ಅಂಬಲಿಗೂ ಗತಿಯಿಲ್ಲದೆ ಅನ್ನದಾತನ ಮನೆಯಲ್ಲಿ ಹಸಿವು ಧಡಭಡಿಸಿದೆ
ಸ್ವಾಭಿಮಾನದ ಪಟಗೆಗಳು ಉಳ್ಳವರಲ್ಲಿ ಜೀತದಾಳಾಗಿ ದುಡಿಯುತಿವೆ
ಎಂತಹ ಸಮಯವಿದು!!
ಕವಿತೆ ಎಂತಹ ಸಮಯವಿದು!! ಸಂಮ್ಮೋದ ವಾಡಪ್ಪಿ ಪ್ರೀತಿ ವಿಶ್ವಾಸ ಕೂಡಿಟ್ಟವರುಯಾವುದೋ ವಾರ್ಡಿನಲ್ಲಿ ಏಕಾಂಗಿಶ್ವಾಸಕ್ಕಾಗಿ ಎಲ್ಲ ಕಳೆದುಕೊಂಡರುಉಸಿರಿಗಾಗಿ ಕಳೆದು ಹೋದರು ಚೈತ್ರದ ಚಿಲುಮೆಯ ಕಾಲಎಲ್ಲವೂ ಚಿಗುರತಿರಲಿಂದುಬಾಡುತಿವೆ ಸಾವಿರ ಲಕ್ಷಮನೆಗಳಲಿ ರೋದನಗಳಿಂದು ಅವ ಹೋದ ಇವ ಬಂದಏನಾಯಿತು ಕೋವಿಡ್ಡಾ?ಅದೇ ಪ್ರಶ್ನೆ.. ಭಯಂಕರ ಉತ್ತರಸಮರವಿದು ಜಗವೆಲ್ಲ ತತ್ತರ ಹಣ ತೆತ್ತರು ಸಿಗದಲ್ಲಅಂದು ಗಿಡ ನೆಡದವಆಮ್ಲಜನಕ ಬೇಡುತಿಹಧಗಧಗಿಸುವ ಸೂರ್ಯ ನಗುತಿಹ ಸಮಯವಿದು ಕಳೆದು ಹೋಗಲಿಕಳೆದು ಹೋದ ನಗು ಮರಳಲಿಮರಳಿನಲಿ ಓಯಾಸಿಸ್ ಸಿಗಲಿವೈರಾಣುವಿನ ಸಂಹಾರವಾಗಲಿ *************************************************
ಆಕಾಶದಾವರೆ
ಕವಿತೆ ಆಕಾಶದಾವರೆ ಲಕ್ಷ್ಮೀದೇವಿ ಪತ್ತಾರ ಆಕಾಶಗಂಗೆಯಲ್ಲಿಪ್ರತಿದಿನ ಬೆಳಗಿನ ಜಾವದಲ್ಲಿಅರಳುವದೊಂದು ಅಸದಳದ ತಾವರೆ ಹೂವು ಮುಂಜಾವಿನಲ್ಲಿ ಕೆಂದಾವರೆಮಧ್ಯಾಹ್ನ ನೀಲ್ದಾವರೆಮತ್ತೆ ಸಂಜೆ ಹೊನ್ನದಾವರೆಅಪರಿಮಿತ ಚೆಲುವಿನಅಪರೂಪದ ಹೂವು ಬಗೆ ಬಗೆ ಬಣ್ಣ ಧರಿಸುತಾಮುದಗೊಳಿಸುವ ತಾವರೆಹೊಂಗಿರಣದ ಸುಗಂಧವಎಲ್ಲೆಡೆ ಚೆಲ್ಲಿ ಚೈತನ್ಯ ಉಕ್ಕಿಸುವ ತಾವರೆ ಹೂವು ಯಾರು ಮುಟ್ಟದ ತಾವರೆಯಾರು ಮುಡಿಯದ ತಾವರೆಅರಳಿದರೆ ಭೂರಮೆಗೆ ಬೆಳಗು ಸೊಬಗು ಗೆಲುವು ತರುವ ತಾವರೆ ಹೂ ಜೀವಿಗಳ ಜೀವ ಜೀವನಬಾನಿಗೆ ಶೋಭೆ ಈ ಭಾನುನಮಗಾಗಿ ಹೂವಾಗಿ ಅರಳಿದ ದೇವರುಆದಿತ್ಯನೆಂಬೊ ಅವಿನಾಶಿ ತಾವರೆ ಹೂವು
ಯಾತನೆ
ಕವಿತೆ ಯಾತನೆ ಲಕ್ಷ್ಮೀ ಮಾನಸ ಚಿತಾಗಾರದ ಚಿತ್ರಣ,ಮನದಲ್ಲಿ ಮರುಕಳಿಸಲು,ಎದೆಯಲ್ಲಿ ಬಿರುಗಾಳಿಬೀಸಿ,ತಾರೆಗಳ ಕಾಣುತಲಿವೆ ,ಬಣ್ಣ ಮಾಸಿದ ಪಕ್ಷಿಗಳು,ಕಿಟಕಿಗಳ ಚಿಕ್ಕ ಸಂದಿನಲ್ಲಿ.., ಲೋಕದ ತುಂಬೆಲ್ಲಾಪರದೆಗಳು,ಮಾಸಿದ ಚಿತ್ತಾರಗಳು,ಮುಗಿಲು ಮುಟ್ಟುತ್ತಲಿವೆ ,ಚೀತ್ಕಾರಗಳು,ಮಂಜಿನ ಮಹಲುಗಳಲ್ಲಿ,ಕಾಂಚಾಣದ ಮಡಿಲಲ್ಲಿನ,ನಂಜಿಲ್ಲದ ವಾಯುವಿಗಾಗಿ.., ಸುಟ್ಟ ವಾಸನೆಬೀರುತಲಿವೆ,ಚಿತೆಯೇರಿದ ಮನಗಳು,ಬೂದಿಯ ಸ್ಪರ್ಶಿಸಲುಚಡಪಡಿಸುತಿವೆ,ಕಾಲವಾದ ನೆನಪುಗಳಲ್ಲಿ,ಮುಳುಗಿ ಮೇಲೇಳುವುದಕ್ಕೋ …?ಮೇಲೇಳದೆ ಮುಳುಗುವುದಕ್ಕೋ….? ಚಿ0ತೆಯಲ್ಲಿ ದಹಿಸುತಿವೆ,ಬಾಳಿನ ನಾಳೆಗಳು ,ಬಿರುಗಾಳಿಯಲ್ಲಿಹಾರಬಯಸುತಿರೆ..,ಬೆಚ್ಚನೆಯ ಮನೆಯಲ್ಲೂ,ಮುಳ್ಳಾಗಿ ಚುಚ್ಚುತ್ತಿವೆ,ಮೆತ್ತನೆಯ ಗಾದಿಗಳು ,ಅರುಣೋದಯದ ಹಂಬಲದಲ್ಲಿ…….. ******************************************************* , ….. *******************
ಮಹಾದೇವಿ ಅಕ್ಕ
ಕವಿತೆ ಮಹಾದೇವಿ ಅಕ್ಕ ಡಾ.ಕೆ.ಶಶಿಕಾಂತ ಬರೀ ಹಗಲಭ್ರಮೆಯೊಳಗಿನಈ ಜಗಕೆ,ನಿನ್ನಬೆತ್ತಲೆತನದ್ದೇ ಚಿಂತೆ….ತನ್ನ ಬೆತ್ತಲ ಬದುಕಿನಅರಿವು ಇದ್ದರಲ್ಲವೇ…ಬಟ್ಟೆ ಹೊದ್ದಿಸಲಾಗದನಿನ್ನ ದಿಗಂಬರತನವತಿಳಿಯಲು… ಬೋಳು ಗುಡ್ಡದಂತೆಬರೀ ಮಂಡೆ ಬೋಳಾದಈ ಹಿರಿಯರ ಲೋಕದಲ್ಲಿಹುಡುಕುತ್ತಲೇ ಇದೆ ಈ ಜಗಮೋಟು ಮರಗಳ ಗುಂಪಿನಲ್ಲಿಚಿಗುರೊಡೆದ ಗಿಡವನರಸುವಂತೆಬರಡಾಗಿರುವ ಭಾವದಲಿಬಯಲ ಚೆಲುವ ಚೆನ್ನನ…. ಮರವೇ ಮರುಗುವಂತೆಗರಗರ ಸುತ್ತಿದ್ದಾಯ್ತು ,ನೀರೇ ಕಲಕುವಂತೆಮುಳುಮುಳುಗಿಮಿಂದದ್ದಾಯ್ತು ,ಅರ್ಥವನರಿಯದಗಿಳಿಯಂತೆ ನುಡಿದುತನ್ನ ಹಿರಿಮೆಯ ಸೊಲ್ಲುದನಿಯಿಲ್ಲದಾಯ್ತು,ತಲೆಮಾರುಗಳ ಕಾಲಚೆನ್ನನನು ಕಾಣದಾಯ್ತು… ದೃಢವಲ್ಲದ ಹೊಟ್ಟೆಗಾಗಿಮೃಡನನು ಗುರಿಮಾಡಿಹೇಮಕಾಮದ ಇಚ್ಛೆಗೆಚೆನ್ನನರಿವ ಮನಕೆ ಕಿಚ್ಚಿಟ್ಟುಕದಳಿಯ ದಾರಿಯರಿಯದೇದಿಕ್ಕೆಟ್ಟ ಬದುಕಿಗೆಸಾವ ವಿದ್ಯೆಯನರುಹಿದಮಹದ ಗುರು ಮಹಾದೇವಿ…. ಹರಕೆ ಕಾಣಿಕೆಗಳಿಡದಜೀವಕೋಟಿಯನಿರಿಯುವನೂರುದೇವತೆಗಳಈ ಲೋಕದಲ್ಲಿ,,ಬಿಲ್ವಬೆಳವಲಗಳಸಂದೇಹವ ಬಿಡಿಸಿಟ್ಟುಬಾಳೆಮಾವುಗಳಿಗೆನೀರೆರೆದು ಸಲಹಿದವನಕುರುಹನು ತೆರೆದಿಟ್ಟುಜಗವ ಪೊರೆದಮಹಾತಾಯಿನೀನಲ್ಲವೇ ಅಕ್ಕ… ಸತ್ತು ಅಳಿವ ಕೌಶಿಕನವಸ್ತು ನಾನಲ್ಲೆಂದುಸಾವಿಲ್ಲದ ಗಂಡನಿಗೊಲಿದಸಾವಿರದ ಚೆಲುವೆ ನೀನಕ್ಕ ನಾಮ ರೂಪಗಳನಳಿದಸೀಮೆ ಗಡಿಗಳನಳಿದಬಸವನ ಈ ಕಲ್ಯಾಣದಸುಳಿಗಾಳಿ ನೀನಕ್ಕ ಚಳಿಮಳಿ ಸೋಂಕದವಸ್ತ್ರ ಹೊದೆಯಲರಿಯದಬೆಳಕಿನ ದಿಗ್ ದಿಗಂಬರನೀನಲ್ಲವೇ ಅಕ್ಕ. ಜಗದ ಕತ್ತಲೆ ಕಳೆದಬಾಳ ಕದಳಿಯಜ್ಯೋತಿಯಾಗಿಇಹದ ಜೀವಕೆದೀವಿಗೆಯಾದಚೆನ್ನನ ಬೆಳಕು ನೀನೇ ಅಕ್ಕ.ಚೆನ್ನನ ಬೆಳಕು ನೀನೇ ಅಕ್ಕ ****************************
ಆತ್ಮಸಖಿ ಅಕ್ಕಾ
ಆತ್ಮಸಖಿ ಅಕ್ಕಾ ಸುಮಾವೀಣಾ ಆತ್ಮಸಖಿ ನೀ.. ಅಕ್ಕಾಮಹಾಮನೆಯ ಮಹಾದೇವಿನೀ ವಸುಂಧರೆಯ ಆತ್ಮಸಖಿ!ಸಾವಿಲ್ಲದ ಸೀಮೆಯಿಲ್ಲದ ಮಲ್ಲ್ಲಿಕನಿಗೊಲಿದನಿನ್ನ ಸೀಮಾತೀತ ಭಾವಕ್ಕೆ ಜಗವೇ…ಜಗವೆ ಬಾರಿಸುತಿದೆ ಜಂಗಮದ ಗಂಟೆಯನು!ಸ್ತ್ರೀಕುಲವ ನೋಡುವ ಸೀಮೆಯಬದಲಾಯಿಸಿದ ನೀ ನಮ್ಮ ಆತ್ಮ ಸಖೀ!ನಿತ್ಯ ಸ್ಮರಣಕೆ ಬಂದು ನಿಲುವ ಮಹಾದೇವಿ ನೀಅಕ್ಕಾ.. ಮಹಾದೇವನಾ ಮಹಾದೇವಿಗಂಡುಹೆಣ್ಣೆಂಬ ಸೂತಕ ಕಳೆದ ಸೌಖ್ಯ ದೇವಿ!ನರನಾರೀ ಹೃದಯಗಳ ಪತಿತಭಾವದಿಂದಲೇಭಾಂಧವ್ಯ ಬೆಸೆದ ನೀ ಶರಣೆಯರ ಆತ್ಮಸಖೀ!ಸ್ತ್ರೀಕುಲದ ಸಚಿಜೀವಿನಿ. ಹೂವ ತರುವರಮನೆಗೆ ಹುಲ್ಲ ತಾರದ ನಿನ್ನ ಸೌಧರ್ಮಿಕಕೆಯಆ ಹೊನ್ನುಡಿ ನಮಗೆ ಬೆನ್ನುಡಿ,ಚೆನ್ನುಡಿ!ಆತ್ಮಬಲಕ್ಕೆ ಸಾಕ್ಷಿಯಾದ ಅಕ್ಕಾ ನೀಆತ್ಮಸಂವರ್ಧನೆಯ ತವನಿಧಿ, ಲೋಕಬಂಧುಗಳ ಆತ್ಮಸಖೀ..ಲೋಕದಾ ಸಿರಿಗೊಲಿಯದ ನಿನ್ನಶ್ರೀಶೈಲದಾ ನಾಡುಹೆಣ್ಮಕ್ಕಳ ನಿಜ ತವರು. ಉಡಿತುಂಬಾ ತುಂಬಿರುವೆನೀ ನುಡಿಬಾಗಿನವನ್ನೇ ಬೇಕಿಲ್ಲ ನಮಗೇನಿನ್ನು..ಕರೆದಾಗಲೆಲ್ಲಾ ಬರುವೆಯಾ ನೀನು ?ಬರುವೆಖಂಡಿತಾ ಬರುವೆ. ನೀ ನಮ್ಮ ಆತ್ಮಸಖೀ…ವಿಚಾರವಂತಿಕೆಯ ಮಡಿವಂತಿಕೆಯಲೆ ಎಲ್ಲರನು ತವಿಸಿರುವೆನೀ ನಮಗೆ ಆತ್ಮಸಖೀ.. ಆತ್ಮಸುಖೀನೀ ಬರೆ ಹೆಣ್ಣಲ್ಲ! ನೀ ಬರೆ ಶರಣೆಯಲ್ಲಾ!ಶರಣಾರ್ಥಿಗಳ ನಿತ್ಯ ಸ್ಮರಣಾರ್ಥೀವಸುಂಧರೆಯ ಆತ್ಮ ಸಖೀ… ಆತ್ಮ ಸುಖೀ… ******************************
ಜಗದ ಜ್ಯೋತಿ
ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲಕೊರಳಿಗೆ ತಾಳಿಯನೂ ಬಿಗಿಯಲಿಲ್ಲಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲಮದುವೆಯ ಹಂದರವು ಹರಿವಿರಲಿಲ್ಲಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆಹೆಣ್ಣೆಂದು ಅವಕಾಶವಾದಿಯಾಗದೆಅಲ್ಲಮರ ಮಂಟಪದ ಜ್ಯೋತಿಯಾದೆಉಡತಡಿ ಉಡುಗೊರೆಯಾಗಿ ಉದಯಿಸಿದೆಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನಅಲ್ಲಮರ ಸಮ ಸಂವೇದನಶೀಲಳುಅನುಭಾವಿಯುಕ್ತ ಮೇರು ಸಾಹಿತಿವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆಮನವು ಚಂಚಲದಿ ಬೆತ್ತಲಾಗಿದೆಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆಭೌತಿಕ ಭೋಗ ಬಂಧನದಲಿದೆಯಂದೆಜಗದ ಬೆತ್ತಲ ನೀ ಸ್ವತಃ ತೋರಿದೆ ಭೋಗ ಜೀವನದ ಬಲಿದಾನಕರ್ಮಠ ಯೋಗಿಣಿಯಾಗಿ ಸಾಧನಯೋಗಾಂಗ ತ್ರಿವಿಧಿಯ ಅನುಷ್ಠಾನಅಲ್ಲಮರಿಂದ ಧೀರ ನುಡಿ ತಾಯಿ ನಮನಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ವಿರತಿ ಘನ ಚನ್ನಮಲ್ಲಿಕಾರ್ಜುನೊಬ್ಬನೇ ಪುರುಷನೆಂದವಳುಮಿಕ್ಕವರೆಲ್ಲ ಎನಗೆ ಸ್ತ್ರೀ ಸಮಾನರೆಂದವಳುಕೇಶಾಂಬರವು ಜಗದ ಜನರ ಹಂಗಿಗೆಂದವಳುಗಟ್ಟಿಗಿತ್ತಿ ಸಾದ್ವಿ ಅಕ್ಕಮಹಾದೇವಿಯಾದಳುಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು **********************************
ಗಜಲ್
ಅಕ್ಕಮಹಾದೇವಿ ಜನುಮದಿನದ ವಿಶೇಷ ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾಯಾ ಮೋಹದ ಬಟ್ಟೆಯನು ಕಳಚಿ ಎಸೆದವಳುವೈರಾಗ್ಯದ ಬಟ್ಟೆಯನು ಅರಸುತ್ತಾ ಹೊರಟವಳು ಅರಮನೆಯ ವೈಭವದ ಸುಖ ದಿಕ್ಕರಿಸಿದವಳುಭವದ ಸುಳಿಗೆ ಸಿಲುಕದೆ ಬಯಲಲಿ ಒಂದಾದವಳು ಹಸಿವು ತೃಷೆ ಭಾದೆಗಳನು ಕಪೂ೯ರದಂತೆ ದಹಿಸಿದವಳುಅಂಗ ಚೇಷ್ಟೆ ಕಾಮ ಕ್ರೋಧ ಗಳ ಕವಚ ಕಳಿಚಿದವಳು ಜಗ ನಿಮಿ೯ಸಿದ ಮೌಢ್ಯ ಬೇಲಿಯನು ದಾಟಿದವಳುಸ್ತ್ರೀ ಸಂಕುಲನಕೆ ಆತ್ಮಸ್ಥೈರ್ಯ ತುಂಬಿದವಳು ಶರಣ ಸಮೋಹದಲಿ ಅಗ್ರ ರತ್ನವಾಗಿ ಬೆಳಗಿದವಳುನಿರಾಕಾರನ ಪಡೆಯಲು ಸರ್ವವನು ತ್ಯಜಿಸಿದವಳು ಅಲ್ಲಮನ ಪ್ರಶ್ನೆಗೆ ಉತ್ತರಿಸಿ ಲೋಕ ಗೆದ್ದವಳುಸಾವಿಲ್ಲದ ಕೇಡಿಲ್ಲದ ಚೆಲುವನನು ಮೆಚ್ಚಿದವಳು ಬೆಟ್ಟ ಹಳ್ಳ ಕಣವೆ ಗಳ ದಾಟುತ್ತಾ ಮುನ್ನಡಿದವಳುಬಯಲ”ಪ್ರಭೆ”ಯ ಅರಸುತ್ತಾ ಕದಳಿಗೆ ನಡೆದವಳು **********************************************
ನಾವು ನಿಮ್ಮ ಭಕ್ತರು
ಕವಿತೆ ನಾವು ನಿಮ್ಮ ಭಕ್ತರು ಶಿವರಾಜ್.ಡಿ ನಾವು ನಿಮ್ಮ ಭಕ್ತರುನೀವು ಕಟ್ಟುವ ಪುತ್ಥಳಿಗಳಿಗೆ,ಕ್ರೀಡಾಂಗಣಗಳಿಗೆ,ಮಹಲುಗಳಿಗೆದೇಶಭಕ್ತರ ಹೆಸರಿಡಲುಹೋರಾಟ ಮಾಡುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ದೇಶಭಕ್ತಿಯ ಮಾತುಗಳಿಗೆಅಚ್ಚೆ ದಿನದ ಆಡಂಬರದ ಸುದ್ದಿಗಳಿಗೆಬಂಗಾರದ ಕಿವಿಯಾಗುತ್ತೇವೆ. ನಾವು ನಿಮ್ಮ ಭಕ್ತರುಪೆಟ್ರೋಲ್, ಡೀಸೆಲ್, ದಿನಸಿಧಾನ್ಯಗಳ ಬೆಲೆ ಏರಿದರೂದುಬಾರಿ ಜಿಎಸ್ಟಿ ತೆರಿಗೆ ಕಟ್ಟುತ್ತೇವೆ. ನಾವು ನಿಮ್ಮ ಭಕ್ತರುಚಪ್ಪಾಳೆ ತಟ್ಟುತ್ತೇವೆ,ಗಂಟೆ ಬಡಿಯುತ್ತೇವೆಕ್ಯಾಂಡಲ್ ಹಚ್ಚಿ ಕರೋನಾ ಓಡಿಸುತ್ತೇವೆ. ನಾವು ನಿಮ್ಮ ಭಕ್ತರುಆಕ್ಸಿಜನ್ ಕೊರತೆಯಾದರೂಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಹೋದರುನಗು ನಗುತ್ತಾ ಸಾಯುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ಮನದ ಮಾತು ಕೇಳುತ್ತಾನಿಮ್ಮನ್ನು ಆರಾಧಿಸುತ್ತೇವೆನೀವು ಸುಮ್ಮನೇಮಾತಾಡಿ …ಮಾತಾಡಿ …ಮಾತನಾಡುತ್ತಲೇ ಇರಿ.. *************************************









