ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸಂಗಾತಿ ನೀನಿರಲು ಅನಿತಾ ನಸುಕಿನಲಿ ಹಸಿರೆಲೆಯ ಮೇಲೆಬಿದ್ದ ಇಬ್ಬನಿ ಬೇಡಿದೆ ಭಗವಂತನಜಗವ ಬೆಳಗುವ ದಿನಕರನ ಕಿರಣಸ್ಪರ್ಶಿಸಲು ಮೊಗ್ಗಾಗಿ ಅರಳಿದ ಸುಂದರ ಸುಮಹಾತೊರೆಯುತಿದೆ, ಏಳು ಬೆಟ್ಟಗಳಮೇಲೇರಿ ನಿಂತ ಆ ದೇವರಕಾಲ ಬಳಿ ಸೇರಲು! ಗುಡಿಯ ಘಂಟೆ ಧ್ಯಾನಿಸುತಿದೆಸುಶ್ರಾವ್ಯವಾಗಿ ತನ್ನ ಸದ್ದುಜಗನ್ನಿಯಮಕನ ತಲುಪಲು! ಗರ್ಭಗುಡಿಯ ಪ್ರಣತಿಕಾಯುತಿದೆ ಕರುಣಮಯ ಪರಮಾತ್ಮನಮುಖಾರವಿಂದವ ಉಜ್ವಲಿಸಲು! ಜಗದ ಪ್ರತಿ ಚಲನೆಯೂ ನೀನಾಗಿರಲುಧ್ಯಾನಿಸದೆ ಇರಲಾರದುಈ ಮನವು, ಅನುಕ್ಷಣವೂನನ್ನೊಳಗೆ ನೀನಿರಲು!

Read Post »

ಕಾವ್ಯಯಾನ

ಕಾವ್ಯ ಸಂಗಾತಿ ಭಾವನೆ…. ನಮಗೂ ಇದೆ.. ಸುಮಾ, ಪಡುಬೆಳ್ಳೆ ಹರಿದ ಬಟ್ಟೆ ಬಡಕಲು ದೇಹ ತೋರಿತು,ಮಣ್ಣಿನ ಕಾಯ; ಹಸಿ ನೆತ್ತರ ಗಾಯಅಸ್ಪ್ರಶ್ಯತೆ ತಂದಿತುಇದ ನೋಡಿಯು ನೋಡದ ಹೆತ್ತವರಮಾತು ಮೂಕವಿಸ್ಮಿತವಾಯಿತುಸುತ್ತಲೂ ಮೌನ, ವ್ಯರ್ಥ ಮಾತಿನ್ನೇಕೆ? ಸಹಾಯ ಮಾಡಬಯಸುವ ಕೆಲವೊಂದು ಜೀವ,ಅದ ಹಿಂಜರಿಸಿತು ಅವರ ನಾಚಿಕೆಯ ಸ್ವಭಾವಶ್ರೀಮಂತಿಕೆ ಇದ್ದರೇನು ಬಂತು,ನಮ್ಮನ್ನು ಕಾಣುವ, ತಲೆಗೆಟ್ಟ ವರ್ತನೆ ಅವರದ್ದಂತೂ ಎಲ್ಲೋ ಪುಸ್ತಕದ ಭಂಡಾರ ಹೊರುವರುನಮ್ಮದೆಂತ ಪರಿಸ್ಥಿತಿ, ಪರಿಸ್ಥಿತಿ….?ಹೆತ್ತವರ ಅನಕ್ಷರತೆ ಮುಳ್ಳಾಯಿತೆ ನಮಗೆ?ನಮ್ಮೆಲ್ಲಾ ಕನಸುಗಳು ಸುಳ್ಳಾಯಿತೆ ಕೊನೆಗೆ? ಯಾರದ್ದೋ ಹರಕಲು ಬಟ್ಟೆ, ನಮ್ಮ ಹೊಸಬಟ್ಟೆಅಂದೇ ಯುಗಾದಿ, ದೀಪಾವಳಿ!ಖುಷಿಯಲ್ಲೇ ತುಂಬಿತೀಪುಟ್ಟಹೊಟ್ಟೆಅಂತಸ್ತಿನ ಮನೆಯ ತಂಗಳೂಟಅದೇ ಮೃಷ್ಟಾನ್ನವೆಂದು ನಮ್ಮ ಓಟಇದ ಕಂಡು ಸುರಿಯುತಿದೆ ಕಂಬನಿ ನಿರ್ಜೀವಿಗಳಿಂದ ಯಾರಂದರು ಮನುಷ್ಯರು ನಾವಲ್ಲವೆಂದು?ಎಲ್ಲರಂತೆ ನಮಗೂ ಭಾವನೆಗಳಿವೆಈ ಯಾತನೆ ಎಲ್ಲಿ ಮುಟ್ಟುವುದೋ; ಮುಟ್ಟದಿರುವುದೋ?ಎಂತಹ ಆಲೋಚನೆ ನಿನ್ನಲ್ಲಿ ಮೂಡಿತೋ ದೇವರೆಇಂತಹ ಜೀವನ ಸೃಷ್ಟಿಸಲು, ನಮ್ಮಂತಹ ಮಕ್ಕಳಿಗೆ . (ವಲಸೆ ಕಾರ್ಮಿಕರ ಮಕ್ಕಳ ಬಗೆಗೆ)

Read Post »

ಕಾವ್ಯಯಾನ

ಸ್ನೇಹ

ಕಾವ್ಯ ಸಂಗಾತಿ ಸ್ನೇಹ ಆಸೀಫಾ ದೂರಾದರೂ ದೇಹ ಶಾಶ್ವತವಿರಲಿ ಸ್ನೇಹಮರೆತರೂ ಕೂಡ ಮರೆಯದಿರಲಿ ಭಾವಕೆಲಕಾಲದ ಒಡನಾಟ ಅಂಟಿತ್ತು ಮನಸಬಿಟ್ಟು ಹೋದರೂ ಬಿಡದು ನಿನ್ನ ನೆನಪ ಜೊತೆ ಜೊತೆಯಲಿ ಓಡಾಡಿದ ದಾರಿನೆನಪಾಗುವುದು ಒಂದಲ್ಲ ನೂರು ಬಾರಿನಗುವುದ ಮರೆತೈತೆ ನನ್ನ ಊರು ಕೇರಿಮುಖವಿತ್ತ ಮಾಡಿ ಹೋಗು ಒಂದು ಸಾರಿ ಹೃದಯದ ತುಂಬ ಅರಳಿದ್ದ ಸುಮಗಳುಬಾಡೈತಿ ನೋಡು ನೀ ನಿಲ್ಲದೆ ಗೆಳತಿಬೀಗಿದ ಕ್ಷಣಗಳು ಕೂಗಿ ಕೂಗಿ ಕರೆದರೂಅರಸಿದ ಅರಸಿ ಬಂದಾಳೇ ಒಡತಿ ಓಡುತೈತೆ ಚಕ್ರ ನಿಲ್ಲುವುದೆಂತು ಕಾಲನೆನ್ನೆ ಮೊನ್ನೆಗಳ ಬದಲಾಗದು ಜಾಲಸಾಗಬೇಕು ಸಾಗಲೇಬೇಕು ಮುಂದಇದುವೇ ಜೀವನದ ಅಂದ ಚೆಂದ

ಸ್ನೇಹ Read Post »

ಕಾವ್ಯಯಾನ

ಕಾವ್ಯ ಸಂಗಾತಿ ಮಿಲನ ಹೃದಯ ಹೃದಯಗಳಮಿಲನಕ್ಕೆ ಸ್ನೇಹವೇಸೇತುವೆ ಬೇರೆ ಮಾತಿನಜೋಡಣೆ ಇಲ್ಲ ಸ್ವಾರ್ಥ ನಿಸ್ವಾರ್ಥ ಬೇಕುಮುನಿಸು ರಮಿಸುವಮಿಲನದ ಅಮೃತರಸಾನುಭಾವ ಅರಿತ ಮನಕ್ಕೆ ಶಂಕೆ ಬೇಡಹತ್ತಿರ ದೂರದ ಅಂತರ ಏಕೆದೇಹಕ್ಕೆ ದೂರವಾಗಿರುವುದೇನಗು ಅಳುವಿನ ನೆರಳು ನಿನ್ನದೇ ಬಾಳಿನ ಪಯಣದಲ್ಲಿ ಜೊತೆಯಾದ ಸಂಗಾತಿ ನೀಅಗಲಿ ಹುಡುಕುವ ಅಳುಕು ಏಕೆಪ್ರೀತಿಯ ಬೆಳಕಿಗೆ ಕೊನೆಯಿಲ್ಲ! **** ಹಸಿವು ಹಸಿವಿನ ನರಳಾಟದಲ್ಲಿತುಳಿತಕ್ಕೆ ಒಳಗಾಗುವೆವು ನಾವುಸಂಕಟದಲ್ಲಿ ಒದರಾಡಿದರೆಮೂರಡಿಯಲ್ಲಿ ಹೂಳುವರು ಹಸಿವಿನ ಚೀಲ ಬೆನ್ನು ತಟ್ಟಿದೆಶಾಂತಿ ನೆಮ್ಮದಿಯ ವೇದಾಂತಕಿವಿಯಲ್ಲಿ ಗುಣುಗುಟ್ಟಿದೆಮೋಸ ವಂಚನೆ ಕೊರಳ ಉರುಳಾಗಿದೆ ಮಾಯೆ ಎಂಬುವರು ಬಾಳುಆಸೆ ದುಃಖಕ್ಕೆ ಮೂಲ ಎನ್ನುವರುಕಡಿವಾಣ ಇಲ್ಲದೆ ಹಸಿವುಮೆರೆಯುತ್ತಿದೆ ಏಕೆ ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಯುವ ಮಂತ್ರವೇದಾಂತ ಇದೆಯೇ ಮನವೇ…. ಮಾಜಾನ್ ಮಸ್ಕಿ

Read Post »

You cannot copy content of this page

Scroll to Top