ಜಯಶ್ರೀ ಭ ಭಂಡಾರಿ ಕವಿತೆ-ಹಗುರಾಗುವ ಭಾವ
ಕಾವ್ಯ ಸಂಗಾತಿ ಜಯಶ್ರೀ ಭ ಭಂಡಾರಿ ಹಗುರಾಗುವ ಭಾವ ದಿನವೂ ದಿಟ್ಟಿಸಿ ನೋಡುತ್ತಾಮುಗುಳು ಮೊಗ್ಗಾಗುವುದ ಕಾಯ್ದೆಹಸಿರೆಲೆ ನಡುವೆ ಉಸಿರು ಬಿರಿದುಅಲ್ಲಲ್ಲಿ ಚೂಪಾದ ಮೊಗ್ಗುಗಳು ಕಾಂಪೌಂಡ್ ಗೋಡೆಗೆ ಕುಂಡದಲ್ಲಿಏನೇನು ಕೇಳದೆ ನೀರಿಗೆ ಒಲಿದುಸುಡುವ ಬಿಸಿಲಿನ ಬೇಗೆಗೆ ನಲಿದುಏಳು ಸುತ್ತಿನ ಮಲ್ಲಿಗೆ ಅರಳಿತಲ್ಲಾ. ನೀರು ಹಾಕುವಾಗೊಮ್ಮೆ ಮುದದಿಮಾತಾಡಿ ಮನದ ನೋವು ಮರೆತುಹೇ ಮಲ್ಲಿಗೆ ನಿನ್ನ ಧ್ಯಾನಸ್ಥ ಸ್ಥಿತಿ ಕೊಡುಹಂಗಿಲ್ಲದೆ ಅರಳುವ ಸುಕೋಮಲೆಯು ದೇವನಿಗೂ ಸೈ ಮುಡಿಗೂ ಸೈನಿಶ್ಚಲತೆಯ ಪರಿ ಕಂಡು ದಂಗಾಗುವೆಆ ನಿನ್ನ ತನ್ಮಯತೆ ಬೇಕಿದೆ ನನಗೆಬೆಳ್ಮುಗಿಲ ಬೆಳಕಲಿ ಘಮಿಸಿ ನಿಲುವೆ ಬಿಳಿಯ ಬಣ್ಣವು ಶಾಂತಿಯ ಪ್ರತೀಕಆ ನಿನ್ನ ಪ್ರಶಾಂತ ಪ್ರೇಮ ಕಲಿಸು ಬಾಜಂಜಡದ ನೋವುಗಳ ನೀಗು ಬಾರೆತಲ್ಲಣಿಸಿದ ಹೃದಯಕೆ ತವರಾಗುವೆಯಾ. ಮನಸಿನ ಹುಸಿಯಾದ ಆಶೆಗಳು ಅತಿಯಾದ ಯೋಚನೆಗೆ ಕಂಗೆಟ್ಟುನಿನ್ನ ಬಾಗಿಲಿಗೆ ಬಂದಿರುವೆ ಮಲ್ಲಿಗೆನಿನ್ನಂತಾಗುವ ದಾರಿಯ ಹೇಳು ಸಖಿ ನಂಬಿಕೆ ಇಂಬು ಕಳೆದುಕೊಂಡಿದೆಮಾತು ಮೌನವಾಗಿ ನರಳಿ ಅಳುತ್ತಿದೆತಾಳ್ಮೆಯು ಸಾಕಾಗಿ ತಗಾದೆ ತೆಗೆದಿದೆ ನನ್ನದಾವುದು ಈಗ ನನ್ನದಾಗಿ ಉಳಿದಿಲ್ಲ. ಬದುಕಿನ ಪ್ರತಿ ಕ್ಷಣವು ಹಂಗಿಸುತಿದೆಎದೆಯ ಭಾರ ಹೆಚ್ಚಾಗಿ ಹುಚ್ಚಾಗಿದೆಒಂಟಿ ಭಾವ ಹೆದರಿಸಿ ನಗುತಿದೆ ಮಲ್ಲಿಗೆ.ಎಲ್ಲವನು ಹೇಳಿ ಹಗುರಾದೆ ನಾನೀಗ. ಜಯಶ್ರೀ ಭ ಭಂಡಾರಿ
ಜಯಶ್ರೀ ಭ ಭಂಡಾರಿ ಕವಿತೆ-ಹಗುರಾಗುವ ಭಾವ Read Post »









