ಗಾಂಧಿ
ಕವಿತೆ ಗಾಂಧಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು. ಹದಿಹರೆಯದಲ್ಲಿ ಶ್ರವಣನನ್ನೂ ಹರಿಶ್ಚOದ್ರನನ್ನೂಅಡ್ಡೆಯಲ್ಲಿ ಕೂರಿಸಿ ಹೆಗಲಲ್ಲಿ ಹೊತ್ತು ನಡೆಯಲಾರಂಭಿಸಿದ ಈತಒಂದೂವರೆ ಶತಮಾನದಿಂದ ನಡೆಯುತ್ತಲೇ ಇದ್ದಾನೆಹೇ ರಾಮ್… ಹೇ ರಾಮ್… ಎನ್ನುತ್ತ…ಎಷ್ಟೋ ಬಾರಿಅಡ್ಡೆಯಲ್ಲಿ ಕುಳಿತ ಶ್ರವಣನಿಗೆ ವ್ರಣವಾಗಿದ್ದುಂಟುಹರಿಶ್ಚಂದ್ರನಿಗೆ ಭಗಂದರವಾಗಿ ನರಳಿದ್ದುಂಟುಆಗೆಲ್ಲ ತನ್ನ ಹೃದಯದಲ್ಲೇ ಹುಣ್ಣು ಆದವನಂತೆಪಶ್ಚಾತ್ತಾಪದ ಕಂಬನಿಯಲ್ಲಿ ನೆನೆಸಿದ ಮದ್ದು ಪಟ್ಟಿಯನ್ನು ಕಟ್ಟಿಹಗಲು ರಾತ್ರಿ ಶುಶ್ರೂಷೆ ಮಾಡಿಬರಿಗಾಲಲ್ಲಿ ಬಿಸಿಲು ಮಳೆ ಚಳಿ ಗಾಳಿಯೆನ್ನದೆ ನಡೆದಿದ್ದಾನೆಬಸುರಿ ಸೀತೆ ಹೊಟ್ಟೆಯೊಳಗೆ ಅವಳಿಭ್ರೂಣಗಳ ಹೊತ್ತು ತಿರುಗಿದಂತೆ ಹಾದಿಯುದ್ದಕ್ಕೂ ಕಸಾಯಿ ಮಾಂಸದಂಗಡಿಗಳಲ್ಲಿತಲೆ ಕೆಳಗಾಗಿ ನೇತಾಡುತ್ತ ಸಿಪ್ಪೆ ಸುಲಿಸಿಕೊಂಡು ಚೀರಾಡುವ ಆಡು ಕುರಿ ಕೋಳಿಗಳನಡುವೆ ಹಿಟ್ಟು ನಾದಿ ಮೊಟ್ಟೆಯಾಕಾರದಲ್ಲಿ ಲಟ್ಟಿಸಿಬೆಂಕಿಯಲ್ಲಿಅಹಿಂಸಾ… ಅಹಿಂಸಾ… ಎಂದುಚೀರುತ್ತಲೇ ಸುಟ್ಟ ರೊಟ್ಟಿಯಂತಹ ಹೃದಯ ಹೊತ್ತು ಒಣಕಲು ರೊಟ್ಟಿಯಂತಹ ದೇಹದ ದಂಟು ಕೈ ಕಾಲುಗಳಲ್ಲಿ ಹಾರು ನಡಿಗೆಯಲ್ಲಿ ಓಡುತ್ತಿದ್ದಾನೆಕಡಲ ತಡಿಯಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಕುಳಿತವನ ಹೃದಯಬಾಯ್ಬಾಯ್ ಬಿಡುತ್ತಿರುವ ಬಂಗುಡೆ ಮೀನಿನ ಮೈಗೆ ಉಪ್ಪು ಖಾರ ಹಚ್ಚಿದಂತೆ ಬೇಯುತ್ತ ಚೀರುತ್ತಿದೆ ಕೃತ ತ್ರೇತಾ ದ್ವಾಪರ ಕಲಿ ಕಾಲಗಳುಯುದ್ಧ ಕೊಲೆ ರಕ್ತಪಾತದಲ್ಲಿ ನೆಂದುಪೂವ೯ದಲ್ಲಿ ಮೂಡಿದ ಸೂಯ೯ನನ್ನೇ ನುಂಗಿ ಪಶ್ಚಿಮಕ್ಕೆ ಉಗುಳುತ್ತಿವೆನೀಲಿ ಆಗಸದಲ್ಲಿ ನೀಲಿ ಕಡಲಲ್ಲಿಕೆಂಪು ಬಟ್ಟೆಯ ಹೆಣಗಳ ರಾಶಿತೇಲುತ್ತಿವೆಕೈಗಳನ್ನು ಚಾಚುತ್ತ ಅಹಿಂಸೆ ಅಹಿಂಸೆ… ಹೇ ರಾಮ್ ಹೇ ರಾಮ್ ಎಂದು ಚೀರುತ್ತಲೇ ಇವೆ ಅಡ್ಡೆ ಹೊತ್ತ ತಾತ ನಡೆಯುತ್ತಲೇ ಇದ್ದಾನೆಅವನ ಎದೆಯೊಳಗಿನ ಅಹಿಂಸೆಯಬೆಂಕಿಯ ಬೇಗೆ ಸಹಿಸಲಾಗದೆಫರಂಗಿಗಳು ಹೊರಗೆ ಓಡಿ ಹೋಗಿದ್ದಾರೆ…ಗೋಡ್ಸೆ ಕೋವಿ ಸಹಿತ ಒಳ ನುಗ್ಗಿದ್ದಾನೆಹೇ ರಾಮ್….! ಕಣ್ಣು ಮುಚ್ಚಿದಾಗೆಲ್ಲಎವೆಗಳ ಪರದೆಯ ಒಳಗೆಬಿಳಿ ಕಚ್ಚೆಯ ಸಣಕಲು ಕಪ್ಪು ಮೈಯ ಆತ ಬೀಸ ಬೀಸಓಡು ನಡಿಗೆಯಲ್ಲಿ ನಡೆಯುತ್ತಲೇ ಇರುತ್ತಾನೆಮೆದುಳಿನಿಂದ ಹೃದಯಕ್ಕೆಹೃದಯದಿಂದ ಮೆದುಳಿಗೆಬೆಳಕು ಹೊತ್ತ ಮಿಣುಕು ಹುಳದಂತೆ ಇಡೀ ಲೋಕದ ಹೃದಯ ಹೊಕ್ಕುಅಲ್ಲಿಂದ ಮೆದುಳಿಗೇರುತ್ತ ಇಳಿಯುತ್ತ ಏರುತ್ತ ಇಳಿಯುತ್ತನಡೆಯುವ ಮೊದಲುಆತ ತನ್ನೊಳಗೆೇ ಕವುಚಿ ಬಿದ್ದು ಹೊಟ್ಟೆ ಎಳೆದು ಅಂಬೆ ಹರಿದುಕುಳಿತು ನಿಂತು ಬಿದ್ದು ಎದ್ದುನಡಿಗೆ ಕಲಿತಿದ್ದನಂತೆಅದನ್ನು ನೋಡಲೆಂದು ಅವನೊಳಗೇಸೂಯ೯ ಮೂಡಿದ್ದನಂತೆ ಬೆಳಕು ಕೋಲನು ಊರಿಕತ್ತಲ ಕೋಲ್ಮಿಂಚಂತೆಬೀಸ ಬೀಸ ನಡೆಯುವ ಈ ಅಜ್ಜಅಜ್ಜನಲ್ಲ… ಗಲ್ಲದಲ್ಲಿ ಮೊಲೆಹಾಲುಕ್ಕಿಸುತಬೊಚ್ಚು ಬಾಯಲ್ಲಿ ನಗುವ ಮಗುಎದೆ ಎದೆಗಳಲ್ಲಿ ಹರಿಯುವ ಶಾಂತಿಗೊಂದು ರೂಪ ಕೊಟ್ಟು ನೋಡಿರಿ…ಅವ ಗಾಂಧಿ ಮನೆ ಮನೆಯಲ್ಲೂ ಗಾಂಧಿಯುಹುಟ್ಟುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಮುದ್ದು ಮುದ್ದಾಗಿ ನಗುತ್ತಮನೆ ಮನೆಯಲ್ಲೂ ಗಾಂಧಿ ಸಾಯುತ್ತಲೇ ಇರುತ್ತಾನೆಬೊಚ್ಚು ಬಾಯಲ್ಲಿ ಹೇರಾo ಎನ್ನುತ್ತಗೋಡ್ಸೆಯ ಗೋಡೆ ಗೋಡೆಗಳ ನಡುವೆ ಹಿಂಸೆಯ ಗೋಲಿಗಳಿಗೆ ಎದೆಯೊಡ್ಡಿ… ಇವನನ್ನು ಕ್ಷಮಿಸು ಎಂದು ಯೇಸು ವಾಗುತ್ತಅಂಗುಲೀ ಮಾಲನ ಕಂಬನಿಯಲ್ಲಿ ತೊಯ್ದ ಬುದ್ಧನಾಗುತ್ತ ***********************









