ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ”

ಕಾವ್ಯ ಸಂಗಾತಿ ಡಾ ಡೋ ನಾ ವೆಂಕಟೇಶ “ಖುಷಿಯ ಆಸ್ತಿ” ಖುಷಿ ಮರೀಚಿಕೆಯಲ್ಲಮನಸು ಮರುಳುಗಾಡಲ್ಲ ಪುಟ್ಟಪುಟ್ಟ ಆಸೆಗಳುದೊಡ್ಡ ದೊಡ್ಡ ನಿರಾಸೆಗಳುಮಜಲುಗಳುಎಲ್ಲಾ ಗೋಜಲುಗಳ ಕುಸ್ತಿ ಈ ದಿನ ರವಿ ಪೂರ್ವದಲ್ಲಿರುವುದಕ್ಕೆ ಖುಷಿಯಾಗಿರು,ಈ ದಿನವೂ ಸಾಗರದಲ್ಲಿಉಬ್ಬರವಿಳಿತ ಕಂಡು ನಿಬ್ಬೆರಗಾಗು. ಇರುವ ಭಕ್ತಿ ಮೆರೆಸಲೂ ಖುಶಿಇಲ್ಲದಿರುವ ಆಸ್ತಿ ಮರೆಯಲೂ ಖುಶಿ ಖುಶಿ ಇರುವಷ್ಟಕ್ಕೆ ತೃಪ್ತಿಇಲ್ಲದಾಗಿದ್ದಷ್ಟಕ್ಕೆ ಖುಷಿಹುಟ್ಟಿದ್ದಕ್ಕೆ, ಇರುವಷ್ಟನ್ನೇ ಅನುಭವಿಸಿದ್ದಕ್ಕೆ,ಖುಷಿಯಾಗಿರು ಸದಾ. ಮುಷ್ಟಿಯಲ್ಲಿ, ಮನಸಲ್ಲಿಉಳಿದಷ್ಟಕ್ಕೆ ತೃಪ್ತಿಕನಸಲ್ಲಿ ಕಂಡದ್ದಕ್ಕೂ ತೃಪ್ತಿನನಸಲ್ಲಿಹೊಂದಿದ್ದಕ್ಕೂ ತೃಪ್ತಿ ತೃಪ್ತಿಯೇ ಖುಷಿಯ ಆಸ್ತಿ  ಡಾ ಡೋ ನಾ ವೆಂಕಟೇಶ

ಡಾ ಡೋ ನಾ ವೆಂಕಟೇಶ ಕವಿತೆ “ಖುಷಿಯ ಆಸ್ತಿ” Read Post »

ಕಾವ್ಯಯಾನ, ಗಝಲ್

ಡಾ.ರೇಖಾ ಉದಯ್‌ ಅವರ ಗಜಲ್

ಕಾವ್ಯ ಸಂಗಾತಿ ಡಾ.ರೇಖಾ ಉದಯ್‌ ಗಜಲ್ ನಿನ್ನೊಳಗಿನ ಸೆಳೆತಕ್ಕೆ ಸೋತಿದ್ದೇನೆ ಕವಿತೆನನ್ನೊಳಗಿನ ಭಾವನೆಗಳ ಹೇಳಿದ್ದೇನೆ ಕವಿತೆ ಸೋತು ಗೆದ್ದು ನನ್ನೊಳಗೆ ನೀನಾಗಿದ್ದೀಯಲ್ಲೇನಿನ್ನಿಂದ ನವೀರಾದ ಭಾವ ತಾಳಿದ್ದೇನೆ ಕವಿತೆ ದುಗುಡ  ದುಮ್ಮಾನಗಳ ಸರಸಿ ಆವರಿಸಿದ್ದಿಯಲ್ಲೇನೀನಿಲ್ಲದ ನಾನು ಶೂನ್ಯಳೆಂದು ಕೇಳಿದ್ದೇನೆ ಕವಿತೆ ಮುದುಡಿದ ಮನಸ್ಸಿಗೆ ಹೊಸ ಸಂಚಲನ ಮೂಡಿಸಿದೆನನ್ನಲ್ಲಿ ತಿಳಿಯದೆ ನೀ ಅವಿತದ್ದು ನೋಡಿದ್ದೇನೆ ಕವಿತೆ ಒಣಗಿದ ಮರದಲ್ಲಿ ಹೊಸ ಚಿಗುರ ಕಂಡಂತಾಗಿದೆರೇಖೂಳ ಮೇಲಿರುವ ಆ ಒಲವಿಗೆ ನಕ್ಕಿದ್ದೇನೆ ಕವಿತೆ ಡಾ.ರೇಖಾ ಉದಯ್

ಡಾ.ರೇಖಾ ಉದಯ್‌ ಅವರ ಗಜಲ್ Read Post »

ಕಾವ್ಯಯಾನ

ಮೂಗಪ್ಪ ಗಾಳೇರ ಅವರ ಕವಿತೆ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?”

ಕಾವ್ಯ ಸಂಗಾತಿ ಮೂಗಪ್ಪ ಗಾಳೇರ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?” ಬಿದ್ದ ವೈರಿಗಳನ್ನಷ್ಟೇ ಅಲ್ಲಬದ್ಧ ವೈರಿಗಳಿಗೂ ಬೆಚ್ಚಿ ಬೀಳಿಸಿದ್ದ ಬುದ್ಧಮಾಡಿದ್ದು ರಕ್ತ ಹರಿಸುವ ಯುದ್ಧವನಲ್ಲಪ್ರೀತಿ ತುಂಬಿ ಸ್ನೇಹ ಬೆಳೆಸುವ ಧರ್ಮದ ನಡಿಗೆ ಬುದ್ಧ ನಡೆದ ಹಾದಿ ಉದ್ದಗಲಕ್ಕೂ ಜನಸಸಾಗರವೋ ಜನಸಾಗರನಿಮ್ಮ ಯುದ್ಧದ ಪಿರಿಂಗಿಗಳುಆಕಾಶದೆತ್ತರಕ್ಕೆ ಚಿಮ್ಮುತ್ತ ಬೆಂಕಿಯ ಕೆಂಡವನ್ನು ಉಗುಳುತಿದ್ದರೆಬುಧ್ದನ ಉಪದೇಶಗಳುಆ ಬೆಂಕಿಯ ಕೆಂಡದಲ್ಲಿ ಶಾಂತಿಯ ತೋಟವನ್ನು ಸೃಷ್ಟಿಸುತ್ತಿವೆ ಯುದ್ಧ ಗೆದ್ದಿತು ಎನ್ನುವುದಕ್ಕೆನಿಮ್ಮ ಪಿರಿಂಗಿಯ ಮದ್ದು ಗುಂಡುಗಳು ಹರಿಸಿದ ರಕ್ತದ ಚರಿತ್ರೆಗೆಸಡ್ಡು ಹೊಡೆದು ನಿಂತಿದ್ದುಮುಗಿಲೆತ್ತರಕ್ಕೂ ಚಿಮ್ಮಿ ಶಾಂತಿ ಮಳೆ ಸುರಿಸಿದ್ದುನನ್ನ ಬುದ್ಧನ ಮೌನ ಮತ್ತು ಅಹಿಂಸೆ ಅಗೋ ಅಲ್ಲೋಡಿನನ್ನ ಬುದ್ಧನ ಮೌನದ ಮಳೆಗೆನಿಮ್ಮ ಪಿರಂಗಿಯ ಅವಶೇಷಗಳುಸುಟ್ಟ ಇಟ್ಟಿಗೆಗಳಾಗಿವೆಹೆದರ ಬೇಡಿ ಅವುಗಳಿಗೆ ಒಂದಿಷ್ಟುಬುದ್ಧನ ನಾಲ್ಕು ಆರ್ಯ ಸತ್ಯಗಳನ್ನ ಲೇಪಿಸಿದರೆಮತ್ತೆ ಆಕಾಶದೆತ್ತರಕ್ಕೆ ನಿಮ್ಮ ಪಿರಿಂಗಿಗಳು ಸಿಡಿಯಬಹುದುಆಗ ಸಿಡಿಯುವ ಪಿರಿಂಗಿಗಳಿಂದ ಸುರಿಯುವುದು ಬೆಂಕಿ ಉಂಡೆಯಲ್ಲನನ್ನ ಬುದ್ಧನ ಶಾಂತಿ ಮತ್ತು ಅಹಿಂಸೆಯ ಮಳೆಆಗ ಯುದ್ಧದಲ್ಲಿ ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….? ಮೂಗಪ್ಪ ಗಾಳೇರ

ಮೂಗಪ್ಪ ಗಾಳೇರ ಅವರ ಕವಿತೆ “ಗೆದ್ದಿದ್ದು ನನ್ನ ಬುದ್ಧನಲ್ಲದೇ ಮತ್ತಿನ್ಯಾರು….?” Read Post »

ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಮಣ್ಣಿಗೆ ಭೇದವಿಲ್ಲ” ಊರ ಬಿಟ್ಟು ದೂರಾಚೆ ಹಾಳು ಸುಡುಗಾಡಂತೆಅದ್ಯಾಕೋ ಯಾರಿಗೂ ಇಷ್ಟವಲ್ಲದ ಜಾಗವಂತೆಇಲ್ಲ್ಯಾರಿಗೂ ಯಾವುದೇ ಭೇದವಿಲ್ಲವಂತೆಹಾಸಿ ಹೊದ್ದಿಕೊಳ್ಳಲಿರುವುದೊಂದೆ ಮಣ್ಣಿನ ಮುದ್ದೆಯಂತೆ ಮನುಷ್ಯನ ಎಲ್ಲದಕ್ಕೂ ಪೂರ್ಣವಿರಾಮ ಇಲ್ಲಿಇದ್ದಾಗ ನಾನೇ ಎನ್ನುವ ಭರದಲ್ಲಿಬೀದಿಯು ನಮ್ಮದಲ್ಲ ಎನ್ನುತ ಉಗಿಯುವನಲ್ಲಿನಾನು ನನ್ನದೆನ್ನುವ ಸ್ವಾರ್ಥದ ವ್ಯಾಮೋಹದಲ್ಲಿ. ನಶ್ವರ ಕಾಯವ ಕಾಯಕಕ್ಕಾಗಿ ಮೀಸಲಿಡುಪರೋಪಕಾರಾರ್ಥಂ ಇದಂ ಶರೀರಂ ಮರೆಯದಿರುಸಮಾಜದ ಉಪಯೋಗಕ್ಕಾಗಿ ಜೀವಿಸಿ ನೋಡುಕಾಯಕದಲ್ಲೇ ಕೈಲಾಸವ ಕಾಣುತಿರು. ಪ್ರತಿಫಲ‌ ಬಯಸದೆ ಸೇವೆಯ ಮಾಡುತಿರುಕಂಗಳ ಕೊಡದಿದ್ದರೂ ಅನ್ಯರ ಕಣ್ಗಳ‌ ಕೀಳದಿರುನಡೆಸಲಾಗದಿದ್ದರೂ ಬೆಳಕಿನ‌ ಮಾರ್ಗ ತೋರಿಸುಜೊತೆ ನಡೆಯಲಾಗದಿದ್ದರೂ ಎಡರು ತೊಡರಾಗದಿರು. ದೇಹವ ನಂಬಿ ಬದುಕು ನಡೆಸುವ ಮನುಜನುಮಣ್ಣಲಿ ಮಣ್ಣಾಗುವ ಮುನ್ನ ನಾಲ್ವರ ಬಾಯಲ್ಲಿರು ನೀನುಅಳಿಯದೆ ಉಳಿಯುವವು ಮಾನವೀಯ ಮೌಲ್ಯಗಳಲ್ಲವೇನು!ಸತ್ಯದ ಮಾರ್ಗದೊಳು ನಡೆ ಅರಿತು ನೈಜತೆಯನು. ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಮಣ್ಣಿಗೆ ಭೇದವಿಲ್ಲ” Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ಎದೆಗಡಲನು ಮಥಿಸಿ ಪಡೆದಿಹ ಅಮೃತವದು ಪ್ರೀತಿಭಾವದಲೆಯು ದಡವ ಸೇರಿದ ಸಂಗಮವದು ಪ್ರೀತಿ ತೋರಿಕೆಗೆ ತಳೆದ ಹೂ ಹೇರಿಕೆಗೆ ಹಬ್ಬಿದ ಬಳ್ಳಿಯಲ್ಲನೆಲ ಮುಗಿಲುಗಳ ನೆಚ್ಚಿ ಬಿರಿದ ಕುಸುಮವದು ಪ್ರೀತಿ ಅಹಮಿಕೆಯ ಅರಿವಿಲ್ಲ ಸಂಶಯಗಳ ಸುಳಿವೆನಿತಿಲ್ಲಗುಡಿಸಲನೇ ಗುಡಿಯ ಮಾಡಿದ ಪವಾಡವದು ಪ್ರೀತಿ ಹೆಚ್ಚು ಕಡಿಮೆ ಎಂಬ ಗಡಿಗಳಿಲ್ಲ ಗಡಿಬಿಡಿಯೂ ಇಲ್ಲಆಡಂಬರಕಾತುಕೊಳ್ಳದ ಸುಗ್ಗಿ ಸಂಭ್ರಮವದು ಪ್ರೀತಿ ಈ ಒಲವ ಜನನಕೆ ಮಹೂರ್ತ ಘಳಿಗೆಗಳು ಬೇಕಿಲ್ಲಬೆಸೆದ ಮನಗಳಂಗಳದ ನಿತ್ಯದ ಉತ್ಸವವದು ಪ್ರೀತಿ ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಅನುವಾದ, ಕಾವ್ಯಯಾನ

ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ “ಜಲಭಾಷೆ” ತೆಲುಗು ಮೂಲ:ಡಾ. ದೇವರಾಜು ಮಹಾರಾಜು ಕನ್ನಡಾನುವಾದ ರಂಗನಾಥ ರಾಮಚಂದ್ರರಾವು ಕವನ ಒಂದು ಪ್ರತ್ಯೇಕ ಪರಿಭಾಷೆಅದು ಎಲ್ಲಾ ಭಾಷೆಗಳಿಗೂ ಬಗ್ಗುತ್ತದೆಎಲ್ಲಾ ಭಾಷೆಗಳನ್ನು ಬಗ್ಗಿಸಿಕೊಳ್ಳುತ್ತದೆತಲೆ ಬಗ್ಗಿಸಿದಂತೆ ಬಗ್ಗಿಸಿ, ಎಲ್ಲಾ ಪ್ರಕಾರಗಳನ್ನುತನ್ನ ರೆಕ್ಕೆಗಳ ಕೆಳಗೆ ಎಳೆದುಕೊಳ್ಳುತ್ತದೆಕಾಲದೊಂದಿಗೆ ಸಾಗುತ್ತಾಒಂದೊಂದು ಸಲ ಕಾಲವನ್ನೂ ದಾಟಿಹೋಗುತ್ತದೆಕವನ ಒಂದು ಜಲ ಭಾಷೆಅದು ಯಾವ ಪಾತ್ರೆಯಲ್ಲಾದರೂ ತುಂಬುತ್ತದೆ –ಒದಗುತ್ತದೆ ಕವನ ಒಂದು IDEOGRAMಅದು ಛಂದಸ್ಸಿನಲ್ಲಿ ಬದುಕುವುದೇಮಾತ್ರಾ ಛಂದಸ್ಸಿನಲ್ಲಿ ಬದುಕುವುದೇವಚನದಲ್ಲಿ ಬದುಕುತ್ತದೆ ಎಂಬ ಚರ್ಚೆಎಷ್ಟು ಅರ್ಥರಹಿತವೆಂದರೆ …ಜೀವವು ಯಾವ ರೀತಿಯ ಜೀವಿಯಾಗಿ ನಿಲ್ಲುತ್ತದೆಪ್ರಾಣಿಗಳು ಹುಟ್ಟುತ್ತವೆ, ಸಾಯುತ್ತವೆ , ಆದರೆ …ನಿರಂತರವಾಗಿ ಮುಂದುವರಿಯುವುದು ಜೀವಶಕ್ತಿ ಮಾತ್ರವೇ!ಪ್ರಕಾರಗಳೂ ಅಷ್ಟೇ !!ಅಂತರ್ಗತವಾಗಿ ಸಾಗುವುದು ಕವನಶಕ್ತಿ ಮಾತ್ರವೇ!ಅದೊಂದೇ ಕಾಲಕ್ಕೂ ಜೀವನಕ್ಕೂ ಮಾನವತೆಗೂತಳಮಟ್ಟದಲ್ಲಿ ಹರಿಯುವುದುಆಧಾರವಾಗಿ ಇರುತ್ತಿರುವುದುಕವನ ಒಂದು ಫ್ರತ್ಯೇಕ ಭಾಷೆಅದು ಎಲ್ಲಾ ಜೀವಿಗಳ ಜೀವ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತದೆ ! ತೆಲುಗುಮೂಲ: ಡಾ. ದೇವರಾಜು ಮಹಾರಾಜುಕನ್ನಡಕ್ಕೆ : ರಂಗನಾಥ ರಾಮಚಂದ್ರರಾವು

ಡಾ. ದೇವರಾಜು ಮಹಾರಾಜು ಅವರ ತೆಲುಗು ಕವಿತೆ”ಜಲಭಾಷೆ” ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಕಾವ್ಯಯಾನ

ಸುಮನಾ ರಮಾನಂದ ಅವರ ಕವಿತೆ “ಮಲ್ಲಿಗೆಯ ಸವಿನುಡಿ”

ಕಾವ್ಯ ಸಂಗಾತಿ ಸುಮನಾ ರಮಾನಂದ “ಮಲ್ಲಿಗೆಯ ಸವಿನುಡಿ” ಮಾನಿನಿಯ ಆರೈಕೆಯಲರಳುವದುಂಡುಮಲ್ಲೆ ಹೂಗಳು ನಾವು..ಚಿಗುರ ಹಸಿರೆಲೆಯ ನಡುವಲಿರಾಣಿಯಂತೆ ಮೆರೆಯುವೆವು..!! ನಾಚಿಹ ನವವಧುವರರ ಕರದಲಿಕಟ್ಟಿದ ಮಾಲೆಯಾಗಿ ನಗುವೆವು..ಪೂಜಾವೇಳೆಯಲಿ ದೈವದಪಾದಾರವಿಂದದಿ ಧನ್ಯರಾಗಿಹೆವು!! ಮುಂಜಾವಲಿ ಹೂಮಾಲೆಯಾಗಿದೇವರ ಕೊರಳಲಿ ನಲಿವೆವು..ಹೆಂಗಳೆಯರ ಮುಡಿಯಲಲಂಕರಿಸಿ..ಮುಸಂಜೆಯಲಿ ನಲುಗುವೆವು!! ನಾವಿರುವ ಹೂಬನದ ಸುತ್ತಹರಡುತಲಿದೆ ನಮ್ಮ ಕಂಪು..ನಮ್ಮನು ಜಡೆಯಲಿರಿಸಿದ ನಲ್ಲನಕಂಡು ನಲ್ಲೆಯ ಕೆನ್ನೆ ಕೆಂಪು!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ ಅವರ ಕವಿತೆ “ಮಲ್ಲಿಗೆಯ ಸವಿನುಡಿ” Read Post »

ಕಾವ್ಯಯಾನ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “

ಕಾವ್ಯ ಸಂಗಾತಿ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ” ಅಜ್ಞಾನಿ ಕೈಯಲ್ಲಿ ವಿಜ್ಞಾನ “ ತಾಂತ್ರಿಕ ಯುಗದಲ್ಲಿಮನುಜ ಯಾಂತ್ರಿಕನಾಗಿಯಂತ್ರ ಮಾನವ ಸೃಷ್ಟಿಸಿಕುತಂತ್ರ ಜ್ಞಾನ ಬೆಳೆಸುತ್ತಿದ್ದಾನೆ ತಾತ್ವಿಕ ತಳದಿ ತಳ್ಳಿ ಹಾಕಿಮಾನವೀಯ ಮೌಲ್ಯಗಳ ಮರೆತುಸಂಚು ಮಾಡಿ ಹೊಂಚು ಹಾಕಿವಿಕೃತಿ ಮೆರೆಯುತ್ತಿದ್ದಾನೆ ವೈಚಾರಿಕತೆ ಇಲ್ಲದ ವಿಜ್ಞಾನಿಅಜ್ಞಾನದ ಅಂಧಕಾರದಲಿಅಪಾಯಕಾರಿ ಅನ್ವಸ್ತ್ರಗಳಿಂದನಾಗರಿಕತೆ ನಾಶಗೊಳಿಸುತ್ತಿದ್ದಾನೆ ಭಾವನೆಗಳನ್ನು ಬರುಡಾಗಿಸಿಅಧರ್ಮದ ಅಡ್ಡ ದಾರಿಯಲ್ಲಿದುರಾಸೆಯ ದಾಸನಾಗಿಧರ್ಮದ್ರೋಹಿಯಾಗುತ್ತಿದ್ದಾನೆ ವಿಜ್ಞಾನ ಅಜ್ಞಾನಕ್ಕೆ ಕಾರಣವಾಗಿಮಾನವತೆ ಮೌನವಾಗಿದೆಹೇಡಿಗಳ ಹಗೆತನದಿಂದಅಶಾಂತಿಯ ಸಮರ ಸಾರುತ್ತಿದೆ ವಿಜ್ಞಾನಿಗಳು ಸುಜ್ಞಾನಿಗಳಾಗಿವಿನಾಶ ತಡೆವ ವಿವೇಕಿಗಳಾಗಬೇಕಿದೆಸ್ವಾರ್ಥ ಬಿಟ್ಟು,ಪ್ರೇಮ ಕೊಟ್ಟುಸಾಮರಸ್ಯದ ಜಗವ ಬೆಳಗಬೇಕಿದೆ ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ. ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಅಜ್ಞಾನಿ ಕೈಯಲ್ಲಿ ವಿಜ್ಞಾನ “ Read Post »

ಕಾವ್ಯಯಾನ, ನಿಮ್ಮೊಂದಿಗೆ

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ”

ಕಾವ್ಯ ಸಂಗಾತಿ ಟಿ.ಪಿ.ಉಮೇಶ್ “ಹೃದಯ ಒಡೆದಾಗ” ಹೃದಯ ಒಡೆದಾಗ ಪ್ರತಿಯೊಂದು ನೋವು ಒಲವಿನ ಕಥೆಗಳಾಗಿ ಮೂಡಿ ಬರುತ್ತವೆ;ಬಿಸಿ ಕಣ್ಣೀರಿನ ಹನಿಹನಿಯಲ್ಲು ಕುದಿಮೌನದ ಮಾತುಗಳೆ ಹರಿದು ನಿಲ್ಲುತ್ತವೆ! ಈ ಅಶಾಂತಿ, ಈ ಕಾತರ, ಈ ಅಸಹಾಯತೆಯ ನೆರಳಲ್ಲಿ ನೀನಿರುವೆ ನನ್ನೊಲವೆ;ಪ್ರೇಮದ ಪ್ರತಿಯೊಂದು ಸಾಕ್ಷಿ ಜೀವಂತ ಬೆದರು ಬೊಂಬೆಯಾಗಿ ಕುಣಿಯುತ್ತವೆ ಜೀವವೆ! ಪ್ರೇಮ ಮೌನ ಹೊದ್ದ ತುಟಿಗಳ ಮೇಲೆ ನಿಂತಿರುವ ಅಪೂರ್ಣ ಕನಸುಗಳ ದಾರಿಯದು;ಪ್ರೇಮಿಯ ಹೃದಯದ ಪ್ರತಿ ಬಡಿತವು ಮಳೆಯಿರದ ನದಿಯ ಹರಿವಿನಂತೆ ಸಾಗುವುದು! ಹೃದಯದ ಪುಸ್ತಕದ ಪ್ರತಿಯೊಂದು ನೆನಪಿನ ಪುಟಗಳ ನವಿರಾಗಿ ತಿರುಗಿಸುವುದು!ಪ್ರೀತಿ ಏಕಾಂಗಿಯಾಗಿ ಖಾಲಿ ಪ್ರತಿಧ್ವನಿಯಲ್ಲಿ ದುಃಸ್ವಪ್ನಗಳ ಕಂಡಂತೆ ಊಳಿಡುವುದು! ಭಗ್ನ ಪ್ರೇಮಿಯಷ್ಟೇ ಏಕಾಂತದ ನಿಶ್ಶಬ್ದದಲ್ಲಿ ತನ್ನೊಂದಿಗೇ ಮಾತಾಡುವುದು!ಭ್ರಮೆಯ ಮಾತುಗಳ ಪ್ರತಿ ಪದದಲ್ಲೂ ನಿನ್ನದೇ ನೆನಪು ಮಧುರವಾಗಿ ತುಳುಕುವುದು! ನಿನ್ನ ನೆನಪು ಹುಟ್ಟು ಮಚ್ಚೆಯಂತೆ ಬರಡು ಹೃದಯವನ್ನು ಸುದೀರ್ಘವಾಗಿ ಆಳುವುದು!ಕಣ್ಣೀರೇ ಒಲವಿನ ಭಾಷೆಯಾಗಿ ಪ್ರೇಮದ ಸಿಹಿಕಹಿಯ ಮುಚ್ಚುಮರೆಯಿಲ್ಲದೆ ಹಾಡುವುದು! ಪ್ರೀತಿಸಿದ ಹೃದಯ ವಿಚಿತ್ರ ಯಾತನೆಯ ಘಮಲು ಅದರ ಸ್ವಭಾವವೇ ಅರ್ಥವಾಗದು;ವಿರಹದ ಗಾಯದ ಉರಿಯನ್ನೆಲ್ಲ ನಿನ್ನ ಪ್ರೀತಿಯ ಗುರುತಿನ ಸ್ಮಾರಕವಾಗಿ ಸ್ಮರಿಸುವುದು! ಟಿ.ಪಿ.ಉಮೇಶ್

ಟಿ.ಪಿ.ಉಮೇಶ್ ಅವರ ಕವಿತೆ “ಹೃದಯ ಒಡೆದಾಗ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ತಂತಿ ಹರಿದ ವೀಣೆ” ತಂತಿ ಹರಿದ ವೀಣೆ ನಾನು,ಮೌನದೊಳಗೇ ನಾದ ನಾನು;ಮುರಿದ ಕನಸ ದಾರಿ ನಾನು,ನಡೆಯುತಿರುವ ಜೀವ ನಾನು. ಕತ್ತಲ ರಾತ್ರಿ ಜೊತೆಯಾದರೂ,ನಕ್ಷತ್ರದಂತೆ ಬೆಳಕು ನಾನು;ಕಣ್ಣೀರ ಹನಿಯ ಮಣ್ಣಿನೊಳಗೆ,ಮೊಳೆಯುತಿರುವ ಬೀಜ ನಾನು. ಗಾಳಿ ತಾಕಿದ ಕ್ಷಣದಲ್ಲೇ,ಮೌನವೇ ಮಧುರ ರಾಗ;ನೋವು ತಾಕಿದ ಹೃದಯದಲ್ಲೇ,ಹುಟ್ಟುತ್ತದೆ ಹೊಸ ನಾದ. ಮುರಿದ ತಂತಿ ಎಂದರೇನು,ನಾದ ಮಡಿಯುವುದಿಲ್ಲ;ಮುರಿದ ಮನಸು ಎಂದರೇನು,ಆಸೆ ಸಾಯುವುದಿಲ್ಲ. ಒಂದು ಹೂವಿನಿಂದ ವಸಂತವಿಲ್ಲ,ಒಂದು ನೆರಳಿಂದ ದಾರಿಯಿಲ್ಲ;ನೂರ ಕನಸು ಸೇರಿದಾಗಲೇ,ಜೀವನಕ್ಕೆ ಸೋಲಿಲ್ಲ. ಮಣ್ಣು ಕಲಿಸಿದ ಸಹನೆ ನಾನು,ಆಕಾಶ ಕೊಟ್ಟ ಕನಸು ನಾನು;ಹೊಳೆ ಹೇಳಿದ ಹರಿವು ನಾನು,ಗಾಳಿಯ ಮಧುರ ಸ್ಪರ್ಶ ನಾನು. ಹಳೆಯ ನೋವು ದೂರವಾದರೂ,ನೆನಪು ಆಗಿ ಉಳಿಯುತ್ತದೆ;ಹೊಸ ಬೆಳಕು ಬಂದಾಗಲೇ,ಬದುಕು ಮತ್ತೆ ನಗುತ್ತದೆ. ನೀ ನಡೆದ ದಾರಿ ನೆರಳಾದರೂ,ನನ್ನ ದಾರಿ ಬೆಳಕು ಆಗಲಿ;ತಂತಿ ಹರಿದ ವೀಣೆ ಆದರೂ,ನನ್ನ ನಾದ ಉಳಿದು ಹೋಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ತಂತಿ ಹರಿದ ವೀಣೆ” Read Post »

You cannot copy content of this page

Scroll to Top