ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಪಾತ್ರೆಗಳು ಪಾತ್ರವಾದಾಗ

ಕವಿತೆ ಪಾತ್ರೆಗಳು ಪಾತ್ರವಾದಾಗ ಶಾಲಿನಿ ಆರ್. ಬೇಳೆ ಬೇಯಿಸೋಕೆಪಾತ್ರೆ ಬೇಕೆ ಬೇಕು!ಹೊಟ್ಟೆ ತುಂಬಿಸೋಕೆಮನದ ಅಗಣಿತಭಾವಗಳತಣಿಸೋಕೆ? ಹುಟ್ಟಿದ ಹಸಿವಿಗೆತಿನುವ ಹಂಬಲಕೆರುಚಿ ನೋಡೋಕೆಕಾದ ಮನಗಳಿಗೆಉಣ ಬಡಿಸೋಕೆಹೇಗಾದರೂ ಸರಿ! ಹದವಾದ ರುಚಿತರಿಸಬೇಕು,ಬೆಂದ ಬೇಳೆಗಳಬತ್ತಿಸಿ,ಕರಗಿಸಿಗುರಾಡಿ ,ಬಾಡಿಸಿಮತ್ತಷ್ಟು ನೀರುಣಿಸಿನೆಪಕ್ಕೊಂದು ಪಾತ್ರೆಯಿರಿಸಿ! ಹಸಿದವರಿದ್ದರೆಹೇಳಿ?ಬೆಂದ ಬೇಳೆಗಳ ರುಚಿಗೆ!ಹಸಿವಿಲ್ಲದವರನ್ನುಕರೆತನ್ನಿ ,ಹಸಿವ ಇಂಗಿಸಲೋ?ಇಲ್ಲವಾದರೆ,ರುಚಿ ಸವಿಯಲು! ಸ್ವಲ್ಪ ಹುಳಿ,ಖಾರಒಗ್ಗರಣೆ ಸಾಕು!ಇನ್ನಿತರ ಮಸಾಲಪದಾರ್ಥಗಳುಬೇಕಿದ್ದರೆಪಾತ್ರಕ್ಕೊಪ್ಪುವಂತೆ!ರುಚಿಗೆ ಇಂತಿಷ್ಟೇ ಉಪ್ಪು,ಮುಖ ಕಿವುಚದಂತೆ ಮತ್ತೆ! ಹಿತ ಮಿತವಾದಪದಾರ್ಥಗಳುಪಾತ್ರಗಳ ಸೋಕಿನಾಲಿಗೆಯ ರುಚಿ!ಮನಕಿಳಿದ ಗೆಲುವೋ?ಬೆಂದ ಬೇಳೆಯದೋಮನದಗಲದಪಾ(ತ್ರೆ)ತ್ರ ದೋ??? ****************************************************

ಪಾತ್ರೆಗಳು ಪಾತ್ರವಾದಾಗ Read Post »

ಕಾವ್ಯಯಾನ

ಜೀಕು ಜೋಕಾಲಿ

ಜೀಕು ಜೋಕಾಲಿ ಕೆ.ಸುನಂದಾ ಸಾಗುತಿರಲೀ ಪಯಣ ನಿಲ್ಲದೇ ಬಾಳಲಿಏಳು ಬೀಳುಗಳೆನಿತು ಬಂದರೂ ಬರಲಿಕಾರ್ಮೋಡ ಕರಗುತ ಸರಿಯಲೇಬೇಕುಹಸನಾದ ಹೊಂಬೆಳಕು ಸೂಸಲೇಬೇಕು ಬದುಕೊಂದು ಆಟ ಸವಿಯ ರಸದೂಟಆಸ್ವಾದಿಸುತ ನಡೆ ಸುಂದರದಾ ನೋಟದೇವನಿತ್ತ ಕಾಣಿಕೆ ಈ ಜಗದ ಚಲನೆಯುನಾವೆಲ್ಲರೂ ಅವನಾಟದ ಗೊಂಬೆಯು ಒಲವಿನ ಹಂದರದಿ ಜೀಕುತ ಜೋಕಾಲಿಏರಿಳಿಯುತ್ತ ಸಾಗು ನೀ ಸಮಭಾವದಲಿಸ್ಥಿರವಲ್ಲವೋ ಬಂಧನಗಳು ಭುವಿಯಲಿಇದ್ದರೂ ಇಲ್ಲದಂತೆ ಇರಬೇಕು ಜಗದಲಿ ಪ್ರೀತಿ ಪ್ರೇಮದ ಮನಸ್ಸುಗಳೆ ಆಲಯವುಅಂತರಾತ್ಮನೇ ಗರ್ಭಗುಡಿಯ ದೇವನುವರ್ಣಿಸಲಾಗದ ಪ್ರಕೃತಿಯ ಪೂಜಿಸುತ್ತನಡೆ ನೀ ಉಪಕಾರ ಸ್ಮರಣೆ ನೆನೆಯುತ್ತ **************************************

ಜೀಕು ಜೋಕಾಲಿ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ಧರಾಮ ಕೂಡ್ಲಿಗಿ ಮನದ ದುಗುಡ ಕಳೆಯಲಿಕ್ಕೆ ಇರುವುದೊಂದು ಕಿಟಕಿ ಜಗದ ತಮವ ತೊಡೆಯಲಿಕ್ಕೆ ಇರುವುದೊಂದು ಕಿಟಕಿ – ಅರಿವ ಕುಡಿದು ಎದೆಯ ತೆರೆದು ಮೂಡಿತೊಂದು ಕನಸು ಬಯಲ ಹಕ್ಕಿ ಮೇಲೆ ಹಾರಲಿಕ್ಕೆ ಇರುವುದೊಂದು ಕಿಟಕಿ – ಏನೊಂದೂ ಇರದ ತಾಣದಿಂದ ತೇಲಿ ಬಂತೊಂದು ರಾಗ ರಾಗದೊಳಗೆ ರಾಗ ಮೂಡಲಿಕ್ಕೆ ಇರುವುದೊಂದು ಕಿಟಕಿ – ಸೂರ್ಯ ಚಂದ್ರ ತಾರೆ ಧೂಮಕೇತು ಮತ್ತದೇ ಕಾಲಚಕ್ರ ಜೀವಸೆಲೆಯ ಸುರುಳಿ ಮೂಡಲಿಕ್ಕೆ ಇರುವುದೊಂದು ಕಿಟಕಿ – ನೊಂದು ಬೆಂದು ದಹಿಸಿಕೊಂಡು ಅರಳಿತೊಂದು ಹೂವು ನೆಲದ ಒಡಲ ಹಾಡು ಕೇಳಲಿಕ್ಕೆ ಇರುವುದೊಂದು ಕಿಟಕಿ **************************************************

ಗಜಲ್ Read Post »

ಕಾವ್ಯಯಾನ

ಆಗು ಅನಿಕೇತನ…!!

ಆಗು ಅನಿಕೇತನ…!! ಡಾ.ಉದಯ ಧರ್ಮಸ್ಥಳ ಆಹಾ…ಮನುಜ ಮತಿಯೇ…!ಏನೆಂಬೆ ನಿನ್ನ ನಿರ್ಣಯಗಳಿಗೆ…!ಬಡವನಿಗೆ ಮಗನಾಗಿ ಬಂದರೆ ಪ್ರಾರಬ್ದವೆಂಬೆ…ಸಿರಿಮನೆಯ ಸಂತಾನ ಅದೃಷ್ಟವೆಂಬೆ…!ಗೊಡ್ಡು ಪಾಪಿಯವಳಂತೆ ಹೆರದ ಹೆಂಗಸಾಕೆ…!ಹೆಡ್ಡುನಂಬಿಕೆಗಳವು ಹಿಂಬಾಲಿಸುವ ಕಂತೆಯಂತೆ…!ಇದ್ದಕ್ಕಿದ್ದಂತೆ ಎದೆಯೊಡೆದು ಸಾಯೆ ಪುಣ್ಯಮರಣವದಂತೆ…!ಹಲವುದಿನ ನರಳಾಡಿಯೋಡಿದವ ಪಾಪಿಯಂತೆ….!ಹುಚ್ಚು, ಕಾಣದ ಆಚೆ ಸುಖ ದುಃಖಗಳ ಅಲೋಕಗಳಂತೆ…!ನಂಬಿಸುವ ನರಳಿಸುವ ಬಗ್ಗಿಸುವ ಬಾಗಿಸುವ ಹಿಂಸಿಸುವ ಹಿಂಡು ಪುರಾತನ ಸಂತೆ…!ಮನ ಮತಿ ಗತಿ ಜಾತಿ ಭ್ರಾಂತಿ ಭ್ರಮೆಯ ಭ್ರಮಣ ಎಲ್ಲಕ್ಕಿಂತಲೂ ಕತ್ತಲೆಕಳೆವ ಕಾಲವಾಗಲಿ ಸಂಕ್ರಮಣ..!ಕೊರಡು ಕಳೆದೊಗೆಯೆ ಧೃತಿಗದೇನೋ ಕಟ್ಟುಪುರಾಣ…!ಇದ್ದಾಗ ಸಹಕರಿಸುಬಿದ್ದಾಗ ಮೇಲೆತ್ತುಒದ್ದಾಗ ಗುಮ್ಮಿಬಿಡು…!ಸಾವು ಸಹಜ…ಅದಕೂ ಮೊದಲು ಬದುಕೂ ಮುಖ್ಯ ಕಂಡರೆ ಕಾಣುಕಾಣದಿರೆ ಕಣ್ಮುಚ್ಚು…!ಸಹಿಸು ಸಹಿಸುವ ತನಕ…!ಅಸಹ್ಯವಾದಾಗ ಮುಗಿದುಬಿಡು….!ವೃಂದಾವನ ಗದ್ದುಗೆ ಸಮಾಧಿಯಡಿ ಹುದುಗದಿರು….!ನೀರಲ್ಲಿ, ಬೆಂಕಿಯಲಿ, ಮಣ್ಣಲ್ಲಿ ಸೇರಿಬಿಡಲಿ ಭೌಮಿಕ ದೇಹ…!ಗುರುತು ಸಿಗದಿರಲಿ…ಕುರುಹು ಬಿಟ್ಟರೆ ಸತ್ತ ಬದುಕನ್ನೂ ಸಿಗಿದು ಸೊಕ್ಕುವರಯ್ಯಾ ಮುಂದಿನ ನರರು…! ಆ ಗೀತೆ ಸತ್ಯ….ಅದುವೇ ನಿತ್ಯ…. ಆಗು ಅನಿಕೇತನ…!! –

ಆಗು ಅನಿಕೇತನ…!! Read Post »

ಕಾವ್ಯಯಾನ

ಕರುನಾಡು (ಭೋಗಷಟ್ಪದಿ)

ಕರುನಾಡು (ಭೋಗಷಟ್ಪದಿ) ಶುಭಲಕ್ಷ್ಮಿ ಆರ್ ನಾಯಕ (ಮೂರು ಮಾತ್ರೆಯ ಗಣಗಳು) ಎನಿತು ಅಂದ ನಮ್ಮ ನಾಡುಎನಿತು ಮಧುರ ನಮ್ಮ ನುಡಿಯುವೈಭವದ ಇತಿಹಾಸದ ಚೆಲುವ ಕರುನಾಡುಕೆಚ್ಚೆದೆಯ ಕಲಿಗಳ ನಾಡುಹಚ್ಚ ಹಸಿರ ಸೊಬಗ ಬೀಡುವೀರ ಯೋಧರ ತ್ಯಾಗ ಮೆರೆದಿಹ ಕರುನಾಡು//೧// ಸಾಧು ಸಂತರು ಅವತರಿಸಿಪಾವನಗೊಳಿಸಿದರು ನಾಡಕಟ್ಟಿದರು ಅವರು ಸಮತಾಭಾವದಿ ಬೀಡಪುಣ್ಯನದಿಗಳು ಪ್ರವಹಿಸಿಪಾಪ ತಿಕ್ಕಿ ತೊಳೆದು ಧನ್ಯಮಾಡಿವೆ ನಮ್ಮೆಲ್ಲರ ಕರುನಾಡ ಬೀಡಲಿ//೨// ಮಣ್ಣ ಕಣಕಣದಲಿ ಒಲವುಗೆಲುವ ಗೇಯದಲಿ ಒಲುಮೆಯುಕನ್ನಡಿಗರ ಮನದಲಿ ಮಿಡಿದಿಹುದು ನೋಡಿರಿಮಾನ್ಯವಿರಲಿ ನಾಡು ನುಡಿಗೆಬಳಕೆಯಾಗಲಿ ಕನ್ನಡವುಆರದೆ ಉರಿಯಲಿ ಕನ್ನಡದನಾಡ ದೀಪವು//೩// ಹರಿದು ಹೋಗದಿರಲಿ ನಾಡುಮುರಿದು ಹೋಗದಿರಲಿ ಭಾಷೆಹರಡಲಿ ಎಲ್ಲೆಲ್ಲೂ ಕನ್ನಡದ ಪರಿಮಳವುಕನ್ನಡ ಉಲಿವಾಗ ಬೇಡಕೀಳರಿಮೆಯು ಕನ್ನಡಿಗರೆಮುಡಿಪಿಡೋಣ ನಾಡು ನುಡಿಯ ಸೇವೆಗೆ ಜೀವ//೪// ****************************************

ಕರುನಾಡು (ಭೋಗಷಟ್ಪದಿ) Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ದರಾಮ ಹೊನ್ಕಲ್ ಹೇಳಬೇಕಾದ ಮಾತೆಲ್ಲವನು ಹೇಳಿಯಾಯಿತು ಮತ್ತೇನು ಮಾಡಲಿಕೇಳಬೇಕಾದ ಮಾತೆಲ್ಲ ಮತ್ತೆ ಕೇಳಿಯಾಯಿತು ಮತ್ತೇನು ಮಾಡಲಿ ತಿಳಿಯದವರಿಗೆ ತಿಳಿಸಬಹುದು ತಿಳಿದು ಮೌನ ಆದರೇನು ಮಾಡಲಿಮನದ ಬಯಕೆ ಬಾಯಿಬಿಟ್ಟು ಕಂಗಾಲಾಯಿತು ಮತ್ತೇನು ಮಾಡಲಿ ಕಾಯ ಕಾಯಬೇಕು ನಿಜ ಆ ಕಾಯುವಿಕೆಗೆ ಕೊನೆ ಯಾವಾಗಪಿಸುಮಾತು ಬಿಸುಮಾತಾಗಿ ಆಟವಾಯಿತು ಮತ್ತೇನು ಮಾಡಲಿ ಪ್ರೀತಿಯಲಿ ಬಿದ್ದವರೆಲ್ಲ ಹುಚ್ಚರೆಂಬ ಸತ್ಯ ಇಡೀ ಜಗವು ಬಲ್ಲದುಸತ್ಯ ಹುಚ್ಚೆನಿಸಿ ಬಾಗಿಲು ಮುಚ್ಚಿಯಾಯಿತು ಮತ್ತೇನು ಮಾಡಲಿ ಹೇಳಿ ಕೇಳಿ ಬೇಸತ್ತು ಬಸವಳಿದು ಹೋಗಿಹನು ನೀ ಬಲ್ಲೆ ಸಾಕಿತರವಲ್ಲ ತಿಳಿ ನೀ ಬರೀ ಕಾಡುವದಾಯಿತು ಮತ್ತೇನು ಮಾಡಲಿ ತನ್ನ ಪಾಡಿಗಿದ್ದವನ ಸುತ್ತ ಸುಳಿದು ಹುಚ್ಚುಹಚ್ಚಿ ಕೈ ಬಿಡೋದು ನ್ಯಾಯವೆಕಷ್ಟ ಸುಖದ ನಾಲ್ಕುಮಾತು ಇಲ್ಲವಾಯಿತು ಮತ್ತೇನು ಮಾಡಲಿ ಅದಕೆ ಜಿಪುಣತನ ಬಂದರೆ ಬರಗೆಟ್ಟ ಹೊನ್ನು’ ಬದುಕಿಗೆ ಏನರ್ಥ ಸಾಕಿಮನೆ ಮನ ಇಡೀ ಜೀವ ಕಾಯುವದಾಯಿತು ಮತ್ತೇನು ಮಾಡಲಿ *********************************************

ಗಜಲ್ Read Post »

ಕಾವ್ಯಯಾನ

ಕಾವ್ಯಯಾನ

ರೊಕ್ಕದಿ ದಕ್ಕದೊಡವೆ ಅವಳು ನಿನ್ನ ಹೆತ್ತು ಹೊತ್ತವಳು ಹೆಣ್ಣುವಾತ್ಸಲ್ಯದಿ ಸಲಹಿದವಳು ಹೆಣ್ಣುಅವಳ ಮೇಲೆ ಹಸಿದ ಪಿಶಾಚಿಗಳ ಕಣ್ಣುಕಾಮದಬ್ಬರದಿ ಸಿಲುಕಿ ಆದಾಳೋ ಮಣ್ಣು ಹೆಜ್ಜೆ ಹೆಜ್ಜೆಗೂ ಸಜ್ಜಿಕೆಯನ್ನೇರಿಯಶಸ್ಸಿನ ಮುಕುಟ ಧರಿಸಿದರುಕಾಮ ಪಿಪಾಸುಗಳ ಹಸಿವಲಿನಲುಗಿಹಳು ಕಮರಿಹಳು ಬಡಪಾಯಿ ಹೆಣ್ಣ ತಿನ್ನುವಆಸೆ ಏಕೆ ಪಿಪಾಸುಗಳೇಈ ಘೋರ ತುಂಬಿದ ಕೃತ್ಯಕ್ಕೆಬೀದಿ ನಾಯಿ ಕಣ್ಣೀರಿಡುತ್ತಿದೆ ಅವಳ‌ ಹರಿದು ಸೊಕ್ಕಲ್ಲಿಮುಕ್ಕವೆಯಾಹೊಕ್ಕಳಿನ ನಂಟಿಟ್ಟು ಮುತ್ತಿಕ್ಕಿದಸಂಕುಲದವಳು, ರಕ್ಕಸನು ಹೊಕ್ಕಿದನೇನಿನ್ನ ರೊಕ್ಕದಿ ದಕ್ಕಿಸಲಾರದ ಒಡವೆಯವಳು ಅಳಿಸದಿರು ಕಣ್ಣೀರು ತರಿಸದಿರುನಿನ್ನಾಸೆಯ ಹಸಿವಲ್ಲಿ ದಹಿಸದಿರುಅವಳ ಮನಸು ನೋಯಿಸದಿರುಹಸಿವ ಹಿಂಗಿಸಿ ಉಸಿರಾಡಲು ಬಿಡು **************************************** ಚಂದ್ರು ಪಿ.ಹಾಸನ

ಕಾವ್ಯಯಾನ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಶ್ರೀ ಲಕ್ಷ್ಮಿ ಅದ್ಯಪಾಡಿ ನಿನ್ನ ಉಸಿರ ರಾಗಕ್ಕಾಗಿ ಹುಡುಕಾಡುತ್ತಿರುವೆನಿನ್ನ ಒಲವ ಪಿಸುನುಡಿಗಾಗಿ ಹುಡುಕಾಡುತ್ತಿರುವೆ.. ಕದ್ದು ನೋಡುವ ಸಾವಿರಾರು ಕಣ್ಣುಗಳ ನಡುವೆನಿನ್ನ ಪ್ರೇಮದ ನೋಟಕ್ಕಾಗಿ ಹುಡುಕಾಡುತ್ತಿರುವೆ.. ನನ್ನ ಕುಡಿ ನೋಟಕ್ಕೆ ಕಾದಿವೆ ನೂರು ಭ್ರಮರಗಳುಕೆನ್ನೆ ಸವರಿದ ಪುಟ್ಟ ಹೂವಿಗಾಗಿ ಹುಡುಕಾಡುತ್ತಿರುವೆ.. ಬಣ್ಣಗಳಲ್ಲಿ ಅದ್ದಿದ ಸಾವಿರ ಕುಂಚಗಳು ಕಾದಿವೆನಿನ್ನ ನೆನಪಿನ ಒಂದು ರೇಖೆಗಾಗಿ ಹುಡುಕಾಡುತ್ತಿರುವೆ ಜಗದ ಬನದೊಳು ಅರಳಿವೆ ವಿಧವಿಧವಾದ ಹೂಗಳುಒಡಲ ಕಂಪು ಸೂಸಿದ ಕಸ್ತೂರಿಗಾಗಿ ಹುಡುಕಾಡುತ್ತಿರುವೆ *****************************

ಗಜಲ್ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಸಿದ್ದರಾಮ ಹೊನ್ಕಲ್ ನಿನ್ನ ನೋಟ ಬಲು ಹಿತ ನೀಡಿದೆ ನೀ ಕಾಡಿಸುತ್ತ ಕೂಡಬೇಡದಿನಗಳು ದೀರ್ಘವಾಗಿಹವು ಆ ಮಾತನೇ ನೀ ಮುತ್ತಾಗಿಸಬೇಡ ನನ್ನ ಕಣ್ಣ ರೆಪ್ಪೆಗಳು ಕಣ್ಢೀರ ಬಿಸಿಗೆ ಕಣ್ಣೀರು ಮಿಡಿದಿವೆಕಲ್ಲು ಹೃದಯವಲ್ಲ ನಿನ್ನದು ಇಷ್ಟು ಕಠೋರ ನಟನೆಬೇಡ ಬೀಸುವ ತಂಗಾಳಿ ಸೂರ್ಯಚಂದ್ರರ ಸಹಜತೆ ಬೇಡವೆಜಗಕೆ ಬಂದವರಿಗೆಲ್ಲ ಒಂದೊಂದು ಬವಣೆ ನೀ ಚಿಂತಿಸಬೇಡ ನಾನೊಂದು ತೀರ ನೀನೊಂದು ತೀರವೆಂದು ನೊಂದೆಯಲ್ಲಾಮಧ್ಯೆ ಹರಿವ ಪ್ರೇಮದ ಹರಿವು ತಿಳಿಯದೇ ನೀ ಇರಬೇಡ ಇಂದಲ್ಲಾ ನಾಳೆ ವಜ್ರಲೇಪಿತ ಕುಸುಮ ಸುಖದಿ ಅರಳಿತುಕಳವಳಿಸದಿರು ಏಲೇ ಮನವೇ ಹತಾಶದಿ ನೀ ಸೋಲಬೇಡ ಮಧುರ ಪ್ರೇಮವಿಲ್ಲದೇ ಈ ಜೀವಕೆ ಜೀವನ ಬೇಕೆ ಸಾಕಿಹೊನ್ನು’ಲಕ್ಷ ಭಾವತುಂಬಿ ಪ್ರೀತಿ ದಕ್ಕದ ಫಕೀರ ಆಗಿಸಬೇಡ **********************************

ಗಜಲ್ Read Post »

You cannot copy content of this page

Scroll to Top