪುರೋಹಿತ ಕಾವ್ಯಗುಚ್ಛ Read Post »

ಕಾವ್ಯಯಾನ

ಮಾಲತಿ ಶಶಿಧರ್ ಕಾವ್ಯಗುಚ್ಛ

ಮಾಲತಿ ಶಶಿಧರ್ ಕಾವ್ಯಗುಚ್ಛ ಥೇಟ್ ನೀನು ಥೇಟ್ನನ್ನ ಕವಿತೆಯಂತೆಗೆಳೆಯ.ಒಮ್ಮೊಮ್ಮೆನಾನೆ ಬರೆದಿದ್ದರೂನನಗೇ ಅರ್ಥವಾಗದಹಾಗೆ.. ನೀನು ಥೇಟ್ನನ್ನ ನಗುವಿನಂತೆಗೆಳೆಯಕಿವಿಗಳೊರೆಗೂತುಟಿಯಗಲಿಸಿದರುನಕ್ಕಂತೆ ಕಾಣದಹಾಗೆ.. ನೀನು ಥೇಟ್ನನ್ನ ಮುಂಗುರುಳಂತೆಗೆಳೆಯಕಂಗಳಿಗೆ ಬಿದ್ದಾಗಲೆಲ್ಲಾಕಣ್ಣೀರು ಬರಿಸುವಹಾಗೆ.. ನೀನು ಥೇಟ್ನನ್ನ ಮೂಗು ನತ್ತಿನಂತೆಗೆಳೆಯಮುಂದೆಯೇಎಷ್ಟೇ ಅತ್ತರುಕೈಚಾಚಿ ಕಣ್ಣೀರುಮಾತ್ರ ಒರೆಸದಹಾಗೆ.. ಅಳಲು ಮುಗಿಲ ಹಿಂದೆ ಅವಿತು ಕುಳಿತಿರುವ ಬೆಳಕೇಸೀಳಿಕೊಂಡು ಬಂದು ನನ್ನನ್ನಾವರಿಸಿಬಿಡು.. ಮೋಡದಲ್ಲಿ ಮರೆಯಾಗಿರುವ ಹನಿಯೇಹೊಡೆದು ಜೇನ ಮಳೆ ಸುರಿಸಿಬಿಡು.. ಆಗಸವನೇ ಬಿಗಿದಪ್ಪಿಕೊಂಡಿರುವ ಚುಕ್ಕಿಯೇಕೈಬಿಟ್ಟು ಅಕ್ಷತೆಯಾಗಿ ಮೇಲೆ ಉದುರಿಬಿಡು… ಅಡವಿಯಲಿ ಅಡಗಿರುವ ಕಾಡ್ಗಿಚ್ಛೇಬಂದು ಚಿಂತೆಗಳ ಸುಟ್ಟುಬಿಡು… ನೀರಿನಲ್ಲಿ ಲೀನವಾಗಿರುವ ಸುನಾಮಿಯೇಬಂದು ನನ್ನಳಲ ನುಂಗಿಬಿಡು.. ಭುವಿಯ ಗರ್ಭದಲ್ಲಿರುವ ಜ್ವಾಲಾಮುಖಿಯೇಉಕ್ಕಿ ನೋವನ್ನೆಲ್ಲಾ ಕರಗಿಸಿಬಿಡು ಗಾಳಿಯಲಿ ನುಸುಳಿರುವ ತುಫಾನೇರಭಸದಲೇ ಕಣ್ಣೀರ ತೂರಿಬಿಡು…. *************** ನೋಡು ನಾ ಬರೆವ ಕವಿತೆಗಳಪಂಕ್ತಿಯ ಹೆಣಿಕೆಯನೋಡದೆ ಪದಗಳಲ್ಲಿಪರವಶವಾಗಿರುವತುಡಿತ ನೋಡು… ನಾ ಬಿಡಿಸುವ ಚಿತ್ರದಬಣ್ಣಗಳ ನೋಡದೆತಿರುವಿನಲ್ಲಿ ಮಗ್ನವಾಗಿರುವಸ್ಪಂದನವ ನೋಡು… ನಾ ಹಾಡುವ ಹಾಡಿನಹಂದರವ ನೋಡದೆಭಾವಾರ್ಥದಲಿ ಬೆರೆತಿರುವಬಂಧವ ನೋಡು.. ನಾ ಮಾಡುವ ನೃತ್ಯದನಾಜೂಕತೆ ನೋಡದೆನಾಟ್ಯದಲ್ಲಿ ಮೂಡುವಅಭಿವ್ಯಕ್ತಿ ನೋಡು… ನಾನಾಡುವ ಆಟಗಳವೀಕ್ಷಕನಾಗಿ ಕೂತು ನೋಡದೆನನ್ನೊಳಗಿನ ಚೈತನ್ಯವಾಗಿಜೊತೆಗಿದ್ದು ನೋಡು… *********************************

ಮಾಲತಿ ಶಶಿಧರ್ ಕಾವ್ಯಗುಚ್ಛ Read Post »

ಕಾವ್ಯಯಾನ

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ ನಿರೀಕ್ಷೆ ಗೀಜಗನ‌ ಗೂಡಿನಂತಿದ್ದ ಮನಮನೆಯೇ ಮುರಿದ ದಿನಬುಗಿಲೆದ್ದ ಹಗೆಗೆ ಸತ್ತುಒಡಹುಟ್ಟಿದವರ ನೆನೆದು ಅತ್ತುತಿಳಿಯಾದ ಮನವು ಋಜುಒಡೆದದ್ದು ನಾಜೂಕು ಗಾಜುಚೂರುಗಳ ಜೋಡಿಸಲೇಹೃದಯಗಳು ಬೆಸೆಯಲೇಬೇಕು ಸಂಬಂಧ ನಾಳೆಗೊಂದು. ನಕ್ಕು ಹಗುರಾಗುತ್ತಿದ್ದ ಬಾಳುಒಣ ಜಂಭದ ರೀತಿಗೆ ಹಾಳುಮಾತು ಮಸಣವಾಗಿದೆತುಮುಲ ಸರಿಪಡಿಸಲಾಗದೆಭಾವನೆಗಳು ಹೊಂದದೆಮುನಿಸು ಸರಿಸಿಸೋತರೇನಂತೆ ನಗಿಸಿಮರಳಿ ಬಂದರೆ ಮನ್ನಿಸಿಬಾರದಿದ್ದರೆ ಕ್ಷಮಿಸಿಕಾಯ್ದರೆ ನಗು ನಾಳೆಗೊಂದು. ಮೀನಿನ ಹೆಜ್ಜೆ ಕಡಲ ದಾರಿಗುಂಟ ಸಾಗಿದೆನೆಲ ನುಂಗುವವರೆಗೂ ನಡೆದೆಕಾಲ, ನಿನ್ನ ಹೆಜ್ಜೆ ಗುರುತೊಂದೆಅಳಿಸಿ ಸಾಗಿತ್ತು, ಕಾಣಗೊಡದೆ. ಕಾಮ ಮೋಹಾದಿಗಳ ಕಡಿಯಲುಬಹುದೂರದ ದಾರಿಯು ಗೋಜಲುಪ್ರೀತಿತ್ಯಾಗಕ್ಕೂ ಮುಳ್ಳಿನ ಹಾಸುಸಿಗದ ಹಾಗೆ ಕರಗಿದೆ ಮನಸು. ಹತ್ತಾರು ವರ್ಷಗಳ ಸವೆದುಒಂದೇ ಸೂರಿನಡಿ ಬಾಳಿದ್ದುಅರೆಕ್ಷಣದಲಿ ದೂರಾದದ್ದುಆಳವಿಲ್ಲದ ನಂಬುಗೆಯೊಂದು. ಅರಿತೆನೆಂದು ಅವನ ಬೆರೆತೆಅರಿಯಗೊಡದವನ ನಡತೆಇಷ್ಟು-ಎಷ್ಟು ಅರಿತರೇನಂತೆಮರೆಯಗೊಡದವನ ಚಿಂತೆ. ದಯವಿಟ್ಟು ಗಮನಿಸಿ… ಸಂಗಾತಿಯಲ್ಲದೇ ಇನ್ಯಾರೋಸುರತವೆಂದೂ ಸುರಕ್ಷಿತವಲ್ಲಬೇಕೆಂದಾಗ ಬಂಜೆತನಬೇಡವಾದಾಗ, ಆಸೆಬಿಟ್ಟಾಗ ಕಟ್ಟುವ ಗರ್ಭಬೆನ್ನಿಗಂಟುವ ರೋಗದಯವಿಟ್ಟು ಗಮನಿಸಿ… ಅಪಘಾತಗಳೆಲ್ಲ ಆಕಸ್ಮಿಕಗಳಲ್ಲಅಲಕ್ಷ್ಯ, ಆತುರ, ಔತ್ಸುಕ್ಯಕೂಡ ಕಾರಣವಿರಬಹುದಲ್ಲಎದುರಾಗುವವನ ಅಚಾತುರ್ಯಕೂಡ ಕಲ್ಪಿಸಿಕೊಳ್ಳಬೇಕಲ್ಲದಯವಿಟ್ಟು ಗಮನಿಸಿ… ಯುಗ ಬದಲಾಗಿದೆಸ್ವರ್ಗ ನರಕಗಳೆಲ್ಲವೂಇಲ್ಲೇ ಸೃಷ್ಟಿಯಾಗಿದೆಬದುಕಿನ ಕಂದಾಯ ಕಟ್ಟುವಕೌಂಟರ್ ಇಲ್ಲಿಯೇ ಇದೆದಯವಿಟ್ಟು ಗಮನಿಸಿ… ದಿವ್ಯದೃಷ್ಟಿ ಸೂರಿಗೆ ಮಾರಿಗೆಎಲ್ಲೆಲ್ಲೂ ಟವರ್ ಲೊಕೇಷನ್ಗೆಸುಲಭದ ಬೇಟೆ ಅಪರಾಧಕ್ಕೆಅಪರಾಧಿಯಾಗದ ಸೂತ್ರಸೀದಾ ಸಾದಾ ಸುಸೂತ್ರನೆಮ್ಮದಿಗೊಂದೇ ಮಂತ್ರದಯವಿಟ್ಟು ಗಮನಿಸಿ…

ಡಾ.ಅಜಿತ್ ಹರೀಶಿ ಕಾವ್ಯಗುಚ್ಛ Read Post »

ಕಾವ್ಯಯಾನ

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ

ಸ್ಮಿತಾ ಅಮೃತರಾಜ್ ಕವಿತೆಗಳು ಪುರಾವೆ ಸಾಬೀತು ಪಡಿಸಲುಸೂಜಿ ಕಣ್ಣಿನಿಂದ ಹುಡುಕಿದರೂಕಿತ್ತು ಹೋದ ಒಂದು ಎಳೆನೂಲಿನ ನೇಯ್ಗೆಗೆ ಪುರಾವೆಗಳೇಸಿಗುತ್ತಿಲ್ಲ. ಎದೆಯ ತಳದಲ್ಲಿ ಸೋಸಿಉಳಿದ ಅಪ್ಪಟ ತಿಳಿ ಸತ್ಯವೊಂದುಅಗೋಚರವಾಗಿ ಕದಡಿ ಪ್ರತಿಬಿಂಬಮಸುಕು ಮಸುಕಾದುದ್ದಕ್ಕೆ ಪುರಾವೆಯಕಡತಗಳನ್ನು ಹೇಗೆ ಶೋಧಿಸುವುದು? ಬೆಳ್ಳಗೆ ಹೊಳೆದದ್ದುಕನ್ನಡಿಯಂತೆ ಪ್ರತಿಫಲಿಸಿದ್ದುಹಗಲಿನಷ್ಟು ನಿಚ್ಚಳವಾಗಿ ತೋರಿದ್ದುಎಲ್ಲವೂ ಕನಸಿನಂತೆ ಕರಗಿರುವಾಗಅರ್ಥವಿರದ ಪುರಾವೆ ಒದಗಿಸುವುದುವೃಥಾ ಶ್ರಮವಷ್ಟೆ. ಕಣ್ಣ ರೆಪ್ಪೆಯೊಳಗೆ ಅಚ್ಚೊತ್ತಿ ನಿಂತಸ್ಪಷ್ಟ ಬಿಂಬವೊಂದನ್ನು ಆಕಾರವೇ ಇಲ್ಲವೆಂದುಅಳಿಸಲು ಸಾಧ್ಯವೇ?. ಪದ್ಯ ಹೊಸೆದುರಾಗ ಕಟ್ಟಿ ತೇಲಿ ಬಂದಗಾನ ಗಾಯನದ ಇಂಪುಕವಿತೆ ಹುಟ್ಟಿದ ಕ್ಷಣಗಳಿಗೆಕಾಡಿದ ಭಾವವಷ್ಟೇ ಸಾಕ್ಷಿ. ಸಾಕ್ಷಿಯುಳಿಸದೇಹಕ್ಕಿ ಹಾರಿದ್ದುಹೂವು ನಕ್ಕಿದ್ದುಗಾಳಿಗಷ್ಟೇ ತಿಳಿದ ಸತ್ಯಸಾಬೀತು ಪಡಿಸುವುದಕ್ಕೆಪುರಾವೆ ಒದಗಿಸುವುದುಎಷ್ಟು ಕಷ್ಟ?! ಭೂಮಿ ತೂಗುವ ಹಕ್ಕಿ ಈ ಬೆಳ್ಳಾನೆ ಬೆಳಗಿನಲ್ಲಿಮುಂಬಾಗಿಲ ಅಂಗಳದಲ್ಲಿಎಳೆ ಬಿಸಿಲೊಳಗೆ ಬಾಲ ಕುಣಿಸುತ್ತಾಭೂಮಿಯನ್ನೇ ತೂಗುತ್ತಿದೆಯಲ್ಲಾಎಲಾ! ಪುಟಾಣಿ ಚುರುಕು ಹಕ್ಕಿಯಾರಿಟ್ಟರೋ ಹೆಸರು?ಭೂಮಿ ತೂಗುವ ಹಕ್ಕಿ. ಮೇಲಕ್ಕೊಮ್ಮೆ ಕೆಳಕ್ಕೊಮ್ಮೆತೂಗಿದಷ್ಟೂ ತೂಗಿದಷ್ಟೂಮೇಲಕ್ಕೂ ಏರುವುದಿಲ್ಲ;ಕೆಳಕ್ಕೂಇಳಿಯುವುದಿಲ್ಲ.ಸಮತೋಲನದ ಸಮಭಾರವಂತೂಸಧ್ಯಕ್ಕೆ ಸಾಧ್ಯವೇ ಇಲ್ಲವಾ..?ಅತ್ತೊಮ್ಮೆ ಇತ್ತೊಮ್ಮೆ ಮುಗಿಯದಶತಪಥ. ಪಾತಾಳಕ್ಕಿಳಿದ ಇಲ್ಲಿಯ ದು:ಖಮುಗಿಲು ಮುಟ್ಟಿರುವಾಗ ಅಲ್ಲಿಯ ರೋದನಕ್ಷಣಕ್ಕೊಮ್ಮೆ ಹತೋಟಿ ತಪ್ಪುವ ಬದುಕ ಸಂತೆಯಭಾರ ವಹಿವಾಟಿನ ನಡುವೆ ಪುಕ್ಕದ ಅಳತೆಗೋಲುಹಿಡಿತಕ್ಕೆ ದಕ್ಕುವುದಿಲ್ಲ. ಹಠಕಟ್ಟಿ ಉಸಿರೊತ್ತಿಬಿರುಸಿನಲ್ಲಿ ಒಯ್ದಷ್ಟೇರಭಸದಲ್ಲಿ ರಪಕ್ಕನೆ ಪ್ರತಿಭಾರಿನೆಲಕ್ಕಾತು ಹೋಗುವ ವಿಫಲ ಪ್ರಯತ್ನನೋಡುತ್ತಾ ನಿಂತ ನೆಲವೂ ನೆಟ್ಟ ಆಗಸವೂಅರೆಗಳಿಗೆ ಕಂಪಿಸಿಕೊಂಡರೂ.. ಹಕ್ಕಿ ಬಾಲ ಕುಣಿಸುತ್ತಲೇ ಇದೆಜಗದ ಭಾರವನ್ನೆಲ್ಲಾ ಹೆಕ್ಕಿ ಹೆಕ್ಕಿಪುಕ್ಕದಲ್ಲಿಟ್ಟು ತೂಗುತ್ತಲೇ ಇದೆನಿರುಕಿಸುತ್ತಾ ನಿಂತ ಅಂಗಳದೆದೆಈ ಗಳಿಗೆಯಲ್ಲಾದರೂ ಹಗುರಗೊಳ್ಳುತ್ತಿದೆ. ದಕ್ಕಿದ ನಿರಾಳತೆಗೆಅತ್ತ ಇತ್ತ ನುಲಿಯುತ್ತಾಪರ‍್ರನೆ ಹಾರಿದೆ ಹಕ್ಕಿತೂಗಿಕೊಳುವ ಕಾತರತೆಯಲ್ಲಿಮತ್ತೆ ರಚ್ಚೆ ಹಿಡಿದಿದೆ ಭೂಮಿ ಅರಿಕೆಗಳು 1.ಅರಳಿ ಸರಿದ ಹಗಲುಗಳೆಷ್ಟೋಆವರಿಸಿ ಕವಿದು ಕನಲಿದಇರುಳುಗಳೆಷ್ಟೋ..ಒಂದಂತೂ ದಿಟಕವಿತೆಯೇ..ನಿನ್ನ ಅನುಪಸ್ಥಿಯಲ್ಲಿಈ ಎರಡು ಕ್ರಿಯೆಗಳೂಸಂಭವಿಸುತ್ತಿವೆ ನಿರಂತರಹಾಗೂ ಕಾಯುವಿಕೆಯಲ್ಲೇ ನಾ ಕರಗಿಕಳೆದು ಹೋಗುತ್ತಿದ್ದೇನೆ ಸತತ. ಪ್ರಭುವೇ..ಹಗಲು ಇರುಳುಹಾಗೇ ಬಂದು ಹೋಗುತ್ತಿರಲಿಕಾಯುವಿಕೆಯ ಸುಖ ಹೀಗೇಅನಂತವಾಗಿರಲಿ. 2. ಪ್ರಭುವೇ..ನನಗೆಪೂರ್ವ ಜನ್ಮದ ಬಗ್ಗೆ ಅರಿವಿಲ್ಲಪುನರ್ಜನ್ಮದ ಬಗ್ಗೆ ನಂಬಿಕೆಯೂ ಇಲ್ಲಅತ್ತ ಇತ್ತ ಸುಳಿದಾಡಿಸತಾಯಿಸುವ ಕವಿತೆಯನ್ನೊಮ್ಮೆಇದೇ ಜನುಮದಲ್ಲಿ ನನ್ನ ಇದಿರುಎಳೆದು ತಂದು ನಿಲ್ಲಿಸಿ ಬಿಡು ಸಾಕು. 3. ಮೊದಲು ಕಣ್ಣು ಬಿಟ್ಟಾಗ ಜೋರಾಗಿಶಬ್ದ ಹೊರಡಿಸಿ ಅತ್ತ ನೆನಪುಈಗಲೂ ಹಾಳು ಅಳು ನಿಲ್ಲುವುದಿಲ್ಲಗುದ್ದಿ ಗುದ್ದಿ ಹೊರ ಬಂದರೂಶಬ್ದ ಮಾತ್ರ ಕೇಳಿಸುತ್ತಿಲ್ಲ. 4. ದಯೆ ತೋರು ಕವಿತೆಯೇ..ಎಲ್ಲಾ ಭಾರವನ್ನು ನಿನ್ನ ಹೆಗಲಿಗೇರಿಸಿರುವೆಶಬ್ದವನ್ನು ನಿಶ್ಯಬ್ದವಾಗಿ ಇಳಿಸಿಬಿಡುಶಬ್ದ ಸ್ಪೋಟದ ಅನಾಹುತಕ್ಕೆ ನೀನೂ ಕೂಡಕಾರಣವಾಗುವುದ ತಪ್ಪಿಸಿಕೋ.. ಅತ್ತಷ್ಟು ಬಾರಿ ನಗಲಿಲ್ಲಆದರೂ ಅತ್ತದ್ದು ಸುದ್ದಿಯಾಗಲೇ ಇಲ್ಲನಕ್ಕಿದ್ದು ಗುಲ್ಲೋ ಗುಲ್ಲುಕವಿತೆಯೇ..ನೀ ಎಚ್ಚರವಾಗಿರುವುದಷ್ಟೇಮುಖ್ಯ ಇಲ್ಲಿಆಗ ನಾನೂ ನಿಶ್ಚಿಂತೆಯಾಗಿರಬಲ್ಲೆ ****************************************

ಸ್ಮಿತಾ ಅಮೃತರಾಜ್ ಕಾವ್ಯಗುಚ್ಛ Read Post »

ಕಾವ್ಯಯಾನ

ಕಾವ್ಯಯಾನ

ಮಾಲತಿ ಶಶಿದರ್ ಒಂದು ಪ್ರೇಮಕವಿತೆ ಒಲವೆಕಗ್ಗತ್ತಲಲ್ಲಿ ಹೊಳೆವ ಬಂಧಕ್ಕಾಗಿ ಹಾತೊರೆದಿರುವೆಕಡಲಾದ ನಿನ್ನ ಒಂದು ಹನಿಯಾಗಿ ಸೇರಿರುವೆ ನಿನ್ನ ಚಲುವಿಗೆ ಪುರಾವೆಯಾಗಬಲ್ಲೆನೇ ನಾನು..ನಮ್ಮಿಬ್ಬರ ಮಿಲನ ಕಂಡು ಮಣ್ಣು, ಮಳೆ ಹನಿ ನಾಚದೆನು ನಿನ್ನೊಲವ ಸ್ಫೂರ್ತಿಯಲಿ ಆಗಸದಲ್ಲಿ ತೇಲಿಹೆನು,ಹೆಗಲ ಮೇಲೆ ಒರಗುವಾಸೆ ದಾಟಿ ಬಳಿಗೆ ಬಂದಿಹೆನು ನನ್ನೊಳಗೆ ಅವಿತಿರುವ ನೀನೊಂದು ಸುಂದರ ಗುಟ್ಟುಏಕಾಂತದಲ್ಲೂ ನಿನ್ನದೇ ಪರಿಮಳ, ನಿನ್ನದೇ ನೆನಪು.. ಬೇಸಿಗೆ ಆಗಸ ವಸಂತವಾಗಿದೇದೂರದ ಕಾಡು ನಿನ್ನೆಸರ ಕೂಗಿದೆ.. ಅಣುವಿನ ವಿದಳನದಂತೆ ನಮ್ಮ ಬಂಧ ದಿನೇ ದಿನೇ ಸಿಡಿದಿದೆಬೆರಳುಗಳ ಹೊಸ ಭಾಷೆಯ ಈ ಪಾಪಿ ಹೃದಯ ಅರಿವುದೆ? ಇದೊಂದು ಜನ್ಮ ಸಾಕೆ ಹುಡುಗ ನಿನ್ನ ಸೇರಿ ಬಾಳಲು..ಒಂದೇ ಒಂದು ಹೃದಯ ಸಾಕೆ ನಿನ್ನ ಪ್ರೀತಿ ಮಾಡಲು.. ***********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೂತನ ಅವರ ಹೊಸ ಕವಿತೆ ನೂತನ ದೋಶೆಟ್ಟಿ ಸಾಲುಗಟ್ಟಿದ ವಾಹನಗಳ ಸಂದಿನಲ್ಲಿಚಟಚಟನೆ ಜಿಗಿಯುವ ಪುಟ್ಟ ಕಾಲುಗಳುದೇಹವಿಡೀ ಲೋಹದ ಗೋಲದೊಳಗೆ ತೂರಿಕೈಕಾಲು ಬಿಡಿಬಿಡಿಯಾಗಿ ಹೊರಬರುವ ಆಟ ಮಿಂಚುವ ಕಣ್ಣುಗಳ ಸುತ್ತ ಕಪ್ಪು ಕಾಡಿಗೆಸೆರೆ ಹಿಡಿಯುವ ದಾಹಮಿರಮಿರನೆ ಹೊಳೆವ ಕದಪುಗಳುಬಾಲ್ಯವನ್ನು ನುಂಗಿ ಉಬ್ಬಿ ಗರಿಗರಿಯಾಗುತ್ತಿರುವವು ಒಡ್ಡಿದ ಕೈಮೇಲೆ ಬೀಳುವ ಕನಸ ಕಾಸುಗಳುಸಂಜೆಗತ್ತಲಲ್ಲಿ ಕರಗುವುದ ತಿಳಿದೂಸುಡುಬಿಸಿಲಲಿ ಮೈ ಮಣಿಸುವ ಕಸುವುಸೊಂಟಕ್ಕೆ ಬಿಗಿದ ದಾವಣಿಯುಸಡಿಲವಾಗುವುದಕ್ಕೆ ಪೂರ್ವಹಾದಿಬದಿಯ ದೊಂಬರಾಟದಲ್ಲಿ ತಯಾರಿ ಬಡಿಯುವವನ ತಮಟೆ ತಾಳಕ್ಕೆಬಾಗಿ ಬಳುಕುವ ನೋಡುಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಪಾಠಉಣ್ಣುವ ಅನ್ನದಲಿ ಸುಖ ನೀಡಿದ ಘಾಟು ಕೆಂಪು ದೀಪ ಹತ್ತುತ್ತಲೇ ನಿಲ್ಲುವ ವಾಹನಗಳಗಾಜನ್ನು ಬಗೆವ ಕಣ್ಣುಗಳುಕ್ಷಣಕ್ಷಣದ ಬದುಕ ಹುಡುಕುವವು ಇಂತೆಷ್ಟೋ ಭಾಗ್ಯಲಕ್ಷ್ಮಿಯರುರಸ್ತೆಯಂಚಲಿ ದಿನಗಳ ಸವೆಸಿಟಾರ್ಪಾಲು ಗೂಡುಗಳಲೋಫುಟ್ ಪಾತುಗಳಲೋ ರಾತ್ರಿಗಳ ಮಾರಿ ಕಂತೆ ಕಂತೆ ನೋಟುಗಳ ನುಂಗುವಕಡತಗಳ ಶಪಿಸುವರುಕಣ್ಣ ಮಿಂಚನ್ನು ಎದೆಯಲ್ಲಿ ಉಳಿಸಿ ಹೋಗುವರುನಿಟ್ಟುಸಿರು ದಾಟಿ ಸಾಗುವರುಗಣತಿಯಲ್ಲೂ ಹೆಸರಿಲ್ಲದಾಗುವರು ***************************

ಕಾವ್ಯಯಾನ Read Post »

You cannot copy content of this page

Scroll to Top