ಭೂಸಿರಿಯು ಮುಗಿಲ ಮಾಳಿಗೆಯಲಿಮೋಡವೊಂದು ಗೂಡು ಕಟ್ಟಿದೆಭೂವನದಲಿ ಶೃಂಗಾರದಿಂದಲಿನವಿಲ ನಾಟ್ಯವು ಮುದವ ನೀಡಿದೆ ತುಂತುರು ಹನಿಯಲಿಘಮ್ಮನೆಂದಿದೆ ಭೂವಾಸನೆಗಂಡು ನವಿಲು ರೆಕ್ಕೆಯ ಬಿಚ್ಚಿತಾನು ಕುಣಿದಿದೆ ಕಾಮನೆ ಹಸಿರ ಮೈಸಿರಿಯು ಎಲ್ಲೆಡೆರಮ್ಯಕಾಲದ ವೈಭವಬಾನು ಭುವಿಯಲಿಎಂಥದಿದೋ ಆಕರ್ಷಣಾ ಚೈತ್ರ ಚಿಗುರಲಿ ಕೋಗಿಲೆಗಾನಮಾವು ತೆಂಗಿನ ರಸದೌತಣಪ್ರಕೃತಿ ಮಾತೆಯ ಮಡಿಲು ತುಂಬಿದೆವಿವಿಧ ಹೂಗಳು ಅರಳಿ ನಿಂತಿವೆ ಭೂಸಿರಿಯ ಒಡಲು ಮಾಗಿದೆಮೋಡದಂಚಿನ ಹನಿಗಳಿಂದಕಾವ್ಯರಸವು ಹರಿದಿದೆಹಸಿರ ವನದ ಸೆರಗಿನಿಂದ ದೀಪಿಕಾ ಚಾಟೆ
ಹೆಣ್ಣು ; ಮತ್ತವಳ ಕನಸು
ಕಾವ್ಯ ಸಂಗಾತಿ ಹೆಣ್ಣು ; ಮತ್ತವಳ ಕನಸು ಡಾ. ಸುರೇಖಾ ರಾಠೋಡ್ ಓದಬೇಕು ಹೆಣ್ಣುತನ್ನ ಅಸ್ತಿತ್ವ ಸ್ಥಾಪಿಸುವುದಕ್ಕಾಗಿ ಓದಬೇಕು ಹೆಣ್ಣುತನ್ನ ತಾನು ಗುರುತಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವಾವಲಂಬಿಯಾಗುವುದಕ್ಕಾಗಿ.. ಓದಬೇಕು ಹೆಣ್ಣುಜ್ಞಾನ ಪಡೆಯುವುದಕ್ಕಾಗಿ… ಓದಬೇಕು ಹೆಣ್ಣುಸಮಾಜದಲ್ಲಿರುವ ಅಸಮಾನತೆಯ ಅರಿಯುವುದಕ್ಕಾಗಿ… ಓದಬೇಕು ಹೆಣ್ಣುಉದ್ಯೋಗ ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವುದಕ್ಕಾಗಿ…. ಓದಬೇಕು ಹೆಣ್ಣುಸಮಾಜದಲ್ಲಿರುವ ಅಜ್ಞಾನವ ಅಳಿಸಿಹಾಕುವುದಕ್ಕಾಗಿ… ಓದಬೇಕು ಹೆಣ್ಣುನಾಯಕತ್ವ ಗುಣಗಳನ್ನು ಬೆಳಿಸಿಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಹಕ್ಕುಗಳನ್ನು ಅರಿತುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಸ್ವತಂತ್ರವಾಗಿ ಬದುಕುವುದಕ್ಕಾಗಿ… ಓದಬೇಕು ಹೆಣ್ಣುಅನಿಸಿದ್ದನ್ನು ಅಭಿವ್ಯಕ್ತಿ ಪಡಿಸುವುದಕ್ಕಾಗಿ… ಓದಬೇಕು ಹೆಣ್ಣುತನ್ನ ಜೀವನದ ಎಲ್ಲಾ ನಿರ್ಧಾರಗಳನ್ನು ತಗೆದುಕೊಳ್ಳುವುದಕ್ಕಾಗಿ… ಓದಬೇಕು ಹೆಣ್ಣುಲಿಂಗ ಅಸಮಾನತೆಯ ಅಳಿಸಿಹಾಕುವುದಕ್ಕಾಗಿ…ಸಮಾನತೆ ಸಾಧಿಸುವುದಕ್ಕಾಗಿ……….. .
ಹೆಣ್ಣು ; ಮತ್ತವಳ ಕನಸು Read Post »
ಮುದುಕ ಮತ್ತು ಡಾಕ್ಟರ್ ಸಾಹೇಬ
ಬುದ್ಧನ ಕರುಣೆ ಬಟ್ಟಲು
ಕೈಯ್ಯಲ್ಲಿರಬೇಕು ಅಷ್ಟೆ
ಮುದುಕ ಮತ್ತು ಡಾಕ್ಟರ್ ಸಾಹೇಬ Read Post »
ಮಿಲನ ಅರುಣಾ ನರೇಂದ್ರ ನಾನು ನೀನು ಒಂದು ದಿನಸಂಧಿಸುವ ಕಾಲ ಬಂದರೆಈ ಜಗದ ಚೆಲುವೆಲ್ಲನಮ್ಮ ಮುಂದೆಯೇಬಂದು ನಿಲ್ಲಬಹುದು ನಾನು ನಿನ್ನ ಕಣ್ಣಲ್ಲಿನನ್ನ ರೂಪು ನೋಡಿಕೊಳ್ಳುತ್ತೇನೆನೀನು ನಿನ್ನೆ ನಾಳೆಗಳ ಮರೆತುಪ್ರೀತಿಯ ಮಾತುಗಳ ಕಿವಿಯಲ್ಲಿ ಉಸಿರಬಹುದು ಯುಗಳಗೀತೆಯ ಕೇಳಿಕೋಗಿಲೆ ಮೂಕವಾಗುತ್ತದೆ ನೋಚಂದ್ರ ಮಂಚದಲಿ ಚುಕ್ಕಿಗಳ ಸಿಂಗರಿಸಿಬೆಳದಿಂಗಳ ನೊರೆ ಹಾಲು ತುಂಬಿ ಕೈಗಿತ್ತುಸೋಬಾನೆ ಹಾಡಿ ತಂಗಾಳಿನಿನ್ನ ಬಳಿ ನನ್ನ ಕಳಿಸಬಹುದು ಅದರ ಮಧುವನು ಕುಡಿದುಮತ್ತೇರಿ ಮೈಮರೆತುಮಿಲನ ಮಹೋತ್ಸವದಶುಭ ಗಳಿಗೆಯಲ್ಲಿಶತಮಾನದ ವಿರಹ ನೀಗಬಹುದು
ಹೀಗೇಕೆ…?
ಹೀಗೇಕೆ…? ನನಗೆ ಅನುಮಾನಬಂದ ದಿನದಿಂದ… ನೋಡದೇ ಇರಲಾಗದುದಿನಕ್ಕೊಮ್ಮೆಯಾದರೂಎನ್ನುತ್ತಿದ್ದವಳುಎದುರು ಸಿಕ್ಕರೂ ನೀನುನಗುವುದನ್ನೇ ಬಿಟ್ಟೆ ಬಸ್ಸಲಿ ಸೀಟು ಖಾಲಿಇರದಿದ್ದರೂ ಖಾಲಿ ಇದೆಯೆ?ಕೇಳುತ್ತಿದ್ದವಳುಪಕ್ಕದಲಿಈಗ ಸೀಟು ಖಾಲಿಇದ್ದರೂ ಕೇಳುವುದನ್ನೇ ಬಿಟ್ಟೆ ಹೊಟ್ಟೆ ಹಸಿವಿರದಿದ್ದರೂಟಿಫಿನ್ ಡಬ್ಬಕ್ಕೆಕೈ ಹಾಕಿ ತಿಂದುರುಚಿ ಬಗ್ಗೆ ಕಾಮೆಂಟ್ಹೇಳುತ್ತಿದ್ದವಳುಹಸಿವಾದರೂಮಿನರಲ್ ವಾಟರ್ ಕುಡಿದುಸುಮ್ಮನಾಗಿ ಬಿಟ್ಟೆ ಇಷ್ಟು ದಿನ ನೀಮಾಡಿದ್ದು ನಟನೆಯೋ?ಉತ್ತರ ಹೇಳುಎಂದಿದ್ದಕ್ಕೆಮೌನವಾಗಿ ಬಿಟ್ಟೆ ಬಾಲಕೃಷ್ಣ ದೇವನಮನೆ,








