ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು”

ಕಾವ್ಯ ಸಂಗಾತಿ ಸಿ.ಎಚ್.ಮಧುಕುಮಾರ “ಕವಿಪತ್ನಿಯ ಅಳಲು” ಸಂಸಾರದ ನೊಗಭಾರವ ನನ್ನೊಬ್ಬಳಿಗೇ ಹೊರಿಸಿಅಕ್ಷರ ಜಾತ್ರೆಗಳಲಿ ಜೋಳಿಗೆ ಹಿಡಿದುಊರೂರು ಸುತ್ತುವ ಅರೆಜೋಗಿಯೇಬೆಚ್ಚಿಬೀಳಿಸುವ ನಿನ್ನ ಕವಿತೆಯ ಕೊನೆಯ ಸಾಲುಗಳನೆನೆನೆನೆದು ಹಣ್ಣಾಗಿರುವೆಈ ಹೆಣ್ಣಿಗಾಗಿ ಚೂರು ಸಮಯವಿದೆಯೆ? ನೀನಿತ್ತ ಆ ಎರಡು ಮಕ್ಕಳೋನಿನ್ನದೇ ಅಪರಾವತಾರ ಎಂಬಂತೆಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುತ್ತಿವೆ!ನಿಭಾಯಿಸಲು ಹೊಸ ಭಾಷ್ಯ ಬರೆಯಬೇಕಿದೆ ಚೂರು ಸಮಯವಿದೆಯೆ? ನನ್ನ ದಾರಿ ಸುಗಮಗೊಳಿಸಲು? ಕವಿಯ ಸ್ಪೂರ್ತಿಯ ಮೂಲ ‘ಕವಿಪತ್ನಿಯೇ ಇರಬೇಕೆಂದು’ಹಾಲು,ತರಕಾರಿ.ದಿನಸಿ ತರಲೆಂದು ಹೊರಹೋದಾಗಲೆಲ್ಲನಿಮ್ಮದೆ ಓದುಗರು ಕಣ್ಣಭಾಷೆಯಲಿ ಪ್ರತಿಕ್ರಿಯಿಸುತ್ತಿದ್ದಾರೆ!ಅರ್ಥೈಸಿಕೊಳ್ಳಲಾಗುತ್ತಿಲ್ಲ ಚೂರೇ ಚೂರು ಸಮಯವಿದ್ದರೆಬಂದು ಬಿಡಿ ಒಂದು ಬಾರಿ ನನ್ನೊಂದಿಗೆ. ಅರಿಸಿನ ಕುಂಕುಮ ತೆಗೆದುಕೊಳ್ಳಲುಮನೆಗೆ ಬರುವ ಮುತ್ತೈದೆಯರು ಕೇಳುತಿಹರು ನಿಮ್ಮನ್ನುನಿಮ್ಮ ನಗು, ಹರಟೆಯ ಗಂಟು ಮೂಟೆ ಕಟ್ಟಿಹೊರಟು ಬನ್ನಿ ಮನೆಗೆನಿಮ್ಮೆಲ್ಲ ಕವಿತೆಯ ಪ್ರಸವಗಳು ಇಲ್ಲಿಯೇ ಆಗಲಿ! – ಸಿ.ಎಚ್.ಮಧುಕುಮಾರ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು” Read Post »

ಕಾವ್ಯಯಾನ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ

ಕಾವ್ಯ ಸಂಗಾತಿ ಡಾ ಬಿ ಎನ್‌ ತಾರಾ ಧಾರವಾಡ “ಸಾವ ತುಟಿಯೂ ನಗು ಹೊತ್ತಿರಬೇಕು” ಬದುಕು ಹೆಂಗಿರಬೇಕು,ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕು.ಹಸಿವು ಅಸಾಧ್ಯವಾದರೂಆಸೆಯ ದೀಪವೊಂದುಎದೆಯಲಿ ಹೊತ್ತಿರಬೇಕು.ಬಿದ್ದೆವೆಂದು ಭಯಪಟ್ಟು ಮೌನವಾದರೆ,ಬದುಕು ಪಾಠಕಲಿಸೋದಿಲ್ಲ.ಕಣ್ಣೀರ ಹನಿಗಳು ನೆಲ ಸೇರುವ ಮುನ್ನ, ಮುತ್ತಾಗುವಷ್ಟುಮೌಲ್ಯವಿರಬೇಕು.ಹಾರದೆ ಮುರಿದ ಕನಸುಗಳ  ಹೊಸ ಕನಸಿನ ಬೀಜ ಮೊಳಕೆಯೊಡೆಯಬೇಕು.ನೋವಿನ ಪ್ರತಿಯೊಂದು ಹೆಜ್ಜೆಯ ಹಿಂದೆಯೂ,ಅರ್ಥವುಮೌನವಾಗಿ ನಗಬೇಕು.ಸೋಲಿನ ನೆರಳು ಮೇಲೆ ಬಿದ್ದರೂ,ಕಾಲದ ಹೊಡೆತಎದೆ ಚೂರಿದರೂಧೈರ್ಯವೆಂಬ ಬೇರು ಇರಬೇಕು. ನಗು  ನಗುತಿರಬೇಕು ಸಾವಿರ ನೋವಿಗೆಉತ್ತರವಾಗಬೇಕು.ಕೊನೆಯ ಉಸಿರಿನ ಕ್ಷಣದಲ್ಲೂ,ಜೀವನ ಜಯಿಸಿದತೃಪ್ತಿಯಿರಬೇಕು.ಸಾವ ಬಂದಾಗದೇಹ ಮೌನವಾದರೂ,ಮನಸ್ಸು ಮಾತ್ರ ರಾಗ ಹಾಡುತ್ತಿರಬೇಕು. ಬದುಕಿದ ಜೀವಕ್ಕೆಸಾವ ತುಟಿಯೂನಗುವ ಹೊತ್ತಿರಬೇಕು.ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕ,ಕಣ್ಣೀರ ಹನಿಗಳುನೆಲ ಸೇರುವ ಮುನ್ನ,ಮುತ್ತಾಗುವಷ್ಟ ಮೌಲ್ಯವಿರಬೇಕು.ಆಕಾಶಕ್ಕೆ ಹಾರದೆ ,ಹೊಸ ಕನಸಿನ ಬೀಜನೋವಿನ ಪ್ರತಿಯೊಂದುಹೆಜ್ಜೆಯ ಹಿಂದೆಯೂ,ಅರ್ಥ ಮೌನವಾಗಿ ನಗಬೇಕು.ಭ್ರಮಿಸಬಾರದು.ಕಾಲದ ಹೊಡೆತ ಎದೆ ಚೂರಿದರೂ ಸಹ,ಧೈರ್ಯವೆಂಬ ನಡುಗದ ಬೇರು ಇರಬೇಕು. ನಗು ಸಣ್ಣದಾದರೂ ಸಾಕು,ಅದು ಸಾವಿರ ನೋವಿಗೆ ಉತ್ತರವಾಗಬೇಕು. ಉಸಿರಿನ  ಕ್ಷಣದಲ್ಲೂ,ಜೀವನ ಜಯಿಸಿದೆವೆಂಬ ತೃಪ್ತಿಯಿರಬೇಕು.ಮನಸ್ಸು  ಹಾಡುತ್ತಿರಬೇಕು.ಸಾವ ತುಟಿಯೂನಗುವ ಹೊತ್ತಿರಬೇಕು. ಡಾ ತಾರಾ ಬಿ ಎನ್ ಧಾರವಾಡ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ನೆನಪಾಗುತ್ತಾರೆ” ಗೆಳೆಯರೆಸತ್ಯ ಶುದ್ಧತೆಗೆಇಲ್ಲ ಬೆಲೆ ಗೌರವಉಪ್ಪಿನಲ್ಲಿ ಕಾಣದ ಇರುವೆಗಳುಸಕ್ಕರೆಯಲ್ಲಿ ಮುಕ್ಕುತ್ತವೆ.ಹಾಲು ಮಾರುವವನುಓಣಿ ಕೇರಿ ತಿರುಗಬೇಕುಹಾಲು ಕೊಳ್ಳುವವರು ಕೇಳುತ್ತಾರೆನೀರೆಷ್ಟು ಬೆರೆಸಿದೆಯೆಂದುಆಲ್ಕೊಹಾಲ್ ಮಾರುವವನಅಂಗಡಿಯಲ್ಲಿ ಜನ ಜಂಗುಳಿಅವರೆ ಸಾರಾಯಿಯಲ್ಲಿನೀರು ಸೋಡಾ ಬೆರೆಸಿ ಸಂಭ್ರಮಿಸುತ್ತಾರೆಮನುಷ್ಯನಿಗೆ ಪಶುವೆಂದರೆಎಲ್ಲಿಲ್ಲದ ಕೋಪಸಿಂಹ ಹುಲಿಯೆಂದರೆಹಿಗ್ಗಿ ಕುಣಿಯುತ್ತಾನೆ.ಪಾಪ ಅವನಿಗೆ ಗೊತ್ತಿಲ್ಲಅವುಗಳು ಪಶುವೆಂದುತಿಳಿ ನೀರಿನಲ್ಲಿ ಎಂದೂ ಮೀನು ವಾಸಿಸುವುದಿಲ್ಲಕೊಳಚೆಯಲ್ಲಿ ಅವುಗಳ ಸಂತೆಸತ್ಯ ಹೇಳುವವನಿಂದುಒಂಟಿಯಾಗುತ್ತಿದ್ದಾನೆಸುಳ್ಳಿಗೆ ಸನ್ಮಾನದ  ಪಟ್ಟನೆನಪಾಗುತ್ತಾರೆಬುದ್ಧ ಬಸವ ಬಾಪುಸತ್ಯ ಹೇಳಿ ಬಿಟ್ಟು ಹೋದರು ಜಗವ ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ ಅವರ ಕವಿತೆ “ನೆನಪಾಗುತ್ತಾರೆ” Read Post »

ಕಾವ್ಯಯಾನ

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ಅವನು ಬಾಳ ಪುಸ್ತಕಕೆ ಮುನ್ನುಡಿ ಬರೆದಿದ್ದಾನೆಬದುಕಿನ ಪುಟ ಪುಟಕೂ ಚೆನ್ನುಡಿ ಬರೆದಿದ್ದಾನೆ ಲೋಕದ ಸುಖವೆಲ್ಲ ನನಗೆ ಇರಲೆಂಬ ಹಂಬಲಮುಖಪುಟಕೆ ಬಣ್ಣ ತುಂಬಿ ನಲ್ನುಡಿ ಬರೆದಿದ್ದಾನೆ ಅನಂತತೆಯ ಹರವಿನಲಿ ನಾನೊಂದು ಬಿಂದುಅಕ್ಷರ-ಅಕ್ಷರ ಸರಿಪಡಿಸಿ ಹೊನ್ನುಡಿ ಬರೆದಿದ್ದಾನೆ ತಾನೆಟ್ಟ ಸಸಿ ಆಗಸದೆತ್ತರಕೆ ಹಬ್ಬಲೆಂಬ ಆಶಯ ಉಳಿಯಲೆಂದು ಕಾಪಿಟ್ಟು ಜೇನ್ನುಡಿ ಬರೆದಿದ್ದಾನೆ ಬೆರಗಿನಲ್ಲಿ ಜಗವಿದನು ಓದಬೇಕೆಂಬ ಹರಕೆ ಅವನದುಮುಗುದೆ ಅರುಣಾಳ ಬೆನ್ನು ತಟ್ಟಿ ಬೆನ್ನುಡಿ ಬರೆದಿದ್ದಾನೆ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ”

ಕಾವ್ಯ ಸಂಗಾತಿ ಡಾ. ಪುಷ್ಪಾವತಿ ಶಲವಡಿಮಠ “ಶರಣಾಗಿರುವೆ ನಿನಗೀಗ” ಓ ಮೌನವೇ! ಮಹಾಮೌನವೇ!ನೀರವ ನಿರಾಳ ಮೌನವೇ!ಬಾ ನನ್ನೆದೆಯಾಳದಲಿನಿಶ್ಚಲವಾಗಿ ನೆಲೆಸುಶರಣಾಗಿರುವೆ ನಿನಗೀಗಸೋತು ಬಂದಿರುವೆ ನಿನ್ನ ಬಳಿಗೀಗಕರುಣೆದೋರು ದಯೆತೋರಿ|| ಓ!ಅನಂತ ಮಹಾಮೌನವೇ!ನಿನ್ನ ಮೌನಗರ್ಭದಲಿ ಮಿಸುಕಾಡುತಿರುವಭಾವಕೂಸುಗಳೆಲ್ಲ ಸುಂದರ ಪದಗಳೇಒಂದೊಂದು ಮೌನ ಮಹಾಕಾವ್ಯಗಳೇ|| ತೀಡಿ ಬಂದ ತಂಗಾಳಿಯುತೂಗಿ ತಂದ ಮಣ್ಣ ಗಂಧವೆಲ್ಲಬಾಳ ಗಂಧವೇlತುಂಬಿ ಬಂದ ತಾಯ್ ಮಮತೆಯೆಲ್ಲಮಡಿಲ ಮಗುವಿಗೆ ಜೋಗುಳವೇ lಮೌನದ ಬಿಸಿ ಅಪ್ಪುಗೆಯದುಸುಂದರ ಭಾಷೆಯೇ ll ಪ್ರಕೃತಿಯ ಭಾಷೆಯೆಲ್ಲವೂ ಮೌನವೇlಮೊಗ್ಗೆಯೊಡೆದು ಅರಳುವ ಅರಳೇ!ಒಲವಿನ ಬೆಳಕೇ!ಸದ್ದಿಲ್ಲದೇ ನಡೆಯುವ ಸಂಭ್ರಮವೇ! ಓ ಮೌನವೇ!ಸೂರ್ಯೋದಯ ಚಂದ್ರೋದಯನಿನ್ನ ಪದ ಲಾಲಿತ್ಯವೇ lದಣಿದ ಮನಗಳಿಗೆ ನಿನ್ನ ಮಡಿಲದುಹೂವಿನ ಹಾಸಿಗೆಯೇ ll ಗಾಳಿಯ ಮೃದು ಸ್ಪರ್ಶಕೆ ತೂಗುವಸಸ್ಯ ಕುಲವೇ ಭೂ ದೇವಿಯ ದಣಿವಿಗೆಬೀಸಿದ ಮೌನ ಚಾಮರವೇ llಅಯ್ಯೋ!ಗಳಿಗೆಗೊಂದು ತೆರೆ ಬಂದುಕಲಕುತಿದೆ ಕಡಲ ಧ್ಯಾನವನೆ lಹಕ್ಕಿಗಳಿಂಚರವದು ತೇಲಿ ಬಂದುಕದಡುತಿದೆ ಅನಂತಕಾಲದ ಬನದ ತಪವನೆ lನೀರವತೆಯಲೂ ಮೌನವೇಸದ್ದಿನಲ್ಲೂ ನಿದ್ದೆಯೇ lಮೌನವೇ ಇದೆಲ್ಲ ನಿನ್ನ ಲೀಲೆಯೇ ll ಋಷಿಮುನಿಗಳ ಕವಿಪುಂಗವರೆದೆಯಲಿವಿರಮಿಸಿದ ಮಾತೆಯೇ!ಮೌನ ತಪಸ್ವಿನಿಯೇ!ಜಗದ ಸುಂದರ ಭಾಷಿಣಿ ನೀನೆಯೇ llಕರುಣೆದೋರಿ ಬಾ ನನ್ನೊಳಗೆ ತಾಯಿಯೇ lಮೌನದೇವಿಯೇ!ಅನಂತಯಾನಕೆ ಮೌನದಲಿಕೈಹಿಡಿದು ನಡೆಸೆನ್ನನುl ಶರಣಾಗಿರುವೆ ನಾನೀಗ ನಿನಗೆಓ!ಮೌನದೇವತೆಯೇನಾನೀಗ ಶರಣಾಗಿರುವೆ ನಿನ್ನಡಿಗಳಿಗೆಓ!ಮೌನ ದೇವತೆಯೇಶರಣಾಗಿರುವೆ ನಿನಗೀಗ ಶರಣಾಗಿರುವೆ. ಡಾ. ಪುಷ್ಪಾವತಿ ಶಲವಡಿಮಠ

ಡಾ. ಪುಷ್ಪಾವತಿ ಶಲವಡಿಮಠ ಅವರ ಕವಿತೆ, “ಶರಣಾಗಿರುವೆ ನಿನಗೀಗ” Read Post »

ಕಾವ್ಯಯಾನ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಜಾತಿಭೂತ” ಹಿಡ್ಕೊಂಡದ ಬಡ್ಕೊಂಡದಹಾಳು ಜಾತಿಯ ಭೂತ,ಅದರ ಬೆನ್ನು ಹತ್ತಿ ಹತ್ತಿಯೇಈ ಮನುಷ್ಯಾ ಸೋತ ಮ್ಯಾಲ ಮ್ಯಾಲಂತ ಇವ್ರುತುಂಬಾ ಮೆರಿಲಾಕತ್ತಾರ,ಕೀಳ ಕೀಳ ಅಂತ ಅವ್ರನತುಂಬ ತುಳಿಲಾಕತ್ತಾರ ಖೊಟ್ಟಿ ಮಂದಿ ಎಲ್ಲ ಸೇರಿಗಟ್ಟ್ಯಾನ ಗ್ವಾಡಿ ಕಟ್ಟ್ಯಾರ,ಆರಕ ಜೋತ ಬಿದ್ದ ಮ್ಯಾಲಇದ್ದ ಮೂರನ್ನೂ ಬಿಟ್ಟಾರ ಜಾತಿಯ ಹೆಸರಲ್ಲಿ ಎಷ್ಟೋಜೀವಗಳ ಬಲಿ ಕೊಟ್ಟಾರ,ದೇವ್ರು ದಿಂಡ್ರೆಲ್ಲವು ಕೂಡಜಾತಿಗಿ ಸೇರಿಸಿ ಬಿಟ್ಟಾರ ಭೂಮಿ ಮ್ಯಾಲ ಏನಂತಇಂತವರೆಲ್ಲ ಹುಟ್ಟ್ಯಾರ,ಜಾತಿ ಜಾತಿ ಅಂತಾ ಹೇಳಿಮನುಷ್ಯತ್ವವ ಸುಟ್ಟಾರ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಕವಿತೆ “ಜಾತಿಭೂತ” Read Post »

ಕಾವ್ಯಯಾನ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ”

ಕಾವ್ಯ ಸಂಗಾತಿ ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ”. ಮರಿ ಹಕ್ಕಿಗೆ ರೆಕ್ಕೆಗಳಿವೆಎಲ್ಲವನು ಎದುರಿಸುವಛಲವಿದೆಆಗಸದೆತ್ತರಕ್ಕೆ ಏರುವಆಕಾಂಕ್ಷೆಯಿದೆರೆಕ್ಕೆಯ ಶಕ್ತಿಗೆ  ಅನುಮತಿಗಿಂತಪ್ರೀತಿ ವಿಶ್ವಾಸದಆರೈಕೆಯಿರಲಿಬಾನೆತ್ತರಕೆ ಹಾರಬೇಕಾದಒಲವಿರಲಿಜೊತೆಯಿರುವೆನೆಂಬ ಭರವಸೆಯಿರಲಿಸಂವಾದದಸಂವೇದನೆಯಿರಲಿ. ಪ್ರೊ. ರಾಜೇಶ್ವರಿ ಶೀಲವಂತ ಪುಣೆ

ಪ್ರೊ. ರಾಜೇಶ್ವರಿ ಶೀಲವಂತ ಪುಣೆ “ಸಂವೇದನೆ” Read Post »

ಕಾವ್ಯಯಾನ

“ಹೌದು, ಗಂಡಸರೆ ಹೀಗೇ!!” ಸರಸ್ವತಿ ಕೆ ನಾಗರಾಜ್

ಕಾವ್ಯ ಸಂಗಾತಿ ಸರಸ್ವತಿ ಕೆ ನಾಗರಾಜ್ “ಹೌದು, ಗಂಡಸರೆ ಹೀಗೇ!!” ಗಂಡಸರು ಸ್ವಲ್ಪ ಕೆಟ್ಟವರೇ ಹೌದು,ಆದರೆ ಜವಾಬ್ದಾರಿಯ ಸಾಹುಕಾರರು.ಮಾತಿನಲ್ಲಿ ಕಠಿಣತೆ ಇದ್ದರೂ,ಮನದೊಳಗೆ ಕರ್ತವ್ಯದ ಭಾರ ಹೊತ್ತವರು. ಹೌದು, ಅವರು ಕೆಟ್ಟವರೇ ಸರಿ,ಭಾವನೆ ತೋರಿಸೋದು ಅವರು ಕಲಿತಿಲ್ಲ.ನೋವುಗಳನ್ನು ನಗು ಮುಖಕ್ಕೆ ಮರೆಸಿಕೊಂಡು,ಜೀವನದ ಹೊರೆ ಹೊತ್ತು ನಡೆಯುವವರು. ತಮ್ಮ ಕನಸುಗಳನ್ನು ಬಲಿಕೊಟ್ಟು,ಕುಟುಂಬದ ನಗುವಲ್ಲಿ ಸಂತೋಷ ಕಂಡವರು.ಮೌನದಲ್ಲೇ ಪ್ರೀತಿ ತೋರಿ,ನಗುವ ಮಾರಿಯೇ ಬದುಕಿದವರು. ಕಣ್ಣೀರು ಕಣ್ಣಲ್ಲಿ ನಿಂತರೂ,“ನಾನು ಬಲಿಷ್ಠ” ಎನ್ನುವ ಮುಖವಾಡ.ಕುಟುಂಬದ ನಾಳೆಗೆ ಆಶ್ರಯವಾಗಿ,ಇಂದಿನ ನೋವನ್ನು ನುಂಗಿದವರು. ಹೆಣ್ಣಿಗೆ ಸಹಾಯ ಮಾಡಿದರೆ,ಅವನು “ಕಾಮುಕ” ಎಂಬ ಬಿರುದು.ಉದ್ದೇಶದ ಪಾವಿತ್ರ್ಯ ಕಾಣದೆ,ಸಮಾಜವೇ ತೀರ್ಪು ಬರೆಯುವುದು. ಒಳ್ಳೆಯತನಕ್ಕೂ ಸಂಶಯದ ಕಣ್ಣು,ಸಹಾಯಕ್ಕೂ ತಪ್ಪು ಅರ್ಥ.ಮೌನವಾಗಿ ಹಿಂದೆ ಸರಿದು,ತಮ್ಮ ಮನಸನ್ನೇ ಮುಚ್ಚಿಕೊಂಡವರು. ಹೌದು ಗಂಡಸರೆ ಹೀಗೆ ಅವರು ದೂರ ಉಳಿದರು,ಭಾವನೆ ತೋರಿಸೋ ಧೈರ್ಯ ಕಳೆದುಕೊಂಡರು.ತಪ್ಪಾಗಿ ಅರ್ಥವಾಗುವ ಭಯದಲ್ಲಿ,ಒಳ್ಳೆಯತನವನ್ನೇ ಮರೆಮಾಚಿಕೊಂಡರು.  ಹೌದು ಗಂಡಸರೆ ಹೀಗೆ,ಅತ್ತರು ಅವಮಾನ, ನಕ್ಕರು ಅವಮಾನ,ಭಾವನೆ ತೋರಿಸದಿದ್ದರೆ,ಕಲ್ಲು ಹೃದಯದವರು. ಅವರಿಗೆ ಯಾರೂ ಹೇಳಲಿಲ್ಲ,“ನಿನ್ನ ಅಳುವಿಗೂ ಅರ್ಥ ಇದೆ” ಎಂದು.ಕಣ್ಣೀರಿಲ್ಲದೇ ಅಳುವುದನ್ನ ಕಲಿತು,ಹೃದಯವನ್ನೇ ಸಮಾಧಿ ಮಾಡಿಕೊಂಡವರು.ಈ ಗಂಡಸರು. ಹೌದು ಈ ಗಂಡಸರೆ ಹೀಗೆ ಸರಸ್ವತಿ ಕೆ ನಾಗರಾಜ್.

“ಹೌದು, ಗಂಡಸರೆ ಹೀಗೇ!!” ಸರಸ್ವತಿ ಕೆ ನಾಗರಾಜ್ Read Post »

ಕಾವ್ಯಯಾನ

ಮನ್ಸೂರ್ ಮುಲ್ಕಿ ಅವರ ಕವಿತೆ “ಆ ರಾತ್ರಿ”

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ “ಆ ರಾತ್ರಿ” ಆ…. ರಾತ್ರಿ… ಯಾಕೇ… ಹೀಗೆಕಡಲ ತೆರೆಯ ಶಬ್ದದ ಹಾಗೆ….ತೆರೆಯನೊರೆಯು ತಟವ ಸೇರಿದ ಹಾಗೆ..ಕತ್ತಲೆಯಲ್ಲಿ ಮೌನವೇ ಮಾತಾಡಿದ ಹಾಗೆ ನಿನ್ನ ಕಣ್ಣೊಳಗಿನ ಬೆಳಕಿನಲಿನನ್ನ ಕನಸು ಕರಗಿದ ಹಾಗೆತುಟಿಗಳ ಅಂಚಿನ ನಗುವಿನಲಿನನ್ನ ಮನಸು ನಾಚಿದ ಹಾಗೆ ನಿನ್ನ ಉಸಿರಿನ ಬೆಚ್ಚನೆಯಲಿನಾ ನನ್ನ ಮರೆತ ಹಾಗೆನಿನ್ನ ಹೃದಯದ ಬಡಿತಕೆನನ್ನ ಹೃದಯ ನೃತ್ಯ ಮಾಡಿದ ಹಾಗೆ ನಿನ್ನ ಬೆರಳ ಬಂಧನದಲ್ಲಿನನ್ನ ಅಲಂಕಾರ ಕಂಡ ಹಾಗೆನಿನ್ನ ಎದೆಗೆ ತಲೆಬಾಗಿನನ್ನುಸಿರನು ಚೆಲ್ಲಿದ ಹಾಗೆ ನಿನ್ನ ತುಟಿಗಳ ಮೌನನನ್ನೊಡಲ ಮಧುರತೆಯ ಹಾಗೆಈ ಪ್ರೀತಿಯ ರಾತ್ರಿಯ ಅಂಗಳದಲ್ಲಿನಿನ್ನಲ್ಲಿ ನಾನು ಲೀನವಾದ ಹಾಗೆ. ಮನ್ಸೂರ್ ಮುಲ್ಕಿ

ಮನ್ಸೂರ್ ಮುಲ್ಕಿ ಅವರ ಕವಿತೆ “ಆ ರಾತ್ರಿ” Read Post »

ಕಾವ್ಯಯಾನ

ವ್ಯಾಸ ಜೋಶಿ ಅವರ ತನಗಗಳು

ಕಾವ್ಯ ಸಂಗಾತಿ ವ್ಯಾಸ ಜೋಶಿ ತನಗಗಳು ಮಳೆ ಹೊಯ್ದ ವರುಣಸೂರ್ಯನ ಕಳಿಸಿದಹಸಿಯಾದ ಭೂಮಿಯುಹದವಾಗಿದೆನೆಂದ? ಬಿಸಿ ಕೊಟ್ಟ ರವಿಯುಹೂವು ಅರಳಿಸಿದಸಂಜೆ ಹೊತ್ತಾಗುತಾತಾನೇ ನಾಚಿ ಕೆಂಪಾದ. ಮಳೆ ಸುರಿಸಿ ಬಾನುಇಳೆಗೆ ಇಣುಕಿತುಚಿಗುರೊಡೆದ ಭೂಮಿಧನ್ಯವಾದ ಹೇಳಿತು. ಹುಲುಸಾದ ಭೂಮಿಗೆಸಂಕ್ರಾಂತಿಯೇ ಸೀಮಂತಸಲಹುವ ಭೂತಾಯಿಕಕ್ಕುಲಾತಿ ಹೃದಯಿ. ಕೀಟವ ತಿಂದ ಹಕ್ಕಿಬೆಳೆಯ ರಕ್ಷಿಸಿತುಮಾಗಿದ ತೆನೆ ತುಂಬಿಮೃಷ್ಟಾನ್ನಪಡೆಯಿತು. ಬೆವರು ಸುರಿಸುತಕಷ್ಟಪಡೋ ರೈತನುಸಾಲ-ಶೂಲವಾದರೂಅನ್ನ ಕೊಡೋ ದಾತನು. ವ್ಯಾಸ. ಜೋಶಿ.

ವ್ಯಾಸ ಜೋಶಿ ಅವರ ತನಗಗಳು Read Post »

You cannot copy content of this page

Scroll to Top