ಕವಿತೆ ನಕ್ಕಿತು
ಕನ್ನಡಿ ಹಿಡಿದೆ
ಕವಿತೆ ಪಕಪಕ ನಕ್ಕಿತು
ನನಗೆ ಕನ್ನಡಿಯ
ಹಂಗೇ ಎಂದು
ಮುಖ ತಿರುಗಿಸಿತು
ಕ಼ಣದ ಕಣ್ಣು ಕಂಡಿದ್ದು
‘ಥೇಟ್’ಅಜ್ಜಿ ಹೇಳಿದ
‘ಚೌಡಿ’ಯೋ…’ಹಬ್ಸಿ’ಯೋ..
ಅಲ್ಲಲ್ಲ…ಯಕ಼ಗಾನದ
ರಾಕ಼ಸಿ..
ರಾಜೇಶ್ವರಿ ಎಂ.ಸಿ.ಅವರ ಕವಿತೆ-
ಈ ಊರಿನ ಸಂದಣಿಯಲಿ
ಭರಪೂರ ಕೊಚ್ಚಿಹೋದ ನನ್ನ,
ನೆನಪೊಂದು ರಮಿಸುತ್ತದೆ.
ನೆನಪೊಂದು ರಮಿಸುತ್ತದೆ. Read Post »
ಕವಿತೆ ಹೊಸವರುಷದ ಸಂಜೆ ವೈ.ಎಂ.ಯಾಕೊಳ್ಳಿ ಆಡಿ ಬೆಳೆದ ಹೊಲತಿಂದ ಮುಟಿಗೆ ಉಂಡಿಕಾದ ದನ,ಹಿಂಡಿ ಕಾಸದೆ ಕುಡಿದ ಹಾಲುಕಳೆದ ಏಸೋ ಕಂಟಿ ಮರೆಯ ನೆನಪುಗಳುಆಗಾಗ ಕಾಡಿಅಣಕಿಸುತ್ತವೆ ಈ ಕೃತ್ರಿಮದ ಬದುಕನ್ನು ಜೋಳದ ಸಿಹಿತೆನಿ ತಿಂದ ಗಿಡಗಡಲೆಸುಟ್ಟ ಸೆಂಗಾ…ಒಂದೇ ಎರಡೇನೆನಪುಗಳ ಬೋರ್ಗರೆತಕಾಟಮಳ್ಳೇ ಕಪಾಟಮಳ್ಳೆಗುರ್ಜಿ ಆಟಗಳ ಗುಂಗುಕಿವಿಯಲ್ಲಿ ಗುಣುಗುಣಿಸಿ ಈಗಯಾವ ಚಾನಲ್ಕಿನ ಬಟನ್ನು ಒತ್ತಿದರೂಅದೇ ಅರೆಬರೆ ನಗ್ನತೆಯ ದರ್ಶನ ಬೇಸರವಾಗಿಆಗುತ್ತದೆ ಇಡಿ ಬದುಕಿನ ಬಟನ್ನೇ ಆಫ್ ಆದಂತೆ ಓಡುತ್ತಿದ್ದ ಬಂಡಿಯ ಬೆನ್ನು ಹತ್ತಿಹಿಡಿಯಲೆಳಸಿದ ಆದ ಮಂಡಿಗಾಯಕ್ಕೆಯಾವುದೊ ರಸದ ಎಲೆಯ ಹಿಂಡಿದ್ದುಪಕ್ಕದ ಬದುವಿನ ಎಳೆಯ ಸೆರಗುಕಿಸಕ್ಕನೆ ನಕ್ಕಿದ್ದುನೆನೆದುಜೀವ ರೋಮಾಂಚನಗೊಳ್ಳುತ್ತದೆ ಎಲ್ಲಿ ಹೋದಾವೊ ಗೆಳೆಯಾಕಾಡಿದ ಕವಿಯ ಸಾಲಿನ ಗುಂಗುಕಣ್ಣಿಗೆ ಕುಕ್ಕುವ ಬಣ್ಣಬಣ್ಣದಮಂದಬೆಳಕಿನ ನಡುವೆನೆನಪುಗಳ ಹಗೆಯೊಳಗೆಅನಂತ ದೀಪ ಮಿಣಕ್ ಮಿಣಕ್ಉರಿದು ಹಂಗಿಸುತ್ತದೆ ದಾರಿ ಕಾಣದ ನಾನು ಬಗೆಬಗೆಯ ಬಣ್ಣದದ್ರವಗಳಲಿತೇಲುವವರ ನಡುವೆಮೂಲೆ ಸೇರುತ್ತೇನೆಜೀವಯಾನದ ಮತ್ತೊಂದು ವರುಷಕಡಿತಗೊಂಡದ್ದಕ್ಕೆವಿಷಾದಿಸುತ್ತ *********************************
ಕಾವ್ಯ ದಿನಕ್ಕೊಂದು ಕವಿತೆ ರೇಷ್ಮಾ ಕಂದಕೂರ ಕವಿತೆ ಎಂದರೆ ಕವಿತೆ ಬರಿ ಕವಿತೆಯಲ್ಲಆಗು ಹೋಗುಗಳ ಭವಿತವ್ಯಒಳ ಹೊರಾಂಗಣದ ಆಟದ ಚೌಕಟ್ಟುತಳಮಳ ಬೇಗುದಿಯ ವಿಸ್ತಾರಹಿಂದಿನ ಮುಂದಿನ ಸ್ಥಿತಿ ಅವಲೋಕನವಾಸ್ತವ ಅನುಭವದ ಅನನ್ಯಭಾವನಾ ಲೋಕದ ವಿಹಾರಿಣಿಸೋಲು ಹತಾಶೆಯ ಕೆದುವಿಕೆಮರು ಪೂರಣಕೆ ಕರಂಡಿಕೆಅಕ್ಷರ ರೂಪದ ಹೊದಿಕೆಉಪಮೆ ಅಲಂಕಾರದ ಕುಶಲತೆಒಲುಮೆಯ ಸಾಂಗತ್ಯಬಯಲಲು ಚಿಗುರಿಗೆ ಸಾಧನಕಟು ಸತ್ಯದ ಆಕಾರತಿರುಳುಗಳಲಿ ಅಡಗಿದ ಸವಿ ರಸತಾಳ ಮೇಳದಿ ಝೇಂಕಾರಅಂತಃಕರಣ,ಆಕ್ರೋಶದ ಒಡನಾಟಮನದ ತುಮುಲದ ಹೊಮ್ಮುವಿಕೆಆನಂದ ಅಶೃತರ್ಪಣದ ಜೋಡಿಕಾವ್ಯವೆಂಬ ಕುಸುರಿಆತ್ಮಾನಂದದ ಸಾರಿಣಿಸೂಕ್ಷ್ಮತೆಗಳ ವ್ಯಾಖ್ಯಾನ ರೂಪತಮಂಧಕೆ ಬೆಳಕು ರೇಖೆಅಸಹನೆಗಳ ತೋರ್ಪಡುವಿಕೆತಿದ್ದಲು ಮರುಕುಟುಗನಿಟ್ಟುಸಿರ ಧಾವಂತಅಕ್ಷರ ರೂಪದ ಸಮುಚ್ಚಯಅರಳಿದ ಮೊಗ್ಗುಸಮರೋಪಾದಿಯಲಿ ಹರಿದುವಿಕಸನದ ನೀತಿ ಪಾಠಬಯಕೆಗಳ ಹಸೆಮಣೆಕಾವ್ಯ ಮನೋಹರಿ. **********************
ಕೃಷ್ಣನ ಮನೆಗೆ ಸುಧಾಮ ಹೋದರೆ ಕತೆ
ಸುಧಾಮನ ಮನೆಗೆ ಕೃಷ್ಣ ಬಂದರೆ ಕವಿತೆ
ವಾಸುದೇವ ನಾಡಿಗ್ ವಿಶೇಷ ಕವಿತೆ Read Post »
You cannot copy content of this page