ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹೇಳು ಸಿವನೆ

ಕವಿತೆ ಹೇಳು ಸಿವನೆ ಸುವಿಧಾ ಹಡಿನಬಾಳ ೧ ಜಗವ ಕಾಯುವಜಗದೊಡೆಯನಿಗೆರಕ್ತದಾಹವೆಂಬ ಭ್ರಮೆಯನಂಬಬೇಕೆ ಸಿವನೆ? ೨ ಹೆತ್ತ ತಾಯಿಮುದ್ದು ಮಡದಿಮಮತೆಯ ಕೂಸುಹೆಣ್ಣೇ ಆದರೂ ಅನ್ಯರಮೇಲೆ ಅತ್ಯಾಚಾರ ಗೈವಗಂಡು ಕಾಮಿಯ ಎದೆಯಲ್ಲಿಕರುಣವಿಲ್ಲವೆ ಸಿವನೆ? ೩ ತುತ್ತಿನ ಚೀಲ ತುಂಬಲುಗೇಣುದ್ದ ದೇಹವ ಮುಚ್ಚಲುಬೆಚ್ಚನೆಯ ಸೂರು ಹೊಂದಲುನೆಮ್ಮದಿಯ ಬದುಕ ಬಾಳಲುಕೋಟಿ ಕೋಟಿ ದುಡ್ಡುಆಸ್ತಿ ಬೇಕೆ ಸಿವನೆ? ೪ ಮೈಯ ರಕ್ತ ಒಂದೇಕುಡಿವ ಜಲವು ಒಂದೇತಿನ್ನುವ ಅನ್ನವೊಂದೇಪೊರೆವ ಧರಣಿಯೊಂದೇಮತ್ತೆ ನಾನು ನೀನುಅವನು ಅವಳುಮೇಲು ಕೀಳುಹೇಗೆ ಸಿವನೆ? ೫ ಹುಟ್ಟಿ ಬಂದಾಗಿದೆಚೆಂದ ಬಾಳು ಮುಂದಿದೆಹಮ್ಮು ಬಿಮ್ಮು ಎಲ್ಲಾನಾನು ನನ್ನದೇ ಎಲ್ಲಾಎಂದು ಬೀಗಲು ದೇಹವೇನುಶಾಶ್ವತವೆ ಸಿವನೆ? ೬ ದೇವಸ್ಥಾನ ಮಠಮಂದಿರ ಮಸೀದಿಗಗಳಲಿನೀನಿರುವೆಯೆಂದು ತಿಳಿದುಧಾಂಗುಡಿಯಿಡುವರಲ್ಲ!ನೀನು ನನ್ನಲ್ಲಿ ನಿನ್ನಲ್ಲಿಎಲ್ಲೆಲ್ಲೂ ಇರುವೆಯಲ್ಲನಿಜವೆ ಸಿವನೆ? ***********************************

ಹೇಳು ಸಿವನೆ Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ರತ್ನರಾಯಮಲ್ಲ ನಿನ್ನಯ ಬಾಹುಗಳಲ್ಲಿ ಇರುಳನ್ನು ಕಳೆಯುತಿರುವೆ ಹಗಲು ಕಾವಲಿಗಿದೆಮಧುಬನದ ರಸಮಂಚವನು ಜೋಡಿಸುತಿರುವೆ ಹಗಲು ಕಾವಲಿಗಿದೆ ಸಂಪ್ರದಾಯದ ಜೋಳಿಗೆಯಲ್ಲಿ ಪ್ರೇಮವನ್ನು ಬಂಧಿಸಿಡಬೇಡ ಚೆಲುವೆನಿನ್ನ ಮಡಿಲಲಿ ಚಂದದ ಚುಕ್ಕಿಗಳನು ಎಣಿಸುತಿರುವೆ ಹಗಲು ಕಾವಲಿಗಿದೆ ಪ್ರೀತಿಯ ರಸಸ್ವಾದ ಮುಗಿಯದ ಪಾಕ ಮಧುಶಾಲೆ ಅಡಗಿದೆ ನಿನ್ನೊಳಗೆನಿನ್ನಯ ಒಲವಿನ ಕೊಳದಲಿ ಈಜು ಕಲಿಯುತಿರುವೆ ಹಗಲು ಕಾವಲಿಗಿದೆ ನಿನ್ನ ಕೈ ಬಳೆಯ ಝೇಂಕಾರಕೆ ಮನದ ಕತ್ತಲ ಕೋಣೆಯು ಹೊಳೆಯುತಿದೆನಿನ್ನಯ ಸಾಂಗತ್ಯದಲಿ ರಸಸವಿ ಅನುಭವಿಸುತಿರುವೆ ಹಗಲು ಕಾವಲಿಗಿದೆ ಅನುರಾಗದ ಕಡಲಲಿ ಮುತ್ತುಗಳನ್ನು ಅರಸುತಿರುವನು ‘ಮಲ್ಲಿ’ ಹುಚ್ಚನಂತೆಮಿದುವಾದ ಶುಚಿ ಗರ್ಭಗುಡಿಯನು ಪ್ರವೇಶಿಸುತಿರುವೆ ಹಗಲು ಕಾವಲಿಗಿದೆ **************************************

ಗಜಲ್ Read Post »

ಕಾವ್ಯಯಾನ

ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!?

ಕವಿತೆ ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!? ಶೀಲಾ ಸುರೇಶ್ ಕೊರಳುಬ್ಬಿಸಿ ಬಿಕ್ಕುತ್ತಲೇಕಾಯಬೇಕು ಸೆರಗೆಳೆವಸಖನಿಗಾಗಿ…ಬಂದವನೆದುರು ನಾಚಿಕೆಯಸೋಗಾಕಿಬಿನ್ನಾಣದ ನಡೆಹೊತ್ತುಬೆನ್ನಾಕಿ ನಿಂತಿದ್ದುಜಿನುಗಿದ ಹನಿ ಕಾಣದಿರಲೆಂದು ತಡಮಾಡಲೇ ಇಲ್ಲಮುಖತಿರುಗಿಸಿತಡಕಾಡಿದ್ದು ದೀಪವಾರಿಸಲೆಂದುಹುಚ್ಚಾಟಗಳ ಸಹಿಸಿಯೂಕಾದಿದ್ದು ಪೂರೈಸಿದಬಯಕೆ ತಂದ ಹಣವೆಷ್ಟೆಂದು ಬೆತ್ತಲಾದ ದೇಹಕ್ಕೆಮುಚ್ಚಲಾರದ ನೋಟುಗಳುಗಹಗಹಿಸಿ ನಕ್ಕಗಂತೂಮಡುಗಟ್ಟಿದ ಮೌನಕದತೆರೆದು ಬೀದಿಬದಿಯ ಕೊನೆಯಲ್ಲಿಮತ್ತೆ ಬೆಂಕಿಯಾಗಿತ್ತು ಸುಕ್ಕುಗಟ್ಟಿದ ನೆರಿಗೆಹಾಸಿಗೆ ಹೊದಿಕೆಸರಿಪಡಿಸಿನಡುಗುವ ಮೈಯನ್ನೊಮ್ಮೆಕೊಡವಿ ಬಿಗಿಯಾಗಿಸಿನಗೆಯಾದಳು ಸೆರಗಚಾಚಿ…. ಹೋಗಿಬರುವ ನಾಲ್ಕುಗಾಲಿಗಳು ಬೆಳಕನಾರಿಸಲೆ ಇಲ್ಲ.‌‌.ತೂರಾಡುತ್ತಲೇ ಬಂದುಗಪ್ಪೆಂದು ಬಡಿದ ವಾಸನೆಎಸೆದ ಕಾಸು ಮಡಿಲುತುಂಬಲಿಲ್ಲಹಸಿವನೀಗಿಸಲೂ ಇಲ್ಲಸೋತ ದೇಹ ಕುಸಿದುಕಣ್ಣೀರಾದದ್ದು ಕಂದನಕನಸಿಗೆ ನೀರಾಕುವುದೇಗೆಂದು ತಿಳಿಯದೆ. ಕೆಂಪು ಹೂವಿಗೆ ಸೋತುಹರಿಸಿದ್ದು ಕೆಂಪು ಓಕುಳಿಒಂದೊಂದೆ ದಳ ಉದುರಿಮುಡಿಯೇರುವ ಮುನ್ನವೇಮಣ್ಣಾಗಿದ್ದು ಹೂವಿಗೂತಿಳಿಯಲಿಲ್ಲ… ***************************************************

ಪ್ರೇಮಿಗಳ ದಿನವಲ್ಲ ನನಗದು ಕರಾಳದಿನ!? Read Post »

ಕಾವ್ಯಯಾನ, ಗಝಲ್

ಗಜ಼ಲ್

ಗಜ಼ಲ್ ಅಮರೇಶ ಎಂಕೆ ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ ‘ಅಮರ’ಪ್ರೇಮಕ್ಕೆ ನಿನ್ನೆಸರನ್ನೇ ಮರುನಾಮಕರಣ ಮಾಡಬೇಕೆನಿಸಿದೆನಡೆವ ದಾರಿಗೆ ದೀಪವಾಗದಿದ್ದರೆ ಕತ್ತಲೆಯಲ್ಲಿ ಗುರಿ ಸೇರದೆ ಕೊರಗುತ್ತಿದ್ದೆ ****************************************

ಗಜ಼ಲ್ Read Post »

ಕಾವ್ಯಯಾನ

ಗುಲಾಬಿ ಮುಖ

ಕವಿತೆ ಗುಲಾಬಿ ಮುಖ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಚೆನ್ನ ಮಲ್ಲಿಕಾಜು೯ನನಮುರಿದ ಅಲುಗು ಎದೆಯಲ್ಲಿನರಳುವ ನೋವು ಎಂದ ಅಕ್ಕನ ನೋವು ನೋಯದವರೆತ್ತ ಬಲ್ಲರು ? ನಿನ್ನ ಪದ ಪದಗಳುಹೆಜ್ಜೆ ಹೆಜ್ಜೆಗೂ ನನ್ನ ಊರು ಪಾದಗಳನ್ನು ಬಗೆದುಎದೆಯಲ್ಲಿ ಮುರಿದ ಅಲುಗುಗಳಾದರೂನೆತ್ತರು ಸುರಿಯುವ ಹೃದಯದಲ್ಲಿ ನೀನು ಹೂವಂತೆ ಅರಳುತ್ತಿರುತ್ತಿನನ್ನ ಕವನಗಳ ಒಳಗಿಂದಲೇ ಪದ ಪದಗಳ ಮುಳ್ಳುಗಳನ್ನೊಡೆದು ಗುಲಾಬಿಮುಖವರಳಿಸಿ ಮುಗುಳು ನಗುತ್ತಲೇ ಇರುತ್ತಿ … ನಿನ್ನ ನಾಲಗೆ ಚೂರಿಯಾದರೂನನ್ನ ಹೃದಯ ಕೇಕಾಗಿಯೇ ಇರುತ್ತದೆತುಂಡು ತುಂಡುಗಳು ಬಾಯ್ತೆರೆದುನೀನು ನನ್ನ ಎದೆಯಲ್ಲಿ ಹುಟ್ಟಿದದಿನವನ್ನು ನೆನಪಿಸಿಕೊಳ್ಳುತ್ತನಿನ್ನ ಮುಂದೆ‘ಹ್ಯಾಪಿ ಬತ್೯ಡೇ ಟೂ ಯೂ..’ ಹಾಡುತ್ತಮೇಣದ ಬತ್ತಿ ಊದಿ ಆರಿಸುವ ನಿನ್ನ ಹಿಂದೆ ಕತ್ತಲಿಗೆ ಮುಖ ಮಾಡಿ ಎದೆಯು ಒಳಗೊಳಗೇ ಬಿಕ್ಕಿಬಿಕ್ಕಿ ಅಳುವ ಕಂಬನಿಗಳನ್ನುಆಗಸದ ಒಂದು ತುಂಡು ಕಚೀ ೯ಫಲ್ಲಿ ಒರಸಿಕೊಂಡುಅವು ಕಾಮೋ೯ಡಗಳಾಗಿಮಳೆ ಸುರಿಯುವುದನ್ನೇ ನೋಡುತ್ತ…ಬೆನ್ನು ತಿರುವಿ ನಡೆದ ನಿನ್ನ ನೆರಳನ್ನುದೀಪ ಹಿಡಿದು ಹಿಂಬಾಲಿಸುತ್ತಒಳಗಿನ ಕತ್ತಲಲ್ಲಿ ಕುಳಿತ ನನ್ನನ್ನುಆತ್ಮದಲ್ಲೇ ಸಂತೈಸಿಕೊಳ್ಳುತ್ತ… *****************************************

ಗುಲಾಬಿ ಮುಖ Read Post »

ಕಾವ್ಯಯಾನ

ಪ್ರೀತಿಯೆಂದರೆ

ಪ್ರೀತಿಯೆಂದರೆ ಅರುಣಾ ನರೇಂದ್ರ ಪ್ರೀತಿ ಎಂದರೆಬೇರೇನೂ ಅಲ್ಲಅದು ನಿನ್ನ ನೋಟಕಣ್ಣರೆಪ್ಪೆಗಳ ಹುಡುಕಾಟ ಪ್ರೀತಿ ಎಂದರೆನಾನು ನಿನ್ನ ನೀನು ನನ್ನತಿಳಿದುಕೊಳ್ಳುವುದುಸೆಳೆದುಕೊಳ್ಳುವುದು ಪ್ರೀತಿ ಎಂದರೆಒಣಗಿದ ಮರಚಿಗುರುವುದುಹೂ ಅರಳುವುದು ಪ್ರೀತಿಯೆಂದರೆನನಗೆ ನೀನು ನಿನಗೆ ನಾನುಗಂಧ ತೇಯುವುದುಗಾಳಿಯಲಿ ತೂರುವುದು ಪ್ರೀತಿ ಎಂದರೆನಿನಗಾಗಿ ಬರೆದಕವಿತೆಯ ಸ್ವಗತಕಡಲಿನ ಮೊರೆತ *******************************

ಪ್ರೀತಿಯೆಂದರೆ Read Post »

ಕಾವ್ಯಯಾನ

ನನ್ನ-ಅವಳು

ನನ್ನ-ಅವಳು ಸಿದ್ಧರಾಮ ಕೂಡ್ಲಿಗಿ ನನ್ನ ಅವಳು ನನ್ನೆದೆಯೊಳಗಿನ ಪುಟ್ಟ ಹಣತೆ ನೋವು, ನಿರಾಸೆ, ದು:ಖಗಳಾದಾಗಲೆಲ್ಲ ಪಟ್ಟನೆ ಬೆಳಗಿ ಕತ್ತಲೆಯ ದೂಡುವ ಒಳಬೆಳಕು – ನನ್ನ ಅವಳು ಸಾಗರದ ಅಲೆಗಳನ್ನೆಲ್ಲ ತನ್ನ ಹೆರಳೊಳಗೆ ಸುರುಳಿಯಾಗಿಸಿಕೊಂಡು ನನ್ನೆದೆಯ ತೀರಕೆ ಒಲವಿನ ಮುತ್ತಿಕ್ಕುವ ತಣ್ಣನೆಯ ಸಿಂಚನ – ನನ್ನ ಅವಳು ಪ್ರೇಮದ ಹಸಿರ ಮೇಲೆ ಒರಗಿ ಆಗಸವ ನೋಡಿದಾಗಲೆಲ್ಲ ಕಾಣಸಿಗುವ ಬೆಳ್ಮೋಡದ ಸುಂದರ ನಗೆ – ನನ್ನ ಅವಳು ದಣಿವಾದಾಗಲೆಲ್ಲ ಮೈಮನದ ತುಂಬ ಜುಳುಜುಳುನೆ ಹರಿದು ಪ್ರೀತಿಯ ಕಚಗುಳಿಯಿರಿಸಿ ನಕ್ಕುನಲಿಸುವ ಜೀವ-ನದಿ – ನನ್ನ ಅವಳು ನನ್ನೆದೆಯ ಭಾವಗಳ ಗಿರಿಶಿಖರದ ಉತ್ತುಂಗಕ್ಕೇರಿ ನಿಂತಾಗ ಪ್ರೀತಿಯ ಅಗಾಧತೆಯ ತೋರಿ ಬೆನ್ನ ಹುರಿಗುಂಟ ಹರಿವ ತಣ್ಣನೆಯ ಪುಳಕ – ನನ್ನ ಅವಳು ಎದೆಯ ಕಿಟಕಿಯಿಂದ ಇಣುಕಿದಾಗಲೊಮ್ಮೆ ಕಣ್ಣೋಟದಗುಂಟ ಹರಿದುಬಂದು ಮೈದಳೆದು ನಿಲುವ ಪ್ರೇಮವನೇ ಹೊತ್ತ ಬೆಳದಿಂಗಳ ಬಾಲೆ *********************************** –

ನನ್ನ-ಅವಳು Read Post »

ಕಾವ್ಯಯಾನ

ಒಲವಧಾರೆ ಜಯಶ್ರೀ.ಭ.ಭಂಡಾರಿ. ಬದುಕು‌ ಅದ್ಹೇಗ್ಹೆಗೊ ಸಾಗಿತ್ತು ತನ್ನ ಪಾಡಿಗೆಮಧ್ಯರಾತ್ರಿ ಫೋನ ರಿಂಗಣಿಸಿ ಹಾಡಿತುಭಯದಲಿ ಕಣ್ಣುಜ್ಜುತ್ತಾ ಹಲೋ ಎಂದೆಕಂಗ್ಲೀಷಿನಲ್ಲಿ‌ ಏನೋ ಉಲಿಯಿತುಒರಟು ದನಿ.. ಮತ್ತೆ ಮತ್ತೆ ಫೋನ ರಿಂಗುಣಿಸಿ ಹೇಗೋನಂಟಿನ ಗಂಟು ಶುರುವಾಯಿತುಹೀಗೆ‌ ಬಂದ ನೀನು ಹಾಗೆ ಹೋಗುವೆಅಂದುಕೊಂಡಿದ್ದೆ ಆದರೆ ಆದದ್ದೆ ಬೇರೆ. ಮನದ ಕಾಮನ ಬಿಲ್ಲು ಕಮಾನು ಕಟ್ಟೀತುಅಂದುಕೊಂಡಿರಲಿಲ್ಲ ಆಗಂತುಕನೆ..ನೀನು ಗೆಳೆಯನೇ ನೂರು ಬಾರಿ ಯೋಚಿಸಿದೆನಿನ್ನ ನಿನ್ನೆಗಳ ಬಗ್ಗೆ ನನಗ್ಯಾವ ಆಸಕ್ತಿಯಿಲ್ಲ. ನನ್ನ ನಾಳೆಗಳು ಏನಾಗುತ್ತವೆಯೋ ತಿಳಿದಿಲ್ಲ.ನಾವಿಬ್ಬರೂ ಒಂದಾಗಿ ಪಯಣಿಸಲು ಸಾದ್ಯವೆಒಂದೇ ದೋಣಿಯಲಿ ಸಾಗುವದು ಸಾಧುವೆ.ಹಂಬಲದ ಹರಿಗೋಲು ಹಾರೈಸಲಿ ಒಲವೇ.. ಮೊದಮೊದಲು ಆಸಕ್ತಿಯಿಲ್ಲದ ಭಾವನೆಗಳುಈಗ ನಿನ್ನ ನೆನಪುಗಳಿಗೆ ಮುಪ್ಪು ಎನ್ನುವುದೇ ಇಲ್ಲಸದಾ ನಿನ್ನ ನೆನಪಲಿ ಬೆಂದ ಹೃದಯದ ಜ್ವರಕೂನಿನ್ನ ನೆನಪೆ ಮದ್ದು ಕಣೋ ಮಹಾರಾಯಾ ಮಲಗಿದ್ದ ಭಾವನೆಗಳನ್ನು ಬಡಿದೆಬ್ಬಿಸುವ ಹಠಏತಕೋ ಹೇ ಗೆಳೆಯ ಅರಿಯೆ ನಾ ಹೇಳು ನೀಈ ಬದುಕನ್ನು ಎಲ್ಲಿಗೆ ಕೊಂಡೊಯ್ಯುತ್ತಿಯಾವ ದಡ ಸೇರಿಸುತ್ತಿ ನದಿಯಾಗಿ ಹರಿದು ಬರಲೇ. ನೀನಾಡಿದ ಮಾತುಗಳನ್ನೇ ಹೆಕ್ಕಿ ಹೆಕ್ಕಿಕವನವಾಗಿರಿಸಿರುವೆ ನೋಡು ಬಾ ಗೆಳೆಯಾಮಿಂದ ಕಣ್ಣಂಚು ಅದರುವ ಅಧರಗಳುಕಾಯುತ್ತಿವೆ ನಿನ್ನಾಗಮನಕ್ಕಾಗಿ …ಪ್ರೀತಿಯಿಲ್ಲದೆ ಜಗವಿಲ್ಲ ಮತ್ತೆ ಮತ್ತೆ ಸಾಬಿತಾಗಲಿ.* ************************************

Read Post »

You cannot copy content of this page

Scroll to Top