ಗಝಲ್
ಕಾವ್ಯ ಸಂಗಾತಿ
ಗಝಲ್
ಶಂಕರಾನಂದ ಹೆಬ್ಬಾಳ
ಕಾವ್ಯಸಂಗಾತಿ ಎ . ಹೇಮಗಂಗಾರಬರ ಗಜಲ್ ಭಾವಬಳ್ಳಿಗೆ ನೇಹದ ಜೀವಜಲ ಹನಿಸಿದ ನೆನಪಿಂದ ನೀ ಮರೆಯಾದೆಬಾಳ ಇರುಳಿಗೆ ನಲ್ಮೆ ಬೆಳಕನು ಹರಿಸಿದ ನೆನಪಿಂದ ನೀ ಮರೆಯಾದೆ ಭೂತದಾ ಭೂತ ಬೇತಾಳದಂತೆ ಹಗಲಿರುಳೂ ಕಾಡುತ್ತಲೇ ಇತ್ತುಕಣ್ಸನ್ನೆಯಲೇ ಕೆಂಪೇರಿಸಿ ನಕ್ಕು ನಗಿಸಿದ ನೆನಪಿಂದ ನೀ ಮರೆಯಾದೆ ನೀನಿಲ್ಲದ ನನ್ನಿರುವಿಕೆಗೆ ಅರ್ಥವೇ ಇಲ್ಲವೆಂಬ ಭ್ರಮೆ ಕಾಡಿತ್ತೇಕೆ ?ಕೊರಗಿ ನಲುಗಿದವಳ ಅಪ್ಪಿ ಸಂತೈಸಿದ ನೆನಪಿಂದ ನೀ ಮರೆಯಾದೆ ಸವೆಸಿದ ಮುಳ್ಳು ಹಾದಿಯ ಇನ್ನೆಂದೂ ಹಿಂತಿರುಗಿ ನೋಡಲಾರೆಸಿಹಿ ಮುತ್ತನಿತ್ತು ಕಹಿಯೆಲ್ಲ ಮರೆಸಿದ ನೆನಪಿಂದ ನೀ ಮರೆಯಾದೆ ಸಾವಿಗೆ ಬೆನ್ನು ತಿರುವಿ ಹೊಸ ಬದುಕ ಬದುಕಲು ಕಾತರಿಸಿದ್ದೇನೆಜೊತೆ ಇರುವೆನೆಂಬ ವಚನವ ಉಳಿಸಿದ ನೆನಪಿಂದ ನೀ ಮರೆಯಾದೆ ಅವನ ಅಖಂಡ ಪ್ರೀತಿ ಲೇಪನದಿ ಹೃದಯದ ಗಾಯಗಳು ಮಾಗಿವೆನಡೆ, ನುಡಿಯಲಿ ನಿಷ್ಠೆ ತೋರಿ ಮೆಚ್ಚಿಸಿದ ನೆನಪಿಂದ ನೀ ಮರೆಯಾದೆ ಕಾರಣವಿಲ್ಲದೇ ನಿರ್ದಯಿ ನೀ ತೊರೆದುದೇ ಹೇಮ ಳಿಗೆ ಒಳಿತಾಗಿದೆಸವಿ ದಾಂಪತ್ಯ ಬಂಧನದಿ ನನ್ನ ಬಂಧಿಸಿದ ನೆನಪಿಂದ ನೀ ಮರೆಯಾದೆ
ಕಾವ್ಯ ಸಂಗಾತಿ
ಗಜಲ್
ದೇವರಾಜ್ ಹುಣಸಿಕಟ್ಟಿ
ಗಜಲ್-ದೇವರಾಜ್ ಹುಣಸಿಕಟ್ಟಿ Read Post »
ಕಾವ್ಯ ಸಂಗಾತಿ
ಉಸಿರು ಮೀರಿದ ಕವಿತೆ
ಮುತ್ತು ಬಳ್ಳಾ ಕಮತಪುರ
ಉಸಿರು ಮೀರಿದ ಕವಿತೆ-ಮುತ್ತು ಬಳ್ಳಾ ಕಮತಪುರ Read Post »
You cannot copy content of this page