ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕನ್ನಡಿಯ ಅಮಾಯಕತೆ

ಕಾವ್ಯಯಾನ ಕನ್ನಡಿಯ ಅಮಾಯಕತೆ ಅಶೋಕ ಹೊಸಮನಿ ಹೀರಬೇಕಿತ್ತು ಈ ಮೊಗವನ್ನಾದರೂನಗುವ ಪರದೆಯ ಚೂರಿಯನ್ನಾದರೂ ಕಲಿಸಬೇಕಿತ್ತು ಮುಖಗಳ ಹೂಳಲುಈ ನೇತ್ರಗಳಿಗಾದರೂ ಒಡೆಯಬೇಕಿತ್ತು ಈ ಮಡಿಕೆಯದಾರಿಗಳಿಗಾದರೂ ಆಲಿಸಬೇಕಿತ್ತು ಗಾಯಗಳಅಣುಕು ಗೋಷ್ಠಿಗಳಾದರೂ ಸಾಕಿತ್ತು ಚಂದಿರನ ನಗುಹೃದಯದ ಕಿರು ಬೆರಳಿಗಾದರೂ ನೀನಾಗಬೇಕಿತ್ತುಹಸ್ತಗನ್ನಡಿಯ ನಕ್ಷತ್ರವಾದರೂ ನುಡಿಬೇಕಿತ್ತು ಕನ್ನಡಿಯ ಅಮಾಯಕತೆಯನ್ನ ನೆತ್ತರಾದರೂ

ಕನ್ನಡಿಯ ಅಮಾಯಕತೆ Read Post »

ಕಾವ್ಯಯಾನ

ನನ್ನ ಗುರುಕುಲ

ಕಾವ್ಯಯಾನ ನನ್ನ ಗುರುಕುಲ ನೇತ್ರಾ ಪ್ರಕಾಶ್ ಹಲಗೇರಿ ಹುಡಿ ಮಣ್ಣಿನ ಹಾದಿ ಗೊರ್ಪಿಕಲ್ಲು, ಮುಳ್ಳಿನ ಮಿಶ್ರಣ,ಮಳೆರಾಯ ಧರೆಗಿಳಿದರೆಕೆಸರು ಮುದ್ದೆ ರಾಡಿ ರಾಡಿಸುತ್ತ ಗದ್ದೆಯ….ನೋಟಕಿರು – ಕಾಲುವೆಗಳ ಜುಳು – ಜುಳು ಪಾಟಿ ಚೀಲ ಹೊತ್ತುಓಡಿದ್ದೇ ಓಡಿದ್ದುಯಾವುದರ ಪರಿವೆ ಇಲ್ಲದೆರಕ್ತ ಮಡುಗಟ್ಟಿದ ಬರೀ ಪಾದದಲ್ಲಿಎಲ್ಲಾ ಮೇಷ್ಟ್ರುಗಳ ಸ್ಪೆಷಲ್ ಕ್ಲಾಸಿಗೆ ಉಸಿರುಗಟ್ಟಿಕನಸಿನ ಕಣ್ಣಿನಲ್ಲಿ… ಸೂರ್ಯಚಂದ್ರರ ಕೋಟಿ ಜೀವ ಜಂತುಗಳು ಆಶ್ರಯ ತಾಣಮಧ್ಯೆ ನಮ್ಮೆಲ್ಲರ ಗುರುಕುಲಬೋಧಿ ವೃಕ್ಷ – ಕಲ್ಪವೃಕ್ಷದ ಬದುಕಿನ ಅಡಿಪಾಯವೇ ಸರಿ ನಮ್ಮೀ ಗೋಪುರದ ಶಿಖರ…. ತಿದ್ದಿ-ತೀಡಿ ಜುಲಪಿ ಏಟಿಗೆ ಬಾಗಿ ಬೆಂಡಾಗಿ ಕಲಿತದ್ದೆ ಕಲಿತದ್ದು ಇಂದು ನಮ್ಮೆಲ್ಲರ ರೂಪಕ ಪ್ರತಿಮೆಗಳ ಪ್ರತಿಭೆಗಳ ಆಗಿದ್ದೇವೆ….. ಮಧ್ಯಾಹ್ನದ ವೇಳೆ ಡಬ್ಬಿಯ ರೊಟ್ಟಿ ಪಲ್ಯ ಅನ್ನ ಮೊಸರು ಉಪಹಾರ ವಂಗೆಮರ ದಡಿಯ ಸವಿಯಲುಕ್ಷಣಗಳ ಎಣಿಕೆ ಹಸಿವಿನ ತಡವರಿಕೆ ವಾಲಿಬಾಲ್ ಕೊಕ್ಕೋ ಬ್ಯಾಡ್ಮಿಂಟನ್ ಹೊಡೆದಾಟ ಒಡನಾಟ ನಮ್ಮೆಲ್ಲರ ನೆಚ್ಚಿನ ಕೈತೋಟದ ಸ್ವಚ್ಛತೆ ಆಗಾಗ ಎರಡು ದಶಕಗಳು ಕಳೆದರೂ ನಾವೆಲ್ಲರೂ ಬೆಳೆದರು ನಮ್ಮೆಲ್ಲರ ಆಪ್ತತೆ ಸ್ನೇಹ ಸ್ಪಂದನ ಈ ಬಂಧನ ಉಳಿದಿದೆ ಮುಗಿಯದಬೆಸುಗೆಯ ಕೊಂಡಿ ಭಾವನೆಗಳ ಬಂಧವಾಗಿ ಬೆಸೆದಿದೆಈ ಗುರುಕುಲ ಸಾಧನೆಯ ಮೆಟ್ಟಿಲುಗಳನ್ನು ಮುಟ್ಟಿಸಿದಜ್ಞಾನ ಮಂದಿರ ಈ ಗುರುಕುಲ

ನನ್ನ ಗುರುಕುಲ Read Post »

You cannot copy content of this page

Scroll to Top