ಗಜಲ್
ಮರವ ತಬ್ಬಿ ಹುಲುಸಾಗಿ ಬೆಳೆದು ಬಳುಕಾಡ ಬಯಸಿದೆ
ಗೆದ್ದಲು ಹಿಡಿದ ವೃಕ್ಷಕ್ಕೆ ಅಂಟಿದ್ದು ನನ್ನದೇ ತಪ್ರು
ಕವಿತೆಯ ‘ದಿನ’ ಅಬ್ಳಿ ಹೆಗಡೆ. ಹುಟ್ಟಿದ್ದಕ್ಕೊಂದು-ಸತ್ತಿದ್ದಕ್ಕೊಂದು-ಪ್ರೀತಿಗೊಂದು-ನೀತಿಗೊಂದು-ಅಂತೇ….ಕವಿತೆಗೂ…ಒಂದು ‘ದಿನ’.ಬರೆಯುವ ವ್ಯಸನ-ಕ್ಕೆ ಬಿದ್ದು ಕತ್ತಲಲಿಹೊಳೆಯದೇ,ಶುಷ್ಕಪದಗಳ-ಮೂಟೆ ಹೊತ್ತು,ಬಯಲ ಬೆಳಕಿಗೆಬಂದರೆ…….ಅಲ್ಲೂ ಮಬ್ಬು,ಸಾವಿನ ನೆರಳು,ನರಳು..ಗಧ್ಗದಿತಕೊರಳು ಎಲ್ಲೆಲ್ಲೂ.ರಾಶಿ,ರಾಶಿ-ಕವಿತೆಯ ಹೆಣ,ಕಣ್ಣೆದುರು,ಈ…ದಿನ ನಿಜಕ್ಕೂ..ಕವಿತೆಯ ‘ದಿನ’ಎಲ್ಲೆಲ್ಲೂಬರೀ ‘ಕೊರೋನ’. **********************
ಕವಿತೆಯ ದಿನಕ್ಕೊಂದು ಕವಿತೆ Read Post »
ಕವಿತೆ ನಾನು-ಅವಳು ಮತ್ತು…! ಕೆ.ಶಿವು.ಲಕ್ಕಣ್ಣವರ ಹುಚ್ಚು ಮನದನುಚ್ಚು ನೂರು ನೆನಕೆಗಳಹುಚ್ಚು ಹೃದಯದಹತ್ತಾರು ಹರಿಕೆಗಳಹೃದಯದೊಳಗಣ ಮನದಮನದೊಳಗಣ ಮರೀಚಿಕೆಯಾದಮಮತೆಯ ಮಂದಿರದಪೂಜ್ಯ ದೇವತೆ ಅವಳಾದದ್ದುಎನ್ನ ಮನದೊಳಗಣಹೃದಯದ, ಹೃದಯದೊಳಗಣಮನದ ಮನವರಿಕೆಗೆ ನಿಲುಕದೇಇದ್ದದ್ದು ನನಗೀಗಸೋಜಿಗ..!ಭಯಮಿಶ್ರೀತ ಅಭಯದದುಃಖ ಸಹಿತ ಸಂತಸದಅಪರಿಮಿತ ಪರಮಾಶ್ಚರ್ಯ ಹೃದಯಂಗಣಕೆ ಲಗ್ಗೆಯಿಟ್ಡುನುಗ್ಗಿದ ಬಟ್ಡಲುಗಣ್ಣಿನ ಅವಳಕುಡಿನೋಟ ಮಾಯೇಓರಿಗೆಯ ಎನ್ನ ಕಂಗಳಓರೆನೋಟದ ಮುಖಾಮುಖಿಯೊಂದಿಗೆಶುರುವಾದದ್ದುಹೃದಯ–ಹೃದಯಗಳ ಅಪ್ಪುಗೆಗೆಮನ–ಮನದ ಬೆಸುಗೆಗೆನಾಂದಿಯಾದದ್ದುನನ್ನನ್ನು ನಾನು ಮತ್ತು ಅವಳನ್ನು ಅವಳುಕಳೆದುಕೊಂಡಿದೆಂದುಈಚೀಚೆಗೆ ತಿಳಿಯುತ್ತಿದ್ದದ್ದುಇನ್ನೂ ಮುಜಗರ..! ನಾನು ಅವಳಲ್ಲಿ, ಅವಳು ನನ್ನಲ್ಲಿಕೆದುಕಿ ಬೆದುಕ್ಕಿತ್ತಿರುವುದುಬೆದುಕುತ್ತಾ ಕೆದಕುತ್ತಿರುವುದುಇನ್ನೂ ಸೋಜಿಗಈ ಸೋಜಿಗದ ಸಂಗತಿಕೊನೆಗೆ ಪರಿಣಾಮಅವಳಿಗೆ ನಾ ಬೇಕು, ನನಗೆ ಅವಳು ಬೇಕುಎಂಬ ದಿಟ್ಟ ಹೆಜ್ಜೆಯಕಟ್ಟಕಡೆಯ ಸತ್ಯಾಸತ್ತ್ಯೆಯ ಸಾರಸಾಗುತ್ತಿದ್ದಂತೆಬೆಕ್ಕಸ ಬೆರಗಾಗಿಸಿತ್ತುಬಚ್ಚಲು ನೀರಿನ ಮನದಮನುಮಕ್ಕಳೇ ತುಂಬಿ ತೇಲಾಡುವಜಾತಿ ಹೊತ್ತು ಸತ್ತಿರುವ ಬುವಿಯಲಿ ****************************
ಗಜ಼ಲ್ ಎ . ಹೇಮಗಂಗಾ ಗುರಿಯತ್ತ ದಿಟ್ಟಿ ನೆಟ್ಟ ಕಂಗಳನು ಇಷ್ಟು ಬೇಗ ಮುಚ್ಚುವುದು ಬೇಕಿರಲಿಲ್ಲ‘ ಸರಿ ‘ ಎಂದು ಗಟ್ಟಿ ಮನದಲಿ ಇಷ್ಟು ಬೇಗ ಮರೆಯಾಗುವುದು ಬೇಕಿರಲಿಲ್ಲ ನೆತ್ತರೊಸರಿದ ಹಾದಿಯಲಿ ಸಾಗಬೇಕಿತ್ತು ಚುಚ್ಚಿದ ಮುಳ್ಳ ಕಿತ್ತೊಗೆಯುತಾಸಮಸ್ಯೆಗಳ ಬಲೆ ತುಂಡರಿಸದೇ ಇಷ್ಟು ಬೇಗ ಹೊರಡುವುದು ಬೇಕಿರಲಿಲ್ಲ ನಿನಗಿಂತ ಅದೃಷ್ಟಹೀನರ ದುಸ್ಥಿತಿ ಕೊಂಚವೂ ಕಾಣದಾಗಿ ಹೋಯಿತೇಕೆಸಾವೇ ಎಲ್ಲಕೂ ಪರಿಹಾರವೆಂದು ಇಷ್ಟು ಬೇಗ ದೂರಾಗುವುದು ಬೇಕಿರಲಿಲ್ಲ ಬಾಳ ನಾಟಕ ನಿಲ್ಲದೇ ನಡೆವುದು ವಿಧಿಯೆಂಬ ಸೂತ್ರಧಾರಿ ಆಡಿಸಿದಂತೆನ್ಯಾಯ ಸಲ್ಲಿಸದೇ ಪಾತ್ರಕೆ ಇಷ್ಟು ಬೇಗ ನಿರ್ಗಮಿಸುವುದು ಬೇಕಿರಲಿಲ್ಲ ಎದುರಾಗುವ ಪ್ರತೀ ಕಷ್ಟ ,ಸುಖವನು ಅನುಭವಿಸಲೇಬೇಕು ಹೇಮಮಸಣದ ಮನೆ ನೀನೇ ಬಯಸಿ ಇಷ್ಟು ಬೇಗ ಸೇರುವುದು ಬೇಕಿರಲಿಲ್ಲ ************************* ಮೊನ್ನೆ ಯುವ ಬರಹಗಾರ್ತಿಯೊಬ್ಬರ ಆತ್ಮಹತ್ಯೆ ನನ್ನ ಮನಸ್ಸಿಗೆ ಅಪಾರ ಆಘಾತವನ್ನು ನೀಡಿತು ಮಧುಸೂದನ್ ಅವರೇ……ಆ ನೋವಿನಲ್ಲಿ ಬರೆದ ಗಜಲ್ ಇದು
ಕವಿತೆ –ಅಬ್ಳಿ,ಹೆಗಡೆಯವರ ಕವಿತೆ ಭರ್ತಿಯಾಗದೆ ‘ಗೈರು’ಗಳು. ಎಂದೋ,,ಎಲ್ಲೋ,,ಯಾರೋಕೊರೆಯುವ ಚಳಿಗೆಮೈ ಕಾಯಿಸಲು,ಹಚ್ಚಿದ ಸಣ್ಣ ಬೆಂಕಿ-ಇಂದು ಈ,,ರಣ-ಬೇಸಿಗೆಯಲ್ಲಿ,ಬಿಸಿಲ ಬೆಂಕಿ-ಯೊಡಗೂಡಿ ದುಪ್ಪಟ್ಟು.ಕಡಲತಡಿಯಿಂದಹಿಮದ ಮುಡಿಯವರೆಗೂ…ಬಿಡದ ಪಟ್ಟು.ಉರಿವಗ್ನಿಕುಂಡಕ್ಕೆತುಪ್ಪ ಸುರಿಯುವವರೆಎಲ್ಲೆಲ್ಲೂ………ದೇವರ ಹಾಜರಿ-ಪುಸ್ತಕದಲ್ಲಿಭರ್ತಿಯಾಗಲೇ-ಬೇಕಿರುವ ‘ಗೈರು’ಗಳು. *************************
ಭರ್ತಿಯಾಗದೆ ‘ಗೈರು’ಗಳು. Read Post »
ಕವಿತೆ ಎತ್ತ ಈ ಪಯಣ…? ಕೆ.ಲಕ್ಷ್ಮೀ ಮಾನಸ ದಿಕ್ಕಿಗೊಂದು ಹಾದಿಯಿರಲು,ಎತ್ತಲೂ ಹಾಯದಾಗಿ,ಕಂಡದ್ದು ಕಾಣದಾಗಿ,ಅರಿತದ್ದು ಆರಿಯದಾಗಿ,ಗೊಂದಲದ ಗೂಡಾಗಿ,ದುಗುಡವು ಮಾಯದಾಗಿ,ಸಾಗುತಿದೆ ಪಯಣವೊಂದು,ತೋಚಿದ ಗತಿಯಲ್ಲಿ…… ಕತ್ತಲೆಯ ನರ್ತನದಲ್ಲಿ,ಭ್ರಮೆಗಳು ಮುಕ್ಕಿದರೂ,ಮನದ ದನಿಯೊಂದು,ಮಾಸಿದ ಹಾದಿಗೆ,ಕಿರುಬೆಳಕ ಸೂಸಿ,ಹಾಸಿದ ಹಾದಿಯಲ್ಲಿ,ಹಾಕುವ ಹೆಜ್ಜೆಗಳಿಗೆ,ನಿಶೆಯ ದರ್ಶನವೋ?ತಾರೆಗಳ ಭಾಗ್ಯವೋ…..? *************************
ಬಿ.ಶ್ರೀನಿವಾಸ್ ಕವಿತೆಯಲ್ಲಿ
ಚರಿತ್ರೆಯಲೂ ಇರದ
ವರ್ತಮಾನಕೂ ಸೇರದ
ಇಂದು…
ಮತ್ತು
ನಾಳೆಗಳ…
ನಡುವೆ ಸಿಕ್ಕ ಜೀವಗಳು ನಾವು.
You cannot copy content of this page