ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸೋಜಿಗವಲ್ಲ…!

ಕವಿತೆ ಸೋಜಿಗವಲ್ಲ…! ಕಾಂತರಾಜು ಕನಕಪುರ ಒಳಕೋಣೆಯ ಬಾಗಿಲು ಜಡಿದಮೇಷ್ಟ್ರು ಆನ್ಲೈನ್ ತರಗತಿಯಲ್ಲಿಲಿಂಗ ಸಮಾನತೆಯ ಕುರಿತುವಿದ್ಯಾರ್ಥಿಗಳಿಗೆ ಮನಮುಟ್ಟುವಂತೆಬೋಧಿಸುತ್ತಿದ್ದುದನ್ನು ಕೇಳಿದಮೇಷ್ಟ್ರ ಮಡದಿ ಕಣ್ಣೀರು ಹಾಕಿದ್ದು ಸೋಜಿಗವಲ್ಲ…! ಸಮಾಜದಲ್ಲಿ ಅಸಮಾನತೆಯು ತೊಲಗಿಸಂಪನ್ಮೂಲಗಳ ಸಮಾನ ಹಂಚಿಕೆಯಾಗಬೇಕೆಂದುಹೋರಾಟದ ವೇದಿಕೆಗಳಲಿ ಕಿಡಿಕಾರುತಿದ್ದವನಬೀಳು ಹೊಲದಲ್ಲಿ ಒಲೆ ಹೂಡಿದ್ದ ಅಲೆಮಾರಿಕುಟುಂಬ ಜಾಗ ಖಾಲಿಮಾಡಿದ ನಂತರನಾಲಿಗೆ ಬಿದ್ದುಹೋಗಿರುವುದು ಸೋಜಿಗವಲ್ಲ…! ಮನದ ಮುಂದಣ ಆಸೆಯೇ ಮಾಯೆಎಂಬುದನ್ನು ಸರ್ವರೂ ತಲೆದೂಗುವಂತೆವಿವರಿಸುತ್ತಿದ್ದ ಬುದ್ಧಿಯವರುಸಿಗಬಾರದ ರೀತಿ ಸಿಕ್ಕಿಬಿದ್ದ ವಿಷಯಸವಿವರವಾಗಿ ಮಾಧ್ಯಮಗಳಲ್ಲಿಬಿತ್ತರಗೊಂಡದ್ದು ಸೋಜಿಗವಲ್ಲ…! ಊರ ಮಂದಿಯ ಜಗಳ ಜಂಜಡಗಳಿಗೆಒತ್ತರಿಸಿವನ ಹೊಲ ಹಾಳುಮಚ್ಚರಿಸಿದವನ ಮನೆ ಹಾಳು ಎಂದುತಿಳಿ ಹೇಳುತಿದ್ದ ಊರಿನ ಒಳೇಟು ಗೌಡರಹೊಲ ಮನೆ ಎರಡೂ ಹಾಳಾದದ್ದು ಸೋಜಿಗವಲ್ಲ…! ನಮಗೆ ಗ್ರಾಹಕನೇ ದೇವರುದೇವರಿಗೆ ದ್ರೋಹ ಬಗೆದವರುಂಟೇ?ಹೀಗೆಂದು ಅಂಗಡಿಗೆ ಆಗಮಿಸಿದವರ ಹಣೆಗೆತಮ್ಮ ಹಣೆಯ ನಾಮ ವರ್ಗಾಯಿಸುತ್ತಿದ್ದಮಹಡಿ ಮನೆಯ ಶೇಟ್ ಜೀ ರೋಗಗಳಗೂಡಾಗಿ ಕೊರಗುವುದು ಸೋಜಿಗವಲ್ಲ…! ಕಿಡಿಯನು ಕೆಂಡಮಾಡಿಉರಿಯನು ಊರಿಗೆ ಹಚ್ಚಿತಾನು ಬೆಚ್ಚಗಿದ್ದವನ ಇದ್ದೊಬ್ಬ ಮಗಕಿಚ್ಚಿನಲಿ ಸುಟ್ಟು ಬೂದಿಯಾದುದು ಸೋಜಿಗವಲ್ಲ…! ಮಂದಿ ಮತಿಯ ಮೇಲೆ ಮಂಕುಬೂದಿಯ ಸಿಡಿಸಿ ಮಾಯಾಜಾಲದಲಿ ಸಿಲುಕಿಸಿದೆವೆಂದು ಬೀಗಿಗೆದ್ದವರಿಲ್ಲ ಸೋತವರೆ ಎಲ್ಲಾ…ಹೆಣೆದ ಬಲೆಯೊಳಗೆ ಹೆಣವಾಗುವುದುಯಾವತ್ತಿಗೂ ಸೋಜಿಗವಲ್ಲ…! ************************

ಸೋಜಿಗವಲ್ಲ…! Read Post »

ಕಾವ್ಯಯಾನ

ಬದ್ಧತೆ ಮೆರೆಯುವ..

ಕವಿತೆ ಬದ್ಧತೆ ಮೆರೆಯುವ.. ಪ್ರೋ ವಿಜಯಲಕ್ಷ್ಮಿ ಪುಟ್ಟಿ ಗೆಳೆಯನಮ್ಮಪ್ರೀತಿಅದರ ರೀತಿನಿಭಾಯಿಸುವಒಲುಮೆಯಿಂದಜತನದಿಂದಪತನವಾಗದಂತೆ ..ನೆನಪಿಸಿಕೋ ನನ್ನನ್ನನನ್ನ ನೆನಪಿನ ಲೋಕಕ್ಕೆಮೇಲು ಹೆಜ್ಜೆ ಇರಿಸುನನ್ನ ಎಲ್ಲ ಖುಷಿ ನಿನ್ನಿಂದಲೇ ಇರದಿದ್ದರೂ ನಾನು ಖುಷಿಯಿಂದ ನೀನು ಮಾತ್ರ ದುಖಿ ಬೇಡನನ್ನ ಮುಖದ ನಗುನಿನ್ನ ಬಳುವಳಿನನ್ನ ಸುಖದುಃಖದಹರಿಕಾರ ನೀನುನಿನ್ನಿಂದ ಮುನಿಸಿದರೆ ಮುದುರಿಕೊಳ್ಳಬೇಡ ಮನಸು ..ಒಮ್ಮೊಮ್ಮೆ ಪ್ರೀತಿತುಸು ಹಟಮಾರಿಮನಸ್ಸು..ಮನಸ್ಸುಗಳದೂರ ಬೇಡಸಾಗಬೇಕಿದೆ ಬಲುದೂರ ಹಾದಿನಮ್ಮ ನಮ್ಮ ವಚನಪರಿಪಾಲಿಸುವಬದ್ಧತೆಗೆ ಪkkaಗೋಣಸುಂದರ ನಿನ್ನೊಂದಿಗೆ ಜೀವನ ಪಯಣನೆನಪಿಸಿಕೋ ನನ್ನನಸುನಗುವೆ ಇನ್ನ …. ******************

ಬದ್ಧತೆ ಮೆರೆಯುವ.. Read Post »

ಕಾವ್ಯಯಾನ

ಹೆರಿಗೆ

ಕವಿತೆ ಹೆರಿಗೆ ಡಾ .ಶಶಿಕಾಂತ ಪಟ್ಟಣ ಕೊನೆಗೂಆಯಿತು ಹೆರಿಗೆಭಾವದ ಗರ್ಭಸ್ನೇಹ ಪ್ರೀತಿಪ್ರೇಮ ಚಿಲುಮೆಭ್ರೂಣ ಒಳಗೆಪಡಲೊಡೆಯಿತುಒಲುಮೆಹೃದಯದಕುಲುಮೆಯಲಿಅರಳಿತು ಕೂಸುಅದೆಷ್ಟು ಸುಖಸಂತಸ ನೆಮ್ಮದಿಹೇರಿಗೆಯಯಿತುಕವನಸ್ವಲ್ಪ ತಡವಾದರೂಕಾಯಬೇಕುಹತ್ತು ತಿಂಗಳುಬಾಣಂತಿಗಳುಗಜ ಗರ್ಭಪ್ರಸವ ವೇದನೆ ***********************

ಹೆರಿಗೆ Read Post »

ಕಾವ್ಯಯಾನ

ಮಾವನ ಕರೆ

ಕವಿತೆ ಮಾವನ ಕರೆ ಶೃತಿ ಮೇಲುಸೀಮೆ ಮೊಂಡ ಕೋಲ ಕಟ ಕಟ ಕುಟ್ಟುತ್ತಾಒಂಟಿ ಕಾಲ ಕುಂಟ ಮಾವಕೂಗ್ತಾ ಬಂದಿದ್ದ ಕೂಗ್ತಾ ಬಂದಿದ್ದ ನೀಲವ್ವ ತಾರವ್ವ ಎಂದುಕಣ್ ಅಗಲಿಸಿ ಕೇಳ್ತಾನೋಡ್ತಾ ನಿಂತಿದ್ದ ನೋಡ್ತಾ ನಿಂತಿದ್ದ ಹಸಿದ ಹೊಟ್ಟೆ , ಸಪ್ಪೆ ಮಾರಿ ಮಾಡ್ಕೊಂಡುತಿನ್ನಕ ತಾರವ್ವ ತಂಗ್ಯವ್ವ ಎಂದುಕರಿತಾ ನಿಂತಿದ್ದ ಕರಿತಾ ನಿಂತಿದ್ದ ಪುಟ್ಟಿ ಪುಟ್ಟಿ ಹಣ್ಣು ಮಾರುವಾಗರೊಕ್ಕ ಕೊಟ್ಟು ಒಯ್ಯನದಿದ್ದ ಮಾವ ಇಂದುಕಿಸೆಲೀ ರೊಕ್ಕ ಇಲ್ಲದೆ ಬಾಯಿ ಚಪ್ಪರಿಸುತದ್ದಸೊಸೆ ಮುಂದೆ ಸೋತು ಕೇಳ್ತಿದ್ದ ಸೋತು ಕೇಳ್ತಿದ್ದ ಬಾ ಮಾವ ಏನು ಉಂಡಿ ಎಂದಾಗತೊಂಬ್ಲ ತಿಂದು ಬಂದಿನಿ ,ರುಚಿ ಕೆಟ್ಟ ಬಾಯಿಗಂಗಳದಲ್ಲಿ ಅಂಬಲಿ ಆದ್ರೂಕೊಡವ್ವ ಎಂದಿದ್ದ ಕೊಡವ್ವ ಎಂದಿದ್ದ ಹೇಗಿದಿಯಾ ಮಾವ ಎಂದಾಗನನ್ನ ಬದುಕು ನಾಟಕದ ಪಾತ್ರ ಆದಂಗಾಗಿದೆಹರೆದರಲ್ಲಿ ವಿಜೃಂಭಿಸಿದ ಜೀವಸತ್ವ ಕಳಕೊಂಡ ಕಲ್ಕಿ ಜಗ ಎಂದಿದ್ದ ಕಲ್ಕಿ ಜಗ ಎಂದಿದ್ದ ಇದ್ದು ಇಲ್ಲದಂಗಿರುವ ಜೀವ್ನ ಕಾಳು ಇದೆ ಕೂಳಿಲ್ಲಹಣದ ಹುಚ್ಚು ಹಿಡಿದ ಮನಸುಎಲ್ಲಾ ಇದ್ದು ಇಲ್ಲೆ ಸುತ್ತುತ್ತಿದೆ ಏನು ಇಲ್ಲದಂಗ ಎಂದುನಿಟ್ಟುಸಿರು ಬಿಟ್ಟಿದ್ದ ನಿಟ್ಟುಸಿರು ಬಿಟ್ಟಿದ್ದ ****

ಮಾವನ ಕರೆ Read Post »

ಕಾವ್ಯಯಾನ

ವೀಣಾ ನಿರಂಜನರವರ ಕವಿತೆ

ಕವಿತೆ ವೀಣಾ ನಿರಂಜನರವರ ಕವಿತೆ ನಕ್ಷತ್ರಗಳನ್ನು ನೋಡುವಾಗನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರುಈಗ ಖುದ್ದು ನಕ್ಷತ್ರವಾಗಿದ್ದಾರೆಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿನಕ್ಷತ್ರವಾಗಿ ಬಿಡುವವರ ಕುರಿತುನಾನೀಗ ಯೋಚಿಸುತ್ತಿದ್ದೇನೆ ಅಂಗಳದ ತುಂಬ ಚೆಲ್ಲಿದ್ದಮಲ್ಲಿಗೆಯ ಹೂಗಳನ್ನಾಯುತ್ತಿದ್ದವರುಹೂಗಳು ಬಾಡುವ ಮುನ್ನವೇಪರಿಮಳವ ಅಲ್ಲೇ ಬಿಟ್ಟುನಡೆದೇ ಬಿಟ್ಟರು ಸದ್ದಿಲ್ಲದೆಆ ಪರಿಮಳವಿನ್ನೂ ಹಾಗೇ ಇದೆನನ್ನ ಮನದೊಳಗೆ ರಾತ್ರಿ ನೀರವ ಮೌನದಲ್ಲಿಬಿಚ್ಚಿ ಕೊಳ್ಳುತ್ತಿದ್ದ ಬದುಕ ಕಟ್ಟುವಕನಸುಗಳು, ಪಿಸುಮಾತು, ನಸುನಗೆಹಾಡಾಗಿ ಹೊಮ್ಮುತ್ತಿದ್ದ ಭಾವಗಳುಎದೆಯ ದನಿಗೆ ರಾಗವಾಗುವ ಮುನ್ನವೇಸ್ವರಗಳ ಕಳಚಿಟ್ಟು ನಡೆದರು ಎಲ್ಲೋ ದೂರದಲ್ಲಿ ಪುಟ್ಟ ನಕ್ಷತ್ರಗಳಾಗಿಮಿನುಗುತ್ತಿರುವ ಈ ನನ್ನ ಜನಕಾಲ ಕಾಲಕ್ಕೆ ಸುರಿವ ಮಳೆಯಂತೆ,ಕಡಲ ಭೋರ್ಗರೆತದಂತೆಎಲೆ ಕಳಚಿ ಮರುಹುಟ್ಟುಪಡೆಯುವ ವೃಕ್ಷ ಸಂಕುಲದಂತೆಮರಳಿ ಬಾರರೆ… ಹೊತ್ತು ಮುಳುಗುವ ಮುನ್ನವೇತೆರೆದುಕೊಳ್ಳುವಹೊತ್ತೇರುವ ಮುನ್ನವೇಮರೆಯಾಗುವ ಈ ತಾರಾ ಲೋಕನಮ್ಮೊಳಗೊಂದು ಬೆಳಕಿನ ಕಿರಣಹಡೆದು ಬಿಡುವ ಸೋಜಿಗದಲ್ಲಿರುವೆನಾನೀಗ… ******

ವೀಣಾ ನಿರಂಜನರವರ ಕವಿತೆ Read Post »

You cannot copy content of this page

Scroll to Top