ಒಲವಿನ ಬೆಳಕ ಹುಳು… ಡಾ. ಅರಕಲಗೂಡು ನೀಲಕಂಠ ಮೂರ್ತಿ ೧)ಒಂದೊಮ್ಮೆ ಎನ್ನೆದೆಯೊಲುಮೆಯಸೀಮೆಯ ಗಣಿಗಳಿಗೆಹೊಳೆವ ಬೆಳ್ಳಿ ಬಂಗಾರದ ಬೆರಗುಹರಿಸಿದ ಮಿಂಚು ಹುಳುವೆಯಾವ ದಿಕ್ಕಿನ ಕಡೆ ಹಾರಿ ಹೋದೆಅಂದಿನಿಂದ ಇಂದಿನವರೆಗೂಮತ್ತೊಮ್ಮೆ ಕಾಣದ ಹಾಗೆ…ಆ ಪ್ರೇಮದ ಗಣಿಯಲ್ಲಿಈಗ ನಿತ್ಯ ನಿರಂತರ ಕತ್ತಲೆ! ಅಂದು ಅದೆಷ್ಟೆಷ್ಟು ಆಳದಲ್ಲಿಎಂಥೆಂಥಾ ಅಂಕು ಡೊಂಕಲ್ಲಿಆ ಗಣಿ ಅಗೆದರೂ ಬಗೆದರೂಕಣ್ಣು ಕೋರೈಸಿದ್ದ ಪ್ರಖರ ಬೆಳಕುಕಾಂತ ಪ್ರೇಮ ದಿಕ್ಕು ದಿಕ್ಕುಗಳಲು!ಜಗವೆಲ್ಲ ಹೃದಯಂಗಮದಂಗಳ…ಬೆಳ್ಳಿ ಬಂಗಾರಗಳೆ ನಾಚಿ ತಲೆತಗ್ಗಿಸಿನಿಂತ ಹಾಗೆ ಮೂಕಮೌನದಲಿ!ಹಗಲು ಕಂಡ ಒಲವ ಹೊನಲುಚಿಮ್ಮುವ ಕಣ್ಣುಗಳಲಿ ಮತ್ತೆ ಕೊನರಿರಾತ್ರಿ ಕನಸಿನಲಿ ಶಶಿರಥದೈಸಿರಿ! ಯಾರೋ ನಲವಿನಾಗಂತುಕರುಎದೆಯಾಳದಲಿ ಥಕಥೈ ಕುಣಿದುದಿನವಿಡೀ ಬೆಳಕಿನ ಮುಗುಳುನಗೆ ನಕ್ಕ ಹಾಗೆ…ಒಮ್ಮಿಂದೊಮ್ಮೆಗೆಎಲ್ಲೆಲ್ಲೂ ಕಂಡರಿಯದ ಆನಂದದಿಅಂಗಣದಲೆಲ್ಲ ಹೃದಯದೋಕುಳಿ ೨)ಓ ಪ್ರಿಯೆಐದನೆ ದಶಕ ಇನ್ನೇನು ಅಸ್ತಮಾನದಹಂತ ತಲುಪಿದೆಇನ್ನೂ ಮಾಸಿಲ್ಲ ಮಸ್ತಕದಿ ನೆನಪುಹಳೆಯ ನೆಲಭಾವಿಯ ನೀರ ಸೆಲೆಯ ಹಾಗೆ… ಎಲ್ಲಿರುವೆ ಮತ್ತು ಹೇಗಿರುವೆ?ದಶಕಗಳ ಆಚೆಗೂ ಒಂದಾದರೂಅಣು ಮಾತ್ರ ಸುದ್ದಿ ಕೂಡನನ್ನತ್ತ ಹಾರಿಸದೆ…ಹೇಗಿರುವೆ…?ಒಲವಿನ ಅಮೃತ ತುಳುಕಿಸಿದೆದೆಹೇಗಾಯಿತಿಷ್ಟು ಕಠೋರ ಬಂಡೆ! ನಿನ್ನ ಬಗೆಯ ಅರಿವೂ ಇರದಅಂಧನ ಥರ ನಾನೀಗಆ ಸ್ಥಿರ ದೂರವಾಣಿಗೂಈ ಮೊಬೈಲ್ ಮಾಣಿಕ್ಯಕ್ಕೂಇರುವಂಥ ಅಗಾಧ ಅಂತರಈಗ ನನಗೂ ನಿನಗೂ…ಬಲು…ಬಲು ದೂರ! ಹಾಗಾಗಿ ಈ ನನ್ನೆದೆ ಸ್ಪಂದನದಅನಂತ ಒಲವ ತರಂಗ ಧಾರೆನೀನಿರುವ ದಿಕ್ಕು ಹುಡುಕಿತೂರಿ ಬಂದು ಸೇರಬಹುದೋನಿನ್ನ ನೇರ ವಿಚಾರಿಸಿ ಹಿಂತಿರುಗಿಬರಲೂಬಹುದೋ ಎಂಬಾಸೆ…ಹಾಗೆಯೇ ಕೇಳು:ಒಮ್ಮೆ ಕಾಲೇಜಿನ ಕಡೆ ಹೋಗಿದ್ದೆ:ಕಾಂಪೌಂಡ್ ಸುತ್ತ ಮುತ್ತೆಲ್ಲಒಳ ಹೊರಗಿನ ಗೋಡೆಗಳೂಮರೆತಂತಿಲ್ಲ ಅಂದಿನ ನಮ್ಮ ಕಥೆ…ಅದೆಂಥ ಹೃದಯ ತಟ್ಟಿದನುಭವ ನಿನಗೆ ಗೊತ್ತೇ…? ೩)ನನ್ನ ಹಾಗೆ ನೀನೂ ವೈದ್ಯೆ…ಈಗಷ್ಟೇ ಕೋವಿಡ್ ಕರಿ ಕೋಣಮುಳುಗು ಹಾದಿ ಹಿಡಿದ ಹಾಗಿದೆ…ನಾನೇನೋ ಇಲ್ಲೇ ಇರುವೆ ಜೀವಂತಹಾಗಯೇ ಈಗಲೂ ವೃತ್ತಿ ನಿರತ…ನೀನೀಗ ಎಲ್ಲಿರಬಹುದೋ ಏನೋಯಾರ ಕೇಳಲಿ ಕೇಳಿ ತಿಳಿಯಲಿ…ಆದರೂ ಒಮ್ಮೆ ಪ್ರಶ್ನಿಸಿಬಿಡಲೇ-ನಿನ್ನನ್ನೇ ನೇರ…?ನೀ ಬದುಕಿರುವೆಯಾ…?ಹೇಗೆ…ಈಗಲೂ…?ಪ್ರಿಯೆ… ************************************
ನತದೃಷ್ಟರಿವರು
ದೀಪಾವಳಿಯ ಬೆಳಕು ಕಾಣದವರು
ದಸರಾ ಬನ್ನಿ ಮುಡಿಯದವರು
ಯುಗಾದಿಯ ಹರುಷ ಪಡೆಯದವರು
ಗೌರಿಯ ಆರತಿ ಇಲ್ಲದ ಸಹೋದರರ ರಾಖಿಯ ಪ್ರೀತಿ ಸಿಗದವರು
ಅನುವಾದಿತ ಕವಿತೆ
ಅನವರತ ಕರುಬಿದ್ದಕ್ಕೋ
ಹಲುಬಿದ್ದಕ್ಕೋ
ಅಚಾನಕ್ ಮಹಾನಗರದ ನಡುವಿಗೆ
ಪಾದವಿಡುವಾಗ ಮೈಯೆಲ್ಲ ಪುಳಕ.
ದೂರ ನಿಂತೇ ಹರಿವ ತೊರೆ ನೂತನ ದೋಶೆಟ್ಟಿ ನೆನಪು ಮೂಡಿಸಿತು ತುಟಿಯಂಚಲಿ ಹೂನಗೆಸೂಸಿ ಕಣ್ಣಂಚಲಿ ಜಿನುಗು ಹನಿಹೊರ ನಡೆಯಿ ನೀವುತು ಮೆಲ್ಲುಸಿರು ತುದಿ ನಾಲಿಗೆಯ ಮೇಲೆ ನಲಿವು ಹೆಸರುಕಣ್ಣ ಪರದೆಯಲ್ಲಡಗಿಹ ಮಂದ ಹಾಸದೂರ ನಿಂತೇ ಹರಿವ ತೊರೆ ಬೇಕೆನ್ನಿಸುವುದಿದೆ ಒಂದು ಹಿಡಿತಅದುಮಿದ ಕೈ ಇಟ್ಟ ಭಾಷೆಮುಚ್ಚಿದೆವೆಗಳ ಮುಂದೆ ಮೂರ್ತ ರೂಪ ಕಣ್ಣ ಹೊಳಪಲಿ ಕಂಡ ಹೊಸ ಅರ್ಥಅಂಗೈಯಲ್ಲಿ ಬಚ್ಚಿಕೊಂಡ ಡವಗುಡುವೆದೆಗೆಶೃತಿ ಸೇರಿದೆ ಭಾಸ ಹೊಸ ನಾಳೆಗಳ ಬಾನಲ್ಲಿ ಬಿಳಿನೊರೆಮಿಂಚುನಗೆಯ ನೆನಪಲ್ಲಿಬಿರಿವ ಹೂಗಳುಎದೆಗೂಡ ಭಾರದಲ್ಲೂ ನಳನಳಿಸುವವು ಹುಟ್ಟಿನ ತರ್ಕದಲ್ಲಿ ಜಾರಿ ಹೋಗುವ ಪ್ರೀತಿಕಡೆಗೋಲಲ್ಲಿ ಕಡೆದಗುಂಡಗಿನ ಬೆಣ್ಣೆ ಮುದ್ದೆ.
ನಳಿನ. ಡಿ ಅವರ ಎರಡು ಕವಿತೆಗಳು
ನಳಿನ. ಡಿ ಅವರ ಎರಡು ಕವಿತೆಗಳು
ಬರೆಯದೇ ಬದುಕಿದ್ದ ಪದ್ಯಗಳನು
ಬರೆದು ಈಗೀಗ
ಹೃದಯಕೆ ತಂಪು
ನಳಿನ. ಡಿ ಅವರ ಎರಡು ಕವಿತೆಗಳು Read Post »
ನನ್ನ ಸಖಿಯರಿಗೆ…
ಕವಿತೆ ನನ್ನ ಸಖಿಯರಿಗೆ… ಸುರೇಖಾ. ಜಿ.ರಾಠೋಡ. ರಾವಣನನ್ನು ಪ್ರೀತಿಸಲೇ,ಇಲ್ಲಾ ರಾಮನನ್ನು ದ್ವೇಷಿಸಲೇ? ರಾವಣನು ಸೀತೆಯಒಪ್ಪಿಗೆಯಿಲ್ಲದೆ ಅವಳನ್ನುಮುಟ್ಟದಿರವ ಹಠ ತೊಟ್ಟನೋ? ರಾಮನು ಸೀತೆಯನ್ನುಒಪ್ಪಿಕೊಳ್ಳಲು ಅವಳನ್ನುಅಗ್ನಿ ಪರೀಕ್ಷೆಗೆ ಒಳಪಡಿಸಲು ಹಠ ತೊಟ್ಟನೋ? ಹಠ ತೊಟ್ಟ ಈರ್ವರುರಾಜರಲ್ಲಿ ಯಾರನ್ನು ನಾಯುಗ ಪುರುಷ,ಆದರ್ಶಪುರುಷನೆಂದು ಹೇಳಲಿ??ನನ್ನ ಸಖಿಯರಿಗೆ…..! ರಾಮ ಲಕ್ಷ್ಮಣರ ಮುಂದೆಶೂರ್ಪನಖೀಯು ತನ್ನಪ್ರೇಮ ನಿವೇದನೆಯನ್ನುಇಟ್ಟಾಗ, ಪ್ರೇಮದ ಬದಲಿಗೆದಂಡಿಸುವ ರೂಪದಲ್ಲಿಅವಳ ಮೂಗನ್ನು ಕತ್ತರಿಸಿದರು..! ತಮ್ಮ ಪೌರಷತ್ವವನ್ನುತೋರಿಸಿ, ಹೆಣ್ಣನ್ನುಅವಮಾನ, ಅಪಮಾನಗೊಳಿಸಿದಇವರನ್ನು ವೀರರೆಂದು ಕಥೆಹೇಳಲೇ ನನ್ನ ಸಖಿಯರಿಗೆ…!**************************************************
ನಿನ್ನೊಲವು
ಕವಿತೆ ನಿನ್ನೊಲವು ಭಾರತಿ ರವೀಂದ್ರ ಒಂದೇ ಒಂದು ಸಾರಿನೀ ತಿರುಗಿ ನೋಡಬಾರದೇ…… ದೂರ ನೀ ಹೋದರೂನು ಕಾಯುತಿಹೆ ನಾ ನಿನಗಾಗಿಯೇದೇಹ ನಾನಾದ್ರೂ ಪ್ರಾಣ ನೀನುಎಂದೆಂದೂ ಪ್ರಾಣಸಖ ನೀನು ಕತ್ತಲೆ ತುಂಬಿದ ನನ್ನ ಬದುಕಿಗೆ ನಿನ್ನೊಲವೇ ತಂಬೆಳಕಾಗಿದೆಆ ಹುಣ್ಣಿಮೆಯ ಚಂದಿರನು ನೀನುನಿನಗಾಗಿ ಅರಳೋ ತಾವರೆಯು ನಾನು ಈ ಬಾಳ ಏಕಾಂಗಿ ಪಯಣದಿಕೈಯ ಹಿಡಿದು ಜೊತೆಯಾದೆಜನುಮ ಜನುಮದಿ ಜೊತೆಯುನೀನುನಿನ್ನನಗಲಿದರೆ ಉಳಿಯೇನು ನಾನು ನನ್ನ ನಿನ್ನೆ ಇಂದು ನಾಳೆಗಳಲ್ಲೂಬರೀ ನಿನದೇ ನೆನಪ ಹಾವಳಿನೆಪ ಮಾಡಿ ಬರುವ ನೆನಪು ನೀನುನೆನಪಿಗೋಸ್ಕರವಿರೋ ನೆಪವು ನಾನು *************************************








