ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಅವರ ಹೊಸ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಇಂದು ಪ್ರೇಮಿಗಳ ದಿನ ಬಂದೇ ಬಿಟ್ಟಿತಲ್ಲ ಗೆಳತಿನಿನ್ನ ಮೇಲೆ ಪ್ರೀತಿ ಅದೆಂದೋ ಹುಟ್ಟಿತಲ್ಲ ಗೆಳತಿ ಒಂದು ದಿನವಷ್ಟೇ ಮೀಸಲಿಟ್ಟರೆ ಅದೆಂಥ ಪ್ರೀತಿಪ್ರತಿಕ್ಷಣ ನಿನ್ನುಸಿರೇ ಎದೆ ಕದವ ತಟ್ಟಿತಲ್ಲ ಗೆಳತಿ ಎಷ್ಟು ಪ್ರೀತಿಸುವೆ ಎಂದು ಕೇಳಿ ತಿಳಿಯುವುದಲ್ಲಭಾವದಿ ಹುಟ್ಟಿ ಬಾಂದಳವನೇ ಮುಟ್ಟಿತಲ್ಲ ಗೆಳತಿ ಪ್ರೀತಿ ಪರಸ್ಪರ ನಂಬಿಕೆಯ ಮೇಲೆ ನಿಂತಿಹುದಂತೆಸಂಶಯದ ಭೂತಗಳ ಬಿಡದೇ ಸುಟ್ಟಿತಲ್ಲ ಗೆಳತಿ ತೋ(ಹೇ)ರಿಕೆಗೋ ಪ್ರೀತಿಸುವವನಲ್ಲ ಕುಂಬಾರಬರಡಾದ ಎದೆ ನೆಲದಿ ಹಸಿರನ್ನೇ ನೆಟ್ಟಿತಲ್ಲ ಗೆಳತಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಹೊಸ ಗಜಲ್ Read Post »

ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಕವಿತೆ”ಪ್ರೀತಿ ಎಂದರೆ”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಪ್ರೀತಿ ಎಂದರೆ” ಪ್ರೀತಿ ಎಂದರೆಪ್ರದರ್ಶನವಲ್ಲಪರಸ್ಪರ ಸ್ಪಂದಿಸುವುದುಬಾಂಧವ್ಯ ಎಂದರೆಬಯಸುವದಲ್ಲಬೆಸೆಯುವುದುಸಂತಸ ಎಂದರೆಬರೀ ಸುಖವಲ್ಲಸವಿಯುವುದುಭಾವನೆಗಳು ಎಂದರೆ ಬಳಸಿಕೊಳ್ಳುವುದಲ್ಲಭರವಸೆ ಹುಟ್ಟಿಸುವುದುಕನಸುಗಳು ಎಂದರೆಕಾಣುವದಲ್ಲನನಸಾಗಿಸುವುದುನೆನಪುಗಳು ಎಂದರೆಮಾಸುವದಲ್ಲಆರಾಧಿಸುವುದುಬದುಕು ಎಂದರೆಜೀವಿಸುವದಲ್ಲಸುಂದರಗೊಳಿಸುವುದುಪ್ರೇಮಾಂತರಂಗದನಿನ್ನೊಲುಮೆಗೆಕಟ್ಟುವೆ ತೋರಣನಿನ್ನಾಗಮನ ಎನಗೆಸಹ್ಯಾದ್ರಿ ಚಾರಣ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಕವಿತೆ”ಪ್ರೀತಿ ಎಂದರೆ” Read Post »

ಕಾವ್ಯಯಾನ

“ಕಾಯುತ್ತಿದ್ದೇನೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಕಾಯುತ್ತಿದ್ದೇನೆ” ಕಾಯುತ್ತಿದ್ದೇನೆನನ್ನ ವ್ಯಾಲೆಂಟೈನ್ ಗೆಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆರೈತ ಹುಬ್ಬಿಗೆ ಕೈ ಹಚ್ಚಿಮುಗಿಲ ಮೋಡದಮಳೆಯ ಹನಿಗಾಗಿಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆಕಳೆದು ಹೋದ ಕರುತನ್ನ ತಾಯಿಯರಸುವಂತೆಮುಗ್ಧ ಪ್ರೀತಿಯ ಅಪ್ಪುಗೆಗೆಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆಕರಾಳ ದಿನಗಳಜೈಲಿನಲ್ಲಿ ಕೊಳೆಯುವಅಮಾಯಕರು ಜಾಮೀನಿಗಾಗಿಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಕಾಯುತ್ತಿದ್ದೇನೆದಲಿತ ಬಡವರ ದಮನಿತರಶೋಷಣೆಯ ಸಂಕೋಲೆಕಳಚಿ ಬೀಳುವ ದಿನಕೆಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ನನಗೀಗ ಅರ್ಥವಾಗುತ್ತಿದೆಪ್ರೀತಿ ಪ್ರೇಮ ಪದಗಳುಭಯ ಭೀತಿಯಲ್ಲಿ ಮುದುಡಿವೆಸಮರಸ ಸಮಾಧಿಯಾಗಿದ್ವೇಷದ ಮಾರುಕಟ್ಟೆಯಲ್ಲಿಹೂವು ಕೊಳ್ಳುವವರಿಲ್ಲ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡುಜಗದ ಹಗೆಯಳಿಸಿಸ್ನೇಹ ಪ್ರೀತಿಯ ಉಸಿರಾಗಿನೊಂದ ಮನಕೆ ನೆಮ್ಮದಿಯತಿಳಿ ಕಾವೇರಿಯಾಗಿ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡು ಸುಡುವ ಕೆಂಡದ ಮಧ್ಯೆಶಾಂತಿಯ ಮೊಂಬತ್ತಿ ಬೆಳಕಾಗಿಹೊಸ ಬದುಕಿನ ನಿರ್ಮಲನಿಶ್ಚಿತ ಶಾಶ್ವತ ಪ್ರೀತಿಯಾಗಿ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡುಬುದ್ಧ ಬಸವರ ಬೆಳಕಾಗಿಅನಾಥ ಮಕ್ಕಳ ತಾಯಿಯಾಗಿಅಂಗ ಲಿಂಗದ ಹಂಗು ತೊರೆದುಭೋರ್ಗರೆವ ಪ್ರೇಮ ಪ್ರವಾಹವಾಗಿ ಮತ್ತೆ ಕಾಯಿಸ ಬೇಡದಶಕದ ಶಾಪ ಅಳಿದುಒಲವು ಚಿಗುರಿ ಅರಳಲಿಕೋಪ ತಾಪ ಅಳಿದುತನು ಮನಕೆ ತಂಪು ನೆರಳಾಗಿನನ್ನ ನಿನ್ನೊಳಗಿನ ನಗೆ ಸಂಭ್ರಮಕೆ ಓ ನನ್ನ ಪ್ರೇಮವೇಒಮ್ಮೆ ಬಂದು ಬಿಡುಬವಣೆ ಭ್ರಾಂತಿ ಕಳೆದುಹೊಸ ಬದುಕಿನ ಕ್ರಾಂತಿಯಾಗಿಸತ್ಯ ಸಮತೆ ಮೆರವಣಿಗೆಗೆನನ್ನ ಒಂಟಿ ಪಯಣದಲ್ಲಿ ಬಾ ಪ್ರೇಮವೇ ಒಮ್ಮೆನಮ್ಮ ಬರಿದಾದ ಬಾಳಿನಲ್ಲಿತಿಳಿ ಬೆಳಕಾಗಿ ತಂಗಾಳಿ ಸೂಸಿನೆಮ್ಮದಿ ನಿದ್ರೆಗೆ ಜಾರುವ ಮುನ್ನನಿನ್ನ ಕೈ ಕುಲುಕಿ ಅಪ್ಪಿ ಮುದ್ದಾಡುವೇಬಂದು ಬಿಡು ಕಾಯುತ್ತಿದ್ದೇನೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ಕಾಯುತ್ತಿದ್ದೇನೆ” ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಧಾರವಾಡ “ಆತ್ಮ ಸಾಕ್ಷಿ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಆತ್ಮ ಸಾಕ್ಷಿ”  ಅಂತರಾಳದಲ್ಲಿ ಮೃದು ಧ್ವನಿ ಮಿಡಿಯುತ್ತಅದು ಶಬ್ದವಲ್ಲ,ಆದರೂಎಲ್ಲ ಶಬ್ದಗಳಿಗಿಂತ ಗಟ್ಟಿಯಾದ ಸತ್ಯ.ಕತ್ತಲೆಯೊಳಗೆ ದೀಪವಾಗಿದಾರಿತಪ್ಪಿದ ಹೆಜ್ಜೆಗಳಿಗೆ ದಿಕ್ಕುತೋರಿಸುವದಲೋಕದ ಕಣ್ಣಿಗೆ ಕಾಣದಿದ್ದರೂಒಳಗಿನ ಕಣ್ಣಿಗೆ  ಸ್ಪಷ್ಟವಾಗಿಗೋಚರಿಸುವ ಶಕ್ತಿ ನಟನೆಯ  ಮುಖವಾಡಗಳ ಮಧ್ಯೆನಗುವಿನ ಹಿಂದೆ ಅಡಗಿದ ನೋವನ್ನುಮೌನವಾಗಿ ಓದುವ ಆತ್ಮಸಾಕ್ಷಿ, ಸುಳ್ಳಿನ ಹೊಳಪವಿನೊಳಗಿನಖಾಲಿತನವನ್ನು ನೋಟದಲ್ಲೇ ಗುರುತಿಸುತ್ತಯಶಸ್ಸಿನ ಶಿಖರದಲ್ಲಿದ್ದಾಗಮೃದುವಾಗಿ ಪ್ರಶ್ನಿಸುತ್ತ“ಈ ಗೆಲುವು ನಿನ್ನದೇನಿನ್ನ ಮೌಲ್ಯಗಳನ್ನುಸೋಲಿಸಿದ ಬೆಲೆಯಾ?ಸೋಲಿನ ನೆಲದಲ್ಲಿ ಕುಳಿತಾಗತಾಯಿ ಹಸ್ತದಂತೆತಲೆಯ ಮೇಲೆ ಕೈ ಇಟ್ಟು“ನೀನು ತಪ್ಪಲಿಲ್ಲ,ನಿನ್ನ ಉದ್ದೇಶ ಪವಿತ್ರವಾಗಿತ್ತು”ಆಶ್ವಾಸನೆ ನೀಡುವದು.ಸಮಯದ ಹೊಡೆತಗಳಿಗೆಅದು ಎಂದೂ ಜರಿಯುವುದಿಲ್ಲ,ಪರಿಸ್ಥಿತಿಗಳ ಒತ್ತಡಕ್ಕೆಅದು ಮೌನವಾಗುವುದಿಲ್ಲ.ತಾಳ ತಪ್ಪಿದಾಗನಿದ್ರೆಯಲ್ಲೂ ಕಾಡುವದುಸರಿ ಮಾಡಿದಾಗನಿಶ್ಚಿಂತೆ ಎಂಬ ಹೂವನ್ನಿಟ್ಟುಹೃದಯವನ್ನು ಹಗುರಗೊಳಿಸುವದು.ಲೋಕದ ನ್ಯಾಯಾಲಯಗಳುಸಾಕ್ಷ್ಯ ಕೇಳಬಹುದು,ಆದರೆಆತ್ಮಸಾಕ್ಷಿಉದ್ದೇಶವನ್ನ ತೂಕ ಹಾಕುತ್ತದೆ.ಅದಕ್ಕೆ ಅಲಂಕಾರ ಬೇಡ,ಪ್ರಶಂಸೆಯ ಅಗತ್ಯವಿಲ್ಲ,ಸತ್ಯವೇ ಅದರ ಉಸಿರು,ನೈತಿಕತೆಯೇ ಅದರ ಆಭರಣ.ಎಲ್ಲವೂ ಮೌನವಾದಾಗ,ಹೆಸರು, ಹುದ್ದೆ, ಗುರುತುಗಳೆಲ್ಲಕರಗಿದಾಗನಮ್ಮ ಜೊತೆಯಲ್ಲಿ ಉಳಿಯುವದುಈ ಮೌನದ ಸ್ನೇಹಿತ  ಆತ್ಮಸಾಕ್ಷಿ._______________________ ಡಾ ತಾರಾ ಬಿ ಎನ್ ಧಾರವಾಡ

ಡಾ ತಾರಾ ಬಿ ಎನ್ ಧಾರವಾಡ “ಆತ್ಮ ಸಾಕ್ಷಿ” Read Post »

ಕಾವ್ಯಯಾನ

ಕಾವ್ಯ ಸಂಗಾತಿ ಲತಾ ಎ ಆರ್‌ ಬಾಳೆಹೊನ್ನೂರು ಮಾಗಿಯ ಚಳಿ ತಣ್ಣನೆಯ ಮಾಗಿಯ ಚಳಿ ಮೈ ಸೋಕಿರಲುನಿನ್ನದೇ ಸವಿ ನೆನಪು ಕಾಡಿರಲುಮನಸು ಹೃದಯ ಮುದವೇರಲುಸೊಗಸಾಗಿ ಹಳೆ ನೆನಪು ಸೋಕಿರಲು ಸೆಳೆಯುತಿದೆ ಮನ ನಿನ್ನೆಡೆಗೆ ವಾಲಿಹೃದಯವನು ಇರಿಸಿರುವೆ ನಿನಗಾಗಿ ಖಾಲಿಒಂದಾಗಿ ಆಡೋಣ ಬಾ ಜೀವನ ಜೋಕಾಲಿಸೇರಿ ಜೀವನದ ಪಾಠವ ಕಲಿ ನೀನಿಲ್ಲದ ಬದುಕು ಬರೀ ನೀರಸನೀನಿರೆ ಜೊತೆಯಲ್ಲಿ ಮನ ಉಲ್ಲಾಸನಿನ್ನೊಲವು ಬೇಕಿದೆ ಬಾಳಿಗೆ ಸಂತಸ ಅರಿತುಕೊ ನನ್ನೆದೆಯ ಕೂಗಿನ ಮನಸ ಹೊಸಬಾಳಿನ ನೂತನ ಸಂಭ್ರಮ ನಿಶ್ಚಿತಹೂ ಚೆಲ್ಲಿ ಕೋರುವೆ ನಿನಗೆ ಸ್ವಾಗತಹಾರಾಡಿ ಕುಣಿದಿರುವೆ ನವಿಲಂತೆ ನಲಿಯುತನೀನೆಂದೆಂದು ನನ್ನವನೇ ಬಾಳಲ್ಲಿ ಶಾಶ್ವತ. ಲತಾ ಎ ಆರ್ ಬಾಳೆಹೊನ್ನೂರು

Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ” ಅರಿತು ಬೆರೆತು ನೀ…ಬಾಳಲೆಷ್ಟು ಹರುಷವು ಮನುಜಸಮಾಜ ಕಂಟಕ ಆಗದಿರು ಮನುಜ,?! ಹೃದಯದೊಳು…ಅವಿತಿರುವ ಮಲಿನ ಕಲ್ಮಶಗಳತೊರೆಯ ಬಾರದೇಕೆ ನೀ ಮನುಜ,?! ಜಾತಿ ಧರ್ಮಗಳು…ಚೌಕಟ್ಟಿನೊಳಗಿರಲು ಚೆಂದಮಾನವನಾಗಿ ಬದುಕು ಮನುಜ,! ಧರ್ಮ ಸಂಘರ್ಷಕ್ಕಲ್ಲ…ಶಾಂತಿಯೇ ಧರ್ಮಗಳ ಸಾರಪ್ರೀತಿಯೊಂದೇ ಮೋಕ್ಷಕ್ಕೆ ದಾರಿ ನೇರ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು “ಮೋಕ್ಷಕ್ಕೆ ದಾರಿ” Read Post »

ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ “ಬಿಡದ ನಂಟು”

ಕಾವ್ಯ ಸಂಗಾತಿ ಡಾ ಸಾವಿತ್ರಿ ಕಮಲಾಪೂರ “ಬಿಡದ ನಂಟು” ನನಗೂ ನಿನಗೂ ಎಷ್ಟೊಂದು ನಂಟುಬಿಡದ ಬಾಂಧವ್ಯಕ್ಕೆ ಬೆಸೆದ ಗಂಟುನನಗೀಗ ವಯಸ್ಸು ಐವತ್ತುಅರವತ್ತಕ್ಕೆ ಅರಳು ಮರಳುಆಗಿಲ್ಲ ಬಿಡುತೆರೆದ ಕಂಗಳಲ್ಲಿ ದಿನವೂ ಓದುವೆಅದು ಬಿಡುವು ಇದ್ದಾಗನೀನೋ ಮೌನಎಲ್ಲವನ್ನೂ ಓದಿ ಅರ್ಥೈಸಿಕೊಂಡುಸಾಗಬೇಕು ಹೊತ್ತಿಗೆಅದೆಷ್ಟು ನಿನಗೆ ಕುತೂಹಲನನಗೂ ಕೂಡಾಕ್ಷಣ ಹೊತ್ತು ಕೈಯಲ್ಲಿ ಅಗಲಿದರೆ ಸಾಕುಹುಡುಕಾಟ ಜೀವ ಹೋದಂತೆಭಯ ಬೇರೆಎಲ್ಲವನ್ನೂ ಹಿಡಿದಿಟ್ಟಿರುವಹೆಸರು ಅವರ ನಂಬರುಯಾವಾಗಲೋ ಒಮ್ಮೆ ಅಗಲಿಮರೆಯಾಗಿದ್ದೆ ನೋಡುನನ್ನ ಫಜಿತಿಕರೆಗಳ ಮೇಲೆ ಕರೆಎಲ್ಲಿರ್ರಿ ?ಮೆಡಂಏನ್ ಇದು ?ಎತ್ತುದೇ ಇಲ್ಲ ನೋಡ್ರಿ !ಮೆಸೆಜ್ ನೋಡಲಾಕ್ ಆಗುದಿಲ್ಲ ಎನ್ರಿ? ನಾವ್ ನಿಮಗ್ ಕರೆ ಮಾಡಿತಿಳಿಸಬೇಕ್ ಎನ್ರಿ ?ಒಂಚೂರು ನಿಮಗ್ ಬುದ್ಧಿ ಇಲ್ಲ ಏನ್ರೀ ?ನೋಡಿ ಅದೆಷ್ಟು ನನಗೂ ನಿನಗೂ ಬಿಟ್ಟಿರಲಾರದ ನಂಟುಬೆಸೆದುಕೊಂಡು ಬಿಟ್ಟಿದೆ ಅಂಟುನಮ್ಮ ಮನಿಯಾಗ ನಮ್ಮ ಅವ್ವ ಒಂದು ಸಲ ಬೈದುಕೊಳ್ಳಾಗ ಗಂಟು ಹಾಕೋಂಡ್ ಬಿಡುಇಪ್ಪತ್ನಾಲ್ಕು ತಾಸು ಬರೀ ಕೈಯ್ಯಾಗ ಬೇಕು ನಿನಗಜನರಾದರೂ ಏನಾಂದರು? ಅದಕ್ಕಂತಲೇಹೆಸರ್ ಬಂದಿರಬೇಕ್ ನೋಡ್ರಿಜಂಗಮವಾಣಿಬಾಳ್ ಶ್ಯಾನಾಕಿರೀ ನಮ್ಮ ಜಂಗಮವಾಣಿತಡ್ರಿ ಮತ್ ಒಂದು ಕರೆ ಬಂತುಎತ್ತ ಲಿಲ್ಲ ಅಂದ್ರ ಕಾಲ ಕೆದರಿಜಗಳಕ್ಕ ಬಂದಾರುಹುಷಾರ್ ರೀ !ನನ್ನಂಗ ಆಗಬ್ಯಾಡ್ರಿಬುದ್ಧಿ ಐತೋ ಇಲ್ಲೋ ಅಂತಾರಿ.. ಡಾ ಸಾವಿತ್ರಿ ಕಮಲಾಪೂರ

ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ “ಬಿಡದ ನಂಟು” Read Post »

ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಕವಿತೆ “ಕೋಡು”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಕೋಡು” ಬರಬಹುದೇ ಇಂಥಕ್ಯೂ ಆರ್ ಕೋಡ್ ಗಳು –ಮುಖಕ್ಕೆ ಹಿಡಿದಾಗ ನಿನ್ನ ನಖಶಿಖಾಂತ ಹೇಳುವ ಜಾತಕಗಳು. ನಿನ್ನ ಜೋಳಿಗೆಯಲ್ಲಿಯ ಹಣ ಪ್ರಪಂಚಕ್ಕೆ ಇಟ್ಟಿರುವ ಪಣ,  ನಿನ್ನ ಹಿಂದು ಮುಂದಿನವರ  ಆಸೆ ದುರಾಸೆಗಳ ಕ್ಷಣ. ಕಾಯುತ್ತಿದ್ದೇನೆ ಆ ಕೋಡಿಗೆನಿನ್ನ ನೈತಿಕದ ಭೌತಿಕದಇಹ ಪರ ಆಸ್ತಿಗಳ ಮುತ್ತಿಗೆಗೆದುರಾಸೆಗೆ ದುರ್ದಾನಕ್ಕೆ! ಸಿಗುವುದು ಯಾವಾಗಲೋತೀರದ ದಾಹಕ್ಕೆಎಲ್ಲರ ಮುಖ ಕೈ ಕಾಲು ದೇಹಕ್ಕೆ ಮರ್ಜಿ ಹಿಡಿಯುವಹೊತ್ತು ಗೊತ್ತಿಗೆ ಒಳಗೆಲ್ಲ ಹೊರಗೆಹೊರಗೆಲ್ಲ ಒಳಗೆ,ಬರಲಿದೆಯೇ ಇಂಥ ಕೋಡುಸ್ವಿಚ್ ಆಫ್ ಮಾಡಲಿದೆಯೇಎಲ್ಲರ ಮೂಡು! ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಕವಿತೆ “ಕೋಡು” Read Post »

ಕಾವ್ಯಯಾನ

ಚಂದ್ರು ಪಿ ಹಾಸನ್ “ಪ್ರೇಮಗಂಗೆ”

ಕಾವ್ಯ ಸಂಗಾತಿ ಚಂದ್ರು ಪಿ ಹಾಸನ್ “ಪ್ರೇಮಗಂಗೆ” ಪ್ರೇಮಗಂಗೆ ಓ  ನನ್ನೊಲವಗಂಗೆ ಎನ್ನೆದೆಯಾಳದಿ ಜನ್ಮಿಸಿದ ಪ್ರೇಮಗಂಗೆನಿನ್ನ ಚಲನವಲನ ನನ್ನವಳ ಕೂಗಿದೆ ನೀ ಮಿಡಿದ ಬಡಿತದ ಕಲರವಒಮ್ಮೆ ಕಾಣುವ ಹಂಬಲ ತಂದಿದೆ ಬಂಜರು ಭೂಮಿಯಲ್ಲಿ ಮಳೆಗರೆದು ಹಸಿರು ಹಸನಾಗಿ ಹರಡುವಂತೆನಿನ್ನ ನವಿರಾದ ಹರಿವಿನ ಅರಿವು ಮನದಲ್ಲಿ ಸೊಗಸಾದ ಆಸೆ ಚಿಗುರಿಸಿಪ್ರೇಮದ ಕಾರಂಜಿಯನ್ನು ಚಿಮ್ಮುತ್ತಿದೆ. ನೀರಿನ ಜುಳುಜುಳು ನಾದ ಕೇಳಿ ಹಕ್ಕಿಪಿಕ್ಕಿಗಳು ಚಿಲಿಪಿಲಿ ಎನ್ನುವಂತೆಹೃದಯದ ಅರಗಿಣಿ ಬಡಿತವ ಎಬ್ಬಿಸಿಭಾವ ಅಲೆಗಳು ನರನಾಡಿಯಲ್ಲಿ ಹರಡಿನಿನ್ನ ಹೆಸರಿನ ತುಡಿತವ ಮಿಡಿಯುತ್ತಿದೆ ಸ್ವಚ್ಛಂದದ ನೀರಿನ ಕಣಕಣದ ಹರಿವು ಧರೆಗೆ ಸೇರಿ ಘಮಘಮಿಸುವಂತೆಎನ್ನ ನೀರೆಯ ಒಲವು ತನುವೆಲ್ಲ ಹರಡಿ ಮುಖಕಮಲ ಮಿನುಗಿಸಿ ಅಡಗಿದೆಯೇ ಅಂತರಗಂಗೆ ಓ ನನ್ನ ಪ್ರೇಮಗಂಗೆ ಚಂದ್ರು ಪಿ ಹಾಸನ್

ಚಂದ್ರು ಪಿ ಹಾಸನ್ “ಪ್ರೇಮಗಂಗೆ” Read Post »

ಕಾವ್ಯಯಾನ

ಸುತ (ಸುರೇಶ ತಂಗೋಡ) ಅವರ ಕವಿತೆ “ಸಿಹಿಸುಳ್ಳುಗಳು”

ಕಾವ್ಯ ಸಂಗಾತಿ ಸುತ (ಸುರೇಶ ತಂಗೋಡ) “ಸಿಹಿಸುಳ್ಳುಗಳು” ಸಾವಿರಾರು ರೂಪಾಯಿಖರ್ಚು ಮಾಡಿಬಾಂಡು ತಂದೆನಂದ್ರ್ಅವ್ವ ಬೈತಾಳೆಂದು,ನೂರು ರೂಪಾಯಿಗೆ ತಂದೆನವ್ವಎಂದದ್ದು ನಾ ಹೇಳಿದ ಸುಳ್ಳು.. ಹೆಂಡತಿಗೆ  ಒಡವಿ ಕೊಡಿಸಿನೀವು ಹಬ್ಬಕ್ಕ ಏನು ತಗೋದಿಲ್ಲ ಏನ್?ಎಂದು ಕೇಳಿದಾಗನಂಗ್ಯಾಕ ಬಟ್ಟೆ ಬಹಳ ಅದಾವಅಂದದ್ದು ನಾ ಹೇಳಿದ ಸುಳ್ಳು… ಮಗ ಬೈಕ್ ಬೇಕು ಎಂದಾಗಬೈಕ್ ಹೋಡಿದ್ರೆ ಬೆನ್ನು ನೋಯಿತ್ತೆಎಂದು,ಸೈಕಲ್ ಕೊಡಿಸಿದ್ದುಮಗನಿಗೆ ನಾ ಹೇಳಿದ ಮೊದಲ ಸುಳ್ಳು.. ಮಗಳಿಗೆ ಮದುವೆ ಮಾಡುವಾಗಇರೋ ಬರೋ ಆಸ್ತಿ-ಹಣಕೂಡಿಸಿ ಒಂದೊಳ್ಳೆ ಸಂಬಂಧ ನೋಡಿಇನ್ನೇನು ಗಂಡನ ಮನೆಗೆ ಕಳುಹಿಸುವಾಗತನ್ನಿಂದ ತಾನೇ ಗೊತ್ತಿಲ್ಲದೇಜಾರಿದ ಕಣ್ಣೀರು ಯಾಕೆ?ಎಂದ ಮಗಳಿಗೆಕಣ್ಣಾಗ ಧೂಳ್ ಬಿದ್ದೀರಬೇಕೆಂದಿದ್ದುನಾ ಹೇಳಿದ ಸಿಹಿ ಸುಳ್ಳು… ಕ್ಷಮಿಸಿ ನನ್ನ ಸುಳ್ಳುಗಳುನನ್ನವರ ಸಂತೋಷಕ್ಕೆಬೇರೆವರ ನೋವಿಗಲ್ಲ. ಸುತ (ಸುರೇಶ ತಂಗೋಡ)

ಸುತ (ಸುರೇಶ ತಂಗೋಡ) ಅವರ ಕವಿತೆ “ಸಿಹಿಸುಳ್ಳುಗಳು” Read Post »

You cannot copy content of this page

Scroll to Top