ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸ್ಮಿತಾ ಭಟ್ ಅವರ ಕವಿತೆಗಳು

ಸ್ಮಿತಾ ಭಟ್ ಅವರ ಕವಿತೆಗಳು ನಾನು ಒಂಟಿಯಾಗುತ್ತೇನೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸುತ್ತುಗಟ್ಟಿದ ನೋವುಗಳ ನಡುವೆದೂರದಲ್ಲೇ ಉಳಿದ ನಗುವಿನೊಂದಿಗೆ ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಮಾತು ಬಿಕ್ಕಿ,ಮೌನ ಉಕ್ಕಿಯಾವ ಕಿವಿಗಳೊಳಗೂ ಹೊಕ್ಕದ ನಿಟ್ಟುಸಿರಿನೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ನನ್ನದೇ ಭಾವಗಳೊಳಗೆ ಯಾರೋ ಪ್ರತಿಭಟಿಸಿಸೆಟೆದು ನಿಲ್ಲುವ ಬಿರುಸಿನ ಮಾತುಗಳೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಹೆಣೆದ ದಾರದ ಮಧ್ಯ-ಸಿಲಕಿದ ಕೀಟದ ಅಮಾಯಕತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆ,ಬರುವ ಕಿರಣಗಳ ತಡೆದುಕದವಿಕ್ಕಿದ ಕೋಣೆಯ ನೀರವತೆಯೊಂದಿಗೆ. ಕೆಲವೊಮ್ಮೆ ನಾನು ಒಂಟಿಯಾಗುತ್ತೇನೆಸಮಾಧಿ ಮೇಲೆ ಇಟ್ಟ ಹೂಗಾಳಿಗೆ ಮೈ ಒಡ್ಡಿ ಇಷ್ಟಿಟ್ಟೇ ಸರಿದುಬೆರ್ಪಟ್ಟುಖಾಲಿ ಖಾಲಿ ಸಪಾಟಿನಲಿ ಉಳಿದ ಮೌನದೊಂದಿಗೆ. ****************************** ಹೇಳಲಾಗುವದಿಲ್ಲ ಆ ಪುಟ್ಟ ಬಾಲ್ಯದಲಿಆಟದಲಿ ಸೋತಿದ್ದುಪೆನ್ಸಿಲ್ ಕದ್ದಿದ್ದುಮೇಷ್ಟ್ರು ಹೊಡೆದದ್ದುಸುಮ್ಮನೇ ಜೋಡಿಸಿದ ಸರಣಿ ಸುಳ್ಳುಗಳುಬಹಿರಂಗವಾಗಿ ಭಯ ಬೀಳಿಸಿದರೂ ಹೇಳಲಾಗುವದಿಲ್ಲ. ಹರಿಯುತ್ತ ಬರುವ ಹರೆಯಹಗೂಽರ ತೆರೆದು ಕೊಳ್ಳುವ ಭಾವಆಗಲೇ ಅಲ್ಯಾರೋ ನೋಟ ಬದಲಿಸಿದ್ದುಮೌನ ಮೊಗ್ಗು ಅರಳಿ ನಕ್ಕಿದ್ದುಸುಮ್ಮನೇ ಬೆವರಿದ್ದುಒಳಗೊಳಗೇ ಅರ್ಥವಾಗುತ್ತಿದ್ದರೂಹೇಳಲಾಗುವದಿಲ್ಲ. ಸಾಕು ಇನ್ನೆಷ್ಟು ದಿನ“ಹೆಣ್ಣು ಅವಳು”ಮದುವೆ ಮಾಡಿ ಮುಗಿಸಿಎಲ್ಲೆಲ್ಲಿಂದಲೋ ಬರುವ ಹಿತ-ವಚನದ ಮುಖ ಹೊತ್ತ ಅಹಿತ.ಕೈಯಲ್ಲಿ ಹಿಡಿದ ಕಾಫಿ ಲೋಟಕಟ ಕಟ ಸದ್ದಿನಲಿ ಕೈಗಿಟ್ಟುಒಳಮನೆ ಸೇರಿಕೊಂಡು ಇಣುಕಿದಾಗಏನಿತ್ತು ಭಾವ!ಅಪ್ಪನ ಬಡತನ ,ಅಮ್ಮನ ನೋವು,ಸಂಬಂಧಿಗಳ ಕುಹಕಇಲ್ಲ ಏನನ್ನೂ ಹೇಳಲಾಗುವುದಿಲ್ಲ. ಕಣ್ಣು ನೂರಾರು ಕನಸ ಹೊತ್ತುಹೊಸ್ತಿಲು ದಾಟುವಾಗಅಪ್ಪನ ಬಿಕ್ಕು,ಅಮ್ಮನ ಗುಕ್ಕುತಿರು-ತಿರುಗಿ ಆರ್ದ್ರವಾಗಿ ನೋಡುವಅದೇ ಬೆಚ್ಚನೆಯ ಗೂಡುಕಣ್ಣೀರಿನ ಹೊರತಾಗಿಅಲ್ಲಿ ಘಟಿಸುವ ಯಾವ ಭಾವವನ್ನೂ ಹೇಳಿಕೊಳ್ಳಲಾಗುವದಿಲ್ಲ. ಸಂತೆ ಮುಗಿದ ಬೀದಿಯಲಿಒಂಟಿಯಾಗಿ ನಿಂತುಅಂಟಿ ಕೊಂಡಿದ್ದು ಏನು ಎಂದುತಿರುಗಿ ನೋಡಿಕೊಳ್ಳುವಾಗರಥದಿಂದ ಒಂದೊಂದೇ ಹೂ ಉದುರಿತನ್ನದೇ ಕಾಲಿಗೆ ತುಳಿವಾಗಖುಷಿ,ಕನಸು,ನೋವು,ಹಿಂಸೆಏನನ್ನೂ ಹೇಳಿಕೊಳ್ಳಲಾಗುವುದಿಲ್ಲ ನಡೆವ ದಾರಿಗೆ ಕಲ್ಲಿಟ್ಟುಎಡವಿದಾಗ ನಕ್ಕವರು ಅದೆಷ್ಟೋಈಗ ಎದ್ದು ನಡೆದಿದ್ದೇನೆ ತಲೆ ಎತ್ತಿಆಡಿಕೊಂಡವರ ಎದುರುಅದರೀಗ ಏನೂ ಹೇಳಬೇಕು ಅನ್ನಿಸುವುದಿಲ್ಲ. ————————— ನಿತ್ಯ ಮುನ್ನುಡಿ ಕವಿತೆ ಈ ದಿನ ಹೊಸದೊಂದು ಕವಿತೆಗೆ ಮುನ್ನುಡಿಯಾದರೂ ಬರೆಯಲೇ ಬೇಕುಮುನ್ನೆಲೆಗೆ ಬಂದು ಕಾಡುವ ವಿಚಾರಗಳ ನಡುವೆಯೂ . ಅರೇ,!ಎಷ್ಟು ಚಂದದ ಸಾಲೊಂದು ಹುಟ್ಟಿದೆಈ ಕೋಗಿಲೆಯ ಉಲಿಗೆಇಂದು ಹುರುಪಿದೆ ನೊಡು. ಸುತ್ತುವ ಸಾಲುಗಳಿಗೀಗಹೊಸ ಭಾವಗಳ ಅಲಂಕಾರಉಪಹಾರದ ಗಡಿಬಿಡಿಯಲ್ಲಿಉಪಯೋಗಿಸಲಾಗದೇ ಉಳಿದ ಅಕ್ಷರ. ಮೈಮುರಿದು ಏಳುವಾಗಿನ ತೀವ್ರತೆಅಲ್ಲಲ್ಲಿ ನಿಂತು ಅತುತ್ಸಾಹದಲಿ ಹೊಕ್ಕನಿರುತ್ಸಾಹ.ಪಾತ್ರೆಗಳ ಲಗುಬಗೆಯಲಿ ಗಲಬರಿಸಿಅಂಗಿಗೆ ಅಂಗೈ ಒರೆಸಿಕೊಂಡು-ಉಳಿದ ಹನಿಗಳ ತಾಕಿದ ಹಾಳೆ ಆರ್ದ್ರಊಟದ ತಯಾರಿಯಲ್ಲಿ ಮನಸು ಮಗ್ನ. ಸ್ನಾನದ ಮನೆಯಲ್ಲಿ ಮತ್ತೆ ನೆನಪಾಗುವಅದೇ ಭಾವಗಳ ಮುಂದುವರಿದ ಭಾಗಕನ್ನಡಿಯ ಮುಂದೆ ಅರಳಿ ಮರಳುವಾಗಅಡುಗೆ ಮನೆಯಿಂದ-ಸೀದ ವಾಸನೆಯೊಂದು ಮೂಗಿಗೆ ರಾಚಿ,ಮುದ್ದಾದ ಸಾಲುಗಳೆಲ್ಲ ಈಗ ಕಮಟು. ಸಿಡಿಮಿಡಿಯ ಮನಸುಇಳಿವ ಕಣ್ಣಾಲಿಗಳನೂ ತಡೆದು ಎದೆಯೊಳಗೊಂದು ಕಾರ್ಮೋಡ-ಕರಗಿಸಲೊಂದು ಸಮಾಧಾನ,ಇರಲಿ ರಾತ್ರಿಯವರೆಗೂ ಸಮಯವಿದೆಏನಾದರೊಂದು ಗೀಚಲೇ ಬೇಕು. ದಿನದ ಕಟ್ಟ ಕಡೆಯ ದೋಸೆ ಹಿಟ್ಟಿನ ಹದ ಮುಗಿಸಿಬಿಡುಗಡೆಯ ನಿಟ್ಟುಸಿರುಮುದಗೊಂಡ ಮಂದ ಬೆಳಕಿನಲಿಲಹರಿಗೆ ಬಂದ ಸಾಲು ತಡಕಾಡುವಾಗಹೆಪ್ಪು ಹಾಕಿದ ಪಾತ್ರೆಯ “ಧಡಾರ್ “ಸದ್ದು. ಸಿಕ್ಕ ಸಾಲುಗಳ ಮರೆತು ಬೆಳಗಿನ ಚಿಂತೆ.ರಾತ್ರಿ ಕೈ ಮೀರುತ್ತಿದೆ,ಬೆಳಿಗ್ಗೆ ಬೇಗ ಏಳಬೇಕಿದೆ,ಮನಸು ದೇಹ ಎರಡರದೂಕಳ್ಳ ಪೋಲೀಸ್ ಆಟ.ನಾಳೆ ನೋಡೋಣ ಎನ್ನುವಲ್ಲಿಗೆ ಕವಿತೆ ಪೂರ್ಣಗೊಳ್ಳುತ್ತದೆ. ******************************

ಸ್ಮಿತಾ ಭಟ್ ಅವರ ಕವಿತೆಗಳು Read Post »

ಕಾವ್ಯಯಾನ

ನಾನು-ನೀನು

ಕಾವ್ಯಯಾನ ನಾನು-ನೀನು ಅನಿತಾ ಕೃಷ್ಣಮೂರ್ತಿ ಸುಡುವ ಬೆಂಕಿಯ ಮೇಲಿರುವಬಾಣಲಿಯಲಿ ಪಟಪಟನೆಮೇಲೇರುವ ಅರಳಿನಂತೆಮಾತನಾಡುವ ನಾನು…ನಿನ್ನೆದುರಿಗೆ ಮಾತುಬಾರದ ಮೂಕಿ! ಕಾಡುವ ತಂಗಾಳಿಗೆ, ಮುಂಗುರುಳುಪ್ರತಿಭಟಿಸದೆ ಅತ್ತಿಂದಿತ್ತಸರಿದಾಡಿ, ಭಾವ ತನ್ಮಯಗೊಳಿಸುವ ನಾನು..ನಿನ್ನೆದುರಿಗೆ ಬೆದರಿ, ನಾಚಿ..ಕಣ್ಮುಚ್ಚುವ ಕುರುಡಿ! ಹುಣ್ಣಿಮೆಯ ಚಂದಿರನಿಗಾಗಿಹಾರಿ, ಹಾರಿ ಧುಮ್ಮಿಕ್ಕುವ ಅಲೆಯಂತೆ,ಚಂಗನೆ, ಸರಸರನೆ ಜಿಗಿಯುವ ನಾನು..ನಿನ್ನೆದುರಿಗೆ ಕಪ್ಪೆಚಿಪ್ಪಲಿ ಮುದುರಿ ಕುಳಿತ ಮುತ್ತು **********************

ನಾನು-ನೀನು Read Post »

ಕಾವ್ಯಯಾನ

ಡಾ. ನಿರ್ಮಲಾ ಬಟ್ಟಲ ಕವಿತೆಗಳು

ಡಾ. ನಿರ್ಮಲಾ ಬಟ್ಟಲ ಕವಿತೆಗಳು ಕನಸಿರದವಳು ಕನಸುಗಳಿರದವಳು ನಾನುಯಾವ ಕನಸು ಬೇಕುಎಂದು ಕೇಳಿದರೆ ಏನು ಹೇಳಲಿ….? ಕನಸೆಂದರೆ ಕಾಮನಬಿಲ್ಲುನನಗೆ ಕಂಡಷ್ಟೇ ಸುಂದರಕೈಗೆ ಸಿಗದ ಒಲವು….! ಕನಸುಗಳ ಹಿಂದೆದೂಬೆನ್ನಟ್ಟಿ ಓಡಿದವಳಲ್ಲಕಾಡಿದವಳೂ ಅಲ್ಲ….! ಕನಸಿಗೆ ಬಣ್ಣ ತುಂಬುವಕಲೆಗಾರ ಚಿತ್ರಿಸದಿರುಬಣ್ಣಗಳ ಚೌಕಟ್ಟಿನೊಳಗೆಬಯಲ ಪ್ರೀತಿಸುವವಳು ನಾನು..! ಕನಸುಗಳ ಮೀನು ಹಿಡಿವಬೆಸ್ತಗಾರ ಸಿಕ್ಕಿಸದಿರು ನನ್ನಬಲೆಯೊಳಗೆಹರಿವ ನೀರು ಸೇರುವವಳು ನಾನು..! ಕನಸಿಗೆ ರೆಕ್ಕೆ ಕಟ್ಟುವಮಾಯಗಾರಮೋಡಿಮಾಡದಿರುಮುಗಿಲೊಳಗೆನೆಲದೊಳಗೆ ಕಾಲುರಿ ನಿಂತವಳು ನಾನು….! ನನಗಾಗಿನೀನು ಹೊತ್ತು ತಂದನೂರು ಕನಸುಗಳಲಿಯಾವುದನ್ನು ಆರಿಸಲಿ….? ನೀನು ಪ್ರೀತಿಯಿಂದಕೊಟ್ಟರೆ ಯಾವುದಾದರೂ ಸರಿಇಟ್ಟು ಕೊಳ್ಳುವೆನನಸಾಗಿಸುವ ಪಣತೊಟ್ಟುಕೊಳ್ಳುವೆ…! ಕನಸು ಹೆಣೆವ ನೇಕಾರನೀ ನೇಯುವಎಳೆ ಎಳೆಯೊಳಗೆಚಂದದ ಚುಕ್ಕಿಯಾಗಿಅಂದದ ಚಿತ್ತಾರವಾಗಿನಿನ್ನ ಕನಸುಗಳಅರಸಿ ಬರುವೆ….! ಗೆಳೆಯಾ…. ಗೆಳೆಯಾ…ಹಸಿದು ಬಂದರೆ ನೀನುನನ್ನ ಬಳಿ ಇರುವುದು ಬರಿಭಾವಬುತ್ತಿ….!ಬಿಚ್ಚಿ ಕೊಡುವೆಕೈಯೊಡ್ಡು….!ತುತ್ತು ತುತ್ತನುಅದ್ದಿ ಕೊಡುವೆಸ್ನೇಹವೆಂಬ ಜೇನಲಿ….!ಸವಿಯೆ ನೀನುಸುಖಿಯು ನಾನುಮಾತೃ ಹೃದಯ ಮನದಲಿ…! ಗೆಳೆಯಾ ಬಾಯಾರಿಬಳಲಿ ಬಂದರೆ ನೀನು….ನನ್ನಲ್ಲಿದೆ ಬರೀ ಭಾವಭಾರದ ಮೋಡಬೊಗಸೆಯೊಡ್ಡು….!ಸುರಿವೆ ಪ್ರೇಮಮಳೆಬರಗಾಲದ ಬಯಲನೆಲ್ಲರಮಿಸಿ ….!ಮುತ್ತುಹನಿಗಳಲ್ಲಿ ತೊಯಿಸಿತುಂಬುವೆ ಒಡಲ ತುಂಬ ಜೀವಕಳೆ….‌!ತೃಪ್ತ ನೀನು ಹಗುರ ನಾನು….! ಗೆಳೆಯಾ ನೀನುದಣಿದು ವಿರಮಿಸಲೂನನ್ನಲ್ಲಿರುವುದುಭಾವ ಜೋಳಿಗೆ ….!ಹೃದಯ ಮಿಡಿತದ ಲಾಲಿಯೊಳಗೆನೆತ್ತಿಯ ಮುಂಗುರುಳಲಿಬೆರಳ ತೀಡುತ ಕನಸು ಬಿತ್ತುವೆನಾನು….!ಮುಗುಳುನಗುತ ಕನಸಲ್ಲಿತೇಲಬೇಕು ನೀನು….! ಲಿಂಗ….. ಬಹಿರಂಗದಲಿ ಗಂಡುವೇಶದೇಹದೋಷಅಂತರಂಗದೊಳೊಂದುಆವೇಶಹೊರಬರಲಾರದೆಒಳಗಿರಲಾರದೆತಲ್ಲಣದ ಸುಳಿಯೊಳಗೆವಾಂಛೆಯೊಂದು ದಿಕ್ಕು ತಪ್ಪಿತುಲಿಂಗವೆ ಕಳೆದು ಹೋಯಿತು ತಿಳಿಯಲೆಇಲ್ಲ ಹೆಣ್ಣುಗಂಡು ಲಿಂಗದಲಿಒಂದಾದ ಹರಗಂಡು ಹೆಣ್ಣಾಗಿ ಗಂಡುಮೋಹಿಸಿದ ಹರಿದ್ವಿಲಿಂಗಿಗಳಾದುದ ನೆನೆಯಬೇಕಲ್ಲ ಲಿಂಗದೊಳಗಿಷ್ಟು ಪರಿಯನಿಟ್ಟುಸುಖದತತ್ವವ ಒಳಗೆಯಿಟ್ಟುತಾರತಮ್ಯದ ಕಣ್ಣು ಕೊಟ್ಟುನೋಟ ಸರಿಯಾವುದೆಂದುತಿಳಿಯಲೆ ಇಲ್ಲ….! *******************

ಡಾ. ನಿರ್ಮಲಾ ಬಟ್ಟಲ ಕವಿತೆಗಳು Read Post »

ಕಾವ್ಯಯಾನ

ಎಂ. ಆರ್. ಅನಸೂಯರವರ ಕವಿತೆಗಳು

ಎಂ. ಆರ್. ಅನಸೂಯರವರ ಕವಿತೆಗಳು ದೇವರ ಲೀಲೆ          ಹಸುಗೂಸಿನ ಮುಗುಳ್ನಗೆ ಕಂಡಾಗ ಪರವಶನಾಗಬಹುದು ದೇವರು ಹಸಿದ ಕಂದಮ್ಮನ ಹೊಟ್ಟೆ ತಣಿದಾಗ ತೃಪ್ತಿ ಪಡಬಹುದು ದೇವ ಹಾಲಿನಂಥ ಮಲ್ಲಿಗೆ ಮೊಗ್ಗು ಬಿರಿದಾಗ ಮನ ಸೋಲಬಹುದು ದೇವರು ಹಸಿರುಟ್ಟ ಮಲೆಗಳ ತಂಬೆಲರು ಸುಳಿದಾಡಿದಾಗ ನಿದ್ರಿಸಬಹುದು ದೇವರು ಜಲಧಾರೆಗಳು ಬಿಳಿ ಮುತ್ತುಗಳ ಚೆಲ್ಲಾಡುವಾಗ ಹೆಕ್ಕಲು ಬರಬಹುದು ದೇವರು ಹೊನಲಲ್ಲಿ ಸ್ಪಟಿಕದಂಥ ಜಲ ಹರಿವಾಗ ನೀರಾಟವಾಡಬಹುದು ದೇವರು ಕಾರ್ಮೋಡಗಳಲಿ ಮಿಂಚು ಕೋರೈಸಿದಾಗ ಕಣ್ಬಿಡಬಹುದು ದೇವರು ವೈಶಾಖದ ಮಳೆಗೆ ಇಳೆ ಘಮ ಹರಡಿದಾಗ ಇಷ್ಟ ಪಡಬಹುದು ದೇವರು ಎಲ್ಲೆಡೆ ಅರಿವಿನ ಬೆಳಕು ಬೀರಿದಾಗ ಖುಷಿ ಪಡಬಹುದು ದೇವರು ಮರೀಚಿಕೆ ಓಡುತ್ತಿದ್ದೇನೆ ಚಾಚಿ ಕೈ ಮುಂದೆ ಪ್ರೀತಿಯ ಗಗನ ಕುಸುಮದ ಹಿಂದೆ ಮರೀಚಿಕೆಯ ಬೆನ್ನತ್ತಿದ ಹಂಬಲಕೆ  ದಣಿವೇ ಇಲ್ಲ ! ಕಿತ್ತಷ್ಟು ಚಿಗುರುವ ಕಳೆ ಪ್ರೀತಿಯ ಸಮೃದ್ಧ ಬೆಳೆಯ ನಿರೀಕ್ಷೆಯಲ್ಲಿ ರೈತನ ಖುಷಿಯಿತ್ತು ಬೆವರಿನ ಬೆಲೆಯ ಕುಸಿತವೇ ನಿಲುಕದ ಪ್ರೀತಿಯಲ್ಲಿ ಕಾಣುತ್ತಿತ್ತು ಒಲವಿನ ಒರತೆ ಉಕ್ಕುವ ಹಂಬಲದ ಭರವಸೆಯಲಿ ಬದುಕಿನ ಗಮನವಿತ್ತು ಆಳಕ್ಕಿಳಿದು ಮರೆಯಾದ ಅಂತರ್ಜಲ ಬಿಸಿಲ್ಗುದುರೆಯಾದ ಪ್ರೀತಿಯ ಬಲ ಮಾಗಿಯ ಎಳೆ ಬಿಸಿಲ ಹಿತವಿದೆ ಮಧುರ ಪ್ರೇಮದ  ಪ್ರತೀಕ್ಷೆಯಲಿ ಶಿಶಿರ ಋತುವಿನ  ಬೋಳು ಮರ ಮರೀಚಿಕೆಯಾದ ಸಾಪೇಕ್ಷ  ಸಾನುರಾಗ ಬೀಳ್ಕೊಡಬೇಕಿತ್ತು ಬೀಳ್ಕೊಡ ಬೇಕಿತ್ತು   ಅಂತಿಮವಾಗಿ ಘನತೆಯಿಂದ ಕಂಡು ಗೌರವದ ಬಾಷ್ಪಾಂಜಲಿಯೊಡನೆ ವಿಧಿ ವಶವಾದವರನ್ನು ಬೀಳ್ಕೊಡಬೇಕಿತ್ತು ನೆನೆದು ನಮ್ಮೊಡನಿದ್ದ  ಕ್ಷಣಗಳ  ಅಗಲಿದವರ  ಆಪ್ತರೊಡನೆ ಕೋರುತ್ತಾ ಚಿರಶಾಂತಿಯ ಚಿರನಿದ್ರಗೆ  ಜಾರಿದವರನ್ನು ಸಾವಿನ ಭಯದ ಕೂಪಕೆ ದೂಕಿರುವ ಅಗೋಚರ  ಸೂತ್ರಧಾರಿ ವೈರಾಣುವಿನ ಮಳೆ ಸೂತ್ರದ ಬೊಂಬೆಯಾದ ಜಗತ್ತು! ಪರಮಾಣುವಿಗೂ ಮೀರಿದ ತಾಕತ್ತು ಕೈಕಟ್ಟಿದ ಬಾಯಿ ಮುಚ್ಚಿದ ಕ್ಷೀಣ ಉಸಿರಾಟದ ಸೂತಕದ ಮನೆಯಾದ ಊರಿನಲ್ಲಿ ಸಾವು ಸಹಾ ಅನಾಥವೇ ! ಬೀಳ್ಕೊಡಬೆಕಿತ್ತು ಗುಣಗಾನದ ಚರಮಗೀತೆಯೊಂದಿಗೆ ಶೂನ್ಯ ನೀರವ ಮೌನದಿ  ಹೊಸಿಲೊಳಗೇ ನಿಂದು ಅಸ್ಪೃಶ್ಯರನ್ನಾಗಿಸಿ ಕಳಿಸಿದೆವು ಸುಡುಗಾಡಿಗೆ ಕೊರೊನಾ ಕಪಿಮುಷ್ಟಿಯಲಿ ಕಾಲನ ಕರೆಗೆ ಓಗೊಟ್ಟು ಪರದೇಶಿ ಸಾವಿಗೆ ಬಲಿಗೀಡಾದವರನ್ನು.   ಪ್ರೀತಿಯೂ – ದ್ವೇಷವೂ ಪ್ರೀತಿ  ಬದುಕಿನ ತವನಿಧಿ ದ್ವೇಷ  ಬದುಕಿನ ಕ್ಷಯ ವ್ಯಾಧಿ  ಪ್ರೀತಿಯಿಂದ ಬದುಕು ವಿಕಸಿತ  ಹಿಗ್ಗುವ ಬದುಕಿನ ಆಡಂಬೊಲ  ದ್ವೇಷದಿಂದ ಬದುಕು ಸಂಕುಚಿತ       ಸಹನೀಯವಾಗದ ಬದುಕು ಸೀಮಿತ     ಪ್ರೀತಿಯ ಆಚ್ಛಾದನದಿ ಬದುಕಿನ ಹೂರಣ  ಸುಲಭ ಸಾಧ್ಯವಾಯ್ತು ಬದುಕಿನ ಸಂಕೀರ್ಣ  ದ್ವೇಷದ ಬಾಳಲಿ ವ್ಯರ್ಥ ಕಾಲಹರಣ  ನಮ್ಮದಾಗದ ನಮ್ಮ ಬದುಕು ಅಪೂರ್ಣ ಪ್ರೀತಿ  ಸವಿ ಜಿನುಗುವ ಜೇನು ಗೂಡು ಬದುಕು ಝೇಂಕರಿಸಲಿ ಪ್ರೀತಿಯ ಹಾಡು ದ್ವೇಷ ಧಗೆಯಾವರಿಸಿದ ಇಟ್ಟಿಗೆ ಗೂಡು ನಾವಿಲ್ಲದ ನಮ್ಮದೇ ಬದುಕಿನ ಮಾಡು ಪ್ರೀತಿ ಬದುಕಿಗೆ ಸೊಗವೀವ ಇಂದ್ರಚಾಪ ಭಿನ್ನತೆಯ ಬದುಕಲಿರಲಿ ಪ್ರೀತಿಯ ಲೇಪ ದ್ವೇಷ  ಬದುಕಿಗೆ ಆರದ ಕಿಚ್ಚಿನ ಬೇಗುದಿ ನಾವೇ ಅಟ್ಟಿದ ನಮ್ಮ ಬದುಕಿನ ನೆಮ್ಮದಿ ಪ್ರೀತಿ ಹೃದಯಗಳ ಬೆಸೆವ ಸೇತುವೆ ಹೂವೆತ್ತಿದಂತಾಗುವ ಕಷ್ಟಗಳ ಗೊಡವೆ ದ್ವೇಷ ಮನದ ಬಿರುಕಗಲಿಸುವ ಕಂದಕ ಬಿದ್ದ ಮನಸಾಗುವುದು ಕೂಪ ಮಂಡೂಕ ಪ್ರೀತಿ ಬದುಕಿನ ಚೇತನ ದ್ವೇಷ ಬದುಕಿನ ನಿಪತನ ಅವನು ಪಿಸುಗುಟ್ಟಿದ ಅಲ್ಲೊಬ್ಬ ಹೇಳಿದ ಅವರ  ಹಿರಿಯರು ಎದೆಯಲ್ಲಿ ಅಕ್ಷರ ಬಿತ್ತಿದವರು ಇಲ್ಲೊಬ್ಬ ಘೋಷಿಸಿದ ಅವರ ಪೂರ್ವಜರು ಊರಿಗೆ ಹೆಸರು ತಂದವರು ಮತ್ತೊಬ್ಬ  ಕೂಗಿದ ಅವರ  ಹಿಂದಿನ ತಲೆಮಾರು ಊರನ್ನಾಳಿದ ಪಾಳೇಗಾರರು ಮಗದೊಬ್ಬ ನುಡಿದ ಅವರ ಘನ ವಂಶಜರು ಊರಿಗೆ ವಣಿಕ ಶ್ರೇಷ್ಟರು ಅವನು ಪಿಸುಗುಟ್ಟಿದ ಅವರ ತಾತ ಮುತ್ತಾತಂದಿರು ಊರಾಚೆಯೆ ಬಾಳಿದವರು ನೀವು ಮುಟ್ಟಬಾರದವರು ಊರವರ ಮಲ ಎತ್ತಿದವರು ಹರಿಯ ದರ್ಶನ ಸಿಗದ ಹರಿಜನರು ***************

ಎಂ. ಆರ್. ಅನಸೂಯರವರ ಕವಿತೆಗಳು Read Post »

ಕಾವ್ಯಯಾನ

ಕಾಂತರಾಜು ಕನಕಪುರ ಅವರ ಕವಿತೆಗಳು

ಕಾಂತರಾಜು ಕನಕಪುರ ಅವರ ಕವಿತೆಗಳು ಜಾತಿ ಹೇವರಿಕೆ ಹುಟ್ಟಿಸುವವಿಕಾರ ವೃಕ್ಷಎಲ್ಲಿರುವುದೋ ಬೇರುಯಾರೂ ಅರಿಯರು…ರೆಂಬೆ-ಕೊಂಬೆಗಳು ಲೆಕ್ಕಕ್ಕೆಸಾವಿರಾರು…! ಅವರವರ ಅನುಕೂಲಕೆಯಾರೋ ನೆಟ್ಟರು…ಯಾರೋ ನೀರಿಟ್ಟರು…ಯಾರೋ ಗೊಬ್ಬರ ಕೊಟ್ಟರು…ಹಲವರು ಕಣ್ಣೀರಿಟ್ಟರು…ಅಂತು ಬೆಳೆದು ನಿಂತಿದೆಉದ್ದಂಡ ವಿಷ ವೃಕ್ಷ…! ಈ ಮರದ ನೆರಳು ನೆರಳಲ್ಲ ಅದುಅನುನಯದಿ ನೇಯ್ದ ಉರುಳುಅನುಕೂಲ ಪಡೆದಿಹರು ಕೆಲವರುಸಿಕ್ಕಿಬಿದ್ದು ನರಳುತ್ತಿರುವರು ಹಲವರು ಇನ್ನಾದರೂ…ನಾವು ಹಿಡಿಯಬೇಕಿದೆಅರಿವಿನಿಂದ ಮಸೆದ ಸಮಾನತೆಯ ಅಸ್ತ್ರವನುಕಡಿದುರುಳಿಸಲು ಜಾತಿಯ ವಿಷ ವೃಕ್ಷವನುಆಗ ಮಾತ್ರ ಆಗಬಹುದು ದೇಶದ ಏಳಿಗೆತಪ್ಪಿದರೆ ನಮ್ಮನ್ನು ಕ್ಷಮಿಸದೆಂದೆಂದೂಮುಂಬರುವ ಪೀಳಿಗೆ… ———————– ನಿನ್ನ ಹಾಗೆಯೇ ಇದೆ ಮನದಣಿಯೆ ನೋಡಿ ಮಣಿದೆತುಟಿ ತಲುಪಿದ ಮಾತುಗಳುಅಲ್ಲಿಯೇ ದಸ್ತಗಿರಿಯಾದವುಆಹಾ…! ಎಷ್ಟೊಂದು ಚೆಲುವು? ಇಬ್ಬನಿಯ ಹನಿಗಳು ನೆತ್ತಿಯಮೇಲೆ ಮುತ್ತಿನಂದದಿ ನಿಂದಿಹವುಕದಪುಗಳಲಿ ರಾತ್ರಿ ಕಂಡ ಕನಸಿನಎಳೆಗಳು ಹಸಿಹಸಿಯಾಗಿಹವು…! ತೀಡುತಲಿದ್ದ ತಂಗಾಳಿಗೆ ಗಂಧವುಬೆರೆತು ಸುತ್ತಲೂ ಹರಡುತಲಿತ್ತುಸೂರ್ಯರಶ್ಮಿಗೆ ಸವಾಲೊಡ್ಡುತಿರುವಪಕಳೆಗಳು ಬೆಳಕಿಗೆ ಬಣ್ಣ ಬಳಿಯುತಲಿದ್ದವು…! ಗಾಳಿಯಲ್ಲಿ ಬೆರತ ಗಂಧವುಬಟ್ಟೆಗಳಲ್ಲಿ ಸಿಕ್ಕಿಬಿದ್ದಿತ್ತುಬೆಳಕಿಗೆ ತೀಡಿದ್ದ ಬಣ್ಣಕಂಗಳಿಗೆ ಮೆತ್ತಿಕೊಂಡಿತ್ತು…! ಮುಟ್ಟಬೇಕೆಂಬ ತುಡಿತವನುಕಷ್ಟಪಟ್ಟು ತಡೆದುಕೊಂಡೆನುಕಣ್ಣಿಗೆ ಮೆತ್ತಿದ ಬಣ್ಣ, ಬಟ್ಟೆಗೆ ಅಂಟಿದ ಗಂಧಮನದೊಳಗಿಳಿದು ಮನೆವರೆಗೂ ಬಂದಿವೆ..! ಥೇಟ್ ನಿನ್ನ ಹಾಗೆಯೇ ಇದೆಅದೋ ಅಲ್ಲಿ ಅರಳಿ ನಿಂತಬೇಲಿ ಮೇಲಿನ ಒಂಟಿ ಹೂ…! ————————— ಗತ ಎಂದೋ ಮೀಟಿದ ಶ್ರುತಿಯ ಜಾಡು ಹಿಡಿದುಇಂದು ವೀಣೆಯೊಂದು ಮಿಡಿಯುತಿರುವುದುಹಳೆಯ ಶ್ರುತಿಯ ಹಾಡಿನ ಮೊನೆಯಿದುಕರುಣೆ ಇರದೆ ಎದೆಯನು ಇರಿಯುತಿರುವುದು ಮರೆತ ನೋವನು ಬಿಡದೆ ಕೆದಕುತಿರುವಹಳೆಯ ಗುರುತಿನ ಹಾಡಿದುಕಾಣದಾವುದೋ ಕೈಯ್ಯಿ ಎಡೆಬಿಡದೆಎದೆಯುರಿಗೆ ತಿದಿಯನು ಒತ್ತುತಿರುವುದು ಇರುವ ಸಂತಸದ ಬನವನುಎದೆಯ ಬೆಂಕಿಯು ದಹಿಸುತಲಿರುವುದುಗತದ ಮೇಲೆನ ಪರದೆ ಸರಿಸಿಕೊಳೆತ ನೆನಪುಗಳ ಕಾಡುತಿರುವುದು ಸತ್ತುಹೋದ ಆತ್ಮದ ಹಾಡಿದುಧುತ್ತನೆದ್ದು ಕಾಡುತಿರುವುದುಗತದ ನೆನಪುಗಳು ಗತಿಸುವವರೆಗೂಕಣ್ಣೀರಿನ ಮಳೆಯನು ಸುರಿಸುವುದನುತಪ್ಪದೆ ಜಾರಿ ಇರಿಸಿರುವುದು *******

ಕಾಂತರಾಜು ಕನಕಪುರ ಅವರ ಕವಿತೆಗಳು Read Post »

You cannot copy content of this page

Scroll to Top