ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಅವಳೂ ಹಾಗೇ .

ಕವಿತೆ ಅವಳೂ ಹಾಗೇ . ಡಾ. ರೇಣುಕಾ ಅರುಣ ಕಠಾರಿ ಬೀಜ ಸಸಿಯಾಗುವ ಹಾಗೆ,ಸಸಿ ಮರವಾಗುವ ಹಾಗೆ,ಮರದಲಿ ಕಾಯಾಗಿ ಹಣ್ಣಾದ ಹಾಗೇಅವಳೂ ಹಾಗೆ., ಮಳೆ ಹನಿಗೆ ಸೂರ್ಯ ಚುಂಬನಕಾಮನ ಬಿಲ್ಲಿನಂದದ ಹಾಗೇಅವಳೂ ಹಾಗೇ., ಮುಡಿಬಿಟ್ಟು ಮೊಲೆಮೂಡಿಚಿತ್ತರಾದಿ ರವಕೆ ಬಿಗಿಯಾದ ಹಾಗೇಅವಳೂ ಹಾಗೇ., ನಿತ್ಯವೂ ಕುಡಿ ಕುಡಿದಷ್ಟುಮಧು ತು..$ ತುಂಬಿ ಬಂದುಕಪ್ಪೆ ಚಿಪ್ಪಿನ ಮುತ್ತಿನ ಹೊಳಪಿನ ಹಾಗೇಅವಳೂ ಹಾಗೇ., ಮೈಮುರಿದು ನಾಚಿ ಕೆನ್ನೆ ಕೆಂಪಾದAತೆಮುಸ್ಸೂಂಜೆ ಮೂಡಣ ನಕ್ಕಂತೆಅವಳೂ ಹಾಗೇ., ಬಯಕೆಯ ಕಾತರಕೆ ಬಾಯಾರಿದಳವಳುಬಾಯಾರಿದೆ ನೆಲಕ್ಕೆಮಳೆ ಬೀಳುವ ತವಕವು ಕಾದಂತೆಅವಳೂ ಹಾಗೇ., ಬಯಕೆಯು ಬೆರ‍್ನೀರಿನಂತೆಹಸಿದ ಗರ್ಭದೊಳಗೆ ಜಾರಿ ಜಾರಿ ಇಳಿದಂತೆಅವಳೂ ಹಾಗೇ., ಭಾವದ ನಂಟಿಗೆ ಅಂಟಿಕೊAಡ ಚಿಗುರುಅರಿವಾದ ಅಗೋಚರ ಹೆಜ್ಜೆಗಳುಕಡ¯ದ ಆಳದಂತೆಅವಳೂ ಹಾಗೇ.,ಮುಸುಕೆಲ್ಲಾ ಸಿಂಗರಗೊAಡAತೆಹಣತೆಯೊಳಗಿನ ತೈಲ ಮಯವಾದಂತೆಅವಳೂ ಹಾಗೇ., ಸುತ್ತ ಹಸರೆಲ್ಲ ಕಾಡಿಗಣ್ಣಿನಂತೆಇಳೆಯ ಸ್ಪರ್ಷಕೆ ನಿರಗೆಗಳ ಆಲಿಂಗನವಾದAತೆಅವಳೂ ಹಾಗೇ., ಉರಿವ ಬಿಸಿಲೊಳಗೆ ಮೈಮಿಡುವಂತೆಬೆಳದಿAಗಳಿನ ಮಳೆ ನಿತ್ಯ ಸುರಿದ ಹಾಗೆಅವಳೂ ಹಾಗೇ., ನಿನ್ನೊಳಗೆ ನಾನು ನನ್ನೊಳಗೆ ನೀನುಏನೋ ಹೆಣೆದಿರುವಭಾವ ಬಂಧನವ ಕಳಚಿದ ಹಾಗೆನಾವುಗಳೂ ಹಾಗೇ ಅಲ್ವೆ? ಅರ್ಧರೊಟ್ಟಿ ಹಿಡಿದುಪರರ ನೋವಿಗೆ ಚಿಂತೆ ಮಾಡುವ ತಾಯಂತೆಅವಳು ಹಾಗೇ., *************************************

ಅವಳೂ ಹಾಗೇ . Read Post »

ಕಾವ್ಯಯಾನ

ಕ್ಷಮಿಸು ಮಗಳೇ,

ಕವಿತೆ ಕ್ಷಮಿಸು ಮಗಳೇ, ಬಾಲಾಜಿ ಕುಂಬಾರ ಕ್ಷಮಿಸು ಮಗಳೇ,ನಿನಗೆ ನಾಲಿಗೆ ಕತ್ತರಿಸಿದಾಗನಮಗೂ ನಾಲಿಗೆ ಮೇಲೆ ಗಾಯವಾಗಿದೆ,ಆದರೆ ಮಾತನಾಡಲು ಆಗಲಿಲ್ಲ.ಮಾತು ಮೌನವಾಗಿದೆ, ವೇದನೆ ಮಿತಿಮೀರಿದೆ, ಕ್ಷಮಿಸು ಮಗಳೇ,ನಿನಗೆ ಕಾಲು ಕತ್ತರಿಸಿ, ಕೈ ಮುರಿದಾಗಕಾಲುಗಳಿಗೆ ನೋವಾಗಿದೆ,ಕೈಗಳಿಗೆ ಬೀಗಗಳಿವೆ, ಕೈಕಟ್ಟಿ ಕುಳಿತಿದ್ದೇವೆನಿನ್ನ ‘ಜೀವ’ ಕಳೆದುಕೊಂಡು,ಮತ್ತದೇ ಸೂತಕದ ಮನೆಯಲ್ಲಿ, ಕ್ಷಮಿಸು ಮಗಳೇ,ಇದು ‘ರಾಮರಾಜ್ಯ’ ಇಲ್ಲಿ ಸ್ವಾತಂತ್ರ್ಯವಾಗಿತಿರುಗಾಡುವಂತೆ ಹೇಳಿದ್ದೇವೆ, ಆದರೆರಾಮರಾಜ್ಯದ ಕೀಚಕರ ಕೈಯಿಂದ ನಿನ್ನನ್ನುರಕ್ಷಿಸಲು ಆಗದೇ, ನಾವು ಅಪರಾಧಿಗಳಾಗಿದ್ದೇವೆ. ಕ್ಷಮಿಸು ಮಗಳೇ,ಈಗ ಕೌರ್ಯ ಮೆರೆಯುತ್ತಿದೆ, ನ್ಯಾಯ ಗಂಟಲಲ್ಲಿ ಉಸಿರುಗಟ್ಟಿದೆ, ಇನ್ನು ಮನುಷ್ಯತ್ವ ಎಂಬುದು ಮರೀಚಿಕೆಯಾಗಿದೆ, ಎಲ್ಲೆಡೆ ರಕ್ತದ ಕಲೆಗಳು ಚಿಮ್ಮುತ್ತಿವೆ, ಇನ್ನೆಲ್ಲಿದೆ ‘ಭಾರತ ಮಾತೆಯ’ ರಕ್ಷಣೆ?? ಕ್ಷಮಿಸು ಮಗಳೇ,ಅವಸ್ಥೆಯ ನೆಲದಲ್ಲಿ ಅನ್ಯಾಯ ಪಂಜಿನಮೆರವಣಿಗೆ ಹೊರಟಾಗ ‘ಬಡ ಜೀವಗಳು’ಮೌನವಾಗಿ ಪ್ರತಿರೋಧಿಸುತ್ತಿವೆ,ಆ ಕ್ಷಣದ ತೊಳಲಾಟ, ಅಸಹಾಯಕತೆ,ನಿನ್ನ ರಕ್ತ ಕಣ್ಣೀರು ನೆನೆದಾಗ, ಒಮ್ಮೆ ಕಣ್ಣು ಒದ್ದೆಯಾದವು, ಹಾಗೇ ರಕ್ತ ಕುದಿಯುತ್ತಿದೆ, ಕ್ಷಮಿಸುಬಿಡು ಮಗಳೇ,ನಿನಗೆ ಉಳಿಸಿಕೊಳ್ಳಲು ಆಗಲಿಲ್ಲ, *****************************

ಕ್ಷಮಿಸು ಮಗಳೇ, Read Post »

ಕಾವ್ಯಯಾನ, ಗಝಲ್

ಗಝಲ್

ಕವಿತೆ ಗಝಲ್ ರತ್ನರಾಯ ಮಲ್ಲ ಒರಟಾದ ಅಧರಗಳಲಿ ನುಲಿಯುತಿದೆ ನಿನ್ನದೆ ಹೆಸರುಎದೆಯ ಎಡ ಭಾಗದಲ್ಲಿ ಕುಣಿಯುತಿದೆ ನಿನ್ನದೆ ಉಸಿರು ಹಗಲಿರುಳು ಕಳೆಯುತಿರುವೆ ನಿನ್ನಯ ಕನವರಿಕೆಯಲ್ಲಿಕನಸುಗಳೆಂಬ ಹೆಪ್ಪಿನಿಂದ ಭಾವವು ಆಗಿದೆ ಮೊಸರು ಈ ರಾತ್ರಿಯು ಹರಿಯುತಿದೆ ನಿದ್ರೆಯ ಆಲಿಂಗನವಿಲ್ಲದೆಹಾಸಿಗೆಯ ತುಂಬೆಲ್ಲ ಬರಿ ನಿನ್ನ ಮಾದಕತೆಯ ಒಸರು ಗಾಳಿ ಬೀಸುತಿದೆ ಅನುರಾಗದ ಕಡಲು ಭೋರ್ಗರೆಯಲುಕಂಗಳ ಬಾಯಾರಿಕೆಯಲ್ಲಿ ಬರಿ ನಿನ್ನ ಬಿಂಬದೆ ಕೊಸರು ‘ಮಲ್ಲಿ’ಯ ಈ ಬಿಳಿ ಬಾಹುಗಳು ನಿನ್ನನ್ನೇ ಹುಡುಕುತಿವೆಅಂತರವನ್ನು ಮುಗಿಸಲು ಅನುವಾಗಿದೆ ಪ್ರಣಯದ ಕೆಸರು ********************************

ಗಝಲ್ Read Post »

ಕಾವ್ಯಯಾನ

ಸೌಹಾರ್ದ

ಕವಿತೆ ಸೌಹಾರ್ದ ರೇಷ್ಮಾ ಕಂದಕೂರು ಜಾತಿಮತದ ಭೇದಾಗ್ನಿ ಮನೆ ಮನಗಳಲಿ ಆಗ್ನಿಸ್ಪರ್ಷ ಗೈದಿದೆಪ್ರೀತಿ ವಿಶ್ವಾಸದ ದ್ವಂಸವಾಗುತ ನೀತಿ ನಿಯಮ ಸಾಯುತಿದೆ ನೂರು ಮತಗಳ ಸಾರ ಒಂದೇ ತಿಳಿಯದ ಗಾಂಪರೊಡೆಯನಂತಿದೆಭ್ರಾಂತಿ ಮೋಹಗಳು ದೇಶಪ್ರೇಮ ನೆಮ್ಮದಿಗೆ ಭೀತಿ ಹಬ್ಬಿಸುತಿದೆ ಕೋಮು ಸೌಹಾರ್ಧವನು ಕ್ರೋದಾಗ್ನಿಯಲಿ ತಳ್ಳುತಲಿದೆಸದ್ಗುಣಗಳು ಕ್ಷಾಮಕೆ ತುತ್ತಾಗಿ ಮಾನವೀಯತೆ ಬೆಂದಾಗಿದೆ ಜಾತಿ ಜಂಜಡದಲಿ ನೀತಿಯನು ಬಲಿಕೊಟ್ಟು ಗಹಗಹಿಸುತಿದೆಕುಟಿಲತೆ ವರ್ಧಿಸಿ ಭಾವೈಕ್ಯತೆಗೆ ಮಸಿಬಳಿದಂತಾಗಿದೆ ದಯೆ ಪ್ರೇಮ ಗುಣ ಬೆಳೆಸಿಬಿದ್ದವರನೆತ್ತಿ ಪೋಷಿಸುವಂತಾಗಬೇಕಿದೆಸ್ನೇಹ ಸೌಗಂಧವ ತಾಗಿ ಸಿಪ್ರೀತಿರಸ ಉಣಿಸುವಂತಾಗಬೇಕಿದೆ ************************

ಸೌಹಾರ್ದ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ತೇಜಾವತಿ ಹೆಚ್.ಡಿ. ಮತ್ಲಾಸಾನಿ /ಹುಸ್ನೆಮತ್ಲಾ ಗಜಲ್ ಕಂಡ ಕನಸೆಲ್ಲವೂ ಗುರಿಯ ಮುಟ್ಟವು ಕೇಳುನಡೆದ ಘಟನೆಯೆಲ್ಲವೂ ನನಸಾಗವು ಕೇಳು ವನದ ಸುಮವೆಲ್ಲವೂ ಗುಡಿಯ ಸೇರವು ಕೇಳುಬೀರಿದ ಕಂಪೆಲ್ಲವೂ ಸುಗಂಧ ದ್ರವ್ಯವಾಗವು ಕೇಳು ಅವನಿಯೆದೆಯ ಗೂಡ ಸ್ಪರ್ಶಿಸುವುದು ವರ್ಷಧಾರೆಬಿದ್ದ ಹನಿಗಳೆಲ್ಲವೂ ಸ್ವಾತಿಯ ಮುತ್ತಾಗವು ಕೇಳು ಬಯಲ ಭೂಮಿಯನ್ನೆಲ್ಲ ಹಸನು ಮಾಡಿ ಉಳಬಹುದುಬಿತ್ತಿದ ಬೆಳೆಗಳೆಲ್ಲವೂ ಫಲವ ನೀಡವು ಕೇಳು ಭವದ ಸಾಗರವು ವಿಸ್ತಾರವಾಗಿರುವುದು ಈ ಜಗದಲ್ಲಿಹೊರಟ ನಾವೆಗಳೆಲ್ಲವೂ ದಡವ ಸೇರವು ಕೇಳು ಸಪ್ತ ವರ್ಣಗಳ ಮೂಲವು ಶ್ವೇತವೇ ಆಗಿರುವುದುನೋಡಿದ ಬಿಳುಪೆಲ್ಲವೂ ಕ್ಷೀರವಾಗಲಾರವು ಕೇಳು ಇತಿಹಾಸದ ಚರಿತ್ರೆಯು ದೀರ್ಘವಾಗಿರುವುದು ‘ತೇಜ’ನೆಟ್ಟ ಹೆಜ್ಜೆಗಲೆಲ್ಲವೂ ಗುರುತಾಗಲಾರವು ಕೇಳು ******************************

ಗಝಲ್ Read Post »

ಕಾವ್ಯಯಾನ

ಅವರೆಲ್ಲ ಎಲ್ಲಿ ಹೋದರು?

ಕವಿತೆ ಅವರೆಲ್ಲ ಎಲ್ಲಿ ಹೋದರು? ಜಯಶ್ರೀ ಭ.ಭಂಡಾರಿ. ಹದಿಹರೆಯದ ದಿನಗಳಲ್ಲಿನಮಲೆನಾಡಿನ ಮೂಲೆಯಅಜ್ಜಿಯ ನೆನಪುಸೌದೆ ಒಲೆ ಮೇಲೆಕಾದ ಹಂಡೆ ನೀರುತಲೆಗೆ ಮೈಗೆಎಣ್ಣೆ ಪೂಸಿಆರೈಕೆ ಬೆರೆತ ಅಭ್ಯಂಜನರುಚಿ ರುಚಿ ಊಟಬೆಳಕಿಲ್ಲದ ಕೋಣೆಯಲ್ಲಿಕುಲಾಯಿ ಕಟ್ಟಿಕೊಂಡುಹಾಯಾಗಿ ನಿದ್ರಿಸುವ ಸುಖಪ್ರಕೃತಿ ಹಸಿರು ಸುವ್ವಲಾಲಿಹಾಡಿ ಮಲಗಿಸುತ್ತಿತ್ತುಬಸಿರು ಬಾಣಂತನದಲ್ಲಿ ತಿಂಗಳುಗಟ್ಟಲೆಉಪಚರಿಸುತ್ತಿದ್ದ ತಾಯಿಅಕ್ಕ ಭಾವನ ಸದಾ ಎದಿರುನೋಡುತ್ತಿದ್ದ ಒಲವಿನ ಸಹೋದರಿಯರುಮದುವೆಯಾಗಿ ತಂಗಿ ತವರನಿಂದದೂರಾಗ್ತಾಳೆ ಅಂತ ಕೊರಗುತ್ತಿದ್ದ ಅಣ್ಣಇವರೆಲ್ಲ ಈಗೆಲ್ಲಿ ಹೋದರು? ತಂಗೀನ ಕರೆಯದೆ ಜಾತ್ರೆ ಮಾಡುವ ಅಣ್ಣಅಕ್ಕನ ಕರಿದರೆ ಕಿರಿಕಿರಿ ಎನ್ನುವ ತಮ್ಮಸತಿಮಣಿಯೇ ರ‍್ವಸ್ವ ಎನ್ನುವರಲ್ಲವೃದ್ಧಾಪ್ಯದಲ್ಲಿ ತಂದೆ ತಾಯಿಗಳು ಭಾರಅವರು ಇಂದು ಮನೆಯಿಂದ ಬಹುದೂರಕೂಡಿ ಬಾಳಿದರೆ ಸ್ರ‍್ಗ ಸುಖ ಮರೆತರಲ್ಲಅವಿಭಕ್ತ ಕುಟುಂಬಗಳೆಲ್ಲ ಚೆಲ್ಲಾಪಿಲ್ಲಿಸ್ವರ‍್ಥವೇ ತುಂಬಿಹುದು ಜಗದಲಿ ‌‌‌‌‌‌‌.‌‌‌‌ಅವರು ಇಂದು… ಆಧುನಿಕ ತಲೆಮಾರಿನ ಸೋಗಿನಲ್ಲಿಬದಲಾಗಿದ್ದಾರೆಯೇ?ಎಲ್ಲ ಸಂಬಂಧಗಳು ಈಗ“ಮೇಲ್ಪದರ ಸಂಬಂಧ”ಎನಿಸುತ್ತಿಲ್ಲವೆ?… *******************************

ಅವರೆಲ್ಲ ಎಲ್ಲಿ ಹೋದರು? Read Post »

ಕಾವ್ಯಯಾನ

ಒಂದು ಸುಖದ ಹಾಡು.

ಕವಿತೆ ಒಂದು ಸುಖದ ಹಾಡು. ನಂದಿನಿ ಹೆದ್ದುರ್ಗ ಪ್ರತಿ ಭೇಟಿಗೂ ಅವನುಳಿಸಿಹೋಗುತ್ತಿದ್ದ ಒಂದಾದರೂಕೊರತೆಯ ಕಾವಿನಲಿಬೇಯುತ್ತಾ ಬದುಕಿಕೊಳುವಸುಖದಅಭ್ಯಾಸವಾದವಳು ನಾನು. ಮರೆತೇ ಬಿಟ್ಟ ಈ ಬಾರಿಯಾಕೋ.ತೃಪ್ತ ಎದೆಯಲ್ಲಿ ಚಿಮ್ಮುವವೆತಪ್ತ ಹಾಡುಗಳು.?ಬೇಸರಕೆ ಆಕಳಿಕೆ. ಕತ್ತಿನೆತ್ತರದಲಿ ಅವನಿತ್ತಮುತ್ತುಗಳಅದೋ..ಆ ಮರದಡಿ ಹರಡಿಬಿಟ್ಟೆ..ಅವನ ಹಂಗಿರದೆಹಲವು ನಿಮಿಷಹಾಯೆನಿಸಿತು. ಹೊರಗೆ ಸಣ್ಣಗೆ ಸೋನೆ.ಅವನಿರದ ಎದೆಯೊಳಗೆಮತ್ತವನದೇ ಕಾಮನೆ. ಮೊಳಕೆಯೊಡೆಯುತಿದೆಬಿಸುಟ ಮುತ್ತೊಂದು.ಎರಡೆಲೆಯೆದ್ದು ಕಣ್ಣ ಪಿಳುಕಿಸಿದಒಡನೆಚಿಗುರು ಚಿವುಟಿ ಬಿಸುಟಲುಠರಾವು ಮಾಡಿರುವೆ. ಪಾತಾಳಕಿಳಿಯುತಿದೆ ಬೇರು.ಅವರಿವರಿಗೆ ಅಲ್ಲೊಂದು ಸಸಿಇರುವ ಕುರುಹೂ ಇರದೆ.ಎತ್ತರಕ್ಕಿಂತಲೂ ಆಳದಹುಚ್ಚಿನವಳು ನಾನು. ಅವನ ಸಣ್ಣಗೆ ನೋಯಿಸುತ್ತಒಳಗೊಳಗೆ ನಗುವಾಗೆಲ್ಲಾಕಿರುಬೆರಳನೆರಳೊಂದು ನವುರಾಗಿ ಕೊರಳತಾಕಿ ಹೋಗುತ್ತದೆ.ನಾನೀಗ ಸುಖವಾಗಿರುವೆ..****************************

ಒಂದು ಸುಖದ ಹಾಡು. Read Post »

ಕಾವ್ಯಯಾನ

ಹೃದಯಂಗಮ

ಕವಿತೆ ಹೃದಯಂಗಮ ಸ್ಮಿತಾ ಭಟ್ ನೀನಿರುವುದೇ ಬಡಿದುಕೊಳ್ಳಲುಅನ್ನುವಾಗಲೆಲ್ಲಒಮ್ಮೆ ಸ್ತಬ್ಧವಾಗಿಬಿಡುಎನ್ನುವ ಪಿಸುಮಾತೊಂದ ಹೇಳಬೇಕೆನಿಸುತ್ತದೆ! ‘ಹೃದಯದ ಮಾತು ಕೇಳಬೇಡಬುದ್ಧಿಯ ಮಾತು ಕೇಳು’ಎನ್ನುವ ಫಿಲಾಸಫಿಗಳಎದೆಗಾತುಕೊಳ್ಳುವ ಕಿವಿಗಳಿಗೆ ಇಯರ್ ಪೋನ್ ಜೋತು ಬಿದ್ದುಲಬ್ ಡಬ್ಒಂಟಿಬಡಿತ! ಅಡಿಯಿಂದ ಮುಡಿಯವರೆಗೂಪಾರುಪತ್ಯದ ಅಧಿಕಾರ ಹೊತ್ತರೂನಿರಂತರ ಚಲನೆಯಲ್ಲಿ ನಿಲ್ಲುವ ಅಧಿಕಾರವಿಲ್ಲ! ಚೂರೇ ಚೂರು ದಣಿವಿಗೆ ಕೊಸರಿಕೊಂಡರೂಭುಗಿಲೇಳುವ ಭಯದ ಹನಿ. ಇರ್ರಿ, ಹೃದಯ ಬಡಿತ ಶುರುವಾಗಲಿ ಈಗೇನೂ ಹೇಳುವದಿಲ್ಲ –ಎದೆಯ ಮೇಲೆ ಕೈ ಇಟ್ಟು ಸ್ಕ್ಯಾನಿಂಗ್ ಕೋಣೆಯಿಂದ ಹೊರ ಬರುವ ಜೀವಮನದೊಳಗಿನ ಪ್ರತೀ ಭಾವಕ್ಕೂ ಸ್ಪಂದಿಸಿ –ಲಬ್ ಡಬ್ ಮತ್ತಷ್ಟು ತೀವ್ರ. ಹಿಡಿಯಷ್ಟು ಪುಟ್ಟ ಕೋಣೆಯೊಳಗೆಹಿಡಿಯಲಾರದಷ್ಟು ನೋವು ನಲಿವು ಭಾವ ಜೀವಗಳುಹೃದಯದಿಂದ ಹೊರಟು ಮತ್ತೆ ಹೃದಯಕ್ಕೇಸೇರುವ ತದಾತ್ಮ್ಯಪ್ರೇಮ ಪ್ರವಹಿಸುವ ಪ್ರತೀ ದಾರಿಯಲಿ ಜೀವಕಳೆನದಿಯೊಂದು ಹರಿದು ಸಾಗರದೊಳು ಲೀನವಾಗ ಬಯಸಿದಾಗಲೇಎದೆಯ ಕವಾಟವೊಂದು ಮುಚ್ಚಿಕೊಳ್ಳುವುದು!! **************************

ಹೃದಯಂಗಮ Read Post »

ಕಾವ್ಯಯಾನ

ಕ್ಷಮಿಸಲಾಗದು

ಕ್ಷಮಿಸಲಾಗದು ಸುಧಾ ಹಡಿನಬಾಳ ಹೇ ನಿಷ್ಕರುಣಿ ನಿರ್ಗುಣಿಕರುಣೆಯಿಲ್ಲದ ನಿರ್ದಯಿ ಸಿಂಹಿಣಿಸಾವು ಬರಲೆಂದುದಿನವೂ ಹಂಬಲಿಸುವವರಮೇಲಿಲ್ಲ ನಿನ್ನ ಕರುಣಇನ್ನೂ ಬಾಳಿ ಬದುಕಬೇಕಾದಮುಗ್ಧ ಜೀವಗಳ ಸಂಚು ಹಾಕಿಪ್ರಾಣ ಹೀರಿ ಹೊತ್ತೊಯ್ಯುವನಿನ್ನ ಭಯಾನಕ ಪರಿಸಹಿಸಲಾಗದು ನಿನ್ನ ಕ್ಷಮಿಸಲಾಗದುಯಾಕೆ ನಿನಗೆ ಯಾರ ಯಾರಮೇಲೊ ಕಾಕ ದೃಷ್ಟಿ..?ಒಂದು ಸಣ್ಣ ಸುಳಿವೂನೀಡದೆ ಕಸಿದುಕೊಳ್ಳುವೆಯಲ್ಲಮೊಲೆಯನುಂಬ ಕಂದಮ್ಮಗಳ ತಾಯ್ಗಳಇನ್ನೂ ಬಾಳಿ ಬದುಕಿಎಲ್ಲರಿಗೂ ಬೇಕಾದವರಜೀವಕ್ಕೆ ಜೀವವಾಗಿ ಅರಿತುಬೆರೆತ ಸತಿ ಪತಿಗಳಲ್ಲೊಬ್ಬರಇಳಿ ವಯದಲ್ಲಿ ಊರುಗೋಲಿನಂತೆಆಸರೆಯಾಗಿ ನಿಂತವರಪಾಪ ಪುಣ್ಯ ಎಲ್ಲ ಕಂತೆಪಾಪಿಗಳಿಗಲ್ಲಿ ನಿಶ್ಚಿಂತೆಮುಗ್ಧ ಮಾನವಂತರಿಲ್ಲಿನಿನ್ನ ತೋಳ ತೆಕ್ಕೆಯಲ್ಲಿನಿನಗಿಲ್ಲ ಯಾರ ಮೇಲೂದಯೆ, ಪ್ರೀತಿ, ಕರುಣನಿನ್ನ ಹೆಸರೆ ಅಲ್ಲವೆ ಮರಣನಿನಗೆ ಎಳೆದೊಯ್ಯಲುಕಾರಣ ಬೇಕೆಂದಿಲ್ಲಬೇಕು ಒಂದು ನೆಪಇನ್ನು ಸಾಕು ನಿಲಿಸುನಿನ್ನ ಕರುಣೆಯಿಲ್ಲದ ಕೃತ್ಯವಕೃಪೆ ಮಾಡಿ ದಯೆ ತೋರುಉಳಿಸು ಎಳೆಯ ಜೀವವ. ****************************z

ಕ್ಷಮಿಸಲಾಗದು Read Post »

You cannot copy content of this page

Scroll to Top