ಬಂಜೆ ಸಂಜೆ.
ಕತ್ತಲು ಸುತ್ತ
ಮೌನ
ಮಾತಾಗಲು
ಬಯಸಿದಷ್ಟೂ
ಮಾತು
ಮೌನ-
ವಾಗುತ್ತದೆ
ಗಜಲ್ ಸಿದ್ಧರಾಮ ಹೊನ್ಕಲ್ ದಿನಾರಾತ್ರಿ ನೆನಪುಗಳ ಕಾಡಾಟ ಅತಿಯಾಗಿ ನಾಳೆಯಿಂದವಳ ಮರೆಯಬೇಕು ಅನ್ಕೋತೇನೆಇವಳಿಂದೆನಾಗಬೇಕಿದೆ ಈ ಮನಸಿಗರಾಯಳ ಸಹವಾಸವೇ ಬಿಟ್ಟು ಬಿಡಬೇಕು ಅನ್ಕೋತೇನೆ ಸಿಟ್ಟು ಸೆಡವು ದು:ಖ ಸೊಕ್ಕು ಸ್ವಾಭಿಮಾನ ನೆನಪಾಗಿ ಕ್ಷಣ ಹೀಗಂದುಕೊಂಡಿರುತ್ತೇನೆಅವಳು ಕೊಟ್ಟ ಕಂಫರ್ಟಲಿ ಶುಭರಾತ್ರಿ ಹೇಳಿ ಮನಸಾರೆ ಮರೆಯದಿರಬೇಕು ಅನ್ಕೋತೇನೆ ಬೆಳಿಗ್ಗೆ ಎದ್ದೊಡನೆ ಹಿಂದಿನದೇನು ನೆನಪಿಡದೆ ಹೃದಯದಿ ಶುಭೋದಯ ಹೇಳಿರುತ್ತೇನೆಮಾತು ಕಥೆ ಯಥಾ ರೀತಿ ಪ್ರೀತಿ ಮೂಗಿನ ತುದಿಯ ಕೋಪವಿರಬೇಕು ಅನ್ಕೋತೇನೆ ಅನುನಯದ ಮಾತಿಗಿಂತ ಕೋಪತಾಪದ ಮಾತು ತುಸು ಜಾಸ್ತಿ ಆಗಿದೆಯೇನೋಆದರೇಕೋ ಬಿಟ್ಟೆನೆಂದರೂ ಬಿಡದೀ ಮೋಹ ಸದಾ ಸಂಗದಲ್ಲಿರಬೇಕು ಅನ್ಕೋತೇನೆ ಅವಳಿಗೆ ಏನಿವೆಯೋ ಸಂಕಟ ಹೇಳಲಾರಳು ಕೇಳಿ ಇರಲೆಂದು ಸಂತೈಸುವ ಹೃದಯವಂತೆಹೊನ್ನಸಿರಿ’ಬದುಕಿರಲಾರ ಅನುರಾಗದಿ ಸದಾ ನೀನು ಜೊತೆಗಿರಲೇಬೇಕು ಅನ್ಕೋತೇನೆ *********************************
ಮುಗಿಯದ ಕನವರಿಕೆಗಳ ನಡುವೆ
ಜೀವ ಬಾರದ ಕಲ್ಪಿನೆಗಳಿಗೆ ಕಡಿವಾಣ ಹಾಕಲಾಗದೆ ಮುನಿಸಿಕೊಂಡ ರಾತ್ರಿಗಳು
ಆಗೆಲ್ಲಾ ಒದ್ದೆಯಾಗುತ್ತಿದ್ದದ್ದು ಅಮ್ಮನ ಮಡಿಲು.
ಕಲ್ಪನೆಗೂ ಜೀವ ಬರುವಂತಿದ್ದರೆ Read Post »
ಅಳುವುದೆಲ್ಲ ಆಗಲೇ
ಮುಗಿಸಿಯಾಗಿದೆ ಬಾಕಿಯಿಲ್ಲದೆ.
ಅಳುವೀಗ ತನ್ನಿಂತಾನೇ
ನಿಂತು ಹೋಗಿದೆ. ರಮಿಸುವವರಿಲ್ಲದೆ.
ಕವಿತೆ ಒಂದು ಕವಿತೆ ಡಾ.ಶಿವಕುಮಾರ ಮಾಲಿಪಾಟೀಲ ದ್ವೇಷದಿಂದ ಭೂಮಿ ಮೇಲೆಗೆದ್ದೋರು ಯಾರಿಲ್ಲಆದರೂ ಒಬ್ಬರನೊಬ್ಬರುಪ್ರೀತಿಸೋದು ಕಲಿತಿಲ್ಲ ಯುದ್ದದಿಂದ ಗೆದ್ದ ಕೋಟೆಒಂದು ಉಳಿದಿಲ್ಲಆದರೂ ಒಗ್ಗಟ್ಟಾಗಿಬಾಳೋದು ಕಲಿತಿಲ್ಲ ಎಲ್ಲ ಉಟ್ಟು ಇಲ್ಲೆ ಬಿಟ್ಟುಹೋಗುವುದು ಅರಿತಿಲ್ಲಎಲ್ಲ ಮಾಯೆಯ ಬೆನ್ನುಬಿದ್ದು ಹೊರಗೆ ಬರುತಿಲ್ಲ ಜಾತಿ ಮತದ ಗಡಿ ಮೀರಿಮನುಜರಾಗತಿಲ್ಲಶತ ಶತಮಾನ ಕಳೆದರೂಮಾನವೀಯತೆ ಒಪ್ಪಲಿಲ್ಲ ಶರಣ ಸಂತರ ಶರೀಫರ ಮಾತು ಮನಸಿಗೆ ನಾಟಲಿಲ್ಲಅಜ್ಞಾನದ ಸಂತೆಯಲ್ಲಿಬಿದ್ದು ಒದ್ಯಾಡೋದು ತಪ್ಪಲಿಲ್ಲ ಮಾಡಿದ ಪಾಪ ಬೆನ್ನಿನ ಹಿಂದೆ ಅನುಭವಿಸಲೇ ಬೇಕಲ್ಲಹೇಗೋ ಬದುಕಿ ಪಾರಾಗಲೂಆ ದೇವರು ಬಿಡೊದಿಲ್ಲ ಜೀವ ದೇವರ ಕೊಟ್ಟ ಪ್ರಸಾದಅರಿಯಬೇಕಲ್ಲಅರಿಷ್ಡ್ವರ್ಗಗಳಗೆಲ್ಲೋದು ಕಲಿಯಬೇಕಲ್ಲ ಶ್ರೇಷ್ಠ ಮಾನವನ ಜನ್ಮಹಾಳಾಗಿ ಹೋಗಬಾರದಲ್ಲಪ್ರೀತಿಯಿಂದ ಭೂಮಿನೇಸ್ವರ್ಗ ಮಾಡಬಹುದಲ್ಲ? ಮತ್ತೊಂದು ಜನ್ಮ ನಮಗೆಯಾರಿಗೂ ಬೇಕಿಲ್ಲಈ ಜನ್ಮವನ್ನೆ ಸಾರ್ಥಕಮಾಡಿಕೊಂಡರೆ ಸಾಕಲ್ಲ? ********************************
ಗಜಲ್ ಅರುಣಾ ನರೇಂದ್ರ ಹುಡುಗ ಯಾಕ ನೀ ಹಿಂಗ ಮುಸುಮುಸು ನಗತೀದಿನೀ ಸುಮ್ಮನಿದ್ರೂ ನನಗ್ಯಾಕೋ ನಕ್ಕಂಗ ಕಾಣತೀದಿ ನೀ ಬಿಳಿ ಬಟ್ಟಿ ಉಟಗೊಂಡ್ರ ಬೆಳ್ಳಕ್ಕಿ ಬೆದರತಾವುಗಾಂಧಿ ಟೊಪ್ಪಿಗಿ ಹಾಕ್ಕೊಂಡು ಮದುಮಗನಾಗೀದಿ ಸೋದರ ಮಾವನೆಂದು ಸಲಿಗೀಲಿ ಮಾತಾಡೀನಿಕಣ್ಣ ಕಾಡಿಗಿ ಕದ್ದು ನೀ ಕೊಳ್ಳೆ ಹೊಡದೀದಿ ಬಗಲಿಗೆ ಬಿಂದಿಗೆ ಇಟ್ಟು ಬಳುಕಾಡಿ ಬರುತ್ತಿದ್ದೆಬಾಯಾರಿ ಬಂದು ನೀ ಬೊಗಸೆ ಒಡ್ಡಿ ಕಾಡೀದಿ ಉರಿಬಿಸಿಲ ಬೇಗೆಯಲಿ ಹರದಾರಿ ನಡೆದೀನಿಅರುಣಾ ಎಂತೆಂದ್ಯಾಕ ಕೂಗಿ ಕೂಗಿ ಕರೆದೀದಿ.. *************************************
ಕವಿತೆ ನನ್ನಜ್ಜ….. ಕೋಟಿಗಾನಹಳ್ಳಿ ರಾಮಯ್ಯ ಇರಬೇಕು ಇದ್ದಿರಲೇಬೇಕುಅಜ್ಜನೊಬ್ಬ ನನಗೆನಿತ್ಯ ಮುದ್ದೆ ಗೊಜ್ಜಿಗೆನೋಡಿದವನಲ್ಲ , ಆಡಿದವನಲ್ಲ , ಕಾಡಿದವನಲ್ಲರೂಪ-ಘನರಹಿತ ಮಳೆ ಕಾಡಿನ ಶಬ್ದ ಮಾತ್ರಮಳೆ ಮಾತ್ರ ,ಜಡಿಮಳೆ ಮಾತ್ರಸುರಿಮಳೆ ಮಾತ್ರಸುರಿತುತ್ತಲೇ ಇದೆ ಸಥದಕ್ಕದಲ್ಲ ದಣಿದು ದಾವಾರಿದಕಿರು ನಾಲಗೆಗೆ ಕಿರು ತುಂತುರ ಹನಿನಡೆದೇ ಇದೆ ಥಕ ಥೈಯ್ಯಿ ದೇವಿ ಭಾಗವತಕೇಳಿಯೂ ಕೇಳದಂತೆನೋಡಿಯೂ ನೋಡದಂತೆಹಗಲೆನ್ನದೆ ಇರುಳೆನ್ನದೆ ನಡದೇ ಇದೆ ಚಂಡಮದ್ದಳೆನಡೆದಿದ್ದಾನೆ ನನ್ನಜ್ಜ ನನ್ನ ಕುರುಹ ಕಂಡವನಂತೆ ಗತಅರಬ್ಬಿನ ಮರಳುಗಾಡಲಿಒಂಟೆ ಕೊರಳ ಗಂಟೆ ಕಿಂಕಿಣಿಯಲಿಗೊತ್ತಿದ್ದೂ ನಾನು ಇಲ್ಲಿರುವೆ ಎಂದುಕೈಗೆ ಸಿಗದಂತೆ ಹೊನ್ನೇರಿನಲಿಬಂದಿದೆ ಬಿತ್ತನೆ ಹತ್ತಿರನೊಗ ಹೇರಿಸಿಲ್ಲ ಇನ್ನೂ ಹೆಗಲಿಗೆಉತ್ತು ಬಿತ್ತುವ ಮಾತು ಅತ್ತಗೆದತ್ತೂರಿ , ಗರಿಕೆ , ತುಂಗೆ ಒತ್ತಗೆ ಒತ್ತೊತ್ತಗೆತುಂಬಿ ಹೋಗಿದೆ ನೆತ್ತಿ ನೊಣ ಸೊಕ್ಕಿಗೆಡ್ಡೆ ರಸ ಬೊಡ್ಡೆಅರಸೊತ್ತಿಗೆಯ ಉನ್ಮತ್ತ ಹಕ್ಕಿನಲಿಪಾದುಕಾ ಪಟ್ಟಾಭಿಷೇಕದ ಅಣಕು ಪ್ರಹಸನದಲಿಅಜ್ಜ ಬಂದಾಗ ಬೀಜ ಬಿತ್ತುವ ಹೊತ್ತುಹದಗೊಂಡಿಬೇಡವೇನು ನೆಲ ಉತ್ತುನನ್ನಜ್ಜ ನೇಗಿಲಯೋಗಿಕಣ್ಣೂರ ಕಪ್ಪು ಕುಂಕುಮ ಭೂಮಿಯಲಿಶಬ್ದ , ಅಕ್ಷರ , ಧ್ವನಿ ರೂಪಬಿತ್ತುವ ಕೂರಿಗೆಯ ರಾಗ ಪರಾಗಬಿತ್ತಲೇ ಬೇಕಲ್ಲ ಅಜ್ಜ ಬಂದಾಗಹಿಡಿದ ಕೈಕೂರಿಗೆಗೆ ಒಂದೆರೆಡಾದರೂ ಘಟ್ಟಿ ಕಾಳುಅರಳಿ ಹೂವ್ವಾಗುವಂತೆ ಹುಚ್ಚೆಳ್ಳ ಹೂ ಬಾಳುನನ್ನಜ್ಜ ಹೂಗಾರಮಕರಂದ ಮಮಕಾರರಸಸಿದ್ದ ಮಾಯಕಾರಗಂಧ ಹೂವ್ವಿನದಿರಲಿನರನರವ ಕುಸುಮದ ಒಡಲೇ ಇರಲಿತೀಡಿ ತಂಗಾಳಿ , ನಾದು ಬಿರುಗಾಳಿಪಕಳೆ ಹೂ ಕಾಡ್ಗಿಚ್ಚನಬ್ಬಿಸಿ ಉರುಳಿಸಿ ಹೊರಳಿಸಿಘಮಲು ಘಮಲಿನ ಹೂ ದವನ ಬೆಳೆವ ಮಾಲಿಕನಸಿನ್ಹೂದೋಟಗಳ ಕೂಲಿಆದಿಯಿಂದಲೇ ಹೊತ್ತಿದ್ದಾನೆ ಚಟ್ಟಪಟ್ಟಆಳರಸರ ಪಲ್ಲಕಿ ಮೇನೆ , ಸತ್ತ ನಾಯಿ , ಸಗಣಿ,ಬಂಗಾರದ ಗಣಿನನ್ನಜ್ಜ ಮಾಲಿಗೂ ಮೊದಲು ಝಾಡಮಾಲಿಗುಡಿಸಿ ಕಲ್ಯಾಣದ ಓಣಿಗಳನುಆವಂತಿ , ಅಮರಾವತಿ , ಹಸ್ತಿನಾವತಿ , ರಾಜಬೀದಿಗಳನು….ಮುಗಿದ ದಾಸೋಹದ ಎಂಜಲೆಲೆ ರಾಶಿಅಗಳು , ತೇಗು , ಹೂಸು ಉಚ್ಚೆ ಬಚ್ಚಲ ಬಾಚಿಸತ್ತೆಮ್ಮೆ ಕರ ಹೊತ್ತು ನಡೆದವನು….ಕೂದು ಗುಡ್ಡೆ ಬಾಡು ಪಾಲ್ಹಾಕಿ ಈಚಲ ಹೆಂಡಕೆ ಸುಟ್ಟು ಕೊರಬಾಡಾಗಿ ನೆಂಜಿಕೊಂಡವನು.ನನ್ನಜ್ಜ ಕಟುಕ.ಕಡಿಯುತ್ತಾನೆ , ಕತ್ತರಿಸುತ್ತಾನೆ , ನರ ಹರಿಯುತ್ತಾನೆಹಿಡಿದ ಕಟುಗತ್ತಿ ಗುಲಾಬಿ ಗುತ್ತಿಕುಸುಮ ಕೋಮಲ ಖಡ್ಗದಲಗುನನ್ನಜ್ಜ ಕಡಿಯುತ್ತಾನಾದ್ದರಿಂದ ಕಟುಕ.ನನ್ನಜ್ಜ ಮೂಳೆ , ಮಾಂಸದ ತಜ್ಞ….ಗೋವಿನದೂ ಸೇರಿದಂತೆಕೋಣನದಂತೂ ಹೆಂಡ ಕುಡಿದಷ್ಟೇ ಸಲೀಸು .ಅಜ್ಜ ಕಂಡಿಲ್ಲ ಇನ್ನೂ…ನಡೆದ ಹೆಜ್ಜೆ ಗುರುತುಹಚ್ಚೆಯಾಗಿದೆ ಹೆಗ್ಗಲ್ಲ ಬೆನ್ನಮೂಳೆಯಲಿ…ನೀಲ ನಕ್ಷೆಯಾಗಿದೆ ಆಕಾಶ – ಬ್ರಹ್ಮಾಂಡ ಲೀಲೆಯಲಿನನ್ನಜ್ಜಬುದ್ದ , ಮಹಮದಸಿದ್ದ ರಸಸಿದ್ದಏಸುವಿನ ಮೊಳೆ ಗುರುತುಇನ್ನೂ ಅಂಗೈಯಲ್ಲಿ ಮಾಯದೆ ಹಸಿ ಹಸಿಇರಾಕಿನ ಮರಳ ಹಾದಿಗಳು ಹಾಸಿವೆಅವನ ಪಾದಗಳಡಿಗೋ ಪಾದವಾದರೂ ಅಷ್ಟೇ ಹುಲಿ ಪಾದವಾದರೂ ಅಷ್ಟೇಪ್ರೇಮದ ಸಿರಿಪಾದ ಎದೆ ಹಾಲು ಸುರಿಸುವಾಗಖರ್ಜೂರ , ಕಾಫಿ , ಹೂಬಳ್ಳಿ ಜವೆಗೋದಿಜೊತೆಗೂಡಿ ಹಿಂಬಾಲಿಸಿ ಬರುವಾಗನನ್ನಜ್ಜನ ಹೆಚ್ಚೆಯಡಿಯಲ್ಲಿ ನಾದ ನದಿಜೀವವೃಕ್ಷದ ಚಿಗುರುನನ್ನಜ್ಜನ ನಡೆಮೃದು ಮಧುರಪ್ರೇಮ ಕಾವ್ಯದ ಗುಲಾಬಿ ಅತ್ತರಿನ ಘಮಲುಬುಲ್ ಬುಲ್ ಸಿತಾರ ಝರಿ ಜುಳು ಜುಳು ಗುನುಗು… *****************************************************
You cannot copy content of this page