ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಯಕ್ಷಿಯ ಪ್ರಶ್ನೋತ್ತರ ಡಾ. ರೇಣುಕಾ ಅರುಣ ಕಠಾರಿ ಗಂಭೀರವಾಗಿ ಭೀಗುತ್ತಿದ್ದ ಕಾಲವದುಮನಸಿನ ಹುಚ್ಚಾಟಕ್ಕೆ ಎಣೆಯೇ ಇರಲಿಲ್ಲಕಾಲದೊಳಗೆಯೆ ಅಡಗಿದ ಜೀವಸಾರದ ಕಡೆಗೆಬವಣೆಯ ಹುಡಕ ಹೊರಟ ಯಕ್ಷಿ ನಾ! ಮುರುಟಿದ ಕನಸಗಳೆಲ್ಲವೂ ಮೆರವಣಿಗೆಗೆ ಸಿದ್ದವಾಗಿದ್ದು ತಿಳಿಯಲಿಲ್ಲ.ಎಲ್ಲಾ ಎಲ್ಲೆಯನ್ನು ಮೀರಿ ಹತಾಟೆಯ ಹಿಂದೆ ಸರಿದಿತ್ತು.ಹಂಸದ ನಡುಗೆ ಕುರ್ಮದ ಆಯಸ್ಸು ಕಣ್ಮಂದೆ ನಿಂತಿತ್ತು..ಕಡಲಳೊಗಿನ ಲವಣ ಮಾತ್ರ ನೀರಲ್ಲಿಯೇ ತೆಲುತ್ತಿತ್ತು. ದುಗುಡು ದುಮ್ಮಾನಗಳಿಗೆ ವಿವೇಕ ಹೇಳಿ ಸಾಕಾಗಿತ್ತುಅನುಭವ ಅನುಭಾವದತ್ತ ಸಾಗಿದ ಪಯಣ ನಿಲ್ಲುತ್ತಿರಲಿಲ್ಲಬದುಕಿನ ಎಲ್ಲ ಮಗ್ಗಲುಗಳು ಸ್ಮಶಾನದ ಅಂಗಳದಲ್ಲಿ ನಲಿಯುತ್ತಿದ್ದವು.ಹೇಳದೆ ಹೊರಟ ಯಕ್ಷಿಯ ಯೋಚನೆಗೆ ನಿಲುವು ಸಿಕ್ಕುವುದಾದರು ಹೇಗೆ? ಬೇವರು, ಮಣ್ಣಿನ ವಾಸನೆಗೆ ಮೆಚ್ಚಿ ಬಂದವರು ಯಾರು ಇಲ್ಲ.ತೊಟ್ಟು, ಮಾಗಿದ ರೂಪಲಾವಣ್ಯದ ಸಂತೃಪ್ತಿಗೆ ಸೇರೆ ಸಿಕ್ಕವರೇ ಹೆಚ್ಚು.ಇಳೆಯ ಗರ್ಭದೊಳಗೆ ಸಿಲುಕಿದ ನಾ ಎಂಬುವುದು ಮಾಂiÀiವಾಗಿದೆಹತಾಶೆಯೊಂದಿಗೆ ಅಂಟಿಕೊAಡಿದ್ದ ಒಡನಾಟಕ್ಕೆ ತೆರೆ ಹಾಕುವ ಕಾಲ ಬಂದಾಯಿತು. ಚರಿತ್ರೆಯ ಪುಟಗಳ ಹಿಂದಿನ ಕಥೆಗೇನು ಉತ್ತರವೂ ಇದೆ, ಬರೆದಿದ್ದು ಇದೆ.ಆದರೆ ಮುಂದಿನ?ಪ್ರೀತಿ ಸಂಕೋಲೆಗಳಿAದ ಹೆಣೆದುಕೊಂಡ ಅದೆಷ್ಟೋ ಹೆಣ್ಣು ತಡಕಾಡಿ,ಬೆಂದ ಕಥೆ ಮೂಲೆಗೆ ಸೇರಿದ್ದು ಇದೆಲ್ಲಾ?ಈ ಯಕ್ಷಿಯ ಪ್ರಶ್ನೊತ್ತರಗಳಿಗೆ ಉತ್ತರದ ಮಾತೆಲ್ಲಿ,ಸಿಗದೆ, ಬತ್ತದ ಬದುಕು ಹುಡುಕುತ್ತ,ಹೊರಟ ನಾ ಯಕ್ಷಿಯಲ್ಲದೇ ಮತ್ತೇನು ??

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಚೀನಾದ ಚೈನ… ವಾಯ್.ಜೆ.ಮಹಿಬೂಬ ಹೋಗ್ಹೋಗು ಕರೋನಾಎಲ್ಲಾ ಕೂಗಿ ಹೇಳೋಣಾ!!ಪ!! ಕರುಣೆಯಿಲ್ಲದ ಕರೊನಾಬಂತೋ ಒಕ್ಕರಿಸಿಜಗವು ನಿತ್ಯ ಹಾಳಗೆಡವಿತುಜೀವ ಮುಕ್ಕರಿಸಿ !!೧!! ಚೀನಾದೊಳಗ ಚೈನಭವಕ ತಂತೋ ಊನಭಾರತವೂ ಮೌನ !ಮನವೂ ಮಸಣ ತಾಣ !!೦೨!! ಹಿಂದೂ-ಮುಸಲ್ಮಾನಅದಕೇನಿಲ್ಲ ಖುನ !ಪಾರ್ಸಿ-ಬುದ್ದ-ಜೈನಮಾಡಲಿಲ್ಲ ಮನನ!!೦೩!! ಕರುಣೆ ಇಲ್ಲ ಅದಕಹೊಡತ ತಂತೊ ಧನಕಜೀವ ಹಿಂಡಿತಲ್ಲೊದುಡಿದು ತಿನ್ನೊ ದಿನಕ!!೦೪!! ಹಸಿವು ತಾಳಲ್ಲಿಲ್ಲಪಥವೂ ಕಾಣುತಿಲ್ಲಹಂಗರೆದು ನಡೆದು ನಾವುನಡುವೆ ಸತ್ತೆವಲ್ಲೊ !!೦೫!!

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಮತ್ತದೇ ಮನವರಿಕೆ ಸರೋಜಾ ಶ್ರೀಕಾಂತ್ ಅಮಾತಿ, ತೇಲುತ ಬರುವ ಮಧುರ ನೆನಪಾಗಿದಿನವೂ ಕಾಡುತಿರುವೆಯಲ್ಲತೊರೆದ ಘಳಿಗೆ ಅರಿತ ಉಸಿರುನನ್ನನೇ ಮರೆತಿರುವೆನಲ್ಲ ದೊರೆವೆ ಹೇಗೆ ಮರಳಿ ಪ್ರೀತಿಗೆಕನಸು ಕೂಗುತಿದೆಯಲ್ಲಹೃದಯದಿ ಬೆರೆತ ನಿನ್ನ ಒಲವುಬಳಿ ಬಂದು ಸತಾಯಿಸುತ್ತಿದೆಯಲ್ಲ ಒಪ್ಪಿದ ಪ್ರೇಮವೇ ಚೆಲುವ ತುಂತುರುತಪ್ಪನು ಸರಿಪಡಿಸುವೆನಲ್ಲಮತ್ತದೇ ತುಡಿತ ಜೊತೆಯ ಹೆಜ್ಜೆಗೆಹರಸು,ಪರಿತಪಿಸುತ್ತಿರುವೆನಲ್ಲ ನಿನ್ನಯ ನೋಟಕೆ ಕಾದಿಹ ಕಂಗಳುಲಜ್ಜೆಗೆ ಹೊಳೆಯುತ್ತಿರುವವಲ್ಲಮತ್ತೊಮ್ಮೆ ಭೇಟಿಗೆ ವೇಳೆಯ ತಿಳಿಸುಕರೆಗೆ ಕಾಯುತಿರುವೆ ನಲ್ಲ!!.

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ನದಿ ನಾಗರಾಜ್ ಹರಪನಹಳ್ಳಿ ನದಿ ಕುಲು ಕುಲು ನಕ್ಕಿತುಅವಳು ಜೊತೆ ಇದ್ದಾಗ ನದಿ ಉಸಿರೆಳೆಯಿತುಅವಳು ಕಿವಿಯಲ್ಲಿ ಉಸುರಿದಾಗ ನದಿ ಮಾತಾಡಿತುಅವಳು ನನ್ನ ಭುಜಕ್ಕೆ ಭುಜ ತಾಗಿಸಿ ಕುಳಿತಾಗ ನದಿ ವೈಯಾರದಿ ಬಳುಕಿತುಅವಳು ಹೊಸ ಸೀರೆಯುಟ್ಟುನನ್ನೆದುರು ಬಂದಾಗ ನದಿ ಕಣ್ಣೀರಾಯಿತುಅವಳು ವಿರಹದಿ ಬೆಂದಾಗ ನದಿ‌ ಮಗ್ಗಲು ಬದಲಿಸಿತುಅವಳು ದೂರವಿದ್ದಾಗ ನದಿ ನಿಟ್ಟುಸಿರಾಯಿತುಅವಳು ನಾಳೆಗಳಿವೆ ಬರುವೆಎಂದಾಗ ನದಿ ಮೌನವಾಯಿತುಅವಳು ಮಾತೇ ಆಡದೆ ಹೋದಾಗ ನದಿ ನಿದ್ದೆ ಹೋಯಿತುಅವಳೂ ನಿದ್ದೆಹೋದಾಗ ನದಿ ಬೆಳಕಾಯಿತುಅವಳು ಮರಳಿ ಬಂದಾಗ

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಹುಟ್ಟು ಪೂರ್ಣಿಮಾಸುರೇಶ್ ಹಚ್ಚಡದ ಗಂಟಿನಲಿನೆನೆದುಬೆದರಿ ಅವಚಿಕೂತ ಕಾಳು ಎದೆಯ ಮೇಲೆ ಬುಲ್ ಡೋಜರ್ ನೋವಿನ ಹಿಡಿತಆವರಿಸಿದ ಕಪ್ಪು ತಡೆಯಲಾರೆ ಹೊರೆಅಂತರಾಳದ ಮೊರೆ ಬಿಗಿದ ಸೆರೆ ಸಡಿಲಆಯಾಸದ ದಿಟ್ಟಿತೆರೆದರೆತೂರಿ ಬಂದ ಬೆಳಕು ಒಡಲು ಹಗುರಒಳಗೆ ಹಸಿರು ಹೊಸ ಕನಸುಹೊಸ ಹುಟ್ಟು ಬಾಹು ಚಾಚಿದ ಆಗಸನಾನು ಊರ್ಧ್ವಮುಖಿ

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಬಿಟ್ಟು ಯೋಚಿಸಬಹುದೇ..? ಸ್ಮಿತಾ ಅಮೃತರಾಜ್. ಸಂಪಾಜೆ ದಿನದ ಕನಸುಗಳೆಲ್ಲಾಗುಲಾಬಿ ಬಣ್ಣ ಮೆತ್ತಿದಬೊಂಬಾಯಿ ಮಿಠಾಯಿಸವಿಯುವ ಮುನ್ನವೇ ಕರಗಿಬರೇ ಅಂಟು ಜಿನುಗಷ್ಟೇಉಳಿಯುವ ನಂಟು. ಈ ಹೊತ್ತಲ್ಲದ ಹೊತ್ತಿನಲ್ಲಿನೀ ಬಂದು ಮೈದಡವಿ ತಲೆನೇವರಿಸದೇ ಇರುತ್ತಿದ್ದರೆ..ನಾಳೆಯ ಕನಸುಗಳಿಗೆ ಬಣ್ಣಬಳಿಯಲು ನನ್ನ ಬಳಿ ರಂಗುಉಳಿಯುತ್ತಿತ್ತೇ? ಕಣ್ಣಾಲಿ ತೆರೆದಷ್ಟೂಸಂತೆ ನೆರೆಯುವ ಬಿನ್ನಾಣ ಲೋಕಹೊರಗೆ ತೆಳ್ಳಗೆ ಹಚ್ಚಿದ ಬೆಡಗಿನ ಲೇಪಲೋಪವೇ ಇಲ್ಲದ ಬದುಕಿದೆ ಒಳಗೆಬಗೆದು ಕಂಡವರಿಲ್ಲ ಪಾಪ! ಆಳದಲ್ಲೆಲ್ಲೋ ಛಳಕ್ ಎಂದ ನೋವು..ಹೊತ್ತಿಗೆ ನೀ ಬಂದು ಮುಲಾಮುಹಚ್ಚದೇ ಹೋಗುತ್ತಿದ್ದರೆ..ಗಾಯವೇನೋ ಮಾಯುತ್ತಿತ್ತು.ನೋವು ಮಾಸುತ್ತಿತ್ತೇ..? ಮುದುಡಿಕೊಂಡಷ್ಟೂ ರೆಕ್ಕೆ ಬಿಚ್ಚಿಆಗಸಕ್ಕೆ ಬೆಟ್ಟು ನೆಟ್ಟು ಹಾರಲುಕಲಿಸುತ್ತಿರುವೆ.ಮರೆತಷ್ಟೂ ಮತ್ತೂ ಮತ್ತೂಗಾಳಿಯಂತೆ ಬೀಸುತ್ತಿರುವೆ. ಈ ಕ್ಷಣ ಪಕ್ಕಕ್ಕಿಟ್ಟು ನಿನ್ನಬಿಟ್ಟು ಯೋಚಿಸಬಹುದೇ..?ನಾನು ಆಲೋಚಿಸುತ್ತಿರುವೆ. ಧ್ಯಾನಕ್ಕೆ ಯಾರ ಕಾವಲೂ ಇಲ್ಲಅಪ್ಪಣೆಗೆ ಕಾಯಲೂ ಬೇಕಿಲ್ಲಕವಿತೆಯೇ..ಈಗ ಹೇಳುಅರೆ ಕ್ಷಣ ನಿನ್ನ ಬಿಟ್ಟು ನಾಯೋಚಿಸಬಲ್ಲೆನೇ…?ಇನ್ನು ನೀನೂ………..?!

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ನೀವಾದರೂ ಹೇಳಬಲ್ಲಿರಾ ? ನೂತನದೋಶೆಟ್ಟಿ ಕಾಸಿಗಾದರೂ ಒಂದಷ್ಟುನಿರುಮ್ಮಳತೆ ಸಿಕ್ಕರೆ ವಿಳಾಸ ಹೇಳುವಿರಾ?ಕವಿತೆ ಬರೆಯುವ ಕೈಗೆ ಪ್ರಶ್ನೆಗಳ ಸೂಜಿಮೊನೆಯ ಸೆಳಕು ಶನಿ, ರಾಹು, ಕೇತು ಗ್ರಹಣಗಳಗ್ರಹಚಾರ ಬಿಡಿಸಿಕೊಂಡಿರಲ್ಲಾಹೊಳೆವ ಉಂಗುರದ ಬೆರಳುಗಳು ಹಾಕಿದಕವಡೆಯಭೀತಿಗೆ ಏನು ಮಾಡುವಿರಿ ? ಪುರಭವನದೆದುರುಜೈಕಾರದಜಿದ್ದಾಜಿದ್ದಿನಲ್ಲಿನಸುಕಿನ ಕಸಪೊರಕೆಯ ಕೈಬಾಚುವ ಸತ್ತ ನಾಯಿಯ ವಾಕರಿಕೆಯಲ್ಲಿಉಣಲಾರದ ಸಂಕಟಕ್ಕೆಯಾರಕೈತುತ್ತು ? ಮಾತಿನಲ್ಲಿ ಮತದಘಾಟು ಹಿಡಿಯುವವರುಗಾಂಧಿ, ಬಸವ, ಅಂಬೇಡ್ಕರರನ್ನುಬೇಕಾದಾಗ ಅಷ್ಟಷ್ಟು ಬಳಸುತ್ತಾರೆಬಿಸಿಗೆ ಮಂಜುಕರಗಿದ್ದುಅರಿವಿಗೂ ಬಾರದಂತೆತತ್ವಗಳನ್ನು ಹೊದಿಕೆಯಿಂದಾಚೆಎಳೆಯುವವರ ಕಂಡಿರಾ? ಕವಿತೆಯದಾದರೂಅದೇಕಥೆರೊಚ್ಚು, ರಚ್ಚೆಗಳ ದಂಡಿಗೆಕೊAಬು, ಕಹಳೆಗಳ ದಾಂಗುಡಿಬರೆಯುವ ಕೈಗಳು ಕುಲುಕಿದ್ದುಉಂಟೇ ?ಸಿದ್ಧಾಂತದ ತಥ್ಯತೀಡಿದರೆತಾನೇ? ಕಾಸಿಗಾದರೂ ಒಂದಷ್ಟುನಿರುಮ್ಮಳತೆ ಸಿಕ್ಕರೆವಿಳಾಸ, ನೀವಾದರೂ ಹೇಳುವಿರಾ?ಕೇಳುತ್ತಿರುವುದು ನಾನೇ?ನಿಮ್ಮೆದೆಯ ಪ್ರಶ್ನೆಗೆಧ್ವನಿ ಮೂಡಿದೆ ಅಷ್ಟೇ .

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಗೂಸಬಮ್ಸ ನಿರೀಕ್ಷೆಯಲ್ಲಿ ನಾಗರೇಖಾ ಗಾಂವಕರ್ ಕಡಲ ತಡಿಯಲ್ಲಿ ನಿಂತುವಿರುದ್ಧ ಮುಖವಾಗಿಚಿತ್ತೈಸಿದರೆ ಎಂಥ ಸಹಜತೆಲ್ಯಾಂಡಸ್ಕೇಪ್ ಮಾಡಿದಮಹಾನ್ ತೋಟಗಾರನೊಬ್ಬಅಂಚಂಚನ್ನು ಬಿಡದೆಕಲೆಯ ಗ್ಯಾಲರಿಯನ್ನೆ ಇಳಿಬಿಟ್ಟ ಹಾಗೆ.ನೋಡುತ್ತ ಮೈಮೇಲೆಗೂಸಬಮ್ಸಗಾಗಿ ಕಾದೆ. ಗಗನ ಚುಂಬಿ ಕಟ್ಟಡದಏರುವ ಇಳಿಯುವಎಸ್ಕಲೇಟರಗಳ ಮೇಲೆಕಿರು ಸೊಂಟದಏಳು ಮಲ್ಲಿಗೆ ತೂಕದ ಹೆಣ್ಣುಗಳನ್ನುಧಡೂತಿ ತೊಡೆಗಳ ಇಳಿಬಿದ್ದ ಸ್ತನಗಳ ಭಾರಜೀವ ಹೊತ್ತ ಗಜಗಾಮಿನಿಯರನ್ನುಕಂಡು ಅರೆರೆ.. ಎಂದುಕೊಳ್ಳುತ್ತಮೈ ರೋಮ ನಿಮಿರಿತೇ?ಕಾಣದೇ ವ್ಯಗ್ರಗೊಂಡೆ. ಮೆಟ್ರೋ ಸಿಟಿಗಳಲ್ಲಿಯ ರಸ್ತೆಗಳಲ್ಲಿಸೂಟುಬೂಟು ಹಾಕಿದಮಿಂಚು ಕಂಗಳಸುಂದರಾಂಗರ ಕಣ್ಣಿನ ಸಂಚಲನೆಗೆಕೆತ್ತಿಸಿಕೊಂಡ ಮುಖಗಳ ಮಾದಕತೆಗೆ ಇದ್ದಸೆಳೆತಕ್ಕೆ ಮನಸ್ಸು ಜೋಲಿ ಹೊಡೆದುಕೈ ನೋಡಿದರೆರೋಮಾಂಚನ ವ್ಯಾಕ್ಸಾಯನ. ಹೆತ್ತವರ ಶ್ರಾದ್ದಕ್ಕೆ ಪಿಂಡ ಬಿಡುವಾಗಲೆಲ್ಲಾನೆನಪುಕ್ಕಿ ಕಣ್ಣೀರಾಗುತ್ತಿದ್ದಾಗಲೆಲ್ಲಾನನ್ನಪ್ಪನ ಮೈಮೇಲಿನ ಕರಿಕಪ್ಪುರೋಮನಿಮಿರಕೊಳ್ಳುತ್ತ ಅದ ನೋಡುತ್ತಎದೆಯಲ್ಲಾಡುವ ಅಂಜಿಕೆಯ ಕಪ್ಪೆನನ್ನಪ್ಪನ ಶ್ರಾದ್ಧದ ಹೆಸರಿನಲ್ಲಿ ಗಡದ್ದಾಗಿ ತಿಂದುಬರುವ ನನಗೆ ಪ್ರತಿವರ್ಷವೂಮೈ ರೋಮ ನೆಟ್ಟಗಾಗಲಿಲ್ಲವೆಂದು ಖುಷಿ. ಸಂಜೆ ಗೋಧೂಳಿ ಹೊತ್ತುಗದ್ದೆ ಬದುವಿಗೆ ಕೂತ ಪೆಡ್ಡೆ ಹೈಕಳುಬಾಲನೆಗರಿಸಿ ಓಡುತ್ತ ಬರುವಕರುಗಳ ಕಂಡುಕುಂಡೇ ಹರಿದ ಚಡ್ಡಿಯಲ್ಲಿಯೇರಿಲೇ ಓಡುತ್ತಾ ಗೂಸಬಮ್ಸ ಆವಾಹಿಸಿಕೊಳ್ಳುತ್ತಿದ್ದ ನೆನೆಪುಹುಡಿ ಎದ್ದ ಮಣ್ಣಿಗೆ ತಟ್ಟನೆ ಬಿದ್ದಒಂದೆರಡು ಮಳೆಹನಿಗಳ ಆಘ್ರಾಣಿಸುತ್ತಾಎದ್ದ ರೋಮದ ಲೆಕ್ಕಾಚಾರ ಮಾಡುತ್ತಿದ್ದ ನೆನೆಪು.ಇಲ್ಲಿ ಪಟ್ಟಣಗಳಲ್ಲಿಸಂಜೆಯಾಗುತ್ತದೆ ಅಷ್ಟೇರೋಮ ಸೆಟೆದುಕೊಳ್ಳುವುದಿಲ್ಲ. ಆದರೂ ಹೂವಿನ ದಳಗಳ ಮುಗುಳುಮೈಸೋಕಿಸಿಕೊಂಡು ತಟ್ಟನೆ ಏಳುವಮೈರೋಮಕ್ಕಾಗಿಕೃತಕಕಾತರಿಸುತ್ತಲೇ ಇದ್ದೇನೆ.

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಉತ್ತರಾಯಣಕ್ಕೆ ಹೊರಟ ಸೂರ್ಯ ಅನಿತಾ ಪಿ. ಪೂಜಾರಿ ತಾಕೊಡೆ ಆ ವಸಂತ ಕಳೆದು ಈ ವಸಂತದವರೆಗೆಮೌನ ಧ್ಯಾನದ ತಪದೊಳಿದ್ದವಳುಕಳಚಿ ಬಂದಿಹಳು ತನ್ನ ತೋಳ ತೆಕ್ಕೆಯಲಿಆತುಕೊಂಡಿದ್ದ ಹಳೆಯ ನೆನಪಿನೆಲೆಗಳನು ಹಾಗೆ ಬಂದವಳೇಚಿಗುರು ಬದುಕಿನ ಮಾಧುರ್ಯಕೆ ಮುನ್ನುಡಿ ಬರೆದುಮೊಗ್ಗಿನ ಮೋಹದಿ ಅರಳಿನೊಡವೆಯ ತೊಟ್ಟುನವೋಲ್ಲಾಸದ ವಸಂತದಿ ಮೈದಳೆದು ನಿಂತಿಹಳು ಪ್ರಕೃತಿ,ತಿಳಿಹಸಿರಲಿ ಕೆಂಪು ಕುಸುರಿಯ ಸೀರೆಯನುಟ್ಟು ಸಿಹಿಗಾಳಿಯ ತಂಪು ತಳಿರು ಹೂವುಗಳಿಂಪಲಿಓಲಾಡಿ ನಲಿದಾಡಿ ವಿಹರಿಸಲೆಂದುಊರೂರಿಂದ ಅಲೆದಲೆದು ಬಂದಿಹವುಹೊಸಪುಕ್ಕ ಮೂಡಿದ ಹೊಸಭಾವದ ಹಕ್ಕಿ ಕರಿಮೋಡ ದೂರ ಸರಿದು ಬೆಳ್ಮುಗಿಲು ಸನಿಹ ಒಲಿದುಹೊನ್ನ ಚೆನ್ನಿಗ ನಡೆವ ಪಥದಲಿದೂರ ದೂರದವರೆಗೆ ನುಣ್ಣನೆ ಹಾಸಿಅಣಿಯಾಗಿಹವಲ್ಲಿ ಸಡಗರದ ಮೆರವಣಿಗೆಗೆ ಮುಂಜಾನೆ ಮಂಜು ಹುಲ್ಲೆಸಳ ಮೊನೆಯಲಿ ನಿಂದುಇನಿತಿನಿತು ಜಿನುಗಿ ಮಿರ ಮಿರನೆ ಮಿನುಗಿಸಂಕ್ರಾಂತಿಯೋಲಗದ ಅಧಿಪತಿಯನುಇಣುಕಿ ನೋಡುತಿಹವು ಮುಗಿಲಿನಾಚೆಗೆ ಮಕರ ಸಂಕ್ರಾಂತಿಯಿಂದಸ್ವರ್ಗದ ಬಾಗಿಲು ತೆರೆದಿರುವುದೆಂದುಭೀಷ್ಮನೂ ತಾಳಿಹನಂತೆ ಜೀವದುಸಿರನು ಹಿಡಿದುಗಂಗಾದೇವಿಯು ಧರೆಗಿಳಿದು ಬಂದುಭಗೀರಥನ ಹಿಂದೆ ಹಿಂದೆ ನಡೆದುಸಾಗರವ ಸೇರಿದಳಂತೆ ಇದೇ ದಿನದಂದು ಸಂಕ್ರಾಂತಿ ತನ್ನ ಹಬ್ಬವೆಂದು ಬೀಗಿಕೊಂಡುಜಪ ತಪ ಧ್ಯಾನ ಅನುಷ್ಠಾನಗಳ ವೈಭವದಲಿಹೊರಟು ನಿಂತಿಹನು ಸೂರ್ಯಉತ್ತರಾಯಣದ ಹಾದಿಯಲಿ ತಿರುಗುವ ಗತಿಯಲಿ ತಿಲ ತಿಲದಷ್ಟು ಅಗಲವಾಗಲುನಿಶೆಯು ಕುಗ್ಗಿ ಉಷೆಯು ಹಿರಿಹಿಗ್ಗಿ ಬೆಳೆಯುತಿಹಳು ಸಂಕ್ರಾಂತಿ ಮೇಳಕೆ ಇಳೆಯಲ್ಲೂ ಹರುಷಬಳುಕುವ ಬಣ್ಣ ಬಣ್ಣದ ಪತಾಕೆಗಳುತಿಲ, ತುಪ್ಪ, ಬೆಲ್ಲ, ಕಪ್ಪು ಉದ್ದಿನ ಹುಗ್ಗಿಯ ಸುಗ್ಗಿ‘ತೀಳ್ ಗೂಡ್ ಕಾವಾ ಗೋಡ್ ಗೋಡ್ ಬೋಲಾ’ಮನಸು ಮನಸುಗಳ ಸಂಬಂಧ ಬೆಸೆಯುವಮಂತ್ರಗಳು ಎಲ್ಲ

Read Post »

ಕಾವ್ಯಯಾನ

ಸಂಕ್ರಾಂತಿ ಕಾವ್ಯ ಸುಗ್ಗಿ ಸಂಕ್ರಾಂತಿ. ಸಾತುಗೌಡ ಬಡಗೇರಿ ರೈತರ ಮೊಗದಿ ನಲಿವು ಕಾಣುವವರುಷದ ಮೊದಲ ಹಬ್ಬದಿನ.ಉತ್ತರಾಯಣದ ಪುಣ್ಯದ ಕಾಲವುಸಂಕ್ರಾಂತಿ ಹಬ್ಬದ ಈ ಸುದಿನ. ಬನ್ನಿ!ಬಂಧುಗಳೇ..ನಾಡ ಪ್ರಜೆಗಳೇಎಳ್ಳು ಬೆಲ್ಲದ ಸಿಹಿ ಸವಿಯೋಣ.ಹಳೆಯದು ಮರೆತು ಹೊಸ ಕನಸನ್ನುಕಟ್ಟುತ ಹರುಷದಿ ತೇಲೋಣ. ಗಿಡಮರ ಚಿಗುರಿ ಹೂವದು ಅರಳಿಕೇಳಲು ಕೋಗಿಲೆ ಇಂಚರವು.ನಾಡಜನತೆಯ ಮನೆಮನ ಪುಳಕವುಕಾಣಲು ಸಂಕ್ರಾಂತಿ ಸಡಗರವು. ಎತ್ತಿಗೆ ಬಣ್ಣದ ಚಿತ್ತಾರ ಬಳಿಯುತಹಬ್ಬದ ಖುಷಿಯ ಕಾಣುವರು.ಸಕಲರ ಮನೆಯಲಿ ರಂಗೋಲಿ ಹಾಕುತದೇವನ ಭಕ್ತಿಲಿ ಭಜಿಸುವರು. ಸಂಕ್ರಾಂತಿ ಸಡಗರ ಉಳಿಯಲಿ ಅನುದಿನನಾಡಿನ ಸಂಸ್ಕೃತಿ ಹಿರಿತನವು.ಸಕಲರ ಬಾಳು ನೆಮ್ಮದಿ ಕಾಣಲುದೈವದ ಅನುಗ್ರಹ ಬಯಸುವೆವು.

Read Post »

You cannot copy content of this page

Scroll to Top