ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ಡಂಬಾಚಾರಿಗಳು”
ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಡಂಬಾಚಾರಿಗಳು” ಧರ್ಮ- ದೇವರ ಹುಟ್ಟಿಸಿಸುಳ್ಳು ಪವಾಡ ಸೃಷ್ಟಿಸಿಮುಗ್ಧ ಜನರನು ವಂಚಿಸಿಮೋಸ ಮಾಡಿ ದುಡ್ಡು ಗಳಿಸಿಮಡೆ ಎಡೆ ಸ್ನಾನದಹೆಸರಿನಲ್ಲಿ ಎಂಜಲಲೆಯಮೇಲೆ ಹೊರಳಾಡಿಸಿಮಂಡೆ ಬೋಳಿಸುವಡಂಬಾಚಾರಿಗಳುಮೂಢಾಚರಣೆಗಳ ದಾಸರಾಗಿಸಿಜ್ಯೋತಿಷ್ಯ- ಭವಿಷ್ಯ ಕೇಳಿಮಾಟ-ಮಂತ್ರವ ಮಾಡಿಸಿಹೋಮ ಹವನದಿಬೇಯಿಸಿವಾಸ್ತುವಿನ ಹೆಸರಿನಲ್ಲಿದಿಕ್ಕು ಬದಲಿಸಿಕಂದಾಚಾರ- ವಾಮಾಚಾರಕ್ಕೆಕಟ್ಟು ಬಿದ್ದುಅರ್ಥವಿಲ್ಲದ ಆಡಂಬರದಆಚರಣೆ ಮಾಡಿವ್ಯರ್ಥ ಸಮಯ ಕಳೆಯುವ ಜನರುಮೂಢಾಚರಣೆಯ ಗೂಡಿನಲ್ಲಿಬೀಡು ಬಿಟ್ಟಿರುವ ಜಾಡ್ಯಗಳಿಂದಹೊರ ಬರುವುದು ಯಾವಾಗ ?ಕ್ರಾಂತಿ ಕಹಳೆ ಊದುವುದಾವಾಗಮನುಜ ಪಥದ ದಾರಿವಿಶ್ವ ಪಥವ ಸಾರಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ಡಂಬಾಚಾರಿಗಳು” Read Post »









