ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ಡಂಬಾಚಾರಿಗಳು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಡಂಬಾಚಾರಿಗಳು” ಧರ್ಮ- ದೇವರ ಹುಟ್ಟಿಸಿಸುಳ್ಳು ಪವಾಡ ಸೃಷ್ಟಿಸಿಮುಗ್ಧ ಜನರನು ವಂಚಿಸಿಮೋಸ ಮಾಡಿ ದುಡ್ಡು ಗಳಿಸಿಮಡೆ ಎಡೆ ಸ್ನಾನದಹೆಸರಿನಲ್ಲಿ ಎಂಜಲಲೆಯಮೇಲೆ ಹೊರಳಾಡಿಸಿಮಂಡೆ ಬೋಳಿಸುವಡಂಬಾಚಾರಿಗಳುಮೂಢಾಚರಣೆಗಳ ದಾಸರಾಗಿಸಿಜ್ಯೋತಿಷ್ಯ- ಭವಿಷ್ಯ ಕೇಳಿಮಾಟ-ಮಂತ್ರವ ಮಾಡಿಸಿಹೋಮ ಹವನದಿಬೇಯಿಸಿವಾಸ್ತುವಿನ ಹೆಸರಿನಲ್ಲಿದಿಕ್ಕು ಬದಲಿಸಿಕಂದಾಚಾರ- ವಾಮಾಚಾರಕ್ಕೆಕಟ್ಟು ಬಿದ್ದುಅರ್ಥವಿಲ್ಲದ ಆಡಂಬರದಆಚರಣೆ ಮಾಡಿವ್ಯರ್ಥ ಸಮಯ ಕಳೆಯುವ ಜನರುಮೂಢಾಚರಣೆಯ ಗೂಡಿನಲ್ಲಿಬೀಡು ಬಿಟ್ಟಿರುವ ಜಾಡ್ಯಗಳಿಂದಹೊರ ಬರುವುದು ಯಾವಾಗ ?ಕ್ರಾಂತಿ ಕಹಳೆ ಊದುವುದಾವಾಗಮನುಜ ಪಥದ ದಾರಿವಿಶ್ವ ಪಥವ ಸಾರಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ”ಡಂಬಾಚಾರಿಗಳು” Read Post »

ಕಾವ್ಯಯಾನ

“ಗಾಳಿ ಸುದ್ದಿ” ಡಾ ಸಾವಿತ್ರಿ ಕಮಲಾಪೂರ

ಕಾವ್ಯ ಸಂಗಾತಿ ಡಾ ಸಾವಿತ್ರಿ ಕಮಲಾಪೂರ “ಗಾಳಿ ಸುದ್ದಿ” ಎಲ್ಲೆಡೆಯೂ ಹರಡುತ್ತಿದೆಗಾಳಿ ಸುದ್ದಿ ಸುಳ್ಳು ಸುದ್ದಿಪತ್ರಿಕೆ ಹಂಚುವ ಹುಡುಗನ ಕೈಯಲ್ಲಿ ಚಾಕುಗೀಟಾರ ನುಡಿಸುವವನ ಕೈಯಲ್ಲಿ ಬಂದೂಕು ಬಾಂಬು ಅನುಬಾಂಬು ಸತ್ತು ಮಲಗಿದ ಗಾಂಧಿಎದ್ದು ಬಂದಿದ್ದಾನೆಚರಕ ಸುತ್ತುವ ಕೈಯಲ್ಲಿಚುಟ್ಟಾ ಗುಟ್ಕಾ  ಓದುತ್ತ ಕುಳಿತ ಪಡ್ಡೆ ಹುಡುಗರುಹಾಡುತ್ತಾ ಕುಣಿಯುತ್ತಾ ಹಳ್ಳ ಸೇರಿದರು ಒಂದೋ ಎರಡೋನೂರೆಂಟು ಸುದ್ದಿ ಕೇಳಿತಲೆಕೆಟ್ಟು ಓಡಿ ಹೋದಳುಕಟ್ಟಿಕೊಂಡ ಹೆಂಡತಿಗಂಡನಿಗೆ ದಿಕ್ಕೆ ತೋರದುದಿಕ್ಕಾಪಾಲುಹುಡುಕುತ್ತಾ ಹೊರಟ ಕುಟುಂಬನಾಪತ್ತೆ ಎಲ್ಲವೂ ನಿಗೂಢ ಗುಡಾಚಾರಿಗಳ ಸಂಚಾರಗೂರ್ಖಾ ಅಂಜಿ ಓಡಿ ಹೋದಗುಂಡು ಹಾರಿಸುವಗೋಲಿ ಯುವಕಗುಂಡು ಹಾಕಿದಎತ್ತ ಎತ್ತಲೋಭೂವಿಯ ಸುತ್ತಲೂಕಮಂಡಲ ಬೆಳಗು ಮೂಡುವ ರವಿಕಾಣೆಯಾಗಿದ್ದಾನೆಕತ್ತಲು ಬೆಳಗುವ ಚಂದ್ರ ನಾಪತ್ತೆನಿಗೂಢ ಜಗತ್ತುವಿಚಿತ್ರ ಸಂಚಾರಇದು ಆಕಸ್ಮಿಕವಂತೆಅಂತೆ ಕಂತೆಯೊಳಗಿನ ಗಾಳಿ ಸುದ್ದಿ ಕರ್ಣ ಕಿವುಡುಕಣ್ಣು ಕುರುಡುಆದರೂ ಕೇಳುತ್ತಿರುವೆಕಾಣಲಾರದ ಪರದೆಯೊಳಗಿನನಾಟಕ ಅಂತರಾತ್ಮದೊಳಗಿನವಿಹಂಗಮ ನೋಟ ಡಾ ಸಾವಿತ್ರಿ ಕಮಲಾಪೂರ

“ಗಾಳಿ ಸುದ್ದಿ” ಡಾ ಸಾವಿತ್ರಿ ಕಮಲಾಪೂರ Read Post »

ಕಾವ್ಯಯಾನ

ರಶ್ಮಿ ಶಮಂತ್ ಅವರ ಕವಿತೆ “ಅನಿರೀಕ್ಷಿತ”

ಕಾವ್ಯ ಸಂಗಾತಿ ರಶ್ಮಿ ಶಮಂತ್ “ಅನಿರೀಕ್ಷಿತ” ಹೊರಟು ಬಿಡುತ್ತಾರೆವಿದಾಯಕ್ಕೆ ಅವಕಾಶವೇ ಇಲ್ಲದಂತೆಕಂಬನಿಗೂ ತಾವಿಲ್ಲದಂತೆಪರಮಾಶ್ಚರ್ಯ ಆವರಿಸುತ್ತದೆವಾಸ್ತವವ ಒಪ್ಪಲು ಸಾದ್ಯವಿಲ್ಲದಂತೆ ಅವರಿವರೆಂಬ ಬೇದವಿಲ್ಲದೆಮಕ್ಕಳು ಮರಿಗಳೆಂಬ ಕರುಣೆ ತೋರದೆಸೆಳೆಯುತಿಹನು ಕಾಲರಾಯಅದೆಂತಹಾ ಅವರಸವೋ ಅವನಿಗೆಬದುಕಿ ಬಾಳುವವರ ಸೆಳೆಯಲು ಮಾತುಗಳಿನ್ನೂ ಉಳಿದಿರಲುಕನಸುಗಳು ಸಾವಿರಾರು ಕಾದಿರಲುಜವಾಬ್ದಾರಿಯ ಹೊರೆಯ ಹೊತ್ತಿರಲುನಂಬಿ ಬದುಕುವ ಜೀವಗಳಿರಲುಅದೇನು ಮುಖ್ಯವಿಹುದೋ ಎಲ್ಲದರ ಹೊರತು ಪ್ರೀತಿ ಪಾತ್ರರನೊಮ್ಮೆ ಆಲಂಗಿಸಿಅಂತಿಮ ನಮನವ ಸಲ್ಲಿಸದೆಕಂಬನಿಯ ಉರುಳಿಸದೆಕೊನೆಯ ಸಂದೇಶವನ್ನೂ ಕೊಡಲಾಗದೆಕಳೆದು ಹೋದವರು ಅದೆಷ್ಟೋ ಜೊತೆಗಿರಲು ಸಂಭಾಷಿಸಿಇದೇ ಕೊನೆಯ ಬೇಟಿಯೆಂಬಂತೆಮನ ಬಂದಂತೆ ಬದುಕಿಬಿಡಿಆಸೆ ಕನಸುಗಳ ಆಗಾಗಲೇ ತೀರಿಸಿತಿಳಿದಿದೆ ಯಾರಿಗೆ..ನಾವೆಷ್ಟನೆಯವರೋ ಈ ನಿಗೂಢ ಸರತಿಯಲಿ ರಶ್ಮಿ ಶಮಂತ್

ರಶ್ಮಿ ಶಮಂತ್ ಅವರ ಕವಿತೆ “ಅನಿರೀಕ್ಷಿತ” Read Post »

ಕಾವ್ಯಯಾನ

ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಆತ್ಮ ಬೆಸುಗೆ”

ಕಾವ್ಯ ಸಂಗಾತಿ ತಾರಾ ಬಿ ಎನ್ ಧಾರವಾಡ “ಆತ್ಮ ಬೆಸುಗೆ” ಇರುವುದೆಲ್ಲವ ಬಿಟ್ಟುಇರದುದರ ಕಡೆಗೆ,ಹೊರಟ  ಮನಸ್ಸು  ಮೌನದ ನಡಿಗೆಗೆಒತ್ತು ನೀಡಿ  ಕಾಣದಕನಸಿನ  ಕಡೆಗೆ  ಸಾಗಬಾರದುಹೃದಯದೊಳಗೆ  ಕಹಿ ಭಾವತೊರೆಯಬೇಕುಹೊಸ  ಹೊಳವು  ತುಂಬಿಇರುವುದೇ ಸಾಕೆಂದುನಡೆಯಬೇಕುಇರದುದರಲ್ಲಿ ಹುಟ್ಟಿಸುಹೊಸ ಸ್ಪಂದನದ ಬಂಧುರವಹಳೆಯ ಸರಳುಗಳ ನೆರಳು,ಬಂಧನ ಮುರಿದು,ಹೊಸ ದಾರಿಯಕಡೆಗೆ ಜೀವ ಹರಿದು.ಇರುವುದರಲ್ಲಿ ನೆಮ್ಮದಿಹುಡುಕಬೇಕು.ಇರದುದರಲ್ಲಿ ಅರ್ಥವೇಹುಡುಕಬೇಕು,ಹುಟ್ಟಬೇಕು,ಕಳೆದುಹೋಗುವಭಯದ ಅಂಚಿನ  ನೆಪ ಬೇಡ,ಧೈರ್ಯದ ನೆಲೆಯಲ್ಲಿಕನಸು ನಿಂತಿದೆ.ಇರುವುದೆಲ್ಲವ ಬಿಟ್ಟುಸಾಗುವ ದಾರಿ, ಸಂಕಟಕರ  ಇದ್ದುದರಲ್ಲಿ ಬದುಕು ಸಂತಸಕರ,ಅದೇ ಜೀವನದ ನಿಜವಾದ  ಸಾರಇರದುದರಲ್ಲಿ ಹುಡುಕುವಆಸೆಯೊಳಗೆ  ಹರಿಯುವುದುಹೊಸ ಒಸಗೆನಮ್ಮಲ್ಲಿ  ನಮ್ಮನ್ನೇಕಂಡುಕೊಳ್ಳುವಒಲವಿನ    ಆತ್ಮ ಬೆಸುಗೆಬಂಧುರ ಸುಂದರ. ತಾರಾ ಬಿ ಎನ್ ಧಾರವಾಡ.

ತಾರಾ ಬಿ ಎನ್ ಧಾರವಾಡ ಅವರ ಕವಿತೆ “ಆತ್ಮ ಬೆಸುಗೆ” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಗೆಳತಿ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಗೆಳತಿ” ಮರೆತಿಲ್ಲ ಗೆಳತಿ‌ ನಿನಗೆ ಕೊಟ್ಟ ಮಾತಅರಿತಿರುವೆ ನಿನ್ನ ಮನವ ನಾ ಏನಂತ!ಸರಿದು ಸಾಗದಿರು ಕೇಳಿ ನೀ ಯಾರಂತ.! ಜನುಮದ ಬಂಧಕೆ ಸಾಕ್ಷಿ ಬೇಕಿಲ್ಲಅನುದಿನವು ಜೊತೆ ಇದ್ದರೆ ಸಾಕಲ್ಲ!ನಾನು ನೀನು ಇಬ್ಬರಾದ್ರು ಆತ್ಮ ಒಂದಲ್ಲ.! ಬೆನ್ನ ಮೇಲೆ ಹೊತ್ತು ಆಡಿದ ಆಟಾನಇನ್ನ ಮರಿಯದಂತೆ ನಕ್ಕು ನಲಿದ ಎಳೆತನ!ನನ್ನ ನಿನ್ನ ಬೆಸೆದ ಆ ಗೆಳೆತನ.! ಚೆಂದಕಿಂತ ಚೆಂದಿತ್ತು ಮುಗ್ಧತೆಯು ಕೂಡಿತ್ತುಅಂದದ ಹಂಗು ತೊರೆದಿತ್ತು !ನಂದು ನಿಂದೆನ್ನುವ ಭೇದ ನಮ್ಮಿಂದ ದೂರಿತ್ತು.! ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಗೆಳತಿ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ರೆಕ್ಕೆ ಮುರಿದ ಹಕ್ಕಿ” ಗುಡಿಸಿಲಿನ ಗುಬ್ಬಚ್ಚಿ ನಾನು.ತಂದೆ–ತಾಯಿಯ ಪ್ರೀತಿ,ಅಪ್ಪನ ದುಡಿಮೆ ದುಡ್ಡಿನಿಂದಮೃಷ್ಟಾನ್ನ ಭೋಜನ, ಅವ್ವನ ಬುದ್ಧಿಮಾತು— ನಿಧಾನವಾಗಿಹಾರಲು ಕಲಿತೆ. ಗೂಡು ಬಿಟ್ಟು,ಗುರುತಿಲ್ಲದ ಕಡೆಗೆ ಸಾಗುತ್ತಿದ್ದೆ;ಅಡೆತಡೆ ಇಲ್ಲದ ಸ್ವಚ್ಛಂದ ಹಾರಾಟ,ಎತ್ತರಕ್ಕೆ ಏರುತ್ತಿದ್ದೆ. ಗುಬ್ಬಚ್ಚಿಯ ಗೂಡಲ್ಲಿಬಡತನ ಇದ್ದರೂ ಬವಣೆ ಇರಲಿಲ್ಲ;ಹಣ ಇರಲಿಲ್ಲ, ಆದರೆ ಆನಂದ ಇತ್ತು.ನೋವಿತ್ತು, ನಂಜಿರಲಿಲ್ಲ;ಕೊಳಕು ಇತ್ತು, ಕತ್ತಲೆ ಇರಲಿಲ್ಲ. ಶುಭ್ರ ನೀಲಿ ಆಕಾಶ,ತಣ್ಣನೆಯ ಗಾಳಿ,ತಳಿರಿನ ತಂಪು,ಮಲ್ಲಿಗೆಯ ಕಂಪು—ಇವೆಲ್ಲಾ ನನಗೆ ಗುರಿಯಾಗಿ,ಗುರುವಾಗಿ,ಗುರಿಯವರೆಗೂ ಕರೆದೊಯ್ದವು. ಆಮೇಲೆ…ಅರಮನೆ ಸೇರಿದೆ.ಅಂದ–ಚಂದದ ಮೈಮಾಟ,ಮೋಹ–ಮಾಯೆಯ ಪಾಶ;ಅಲ್ಲಿ ರೆಕ್ಕೆ ಬಿಚ್ಚಲು ಆಗಲಿಲ್ಲ,ಹಾರಲು ಆಗಲಿಲ್ಲ. ಪಂಜರದೊಳಗೆ ರೆಕ್ಕೆ ಬಡಿಯುತ್ತಾ,ನಿದ್ರೆ ಬಾರದ ರಾತ್ರಿಯ ನರಳಾಟದಲ್ಲಿನಲಿವು ಕಾಣದೆಕಾದು ಕುಳಿತು ಕಂಗಾಲಾದೆ. ಹೊಸ ಪ್ರಪಂಚದಲ್ಲಿದಾರಿ ತಪ್ಪಿದೆ;ದಾರಿ ತೋರಿಸುವವರೇಕತ್ತಲಿನ ಪರದೆ ಕಟ್ಟಿದರು. ಹಾರಲೂ ಆಗದೆ,ಹೊರಳಲೂ ಆಗದೆ,ಮರುಗುತ, ಸೊರಗುತ, ಕೊರಗುತಕುಳಿತೆ—ರೆಕ್ಕೆ ಮುರಿದ ಹಕ್ಕಿಯಂತೆ. ಪಂಜರದಿಂದ ಬಿಡುಗಡೆ ಯಾವಾಗ?ನಾನು ಹಾರಬೇಕು—ಶುಭ್ರ ಗಾಳಿಯ ತಂಪಿನಲ್ಲಿ,ಸ್ವಚ್ಛ ನೀಲಿ ಆಕಾಶದ ಕಡೆಗೆ. ಮೌನವೇ ಮಾತಾಗಿದೆ.ಮಾಡಿದ ತಪ್ಪಿಗೆ ಪ್ರಾಯಶ್ಚಿತ ಯಾವಾಗ?ಒಂದು ದಿನ ಪಂಜರದ ಸರಳು ಮರುಗಿತು“ಬಿಡುಗಡೆ ನೀಡುವೆ ಹೋಗು ನೀನು” ಹಾರುವ ಚೈತನ್ಯ ಇಲ್ಲ;ಅದೇ ಆಕಾಶ, ಅದೇ ಗಾಳಿ—ರೆಕ್ಕೆ ಮುರಿದಿವೆ ನಾನಿನ್ನು ಹಾರಲು ಆಗದರೆಕ್ಕೆ ಮುರಿದ ಹಕ್ಕಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ” Read Post »

ಕಾವ್ಯಯಾನ

ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು

ಕಾವ್ಯ ಸಂಗಾತಿ ಕುವೆಂಪು,ಬೇಂದ್ರೆ ಬಗ್ಗೆ ಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು ಕನ್ನಡವೆಂದರೆ ಇಷ್ಟು ಚೆಂದದ ನುಡಿಯೇ ಎಂದು ತಿರುತಿರುಗಿ ನೋಡುವಂತೆ ಮಾಡಿದ ಮೊದಲ ಕವಿ ನಮ್ಮ ಕುವೆಂಪು. ಅವರ ಕಾವ್ಯಫಲದಲ್ಲಿ ಭಾವುಕತೆಯ ಸಿಹಿ, ಅಧ್ಯಾತ್ಮದ ಪಕ್ವತೆ, ಕನ್ನಡದ ತಿರುಳು.ಅಸಂಖ್ಯ ಕನ್ನಡಿಗರ ಮನೆಗಳಲ್ಲಿ ಕನ್ನಡದ ದೀಪ ಹಚ್ಚಿದ ಕವಿಚೇತನ. ನಮ್ಮ ಮನಗಳೆ ನಿಮ್ಮಾನಿಕೇತನ. ಕನ್ನಡವೆಂದರೆ ಕುವೆಂಪು !ಕವಿಶೈಲದ ಇಂಚರ ಇಂಪುಮಲೆನಾಡಿನ ಹಸಿರಿದೆಜೋಗದ ಭರವಿದೆಕಾಜಾಣದ ಕರೆಯಿದೆಅದರಲಿಅಮ್ಮನ ಲಾಲಿಯ ತಂಪು ಇದೆ ! — ಬೇಂದ್ರೆ ಎಂದರೆ ಬೆಂದರೆ ಬರುವ ಪರಿಪಾಕಕಾವ್ಯಗಂಗೆ ಇಳೆಗಿಳಿವ ಭಗೀರಥ ಕಾಯಕನಾಕು ತಂತಿ ಮೀಟುವ ಶಬ್ದ ವೈಣಿಕದರ್ಶನ, ಸಂಗೀತ, ಗಣಿತ ಲಯ ಮಾಂತ್ರಿಕಪಂಡಿತ ಪಾಮರರ ಪ್ರೀತಿಪಾತ್ರಕನ್ನಡಾಂಬೆಯ ಔರಸ ಪುತ್ರಕಾವ್ಯಾಂತರಿಕ್ಷದ ಧ್ರುವ ನಕ್ಷತ್ರವರಕವಿಯ ಕೀರುತಿ ಸರ್ವತ್ರ ಸುಮತಿ ನಿರಂಜನ್

ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಕಾಲ ತಡೆಗೋಡೆ ಕಟ್ಟದು ಒಲವಿನ ಮಳೆ ಜಿನುಗಲು ಒಲವರಸಿಯಾರಿಗೂ ಆಗದು ಮಲ್ಲಿಗೆ ಸುಮ ಕಂಪು ತಡೆಯಲು ಒಲವರಸಿ ನಿನ್ನ ರೂಪವು ಪ್ರೇಮಾಲಯ ನಿರ್ಮಿಸಿ ಯುಗಳ ಗೀತೆ ಹಾಡುತಿದೆಅನುದಿನ ಕಾಯುವೆ ನಿನ್ನ ಚೆಲುವಿನ ಪುಟ ತಿರುವಲು ಒಲವರಸಿ ಆರುಮೆ ಅಂಗಳದಲಿ ಪೂಜಿಸುವೆನು ಮನದುಂಬಿ ದೀಪ ಬೆಳಗುತಭಾವದೀಪ್ತಿಯು ಕೆಂಪೇರುತದೆ ನಿನ್ನಧರಗಳು ಚದುರಲು ಒಲವರಸಿ ತನು ಮನ ಮಿಥುನಕೆ ಹಂಬಲಿಸುತ ಕನಸಿನ ಗೋಪುರ ಕಟ್ಟುತಿದೆನನ್ನ ಬೇಟೆಯಾಡು ವದನದ ಅಂಚು ಅಮೃತ ಸುರಿಸಲು ಒಲವರಸಿ ಮಲ್ಲಿಯ ಉಸಿರಿನ ಉಷ್ಣವು ನಿನ್ನಲಿ ಬೆರೆಯಲು ಕನವರಿಸುತಿದೆಆಲಂಗಿಸು ಬಾ ನನ್ನೆದೆಯ ರಸದೋಕುಳಿ ಎರಚಲು ಒಲವರಸಿ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಶೂನ್ಯದ ಸವಿ” ನಿದ್ದೆ ಸುಲಭದಿ ಒಲಿದರೆ ವರಕಳೆವುದು ಬಾಳಿನ ದಿನದ ಭಾರಕನಸ ಕಂಗಳಿಗೆ ಈತ ಸರದಾರಮಂಜಿನಷ್ಟು ಈಗ ಮನ ಹಗುರ. ಕುಳಿತಲ್ಲೇ ತೂಕಡಿಕೆಯ ತಡವರಿಕೆಬೇಸರ ತೀರದ ಬವಣೆಯ ಹರಕೆತಂಗಾಳಿಯ ಸವಿಯ ಬೀಸಣಿಕೆಇರದು ಸಂಕೋಲೆಗಳ ಎಣಿಕೆ. ಜಗವ ಮರೆತು ಶೂನ್ಯವಾಗಿಕಂಡ ಕಲ್ಪನೆಯ ಮಗುವಾಗಿಹಿತವಾಗಿ ಉಸಿರನೇರಿ ಸಾಗಿರೋಗಿಯೂ ಆಗುವನು ಭೋಗಿ. ಕಾಯಕ್ಕಿರಲಿ ವಿರಾಮದ ಜಾಗನಿರಂತರತೆ ತರುವುದು ರೋಗಅಲ್ಪಕಾಲದ ಈ ವೈಭೋಗಸಿಗದಿದ್ದರೆ ಇರದು ಸುಯೋಗ. ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ”

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಜಗದ ಕವಿ” ಓ ಕವಿ ನಾಯಕ ಕುವೆಂಪುನೀವ ಬರೆದ ಕವನಗಳ ಇಂಪುನೀಡಿದೆ ಕನ್ನಡ ಸಾಹಿತ್ಯಕ್ಕೆ ತಂಪುಪಸರಿಸಿದೆ ಹಾವ ಭಾವಗಳ ಕಂಪು| ಹಸ್ತದ ಸಂಗೀತಕ್ಕೆ ನಾಟ್ಯವಾಡಿತು ‘ನವಿಲು’|ಪದಪುಂಜ ನಾದದ ‘ಕೊಳಲು’ಗೆಮೊಳಗಿತು ‘ಪಾಂಚಜನ್ಯ’|ಕನ್ನಡವಾಯಿತು ಧನ್ಯ| ಕನ್ನಡ ನಿಸರ್ಗದಲ್ಲಿಮೂಡಿಬಂದ ‘ಪಕ್ಷಿ ಕಾಶಿ’|ಕನ್ನಡ ಮಾತೆಯ ಮಡಿಲಲ್ಲಿಬೆಳದ  ‘ಷೋಡಶಿ’ ಕನ್ನಡ ಸಾಗರದ ಆಳದಿಂದಹೊರಬಂದ ಮುತ್ತು|ನೀಡಿದ್ದು ನಮ್ಮಗೆಲ್ಲಶಾಶ್ವತ ಸಾಹಿತ್ಯ ಸೊತ್ತು| ಅಮೋಘ ಸೇವೆಯ ಫಲದೊರೆತ ಅಗ್ರ ಜ್ಞಾನ ಪೀಠ ಪ್ರಶಸ್ತಿ|ತಾವು ಎಂದೆಂದು ಮರೆಯಾಲಗದಕನ್ನಡ ಕುಲಕೋಟಿಯ ಆಸ್ತಿ |        ಶ್ರೀದೇವಿ ಗುಮ್ಮಗೋಳ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ” Read Post »

You cannot copy content of this page

Scroll to Top