ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ ಮನುಷ್ಯನೇಕೆ ಹೀಗೆ? ಯಾವುದೊಂದು ಬದಲಾಗಿಲ್ಲಮನುಷ್ಯನನ್ನು ಹೊರತು,ಎಷ್ಟು ಹೇಳಿದರೂ ಸಾಲದಲ್ಲಈ ಬಲುಬುದ್ಧಿಯ ಕುರಿತು ಹಕ್ಕಿಯಂತೆ ಹಾರಲು ಕಲಿತುಮೀನಿನಂತೆ ಈಜಲೂ ಬಲ್ಲ,ಮಂಗಳನ ಅಂಗಳದಿ ಇಳಿದುಎಲ್ಲವ ಕಂಡುಹಿಡಿದಿಹನಲ್ಲ ಮೋಡ ಬಿತ್ತನೆ ಮಾಡಿಹನಲ್ಲಮೌಢ್ಯತೆಯ ಬಿಡಲೇ ಇಲ್ಲ,ವಿಜ್ಞಾನ,ತಂತ್ರ ಬೆಳೆದಿವೆಯಲ್ಲಮಾಟ ಮಂತ್ರ ನಿಂತೇ ಇಲ್ಲ ಏನೆಲ್ಲ ಮನುಷ್ಯ ಮಾಡಿದನಲ್ಲಮನುಷ್ಯನಂತೆ ಬದುಕೇ ಇಲ್ಲ,ಹೊರಗಣ್ಣು ತೆರೆದು ನಿಂತಿಹನಲ್ಲಒಳಗಣ್ಣವು ಮುಚ್ಚಿವೆಯಲ್ಲ ಮನುಷ್ಯತ್ವವನೇ ಮರೆತಿಹೆವಲ್ಲಮಂಗನ ಜೊತೆ ಬೆರೆತಿಹೆವಲ್ಲ,ಈ ಜನ್ಮ‌ ದೊಡ್ಡದು ಅನತಾರಲ್ಲದಡ್ಡರಂತೆಯೇ ಬದುಕಿಹೆವಲ್ಲ ಎಮ್ಮಾರ್ಕೆ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ Read Post »

ಕಾವ್ಯಯಾನ

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್

ಕಾವ್ಯ ಸಂಗಾತಿ ಗುಣಾಜೆ ರಾಮಚಂದ್ರ ಭಟ್ “ಪೊಡವಿ ಸಗ್ಗ” ಏಳೆ ಕವನ-*ಛಂದಸ್ಸು: ಏಳೆ:೫೪೩/543/ ಜಗವಿದು ನಮ್ಮದು ಸೊಗಸಿದೆ ಕಾಣಲುಖಗಗಳ ಕಂಡು ಗಗನದಿ.. ಮೂಡುವ ನೇಸರ ಬಾಡದ ಚೇತನಕಾಡಿನ ಹಸಿರು ನಂದನ .. ನೀಲಿಯ ಕಡಲಿದೆ ನಾಲೆಯ ಹರಿವಿದೆಕಾಲನ ನಡೆಯು ಸಂತತ .. ಹರಿಯುವ ನದಿಗಳು ಕರೆಯುವ ಹಸುಗಳುಸುರಿಸುವ ನೋಟ ಸುಂದರ ಕೆಂಪಿನ ಹೂಗಳು ಕಂಪನು ಪಸರಿಸಿತಂಪನು ನೀಡಿ ಸಾನಂದ.. ಬಣ್ಣದ ಕುಸುಮವು ಕಣ್ಣನು ತುಂಬುತಬಣ್ಣಿಸೆ ಕವನ ಹೊಳಪಂತೆ.. ಮಿಗಗಳು ಕೋಟಿಯ ಅಗಣಿತ ಲೆಕ್ಕದಿಮಿಗಿಲಾದ ಸೃಷ್ಟಿ ವಿಸ್ಮಯ ಜೀವಿಗೆ ಬಾಳಲು ನಾವಿಹ ಭೂಮಿಯೆತಾವಿದು ಸಗ್ಗ ನಮಗೆಲ್ಲ.. ಮಾನವ ಶ್ರೇಷ್ಠನು ದಾನವನಾದರೆಕಾನನ ರಾಜ್ಯ ತಪ್ಪದು.. ——– ಗುಣಾಜೆ ರಾಮಚಂದ್ರ ಭಟ್

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್ Read Post »

ಕಾವ್ಯಯಾನ

“ನೀತಿ ನಿಯಮ” ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನೀತಿ ನಿಯಮ” ಹಗೆಯ ಸಾಧಿಸ ಬೇಡ,ಜಿದ್ದಿಗೆ ಹೊರಳಾಡ ಬೇಡ,ತಗ್ಗಿ ಮುನ್ನಡೆದರೆ ಜಯವಿದೆ,! ಶತ್ರುತ್ವವೆಂದೂ ಬೇಡ,ಸಂಶಯಕ್ಕೆ ಎಡೆಯು ಬೇಡ,ಅರಿತು ಬಾಳಿದಾಗ ಜಯವಿದೆ,! ಮಿತ್ರತ್ವವೇ ಮುತ್ತಿನ ಹಾರ,ದುಷ್ಟ ಶಕ್ತಿಗಳ ಅದು ಸಂಹಾರ,ಬೆರೆತು ಬಾಳಲು ನಮಗೆ ಜಯವಿದೆ.! ದೇವನೆಂದೂ ಗೊಂದಲವಲ್ಲ,ಧರ್ಮವೆಂದೂ ಕಚ್ಚಾಡಿ ಕೊಳ್ಳಲಲ್ಲ,ನೀತಿ ನಿಯಮ ಪಾಲಿಸಲು ಜಯವಿದೆ.! ಹಮೀದ್ ಹಸನ್ ಮಾಡೂರು.

“ನೀತಿ ನಿಯಮ” ಹಮೀದ್ ಹಸನ್ ಮಾಡೂರು Read Post »

ಕಾವ್ಯಯಾನ

ಅವನಲ್ಲ ಅವಳು! ಸುರೇಶ ತಂಗೋಡ

ಕಾವ್ಯ ಸಂಗಾತಿ ಸುರೇಶ ತಂಗೋಡ ಅವನಲ್ಲ ಅವಳು! ನಡುವಿನ ಉಡುದಾರಕಿತ್ತೊಗೆದುಕಾಲಿಗೆ ಗೆಜ್ಜೆ ಕಟ್ಟಿರುವೆಕೈಗೆ ಬಳೆ ಹಾಕುವಹೊತ್ತಿಗೆದೂರದಲೆಲ್ಲೊ ಅಪಸ್ವರ.// ಹಣೆಗೆ ವಿಭೂತಿಯಬದಲು ಕುಂಕುಮದ ಬೊಟ್ಟಿಟ್ಟೆತುಂಡು ಕೂದಲು ಉದ್ದ  ಬಿಟ್ಟೆಗಂಡಸರುಡುವ ಬಟ್ಟೆಯನ್ನು ಬದಲಿಸಿದೆಸೀರೆಯ ಸೆರಗೂ ಇಷ್ಟವಾಯಿತು.ನಾಚಿಕೆ ಮೂಡಿತುಶ್! ನನ್ನ ಮೇಲಲ್ಲ ಸಮಾಜದ ಮೇಲೆ.// ನನ್ನೊಳಗಿನ  ಹೆಣ್ತನವ ಕಾಪಿಡಲುನಾನು ಅದೇಷ್ಟು ಸತ್ತು ಬದುಕಿದ್ದೇನೆ.ಕುಂತು ಮೂತ್ರ ಮಾಡುವಾಗಬೆರಳುಗಳಿಗೆ ನೆಲ್ ಪಾಲಿಸ್ ಹಾಕಿಕೊಳ್ಳುವಾಗಕೊರಳಿಗೆ ಸರ ತೊಡುವಾಗವಿಚಿತ್ರವಾದ ಹಿಂಸೆ ನನಗೆ.// ಸೃಷ್ಟಿಯೊಳಗಿನ ಅದ್ಭುತ ನಾನೆಂದುಹೇಳಲು ಅವಕಾಶ ನೀಡಲಿಲ್ಲಸೌಂದರ್ಯ ನನ್ನಾಸ್ತಿಎಂದು ತೋರಿಸಲುಸಮಯ ನೀಡಲಿಲ್ಲಮಂಗಳಮುಖಿ ಎಂದುಅವಮಾನಿಸಿದರುಅಪಮಾನಿಸಿದರುಆದರೆನನಗೆ ನನ್ನ ಮೇಲೆ ಹೆಮ್ಮೆನಾನು ಅರ್ಧನಾರೀಸ್ವರನಪ್ರತಿರೂಪನನಗೂ ಸುಂದರ ಬದುಕಿದೆಬದುಕಿ ತೋರಿಸುವ ಛಲವಿದೆ. ಸುರೇಶ ತಂಗೋಡ

ಅವನಲ್ಲ ಅವಳು! ಸುರೇಶ ತಂಗೋಡ Read Post »

ಕಾವ್ಯಯಾನ

ಹನಿಬಿಂದು ಭಾವಗೀತೆ, ಪ್ರೀತಿ

ಕಾವ್ಯ ಸಂಗಾತಿ ಹನಿಬಿಂದು ಪ್ರೀತಿ ನನ್ನ ನಿನ್ನ ನಡುವೆ ಬಂಧಕಣ್ಣ ಸಂಚು ಮಾಡಿತುಸಣ್ಣ ಸಣ್ಣ ನೋಟವಿಂದುಬಣ್ಣದರ್ಥ ಕೊಟ್ಟಿತು ನಿನ್ನೆ ಯಾರೋ ಇದ್ದವರುಮುನ್ನ ಒಟ್ಟು ಸೇರಲುಸುಣ್ಣದಂಥ ಬಿಳಿಯ ಪ್ರೀತಿಮಣ್ಣ ಮೇಲೆ ಮೂಡಲು ಭಿನ್ನ ಭಾವ ಬದಿಗೆ ಸರಿಸಿತನ್ನ ನೋವನೆಲ್ಲ ಬೆರೆಸಿ ಜ್ಞಾನ ಧಾರೆ ಹೆಚ್ಚಿಸುತ್ತಾಹೃಣ್ಮನಗಳ ಜೊತೆ ಸೇರಿಸಿ ರನ್ನ ಮುದ್ದು ಆತ್ಮೀಯತೆಪುಣ್ಯ ಕಾರ್ಯ ಮಾಡುತಹೆಣ್ಣ ಜನ್ಮ ಸಾರ್ಥಕ್ಯದಹೊನ್ನ ಭಾವ ಮೂಡುತ ——– ಹನಿಬಿಂದು

ಹನಿಬಿಂದು ಭಾವಗೀತೆ, ಪ್ರೀತಿ Read Post »

ಕಾವ್ಯಯಾನ

“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ

ಕಾವ್ಯ ಸಂಗಾತಿ ವೈ.ಯಂ.ಯಾಕೊಳ್ಳಿ “ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ಇಲ್ಲಿ ಇದ್ದ ಮೇಲೆ ಏನೂತೊರೆಯಲಾಗದುಬೆನ್ನತ್ತಿ ಬಂದಿರುವದನುನಮ್ಮದೆ ಎಂಬುದಮರೆಯಬಾರದು ಬಿಡಲೆನು ಮೂರು ದಿನದಸಂತೆಯಲ್ಲ ಜೀವನದಾಟಬಡಿದಾಡಿ ಮುಗಿಸಲುಅಪರಿಚಿತರೊಡನೆ ಜಗಳವಲ್ಲಸಂಸಾರ ಕೂಟ ಒಡನೆ ಇದ್ದವರು ಬಿಡದೆಕಾಡುವರು ನಿಜದ ಮಾತುಅನಿವಾರ್ಯ ಹೊಂದಿಕೆಯೆಇಲ್ಲಿ‌ ಮುಖ್ಯ ಧಾತು ಯಾರನೆ ದೂಷಿಸುತ ಏನನೋನಿಂದಿಸುತ ಅತ್ತರೇನು ಬಂತುಹೊತ್ತು ತಂದ ತಟ್ಟೆಯಅನ್ನವ ನಾವೇ ಉಣ್ಣಬೇಕು ಎನಿತು ಬಡಿದಾಡಿದರೂ.ಎಷ್ಟು ಕಾದಾಡಿದರೂಅಂತಿಮ ನಿರ್ಣಯವಾಗದ ಯುದ್ದಯಾವ ನ್ಯಾಯಾಲಯದಲೂದಾವೆ ಹೂಡಿದರೂ ಉತ್ತರಸಿಗದ ವ್ಯಾಜ್ಯ ಹೃದಯದ‌ ಪ್ರಶ್ನೆಗಳಿಗುತ್ತರವಹೃದಯವೆ ಕೊಡಬೇಕುದೊರಕದು‌ ಬೇರೆಡೆಗೆಎನಿತು ಹುಡುಕಿದರೂ ತಾಜಮಹಲಿ ಮುಂದೆ ನಗುತರಾಜರಾಣಿಯಂತೆ ನಿಂತುತಗೆಸಿಕೊಂಡ ಪೋಟೊಬಂದು ಕಾಡುತ್ತವೆ ಆಗಾಗಎಲ್ಲರಿಗೂ ಕನಸಿನಲ್ಲಿಅದನೆ ನಿಜವೆಂದು‌ ನಂಬಿಹೊರಡಲಾಗದುಮರುದಿನದ ನನಸಿನಲ್ಲಿ ಹಾಗೆಂದುಮಧ್ಯ ರಾತ್ರಿಯಲಿಎದ್ದು ಹೋಗಲಸಾಧ್ಯಅದು ಕವಿತೆಕಥೆಯಲಷ್ಟೇ ಬರೆದದ್ದು ತೂತಿರುವ ದೋಸೆಯನೆ ಕತ್ತರಿಸಿ ತಿನ್ನುತ್ತಸುಖವ ಅನುಭವಿಸಬೇಕುಹರಿದ ಹಾಸಿಗೆಯನೆಹೊಲಿದು ಹೊದ್ದುಕೊಂಡುಮತ್ತೆ ಕನಸುಗಳ ಕಾಣಬೇಕು —–ವೈ. ಎಂ.ಯಾಕೊಳ್ಳಿ

“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ Read Post »

ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ”

ಕಾವ್ಯ ಸಂಗಾತಿ ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ” ಅಂದು ಇದೇ ಹಾದಿಯಲ್ಲಿಬೆಂದ ಕಾಲುಗಳುಬಸವಳಿದು ರೋಧಿಸಿದವುದಿಕ್ಕು ದಿಕ್ಕಿಗೂ ಕೂಗಿ ಕರೆದ ಧ್ವನಿಮರಳಿ ಬಂದಿತುನನ್ನದೇ ಕನಸುಗಳ ಹಾದಿಗೆಸಂತಸದ ದಿನಗಳನ್ನು ಮೆಲುಕು ಹಾಕುತ್ತಾ   ಅಂತರಾತ್ಮದ ಅರಿವಿನ ಪ್ರಜ್ಞೆಗೆಮೂಕ ಸಾಕ್ಷಿಯಾಗಿಕಂಗಳಲ್ಲಿ ತುಂಬಿದ ಕನಸುಗಳಿಗೆಸೋತು ಹೋಗಿದ್ದೇನೆದುಡಿದು ಸವೆಸಿದ ಹಾದಿಗೆ ಹಸಿರುಕ್ರಾಂತಿಯ ಹರಿಕಾರಬಾಬು ಜಗಜ್ಜೀವನರಾಮ್  ನೆಹರು ಭೋಸರ ಅಂತರಾತ್ಮದಸ್ವಾತಂತ್ರ್ಯದ ಕಿಚ್ಚಿನ ರಕುತದಕಲೆಗಳು ಮಾಯವಾಗಿಲ್ಲ ಮಾಯದ ಜಿಂಕೆ ಬೆನ್ನತ್ತಿದರಾವಣನ ಅರಿ ರಾಮನರಾಮರಾಜ್ಯದ ಪರಿಕಲ್ಪನೆಮಹಾತ್ಮಾ ಗಾಂಧೀಜಿಯಕನಸು ನನಸಾಗಲೇ ಇಲ್ಲ ಸುಡುವ ಕಾಲು ನೆಲದಲ್ಲಿತಂಪು ತಂಗಾಳಿ ಸೂಸಿದಚಳಿ ಮಳೆ ಗಾಳಿ ಬಿಸಿಲಿಗೆಬೆವರು ಸುರಿಸಿದ ಕಂಗಳುಇನ್ನೂ ಸಂತಸ ಕಂಡಿಲ್ಲಸಂತರು ಶರಣರು ದಾಸರುಇದೆ ಹಾದಿಯಲ್ಲಿ ನಡೆದು ಹೋದಹೆಜ್ಜೆ ಗುರುತು ಪಾದಗಳ ಪೋಟೋನಮ್ಮ ನಮ್ಮ ಜಗುಲಿಯ ಮೇಲೆಹಾಗೇ ಕುಳಿತುಕೊಂಡುರಾರಾಜಿಸುತ್ತಿವೆ ನಮ್ಮದೇ ಕಟ್ಟೆಯೊಳಗೆ ಬಂಧಿಸಿ ಪರದೆಯೊಳಗೆ ಮಡಿ ಮಾಡಿ ಶೋಷಣೆಯ ಸುಲಿಗೆಯೊಳಗೆ ಬಂದಿಖಾನೆ ಆಗಿದ್ದಾವೆನಮ್ಮ ನಮ್ಮ ದೇವರುಗಳು ನಾಡು ಸಮತೆಯ ಗೂಡುಹುಡುಕುತ್ತಿರುವೆಅಲ್ಲಿ ಇಲ್ಲಿ ಬಸವಣ್ಣ ಬುದ್ಧ ಗಾಂಧಿಯ ಪೋಟೋಗಳ ಮೇಲೆಕುಳಿತ ಧೂಳು ವರೆಸುತ್ತ ಕಣ್ಣಗಲ ಮಾಡಿ ವರುಷಕ್ಕೊಮ್ಮೆತಳಿರು ತೋರಣ ಕಟ್ಟಿಸಿಂಗರಿಸಿ ಧ್ವಜವು ಹಾರಿಸಿಜೈಕಾರ ಕೂಗುವ ನಮ್ಮೆದೆಯಗಟ್ಟಿ ಕೂಗಿಗೆ ಎಚ್ಚರಗೊಳ್ಳಲಿಲ್ಲ ನಾಡು ತೆಂಗು ಬಾಳೆ ಶ್ರೀಗಂಧದ ಬೀಡುಅನೇಕ ಗುಡಿ ಗೋಪುರ ದೊಳಗೆಬಚ್ಚಿಕೊಂಡು ತಿರುಗುವಅಲೆಮಾರಿಯಂತೆನಮ್ಮ ನಮ್ಮ ಬದುಕುಎಲ್ಲಿಂದ ? ಬರಬೇಕುಸಮ ಸಮಾಜದ ಪರಿಕಲ್ಪನೆಇದು ನಮ್ಮ ಭ್ರಮೆ ಎನ್ನಲೇ? —————ಡಾ ಸಾವಿತ್ರಿ ಕಮಲಾಪೂರ

ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ “ಜೋಪಾನ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು. ಜೋಪಾನ ಓ…ಮನವೇನನ್ನ ಹೃದಯಾಳದಅಂತರಾಳದಲಿ ನೀನಿರಲುಜೋಪಾನವಾಗಿರು ನೀ ಸದಾಆ ಕಲ್ಮಶ ಮನಸ್ಥಿತಿಕರಿಂದ,! ಅಲ್ಲೂ ಬಂದುನಿನ್ನ ನಿರ್ಧಾರಗಳಪರಿವರ್ತಿಸ ಬಂದಾರುಜೋಪಾನವಾಗಿರು ನೀ ಸದಾಈ ಸಮಾಜ ಕೆಡುಕರಿಂದ.! ————- ಹಮೀದ್ ಹಸನ್ ಮಾಡೂರು

ಹಮೀದ್ ಹಸನ್ ಮಾಡೂರು ಕವಿತೆ “ಜೋಪಾನ” Read Post »

ಕಾವ್ಯಯಾನ

“ಯಾರೇ ನೀ ಅಭಿಮಾನಿ?”ತಾತಪ್ಪ.ಕೆ.ಉತ್ತಂಗಿ

ಕಾವ್ಯ ಸಂಗಾತಿ ತಾತಪ್ಪ.ಕೆ.ಉತ್ತಂಗಿ “ಯಾರೇ ನೀ ಅಭಿಮಾನಿ?” ಅವಳೊಳಗಿನ ಇನಿಯಳುನೋಡುವಳು…ನೋಡುತ್ತಲೇ ಇರುವವಳುರನ್ನಗೆನ್ನೆಯ ಸನ್ನೆಯಿಂದಲೇಸವಿದೂರದಲ್ಲಿ ನಿಲ್ಲುವಳು.ನೋಡಿದರೆ ,ಕಣ್ರೆಪ್ಪೆಗಳು ಕದಲಿದರೆನಿಂತು ಕುಂತು ನಾಚಿತನಿಪನಿಯಂತೆ ನೀರಾಗುವಳು…. ಮತ್ತೊಮ್ಮೆ…….ಒಳಗಿನ ಇಂಪುಕಂಪಿನನೆನಪಿನ ಕೂಗಿಗೆಧ್ವನಿಯ ಇಂಚರವಾಗುವಳು.ಪ್ರೇಮದವರತೆಯ ಅವಲೋಕಿಸಿದ ಅವಲೋಕಿನಿಯಂತೆ,ಅಬ್ಬರಿಸಿ, ಹುಬ್ಬೇರಿಸಿರಮ್ಯಖುಷಿಗೈಯುವಳು ಹಿತಮಿತ ಪಯಣವನ್ನೇಹಿಗ್ಗಿಸಿ ಕುಗ್ಗಿಸಿ ಒಗ್ಗಿಸಿ ಜಗ್ಗಿಸಿರಾಗಿಣಿಯಂತೆ ಅನುರಾಗಿಸುವಅರೆದ್ವಂದ್ವದ ಅರ್ತಿಯ ಅರಗಿಣಿಯಾಗುವಳು…ಏಕಾಂತದಲ್ಲಿಯೂ ಕಾಂತಧ್ಯಾನಸ್ಥೆಯಾಗಿ,ವಿರಾಗಿಣಿ ಊರ್ಮಿಳೆಯಂತೆ.ಪ್ರೇಮದಿಂದ ರಾಮನನ್ನು   ಆರಾಧಿಸುವ ಜಾನಕಿಯಂತೆಸದಾ ಜೊತೆಯಾಗಿರುವಅಂಟಿದ ನಂಟಿನ ನವತಾರೆಯಿವಳು ಚಿಕ್ಕ ಚಿಕ್ಕ ಸಂಗತಿಗಳಿಗೆಸದಾ ಸಂಗಾತಿಯಾಗಿಶುದ್ಧ ಸಂಭ್ರಮೆಯಾಗಿಗೆದ್ದಾಗ ಗೆಲುವಿಗೆಕೇಕೆ ಹಾಕಿ,ಸೋತಾಗ ಸಾಂತ್ವನಕ್ಕೆಸಖಿಯಾಗಿ ಜೊತೆಯಾಗಿಬಿಗಿದಪ್ಪಿ ಬಿಕ್ಕಿದವಳು. ಕಂಡರೂ ಕಾಣದಿದ್ದರೂಸದ್ದಿನ ಚಪ್ಪಾಳೆಗಳ ಸುರಿಮಳೆಗೈಯವಳು.ಅರೆತೆರೆಮರೆಯಲ್ಲಿದ್ದರೂಕಾವಲಿನ ಕಾಯದವಳುಕಾಳಜಿಯ ಕರುಣೆಯವಳು.ಹೇ ಮಧುರಪ್ರೇಮದ ಸಾಕಿಏನೇ ನಿನ್ನ ಉಸಿರಿನ ಹೆಸರು.. *ಯಾರೇ ನೀ ಅಭಿಮಾನಿ?*ಜಗವೇ ಮೆಚ್ಚುವ ಮಾನಿನಿ. ——— ತಾತಪ್ಪ.ಕೆ.ಉತ್ತಂಗಿ

“ಯಾರೇ ನೀ ಅಭಿಮಾನಿ?”ತಾತಪ್ಪ.ಕೆ.ಉತ್ತಂಗಿ Read Post »

ಕಾವ್ಯಯಾನ, ಗಝಲ್, ನಿಮ್ಮೊಂದಿಗೆ

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ ಅವರ ಗಜಲ್ ಮಾತಿನ ಪದಗಳು ತೊದಲುತಿವೆ ಇಂದುಕತ್ತಲೆಗೆ ಕನಸುಗಳು ನಡುಗುತಿವೆ ಇಂದು ಎಷ್ಟು ಹುಡುಕಿದರು ಸಿಗದು ಸಮಾಧಾನಪಡೆದ ಬಯಕೆಗಳು ಬಳಲುತಿವೆ ಇಂದು ನಿಸ್ತೇಜ ಚಲನೆಗೆ ಕಣ್ಣುಗಳೇ ಸಾಕ್ಷಿ ಅಲ್ಲವೆಮುಡಿದ ಮಲ್ಲಿಗೆಗಳು ಬಾಡುತಿವೆ ಇಂದು ಗಲ್ಲೆನ್ನುವ ಬಳೆಗಳು ಸರಿದು ಸ್ತಬ್ಧವಾಗಿವೆಹೊಳೆಯುವ ಕಿರಣಗಳು ಕರಗುತಿವೆ ಇಂದು ಮನ್ಮಥನ ಜಾಲಕ್ಕೆ ಅಂದು ಸಿಲುಕಿದ ಮಾಜಾಮಾಯೆ ಮೋಹಗಳು ತೊರೆಯುತಿವೆ ಇಂದು ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ ಅವರ ಗಜಲ್ Read Post »

You cannot copy content of this page

Scroll to Top