ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕವಚದಲ್ಲಿ ಭದ್ರ

ಕವಿತೆ ಕವಚದಲ್ಲಿ ಭದ್ರ ತಮ್ಮಣ್ಣ ಬೀಗಾರ ಕವಚದಲ್ಲಿ ಭದ್ರ…ಅದು ಯಾವಾಗ ಹೋಗುತ್ತದೆಅಥವಾ ಹೋಗುವುದಿಲ್ಲವೆಂದುಹೇಳುವುದು ಹೇಗೆ…ನನಗಂತೂ ಬಂದಿದೆ ಕಾಯಿಲೆಮರದ ಬೇರು ಕೊಳೆಯುವಷ್ಟುಮಳೆಯಾದರೆ ಚಿಗುರುವುದು ಯಾವಾಗ…ತಲೆಯ ತುಂಬಾ ಕೆಲಸ ತುಂಬಿಕೊಂಡಿದೆಕಿಸೆ ಖಾಲಿಯಾಗಿ ಕೈಗಳನ್ನು ಜೇಡರ ಬಲೆಕಟ್ಟಿ ಹಾಕಿದೆ…ಒಂದು ದಿನ ರಜೆ ಸಿಕ್ಕಿದರೆ ನನ್ನೊಂದಿಗಾಡುತ್ತಿದ್ದಕಂದ… ದಿನವೂ ನನ್ನೊಂದಿಗೆಕುಸ್ತಿ ಹಿಡಿಯುತ್ತಾನೆ ತಲೆ ಕೆಡಿಸುತ್ತಾನೆಅಲ್ಲಿ ಬಸ್ ನಲ್ಲಿ ಜನರಿಲ್ಲ ಅಂಗಡಿಯಲ್ಲಿಜನರಿಲ್ಲ ಹೊಟೆಲಿನಲ್ಲಿ ಜನರಿಲ್ಲಆದರೂ ಕಾಯ್ದುಕೊಂಡಿಲ್ಲ ಅಂತರರೋಗ ಹರಡುತ್ತಲೇ ಇದೆಇವಳು ಯುಟ್ಯೂಬ್ ನೋಡಿ ಮಾಡುವಹೊಸ ತಿಂಡಿ ರುಚಿಯಾಗುವುದಿಲ್ಲಮತ್ತೆ ಕಂಪನಿಯಿಂದ ಬರುವ ಮೇಲ ಎಷ್ಟುನಿಧಾನವೆಂದರೆ ನಡೆದು ಬರುವಪೋಷ್ಟಮ್ಯಾನ ಗಿಂತಲೂ ಹಿಂದೆಊರ ತುಂಬೆಲ್ಲ ಜನರಿದ್ದಾರೆಎಲ್ಲರಿಗೂ ಈಗ ಬಾಯಿಗೆ ಮಾಸ್ಕ ಕಟ್ಟಿದ್ದಾರೆಮತ್ತು ಕಣ್ಣೂ ಮಾತಾಡುತ್ತಿಲ್ಲಸಾಲದ ಕಂತು ರಸ್ತೆಯ ಹೊಂಡಮತ್ತು ಕಚೇರಿಯ ಕೆಲಸ ಹಾಗೇ ಇವೆಯಾವುದೋ ಕಾಯಿಲೆಗಳಿಗೆಲ್ಲತಡೆ ಹಾಕಿಕೊಂಡವರು…ಆರಾಮ ಇದ್ದೇವೆ ಎನ್ನುತ್ತಾರೆಎಲ್ಲರೂ ಕೋವಿಡ ಕವಚದಲ್ಲಿ ಭದ್ರಹಲವರಿಗೆ ಜೈಲು… ಕೆಲವರಿಗೆ ರಕ್ಷಣೆ… ************************************

ಕವಚದಲ್ಲಿ ಭದ್ರ Read Post »

ಕಾವ್ಯಯಾನ

ನೀವು-ನಾವು

ಕವಿತೆ ನೀವು-ನಾವು ಸಿ.ಎಚ್.ಮಧುಕುಮಾರ ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನಿಮ್ಮನ್ನು ಕೇಳುವಂತಿಲ್ಲ;ಏಕೆಂದರೆ ನೀವು ಸಿಟ್ಟುಗೊಳ್ಳುವಿರಿ. ಇಲ್ಲಿ ನೀವೇನು ಮಾಡುತ್ತಿದ್ದೀರಿ ಎಂದುನೀವು ನಮ್ಮನ್ನು ಪದೇ ಪದೇ ಕೇಳಬಹುದುನಾವಾಗ ಶಾಂತವಾಗಿದ್ದರೆನಿಮ್ಮ ಆತ್ಮಕ್ಕೆ ಸ್ವರ್ಗಸುಖನಿಮ್ಮ ಮಾತಿಗೆ ಸಿಟ್ಟಾದರೆತಟ್ಟನೇದುರಹಂಕಾರಿಯ ಪಟ್ಟ ಹೊರಿಸುವಿರಿ. ನೀವು ಸದಾ ಮುಂದೆ ನಡೆಯಲು ಬಯಸುವಿರಿ; ಅದಕ್ಕೂ ಮೊದಲುಹಿಂದೆ ನಾವಿರುವುದ ಖಚಿತ ಪಡಿಸಿಕೊಳ್ಳುವಿರಿ.ನಿಮ್ಮೊಂದಿಗೆ ಹೆಜ್ಜೆ ಹಾಕುವ ಬಯಕೆಯಿದೆ,ಅದು ಯಾವತ್ತೂ ಈಡೇರದ ಬಯಕೆಯೆಂದು ತಾವು ಆಗಾಗ್ಗೆ ಧೃಢಪಡಿಸಿರುವಿರಿಆದರೂ ಪಟ್ಟು ಬಿಡದೆ ನಡೆಯುವೆವು ನಾವು! *************************************************

ನೀವು-ನಾವು Read Post »

ಕಾವ್ಯಯಾನ

ಮೊಬೈಲಾಯಣ

ಕವಿತೆ ಮೊಬೈಲಾಯಣ ಪೂರ್ಣಿಮಾ ಸುರೇಶ್ ಹಳೆಯದು,ಉಪಯೋಗಕ್ಕೆ ಬಾರದು ಎಂದು ಸರಿಸಿಟ್ಟಮೂಲೆ ಸೇರಿದ ಮೊಬೈಲ್ಇಂದು ಅಚಾನಕ್ ಸಿಕ್ಕಿದೆ ಗಾತ್ರದಲ್ಲಿ ಚಿಕ್ಕದುಅಡ್ಡಡ್ಡ ತರಚಿದ ಕವಚಪರದೆ ದೃಷ್ಟಿ ಮಂದಇದರ ಮಿದುಳಲ್ಲಿ ನಾನು ಎಷ್ಟೊಂದು ಭಾವರಸ, ಚಿತ್ರಪಟಕಸವನ್ನೂ ತುಂಬಿಟ್ಟಿದ್ದೆಬೇಕಾದಾಗ ನೆರವಾಗುವುದೆಂದು ನಂಬಿದ್ದೆ ಕುತೂಹಲ ಆಶ್ಚರ್ಯಕರಹಿಡಿಯಲ್ಲಿ ಬ್ರಹ್ಮಾಂಡಧರ ಅಳಿಸದ ಮಾತು ತಳದಲ್ಲಿ ಉಳಿದಿರಬಹುದೇನನ್ನೊಡನೆ ಅನುಸಂಧಾನ ನಡೆಸಬಹುದೇಬಿಚ್ಚದೆ ರೆಕ್ಕೆ ತೆಪ್ಪಗಿದೆಚಾರ್ಜರ್ ಗೆ ಸಿಕ್ಕಿಸಿದೆಧ್ಯಾನಬಿಂದು ಮಿನುಗುವಂತೆಆಹಾ! ಕೆಂಪು ಚುಕ್ಕಿ ಅತ್ತ ಸರಿದು ದಿಟ್ಟಿಸಿದೆಈಡಾಗಿ ಸೂಕ್ಷ್ಮ ಸೆಳೆತಕ್ಕೆ ಈಗ ತನ್ನನ್ನು ತಾನೇತೆರೆದುಕೊಂಡಿತು ಕ್ಷಣಾರ್ಧದಲ್ಲಿನನ್ನ ಮೊಗದಲ್ಲಿ ಮುಗುಳ್ನಗೆಯ ಚೆಲ್ಲಿ- ಜಾತ್ರೆಯಲ್ಲಿ ಕಳೆದುಹೋದಹಸುಳೆ ಸಿಕ್ಕಂತೆಆಪ್ತತೆಯಿಂದ ಅಪ್ಪಿ,ಕೆನ್ನೆ ಸವರಿ ಸಂಭಾಷಿಸಿದೆಮುಗುಳ್ನಗು,ಅರೆನಗು, ಚೂರುಮಾತುಹಳಹಳಿಕೆ ಪ್ರಶ್ನೆಗಳ ಖಜಾನೆ;ಸ್ವಲ್ಪ ಹಾಡಿ ಬಿಟ್ಟ ಹಾಡು,ಕಾವ್ಯ ಆಗದ ಪದಗಳ ತಂಡ,ಕಥೆ, ಚುಟುಕು,ಲಹರಿಪೆಚ್ಚುಮುಖ, ವಿಜಯದ ನಿಶಾನೆರವಾನೆಯಾದ ದಾಖಲೆ ಕಳಚಿ ಬಿದ್ದ ಕ್ಷಣಗಳುಪರಾಗಸ್ಪರ್ಶ ನಡೆಸಿವೆಮೌನದ ಮೊಗ್ಗಿಗೆ ಸುಗಂಧವನು ಕೂಡಿಸಿದೆ ನೀನೆಂಬ ಕಳಚಿಹೋದ ನಾನುಕಳಚಲಾಗದಂತೆಎದುರಾದೆವು ನುಡಿಯಲಾಗದೆಪರಿಸ್ಥಿತಿಗೆ ತುಡಿಯಲಾಗದೆ ಈಗ ಗುಂಗಿನ ಸುರಿಮಳೆಎಲ್ಲೆಲ್ಲೂ ಹೊಮ್ಮಿದಂತೆ ಜೀವಸೆಲೆಎದೆ ಒದ್ದೆಹರವಾಗಿ ಉತ್ತ ಗದ್ದೆಕವನ ಪಲ್ಲವಿಸಿಪರಿಮಳಿಸಿದ ಮುಹೂರ್ತ; ಬದುಕಿಗೆ ದೊರಕಿದಂತೆ ಅರ್ಥ ********************************************************************************************************

ಮೊಬೈಲಾಯಣ Read Post »

ಕಾವ್ಯಯಾನ

ನೋವಮೌನ-ಅನಾಥನಲಿವು

ಕವಿತೆ ನೋವಮೌನ-ಅನಾಥನಲಿವು ಮಮತ ಅರಸೀಕೆರೆ ಸುಡುವ ಆಲೋಚನೆಗಳ ಹೊರೆಭಾರದಲ್ಲಿ ಮಗ್ಗುಲು ಬದಲಾಯಿಸಿದ ಅವಳ ನಿಟ್ಟುಸಿರು ಅತ್ಯಾಚಾರದ ಕನಸು ಕಂಡು ದಡಕ್ಕನೆ ಎಚ್ಚರಗೊಂಡ ಬೆಲೆವೆಣ್ಣ ಸಾಂದ್ರಗೊಂಡ ನಿರಾಳತೆ ಗದರಿಕೆಗೆ ಬೆದರಿ ಕೈಮುಷ್ಟಿ ಹಿಡಿದು ಸ್ಥಂಭೀಭೂತವಾಗಿ ನಿಂತ ಅಬೋಧ ಬಾಲನ ಬೆರಗು ಕಣ್ಣುಮೊಲೆಹಾಲು ಕುಡಿದು ಕಟುವಾಯಿಯಲ್ಲಿ ಇಳಿಯುವಾಗಲೇ ಅಂಗಾತವಾದ ನಿದ್ದೆಗಣ್ಣ ಬೊಮ್ಮಟೆ ನಗು ಬವಣೆಗಳನ್ನೆಲ್ಲ ಬರಹವಾಗಿಸಿದ ಅಪೂರ್ಣ ಡೈರಿಯ ಇನ್ನರ್ಧ ಖಾಲಿಪುಟಗಳ ಚಡಪಡಿಕೆಬರೆಯುತ್ತಲೇ ಅತ್ಯುತ್ಸಾಹಕ್ಕೆ ಸ್ತಬ್ಧವಾದ ಸಾಲುಗಳ ನಡುವಿನ ರೂಪಣಾತ್ಮಕ ಧ್ವನ್ಯಾರ್ಥ ಪ್ರಯಾಣದ ನಡುವೆಯೇ ತಿರುವು ರಸ್ತೆಯಲ್ಲಿ ತಟಕ್ಕನೆ ಕೆಟ್ಟು ನಿಂತ ಬದುಕ ಬಂಡಿಯ ಚಲನೆಕಕ್ಷೆಯ ತಂತು ಕಡಿದು ಆಳಕ್ಕೆ ಜಾರುವಾಗಲೇ ಖಿನ್ನ ಉಪಗ್ರಹದ ಕೈಹಿಡಿದ ಭೂಮಿ ಗುರುತ್ವ ಬತ್ತಿದ ಮೈಯ ತುಂಬ ಮರಳು ಹೊತ್ತು ಸಾಗುತ್ತಲೇ ಮರುಗಿ ತಟ್ಟಾಯಿಸುವ ನದಿಯ ಅಳಲುಧುಮುಕು ಜಲಪಾತದ ಮೆರುಗು ಕಳೆದ ಖಾಲಿಬಂಡೆಗಳ ಸವರುವ ಬಳ್ಳಿ, ಹೂಜಾಲ ನವಿರು ಯಾರೊ ಬೀಸಿದ ಕಲ್ಲು ಮತ್ತಾರಿಗೊ ತಾಗಿದಂತೆ, ಕಾಲು ಕಳೆದುಕೊಂಡು ಕುಂಟುವ ನಾಯಿ ಆರ್ತತೆಸೋಲನ್ನೇ ಕನವರಿಸಿ ಸದಾ ಸವಾರಿ ಮಾಡುವ ಜೂಜು ಕುದುರೆಯ ಮೊದಲ ಬಾರಿಯ ಗೆಲುವಿನ ಕೆನೆತ *******************************************

ನೋವಮೌನ-ಅನಾಥನಲಿವು Read Post »

ಕಾವ್ಯಯಾನ

ಕಾಡುವ ಕವಿತೆಗೆ

ಕವಿತೆ ಕಾಡುವ ಕವಿತೆಗೆ ಅಬ್ಳಿ,ಹೆಗಡೆ ಹೊತ್ತಿಲ್ಲ ಗೊತ್ತಿಲ್ಲಕಾಡುವಾ ಕವಿತೆ.ಬೇಕೆಂದು ಕರೆದಾಗನೀನೆಲ್ಲಿ ಅವಿತೆ..?ಬಂದಿಲ್ಲಿ ಅಕ್ಕರೆಯಸಕ್ಕರೆಯ ನೀಡು.ನನ್ನೆದೆಯ ಅಕ್ಕರದಿನೀ…ನಾಟ್ಯವಾಡು.ಕಂಕುಳಲಿ ಕೈಯ್ಯಿಟ್ಟುಗಿಲಗಿಚ್ಚಿಯಾಡಿ.ನೋವಲ್ಲು ನಗಿಸುತ್ತಮಾಡುವೆಯೆ ಮೋಡಿ.ತುಂಟಾಟವಾಡುತಲಿಕಳೆದೆನ್ನ ‘ಹಮ್ಮು’.ತಂಟೆಮಾಡದೆ ಒಳಗೆಉಳಿಯೆ ‘ಖಾಯಮ್ಮು’.! ****************************************

ಕಾಡುವ ಕವಿತೆಗೆ Read Post »

ಕಾವ್ಯಯಾನ

ಪ್ರಾರ್ಥನೆ

ಕವಿತೆ ಪ್ರಾರ್ಥನೆ ಬಾಪು ಖಾಡೆ ಹಸಿರು ಬೆಟ್ಟಗಳ ಕಾಡು-ಕಣಿವೆಗಳರುದ್ರ ರಮಣೀಯತೆಯಲಿ ಉಗಮಿಸಿಝರಿಯಾಗಿ ತೊರೆಯಾಗಿ ಜಲಪಾತವಾಗಿಬಳುಕುತ್ತ ಬಾಗುತ್ತ ನಿನಾದಗೈಯುತ್ತವೈಯಾರದಿ ಸಾಗುವ ನದಿಮಾತೆಯೆಹೀಗೆ ಪ್ರಸನ್ನವದನೆಯಾಗಿ ಸಾಗುತ್ತೀರು ಕಾಡು ಕಡಿ-ಕಡಿದು ಬಯಲಾಗಿಸಿನಿನ್ನೊಡಲ ಬಗೆಬಗೆದು ಬರಿದಾಗಿಸಿಮಾಲಿನ್ಯ ಸುರಿಸುರಿದು ಕಪ್ಪಾಗಿಸಿತಿಳಿನೀರ ಹೊಳೆಯನ್ನುಕೊಳೆಯಾಗಿಸಿಜಲಚರ ಜೀವಕ್ಕೆ ವಿಷ ಉಣ್ಣಿಸಿದಕಟುಕ ಹೃದಯದ ನಿನ್ನ ಮಕ್ಕಳನು‌ಒಮ್ಮೆ ಕ್ಷಮಿಸಿ ಬೀಡು ತಾಯೆ ಬಿಟ್ಟ ಬಿಸಿಯುಸಿರು ಕಪ್ಪುಮೋಡಗಳಾಗಿಆಕ್ರೋಶದ ಬೆಂಕಿ ಚಂಡಮಾರುತವಾಗಿಕಡಲೆಲ್ಲ ಉಪ್ಪಾಗಿ ಸುನಾಮಿಯಾಗಿಕುಂಭದ್ರೋಣದ ಬಿರುಮಳೆಯಾಗಿಭೀಕರ ಪ್ರವಾಹವಾಗಿ ಉಕ್ಕೇರದಿರುಪಾತ್ರದಂಚನು ಮೀರಿ ಹರಿಯದಿರುತಪ್ಪೆಸಗಿದ ನಿನ್ನ ಮಕ್ಕಳನು ಮತ್ತೊಮ್ಮೆ ಮನ್ನಿಸಿ ಬೀಡು ಭೂತಾಯಿಯಂತೆ ಕ್ಷಮಯಾದರಿತ್ರಿಯಾಗಿರು ***********************************

ಪ್ರಾರ್ಥನೆ Read Post »

ಕಾವ್ಯಯಾನ

ಇರಲಿ ಬಿಡು

ಕವಿತೆ ಇರಲಿ ಬಿಡು ಸ್ಮಿತಾ ರಾಘವೆಂದ್ರ ಸಂಬಂಧಗಳು ಸವಿಯೆಂದು ಬೀಗುತಿದ್ದೆಕಳಚಿ ಬಿದ್ದಾಗಲೇ ಗೊತ್ತಾಗಿದ್ದು ಕಹಿಯೆಂದುಚಿಗುರು ಚಿವುಟಿದಮೇಲೆ ಫಲ ನೀಡುವ ಖಾತರಿ ಇಲ್ಲಸುಮ್ಮನೇ ಬೆಳೆಯಲು ಬುಡವಾದರೂಇರಲಿ ಬಿಡು. ಕಳೆದ ಕಾಲವ ತಿರುಗಿ ನೋಡುತಲಿದ್ದೆ.ಎಷ್ಟೊಂದು ನಲಿವುಗಳು ಉಸಿರ ನಿಲ್ಲಿಸಿವೆನೋವುಗಳೂ ಬಸವಳಿದು ಸುಮ್ಮನಾಗಿವೆ,ಬೇಡ ಬಾಚಿಕೊಳ್ಳುವದು ಏನನ್ನೂಹಾಗೇ ಬದುಕಲು ಭಾವಗಳಾದರೂ ಇರಲಿ ಬಿಡು. ಜೊತೆಯಿದ್ದ ನಂಬಿಕೆಯ ಜೀವಗಳ ಜತನದಲಿ ಸಲಹಿದ್ದೆಜಾಡು ಮರೆತು ಮೇಲೇರಿ ಅಣಕಿಸುತಲಿವೆಈಗ ಹಕ್ಕಿ ಗೂಡಿಗೆ ಮಾತ್ರ ಸೀಮಿತರೆಕ್ಕೆಯನೇ ಮರೆಯುವದು ಅನಿವಾರ್ಯಸೋತ ಕಾಲುಗಳಾದರೂ ಇರಲಿ ಬಿಡು. ದಟ್ಟವಾಗಿದ್ದ ಕಣ್ಣ ಕನಸಿನ ಗರಿಗಳುಒಂದೊಂದೇ ಉದುರುತ್ತಿವೆ.ಬೋಳಾದ ರೆಪ್ಪೆಯೊಳಗೆ-ಹನಿ ಹಿಡಿದಿಡುವ ಕಸರತ್ತು ಮುಗಿದಿದೆ.ಕಣ್ಣತೇವ ಆರಿದರೂ ನೋಟವಾದರೂ ಇರಲಿ ಬಿಡು. ಕೊರೆದು ಕೊರೆದು ಅಗಲವಾದ ಅಂತರಮುಚ್ಚಲೇಬೇಕೆಂಬ ಇರಾದೆ ಇಲ್ಲ ಯಾರಲ್ಲೂಇನ್ನಾರೋ ಎಡವಿ ಬೀಳದಿರಲಿ ಒಂದು ಎಳೆಯ ಎಳೆದಿಡುವಜೀಕಿದ ನೆನಪಾದರೂ ಇರಲಿ ಬಿಡು. ಯಾನಕೆ ಕೊನೆ ಅದಾಗಿಯೇ ಬರಬೇಕು ಕವಲುದಾರಿ ಯಾದರೂಮತ್ತೆಲ್ಲೋ ಹೋಗಿ ಸೇರಲೇ ಬೇಕುಇದ್ದೂ ಇಲ್ಲದಂತಾಗುವದು ಹೇಗೆಬದುಕುತ್ತ ಕಾಯುವ ಇಲ್ಲ ಕಾಯುತ್ತ ಬದುಕುವ ನಿಟ್ಟುಸಿರಾದರೂ ಇರಲಿ ಬಿಡು. ******************************************

ಇರಲಿ ಬಿಡು Read Post »

ಕಾವ್ಯಯಾನ

ಬೆಳಗು

ಕವಿತೆ ಬೆಳಗು ವೀಣಾ ನಿರಂಜನ ಈಗಷ್ಟೇ ಏಳುತ್ತಿದ್ದೇನೆಒಂದು ಸುದೀರ್ಘ ನಿದ್ರೆಯಿಂದಇನ್ನೇನು ಬೆಳಕು ಹರಿಯಲಿದೆತನ್ನದೇ ತಯಾರಿಯೊಡನೆ ಪ್ರತಿ ದಿನ ಸೂರ್ಯ ಹುಟ್ಟುತ್ತಾನೆಸೂರ್ಯನೊಂದು ಕಿರಣಕತ್ತಲೆಯ ಎದೆಯ ಹಾದುಬಗೆಯುತ್ತದೆ ಬೆಳಕು ಮೂಡುತ್ತದೆ ಬರೀ ಸೂರ್ಯ ಹುಟ್ಟಿದ್ದುಕೋಳಿ ಕೂಗಿದ್ದುಹಕ್ಕಿ ಕಲರವ ಕೇಳಿದ್ದೇ –ಬೆಳಗಾಯಿತೀಗ ಎಂಬರು ಕಾನು ಕತ್ತಲೆಯ ಸರಿಸಿಭೂಮಿ ಬೆಳಗಿದರಷ್ಟೆ ಸಾಕೇಎದೆಯ ಕತ್ತಲು ಬಗೆಯದೆಬೆಳಗಾಗುವುದೆಂತು ಸಹಸ್ರ ಬೆಳಗುಗಳ ಸೂರ್ಯಹೊತ್ತು ತರುವ ಬೆಳಕಿನ ಕಿರಣಗಳಲ್ಲಿಒಂದು ಕಿರಣ ದಕ್ಕಿದರೂ ಸಾಕುನಡು ನೆತ್ತಿಯ ಸುಟ್ಟು ಕೊಂಡುಸಾರ್ಥಕ ಈ ಬದುಕು.     **************************

ಬೆಳಗು Read Post »

ಕಾವ್ಯಯಾನ

ಹಕ್ಕಿಯ ದುರಂತ

ಅನುವಾದಿತ ಕವಿತೆ ಹಕ್ಕಿಯ ದುರಂತ ವಿ.ಗಣೇಶ್ ಸಗ್ಗದ ಚೆಲುವಿನ ಹಕ್ಕಿಯು ಒಂದುಭಾನಂಗಳದಿಂದ ಧರೆಗಿಳಿದುಊರಿನ ಮನೆ ಮಂದಿರಗಳ ಮೇಲ್ಗಡೆಹಾರುತಲಿದ್ದಿತು ನಲಿನಲಿದು. ಚಿನ್ನದ ವರ್ಣದ ರನ್ನದ ರೆಕ್ಕೆಯನೀಲಿಯ ಕಂಗಳ ಆ ಹಕ್ಕಿಹಾರುತ ಬರುವುದ ನೋಡಿದ ಮಕ್ಕಳಎದೆಯಲಿ ಆನಂವೆ ಉಕ್ಕಿ ಹಕ್ಕಿಯು ಹಾರುತ ಸಾಗುವ ಜಾಡಲಿತಾವೂ ಓಡುತ ಕೆಳಗಿಂದಕೇಕೆಯ ಹಾಕುತ ನಲಿಯುತಲಿರಲುಜನ ಸೇರಿತು ಅಚ್ಚರಿಯಿಂದ ಎಂಥ ಚೆಂದದ ಚೆಲುವಿನ ಹಕ್ಕಿಏನದು ಚೆಂದ ಆ ಮೈ ಬಣ್ಣ!ಕೈಗದು ಸಿಕ್ಕರೆ ಮಾರಲು ಆಗಕೈತುಂಬ ಹಣ ಝಣ ಝಣ ಮಾರುವುದೇತಕೆ ನಾವೇ ಹಿಡಿದುಕೊಂದೇ ತಿಂದರೆ ಬಹಳ ಮಜಎನ್ನುತ ಬಾಯಲಿ ನೀರೂರಿಸುತಲಿಹೇಳಿದ ಅಲ್ಲಿಯ ಹಿರಿಯಜ್ಜ ಅಷ್ಟರೊಳಗಾಗಲೆ ಬಿಲ್ಲು ಬಾಣಗಳಹಿಡಿದು ಬಂದೊಬ್ಬ ತಲೆ ತಿರುಕಹಕ್ಕಿಯ ನೇರಕೆ ಗುರಿಯನು ಇಟ್ಟುಬಾಣವ ಬಿಟ್ಟನು ಆ ಕಟುಕ ಯಾವ ಪಾಪವನು ಯಾರ ಶಾಪವನುಹೊತ್ತು ಬಂದಿತ್ತೋ ಆ ಹಕ್ಕಿಬಾಣದ ಪೆಟ್ಟಿಗೆ ರಕ್ತವ ಕಾರುತಕೆಳಗಡೆ ಬಿದ್ದಿತು ಮಣ್ಮುಕ್ಕಿ ಚಿನ್ನದ ಬಣ್ಣದ ರನ್ನದ ರೆಕ್ಕೆಯಸುಂದರ ಹಕ್ಕಿಯ ಗತಿ ನೋಡಿನೆರೆದಿಹ ಮಕ್ಕಳು ಊರ ಕರುಣಾಳುಜನರು ಮರುಗಿದರು ಒಗ್ಗೂಡಿ ಬಾಣದ ರಭಸದ ಪೆಟ್ಟಿಗೆ ಹಕ್ಕಿಯುಪುಟ್ಟ ಹೊಟ್ಟೆ ಮಾಂಸವು ಸಿಡಿದುರಕ್ತವು ಚೆಲ್ಲಿ ಮಣ್ಣುಗೂಡಿರಲು‘ತಿನ್ನಲು ಬಾರದು ಇದು’ ಎಂದು ಕೊಂದಿಹ ಕಟುಕ ಸತ್ತ ಹಕ್ಕಿಯನುಎತ್ತಿ ಗಿರಗಿರನೆ ತಿರುಗಿಸುತದೂರಕೆ ಎಸೆಯಲು ಅದು ಅಲ್ಲಿನ ಹೊಳೆಸೇರಿತು ಮೌನವ ಸಾರುತ್ತ ಹೊಳೆಯನು ಅಪ್ಪಿದ ಹಕ್ಕಿಯ ಆತ್ಮವುಹೊಳೆಯ ಕಿವಿಗಳಲಿ ದುಃಖದಲಿಮಾನವ ಕ್ರೌರ್ಯದ ಪರಿಯನು ವರ್ಣಿಸಿಹೇಳುತ ಆ ಹೊಳೆ ಜೊತೆಯಲ್ಲಿ ಸಾಗುತಿರಲು ಆ ಹೊಳೆ ದೇವಿಯುಅಪ್ಪಿ ಅದನು ಸಂತೈಸಿತ್ತುಚೈತ್ರದ ಅಂದಿನ ಆಗಸ ಮೊಗದಲಿಕೆಂಬಣ್ಣದ ತೆರೆ ಮೂಡಿತ್ತು. ************************************************************ ಮೂಲ; In London Town By Mary E.Colridge

ಹಕ್ಕಿಯ ದುರಂತ Read Post »

You cannot copy content of this page

Scroll to Top