ಕಾವ್ಯ ಸಂಗಾತಿ ನಮ್ಮಮ್ಮ ಹೀಗಿದ್ದಳು ಡಾ.ಸುರೇಖಾ ರಾಠೋಡ್ ಯಾವ ಭೂಮಿಗೆಯಾವ ಬೆಳೆ ಬರುತ್ತದೆಂದುಯಾವ ಬೀಜ ಬಿತ್ತಬೇಕೆಂದುನೆಲ ಎಷ್ಟುಹಸಿಯಾಗಿರಬೇಕೆಂದುತಿಳಿದಿರುವನಮ್ಮಮ್ಮ ಭೂವಿಜ್ಞಾನಿ ಏನಲ್ಲ ಯಾವ ಸಮಯಕ್ಕೆಯಾವ ಮಳೆಗೆಯಾವ ಬೆಳೆಬಿತ್ತಬೇಕೆಂದು,ಎಷ್ಟು ಗೊಬ್ಬರ,ಯಾವ ಗೊಬ್ಬರಹಾಕಬೇಕೆಂದುತಿಳಿದಿರುವನಮ್ಮಮ್ಮ ಬೆಳೆ ವಿಜ್ಞಾನಿಯಾಗಿರಲಿಲ್ಲ ಯಾವ ಬೀಜಎಷ್ಟು ದಿನಕ್ಕೆಮೊಳಕೆ ಒಡೆಯುವುದೆಂದು,ಯಾವ ಸಮಯಕ್ಕೆಕಳೆ ತಗೆಯಬೇಕೆಂದು,ಯಾವ ಸಮಯಕ್ಕೆನೀರು ಹಾಯಿಸಬೇಕೆಂದುತಿಳಿದಿರುವನಮ್ಮಮ್ಮ ಸಹಜ ಮನುಷ್ಯಳಾಗಿದ್ದಳು ಯಾವಾಗ ಮಳೆ ಬಂದರೆಬೆಳೆ ಚೆನ್ನಾಗಿಬೆಳೆಯತ್ತ,ಯಾವಾಗ ಮಳೆ ಬಂದರೆಬೆಳೆ ಹಾಳಾಗತ್ತೆ,ಯಾವಾಗ ಬೆಳೆಗೆರೋಗ ಬರತ್ತೆಂದು,ರೋಗಕ್ಕೆ ಯಾವಔಷಧಿಸಿಂಪಡಿಸಬೇಕೆಂದುತಿಳಿದಿರುವನಮ್ಮಮ್ಮ ಪದವೀಧರೆಯಾಗಿರಲಿಲ್ಲ ನಮ್ಮಮ್ಮ ಅಕ್ಷರಕಲಿಯದೇಕೃಷಿ ಕಲಿತಿರುವಭೂಮಿಯೇ ಆಗಿದ್ದಳು…..————————–
ಬಿ.ಶ್ರೀನಿವಾಸರ ಹೊಸ ಕವಿತೆಗಳು
ಬೊಗಸೆ ನೀರಿಗಾಗಿ
ಮೈಮೇಲೆ ಮಲ ಸುರುವಿಕೊಂಡ ದಿನ
ಮತ್ತೆ
ಹುಟ್ಟುತ್ತಲೇ ಇರುತ್ತಾರೆ
ಬಿ.ಶ್ರೀನಿವಾಸರ ಹೊಸ ಕವಿತೆಗಳು Read Post »
ಕಾವ್ಯ ಸಂಗಾತಿ ಅಪ್ಪ ಲೀಲಾ ಅ ರಾಜಪೂತ ಅಪ್ಪ ಎಂದರೆ ತ್ಯಾಗ ಮೂರ್ತಿ.ಭರವಸೆಯ ಪರ್ವತಬದುಕಿನ ದಾರಿಗೆ ಜ್ಯೋತಿಯಾವ ಪದಕೆ ನಿಲುಕದ ಸವ್ಯಸಾಚಿ…..ಮೌನಿಯಾಗಿಯೇನೋವುನುಂಗುವ ಸಾಗರ..ಅಳುವ ನುಂಗಿ ನಗುವ ಜೀವಬೆಟ್ಟದಷ್ಟು ತಪ್ಪು ಮಾಡಿದರೂಕ್ಷಮಿಸುವ ಹ್ರದಯವಂತ…. ಹಿತನುಡಿಗಳಿಂದ ನಮ್ಮನೂತಿದ್ದಿ,ಬಾಳ ರೂಪಿಸುವ ಶಿಲ್ಪಿ.ಅವನ ಭದ್ರ ಕೋಟೆಯಲಿನಾವೆಲ್ಲರೂ ಸುರಕ್ಷಿತ ಪದಗಳಿಗೆಟುಕದ ಮಹಾಕಾವ್ಯ ಮನೆಗೌರವ,ಸ್ವಾಭಿಮಾನಕೆಧಕ್ಕೆ ಬಂದರೆ ಪ್ರಳಯ ಇತದಣಿವೆನ್ನದೇ ದುಡಿದರೂನಮ್ಮ ಮೊಗ ಕಂಡೊಡನೆಎಲ್ಲ ಮರೆತು ನಗುವಾತ…. ಕೋಪತಾಪದಲಿಯೂ ಸಂತೈಸಿಆಸರೆಯಾಗಿ,ಬೆನ್ನು ಸವರುತನಮ್ಮ ಬದುಕಿನ ಛಾವಣಿ ಆತಮಗಳ ಮದುವೆಯಲಿ ದು:ಖಎದೆಯಲಿ ಅವಿತು ಕೊಂಡಾತಯಾರಿಗೂ ಕಾಣದಂತೆ ಅಶ್ರು ಸುರಿಸಿದಾತ….. ನಮ್ಮ ಬದುಕಿನ ಬಂಡಿಯನೊಗ ಎಳೆಯುವಾತನಮ್ಮರಕ್ಷಾ ಕವಚವಾಗಿಅವನಾದ ಹಿಮಾಲಯ ಪರ್ವತ …ಅಪ್ಪ, ನಮ್ಮ ಭಾಗ್ಯ ದಾತಕೋಟಿ ನಮನ ನಿನಗೆ ಜನ್ಮದಾತ,ಜನ್ಮದಾತ









