ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಕವಿತೆ-ಮನೋಲ್ಲಾಸಿನಿ…!

ಕಾವ್ಯಸಂಗಾತಿ ಶಂಕರಾನಂದ ಹೆಬ್ಬಾಳ ಮನೋಲ್ಲಾಸಿನಿ…! ಮೃದ್ವಂಗಿಯಂತೆದೇಹ ಬಳುಕಿಸುತಕಣ್ಣೋಟದಲಿ ಸೆಳೆವಮಾಯಾಂಗಿನಿ….!ಹೃದಯದಲ್ಲವಿತುಮನಬೆರೆತ ಮನೋಲ್ಲಾಸಿನಿ…!! ಮೋಹಕ ಮೈಮಾಟನಿದಿರೆಯಲ್ಲೂಅದೆ ತಂಗಾಳಿಯ ಗುಂಗುನಿನ್ನೊಲವಿನ ರಂಗುಕಾರ್ಮೋಡದ ಚಂದ್ರನಾದೆ…!ಕಂಗೆಟ್ಟ ಕುರುಡನಿಗೆಊರುಗೋಲಾದೆಮನದಲ್ಲವಿತು ಕಾಣದಾದೆ…!! ದುಸ್ವಪ್ನ ಸುಸ್ವಪ್ನಗಳಸರಮಾಲೆಯಲ್ಲಿತೇಲುವ ಗಗನಸಖಿಯಾದೆಹಾರುವ ಗಾಳಿಪಟದಂತೆಮನ ಹಿಡಿತಕ್ಕೆ ಸಿಗುತಿಲ್ಲ…! ಅರೆಕ್ಷಣ ಮೌನಅರೆಕ್ಷಣ ಧ್ಯಾನಒಲವ ಬಲೆಯಲ್ಲಿಸಿಲುಕಿದಂತೆ ಭಾಸ…!ವದನದಲ್ಲಿ ಒಮ್ಮೊಮ್ಮೆಕಿರು ಮಂದಹಾಸ…! ಸೆಳೆಯುತ್ತಿರುವೆಅವಳನೊಮ್ಮೆಬಳಿಬಾರೆ ಮೃದ್ವಂಗಿ….ಬಾರೆ ನನ್ನ ಕನಕಾಂಗಿ….!ಇಂದಾದೆ ನಾ ಏಕಾಂಗಿನೀನಾಗಿ ಬಿಡುನನ್ನ ಅರ್ಧಾಂಗಿ….! ಶಂಕರಾನಂದ ಹೆಬ್ಬಾಳ

ಶಂಕರಾನಂದ ಹೆಬ್ಬಾಳ ಕವಿತೆ-ಮನೋಲ್ಲಾಸಿನಿ…! Read Post »

ಕಾವ್ಯಯಾನ, ನಿಮ್ಮೊಂದಿಗೆ

ಪ್ರೊ. ಸಿದ್ದು ಸಾವಳಸಂಗ ಕವಿತೆ-“ಬುದ್ಧ ಮಧ್ಯರಾತ್ರಿ ಎದ್ದ”

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

“ಬುದ್ಧ ಮಧ್ಯರಾತ್ರಿ ಎದ್ದ”

ಪ್ರೊ. ಸಿದ್ದು ಸಾವಳಸಂಗ ಕವಿತೆ-“ಬುದ್ಧ ಮಧ್ಯರಾತ್ರಿ ಎದ್ದ” Read Post »

ಕಾವ್ಯಯಾನ

ಲಲಿತಾ ಪ್ರಭು ಅಂಗಡಿ ಕವಿತೆ-ಬುದ್ಧ ಅಂದು,ಇಂದು.

ಕಾವ್ಯ ಸಂಗಾತಿ ಲಲಿತಾ ಪ್ರಭು ಅಂಗಡಿ ಬುದ್ಧ ಅಂದು,ಇಂದು, ಸತಿ ಸುತರ ಬಳ್ಳಿಯ ಕಳಚಿಸಿರಿ ಸುಪ್ಪತ್ತಿಗೆ ದೂರ ಸರಿಸಿಸುಖ ಭೋಗವ ದಿಕ್ಕರಿಸಿಅಹಿಂಸಾ ಮಾರ್ಗ ಅನುಸರಿಸಿಭೋದಿ ವ್ರೃಕ್ಷದಡಿ ಧ್ಯಾನಿಸಿಶಾಂತಿ ಮಂತ್ರ ಬೋಧಿಸಿಪೂರ್ಣತೆಯ ಪುಣ್ಯ ಬೆಳಕನು ಬೆಳಗಿಸಿವಿಶ್ವಕೆ ಶಾಂತಿ ಸಮತೆಯ ತತ್ವ ಪಸರಿಸಿಸಹಾನುಭೂತಿಯ ಸಲಹೆ ಸೂಚಿಸಿದೆ ಬುದ್ಧ ನೀ ಅಂದು ಸತಿ ಸುತರ ವ್ಯಾಮೋಹಕೆಭೋದಿ ವ್ರೃಕ್ಷದಡಿಯಲಿ ನಿನ್ನ ಪೂಜಿಸಿಭೂಮಿಯಲಿರುವ ಎಲ್ಲವನು ಕಬಳಿಸುವ ಧ್ಯಾನಹಿಂಸೆ ಆದರೂ ಪರವಾಗಿಲ್ಲ ವೈಭೋಗದ ಸಿರಿಯ ಮೆರೆವ ಕನಸುನಿನ್ನ ಚಿತ್ರಕೆ ನಮಿಸಿಗುಂಗುರು ಕೂದಲಿನ ಉದ್ದ ಕಿವಿಯ ಕಲ್ಲು ಕಂಚು ದುಬಾರಿಯ ನಿನ್ನ ಮೂರ್ತಿ ಮಾಡಿ ಶೋಕೇಸಿನಲಿ ಬಂಧಿಯಾಗಿಟ್ಟಿರುವರು ಇಂದು ನಿನ್ನ ಬುದ್ಧಅಷ್ಟೇ ಅಲ್ಲ ಉಡುವ ಬಟ್ಟೆಗಳಲ್ಲಿ ನಿನ್ನ ಅಚ್ಚುಬಳಸಿಕೊಳ್ಳಲಿಲ್ಲ ನಿನ್ನ ಶಾಂತಿ ಮಂತ್ರಅಳವಡಿಸಿಕೊಳ್ಳಲಿಲ್ಲ ಅಹಿಂಸಾ ತತ್ವದ್ವೇಷದಾ ಬೇಗುದಿ,ಸೇಡಿನ ಸುರಿಮಳೆ ಮುಯ್ಯಿಗೆ ಮುಯ್ಯಿನಿನ್ನ ಹೆಸರಿನಲ್ಲಿ ಹುಣ್ಣಿಮೆ ಬೇರೆ ಬುದ್ಧಬದ್ಧತೆ ಇಲ್ಲದ ಬುದ್ಧಿಗೇಡಿಗಳು ಸೋಗಿನಲಾಂಛನ ಹಾಕಿನಿನ್ನ ಶಾಂತಿ ಮಂತ್ರವ ಬಾಯಲಿ ಜಪಿಸುವರುಒಳಗೊಳಗೆ ವೈರಿಯ ಕಸರತ್ತುಅನಿವಾರ್ಯ ಎಲ್ಲವನು ಕಣ್ಮುಚ್ಚಿ ನೋಡು ನೀ ಬುದ್ಧಆದರೆ ಬುದ್ಧಾ ಬುದ್ಧಾ ನೀಎಲ್ಲರೂ ಮಲಗಿರುವಾಗ ಸದ್ದಿಲ್ಲದೆ ಹೋದ ಹಾಗೆಎಲ್ಲರೂ ಮಲಗಿರುವಾಗ ಬಂದೊಮ್ಮೆ ಕವಿಗಳ ಬರೆದ ಕವನಗಳನು ಓದು ನೀ ಬುದ್ಧನಸುನಕ್ಕು ಮತ್ತೆ ತಪೋಸ್ಥಿಯಲಿ ಕಣ್ಮುಚ್ಚಿಕೋ ನೀ ಬುದ್ಧಬುದ್ದಂ ಶರಣಂ ಗಚ್ಛಾಮಿಸಂಗಮ್ ಶರಣಂ ಗಚ್ಛಾಮಿ. ಲಲಿತಾ ಪ್ರಭು ಅಂಗಡಿ.

ಲಲಿತಾ ಪ್ರಭು ಅಂಗಡಿ ಕವಿತೆ-ಬುದ್ಧ ಅಂದು,ಇಂದು. Read Post »

You cannot copy content of this page

Scroll to Top