ಜವಾಬು ಬರೆಯಬೇಕಿದೆ
ಅಳುವುದೆಲ್ಲ ಆಗಲೇ
ಮುಗಿಸಿಯಾಗಿದೆ ಬಾಕಿಯಿಲ್ಲದೆ.
ಅಳುವೀಗ ತನ್ನಿಂತಾನೇ
ನಿಂತು ಹೋಗಿದೆ. ರಮಿಸುವವರಿಲ್ಲದೆ.
ಅಳುವುದೆಲ್ಲ ಆಗಲೇ
ಮುಗಿಸಿಯಾಗಿದೆ ಬಾಕಿಯಿಲ್ಲದೆ.
ಅಳುವೀಗ ತನ್ನಿಂತಾನೇ
ನಿಂತು ಹೋಗಿದೆ. ರಮಿಸುವವರಿಲ್ಲದೆ.
ಕವಿತೆ ಒಂದು ಕವಿತೆ ಡಾ.ಶಿವಕುಮಾರ ಮಾಲಿಪಾಟೀಲ ದ್ವೇಷದಿಂದ ಭೂಮಿ ಮೇಲೆಗೆದ್ದೋರು ಯಾರಿಲ್ಲಆದರೂ ಒಬ್ಬರನೊಬ್ಬರುಪ್ರೀತಿಸೋದು ಕಲಿತಿಲ್ಲ ಯುದ್ದದಿಂದ ಗೆದ್ದ ಕೋಟೆಒಂದು ಉಳಿದಿಲ್ಲಆದರೂ ಒಗ್ಗಟ್ಟಾಗಿಬಾಳೋದು ಕಲಿತಿಲ್ಲ ಎಲ್ಲ ಉಟ್ಟು ಇಲ್ಲೆ ಬಿಟ್ಟುಹೋಗುವುದು ಅರಿತಿಲ್ಲಎಲ್ಲ ಮಾಯೆಯ ಬೆನ್ನುಬಿದ್ದು ಹೊರಗೆ ಬರುತಿಲ್ಲ ಜಾತಿ ಮತದ ಗಡಿ ಮೀರಿಮನುಜರಾಗತಿಲ್ಲಶತ ಶತಮಾನ ಕಳೆದರೂಮಾನವೀಯತೆ ಒಪ್ಪಲಿಲ್ಲ ಶರಣ ಸಂತರ ಶರೀಫರ ಮಾತು ಮನಸಿಗೆ ನಾಟಲಿಲ್ಲಅಜ್ಞಾನದ ಸಂತೆಯಲ್ಲಿಬಿದ್ದು ಒದ್ಯಾಡೋದು ತಪ್ಪಲಿಲ್ಲ ಮಾಡಿದ ಪಾಪ ಬೆನ್ನಿನ ಹಿಂದೆ ಅನುಭವಿಸಲೇ ಬೇಕಲ್ಲಹೇಗೋ ಬದುಕಿ ಪಾರಾಗಲೂಆ ದೇವರು ಬಿಡೊದಿಲ್ಲ ಜೀವ ದೇವರ ಕೊಟ್ಟ ಪ್ರಸಾದಅರಿಯಬೇಕಲ್ಲಅರಿಷ್ಡ್ವರ್ಗಗಳಗೆಲ್ಲೋದು ಕಲಿಯಬೇಕಲ್ಲ ಶ್ರೇಷ್ಠ ಮಾನವನ ಜನ್ಮಹಾಳಾಗಿ ಹೋಗಬಾರದಲ್ಲಪ್ರೀತಿಯಿಂದ ಭೂಮಿನೇಸ್ವರ್ಗ ಮಾಡಬಹುದಲ್ಲ? ಮತ್ತೊಂದು ಜನ್ಮ ನಮಗೆಯಾರಿಗೂ ಬೇಕಿಲ್ಲಈ ಜನ್ಮವನ್ನೆ ಸಾರ್ಥಕಮಾಡಿಕೊಂಡರೆ ಸಾಕಲ್ಲ? ********************************
ಗಜಲ್ ಅರುಣಾ ನರೇಂದ್ರ ಹುಡುಗ ಯಾಕ ನೀ ಹಿಂಗ ಮುಸುಮುಸು ನಗತೀದಿನೀ ಸುಮ್ಮನಿದ್ರೂ ನನಗ್ಯಾಕೋ ನಕ್ಕಂಗ ಕಾಣತೀದಿ ನೀ ಬಿಳಿ ಬಟ್ಟಿ ಉಟಗೊಂಡ್ರ ಬೆಳ್ಳಕ್ಕಿ ಬೆದರತಾವುಗಾಂಧಿ ಟೊಪ್ಪಿಗಿ ಹಾಕ್ಕೊಂಡು ಮದುಮಗನಾಗೀದಿ ಸೋದರ ಮಾವನೆಂದು ಸಲಿಗೀಲಿ ಮಾತಾಡೀನಿಕಣ್ಣ ಕಾಡಿಗಿ ಕದ್ದು ನೀ ಕೊಳ್ಳೆ ಹೊಡದೀದಿ ಬಗಲಿಗೆ ಬಿಂದಿಗೆ ಇಟ್ಟು ಬಳುಕಾಡಿ ಬರುತ್ತಿದ್ದೆಬಾಯಾರಿ ಬಂದು ನೀ ಬೊಗಸೆ ಒಡ್ಡಿ ಕಾಡೀದಿ ಉರಿಬಿಸಿಲ ಬೇಗೆಯಲಿ ಹರದಾರಿ ನಡೆದೀನಿಅರುಣಾ ಎಂತೆಂದ್ಯಾಕ ಕೂಗಿ ಕೂಗಿ ಕರೆದೀದಿ.. *************************************
ಕವಿತೆ ನನ್ನಜ್ಜ….. ಕೋಟಿಗಾನಹಳ್ಳಿ ರಾಮಯ್ಯ ಇರಬೇಕು ಇದ್ದಿರಲೇಬೇಕುಅಜ್ಜನೊಬ್ಬ ನನಗೆನಿತ್ಯ ಮುದ್ದೆ ಗೊಜ್ಜಿಗೆನೋಡಿದವನಲ್ಲ , ಆಡಿದವನಲ್ಲ , ಕಾಡಿದವನಲ್ಲರೂಪ-ಘನರಹಿತ ಮಳೆ ಕಾಡಿನ ಶಬ್ದ ಮಾತ್ರಮಳೆ ಮಾತ್ರ ,ಜಡಿಮಳೆ ಮಾತ್ರಸುರಿಮಳೆ ಮಾತ್ರಸುರಿತುತ್ತಲೇ ಇದೆ ಸಥದಕ್ಕದಲ್ಲ ದಣಿದು ದಾವಾರಿದಕಿರು ನಾಲಗೆಗೆ ಕಿರು ತುಂತುರ ಹನಿನಡೆದೇ ಇದೆ ಥಕ ಥೈಯ್ಯಿ ದೇವಿ ಭಾಗವತಕೇಳಿಯೂ ಕೇಳದಂತೆನೋಡಿಯೂ ನೋಡದಂತೆಹಗಲೆನ್ನದೆ ಇರುಳೆನ್ನದೆ ನಡದೇ ಇದೆ ಚಂಡಮದ್ದಳೆನಡೆದಿದ್ದಾನೆ ನನ್ನಜ್ಜ ನನ್ನ ಕುರುಹ ಕಂಡವನಂತೆ ಗತಅರಬ್ಬಿನ ಮರಳುಗಾಡಲಿಒಂಟೆ ಕೊರಳ ಗಂಟೆ ಕಿಂಕಿಣಿಯಲಿಗೊತ್ತಿದ್ದೂ ನಾನು ಇಲ್ಲಿರುವೆ ಎಂದುಕೈಗೆ ಸಿಗದಂತೆ ಹೊನ್ನೇರಿನಲಿಬಂದಿದೆ ಬಿತ್ತನೆ ಹತ್ತಿರನೊಗ ಹೇರಿಸಿಲ್ಲ ಇನ್ನೂ ಹೆಗಲಿಗೆಉತ್ತು ಬಿತ್ತುವ ಮಾತು ಅತ್ತಗೆದತ್ತೂರಿ , ಗರಿಕೆ , ತುಂಗೆ ಒತ್ತಗೆ ಒತ್ತೊತ್ತಗೆತುಂಬಿ ಹೋಗಿದೆ ನೆತ್ತಿ ನೊಣ ಸೊಕ್ಕಿಗೆಡ್ಡೆ ರಸ ಬೊಡ್ಡೆಅರಸೊತ್ತಿಗೆಯ ಉನ್ಮತ್ತ ಹಕ್ಕಿನಲಿಪಾದುಕಾ ಪಟ್ಟಾಭಿಷೇಕದ ಅಣಕು ಪ್ರಹಸನದಲಿಅಜ್ಜ ಬಂದಾಗ ಬೀಜ ಬಿತ್ತುವ ಹೊತ್ತುಹದಗೊಂಡಿಬೇಡವೇನು ನೆಲ ಉತ್ತುನನ್ನಜ್ಜ ನೇಗಿಲಯೋಗಿಕಣ್ಣೂರ ಕಪ್ಪು ಕುಂಕುಮ ಭೂಮಿಯಲಿಶಬ್ದ , ಅಕ್ಷರ , ಧ್ವನಿ ರೂಪಬಿತ್ತುವ ಕೂರಿಗೆಯ ರಾಗ ಪರಾಗಬಿತ್ತಲೇ ಬೇಕಲ್ಲ ಅಜ್ಜ ಬಂದಾಗಹಿಡಿದ ಕೈಕೂರಿಗೆಗೆ ಒಂದೆರೆಡಾದರೂ ಘಟ್ಟಿ ಕಾಳುಅರಳಿ ಹೂವ್ವಾಗುವಂತೆ ಹುಚ್ಚೆಳ್ಳ ಹೂ ಬಾಳುನನ್ನಜ್ಜ ಹೂಗಾರಮಕರಂದ ಮಮಕಾರರಸಸಿದ್ದ ಮಾಯಕಾರಗಂಧ ಹೂವ್ವಿನದಿರಲಿನರನರವ ಕುಸುಮದ ಒಡಲೇ ಇರಲಿತೀಡಿ ತಂಗಾಳಿ , ನಾದು ಬಿರುಗಾಳಿಪಕಳೆ ಹೂ ಕಾಡ್ಗಿಚ್ಚನಬ್ಬಿಸಿ ಉರುಳಿಸಿ ಹೊರಳಿಸಿಘಮಲು ಘಮಲಿನ ಹೂ ದವನ ಬೆಳೆವ ಮಾಲಿಕನಸಿನ್ಹೂದೋಟಗಳ ಕೂಲಿಆದಿಯಿಂದಲೇ ಹೊತ್ತಿದ್ದಾನೆ ಚಟ್ಟಪಟ್ಟಆಳರಸರ ಪಲ್ಲಕಿ ಮೇನೆ , ಸತ್ತ ನಾಯಿ , ಸಗಣಿ,ಬಂಗಾರದ ಗಣಿನನ್ನಜ್ಜ ಮಾಲಿಗೂ ಮೊದಲು ಝಾಡಮಾಲಿಗುಡಿಸಿ ಕಲ್ಯಾಣದ ಓಣಿಗಳನುಆವಂತಿ , ಅಮರಾವತಿ , ಹಸ್ತಿನಾವತಿ , ರಾಜಬೀದಿಗಳನು….ಮುಗಿದ ದಾಸೋಹದ ಎಂಜಲೆಲೆ ರಾಶಿಅಗಳು , ತೇಗು , ಹೂಸು ಉಚ್ಚೆ ಬಚ್ಚಲ ಬಾಚಿಸತ್ತೆಮ್ಮೆ ಕರ ಹೊತ್ತು ನಡೆದವನು….ಕೂದು ಗುಡ್ಡೆ ಬಾಡು ಪಾಲ್ಹಾಕಿ ಈಚಲ ಹೆಂಡಕೆ ಸುಟ್ಟು ಕೊರಬಾಡಾಗಿ ನೆಂಜಿಕೊಂಡವನು.ನನ್ನಜ್ಜ ಕಟುಕ.ಕಡಿಯುತ್ತಾನೆ , ಕತ್ತರಿಸುತ್ತಾನೆ , ನರ ಹರಿಯುತ್ತಾನೆಹಿಡಿದ ಕಟುಗತ್ತಿ ಗುಲಾಬಿ ಗುತ್ತಿಕುಸುಮ ಕೋಮಲ ಖಡ್ಗದಲಗುನನ್ನಜ್ಜ ಕಡಿಯುತ್ತಾನಾದ್ದರಿಂದ ಕಟುಕ.ನನ್ನಜ್ಜ ಮೂಳೆ , ಮಾಂಸದ ತಜ್ಞ….ಗೋವಿನದೂ ಸೇರಿದಂತೆಕೋಣನದಂತೂ ಹೆಂಡ ಕುಡಿದಷ್ಟೇ ಸಲೀಸು .ಅಜ್ಜ ಕಂಡಿಲ್ಲ ಇನ್ನೂ…ನಡೆದ ಹೆಜ್ಜೆ ಗುರುತುಹಚ್ಚೆಯಾಗಿದೆ ಹೆಗ್ಗಲ್ಲ ಬೆನ್ನಮೂಳೆಯಲಿ…ನೀಲ ನಕ್ಷೆಯಾಗಿದೆ ಆಕಾಶ – ಬ್ರಹ್ಮಾಂಡ ಲೀಲೆಯಲಿನನ್ನಜ್ಜಬುದ್ದ , ಮಹಮದಸಿದ್ದ ರಸಸಿದ್ದಏಸುವಿನ ಮೊಳೆ ಗುರುತುಇನ್ನೂ ಅಂಗೈಯಲ್ಲಿ ಮಾಯದೆ ಹಸಿ ಹಸಿಇರಾಕಿನ ಮರಳ ಹಾದಿಗಳು ಹಾಸಿವೆಅವನ ಪಾದಗಳಡಿಗೋ ಪಾದವಾದರೂ ಅಷ್ಟೇ ಹುಲಿ ಪಾದವಾದರೂ ಅಷ್ಟೇಪ್ರೇಮದ ಸಿರಿಪಾದ ಎದೆ ಹಾಲು ಸುರಿಸುವಾಗಖರ್ಜೂರ , ಕಾಫಿ , ಹೂಬಳ್ಳಿ ಜವೆಗೋದಿಜೊತೆಗೂಡಿ ಹಿಂಬಾಲಿಸಿ ಬರುವಾಗನನ್ನಜ್ಜನ ಹೆಚ್ಚೆಯಡಿಯಲ್ಲಿ ನಾದ ನದಿಜೀವವೃಕ್ಷದ ಚಿಗುರುನನ್ನಜ್ಜನ ನಡೆಮೃದು ಮಧುರಪ್ರೇಮ ಕಾವ್ಯದ ಗುಲಾಬಿ ಅತ್ತರಿನ ಘಮಲುಬುಲ್ ಬುಲ್ ಸಿತಾರ ಝರಿ ಜುಳು ಜುಳು ಗುನುಗು… *****************************************************
ಕವಿತೆ ತಿಮಿರ ಡಾ. ಅಜಿತ್ ಹರೀಶಿ ಸೂಡಿ ಹಿಡಿದು ಓಡಾಡುವ ಕಾಲದಲ್ಲಿಕೊಳ್ಳಿ ದೆವ್ವಗಳು ಕಾಲಿಗೊಂದು ತಲೆಗೊಂದುಹರದಾರಿ ನಡೆದು ಸಾಗುವ ದಿನಗಳಲ್ಲಿಅವುಗಳ ಜಾತ್ರೆ ರಸ್ತೆ ಪಕ್ಕದಲ್ಲಿ ಕಳೆದ ಬಾಯಿ ಮುಚ್ಚದಂತೆ ಲಾಟೀನು-ಬೆಳಕಿನಲ್ಲಿ ಕೇಳಿ ಸುದ್ದಿ ಹೆದರಿಕೆ ಬೇಜಾನುತಿರುಚಿದ ಪಾದ ಗುರುತರವಾದ ಗುರುತುದೆವ್ವ ಕಂಡವನಿಂದ ಇತರರಿಗೆ ತರಬೇತು! ಕತ್ತಲಿನಲ್ಲಿ ಇಣುಕುವ ಬೆಳಕು, ಬರುವ ಶಬ್ದಎಂತಹವರನ್ನೂ ಮಾಡುವುದು ಸ್ತಬ್ಧಎಲ್ಲರೊಳಗೊಬ್ಬ ಕವಿ, ಆಗ ರವಿಯಿಲ್ಲಕಲ್ಪನೆಗೆ ಕಾಲು ಬಾಲ ಗಲ್ ಗಲ್, ಸರ ಪರಚಿತ್ತದಲ್ಲಿ ಮೂಡುವ ಚಿತ್ರಗುಂಡಿಗೆಯಲ್ಲಿ ನಡುಕಆಕ್ರಮಿಸುವ ಆತಂಕ ಅಕ್ರಮಕ್ಕೆ ಸೂಕ್ತ ಅಮಾವಾಸ್ಯೆವಿದ್ಯುತ್ ಕಡಿತಗೊಳಿಸಿಯೂಹುಟ್ಟಿಸುವರು ಅಮಾಸೆಯ ಸಮಸ್ಯೆಚುನಾವಣೆಯ ಹಿಂದಿನ ದಿನಗಂಧದ ಮರ ನಾಪತ್ತೆಯಾದ ಕ್ಷಣ ಕತ್ತಲು ಬಗ್ಗೆ ಅಜ್ಜಿ ಹೆದರಿಸಿದ್ದುಹುಳ ಹುಪ್ಪಟೆ ತುಳಿಯದಿರಲೆಂದುಕೂರುತ್ತದೆ ಮಗುವಿನ ಮಿದುಳೆಂಬಹಸಿ ಗೋಡೆಯಲ್ಲಿ ಮಣ್ಣಾಗಿಕತ್ತಲು ಭಯಾನಕ ಕಪ್ಪಾದಾಗ ನೆರಳು ಮಂದಬೆಳಕಿನಾಟಆಕೃತಿಗಳಿಗೆ ಜೀವ, ಪಿಶಾಚಿ ಕಾಟಆತ್ಮಸ್ಥೈರ್ಯದ ಅಗ್ನಿಪರೀಕ್ಷೆಪಾಪ ಪ್ರಜ್ಞೆ ಭೂತವಾಗಿ ಶಿಕ್ಷೆ ರಕ್ತ ಕಾರಿ, ಬೆನ್ನಮೇಲೆ ಮೂಡಿ ಬೆರಳುಮುರಿದು ಗೋಣು, ಧ್ವನಿಯಡಗಿಸತ್ತವರ ಕತೆಯೆಲ್ಲ ಎದ್ದು ಬಂದುಅಂತರ್ಪಿಶಾಚಿಯಾಗಿ ಅಲೆದಾಡಿ ಮುಗಿಯದ ಕತೆ; ಹೆದರಿಮೂತ್ರ ವಿಸರ್ಜನೆ ಮಾಡಿದವರದುಅದನ್ನೇ ದಿಗ್ಬಂಧನದ ವೃತ್ತವಾಗಿಸಿದವರದು ಕತ್ತಲು ಮಾತ್ರ ದಿಗಿಲು ಸೃಷ್ಟಿಸುವುದಾದರೆಕುರುಡನ ಜೀವನ ಹೇಗೆ? ಬೆಳಕ ಕಂಡವಗೆ ಕತ್ತಲ ಭಯಬಾಳ ಅನುಭವಿಸಿದವಗೆ ಸಾವ ಭಯಹಗ್ಗ ಹಾವಾಗಿ ಹತನಾಗುವ ಉಪಮೆಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ.**************************************************************
ಕವಿತೆ ದಾಖಲೆಗಳಿವೆ ವಸುಂಧರಾ ಕದಲೂರು ಸುಧಾರಕರನು ಹುಚ್ಚರೆಂದುಕರೆದು ಥಳಿಸಿದುದಕೆ, ಕೂಡುರಸ್ತೆಗಳ ನಡುವಲ್ಲಿ ಹೀಗಳೆದುಕಲ್ಲುತೂರಿ ಕಟುನುಡಿ ಮಳೆಗರೆದು,ತೋಯಿಸಿ ನೋಯಿಸಿದುದಕೆ. ಗಾಸೀಪು ತೂಪಾಕಿಗಳ ತೂಫಾನುಸಿಡಿಸಿ ಗಡೀಪಾರು ಮಾಡಿಸಿ; ಗುಲ್ಲೆಬ್ಬಿಸಿ ಗಲ್ಲಿಗೇರಿಸಿ, ಗುಂಪುಗುಂಪಾಗಿ ಗುಟ್ಟು ಮಾಡಿ; ಒಳಸಂಚು ಮಾಡಿ ಮೂಲೆ ಗುಂಪಾಗಿಸಲು ಕಾರ್ಯ ಗೇಯ್ದದದಕೆ. ಇದರ ನಡುವೆಯೂ ಅವರು, ಅವರ ವರ್ತಮಾನಗಳಲಿ ದಂತಕತೆಗಳಾಗಿ, ಭವಿಷ್ಯತ್ತಿನಲಿ ಹುತಾತ್ಮರಾಗಿ ಇತಿಹಾಸದ ಪುಟಗಳಲಿ ಮಹಾತ್ಮರಾಗಿ ಸೇರಿಹೋದುದಕೆ ಸಾಕ್ಷ್ಯಗಳಿವೆ.. ********************************************
ಕವಿತೆ ಕವಿತೆಯ ಜೀವನ ಟಿಪಿ.ಉಮೇಶ್ ಅಸಹಾಯಕ ಅಕ್ಷರದ ಕಾಲುಗಳ ಊರುತ್ತಾಪೇಲವ ಮುಖ ಚಿಹ್ನೆಗಳ ಹೊತ್ತು ಬಂದವುಪ್ರೇಯಸಿಯ ಮನೆಗೆ;ಭಿಕ್ಷಾಂದೇಹಿ!ಕೆದರಿದ ಕೂದಲು ಕೆಸರಾದ ಕೈಕಾಲು ಹರಿದ ಬಟ್ಟೆಗಳ ಮುಗ್ಗಲು ನಾರುತ್ತಿರುವಕವಿತೆಗಳ ಕಂಡೊಡನೆ;ಪ್ರೇಯಸಿ ಅನ್ನ ಹಾಕುವುದಿರಲಿಒಂದು ಹಸನಾದ ಮಾತುಹಸನ್ಮುಖ ನಗುವನ್ನು ತೋರದೆದಡಾರನೆ ಕದವಿಕ್ಕಿಗೊಂಡು ಒಳ ಹೋದಳು!ಮರುದಿನಕವಿತೆಪತ್ರಿಕೆಯಲ್ಲಿ ರಾರಾಜಿಸುತ್ತಿದೆ!!ಬಹುಖ್ಯಾತಿಗೊಂಡು ಮನೆ ಮನ ಬೀದಿ ಓಣಿಗಳಲ್ಲಿ ಕುಣಿಯುತ್ತಿದೆ!ಪ್ರೇಯಸಿ ದಾರಿಗಿಳಿದು ಬಂದವಳೇ;ಕವಿತೆಯ ಬೆನ್ನ ನೇವರಿಸಿದಂತೆ ಮಾಡಿಜುಟ್ಟು ಹಿಡಿದುಕೊಂಡುದರದರನೆ ಮನೆಯ ಒಳಗೆ ಎಳೆದೊಯ್ದಳು! ಬೀದಿಯಲ್ಲಿ ನಿಶ್ಯಬ್ಧ!ಮನೆಯಲ್ಲಿ ಸಶಬ್ಧ! ಅವರ ಮನೆ ಕತೆ ನಮಗೆ ನಿಮಗೇಕೆಲೋಕದ ಡೊಂಕು ಕೊಂಕು ತಿದ್ದಲು ನಾನ್ಯಾರು ನೀವ್ಯಾರು? ಕವಿತೆಗೆ ತನ್ನ ಮನೆ ದಕ್ಕಿತಲ್ಲ;ಅನುಭವಿಸಲಿ ಬಿಡಿ ಇನ್ನಾದರೂ ಜೀವನ!
ಕವಿತೆ ಅಮೃತಾ ಮೆಹಂದಳೆ ಹೊಸ ಕವಿತೆ ಕೋಮುದಂಗೆಗೆಆಕ್ರೋಶಗೊಳ್ಳುವ ನಾನುಸಹಿಷ್ಣುತೆಯ ಕವಿತೆ ಬರೆವೆಸಾಮಾಜಿಕ ಕಾಳಜಿಯಬಗ್ಗೆ ಬರೆವ ನಾನುಇಂದು ನೋಡಬೇಕಾದಹೊಸ ಚಿತ್ರದ ಪಟ್ಟಿ ಮಾಡುವೆಸೀರೆ ಚಾಲೆಂಜ್ ಗೆಸಿಡಿಮಿಡಿಗೊಳ್ಳುವ ನಾನುಸೆಲ್ಫೀಯಲ್ಲಿ ಮೈಮರೆವೆಹಸಿದವರ ವಿಡಿಯೋಗೆಕಣ್ಣೀರ್ಗರೆಯುವ ನಾನುಪಾನಿಪುರಿಗೆ ಪುದಿನಾ ಜೋಡಿಸುವೆರಾಜಕೀಯ ದೊಂಬರಾಟಕ್ಕೆಅಸಹ್ಯಿಸಿಕೊಳ್ಳುವ ನಾನುಭಾಷಣಕ್ಕೆ ಕೈತಟ್ಟುವೆಉಚಿತ ಭಾಗ್ಯಗಳ ಬಗ್ಗೆಮೆಚ್ಚುಗೆ ತೋರುವ ನಾನುಪರಿಣಾಮಗಳಿಗೆ ಕುರುಡಳಾಗುವೆಬೇಕಿಂಗ್ ನ್ಯೂಸ್ಹಂಚಿಕೊಳ್ಳುವ ನಾನುಹಕ್ಕಿಗಾಗಿ ನೀರಿಡಲು ಮರೆವೆಆರ್ಥಿಕ ಮುಗ್ಗಟ್ಟಿಗೆಚಿಂತಿತಳಾಗುವ ನಾನುಬಾರದ ಪಾರ್ಸೆಲ್ಲಿಗೆ ಮರುಗುವೆನಾಳಿನ ಭವಿಷ್ಯಕ್ಕೆಸಿನಿಕಳಾಗುವ ನಾನುಹಪ್ಪಳಕ್ಕೆ ಅಕ್ಕಿ ನೆನೆಸುವೆಆಧುನಿಕ ಜೀವನಶೈಲಿಗೆಹಿಡಿಶಾಪ ಹಾಕುವ ನಾನುಪಿಜ್ಜಾ ಆಫರಿಗೆ ಕಣ್ಣರಳಿಸುವೆದೇಶಪ್ರೇಮದ ರೀಮೇಕ್ ಹಾಡಿಗೆಲವ್ ಇಮೋಜಿ ಒತ್ತುವ ನಾನುಮೆಚ್ಚಿನ ನಟನ ಬಿಲ್ಡಪ್ಪಿಗೆ ಸೋಲುವೆವೈರಸ್ಸಿಗೆ ಬಲಿಯಾದವರಸಂಖ್ಯೆಗೆ ಖಿನ್ನಳಾಗುವ ನಾನುಟೂರ್ ಪ್ಯಾಕೇಜಿನ ಲೆಕ್ಕಹಾಕುವೆಸೇವೆಗೈಯುವ ವಾರಿಯರ್ಸ್ ಗೆಬೆಂಬಲ ಸೂಚಿಸುವ ನಾನುಕಸ ಒಯ್ಯದ್ದಕ್ಕೆ ದೂರು ದಾಖಲಿಸುವೆದೇಶವಿದೇಶಗಳ ನೀತಿನಿಯಮವಿಶ್ಲೇಷಿಸುವ ನಾನುತರಕಾರಿ ಕೊಳ್ಳಲೂಗೊಂದಲಗೊಳ್ಳುವೆಈ ಮಣ್ಣಿನ ನಾಗರೀಕಳು ನಾನುನನ್ನ ನೆಲವ ಹೇಗೆ ಉಳಿಸಿಕೊಳ್ಳುವೆ!! ****************************
ಅಮೃತಾ ಮೆಹಂದಳೆ ಹೊಸ ಕವಿತೆ Read Post »
ಕವಿತೆ ಒಲವಿನ ಭೇಟಿ ಆಸೀಫಾ ಮಂದಹಾಸದ ಮುಖವೇನೋ ಶಾಂತವಿತ್ತುಕಂಗಳು ಸಾವಿರಸಾವಿರ ಮಾತು ಹೇಳುತ್ತಿತ್ತುಮನದ ತಲ್ಲಣಗಳು ಮುಖವಾಡ ಧರಿಸಿತ್ತುಅಸಹಾಯಕತೆ ನನ್ನಲಿ ತಾಂಡವಾಡುತಿತ್ತು ಪರಿಚಿತ ಸ್ಪರ್ಷವೊಂದು ನನ್ನ ಕರೆದಂತಿತ್ತುಅಧರದ ಸಕ್ಕರೆ ಸವಿವ ಬಯಕೆಯುಇರಿದಿರಿದು ತಿವಿದು ಕೊಲ್ಲುವಂತಿತ್ತುಮತ್ತದೇ ಅಸಹಾಯಕತೆ ಕಾಡುತಿತ್ತು ನೋಡಿದಷ್ಟೂ ನೋಡಬೇಕೆನಿಸುವ ನೋಟಕಣ್ಣುಕಣ್ಣಲ್ಲೇ ಸಂಭಾಷಣೆಯ ಸವಿಯೂಟಸನಿಹ ಸರಿದುಹೋದಾಗ ಹೆಚ್ಚಿದ ಪುಳಕಜಗಕೆ ಕಾಣದು ಪ್ರೇಮದ ವಿಚಿತ್ರ ಹೋರಾಟ ಬಹುದಿನಗಳ ನಂತರದ ಮುಖಾಮುಖಿ ಭೇಟಿಹಸಿರಾಗಿಸಿತು ಕಳೆದ ಕ್ಷಣಗಳ ಅಮೃತ ಸ್ಮೃತಿತಣಿಯಿತು ಅವನ ಕೊರಗಿನ ಹಂಬಲದ ಸ್ಥಿತಿಅಂತೂ ಒಲವಿಗೆ ಆಯಿತು ಒಲವಿನ ಭೇಟಿ **********
ಗಜಲ್ ರೇಮಾಸಂ ಹಳೆಯ ಹೊಸತುಗಳ ಜಗಳದಲಿ ಬೆಸೆದಿರಲಿ ಸಮರಸ/ಬೆರೆತು ಅರಿತ ಬಾಳುವೆಯಲಿ ಜಿನುಗುತಿರಲಿ ಮಧುರಸ// ಹಮ್ಮು ಬಿಮ್ಮಿನ ಜಗ್ಗಾಟದಲಿ ನುಗ್ಗಾಗದಿರಲಿ ಜೀವನ/ಪ್ರೀತಿಯು ಸವೆಯಲು ಬಿಡದೆ ಚಿಮ್ಮುತಿರಲಿ ಪ್ರೇಮರಸ// ಹೂಡಿಕೆಯಾಗಲಿ ಅನುರಾಗದ ರಿಂಗಣವು ಅನುದಿನವು/ನೋವುಗಳು ಬೇವು ಬೆಲ್ಲದಂತೆ ಸುರಿಯುತಿರಲಿ ನವರಸ// ವಿರಸವು ತರುವ ಮಾತಿಗೆಲ್ಲ ವಿರಾಮದ ಚಿಹ್ನೆ ಇಡುತಿರಲಿ/ಸರಸ-ಸಲ್ಲಾಪದ ಪದಗಳು ಪುಟಿದು ಚೆಲ್ಲುತಿರಲಿ ಗಾನರಸ// ತಾಯಿಯ ಸೆರಗು ಹೊದಿಕೆಯಂತಿರಲಿ ಪ್ರೇಮದ ಚಪ್ಪರವು/ಗಂಧದಂತೆ ಜೀವಗಳು ಪಸರಿಸುತ ತೇಯುತಿರಲಿ ದ್ರವ್ಯರಸ/ ***************************
You cannot copy content of this page