ಅಪರಿಚಿತನಾಗಿಬಿಡು
ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ
ಅನ್ನದೇವನೋ ಪನ್ನದೇವನೋ ಈಗಿಲ್ಲಿ ಅಪ್ರಸ್ತುತ
ನೀನೆಷ್ಟೇ ಚಿರಾಡಿದರೂ ಕಿರುಚಾಡಿದರೂ
ಅನ್ನ ಉತ್ಪಾದಕ ಎಂದು ಮೈಮೇಲಿನ ಅಂಗಿ ಹರಿದುಕೊಂಡರೂ
ಪ್ರಯೋಜನ ಇಲ್ಲ
ಬದುಕು ಒಂದು ನಿಪುಣ ಜೂಜುಗಾರ
ಇನ್ನೇನು ಗೆದ್ದೇ ಬಿಟ್ಟೆವು ಎಂದು ಬೀಗುವವರನ್ನು
ಗೆಲುವಿನ ಕನಸೂ ಕಾಣದಂತೆ ಸೋಲಿಸಿಬಿಡುತ್ತದೆ
ಇತಿಹಾಸದ ಯಾವ ಕಾಲ ಘಟ್ಟಕ್ಕೂ
ಆದರ್ಶಗಳಾಗದ
ನಮ್ಮ ನಮ್ಮವರ ಕಥೆಗಳ ಹಿಡಿದು
ಕಟ್ಟಬೇಕಿದೆ ಗೆಳೆಯ
ನಮ್ಮ ಒಡಲ ಕುಡಿಗಳಿಗಾದರೂ
ದಾರಿಯಾಗಲೆಂದು
ನೂರಾರು ಕನಸುಗಳನ್ನು ನುಚ್ಚಿನ ಗಡಿಗೆಗೆ ಹಾಕಿ
ಹುಟ್ಟು ತಿರುಗಿಸುವ ಹರೆಯದ ಮಗಳು
ಜೀತಕ್ಕಿದ್ದ ಚೊಚ್ಚಲ ಮಗನನ್ನು ಕಂಡು
ಅಮ್ಮ ಬಿಕ್ಕಳಿಸಲಿಲ್ಲ
ಅಮ್ಮನ ಬಿಕ್ಕಳಿಕೆ ನಿಲ್ಲಿಸುವಿರಾ ? Read Post »
ಕವಿತೆ ಮಾತು ಮತ್ತು ಹೂ ಸಿದ್ಧರಾಮ ಕೂಡ್ಲಿಗಿ ಅವರಿವರು ಆಡಿದ ಮಾತುಗಳನೀಗ ಹೆಕ್ಕುವುದೇ ಒಂದು ಕೆಲಸವಾಗಿದೆ – ಕೆಲವು- ತರಗೆಲೆಗಳಂತೆ ಕಣ್ಣೆದುರೇ ತೂರಿಹೋಗುತ್ತವೆ – ಕೆಲವು- ನೆಲದಾಳದ ಎದೆಯಲಿ ಭದ್ರವಾಗಿ ಕೂತು ಚಿಂತಿಸಿ, ಮೊಳಕೆಯೊಡೆದು ಗಿಡವಾಗುತ್ತವೆ ಕೆಲವು ಹೂವರಳಿಸುತ್ತವೆ ಕೆಲವು ಮುಳ್ಳುಗಳಾಗುತ್ತವೆ – ಕೆಲವಂತೂ- ಹೆಮ್ಮರಗಳಾಗಿ ಬೀಳಲು ಬಿಟ್ಟುಬಿಡುತ್ತವೆ – ಕೆಲವು- ಮಾತುಗಳನ್ನು ಕನ್ನಡಿಯ ಮುಂದೂ ಆಡಿದ್ದೇನೆ ಅದು ಮುಗುಳ್ನಕ್ಕು ಸುಮ್ಮನೆ ನುಂಗಿ ಗೋಡೆಗೆ ಆನಿಕೊಂಡಿದೆ – ಅವರಿವರ ಎದೆಗಳ ಹುದುಲಿನಲ್ಲಿ ಸಿಕ್ಕಿಹಾಕಿಕೊಂಡ ಮಾತುಗಳನ್ನೂ ನಾನೀಗ ಕಿತ್ತು ತೆಗೆಯಬೇಕಿದೆ ಸ್ವಚ್ಛಗೊಳಿಸಿ ತೋರಬೇಕಿದೆ ಹುದುಲು ಪದಗಳದಲ್ಲ ನಿಮ್ಮದೆಂದು – ಕಿಟಕಿಯಾಚೆ ಇರುವ ಹೂ ತಣ್ಣಗೆ ನಗುತಿದೆ ಮಾತುಗಳ ಗೊಡವೆ ನಿನಗೇಕೆ ಬಾ ! ಸುಮ್ಮನೆ ನನ್ನೊಂದಿಗೆ ಮೌನವಾಗಿ ಅರಳು ಎಂದು ***********************************************
You cannot copy content of this page