ತುತ್ತು ಅನ್ನ ನೀರು ಸೂರು ಸಾಕು ಎನಗೆ
ಮತ್ತೇನು ಮಿಕ್ಕಿದ್ದು ಹಂಚಿ ಬಿಡುವೆ ನಿಮಗೆ
ಗಜಲ್
ಗಜಲ್ ರತ್ನರಾಯಮಲ್ಲ ಕಾಳಸಂತೆಯಲಿ ಹಾಸಿಗೆಗಳು ಕೊಳೆಯುತ್ತಿವೆಜೀವದ ಬಡತಿಗಾಗಿ ಆಸ್ಪತ್ರೆಗಳು ಹವಣಿಸುತ್ತಿವೆ ಜನನದಲ್ಲಿ ಮರಣವೂ ಇದೆ ಅಂಜುವವರಾರುಸಾವಿನಲ್ಲೂ ರಾಜಕೀಯ ಪಕ್ಷಗಳು ಚಿಗುರುತ್ತಿವೆ ಪಾಪ-ಪುಣ್ಯ ಬಾಲ್ಯದಿಂದಲೂ ಅನುರಣಿಸುತಿದೆಮಸಣಗಳೂ ಇಂದು ಧನವನ್ನು ಬೆಳೆಯುತ್ತಿವೆ ಆತ್ಮವಿಶ್ವಾಸದ ಫಸಲಿಗೆ ಪರಂಪರೆಯೇ ಇದೆ ಇಲ್ಲಿಮಾಧ್ಯಮಗಳೇ ಭಯ ಬಿತ್ತಿ ದುಡ್ಡು ದೋಚುತ್ತಿವೆ ಮರಣಕ್ಕೆ ಚುಂಬಿಸಲು ಭಯ ಪಡದಿರು ‘ಮಲ್ಲಿ’ಹಣದ ಹಾದರವು ಹೆಣಗಳನ್ನು ಉರುಳಿಸುತ್ತಿವೆ ****************
ಗಜಲ್.
ಗಜಲ್. ವಿಜಯಲಕ್ಷ್ಮಿ ಕೊಟಗಿ ನನ್ನ ದೇಹದ ಬಣ್ಣ ಬಿಸಿಲನ್ನೇ ಉಂಡು ಕಪ್ಪಾಗಿದೆ ಕಾಮ್ರೇಡ್ನನ್ನ ಗಜಲ್ ದುಡಿದು ಹಕ್ಕಳೆದ್ದು ಕೆಂಪಾಗಿದೆ ಕಾಮ್ರೇಡ್ ನಾನು ಹಸಿವನ್ನು ತಣಿಸಲು ಕೆಸರಿಗಿಳಿಯಲು ಹೇಸದಿರಬಹುದುನನ್ನ ಗಜಲಿನಲ್ಲಿ ಸ್ವಾಭಿಮಾನದ ನಿರ್ಮಲ ಕನಸಿದೆ ಕಾಮ್ರೇಡ್ ನಾನು ಆಸ್ತಿ ಅಧಿಕಾರವಿಲ್ಲದ ಬಡವನೇ ಇರಬಹುದುನನ್ನ ಗಜಲಿಗೆ ಸಂವಿಧಾನದ ಒಡನಾಟವಿದೆ ಕಾಮ್ರೇಡ್ ನಾನು ನರಪೇತಲ ನಾರಾಯಣನಂತೆ ಇದ್ದಿರಬಹುದುನನ್ನ ಗಜಲಿಗೆ ಬಲಭೀಮನ ತಾಕತ್ತಿದೆ ಕಾಮ್ರೇಡ್ ನಾನು ದಲಿತ ಶೂದ್ರ ಕೂಲಿಕಾರ್ಮಿಕನೇ ಇರಬಹುದುನನ್ನ ಗಜಲ್ ಶ್ರಮಿಕರ ಬೆವರಿಗೆ ಅರ್ಪಿತವಾಗಿದೆ ಕಾಮ್ರೇಡ್ ನಾನು ಮನುಷ್ಯನೆಂದೇ ಭಾವಿಸದ ಧನಿಕರಿರಬಹುದುನನ್ನ ಗಜಲಿನಲಿ ಮಾನವೀಯತೆ ಜೀವಂತವಾಗಿದೆ ಕಾಮ್ರೇಡ್ ನಾನು ಶೋಷಣೆಯ ವಿರುದ್ಧ ಎತ್ತಿದ ಧ್ವನಿ ಒಂಟಿ ಇರಬಹುದುನನ್ನ ಗಜಲಿಗೆ ಬಹುಜನರ ಬೆಂಬಲವಿದೆ ಕಾಮ್ರೇಡ್ ಬಹುತ್ವ ಭಾರತದಲಿ ಮೂಲಭೂತವಾದಿಗಳ ಪ್ರಭುತ್ವ ಇರಬಹುದುವಿಜಿಯ ಗಜಲ್ ಹೊತ್ತಿಸಿದ ಕ್ರಾಂತಿಗೆ ಲಾಲ್ ಸಲಾಂ ಸಿಕ್ಕಿದೆ ಕಾಮ್ರೇಡ್. ************************
ಕಾಯಕ ವೀರ ಕಾರ್ಮಿಕ
ಕಾವ್ಯಯಾನ ಕಾಯಕ ವೀರ ಕಾರ್ಮಿಕ ಚೈತ್ರಾ ತಿಪ್ಪೇಸ್ವಾಮಿ ಕಾಯಕಯೋಗಿ ಕಾರ್ಮಿಕ ಶ್ರೇಷ್ಠಕಾರ್ಖಾನೆಯೇ ಅವನ ಕರ್ಮಸ್ಥಾನದುಡಿಮೆಯ ಧರ್ಮವೇ ಜೀವಾಳ ಕಾರ್ಮಿಕ ಶ್ರಮದಿಂದ ದೇಶಕ್ಕೆ ಸರಕುಪಾಳಿಯ ಮೇಲೆ ಕೆಲಸವ ಮಾಡಿಲಾಭದ ಪ್ರಗತಿಗೆ ಕಾರಣವಾದ ಬೆವರು ಸುರಿಸಿ ದುಡಿವ ಶ್ರಮಿಕಯಂತ್ರಗಳೊಂದಿಗೆ ಕಾರ್ಯನಿರತಅರೆಕ್ಷಣ ತೊರೆಮನ ಕಾದಿದೆ ದುರಂತ ಕಾಯ ಸೋತರು ದೇಹ ದಣಿದರೂಕಾಯಕಕ್ಕೆ ಸಮಾನವಾದ ವೇತನ ಸಿಗುತ್ತಿಲ್ಲಹಗಲಿರುಳು ದುಡಿದರೂ ಕೆಲಸಕ್ಕೆ ರಕ್ಷಣೆ ಇಲ್ಲ ನೊಂದ ಮನಕೆ ಬೇಕಿದೆ ಸಾಂತ್ವನಕಾಯಕಲ್ಪ ನೀಡಬೇಕಿದೆ ಸರ್ಕಾರಕಾನೂನು ಕೊಡಬೇಕಿದೆಸಬಲತೆಯ ಮಾಲೀಕನ ಪ್ರೀತಿ ಕಾರ್ಮಿಕರಿಗೆ ಇರಲಿಕಾರ್ಮಿಕರ ಜೀವಕ್ಕೆ ಭದ್ರತೆ ಇರಲಿಕಾರ್ಮಿಕರ ಕಲ್ಯಾಣವೇ ದೇಶಕ್ಕೆ ಹಿತವಾಗಲಿ ********************
ಒಲವ ಹಣತೆ
ಕಾವ್ಯಯಾನ ಒಲವ ಹಣತೆ ಭಾರತಿ ಕೇ ನಲವಡೆ ಅವಳು ಸುಂದರ ಮನಸಿನ ನಗುವ ಹೂವು ನನಗೆಬಂದಂಳೆಂದರೆ ಬೆಳದಿಂಗಳ ಬಾಲೆ ಧರೆಗಿಳಿದಂತೆ ಮನಕೆಕನಸು ಯಾರಿಗೂ ಕೇಡು ಬಯಸದ ಮುಗುದೆದಿನಪೂರ್ಣವಾಗದು ಅವಳನು ನೋಡದೆ ಸದಾ// ಬಿರಿದ ಸುಮದಂತೆ ಹುಸಿಮುನಿಸಿನಲೂ ಅಮೃತಧಾರೆಒಲವ ತುಂಬುವ ಮುಂಗಾರು ಮಳೆಯ ಪುಳಕದಂತೆಸರಳ ನಡೆಯ ನೀಳಜಡೆಯ ಕೃಷ್ಣಸುಂದರಿ ನೀನುನೊಂದವರಿಗೆ ಸಾಂತ್ವನದ ಹೊಳೆಯ ಹರಿಸುತ// ಇಂದೇಕೋ ಅವಳ ಮನೆ ಮುಂದೆ ರಾಶಿ ಜನರ ಸಾಲುಕದ್ದು ನೋಡುವ ನಾನು ಬಳಿ ಸಾಗಿದರೆ ಉಸಿರು ಕಟ್ಟಿದ ದೃಶ್ಯಕೊರೋನಾ ಮಾರಿಗೆ ಬಲಿಯಾದ ತಂದೆಯ ಸೇವೆಗೆತಾನೆ ಮೊದಲು ಬಲಿಯಾದಳು ಕೋಮಲೆಹೃದಯ ಕರಗಿದ ಸಮಯವದು ಕಂಬನಿಯಾಗಿ ಹರಿದಿತ್ತು// ನಿತ್ಯ ಹಸಿರಾದ ಮನವಿಂದು ಮರುಭೂಮಿಯಾಗಿದೆ ಗೆಳತಿಒಲವ ಹಣತೆ ಪ್ರೀತಿ ತೈಲವಿಲ್ಲದೆ ನಂದಿದೆ ಇಂದುಹೇಗೆ ಬದುಕಲಿ ಪ್ರಿಯೆ ನೀನಿಲ್ಲದ ಈ ಲೋಕದಲಿ ನಾನುನಿನ್ನ ಚಿರನೆನಪೆ ಸಾಕು ನನ್ನ ಬದುಕಿಗೆ ಚೈತನ್ಯ ******************************************************
ಕವಿತೆಯೆಂದರೆ ಹೀಗೆ
ಕಾವ್ಯಯಾನ ಕವಿತೆಯೆಂದರೆ ಹೀಗೆ ವಿಶ್ವನಾಥ ಎನ್. ನೇರಳಕಟ್ಟೆ ಕವಿತೆಯೆಂದರೆ ಹೀಗೆ-ಕತ್ತಿ ಅಲಗಿನಲ್ಲರಳಿದಅಲರಿನ ಹಾಗೆಹೇಗೇ ಹುಟ್ಟಿದ್ದರೂ ಕೂಡಾಪರಿಮಳ ಬೀರುವುದನ್ನುನಿಲ್ಲಿಸುವುದೇ ಇಲ್ಲ ಕವಿತೆಯೆಂದರೆ ಹೀಗೆ-ಮೌನಗರ್ಭದೊಳಗಿಂದ ಹೊರಬಂದಮಾತಿನ ಪಿಂಡದಂತೆಹೊರಬರುವವರೆಗೂ ಯಮಯಾತನೆಆಮೇಲಿನ ಸಂತಸಕ್ಕೆಣೆಯಿಲ್ಲ ಕವಿತೆಯೆಂದರೆ ಹೀಗೆ-ಇರುವೆ ಕಿವಿ ಹೊಕ್ಕ ಹಾಗೆಒಂದಿಷ್ಟು ಕಚಗುಳಿ,ಒಂದಷ್ಟು ಕಾಟ ತಪ್ಪಿದ್ದೇ ಅಲ್ಲಒಳ ಇದ್ದಷ್ಟೂ ಹೊತ್ತು ಕವಿತೆಯೆಂದರೆ ಹೀಗೆ-ಭರಣಿಯಲ್ಲಿ ಅಮ್ಮ ತುಂಬಿಸಿಟ್ಟಮಿಡಿ ಉಪ್ಪಿನಕಾಯಿಯ ಹಾಗೆಹಳತಾದಷ್ಟೂ ರುಚಿ ಜಾಸ್ತಿ + ಕವಿತೆಯೆಂದರೆ ಹೀಗೆ-ಕನ್ನಡಿ ಎದುರು ನಿಂತ ಹಾಗೆತನ್ನನ್ನು ತಾನೇ ಕಾಣುವ ತವಕ
ಎಲ್ಲ…ತಿರಗಾ-ಮುರಗಾ.
ಕವಿತೆ ಎಲ್ಲ…ತಿರಗಾ-ಮುರಗಾ. ಅಬ್ಳಿ,ಹೆಗಡೆ ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತಾಗಿನ ಅನುಭವ ಇಂದು ಎಲ್ಲ ತಿರಗಾ-ಮುರಗಾ. ಅಂಗಾಲಿಗೆ ಬಾನು,ನೆತ್ತಿಗೆ ಭೂಮಿ ಎಲ್ಲ ತಿರಗಾ-ಮುರಗಾ. ಆಲಯದಲ್ಲಿ ಬಯಲು,ಬಯಲಲ್ಲಿ ಆಲಯ ಭೃಮೆ ವಾಸ್ತವಗಳ ನಡುವಿನ ಸೆಣಸಾಟ ಹೋರಾಟವಿಂದು, ಎಲ್ಲ…..ತಿರಗಾ-ಮುರಗಾ. ನೀರಿದ್ದೆಡೆ ನೆಲ,ನೆಲವಿದ್ದೆಡೆ ನೀರು ಬಾಗಿಲಿರುವೆಡೆಯಲ್ಲಿ ಗಟ್ಟಿ ಗೋಡೆ ಗೋಡೆಯಿರುವೆಡೆ ತೆರೆದ ಬಾಗಿಲು, ಎಲ್ಲ…..ತಿರಗಾ-ಮುರಗಾ. ಕಣ್ಣ ತಣಿಸುವ ಹಸಿರ ತಂಪು ಬಸಿರ ಉಸಿರಲ್ಲಿ ಸುಡು,ಸುಡು ಬೆಂಕಿ, ಶಾಂತಿಯಾಗರ ಹ್ರದಯ ಸಾಗರದ ಒಳಗೆ ಹೆಡೆಯೆತ್ತಿ ಭರ್ಗರೆವ ಅಶಾಂತಿಯ ನಾಗರ, ಎಲ್ಲ…..ತಿರಗಾ-ಮುರಗಾ. ನಾನಂದು ‘ಕೊಂಡಿ’ದ್ದು,ಕೊಳ್ಳದ್ದು ಸಾಧಿಸಿದ್ದು,ಸಾಧಿಸದ್ದು , ಆಚಾರ,ವಿಚಾರ, ಎಲ್ಲ……..ತಿರಗಾ-ಮುರಗಾ. ದೇವರೆಂದು ಕೊಂಡಲ್ಲಿ ದೆವ್ವ, ದೆವ್ವವೆಂದು ಕೊಂಡಲ್ಲಿ ದೇವರು, ಎಲ್ಲ….ತಿರಗಾ-ಮುರಗಾ. ನನ್ನೊಳಗೆ ಇನ್ಯಾರೋ….? ಇನ್ಯಾರದ್ದೋ ಒಳಗೆ ನಾನೋ….? ಪರಕಾಯ ಪ್ರವೇಶ …ಗೊತ್ತಿಲ್ಲ,ಒಟ್ಟಾರೆ ಎಲ್ಲ……ತಿರಗಾ-ಮುರಗಾ. ನನ್ನ ನೋವಿಗೆ ಯಾರದ್ದೋ ನಗು, ನಾ..ನಕ್ಕಾಗೆಲ್ಲಾ ಯಾರಿಗೋ ನೋವು, ಕ಼ಣಕ್ಕೊಂದು ಆಯಾಮ ಎಲ್ಲ….ತಿರಗಾ-ಮುರಗಾ. ಬಿತ್ತಿದ್ದು ಮಾವು,ಬೆಳೆದದ್ದು ಬೇವು, ಕಂಗಾಲು ರೈತ ನಾ……. ಎಲ್ಲ…..ತಿರಗಾ-ಮುರಗಾ. *****************
“ಮಾರಿಯ ಗಾಣ”
ಮಾರಿಯ ಗಾಣವೆ ಅವನೋ
ಅವನದೆ ರೂಪದ ವೈದ್ಯನೋ
ಅವನಿಗು ಮೀರಿದ ಕಣವೋ
ನಿಯಮವ ಮೀರಿದ ಗುಣವೋ
ತಿರುತಿರುಗಿದೆ ಗಾಣ
ಅವಳು ಮೈಕೊಡವಿ ಎದ್ದಳು
ನನ್ನ ಅಸ್ಮಿತೆಯ ಹರಾಜಿಗಿಟ್ಟ
ಆತ್ಮಗೌರವವ ಸುಡಲು ಹೊರಟ
ಮುಂಡಾಸು ಬೈರಾಸು
ಗಂಡನೆಂಬವನಿಗೆ ಇನ್ನು ಬಿಡಬಾರದು.
ಅವಳು ಮೈಕೊಡವಿ ಎದ್ದಳು Read Post »









