ಸಂ ‘ಕ್ರಾಂತಿ’
ಕವಿತೆ ಸಂ ‘ಕ್ರಾಂತಿ’ ತೇಜಾವತಿ ಹೆ್ಚ್.ಡಿ. ಪುರಾಣದ ನೋಟದಲಿ,ವಿಜ್ಞಾನವು ಇಣುಕಿಸಂಪ್ರದಾಯ ಮಾತನಾಡಿ,ಕೃತಜ್ಞತೆ ಕೈಹಿಡಿದನವ ಬದುಕಿನ ಸಂ’ಕ್ರಾಂತಿ’ಎಳ್ಳು-ಬೆಲ್ಲದೊಂದಿಗೆ ಕರಣದಲಿ ಕಳೆದುಹೋದಹೊಸ ಹುರುಪಿನ ಶ್ರವಣ ಪುಷ್ಯ ವೇಷ ಧರಿಸಿ ಹೊರಬರುತಿದೆ ನವಕ್ರಾಂತಿ ಧರೆ ಪರಿಭ್ರಮಿಸುವ ಗಳಿಗೆದಿನ ರಾತ್ರಿಹಗಲು ಇರುಳುಬೆಳಗು ಕತ್ತಲುಹೀಗೆ ಮಾಸ ಅಯನಗಳ ವರ್ತನೆಉತ್ತರಾಯಣ ತಿರುಗಿ ಸಂಕ್ರಮಣ ಮೂಡಿಬೆಳೆಯ ತಲೆಯ ಇಳೆಗೆ ಬಾಗಿಸುತಸೂರ್ಯರಶ್ಮಿ ಹೊಳಪು ನವಭಾವದ ಕಂಪು ಎಲ್ಲವುಗಳಂತಲ್ಲ ಈ ಹಬ್ಬ!ವರ್ಷವಿಡೀ ತನ್ನೊಡೆಯನಿಗಾಗಿ ದುಡಿದು ದಣಿದಜಾನುವಾರುಗಳ ಅಲಂಕರಿಸಿ,ಪೂಜಿಸಿಮೆರವಣಿಗೆ ಮಾಡಿ,ಕಿಚ್ಚು ಹಾಯಿಸಿಗೋವಿಗೂ ಕೃತಜ್ಞತೆಯ ಅರ್ಪಿಸುವ ಕಾಯಕಬ್ಬ ಹಾಡು ಪಾಡುಎಳ್ಳು ಬೆಲ್ಲ ಹಂಚುವನವೀನ ಪುರಾತನ ಮೌಲ್ಯಿಕರಿಸುವ ಪೃಥ್ವಿರಾಶಿ ರಾಶಿ ಹೊಳಪುಮಿರಿಮಿರಿ ಮಿಂಚುವ ಭೂಸೆರಗುತರತರ ಹೊಳೆವ ಹಸಿರು ಬಣ್ಣದೈಸಿರಿ ಸಂಕ್ರಾಂತಿ ಮೆರಗು ಈಗೀಗಮಾರ್ಗಶಿರ ಮಾರುದ್ದ ಮರೆತುಎಳ್ಳು-ಬೆಲ್ಲ ದಾರಿಲಿ ಉಳಿದುಮಿರಿ ಮಿರಿ ಮಿಂಚುವ ಕಣ್ಣಿಗೆಕಾಡಿಗೆ ಜೋಳ ಪಿಸುನಕ್ಕುಹಸಿರು ಬಸಿರಾಗದೇಪ್ರೇಮ ಕಳೆಕಟ್ಟುತ್ತಿದೆ ಭಾವನೆಗಳ ಬರಿದಾಗಿಅವನಿಯೂ ಅಷ್ಟೇ ಹೂ ಗಂಧ ಸಾಂಬ್ರಾಣಿಗಳ ಕರಕಲು ಮೆತ್ತಿಕೊಂಡಿದೆ ಕೊನೆಗೆ ನನ್ನವನ ಆಸೆಸಂಕ್ರಾಂತಿಯ ಸಂಸ್ಕೃತಿ ಮೂಡಿಸಂಪ್ರದಾಯ ಪ್ರೀತಿಯೊಂದಿಗೆ ಹೂರಣ ಹಬ್ಬಲಿ ವಿಶ್ವಾಸ-ಕೃತಜ್ಞತೆಜೊತೆಯಾಗಿ ಸಂ’ಕ್ರಾಂತಿ’ ನಡೆದುಹೋಗಲಿಸಂಕ್ರಾಂತಿ ಅಂಥದ್ದೇ ಆಗಿರಲಿ,ಬಣ್ಣ ಹೇಗಾದರೂ ಸರಿಸೆರಗು ಹಸಿರಾಗಲಿಹಸಿರು ಉಸಿರಾಗಲಿ









