ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ವಾರ್ಷಿಕ ವಿಶೇಷ

ನಮ್ಮ ಕವಿ ಸ್ಮಿತಾ ಅಮೃತರಾಜ್ ಕವಿಪರಿಚಯ–ಸಂದರ್ಶನ–ಕವಿತೆಗಳು ಪರಿಚಯ ಸ್ಮಿತಾ, ಕವಿ, ಲೇಖಕಿ, ಅಂಕಣಕಾರ್ತಿ, ಇವೆಲ್ಲಕ್ಕಿಂತ ಹೆಚ್ಚಾಗಿ ಅಪಾರ ಮಾನವೀಯ ಅಂತಃಕರಣದ, ಎಲ್ಲದರಲ್ಲೂ,ಎಲ್ಲರಲ್ಲೂ ಒಳಿತನ್ನೇ ಕಾಣುವ ಮೃದು ಹೃದಯಿ. “ಪ್ರಪಂಚ ಬಹಳ ಕೆಟ್ಟದು”ಅನ್ನುವ  ಸಿನಿಕತನ ನನ್ನನ್ನು ಕಾಡಿದಾಗೆಲ್ಲ ಅದಕ್ಕೆ ಅಪವಾದವೆಂಬಂತೆ ನನ್ನ ಮನಸ್ಸಿಗೆ ಬರುವ ನನ್ನ ಜೀವದ ಗೆಳತಿ ಸ್ಮಿತಾ ಬಗ್ಗೆ ಹೇಳಿದಷ್ಟು ಕಡಿಮೆಯೇ. ಸ್ಮಿತಾ ಅವರ  ಜನ್ಮಸ್ಥಳ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ . ಜನನ 8 ನೆ ಜನವರಿ 1978,   ತಂದೆ ಶ್ರೀಯುತ.ವೆಂಕಟ್ರಮಣ ಪಳಂಗಾಯ ಮತ್ತು ತಾಯಿ ಶ್ರೀಮತಿ.ಮೀನಾಕ್ಷಿ ಪಳಂಗಾಯ. ಓರ್ವ ಸಹೋದರಿ ಹಾಗೂ ಓರ್ವ ಸಹೋದರ ರಿದ್ದಾರೆ. ಶಿಕ್ಷಣ: ಅಜ್ಜಿ ಮನೆಯಾದ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಇದ್ದು ಪ್ರಾಥಮಿಕ ಶಿಕ್ಷಣವನ್ನ  ಮಡಿಕೇರಿಯ ಮೇಕೇರಿ ಶಾಲೆ, ಪ್ರೌಡ ಶಿಕ್ಷಣ  ಜೂನಿಯರ್ ಕಾಲೇಜು,ಮಡಿಕೇರಿ ಯಲ್ಲಿ ಪಡೆದು,ಬಳಿಕ ಪಿ.ಯು.ಸಿ.ಸಂತ ಫಿಲೋಮಿನ ಕಾಲೇಜು,ಪುತ್ತೂರು, ಪದವಿ – ನೆಹರು ಮೆಮೋರಿಯಲ್ ಕಾಲೇಜು.ಸುಳ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ – ಮಂಗಳೂರು ಮುಕ್ತ ವಿಶ್ವವಿದ್ಯಾನಿಲಯ ದಿಂದ ಪಡೆದಿದ್ದಾರೆ.             1998 ರಲ್ಲಿ ಅಮೃತ ರಾಜ್ ಅವರೊಂದಿಗೆ ವಿವಾಹದ ಬಳಿಕ, ಕೊಡಗಿನ ಮಡಿಕೇರಿ ತಾಲೂಕಿನ ಚಂಬು ಗ್ರಾಮದಲ್ಲಿ ವಾಸ.ಮಗಳು  ಮನಾಲಿ,ಮಗ ಆಷಯ್,ಅತ್ತೆ ಮತ್ತು ಮಾವಂದಿರೊಂದಿಗೆ ತುಂಬು ಕುಟುಂಬದಲ್ಲಿ ಜೀವನ. ತನ್ನನ್ನು ಕವಿ,ಲೇಖಕಿ ಎಂದು ಪರಿಚಯಿಸಿ ಕೊಳ್ಳುವುದಕ್ಕಿಂತ ಹೆಚ್ಚಾಗಿ “ಕೃಷಿಕ ಮಹಿಳೆ”ಎಂದು ಹೆಮ್ಮೆಯಿಂದ  ಹೇಳಿಕೊಳ್ಳುವುದು  ಅವರಿಗೆ ಹೆಚ್ಚು  ಖುಷಿ ಕೊಡುತ್ತದೆ. ಸ್ಮಿತಾರ ಮೊದಲ ಕವನ ಸಂಕಲನ “ಕಾಲ ಕಾಯುವುದಿಲ್ಲ”,(2008)  ಬಳಿಕ ಬಂದ ಕವನ ಸಂಕಲನ “ತುಟಿಯಂಚಲಿ ಉಲಿದ ಕವಿತೆಗಳು”(2014),ನಂತರ ಬಂದದ್ದು ಪ್ರಬಂಧ ಸಂಕಲನ “ಆಂಗಳದಂಚಿನ ಕನವರಿಕೆಗಳು”(2015). ವಿಜಯವಾಣಿ ಪತ್ರಿಕೆಯಲ್ಲಿ ಅಂಕಣಕಾರ್ತಿಯಾಗಿ  “ಲೇಡಿಸ್  ಡೈರಿ” ಶೀರ್ಷಿಕೆಯ ಅಂಕಣದಲ್ಲಿ ಹಲವಾರು ಲೇಖನಗಳನ್ನೂ ಬರೆದಿರುವ ಅನುಭವವಿದೆ.ಒಂದು ಕವನ ಸಂಕಲನ  ಒಂದು ಪ್ರಬಂಧ ಸಂಕಲನ  , ಅಚ್ಚಿನಲ್ಲಿವೆ. ಹಲವಾರು ಪತ್ರಿಕೆಗಳ,ಸಂಘ ಸಂಸ್ಥೆಗಳ ಕವನ ಸ್ಪರ್ಧೆ,ಪ್ರಬಂಧ ಸ್ಪರ್ಧೆ ಗಳಲ್ಲಿ ಬಹುಮಾನಗಳು ದೊರೆತಿವೆ.ಆಕಾಶವಾಣಿ ಮಡಿಕೇರಿಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟಿದ್ದಾರೆ. ಸ್ಮಿತಾರಿಗೆ ದೊರಕಿರುವ ಪ್ರಶಸ್ತಿ ,ಪುರಸ್ಕಾರಗಳಲ್ಲಿ ಕೊಡಗಿನ ಗೌರಮ್ಮ ಪ್ರಶಸ್ತಿ, ಬಿ,ಎಂ,ಶ್ರೀ ಪ್ರಶಸ್ತಿ, ಶ್ರೀಮತಿ,ಸುಶೀಲ ಶೆಟ್ಟಿ ಸ್ಮಾರಕ  ಪ್ರಶಸ್ತಿ,ಸುಳ್ಯ ತಾಲೂಕಿನ ಸಾಹಿತ್ಯರತ್ನ,ದಾರಿ ದೀಪ ಪತ್ರಿಕೆಯ ಕಾಯಕರತ್ನ ,ಪ್ರಮುಖವಾದವುಗಳು. ‌ಅಪಾರ ಪ್ರತಿಭೆಯುಳ್ಳ ಸ್ಮಿತಾ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಸಂದರ್ಶನ ನೀವು ಕವಿತೆ ಬರೆಯಲು ಪ್ರಾರಂಭಿಸಿದ್ದು ಯಾವಾಗ? ನಾನು ಕವಿತೆ ಬರೆಯಲು ತೊಡಗಿದ್ದು ತೀರಾ ತಡವಾಗಿ, ಎರಡನೇ ವಾಣಿಜ್ಯ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗ .ನನಗಾಗ ಹತ್ತೊಂಬತ್ತು ವಯಸ್ಸಿರಬಹುದು. ಆಗ ಯಾವುದೋ ಹುಕಿಯಲ್ಲಿ ಒಂದಷ್ಟು ಆರಂಭಿಕ ಕವಿತೆಗಳನ್ನು ಬರೆದದ್ದು ಬಿಟ್ಟರೆ, ನಂತರ ಮದುವೆಯಾಗಿ ಎಷ್ಟೋ ವರ್ಷಗಳ ಬಳಿಕ ಕವಿತೆಯತ್ತ ವಾಲಿಕೊಂಡೆ. ಕವಿತೆಯನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ? ಮೊದಲನೆಯದಾಗಿ,  ಕವಿತೆ ಬಗ್ಗೆ ಏನೊಂದೂ ತಿಳುವಳಿಕೆ ಇಲ್ಲದಿದ್ದರೂ ಕಾಲೇಜಿನಲ್ಲಿರುವಾಗ ಉಪನ್ಯಾಕರ ಪ್ರೇರಣೆಯಿಂದ, ಅವರ ಬಳಿ ಒಳ್ಳೆ ವಿದ್ಯಾರ್ಥಿ ಅನ್ನಿಸಿಕೊಳ್ಳ ಬೇಕು ಅನ್ನುವ ನಿಟ್ಟಿನಲ್ಲಿ ಒಂದಷ್ಟು ಕವಿತೆ ಗೀಚಿದ್ದು ಬಿಟ್ಟರೆ, ನಂತರ ನನ್ನ ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕಾಗಿ, ಹಳ್ಳಿ ಮೂಲೆಯೊಂದರಲ್ಲಿ ವಾಸ ಮಾಡುವ ನಾನು ಲೋಕಕ್ಕೆ ತೆರೆದುಕೊಳ್ಳುವುದ್ದಕ್ಕಾಗಿ ಕವಿತೆ ಬರೆಯಲು ತೊಡಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಅನಿಸಿಕೆಯನ್ನು ಅಭಿವ್ಯಕ್ತಿ ಪಡಿಸಲು ಕವಿತೆ ಒಂದು ನಿರಾಪಯಕಾರಿ ಮಾಧ್ಯಮ ಅಂತ  ಅನ್ನಿಸಿ ಕವಿತೆಯ ತೆಕ್ಕೆಗೆ ಬಿದ್ದೆ. ನಿಮ್ಮ ಕವಿತೆಗಳ ಬಗ್ಗೆ ನಿಮಗೆ ಏನನಿಸುತ್ತದೆ ನನ್ನ ಬರಹಗಳ ಮೌಲ್ಯ ಮಾಪನ ಮಾಡಿಕೊಳ್ಳುವುದಕ್ಕಾಗಿ ನಾನು ಪತ್ರಿಕೆಗಳಿಗೆ ಬರೆಯುವೆ. ಪ್ರಕಟಗೊಂಡಾಗ ಸಹಜವಾಗಿ ಖುಷಿಯಾಗುತ್ತದೆ. ಅದು ಮತ್ತಷ್ಟು ಬರೆಯಲು ಪ್ರೇರೇಪಿಸುವಂತೆ ಮಾಡುತ್ತದೆ.ಆದರೆ  ಉತ್ತಮ ಕವಿತೆ ಬರೆಯಲು ಸಾಧ್ಯವಾಗಲಿಲ್ಲ ಅನ್ನುವ ಅತೃಪ್ತಿ ಮತ್ತು ಹೇಗೆ ಕವಿತೆಯನ್ನು ಒಲಿಸಿಕೊಳ್ಳುವುದು ಎನ್ನುವ ಕೊರಗು ಸದಾ ಇದೆ. ನಿಮ್ಮ ಸಾಹಿತ್ಯ ಕೃಷಿಯಬಗ್ಗೆ ನಿಮ್ಮ ಕುಟುಂಬದವರ ಅನಿಸಿಕೆಯೇನು? ನಮ್ಮ ಮನೆಯಲ್ಲಿ ಒಂದು ರೀತಿಯಾದಂತಹ ಸಾಹಿತ್ಯಿಕ ವಾತಾವರಣ ಇದೆ. ಹಾಗಾಗಿ  ನನ್ನ ಬರವಣಿಗೆಯ ಕುರಿತು ಯಾರಿಗೂ ವಿಶೇಷತೆ ಅನ್ನಿಸದಿದ್ದರೂ, ನನ್ನ ಪಾಡಿಗೆ ನಾನು ಇವುಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಯಾರ ಅಡ್ಡಿ ಇಲ್ಲ.  ಯಾರಾದರೂ ನನ್ನನ್ನು ಗುರುತಿಸಿದರೆ, ಪ್ರಶಂಸಿದರೆ ಸಹಜವಾಗಿ  ಮನೆಯಲ್ಲಿ ಖುಷಿ ಪಡುತ್ತಾರೆ ನಿಮ್ಮ ಓದಿನ ಬಗ್ಗೆ ಹೇಳಿ? ಸಾಧ್ಯವಾದಷ್ಟು ಮಟ್ಟಿಗೆ ನಾನು ಹಿರಿಯ ಕವಿಗಳ ಕವಿತೆಯನ್ನು ಓದಲು,ಅವುಗಳನ್ನು ಗ್ರಹಿಸಲು ಪ್ರಯತ್ನ ಪಡುವೆ . ಎಮ್. ಆರ್. ಕಮಲ ಮೇಡಂ, ಚೊಕ್ಕಾಡಿ ಸರ್, ಎಚ್.ಎಸ್.ವೆಂಕಟೇಶ್ ಮೂರ್ತಿ ಸರ್  ಮತ್ತು ಬಿ.ಆರ್.ಲಕ್ಷ್ಮಣ್ ರಾವ್ ಸರ್ ನನ್ನ ಇಷ್ಟದ ಕವಿಗಳು. ಕವಿತೆಯ ಹೊರತಾಗಿ ಬೇರೇನು ಬರೆದಿದ್ದೀರಿ ಕವಿತೆಯ ಜೊತೆಗೆ ನಾನು ಲಲಿತ ಪ್ರಬಂಧಗಳನ್ನ ಬರೆಯುತ್ತೇನೆ. ಆದರೆ ಕತೆ ಬರೆಯಬೇಕೆಂಬ ತುಡಿತ ಬಹಳ ಇದೆ. ಪ್ರಯತ್ನ ಜಾರಿಗೊಳಿಸಬೇಕಿದೆ ಅಷ್ಟೇ. ನಿಮ್ಮ ಇತರೇ ಹವ್ಯಾಸಗಳೇನು ನಾನೊಬ್ಬಳು ಕೃಷಿಕ ಮಹಿಳೆಯಾದ ಕಾರಣ, ಹಟ್ಟಿ, ತೋಟ, ಮನೆಕೆಲಸದಲ್ಲೇ ಸಮಯ ವ್ಯಯವಾಗುತ್ತದೆ. ಹಾಗಾಗಿ ಆಸಕ್ತಿ ಇದ್ದರೂ ಇತರ ಹವ್ಯಾಸಗಳತ್ತ ನಿಗಾ ವಹಿಸಲು ಸಾಧ್ಯವಾಗುವುದಿಲ್ಲ. ಆದ ಕಾರಣ ಬಿಡುವಿನ ವೇಳೆಯಲ್ಲಿ ಓದು ಮತ್ತು ಬರಹವಷ್ಟೇ ಸುಲಭಕ್ಕೆ ತೊಡಗಿಸಿಕೊಳ್ಳಬಹುದಾದ ಹವ್ಯಾಸ ನನಗೆ. ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆಯಲ್ಲ-ಏನು ಹೇಳುತ್ತೀರಿ ಈ ಬಗ್ಗೆ ನಿಜ, ಇತ್ತೀಚೆಗೆ ಕವಿತೆ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಯುವ ತಲೆಮಾರು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿ ಕೊಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಪ್ರಸ್ತುತ ವಿದ್ಯಮಾನಕ್ಕೆ ಪೂರಕವಾಗಿ ಬರವಣಿಗೆಯ ಮೂಲಕ ಸ್ಪಂದಿಸುತ್ತಿರುವುದು ಖುಷಿಯೆನ್ನಿಸುತ್ತದೆ. ಬರೆಹ ಹೇಗೇ ಇರಲಿ, ಬರವಣಿಗೆಯ ತುಡಿತ ಮತ್ತು ಪ್ರಯತ್ನ ಮುಖ್ಯ ಅನ್ನಿಸುತ್ತದೆ.  ಇತರರನ್ನು ಓದುತ್ತಾ ಓದುತ್ತಾ ತಮ್ಮ ಬರವಣಿಯ ದಿಕ್ಕನ್ನು ರೂಪಿಸಿಕೊಳ್ಳಬಲ್ಲರು. ಸ್ಮಾರ್ಟಪೋನ್ ಮತ್ತು ಇಂಟರ್ ನೆಟ್ ಗಳು ಮಹಿಳೆಯರು ಹೆಚ್ಚೀನ ಸಂಖ್ಯೆ ಯಲ್ಲಿ ಸಾಹಿತ್ಯ ಕೃಷಿಯಲ್ಲಿ ಕಾರಣವಾಗಿವೆ ಎಂಬ ಮಾತನ್ನುನೀವು ಒಪ್ಪುವಿರಾ?ಇದರ ಬಗ್ಗೆ ಏನು ಹೇಳುವಿರಿ ಇದು ನಿಜ. ಸ್ಮಾರ್ಟ್ ಫೋನ್,ಇಂಟರ್ನೆಟ್ ಬಂದ ಕಾರಣವೇ ನಾ ಇಷ್ಟರ ಮಟ್ಟಿಗೆ ಬರವಣಿಗೆಯಲ್ಲಿ ತೊಡಗಿಸಿಕೊಂಡೆ ಅಂತ ಗೆಳತಿಯೊಬ್ಬಳು ಹೇಳುತ್ತಾಳೆ. ಅಂಗೈಯೊಳಗೆ ಫೋನ್ ಇರುವ ಕಾರಣ ಸಿಕ್ಕ ಸಮಯದಲ್ಲಿ ತತ್ಕ್ಷಣಕ್ಕೆ ಓದು , ಬರವಣಿಗೆಯತ್ತ ವಾಲಿಕೊಳ್ಳಲು ಸಹಕಾರಿ. ನನ್ನ ಮಟ್ಟಿಗೆ ಹೇಳುವುದಾದರೆ ನನಗೆ ಇಂಟರ್ನೆಟ್ ಸೌಲಭ್ಯ ದಕ್ಕಿದ ಮೇಲೆಯೇ ಬರವಣಿಗೆ ಸಲೀಸು ಅನ್ನಿಸ ತೊಡಗಿದ್ದು ಸ್ಮಿತಾರವರ ಎರಡು ಕವಿತೆಗಳು – ಶಹರು ನಿದ್ರಿಸುವ ಚಿತ್ರ ಅನವರತ ಕರುಬಿದ್ದಕ್ಕೋಹಲುಬಿದ್ದಕ್ಕೋಅಚಾನಕ್ ಮಹಾನಗರದ ನಡುವಿಗೆಪಾದವಿಡುವಾಗ ಮೈಯೆಲ್ಲ ಪುಳಕ. ದುಡು ದುಡು ರೈಲು ಹತ್ತಿದಡ ದಡನೆ ಇಳಿಯುವಾಗಕಣ್ಣು ಬಾಡುವ ಹೊತ್ತಲ್ಲಿನಗರ ಪಿಳಿ ಪಿಳಿ ನೋಡುತ್ತಿದೆ. ಬಹುಷ; ನನ್ನನ್ನೇ ಕಾಯುತ್ತಿದ್ದಿರಬೇಕುಅಂದುಕೊಂಡೆ.ಇನ್ನು ಅದೆಷ್ಟು ನನ್ನಂತವರೋ..?!. ನೋಟವನ್ನು ಶೂನ್ಯಕ್ಕೆ ನೆಟ್ಟುದೌಡಾಯಿಸುತ್ತಲೇ ಇದ್ದಾರೆಚೋದ್ಯವಲ್ಲ ತಾನೇ? ಮತ್ತೊಮ್ಮೆಚಿವುಟಿಕೊಂಡೆ. ನನಗೋ ಗಂಟು ನೋವು ಪಾದಕ್ಕಿಳಿದುಕುಳಿತುಕೊಳ್ಳುವ ಕಾತರಅವರಿಗೋ ಅದೆಂಥಾ ಆತುರ? ತಳ್ಳಿಸಿಕೊಂಡ ರಭಸಕ್ಕೆ ಜೋಲುಹೊಡೆದಿದ್ದೆ ಅಷ್ಟೆ.ತೆಕ್ಕೆಗೆ ಬಿದ್ದವರನ್ನ ನಗರ ಕೆಳಕ್ಕೆಬೀಳಿಸುವುದಿಲ್ಲವಂತೆಹೌದೆಂಬುದ ಖಾತ್ರಿ ಪಡಿಸಿಕೊಂಡೆ. ಬಿಡುವಿಲ್ಲದ ಯಂತ್ರದ ರೆಕ್ಕೆನೆತ್ತಿ ಸವರುವಾಗದಡಲ್ ದಡಲ್ ಸದ್ದು ಎದೆಯನಡುವಿನಿಂದ ಹಾಯುವಾಗನಿದ್ರೆ ಮರೆತ ಶಹರು ಝಗಮಗಿಸುವಾಗನಾನೋ ಜಾತ್ರೆಯಿರಬೇಕೆಂದುಕೊಂಡೆ. ಅಬ್ಭಾ! ಓಡಿ ಓಡಿ ಸುಸ್ತಾಗಿನನ್ನೂರಿಗೆ ಸಾವಕಾಶವಾಗಿ ಕಾಲಿಳಿಸಿದಣಿವು ನೀಗಿಸಿಕೊಳ್ಳುತ್ತಿದ್ದೇನೆ.ಶ್..! ಊರೀಗ ಸಕ್ಕರೆ ನಿದ್ರೆಯಲ್ಲಿದೆ. ಪ್ರಭುವೇ..ಇನ್ನೇನು ಬೇಡಲಾರೆ ಹೆಚ್ಚಿಗೆ. ಸಾಕ್ಷಾತ್ಕಾರವೆನ್ನಲೇ?, ಸತ್ಯದರ್ಶನವೆನ್ನಲೇ?ಊಹೆ ಕೆಲವೊಮ್ಮೆ ಮಾಯೆಯೇ ದಿಟದೂರದಿಂದ ನುಣ್ಣಗೆಯೇ ಬೆಟ್ಟ ನನ್ನ ನಿದ್ರೆಯಲ್ಲೂ, ಎಚ್ಚರದಲ್ಲೂಕನಸಿನಲ್ಲೂ, ಪ್ರಾರ್ಥನೆಯಲ್ಲೂ ಈಗಶಹರು ನಿದ್ರಿಸುವ ಚಿತ್ರ. ########################### ಕಾಡು ಹೂವುಗಳು ಅವೇನು ಕೇಳಲಿಲ್ಲ ತಾವುಅರಳಿಕೊಳ್ಳಲು ಇಂತದೇತಾವು ಬೇಕೆಂದುಆದರೂ ಅವರವರ ಇಷ್ಟಕ್ಕೆ ತಕ್ಕಸಾಮರ್ಥ್ಯಕ್ಕೆ ತಕ್ಕಂತೆ.. ಕೆಲವು ಕುಂಡದಲ್ಲಿ ಅರಳಿಕೊಂಡವುಇನ್ನು ಕೆಲವು ಪಾತಿಯಲ್ಲಿಹಸಿವೆಯೆಂಬುದು ಗೊತ್ತೇ ಆಗದಂತೆನೀರು ಗೊಬ್ಬರ ಹದವರಿತು ದಕ್ಕಿಸಿಕೊಂಡವು. ತುಟಿ ತುಂಬ ನಗು ತುಳುಕಿಸಿಕೊಂಡುಒಡಲ ತುಂಬ ಕಂಪು ತುಂಬಿಕೊಂಡುಬಣ್ಣ ಬಣ್ಣದ ಪಕಳೆಗಳುಬಿರಿದದ್ದೊಂದೇ ತಡ.. ದೂರದ ಮಾರುಕಟ್ಟೆಯಲ್ಲಿಬೆಲೆ ನಿಗದಿಯಾಯಿತುಪಾಪಕ್ಕೋ,ಪುಣ್ಯಕ್ಕೋ,ಶಾಪಗ್ರಸ್ಥರಂತೆಕೆಲವು ಹಿತ್ತಲಿನಲ್ಲಿಯೇ ಉಳಿದುಕೊಂಡವು. ಸAಭ್ರಮದ ಸಡಗರದ ನಗುತುರುಬಿನಲ್ಲಿ,ಉದ್ದಜಡೆಯಲ್ಲಿಮಂಟಪದಲ್ಲಿ,ವೇದಿಕೆಯಲ್ಲಿಹಾರ ತುರಾಯಿಗಳಲ್ಲಿ ಅಕಾಲಿಕ ಅವಸಾನಪೈಪೋಟಿಯ ಜಿದ್ದಿನಲ್ಲಿ. ಅಲ್ಲಿ ಬೆಟ್ಟದಿರುಕಲಿನಲ್ಲಿಯಾರ ದೇಖರೇಖಿಯೂ ಇಲ್ಲದೆಹೆಸರಿಲ್ಲದ ಕೆಂಪು,ಹಳದಿ,ಕಡುನೀಲಿಬಣ್ಣನೆಗೂ ಸಿಗದ ಬಣ್ಣಗಳು ಊರಿನೊಳಗೆ ಬೇರನ್ನೂರಲುಸುತರಾಂ ಒಪ್ಪುತ್ತಲೇ ಇಲ್ಲಬಣ್ಣದೊಳಗಿನ ಸಹಜ ನಗುಮಾಸಬಹುದೆಂಬ ದಿಗಿಲಿವೆಯೆಂಬಂತೆ. **************************************** ಕವಿ ಪರಿಚಯ ಸಮತಾ ಆರ್.

Read Post »

ಇತರೆ, ವಾರ್ಷಿಕ ವಿಶೇಷ

ಒಂದು ಲೋಟ ಗಂಜಿ

ಕಥೆ ಒಂದು ಲೋಟ ಗಂಜಿ ಟಿ.ಎಸ್.ಶ್ರವಣಕುಮಾರಿ ಶುರುವಾಗಿದ್ದು ಹೀಗೆ… ಸಾವಿತ್ರಿಯ ಮಗಳು ಜಯಲಕ್ಷ್ಮಿ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಯನ್ನು ಸೇರಿ ಎರಡು ದಿನವಾಗಿತ್ತು. ಹೆದರುವಂತದೇನಲ್ಲ, ಚೊಚ್ಚಲ ಹೆರಿಗೆ. ಆದರೆ ಸ್ವಲ್ಪವೇನೂ, ಸ್ವಲ್ಪ ಜಾಸ್ತಿಯೇ ನೋವು ತಿನ್ನುತ್ತಿದ್ದರೂ ಇನ್ನೂ ಹೆರಿಗೆಯಾಗಿರಲಿಲ್ಲ. ಸಾವಿತ್ರಿ, ಮೊನ್ನೆ ಬೆಳಗ್ಗೆ ಬಂದಿದ್ದವಳು ರಾತ್ರಿಯೆಲ್ಲಾ ಆಸ್ಪತ್ರೆಯ ಕಾರಿಡಾರಿನಲ್ಲೇ ತೂಕಡಿಸುತ್ತಾ ಕಾಯುತ್ತಾ ಕುಳಿತಿದ್ದಳು. ಆಸ್ಪತ್ರೆಗೆ ಮನೆ ಸ್ವಲ್ಪ ದೂರವೇ. ಗಂಡನಿಗೆ ಆಗುಂಬೆಯ ಟೋಲ್ಗೇಟಿನಲ್ಲಿ ಕೆಲಸ. ಬರುವುದು ವಾರಕ್ಕೊಂದು ಬಾರಿಯೇ. ನಿನ್ನೆ ಮತ್ತು ಇಂದು ಬೆಳಗ್ಗೆ ಒಂದು ಘಳಿಗೆ ಮನೆಗೆ ಹೋಗಿ ಸ್ನಾನ ಮಾಡಿ, ಹೊಟ್ಟೆಗಿಷ್ಟು ಹಾಕಿಕೊಂಡು ಜಯಲಕ್ಷ್ಮಿಗಿಷ್ಟು ಬಿಸಿನೀರು, ಜೀರಿಗೆ ಕಷಾಯವನ್ನು, ಉಳಿದಿದ್ದ ರಾತ್ರಿಯ ಹಾಲನ್ನೇ ಹಾಕಿ ಒಂದು ಲೋಟ ಗಂಜಿಯನ್ನು ಕಾಸಿಕೊಂಡಿದ್ದಳು. ಮಧ್ಯಾಹ್ನಕ್ಕೂ ಹುರಿಟ್ಟನ್ನೇ ತಿನ್ನುವಂತೆ ಮಕ್ಕಳಿಗೆ ಹೇಳಿ ಬಂದಿದ್ದಳು. ನೋವಿನಿಂದ ನರಳುತ್ತಿದ್ದ ಜಯಲಕ್ಷ್ಮಿಗೂ, ಆತಂಕದಿಂದ ಕಾಯುತ್ತಲೇ ಕುಳಿತಿದ್ದ ಸಾವಿತ್ರಿಗೂ ಹೆರಿಗೆಯಾಗಿ ಮಗು ಹೊರಬಂದರೆ ಸಾಕೆನ್ನಿಸಿತ್ತು. ಇವತ್ತಂತೂ ಜಯಲಕ್ಷ್ಮಿಗೆ ಹೊಟ್ಟೆಗೇನೂ ಸೇರದೆ ಅವಳು ಗಂಜಿಯನ್ನೂ ಕುಡಿಯಲಿಲ್ಲ. ಕಷ್ಟಪಟ್ಟು ಒಂದಿಷ್ಟು ಜೀರಿಗೆ ಕಷಾಯವನ್ನು ಕುಡಿಸಿದ್ದಾಯಿತು. ಮನೆಯಲ್ಲೇ ಐದು ಹೆರಿಗೆ, ಅದರಲ್ಲೆರಡು ಸಾವು ಕಂಡಿದ್ದ ಸಾವಿತ್ರಿಗೆ ಈಗ ಮಗಳನ್ನು ಮನೆಯಲ್ಲಿಟ್ಟುಕೊಂಡು ಹೆರಿಗೆ ಮಾಡಿಸುವಷ್ಟು ಧೈರ್ಯವಿಲ್ಲ. ಆಗ ಸಿಗುತ್ತಿದ್ದ ಮಿಡ್‌ವೈಫ್‌ ಗಂಗಮ್ಮನಿಗೂ ಈಗ ವಿಪರೀತ ವಯಸ್ಸಾಗಿ ಅವಳು ಹೆರಿಗೆ ಮಾಡಿಸುವುದನ್ನು ಬಿಟ್ಟು ಏಳೆಂಟು ವರ್ಷಗಳೇ ಆಗಿವೆ. ಇನ್ಯಾರ ಮೇಲೂ ಸಾವಿತ್ರಿಗೆ ನಂಬಿಕೆಯಿಲ್ಲ. ವಿಧಿಯಿಲ್ಲದೆ ಆಸ್ಪತ್ರೆಗೆ ಸೇರಿಸಿದ್ದಾಗಿದೆ. ದೇವರಾದರೂ ಪ್ರತ್ಯಕ್ಷವಾಗಬಹುದೇನೋ, ಡಾಕ್ಟರ ಮುಖವಂತೂ ಎರಡು ದಿನದಿಂದಲೂ ಕಂಡಿರಲಿಲ್ಲ. ರಜೆಯ ಮೇಲಿದ್ದಾರಂತೆ. ಇರುವ ಇನ್ನೊಬ್ಬ ಡಾಕ್ಟರಿಗೆ ಪುರಸೊತ್ತೇ ಇಲ್ಲ. ಲೇಬರ್‌ ವಾರ್ಡಿಗಷ್ಟೇ ಹೋಗುತ್ತಿದ್ದಾರೆ. ಮಿಕ್ಕ ಕಾರುಬಾರೆಲ್ಲಾ ದಾದಿಯರದೇ. ಯಾವಾಗಲೋ ಇಣುಕಿ ಹೋಗುವ ಈ ದಾದಿಯರು ಬಂದು ನೋಡಿದಂತೆ ಮಾಡಿ ಹೋಗುತ್ತಿದ್ದಾರೆಯೇ ವಿನಃ ಯಾವ ವಿವರವನ್ನೂ ಹೇಳುತ್ತಿಲ್ಲ. ಮಗುವಿಗೆ ಹೊಟ್ಟೆಯಲ್ಲೇ ಏನಾದರೂ ಆಗಿಬಿಟ್ಟರೆ ಎನ್ನುವ ಆತಂಕ ಸಾವಿತ್ರಿಗೆ. ಏನಾದರೂ ಹೆಚ್ಚು ಕಡಿಮೆಯಾದರೆ ಬೀಗಿತ್ತಿ ತನ್ನನ್ನು ಸಂತೆಯಲ್ಲಿಟ್ಟು ಹರಾಜು ಹಾಕಿಬಿಡುತ್ತಾಳೆ ಎನ್ನುವ ಭಯದಲ್ಲಿ ವಾರ್ಡಿನಲ್ಲಿ ಓಡಾಡುತ್ತಿದ್ದ ದಾದಿಯರನ್ನೆಲ್ಲಾ ವಿಚಾರಿಸುತ್ತಿದ್ದರೂ ಇವಳಿಗಿರುವ ಆತಂಕ ಅವರಿಗೇಕೆ?! ʻಇನ್ನೂ ತಡ ಆಗ್ಬಹುದು, ಡಾಕ್ಟರು ಬಂದು ನೋಡಿ ಹೇಳ್ತಾರೆʼ ಎನ್ನುತ್ತಾ ಇವಳ ಮುಖವನ್ನೂ ನೇರವಾಗಿ ನೋಡದೆ ಮರದ ಬೊಂಬೆಗಳಂತೆ ಓಡಾಡುತ್ತಿದ್ದಾರೆ. ಇವಳ ನಂತರ ಬಂದು ಅಕ್ಕ ಪಕ್ಕದ ಹಾಸಿಗೆಯಲ್ಲಿ ಮಲಗಿದವರಿಗೂ ಹೆರಿಗೆಗಳಾಗಿ ಒಂದಿಬ್ಬರು ಮನೆಗೂ ಹೋಗಿಯಾಗಿದೆ. ಇಂದು ಬೆಳಗ್ಗೆ ಪಕ್ಕದ ಬೆಡ್ಡಿಗೆ ಆಯನೂರಿನ ಕಡೆಯ ರೈತ ದಂಪತಿಗಳು ತಮ್ಮ ಮಗಳು ಮಾದೇವಿಯನ್ನು ಸೇರಿಸಿದ್ದಾರೆ. ಅವಳದ್ದೂ ಚೊಚ್ಚಲ ಹೆರಿಗೆಯೇ. ದಿನವಾಗಿದೆ, ನೋವು ಶುರುವಾಗಿಲ್ಲ; ಇಬ್ಬರೂ ಕೂತು ಒಂದಷ್ಟು ಕಷ್ಟ ಸುಖ ಹಂಚಿಕೊಂಡಿದ್ದಾಯಿತು. ಅಂತೂ ಇಂತೂ ರಜೆಯಿಂದ ವಾಪಸ್ಸು ಬಂದ ಡಾಕ್ಟರು ಮಧ್ಯಾಹ್ನ ಎರಡು ಗಂಟೆಗೆ ಊಟ ಮುಗಿಸಿ ಆರಾಮದಲ್ಲಿ ಬಂದು ಕೇಸ್‌ ಶೀಟನ್ನು ನೋಡಿ ಮೊನ್ನೆ ಬೆಳಗ್ಗೆಯಿಂದ ನೋವು ಬರುತ್ತಿದ್ದರೂ ಯಾಕೆ ಹೆರಿಗೆಯಾಗಿಲ್ಲ ಎನ್ನುವ ಸಂಶಯದಲ್ಲಿ ಕೇಸ್‌ ಶೀಟನ್ನು ಬರೆದ ದಾದಿಯನ್ನು ಕೇಳೋಣವೆಂದರೆ ಅವಳು ನಾಪತ್ತೆ. ಪರೀಕ್ಷಿಸಿದವರೇ ಸ್ವಲ್ಪ ಆತಂಕದಿಂದಲೇ ಪಕ್ಕದಲ್ಲಿದ್ದ ದಾದಿಗೆ ಕೂಡಲೇ ಲೇಬರ್‌ ವಾರ್ಡಿಗೆ ಶಿಫ್ಟ್‌ ಮಾಡಲು ಹೇಳಿ ಸಾವಿತ್ರಿಯ ಕಡೆ ತಿರುಗಿ ಕೂಡಾ ನೋಡದೆ ಹೊರಟುಹೋದರು. ಅವರು ಹೋದ ರೀತಿಯಿಂದಲೇ ಅವಳಿಗೆ ಆತಂಕ ಶುರುವಾಯಿತು. ಹಿಡಿದು ನಿಲ್ಲಿಸಿ ಕೇಳಲು ಅವಳಿಂದ ಸಾಧ್ಯವೇ! ಮಗಳ ಹಿಂದೆಯೇ ಲೇಬರ್‌ ವಾರ್ಡಿನ ತನಕ ಹಿಂಬಾಲಿಸಿ, ಅವಳ ಮುಖಕ್ಕೇ ಬಾಗಿಲು ಹಾಕಿ ಒಳಸೇರಿದ ಮೇಲೆ ಕಾಯುವುದು ಬಿಟ್ಟು ಬೇರೆ ದಾರಿಯಿಲ್ಲದೆ ಮುಚ್ಚಿದ ಬಾಗಿಲನ್ನೇ ನೋಡುತ್ತಾ ಕಾರಿಡಾರಿನಲ್ಲೇ ನಿಂತಳು. ಕಾಯುತ್ತಾ ನಿಂತವಳಿಗೆ ನಿಮಿಷಗಳು ಗಂಟೆಗಳಾಗುತ್ತಿವೆ. ಎಷ್ಟೋ ಹೊತ್ತಿನ ಮೇಲೆ ಹೊರಬಂದ ದಾದಿ ಒಂದು ಹಾಳೆಯನ್ನು ತಂದು ಅದರ ಮೇಲೆ ಸಹಿಹಾಕುವಂತೆ ಸಾವಿತ್ರಿಯ ಮುಖಕ್ಕೆ ಹಿಡಿದಳು. ಭಯದಿಂದಲೇ “ಏನಾಗಿದ್ಯಮ್ಮಾ? ಹೇಗಿದಾಳೆ ಮಗಳು” ಎಂದರೆ ಆ ದಾದಿಗೆ ಇಂತವರೆಷ್ಟೋ… “ಸರೀಗೆ ಗೊತ್ತಿಲ್ಲ, ಆಪರೇಶನ್‌ ಮಾಡ್ಬೇಕಾಗ್ಬೋದು ಅಂತಿದ್ರು ಡಾಕ್ಟ್ರು. ನೀನಿಲ್ಲಿ ರುಜು ಹಾಕಮ್ಮ” ಎನ್ನುತ್ತಾ ಪೆನ್ನನ್ನು ಕೊಟ್ಟಳು. “ಯಾಕಿದು? ನಂಗೆ ರುಜು ಹಾಕಕ್ಕೆ ಬರಲ್ಲ, ಬರೀ ಹೆಸರು ಬರೆಯಕ್ಕೆ ಬರತ್ತೆ” ಅಂದಳು ಸಾವಿತ್ರಿ. “ಅದನ್ನೇ ಬರಿ. ಆಪರೇಶನ್‌ ಮಾಡಕ್ಕೆ ಒಪ್ಗೆ ಇದೆ ಅಂತ ಬರ‍್ದಿದೆ ಇದ್ರಲ್ಲಿ” ಎನ್ನುತ್ತಾ ನಿರ್ಲಿಪ್ತಳಾಗಿ ಆ ಹಾಳೆಯನ್ನು ತೆಗೆದುಕೊಂಡು ಒಳಹೋದಳು. ಇತ್ತ ಸಾವಿತ್ರಿಗೆ ಇನ್ನಷ್ಟು ಹೆದರಿಕೆ, ಚಿಂತೆ ಶುರುವಾಗಿ ಕೈಕಾಲು ನಡುಗತೊಡಗಿತು. ಎಷ್ಟೋ ಹೊತ್ತಾಯಿತು… ಕಾದು ಕಾದು ಕಣ್ಣು ಸೋಲುವಾಗ ಮಗುವನ್ನೆತ್ತಿಕೊಂಡು ಹೊರಬಂದ ದಾದಿ “ಗಂಡು ಮಗು. ಐವತ್ರೂಪಾಯ್ ತತ್ತಾ, ತೋರಿಸ್ತೀನಿ” ಕೈಚಾಚಿದಳು. ಅರ್ಥವಾಗದೆ ಕಣ್ಕಣ್ಣು ಬಿಟ್ಟ ಸಾವಿತ್ರಿಯ ಸೀರೆಯ ಗಂಟಿನಲ್ಲಿಟ್ಟುಕೊಂಡಿದ್ದ ಐದು, ಹತ್ತು ರೂಪಾಯಿಗಳನ್ನು ಸೇರಿಸಿದರೆ ಬರೀ ನಲವತ್ತು ರೂಪಾಯಿ ಆಯಿತು. “ಏನು ದರ್ವೇಸಿಗಳೋ. ಹೆರಿಗೆಗೆ ಅಂತ ಬಂದವ್ರಿಗೆ ಒಂದಿಷ್ಟು ದುಡ್ಡಿಟ್ಕಂಡು ಬರಕ್ಕೆ ಗೊತ್ತಾಗಲ್ವಾ. ಏನು ಅಪ್ಪನ ಮನೆ, ಈಗ ಡಾಕ್ಟ್ರಿಗೆ ಐನೂರು ರೂಪಾಯಾದ್ರೂ ಕೊಡ್ಬೇಕು, ಆಪ್ರೇಶನ್‌ ಕೇಸ್‌ ಬೇರೆ. ಅಲ್ಲಿ ಓಟಿನಲ್ಲಿ ಇದ್ದವ್ರಿಗೆಲ್ಲಾ ಇಪ್ಪತ್ತು, ಮೂವತ್ತು ಕೊಡ್ಬೇಕು. ಅದ್ಹೆಂಗೆ ಮಾಡ್ತೀಯೋ ನೋಡು. ಸರಿ, ಈಗ ನಂಗೆ ನಲ್ವತ್ತನ್ನೇ ಕೊಡು ಹೋಗ್ಲಿ. ಮಿಕ್ಕವ್ರಿಗೆ ಕೊಡಕ್ಕೆ ಎಲ್ಲಾದ್ರೂ ಹೋಗಿ ದುಡ್ಡು ತಗೊಂಡು ಬಂದ್ಬಿಡು. ಆಯಾನೂ ಸೇರಿ ಇನ್ನೂ ಮೂರು ಜನ ಇದಾರೆ” ಎನ್ನುತ್ತಾ ದುಡ್ಡು ತೆಗೆದುಕೊಂಡು ಮಗುವಿನ ಮುಖವನ್ನು ತೋರಿಸಿದಳು. ಮೊಮ್ಮಗುವಿನ ಮುಖ ನೋಡಿದ ತಕ್ಷಣ ಎಲ್ಲಾ ಮರೆತ ಸಾವಿತ್ರಿಯ ಮುಖವರಳಿತು. ಎತ್ತಿಕೊಳ್ಳಲು ಕೈಚಾಚಿದರೆ ಮುಟ್ಟಕ್ಕೂ ಬಿಡದೆ “ದುಡ್ಡು ತೊಗೊಂಡು ಬಾ ಅಂದ್ನಲ್ಲಾ” ಎನ್ನುತ್ತಾ ಒಳಹೊರಟಳು. “ಅಮ್ಮಾ… ಮಗಳು ಹೇಗಿದಾಳಮ್ಮಾ?” ಕರೆದು ಕೇಳಿದಳು. “ಹುಷಾರಾಗಿದಾಳೆ. ಅವ್ಳಿಗೆ ಕೊಡಕ್ಕೆ ಗಂಜೀನೋ, ಕಾಫೀನೋ ತೊಗೊಂಡ್ಬಾ. ಇನ್ನೊಂದು ಗಂಟೇಲಿ ಬೆಡ್ಡಿಗೆ ಹಾಕ್ತಾರೆ” ಎಂದವಳು ಮುಂದಿನ ಮಾತಿಗೆ ಅವಕಾಶವಿಲ್ಲದ ಹಾಗೆ ಒಳಹೋಗಿ ಬಾಗಿಲೆಳೆದುಕೊಂಡಳು. ಏನು ಮಾಡಬೇಕೆಂದು ತೋಚದೆ ಯೋಚಿಸುತ್ತಾ ಐದು ನಿಮಿಷ ಸುಮ್ಮನೆ ಅಲ್ಲಿದ್ದ ಬೆಂಚಿನ ಮೇಲೆ ಕುಳಿತಳು. ʻಬೆಳಗ್ಗೆ ತಂದಿದ್ದ ಗಂಜಿ ಹಳಸಿ ವಾಸನೆ ಬಂದಿದೆ, ಬಾಣಂತಿಗೆ ಅದನ್ನು ಕೊಡಲು ಸಾಧ್ಯವೇ ಇಲ್ಲ. ನಡೆದುಕೊಂಡು, ಮನೆಗೆ ಹೋಗಿ, ಗಂಜಿ ಮಾಡಿಕೊಂಡು ತರಲು ಕಡೇ ಪಕ್ಷ ಎರಡು ಗಂಟೆಯಾದರೂ ಬೇಕು. ಅಷ್ಟರೊಳಗೆ ಬೆಡ್‌ಗೆ ಹಾಕಿಬಿಟ್ಟರೆ! ಅವ್ಳು ಬರೋ ಹೊತ್ತಿಗೆ ನಾನಿಲ್ದೇ ಹೋದ್ರೆ! ಪಾಪ, ಜಯ ಹೊಟ್ಟೆಗೇನಾದರೂ ಹಾಕಿಕೊಂಡು ಎರಡು ದಿನವೇ ಆಗಿದೆ. ʻಹಡ್ದ ಹೊಟ್ಟೆಗೆ ಹೇಲು ತಿನ್ನೋಷ್ಟು ಹಸ್ವುʼ ಅಂತಾರೆ. ಮೊದ್ಲು ಅವ್ಳಿಗೆ ಗಂಜಿ ತಂದುಕೊಡ್ಬೇಕಲ್ಲʼ ಎಂದುಕೊಳ್ಳುತ್ತಿರುವಾಗ, ದಿನವೂ ಅಡುಗೆ ಕೆಲಸಕ್ಕೆ ಹೋಗುತ್ತಿರುವ ಪದ್ದಮ್ಮನ ಮನೆ ಇಲ್ಲಿಗೆ ಹತ್ತು ನಿಮಿಷದ ದಾರಿ. ಹೋಗಿ ವಿಷಯ ಹೇಳಿ ಅಲ್ಲೇ ಒಂದು ಲೋಟ ಗಂಜಿ ಮಾಡಿಕೊಂಡು, ಸ್ವಲ್ಪ ದುಡ್ಡನ್ನೂ ಕೇಳಿ ತೆಗೆದುಕೊಂಡು ಬರಬಹುದೇನೋ ಅನ್ನಿಸಿತು. ʻಅದೇ ಸರಿʼ ಅನ್ನಿಸಿ ಇನ್ನು ತಡಮಾಡದೆ ಸರಸರನೆ ಪದ್ದಮ್ಮನ ಮನೆಕಡೆ ಹೆಜ್ಜೆ ಹಾಕಿದಳು. ಇವಳದೃಷ್ಟಕ್ಕೆ ಪದ್ದಮ್ಮ, ಡೆಲ್ಲಿಯಿಂದ ಬಂದಿದ್ದ ಅವರ ನಾದಿನಿ ಸೀತಮ್ಮನೊಂದಿಗೆ ಬೆಳಗ್ಗೆಯೇ ಯಾರದೋ ಮನೆಗೆ ಊಟಕ್ಕೆ ಹೋಗಿದ್ದರಂತೆ, ಇನ್ನೂ ಬಂದಿರಲಿಲ್ಲ. ಅಲ್ಲಿ ಸುತ್ತುಕೆಲಸಕ್ಕಿದ್ದ ನಟರಾಜ ಹಾಗಂದ. ನಟರಾಜನ ಹತ್ತಿರ ಎಲ್ಲವನ್ನೂ ಹೇಳಿ, “ಒಂದು ಲೋಟ ಗಂಜಿ ಮಾಡ್ಕಂಡು ಹೋಗ್ತಿನಿ. ಪದ್ದಮ್ಮ ಬಂದ್ಮೇಲೆ ಹಿಂಗಾಯ್ತು ಅಂತ್ಹೇಳ್ಬಿಡೋ. ದುಡ್ಡಿಗೇನ್ಮಾಡೋದೋ” ಎಂದು ಹೇಳುತ್ತಲೇ ಒಲೆಹೊತ್ತಿಸಿ ಗಂಜಿಯನ್ನು ಕಾಸಿಕೊಂಡು ತನ್ನೊಂದಿಗೆ ತಂದಿದ್ದ ಟಿಫಿನ್‌ ಕ್ಯಾರಿಯರನ್ನು ತೊಳೆದು ಅದರಲ್ಲಿ ಗಂಜಿಯನ್ನು, ಕಾಸಿದ ನೀರನ್ನು ತಿರುಪಿನ ಚಂಬಿನಲ್ಲೂ ತುಂಬಿಕೊಂಡಳು. ಹೊರಗೆ ಪದ್ದಮ್ಮನ ಮಾತು ಕೇಳಿಸಿತು. ʻಸಧ್ಯ! ಬಂದ್ರಲ್ಲ, ದುಡ್ನೂ ಕೇಳಬಹುದುʼ ಅನ್ನಿಸಿ ಸ್ವಲ್ಪ ನಿರಾಳವಾಯಿತು. ನಟರಾಜ ಹೊರಗೆ ಹೇಳಿದನೇನೋ, “ಹೌದಾ, ಎಂಥಾ ಮಗ್ವಾಯ್ತೇ, ಮಗೂ, ಬಾಣಂತಿ ಚೆನ್ನಾಗಿದಾರೇನೇ” ಎಂದು ಕೇಳುತ್ತಾ ಪದ್ದಮ್ಮ ಅಡುಗೆಮನೆಗೇ ಬಂದಳು. ಹಿಂದೆಯೇ ಕಾಳಿಯಂತೆ ಬಂದ ಸೀತಮ್ಮ “ನಿಂಗ್ಯಾರೆ ಇಷ್ಟು ಪಾರುಪತ್ಯ ಕೊಟ್ಟೋರು? ಏನು, ನಿನ್ನ ಮನಿ ಅನ್ನೋಂಗೆ ಬಂದು ಇಲ್ಲಿ ಗಂಜಿ ಕಾಯಿಸ್ಕತಿದೀಯಲ್ಲ. ಅದೆಷ್ಟು ಸ್ವತಂತ್ರ ನಿಂಗೆ” ಎನ್ನುತ್ತಾ ಸಾವಿತ್ರಿಯ ಮೇಲೆ ವಡವಡ ಬೈಗಳ ಪ್ರಹಾರವನ್ನೇ ಶುರುಮಾಡಿದಳು. ಜೊತೆಗೆ ವಯಸ್ಸಿನಲ್ಲಿ ತನಗಿಂತ ಚಿಕ್ಕವಳಾಗಿದ್ದ ಅತ್ತಿಗೆಯನ್ನೂ ಅಟಕಾಯಿಸಿಕೊಂಡು “ಏನ್ ಪದ್ದಾ, ಕೆಲಸದವ್ರಿಗೆ ಇಷ್ಟು ಸದ್ರ ಕೊಟ್ಟಿದೀಯಾ. ನೀನ್ ಮನೇಲಿ ಇಲ್ದಿರೋವಾಗ ಹಾಯಾಗ್ಬಂದು ಯಾರೇನು ಬೇಕಾರೂ ಮಾಡ್ಕಂಡು ಹೋಗ್ಬೋದಾ? ನಿಂಗೂ ಬುದ್ಧಿ ಇಲ್ಲ, ನಿನ್ಗಂಡಂಗೂ ಇಲ್ಲ. ಮನೇವ್ರಿಲ್ದಿದ್ದಾಗ ಹೇಳ್ದೆ, ಕೇಳ್ದೆ ಮನೇ ಸಾಮಾನು, ಸರಂಜಾಮು ಮುಟ್ಟೂದೂಂದ್ರೇನು? ಇಬ್ರೂ ಕೂಲಿಯವ್ರನ್ನ ತಲೆ ಮೇಲೆ ಕೂರಿಸ್ಕಂತೀರಿ. ಯಾರ‍್ಯಾರನ್ನ ಎಲ್ಲಿಟ್ಟಿರ‍್ಬೇಕೋ ಅಲ್ಲೇ ಇಟ್ಟಿರ‍್ಬೆಕು. ಇದು ತೀರಾ ಅತ್ಯಾಯ್ತು” ಇಬ್ಬರನ್ನೂ ವಾಚಾಮಗೋಚರ ಬೈಯುತ್ತಾ ನಿಂತಳು. ಪದ್ದಮ್ಮ ಸ್ವಭಾವತಃ ಸರಳ ಮನಸ್ಸಿನವಳು. ಅಪರೂಪಕ್ಕೆ ಡೆಲ್ಲಿಯಿಂದ ಬಂದಿರುವ ನಾದಿನಿಯನ್ನು ಬಿಟ್ಟುಕೊಡಲಾರಳು, ಇತ್ತ ದಿನವೂ ಅಡುಗೆಗೆ ಬರುವ ಸಾವಿತ್ರಿಯನ್ನೂ ಏನೂ ಅನ್ನಲಾರಳು. ಅವಳೂ ಪೆಚ್ಚಾಗಿ ನಿಂತಳು. ಸಾವಿತ್ರಿಗಂತೂ ಎರಡು ದಿನದಿಂದ ಕಟ್ಟಿಕೊಂಡಿದ್ದ ಭಯ, ಆತಂಕ, ದುಃಖ ಎಲ್ಲವೂ ಒಟ್ಟಿಗೆ ನುಗ್ಗಿ ಕಣ್ಣಲ್ಲಿ ನೀರಾಡತೊಡಗಿತು. ಇದು ಇಷ್ಟೊಂದು ದೊಡ್ಡ ಪ್ರಮಾದವಾಗಬಹುದೆಂಬ ಅರಿವಿದ್ದರೆ ಅವಳು ತಡವಾದರೂ ಮನೆಗೇ ಹೋಗಿ ಬಂದುಬಿಡುತ್ತಿದ್ದಳೇನೋ… ಈಗೇನು ಮಾಡಲೂ ತೋಚದೆ ಎರಡು ನಿಮಿಷ ತಲೆಕೆಳಗೆ ಹಾಕಿ ಮೌನವಾಗಿ ನಿಂತಳು. ಸೀತಮ್ಮನ ಕೋಪ ಇನ್ನೂ ಇಳಿದಿರಲಿಲ್ಲ, “ಮಾಡೋದ್ ಮಾಡಿ ಹೇಗ್ ನಿಂತಿದೀಯ ನೋಡು, ಏನೂ ಗೊತ್ತಿಲ್ದೇ ಇರೋವ್ರ ಥರ, ಎಲ್ಲಿ ಹೇಗಿರ‍್ಬೇಕೋ ಅದ್ನ ಮದ್ಲು ಕಲ್ತ್ಕಾ. ನೀನಾದ್ರೂ ಪದ್ದಾ, ಈ ಥರ ಸದರ ಕೊಟ್ಯೋ ಒಳ್ಳೇದಲ್ಲ ತಿಳ್ಕಾ. ಅಮ್ಮಾ ಇರ‍್ಬೇಕಿತ್ತು, ಗೊತ್ತಾಗ್ತಿತ್ತು. ಅವ್ಳು ಅಷ್ಟು ಜತನ್ವಾಗಿ ನೋಡ್ಕಂಡಿದ್‌ ಮನೇನ ನೀನು ಗುಡಿಸಿಬಿಡ್ತಿದೀಯ…. ಈ ಮನೇಲಿ ಹೆಣ್ಮಕ್ಳಿಗೂ ಇಲ್ದಿರೋ ಗೌರವ ಕೂಲಿಯಾಳುಗಳ್ಗಿದೆ” ನಿಲ್ಲುತ್ತಲೇ ಇಲ್ಲ ಬೈಗಳ ಮಳೆ. ಇನ್ನೂ ಏನೇನು ಅನ್ನುತ್ತಿದ್ದಳೋ, ಅಷ್ಟರಲ್ಲಿ ಬಚ್ಚಲಿಗೆ ಹೋಗಬೇಕೆನ್ನಿಸಿತೇನೋ ಬೈದುಕೊಂಡೇ ಹಿತ್ತಲಿಗೆ ಹೋದಳು. ತಕ್ಷಣವೇ ಪದ್ದಮ್ಮ “ಅವ್ಳು ಬರೋದ್ರೊಳ್ಗೆ ಇದ್ನ ತಗಂಡು ಈಗ್ಲೇ ಜಾಗ ಖಾಲಿ ಮಾಡೆ” ಎಂದು ಸಾವಿತ್ರಿಯನ್ನು ಹೆಚ್ಚುಕಡಿಮೆ ಓಡಿಸಿದಳು. ಸಾವಿತ್ರಿಗೆ ದುಡ್ಡು ಕೇಳಲು ಅವಕಾಶವಾಗಲೇ ಇಲ್ಲ. ದಾರಿಯುದ್ದಕ್ಕೂ ಕಣ್ಣೀರಿಡುತ್ತಲೇ ʻಇಷ್ಟೊತ್ತಿಗೆ ವಾರ್ಡಿಗೆ ಹಾಕೇಬಿಟ್ಟಿರ‍್ತಾರೇನೋʼ ಎನ್ನುವ ಅತಂಕದಲ್ಲೇ ಆಸ್ಪತ್ರೆಯನ್ನು ಸೇರಿದಳು. ಅವಳಂದುಕೊಂಡ ಹಾಗೇ ಜಯಲಕ್ಷ್ಮಿಯನ್ನು ವಾರ್ಡಿಗೆ ಹಾಕಿದ್ದರು. ಮಗುವನ್ನಿನ್ನೂ ಕರೆತಂದಿರಲಿಲ್ಲ. ತುಂಬಾ ಸುಸ್ತಾಗಿದ್ದವಳನ್ನು ನೋಡಿದ ಸಾವಿತ್ರಿಗೆ ದುಃಖ ಇಮ್ಮಡಿಸಿತು. ಗಂಜಿಯನ್ನು ಟೇಬಲ್ಲಿನ ಮೇಲಿಟ್ಟು, ಜಯಳ ತಲೆಯನ್ನು ಸವರಿ “ಹೇಗಿದೀಯೆ” ಅನ್ನುವಷ್ಟರಲ್ಲಿ ಬಂದ ನರ್ಸನ್ನು “ಮಗುವೆಲ್ಲಿ?” ಎಂದು ಕೇಳಿದಳು. “ಮಿಕ್ಕವ್ರಿಗೆ ದುಡ್ಕೊಟ್ಮೇಲೆ ಸ್ನಾನ ಮಾಡ್ಸಿ ತಂಕೊಡ್ತಾರೆ, ಅಲ್ಲೇ ಲೇಬರ್‌ ವಾರ್ಡಲ್ಲೇ ಅಳ್ತಾ ಇದೆ” ಎಂದು ಗಂಜಿಯನ್ನು ಕೊಡಲೂ ಬಿಡದೆ “ಡಾಕ್ಟ್ರು ಕರೀತಿದಾರೆ, ಬಾಯಿಲ್ಲಿ” ಎಂದು ಹೆಚ್ಚುಕಡಿಮೆ ಎಳೆದುಕೊಂಡಂತೇ ಹೋದಳು. ರಿಜಿಸ್ಟರಿನಲ್ಲಿ ಏನೋ ಬರೆಯುತ್ತಿದ್ದ ಡಾಕ್ಟ್ರಮ್ಮ ತಲೆಯೆತ್ತಿ “ನೀವೇ ಏನ್ರಿ ಜಯಲಕ್ಷ್ಮಿ ಕಡೇವ್ರು” ಎಂದರು ಉರಿಯುವ ಮುಖದಲ್ಲಿ “ಹೌದು ಡಾಕ್ಟ್ರೇ, ನಾನವಳ ತಾಯಿ” ಅಂದಳು ಸಾವಿತ್ರಿ. “ಅಲ್ರೀ, ಡೆಲಿವರಿ ಆಗ್ತಿದ್ದಂಗೆ ಕಣ್ತಪ್ಸಿ ಓಡೇಬಿಡೋದಾ. ಮಗು ಮಾಲೆ ಹಾಕ್ಕೊಂಡ್ಬಿಟ್ಟಿತ್ತು. ಇನ್ನು ಹತ್ನಿಮಿಷ ತಡ್ವಾಗಿದ್ರೆ ಉಸಿರುಕಟ್ಟಿ ಸತ್ತೋಗಿರೋದು. ಆಪರೇಶನ್‌ ಮಾಡಿ ಇಬ್ರ ಜೀವಾನೂ ಉಳ್ಸಿದೀವಿ. ಅಂತಾದ್ರಲ್ಲಿ ನಿಮ್ಗೆ ಸ್ವಲ್ಪಾನೂ ಕೃತಜ್ಞತೆ ಅನ್ನೋದಿಲ್ವಾ. ಪ್ರೈವೇಟ್‌ ಆಸ್ಪತ್ರೆಗೋಗಿದ್ರೆ ಐವತ್ತು-ಅರವತ್ತು ಸಾವಿರ ಆಗಿರೋದು, ಹೋಗ್ಲಿ, ನನ್ನ ಫೀಸು ಸಾವಿರ ರೂಪಾಯಿ ಕೊಡಿ” ಎಂದರು ವ್ಯಾಪಾರಸ್ತರ ಧೋರಣೆಯಲ್ಲಿ. ಕೈಮುಗಿದು ಬಿಟ್ಟಳು ಸಾವಿತ್ರಿ. “ಇದು ಗೌರ್ಮೆಂಟ್‌ ಆಸ್ಪತ್ರೆ,

ಒಂದು ಲೋಟ ಗಂಜಿ Read Post »

ಇತರೆ, ವಾರ್ಷಿಕ ವಿಶೇಷ

ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು

ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಕವಿತೆಗಳು ಏಕಾಂತ ನೇಸರ ಮೋಡಗಳ ಹಾಸಿಗೆಯಿಂದ ಎದ್ದುಮೈಮುರಿಯುತ್ತಆಕಾಶದಗಲಕ್ಕೆ ಬಾಯಿ ಆಕಳಿಸುತ್ತಬೆಳಕು ಮೈಯಲ್ಲಿ ನಿಲ್ಲುತ್ತಾನೆತುಂಬಿದ ಬೆಳಕಿನ ಅಕ್ಷಯ ಕೊಡಅವನ ಕಾಯಬೆಳಕು ಹರಿಸುತ್ತಲೇ ಇರುತ್ತಾನೆಸಂಜೆಯವರೆಗೂ…ಮಾತಿಲ್ಲಬರೀ ಮೌನ! ಹೂವುಗಳು ಅರಳುತ್ತವೆಕೆಂಪು ನೀಲಿ ಹಳದಿತುಟಿ ಎಸಳುಗಳಲ್ಲಿ ಬೆಳಕು ಹೀರುತ್ತಮೌನವಾಗಿ ಕಂಪು ಬೀರುತ್ತಜೇನುಗಳು ಮಕರಂಧ ಹೀರಿ ಮಧು ಸಂಗ್ರಹಿಸುತ್ತವೆಮೌನವಾಗಿ ಬೀಜಗಳಲ್ಲಿ ಮೊಳಕೆಯ ತಲೆ ಬೆಳೆದುತೆನೆತೆನೆಗಳಲ್ಲಿ ಹಾಲು ಉಕ್ಕಿಸುತ್ತವೆಇರುವೆಗಳು ಸಾಲು ಸಾಲು ಸರದಿಯಲ್ಲಿಸೂರ್ಯನನ್ನೇ ಹೊತ್ತು ಸಾಗುತ್ತವೆಮೌನವಾಗಿ ಈ ಎರಡು ಕಾಲ ಜೀವಿಗಳಿಗೆ ಮಾತ್ರ ಬರಿದೇಮೂರು ಕಾಲಗಳ ಮಾತು ಮಾತು ಮಾತುಬಾಯಿ ಬ್ರಹ್ಮಾಂಡ!ಎಲ್ಲಿದೆ ಏಕಾಂತ?ಮಾರುದ್ದ ನಾಲಗೆ ಮೈತುಂಬಈ ಮಾತುಗಳ ಸಂತೆಯಲ್ಲಿಓಡಾಡುತ್ತಿವೆ ಒಡಕು ಕೊಡಗಳುಕತ್ತಲನ್ನೇ ಚೆಲ್ಲುತ್ತ! ಕಾಡುವ ಜೀರುಂಡೆಗಳುಜೀರ್ ಜೀರ್ ಜೀರ್ಕರಿಸುವಹರಿತವಾದ ತಂತಿಕೊರಳುಗಳುಕತ್ತಿ ಬಾಯ ಠೇಂಕಾರಓ..ವ್! ಜೀರ್ ಜೀರ್ ಜೀರ್ ಜೀರೋಗುಟ್ಟುತ್ತಚೀತ್ಕಾರವನ್ನೇಓಂಕಾರ ಎಂದುಕೊಳ್ಳುತ್ತಮೈ ಒಡೆದುಜೀವ ರುಂಡದಿಂದ ಬೇರಾಗಿ ಸಾಯುತ್ತವೆ.ಜೀರುಂಡೆ!ಜೀವರುಂಡೆ! ರುಂಡದಲ್ಲೇ ಜೀವ!ಜೀರ್ ಉಂಡೆ! ಜೀರಲ್ಲೇ ಜೀವದುಂಡೆ!ಛೆ! ಇಷ್ಟು ಚಿಕ್ಕ ಜೀವಗಳ ಒಳಗೆಎಲ್ಲಿಟ್ಟುಕೊಂಡಿದ್ದವೋ ಈ ಅಪಸ್ವರ! ಈ ಹಾಂಕಾರ ಹೂಂಕಾರ ಹೇಂಕಾರ!ಕಟ್ಟಕಡೆಗೆ ಅಹಂಕಾರದ ಅಹಂ ಒಡೆದು ಹಾಹಾಕಾರ!ಸಾವಿನ ಗುಮ್ಮನಲ್ಲೇ ಸಾಕ್ಷಾತ್ಕಾರ! ಹೌದು! ಏಕಾಂತದಲ್ಲಿ ನಿದ್ದೆಯಲ್ಲೇ ಮುಳುಗಿ ತೇಲಿಸಾಯಬೇಕು ಒಬ್ಬಳೇ!ಛೆ! ಎಲ್ಲಿ ನೋಡಿದರಲ್ಲಿಎಲುಬಿಲ್ಲದ ಹಾವು ನಾಲಗೆಯ ಹುತ್ತ ಬಾಯಿಗಳು!ಬಾವಿಯೊಳಗೆ ಬಾವಿ ಬಾವಿಯೊಳಗೊಳಗೆ ಬಾವಿ ಬಾವಿಬಾಯಿಯೊಳಗೇ ಹೂತು ಹೋದಕಾಯ ಕೊಡವ ಮೇಲಕ್ಕೆತ್ತುವವರಾರು?…ಚೆನ್ನಪ್ಪ ಚೆನ್ನೇಗೌಡ ಕುಂಬಾರ ಮಾಡಿದ ಕೊಡನವ್ವಾ!ಆ ಕುಂಬಾರ ಈ ಕೊಡಗಳಿಗೆಲ್ಲ ಕಿವಿಯಗಲ ದಳಬಾಯಿ ಇಟ್ಟ! ಹಹ್ಹ! ಮೊದಲು… ನನ್ನ ವಾಚಾಳಿ ಮನಸ್ಸಿನ ಹಳವಂಡದಹಂಡೆ ಬಾಯಿಗೊಂದು ಮುಚ್ಚಳ ಹುಡುಕಬೇಕು!ಮೌನಮುಚ್ಚಳ! ಅಂದುಕೊಂಡಿದ್ದೆ ಇವನುಟೊಂಗೆ ಟೊಂಗೆಗಳಲ್ಲಿ ಮೊಗ್ಗುಗಳಅದುಮಿಟ್ಟುಕೊಂಡ ಮಂದ್ರ ಮಾಮರಕೊರಳೊಳಗೆ ಸ್ವರಗಳನ್ನುಅದುಮಿಟ್ಟುಕೊಂಡ ಕೊಳಲುಅಂದುಕೊಂಡಿದ್ದೆ!ಋತುವಿನ ಕೈಹಿಡಿದಾಗ ಮೈತುಂಬಜೊಂಪೆ ಜೊಂಪೆ ಗೊಂಚಲು ಹೂಬಿಟ್ಟುಕೋಕಿಲದ ಕುಹೂ ಮೊಗೆಮೊಗೆದು ತುಂಬಿಮಿಡಿ ಕಾಯಿ ಹಣ್ಣು ರಸ ಬಾಳುಅಂದುಕೊಂಡೂ ಇದ್ದೆ! ನಾನೋ ಋತು!ಮಿಠಾಯಿ ಲಂಗಧಾವಣಿಕುಪ್ಪಸದಿಂದೆದ್ದ ಗುಲಾಬಿ ಯವ್ವನವುಮದರಂಗಿ ದುಪ್ಪಟ ಹೊದ್ದುಕಪ್ಪು ದ್ರಾಕ್ಷಿ ಕಂಗಳ ಕಣ್ಣಿಂದ ಉದುರಿದನಕ್ಷತ್ರಗಳನ್ನುಕನಸು ಮೈಯ ಜೋಳಿಗೆಯಲ್ಲಿ ತುಂಬಿಎದೆಯ ಬುಲ್ಬುಲ್ ದಿಲ್ತರಂಗವನ್ನುಒಳಗೊಳಗೇ ನುಡಿಸುತ್ತನನ್ನೆದೆಯ ಪುಟಗಳಲ್ಲಿ ಪಿಸುಗುಡುವಪ್ರೇಮಪಾದಗಳಿಗೆ ಗೆಜ್ಜೆಕಟ್ಟುತ್ತ ಮಳೆಬಿಲ್ಲಿನ ಅರ್ಧ ವೃತ್ತದಂತೆ ಮತ್ತೆ ಮತ್ತೆಅವನ ಹಿಂದೆ ಮುಂದೆ ಕುಣಿಯುತ್ತಲೇಬಣ್ಣಗಳ ಮಿಂಚುಗಳ ಮೈಯೊಳಗೇಜುಂಜುಂ ಜುಮುಗುಡುತ್ತಬಿಸಿಲು ಮಳೆಯಲಿ ಕ್ಷಣಗಣನೆ ಮಾಡುತ್ತಬಹುಕಾಲ… ಅಂದುಕೊಂಡಿದ್ದೆ …ಅಂದುಕೊಳ್ಳುತ್ತಲೇ ಇದ್ದೆ ಆದರೆ ಅವನು ಚಲಿಸಲೇ ಇಲ್ಲಸೋತು ಅವನೊಳಗೆ ಒಂದು ದಿನನಾನೇ ಪ್ರವೇಶಿಸಿದೆಪರಕಾಯ ಪ್ರವೇಶವಾಯಿತದುಅರಿತೆ…ಋತು ಋತುಗಳು ನನ್ನೊಳಗೆ ಪ್ರವೇಶಿಸಿಹೊರಹೊರಟರೂಅವನು ಹಾಗೆಯೇಹೂಬಿಡದ ಮಾಮರಉಲಿಯದ ಕೊಳಲುಭುಸುಗುಡುವ ನಾಗರ ಹಾವನ್ನುಎದೆಯೊಳಗೇ ಸುರುಳಿ ಸುತ್ತಿಟ್ಟುಕೊಂಡ ಹುತ್ತಬಿರುಸು ಬಾಣಗಳ ತೊಡದೆ ಬತ್ತಳಿಕೆಯಲ್ಲೇಮುಚ್ಚಿಟ್ಟುಕೊಂಡ ಯೋಧಅರಿತೆ… ಅರಿತವಳೇ ಅವನೊಳಗಿಂದ ಹೊರಬಂದೆನನ್ನೊಳಗಿಂದ ಅವನ ಹೊರದೂಡಿದೆ ಆ ಕ್ಷಣದಿಂದಕಂಗಳ ಬಿಲ್ಲಿನಲ್ಲೇ ಗುರಿಯಿಟ್ಟು ಎಸೆಯುತ್ತಿದ್ದಾನೆಹಿಂದೆ ನಾನಂದುಕೊಂಡಕೋಮಲವಾದ ಹೂವುಗಳನ್ನಲ್ಲಮೈತುಂಬ ಮುತ್ತಿಕ್ಕುತ್ತಿವೆ ಕೆಂಪು ಕೆಂಪು ಕೆಂಡಚೂಪು ತುಟಿಯಲ್ಲಿಕೆಂಡಸಂಪಗೆಯಲ್ಲಮೈ ನಿಗಿನಿಗಿ ಉರಿವ ಬೆಂಕಿಕೊಳ್ಳಿಮನಸ್ಸಿಗೆ ಬೆಂಕಿ ಹಿಡಿಯಿತು ಗಾಳಿಗೆ ತೆರೆದುಕೊಂಡಿತು ಹಾಳೆಯಂತೆ ಮನಬಹುಕಾಲದಿಂದ ಎಡೆಬಿಡದೆ ಬಚ್ಚಿಟ್ಟ ಪ್ರೇಮ ಕವನಗಳುಹತ್ತಿಕೊಂಡು ಧಗಧಗನೆ ಉರಿಉರಿದುಈಗಉಳಿದದ್ದು ಬರೇ ಬೂದಿ ನಾನೀಗಅನಂಗಿ!ನಿರಾತ್ಮ! ನೀರ ಗುಳ್ಳೆ ಬದುಕು ಪಾತ್ರೆಯೊಳಗಿನ ನೀರುನಾನೊಂದು ಹೊಳೆಯುವ ಗುಳ್ಳೆಗುಳ್ಳೆಯಾಗಿಯೇ ಉಳಿಯುವ ಹಾಗಿಲ್ಲಒಡೆದು ನೀರಾಗಲೇಬೇಕು! ಅವನ ನದಿಯಲ್ಲಿಕೋಟಿ ಮಿಲಿಯ ಲೆಕ್ಕವಿಲ್ಲದಷ್ಟುಗುಳ್ಳೆಗಳು ಗುಳುಗುಳು ಹುಟ್ಟಿಒಡೆಒಡೆದು ಒಂದಾಗುತ್ತಲೇ ಇವೆ ಕ್ಷಣಕ್ಷಣವೂನಾನೂ ಹಾಗಾಗಲೇಬೇಕು ಬೇಡವೆಂದರೂ ಬೇಕೆಂದರೂ…ನಶ್ವರವು ಶಾಶ್ವತದಲ್ಲಿ ಒಂದಾಗಲೇಬೇಕು! ನೀರ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹಎಂದು ದಾಸರು ಹಾಡಿದ್ದುಹುಟ್ಟಿನ ಜಾತ್ರೆ ಸಾವಿನ ಯಾತ್ರೆಗಳನ್ನು ನೋಡಿಯೇಅವರ ಯಾತ್ರೆಯೂ ಮುಗಿದಾಗಿದೆ! ನನ್ನ ಉಸಿರು ಒಡೆದುಲೀನವಾಗಲಿ ಆ ಗಾಳಿಯಲಿಅಂದು ನನಗೆ ಸಾವುನಿನಗೆ ಬದುಕು ನಿನ್ನ ಸಾವಲ್ಲಿ ನಾನೂ ಸಾಯುತ್ತೇನೆ ನಿನಗೆ!ನಿನ್ನ ಬದುಕಲ್ಲಿ ನಾನೂ ಬದುಕುತ್ತೇನೆ ನನಗೆ!ನಾನು ಬದುಕಿರುವಾಗ ನನಗಿರುತ್ತಾನೆ ನನ್ನ ದೇವರು!ನನ್ನ ಸತ್ತಾಗ ನನ್ನೊಡನೇ ಸಾಯುತ್ತಾನೆ ನನ್ನ ದೇವರು!ಏಕಕಾಲದಲ್ಲೇ… ಬದುಕಿ ಉಳಿದವರಿಗೆಅವನೂ ಬದುಕಿರುತ್ತಾನೆಅವರು ಸತ್ತಾಗ ಅವರಿಗೆ ಇಲ್ಲವಾಗುತ್ತಾನೆನಾನು ಹುಟ್ಟುವಾಗ ಹೊತ್ತು ತರುವುದು ಅವನನ್ನು ಮಾತ್ರ!ಸಾಯುವಾಗ ಕೊಂಡೊಯ್ಯುವುದೂ ಅವನನ್ನು ಮಾತ್ರ! ಬದುಕು ಪಾತ್ರೆಯ ನೀರಲ್ಲಿಹೊಳೆಯುವ ಗುಳ್ಳೆಸೂರ್ಯ ನೆತ್ತಿಗೇರುತ್ತಬೆಳಕು ಬಿಸಿಲಾಗಿ ಬಿಸಿಗೆ ಒಡೆದು ಅಸ್ತಕಡಲ ಪಾತ್ರೆಯೊಳಗೆ ಒಡಲ ಯಾತ್ರೆ! ಕ್ಷಣ ಬಾಳಾದರೂಈ ಗುಳ್ಳೆಗೆ ಹೊಳೆಯುವ ತ್ರಾಣಬಂದುದಾದರೂ ಎಲ್ಲಿಂದ? ನಿನ್ನ ನುಡಿ ನೀನು ನುಡಿಯುವ ಪ್ರತಿಯೊಂದು ಪದವೂನನ್ನ ಇರವನ್ನೇ ಇರಿಯುತ್ತಿದೆಜೀವದ ಕಣಕಣದಲ್ಲುನೆತ್ತರಿನ ಹನಿ ಬಿಕ್ಕುತ್ತಿದೆ ನೀನು ನುಡಿಯುವ ಪ್ರತಿಯೊಂದು ಪದವೂಬೂಟುಪಾದಗಳಾಗಿ ನನ್ನ ತುಳಿಯುತ್ತಿವೆಮಾತು ಮಾತುಗಳೂಲಾಠಿ ಏಟುಗಳಾಗಿ ನನ್ನ ಅಳಿಸುತ್ತಿವೆನಿನ್ನ ದಿಟ್ಟಿಯ ಮೊನಚುಸೂಜಿಸೂಜಿಗಳಾಗಿನನ್ನ ಹೃದಯದ ಕಣ್ಣ ಚುಚ್ಚುತ್ತಿವೆ ನನ್ನ ಆಳಕೆ ನಾನೇ ಇಳಿದುಹುಡುಕುವಾಗ ನನ್ನದೇ ಕರಿಛಾಯೆಕುರಿಯಾಗಿ ಅಣಕಿಸುತ್ತಿದೆನನ್ನದೇ ನನ್ನದಲ್ಲವೇ?ಎಂಬ ಶೋಧದಲ್ಲೇ ಕ್ಷಣಗಳುಕೊಲೆಯಾಗುತ್ತಿವೆ ನೀನು ನನ್ನೆಡೆಗೆ ಬೆಟ್ಟು ತೋರಿದಾಗೆಲ್ಲಬೆಟ್ಟದಿಂದ ಶತಂಪಾತಾಳದಾಳಕ್ಕೆಯಾರೋ ದೂಡಿದಂತಾಗಿಹೊಟ್ಟೆಯಾಳದಲ್ಲಿ ತಳಮಳವಾಗಿಬೆಚ್ಚಿ ಬಿದ್ದಿದ್ದೇನೆಕೊಳದೊಳಗೆ ಕಲ್ಲೆಸೆದಂತೆಮನದ ತಿಳಿಕೊಳ ಕಲಡಿ ಹೋಗಿದೆ ನಿನ್ನ ತಕ್ಕಡಿಯಲ್ಲಿ ಕುಳಿತು ಕುಳಿತುಅವಮಾನಗಳಿಂದ ಮಾನದ ಬೆಲೆ ಕುಸಿದುಹೃದಯ ಭಾರವಾಗಿ ಬಿಟ್ಟಿದೆಅದಕೆ ಸರಿತೂಗುವ ಮಾಪನದ ಅಳತೆಗಲ್ಲುಇಲ್ಲವಾಗಿಬಿಟ್ಟಿದೆತುಳಸಿದಳವೊಂದು ಒಣಗಿಕೃಷ್ಣನ ಪಾದದಲ್ಲಿ ನನ್ನನ್ನೇ ನೋಡುತ್ತಿದೆಒಗ್ಗರಣೆಗೆ ಪರಿಮಳ ತಂದ ಕರಿಬೇವು ಎಲೆಯೊಂದುನಿನ್ನ ತಾತ್ಸಾರಕ್ಕೆತಟ್ಟೆಯ ಪಕ್ಕವೇ ಬಿದ್ದು ನರಳಿದೆಅವನ ನೀಲ ಎದೆಯಲ್ಲಿದ್ದರೂತುಳಸಿದಳವೊಂದುನನ್ನನ್ನೇ ನೋಡುತ್ತ ನಿಟ್ಟುಸಿರಲ್ಲಿಒಣಗುತ್ತಿದೆ! ಅಂತರಂಗದಲ್ಲಿ ಹಂತಕನೊಬ್ಬ ಅಕ್ರಮಮನೆಕಟ್ಟಿಕೊಂಡಿದ್ದಾನೆನನ್ನ ಕತ್ತನ್ನು ನಾನೇ ಕತ್ತರಿಸಿನಿತ್ಯ ಸಾಯುತ್ತಿದ್ದೇನೆಕ್ಷಣ ಕ್ಷಣದ ವಿಲಿವಿಲಿ ಯಾತನೆಯಲ್ಲೇರುಂಡವು ಗಡಿಯಾರವಾಗಿಕಣ್ಣು ಕಿವಿ ಮೂಗು ಮುಳ್ಳುಗಳಾಗಿನಾಲಗೆಯು ನಿನಗೀಗ ತಲೆಯಿಲ್ಲ!ಎಂದು ಕಿರುಚುತ್ತದೆಹೃದಯವು ಆಘಾತದಲ್ಲಿ ರಿಂಗಣಿಸಿದಾಗಧಿಡ್ಕ ಎದ್ದುಮುಂಡದ ಕತ್ತಿಗೆ ಜೋಡಿಸಲುತಲೆಯನ್ನು ಹುಡುಕತೊಡಗುತ್ತೇನೆ! ಹುಡುಕುತ್ತ ಹುಡುಕುತ್ತಲೇ ಸೋತುಇಂದುಜವಳಿ ಅಂಗಡಿಯತಲೆಯಿಲ್ಲದ ಗೊಂಬೆಯ ಬಳಿನಿಂತು ಗೊಂಬೆಯಾಗಿದ್ದೇನೆಹಳೆಯಂಗಿ ಕಳಚಿಹೊಸ ಅಂಗಿ ತೊಡಿಸಲಾಗಿದೆತಲೆಯಿಲ್ಲದ ಅಂಗಿಯೊಳಗೆತಲೆಯಿಲ್ಲದ ಮೈ! ಈಗ ಕಿವಿಯೇ ಇಲ್ಲ ನನಗೆ!ಆದರೂ…ನಿನ್ನ ನುಡಿ ಚೂಪು ಚೂರಿ! **************************************************************

ಡಾ.ಕಾತ್ಯಾಯಿನಿ ಕುಂಜಿಬೆಟ್ಟುಕವಿತೆಗಳು Read Post »

ಇತರೆ, ವಾರ್ಷಿಕ ವಿಶೇಷ

ವಾರ್ಷಿಕೋತ್ಸವದ ವಿಶೇಷ ಲೇಖನವಾರ್ಷಿಕೋತ್ಸವದ ವಿಶೇಷ ಲೇಖನ ಅನುವಾದಕರ ಮುಂದಿರುವ ಸವಾಲುಗಳು ಪಾರ್ವತಿ ಜಿ.ಐತಾಳ್ ಅನುವಾದ ಅಥವಾ ಭಾಷಾಂತರವೆಂದರೆ ಭಾಷೆಯನ್ನು ಬದಲಾಯಿಸುವ ಕ್ರಿಯೆ ಎಂಬುದು ಸಾಮಾನ್ಯರ ಅಭಿಪ್ರಾಯ. ಇದು ಎರಡು ಭಾಷೆಗಳ ನಡುವೆ ಅನುವಾದಕ/ಕಿಯ ಮೂಲಕ ನಡೆಯುವ ಸಂವಹನ. ಇದಕ್ಕೆ ಮುಖ್ಯವಾಗಿ ಬೇಕಾದುದು ಎರಡು ಭಾಷೆಗಳ ಜ್ಞಾನ. ಯಾವ ಭಾಷೆಯಿಂದ ನಾವು ಅನುವಾದ ಮಾಡುತ್ತಿದ್ದೇವೋ ಅದನ್ನು ಮೂಲ ಭಾಷೆಯೆಂದೂ ಯಾವ ಭಾಷೆಗೆ ಮಾಡುತ್ತಿದ್ದೇವೋ ಅದನ್ನು ಉದ್ದಿಷ್ಟ ಭಾಷೆಯೆಂದೂ ಕರೆಯುತ್ತೇವೆ. ಅನುವಾದಕನಿ/ಕಿಗೆ ತನ್ನ ಮಾತೃಭಾಷೆ ಅಥವಾ ಶಿಕ್ಷಣ ಮಾಧ್ಯಮದ ಭಾಷೆ ಚೆನ್ನಾಗಿ ತಿಳಿದಿರುತ್ತದೆ. ನಂತರ ಕಲಿತ ಭಾಷೆಯ ಮೇಲೆ ಅಷ್ಟು ಒಳ್ಳೆಯ ಹಿಡಿತವಿರುವುದಿಲ್ಲ. ಆದ್ದರಿಂದ ಹೆಚ್ಚು ಹಿಡಿತವಿರುವ ಭಾಷೆಯನ್ನು ಉದ್ದಿಷ್ಟ ಭಾಷೆಯಾಗಿ ಆತ ತೆಗೆದುಕೊಳ್ಳುತ್ತಾನೆ. ಅದು ಸೂಕ್ತ ಕೂಡಾ. ಅನುವಾದಕನಿಗೆ ಭಾಷೆ ಮಾತ್ರ ತಿಳಿದಿದ್ದರೆ ಸಾಲದು.ಪ್ರತಿಯೊಂದು ಭಾಷೆಯೊಳಗೆ ಹಾಸು ಹೊಕ್ಕಾಗಿರುವ ಸಂಸ್ಕೃತಿ ಮತ್ತು ಜೀವನಕ್ರಮಗಳ ಬಗ್ಗೆ ಕೂಡಾ ಅರಿವಿರಬೇಕು. ಅದಕ್ಕಾಗಿ ಆ ಭಾಷೆಯನ್ನಾಡುವ ಜನರೊಂದಿಗೆ ಬೆರೆತ ಅನುಭವವೂ ಇರಬೇಕು. ಇವು ಅನುವಾದಕನ ಪ್ರಾಥಮಿಕ ಅಗತ್ಯಗಳು.        ಈ ಪ್ರಾಥಮಿಕ ಅರ್ಹತೆಗಳಿರು ಓರ್ವ ಅನುವಾದಕ/ಕಿ ಕೂಡಾ ಅನುವಾದ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾನೆ/ಳೆ. ಇವುಗಳನ್ನು ಬಾಹ್ಯ ಸಮಸ್ಯೆಗಳು ಮತ್ತು ಆಂತರಿಕ ಸಮಸ್ಯೆಗಳು ಎಂದು ವಿಂಗಡಿಸ ಬಹುದು. ಭಾಷೆಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಾಹ್ಯ ಸಮಸ್ಯೆಗಳೆಂದೂ ಅನುವಾದಕ/ಕಿ ಮತ್ತು ಮೂಲ ಲೇಖಕ/ಕಿಯರ ವ್ಯಕ್ತಿತ್ವ ಗಳಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಆಂತರಿಕ ಸಮಸ್ಯೆಗಳೆಂದೂ ಹೇಳಬಹುದು.     ಭಾಷೆ ಮತ್ತು ಸಂಸ್ಕ್ರತಿಗೆ ಸಂಬಂಧ ಪಟ್ಟ ಸಮಸ್ಯೆಗಳನ್ನು ಸತತ ಅಧ್ಯಯನ-ಅವಲೊಕನ-ಚಿಂತನಗಳ ಮೂಲಕ ನಿವಾರಿಸಿಕೊಳ್ಳ ಬಹುದು. ನಾವು ಒಂದು ಕೃತಿಯನ್ನು   ಅನುವಾದಕ್ಕೆ  ಎತ್ತಿಕೊಂಡಾಗ ಮೂಲಭಾಷೆ ತಿಳಿದಿದ್ದರೂ ಕೆಲವು ಕ್ಲಿಷ್ಟ ಪದಗಳು ಅರ್ಥವಾಗದಿದ್ದಾಗ ಶಬ್ದಕೋಶವನ್ನು ತೆರೆದು ನೋಡುತ್ತೇವೆ. ಆದರೆ ಶಬ್ದ ಕೋಶವು ನಮಗೆ ಅಗತ್ಯವಿರುವ ಎಲ್ಲಾ ಶಬ್ದಗಳ ಅರ್ಥ ಕೊಡುವುದಿಲ್ಲ. ಅಲ್ಲದೆ ಕೆಲವೊಮ್ಮೆ ಅಲ್ಲಿ ಒಂದು ಶಬ್ದಕ್ಕೆ ಎರಡು ಮೂರು ಅಥವಾ ಹೆಚ್ಚು ಅರ್ಥಗಳಿರುತ್ತವೆ. ಆಗ ನಾವು ಮೂಲ ಶಬ್ದಕ್ಕೆ ಸಮನಾಗಿ ನಿಲ್ಲ ಬಲ್ಲ ಪರ್ಯಾಯ ಪದವನ್ನು ಆಯ್ದುಕೊಳ್ಳುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆಗ ನಾವು ಮೂಲವಾಕ್ಯದ ಸಂದರ್ಭದ ಕುರಿತು   ಚೆನ್ನಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಇದು ಸಾಧ್ಯವಾಗುವುದು ಅನುವಾದಕನ ವಿಶೇಷವಾದ ಗ್ರಹಣ ಸಾಮರ್ಥ್ಯದ ಮೂಲಕ ಮಾತ್ರ. ಅದನ್ನು ರೂಢಿಸಿಕೊಳ್ಳದೆ ಇದ್ದರೆ ಅನುವಾದಕ ತನ್ನ ಕೆಲಸದಲ್ಲಿ ವೀಫಲನಾಗುತ್ತಾನೆ.ಉದಾಹರಣೆಗೆ   ಇಂಗ್ಲಿಷ್ ನ ಒಂದು ವಾಕ್ಯ ಹೀಗಿರುತ್ತದೆ ಅಂತಿಟ್ಟುಕೊಳ್ಳಿ :  The novel experience of watching Shakespeare’s play was highly thrilling.. ಇಲ್ಲಿ novel ಅನ್ನುವುದಕ್ಕೆ ಎರಡು ಅರ್ಥಗಳಿವೆ. ಒಂದು ಹೊಸತು ಇನ್ನೊಂದು ಕಾದಂಬರಿ. ಇಲ್ಲಿ ಅರ್ಥದ ಬಗ್ಗೆ ಅನುವಾದಕ ಹೆಚ್ಚು ತಲೆಕೆಡಿಸಿಕೊಳ್ಳದೆ ಕಾದಂಬರಿಯ ಅನುಭವ ಎಂದು ಹೇಳಿದರೆ ಅನರ್ಥವಾಗುತ್ತದೆ. ಅನೇಕ ಅನುವಾದಕ ಇಂಥ ಗೊಂದಲಗಳನ್ನುಂಟು ಮಾಡುವುದಿದೆ. ಇಂಥ ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಅದೇ ರೀತಿ ಮೂಲಭಾಷೆಯಲ್ಲಿರುವ ಪದಪುಂಜ ಅಥವಾ phrase ಗಳ ಅರ್ಥ ಕೂಡಾ ಆ ಸಂದರ್ಭದಲ್ಲಿ ಯಾವುದು ಸೂಕ್ತ ಅನ್ನುವುದನ್ನು ಆಲೋಚಿಸುವ ಹೊಣೆ ಅನುವಾದಕ/ಕಿಯದ್ದು. ಕನ್ನಡದಲ್ಲೇ ನೋಡಿ.ಕೈ ಅನ್ನುವ ಶಬ್ದ ಇನ್ನೊಂದು ಶಬ್ದದೊಂದಿಗೆ ಸೇರಿ phrase ಆಗಿ ಯಾವ ರೀತಿ ಅರ್ಥ ಬದಲಾಗುತ್ತ ಹೋಗುತ್ತದೆ ನೋಡಿ. ಕೈಕೊಡು, ಕೈ ಮಾಡು, ,ಕೈಯೆತ್ತು, ಕೈನೀಡು, ಕೈಬಿಡು ಕೈಹಚ್ಚು ಇತ್ಯಾದಿ. ಇನ್ನೊಂದು ಭಾಷೆಯಲ್ಲಿ ಈ ರೀತಿಯ phrase ಗಳು ಇಲ್ಲದಿರಲೂ ಬಹುದು. ಅದು ಅಲ್ಲಿನ ಭಾಷಾ ಬಳಕೆಯ ರೀತಿಯನ್ನು ಅವಲಂಬಿಸಿರುತ್ತದೆ. ಅದೇ ರೀತಿ ಗಾದೆ ಮಾತುಗಳು. ಭಿನ್ನ ಸಂಸ್ಕೃತಿಗಳಲ್ಲಿ ಗಾದೆ ಮಾತುಗಳು ಭಿನ್ನವಾಗಿರುತ್ತವೆ. ಅದು ಅನುವಾದಕನಿ/ಕಿಗೆ ಮೊದಲೇ ತಿಳಿದಿರಬೇಕು.  ಉದ್ದಿಷ್ಟ ಭಾಷೆಯಲ್ಲಿ ಅದೇ ಸಂದರ್ಭದಲ್ಲಿ ಯಾವ ಗಾದೆಮಾತನ್ನು ಬಳಸಬಹುದು, ಯಾವದು ಹೆಚ್ಚು ಸಹಜ ಮತ್ತು ಸೂಕ್ತ ಅನ್ನುವುದರ ಬಗ್ಗೆ ಅನುವಾದಕ/ಕಿ  ಗ್ರಹಿಸುವ ಸಾಮರ್ಥ್ಯವನ್ನು ರೂಪಿಸಿಕೊಳ್ಳಬೇಕು. ಉದಾಹರಣೆಗೆ ಇಂಗ್ಲಿಷ್ ನಲ್ಲಿರುವ ಒಂದು ಗಾದೆ ಮಾತು Make hay while the sun shines ಅಂತ. ಅಂದರೆ ಸೂರ್ಯನ ಬಿಸಿಲು ಇದ್ದಾಗಲೇ ಹುಲ್ಲು ಒಣಗಿಸಿಕೋ ಅಥವಾ ಸರಿಯಾದ ಅವಕಾಶ ಮುಂದೆ ಇದ್ದಾಗ ಅದನ್ನು ಸರಿಯಾಗಿ ಬಳಸಿಕೋ ಎಂದರ್ಥ. ಇದಕ್ಕೆ ಪರ್ಯಾಯವಾಗಿ ‘ಬೆಂಕಿ ಇದ್ದಾಗ ಚಳಿ ಕಾಯಿಸಿಕೋ’ ಎಂದು ಹೇಳಬಹುದು. ಇಂಥ ಸಂದರ್ಭಗಳಲ್ಲೆಲ್ಲ ಅನುವಾದಕ/ಕಿ ಅತ್ಯಂತ ಸೃಜನಶೀಲನಾ/ಳಾಗಿರಬೇಕಾಗುತ್ತದೆ.  ಇನ್ನು ಒಂದೇ ಮೂಲದ ಭಾಷೆಯಿಂದ ಹುಟ್ಟಿಕೊಂಡ ಹಲವು ಭಾಷೆಗಳು ನಮ್ಮ ಭಾರತದಂಥ ಬಹುಭಾಷಾ ದೇಶದಲ್ಲಿ ಬೇಕಾದಷ್ಟು ಇವೆ. ಇಂದು ಚಾಲ್ತಿಯಲ್ಲಿರುವ ಅನೇಕ ಬಾಷೆಗಳು ಸಂಸ್ಕೃತ ಜನ್ಯ ಅನ್ನುತ್ತೇವೆ. ಈ ವಿಚಾರದಲ್ಲಿ ಅನುವಾದದ ಒಂದು ಸಮಸ್ಯೆಯೆಂದರೆ ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಶಬ್ದವನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥದಲ್ಲಿ ಬಳಸಲಾಗುತ್ತದೆ ಅನ್ನುವುದು. ಉದಾಹರಣೆಗೆ ಹಿಂದಿಯಲ್ಲಿ ಉಪನ್ಯಾಸ ಅಂದರೆ ಕಾದಂಬರಿ. ಕನ್ನಡದಲ್ಲಿ ಅದೇ ಶಬ್ದದ ಅರ್ಥ ಬೇರೆ. ಮಲೆಯಾಳದಲ್ಲಿ ಅವಕಾಶಂ ಅಂದರೆ ಹಕ್ಕು.ಕನ್ನಡದ ಅರ್ಥ ಬೇರೆ.  ಹಿಂದಿಯಲ್ಲಿ ಸಂಸಾರ್ ಅಂದರೆ ಜಗತ್ತು.ಮಲೆಯಾಳದಲ್ಲಿ ಸಂಸಾರಂ ಅಂದರೆ ಮಾತು. ಇಂಥ ಶಬ್ದಗಳಿಗೆ ಸಾವಿರಾರು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು.  ಇಂಥ ಸಂದರ್ಭಗಳಲ್ಲಿ ಅನುವಾದಕ/ಕಿ ಎಚ್ಚರಿಕೆಯಿಂದಿಲ್ಲದಿದ್ದರೆ ಅನುವಾದವು ಗೊಂದಲದ ಗೂಡಾಗಬಹುದು.    ವ್ಯಕ್ತಿತ್ವದ ಸಮಸ್ಯೆಗಳು ಅಂತ ಹೇಳಿದೆ. ಒಬ್ಬ ಸೃಜನಶೀಲ ಅನುವಾದಕ/ಕಿಗೆ ಉಂಟಾಗುವ ಸಮಸ್ಯೆ ಇದು.ಒಂದು ಕೃತಿಯನ್ನು ಅನುವಾದಕ್ಕೆ ಎತ್ತಿಕೊಂಡಕೂಡಲೇ ಮೂಲಕೃತಿಯಲ್ಲಿ ಹೇಳಿದ ಕೆಲವು ವಿಚಾರಗಳ ಬಗ್ಗೆ ತನ್ನ ಅಭಿಪ್ರಾಯ/ಅನ್ನಿಸಿಕೆಗಳು ಭಿನ್ನವಾಗಿವೆಯೆಂದು ಅನ್ನಿಸಬಹುದು. ಒಬ್ಬ ಆದರ್ಶ ಅನುವಾದಕ/ಕಿ ಅನುವಾದಕ್ಕೆ ಕೈಹಚ್ಚಿದ ಕೂಡಲೇ ತನ್ನ ಚಿಂತನೆಗಳನ್ನು ಸ್ಥಗಿತಗೊಳಿಸಿ ಮೂಲ ಲೇಖಕನ ಸ್ಥಾನದಲ್ಲಿ ನಿಂತು ಆಲೋಚಿಸಲು ಕಲಿಯಬೇಕು. ಮುಲಲೇಖಕ ಯಾವ ಸಂದರ್ಭ ಸನ್ನಿವೇಶ ಪರಿಸರಗಳಲ್ಲಿ ಬರೆದನೋ ಅಂಥದ್ದೇ ವಾತಾವರಣವನ್ನು ತನ್ನ ಮನಸ್ಸಿನೊಳಗೆ ಸೃಷ್ಟಿಸಿ ಕೊಳ್ಳಬೇಕು. ಅನುವಾದವೆನ್ನುವುದು ಒಂದು ರೀತಿಯಲ್ಲಿ ಪರಕಾಯ ಪ್ರವೇಶವಿದ್ದಂತೆ.ಅನುವಾದಕನ ವ್ಯಕ್ತಿತ್ವವು ಮೂಲ ಲೇಖಕನ ವ್ಯಕ್ತಿತ್ವದೊಳಗೆ ಮಿಳಿತಗೊಳ್ಳಬೇಕು. ಹಾಗೆ ಆದಾಗಲಷ್ಟೇ ಮೂಲಕೃತಿಯ ಸತ್ವವು ಅನುವಾದದಲ್ಲಿ ಮರುಸೃಷ್ಟಿಯಾಗುತ್ತದೆ.  ಅನುವಾದಕನು ಅನುವಾದದಲ್ಲಿ ಮೂಲಲೇಖಕನ ಮಟ್ಟಕ್ಕೆ ಏರಲು ಸಾಧ್ಯವಾಗದೇ ಹೋದರೆ ಅದನ್ನು ಅಧೋನುವಾದ(under translation) ಅನ್ನುತ್ತಾರೆ. ಇದಕ್ಕೆ ಇವತ್ತು ಅನುವಾದಗೊಳ್ಳುತ್ತಿರುವ ಅನೇಕ ಅನುವಾದಿತ ಕೃತಿಗಳನ್ನು ಉದಾಹರಣೆಯಾಗಿ ಕೊಡಬಹುದು. ಹಾಗೆಯೇ ಕೆಲವೊಮ್ಮೆ ಅನುವಾದಕನ ಸೃಜನ ಸಾಮರ್ಥ್ಯ ಮತ್ತು ವಿದ್ವತ್ತುಗಳು ಮೂಲ ಲೇಖಕನನ್ನು ಮೀರಿಸುವಂತಿದ್ದರೆ ಕೆಲವೊಮ್ಮೆ ಅನುವಾದವು ಮೂಲಕೃತಿಯ ಉದಾತ್ತತೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಹುದು. ಇದನ್ನು ಊರ್ಧ್ವಾನುವಾದ(over translation) ಅನ್ನುತ್ತಾರೆ.ಇದಕ್ಕೆ ಸೃಜನಶೀಲ ಲೇಖಕರಾಗಿ ಯಶಸ್ವಿಗಳಾದವರು ಮಾಡಿದ ಅನುವಾದಿತ ಕೃತಿಗಳನ್ನು ಉದಾಹರಣೆಯಾಗಿ ಕೊಡಬಹುದು. ಆದರೆ ಇವು ಎರಡೂ ಅತಿಗಳೇ.  ಆದ್ದರಿಂದ   ಸಮರ್ಥ ಅನುವಾದಕ ಈ ಅತಿಗಳನ್ನು ಮೀರಿ ಮೂಲ ಕೃತಿಯ ಯಥಾವತ್ತಾದ  ಪ್ರತಿಕೃತಿಯನ್ನು ಕೊಡುವ ಜವಾಬ್ದಾರಿ ತನ್ನದು ಎಂಬುದನ್ನು ಅರಿತಿರಬೇಕು.        ಇವೆಲ್ಲವೂ ಅನುವಾದಕ/ಕಿಯ ಮುಂದಿರುವ ಸಮಸ್ಯೆಗಳು ಮತ್ತು ಸವಾಲುಗಳು ಎನ್ನಬಹುದಾದರೂ ಇವು ಯಾವುವೂ ಅಪರಿಹಾರ್ಯವಾದವುಗಳಲ್ಲ. ತಾನು ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ,   ಶಿಸ್ತು, ಸತತ ಅಧ್ಯಯನ, ಚಿಂತನ,  ಪರಿಶ್ರಮ ಪಡುವ ಬುದ್ದಿ, ಸಮಯಪ್ರಜ್ಞೆ ಮೊದಲಾವುಗಳನ್ನು ತನ್ನಲ್ಲಿ ಬೆಳೆಸಿಕೊಳ್ಳುವುದರ ಮೂಲಕ ಒಳ್ಳೆಯ ಅನುವಾದಕನಾಗಿ/ಅನುವಾದಕಿಯಾಗಿ ಯಶಸ್ಸು ಪಡೆಯಲು ಸಾಧ್ಯ. *****************************

Read Post »

ಇತರೆ, ವಾರ್ಷಿಕ ವಿಶೇಷ

ದೀಪ್ತಿ ಭದ್ರಾವತಿ ಕವಿತೆಗಳು ಲೂಟಿಯಾದವರು ಅಗೋ ಸಿಕ್ಕಿಯೇಬಿಟ್ಟ ನಿನ್ನೆಯಷ್ಟೇ ಎಷ್ಟೆಲ್ಲ ಜನರ ಉಸಿರು ಕದ್ದು ನಡೆದವ ಇಂದಿಲ್ಲಿ ಆಸ್ಪತ್ರೆಯ ಕಲ್ಲು ಬೆಂಚಿನ ಮೇಲೆ ಸದ್ದಿಲ್ಲದೆ ಮಲಗಿದ್ದಾನೆ ಸೂರೆ ಹೋದವರು ಸೂರು ಹಾರುವಂತೆ ಕಿರುಚುತ್ತಿದ್ದರೂ ಗಮನಿಸದೆ ತನ್ನದೇ ಕನಸಲೋಕದಲ್ಲಿ ಹಾಯಾಗಿ ಕನಸುಕಾಣುತ್ತಿದ್ದಾನೆ ಲೂಟಿಯಾದವರು ಇದೀಗ ಇಲ್ಲಿ ಒಳಗಡೆಗೆ ನುಗ್ಗಲಿದ್ದಾರೆ ಎಬ್ಬಿಸಿ ಇವನನ್ನು ಬೀದಿಗೆಳೆದು ತಂದು ಆರೋಪಪಟ್ಟಿಯ ಸಿದ್ದವಾಗಿಸಿ ಕಂಬಕ್ಕೆ ಕಟ್ಟಿ ಥಳಿಸಲಿದ್ದಾರೆ “ಆಳಿಗೊಂದು ಕಲ್ಲು, ತಲೆಗೊಂದು ಮಾತು” ಕನ್ನ ಹಾಕುವುದೆ ಕಾಯಕ ಎಂದುಕೊಂಡವನಿಗೆ ಯಾವುದೂ ಹೊಸತಲ್ಲ ಪ್ರತಿ ಬಾರಿ ಆತ ಮಿಡಿತ ಹೊತ್ತು ನಡೆದಾಗಲೂ ಗಲಾಟೆ ಭುಗಿಲೇಳುತ್ತದೆ ಛಾವಣಿಗಳು ಬೊಬ್ಬೆ ಹಾಕುತ್ತವೆ ಪಂಚಾಯ್ತುದಾರರು ಊರ ಒಳಗಿನ ಮೂಲೆ ಮೂಲೆಯನು ಅವನಿಗಾಗಿ ತಡಕಿಸುತ್ತಾರೆ ಅವನು ಕಣ್ಣು ತಪ್ಪಿಸಿ ಮತ್ತೆಲ್ಲಿಯೋ ದೋಚುತ್ತಾನೆ ಹುಡುಕಿ ದಣಿದವರೆಲ್ಲ “ಇನ್ನು ಬಿಡುವ ಪ್ರಶ್ನೆಯೇ ಇಲ್ಲ” ಎನ್ನುತ್ತ ಹಾಕಿದ ಬಾಗಿಲು ಮುರಿಯುತ್ತಾರೆ ಬಡಿವ ಸದ್ದಿಗೆ ಎಚ್ಚೆತ್ತ ಅವನೂ “ಕಸುಬು ಬಿಡುವುದಿಲ್ಲ” ಕಿಚಾಯಿಸುತ್ತ ನುಗ್ಗುತ್ತಾನೆ ಹೆರಿಗೆ ವಾರ್ಡಿನ ಕಿಟಕಿಯೊಳಗೆ ರೇವೆ ಇಲ್ಲಿ ಹೀಗೆ ನಾನು ಒಂಟಿ ಕೂತಿರುವಾಗಲೇನೆನಪಿನ ಹಕ್ಕಿಯೊಂದುಕಿಟಕಿಯಲಿ ಸರಳಿನಾಚೆಯಲಿನಿಂತು ಕೂಗುತ್ತದೆ. ನಕ್ಷತ್ರದ ನಡುವಿನಲ್ಲಿ ನೆರಳುಗಳನೋಡುತ್ತೇನೆ ತೇವಗೊಂಡ ಆಗಸದ ಮುಗುಳೊಂದುಒದ್ದೆ ಕಣ್ಣಿನ ಅಂಚಿನಲ್ಲಿ ನಿಂತುಗೋಲಿಯಾಡುತ್ತದೆ… ಬರಲೋ ಬೇಡವೋಗೊತ್ತಾಗದೆ ಮತ್ತದೇ ಬಿಡುಗಣ್ಣಿನಲಿಆಗಸ ನೋಡುತ್ತೇನೆ. ಅಸ್ಥಿರಗೊಂಡ ಎದೆಯ ಕವಾಟದ ಚೂರೊಂದುಮುಗ್ಗಲು ಗೋದಾಮಿನಲಿ ಸೇರಿ ನರಳುತ್ತದೆ.ಇಲ್ಲ ಬಿಡು ಭೇಟಿಯಿನ್ನು ಸಾಧ್ಯವಿಲ್ಲಹರಕು ಕನಸೊಂದು ಯಾವುದೋವಿಳಾಸ ಹುಡುಕಿ ತಿರುಗುತ್ತದೆ.. ಇನ್ನು ಆ ನೆರಳು, ನೆನಪು, ಮುಗಿದ ರೇವೆಎಲ್ಲವೂ ನನ್ನ ಕಾಲುಂಗರದ ನಡುವಿನಲಿಎದ್ದ ಕುರುಗಳಲ್ಲಿಯಾವುದೋ ಸನ್ನೆಗಾಗಿ ಕಾಯತೊಡಗುತ್ತವೆ.. ಗೋದಾಮು ಅಸಲಿಗೆ ಹೇಳುವುದು ಎನೂ ಇರಲಿಲ್ಲನಡು ಮಧ್ಯಾಹ್ನವೊಂದು ತೆವಳು ಗಾಳಿಯಲಿತೇಲುತ್ತ ಫೌಂಡೇಶಿನ ಕ್ರೀಮುಗಳಲಿಸುಕ್ಕು ಮರೆಸುವಾಗಉಗುರು ಕಚ್ಚುವುದಲ್ಲದೆಮತ್ತೇನಿರುತ್ತದೆ ಹೇಳು ತೀಡುವ ಬೆಳ್ಳಿಚಾಮರಕ್ಕೆ ಇರುಳ ಲೇಪಿಸುವಾಗಬಣ್ಣ ಹೀರಿದ ಬ್ರಶ್ಶಿನಂತೆತಿರು ತಿರುಗಿ ಮತ್ತದೇ ಕನಸುಗಳ ಒಪ್ಪ ಮಾಡುವಾಗಹಳೆಯ ಗೋದಾನಿನ ಮುಗ್ಗುಗಟ್ಟಿದಜೋಳ ಸುಮ್ಮನೆ ನಗುವಾಗಏನೆಲ್ಲ ಹೇಳುವಶಕುನದವನ ಹಾಗೇಕೆ ನಿಂತೆ ಹೇಳು ಒಣ ತುಟಿಗಳಲ್ಲಿ ಮಾತುಗಳ ಹೆಕ್ಕುವೆನೆಂಬನಿನ್ನ ಹುಂಬತನಕ್ಕೆನನ್ನ ಲಿಪ್ ಸ್ಟಿಕ್ಕಿನ ತೇರು ಹೊಳೆದದ್ದುಸುಳ್ಳಲ್ಲಸುಡುವ ಕೆಂಡ ಹಾಯ್ದ ಮಿಡತೆ ಒಳಗೊಳಗೆಕಣ್ಣಿನಲಿಕನಸು ನಕ್ಕಿದ್ದು ಖರೆಕುತ್ತಿಗೆಯಲ್ಲೊಂದು ಕರಿ ಇರುವೆಗಳಸಾಲು ಕಾಲುಗಟ್ಟಿದಗೂಟದ ಬೇಲಿಮತ್ತೆ ಮತ್ತೆ ತಡೆ ಹಿಡಿಯುತ್ತಉಗ್ಗುಗಳ ಲೋಕದಲ್ಲಿ ನನ್ನ ಉಗುಳು ನುಂಗಿಸುವಾಗ ಎಲ್ಲ ಬಲ್ಲವನಂತೆ ನಿಂತದ್ದು ನಿನ್ನದೇತಪ್ಪು ಇದೀಗ ಮಾತಾಡಬೇಡೆಂದುನಾನು ಹೇಳುವ ಸ್ಥಿತಿಯಲ್ಲಿ ಇಲ್ಲಆದರೆ ನೀನು.. ************************************

Read Post »

ಇತರೆ, ವಾರ್ಷಿಕ ವಿಶೇಷ

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ ಡಿ.ಎಸ್.ರಾಮಸ್ವಾಮಿ ಸಾಹಿತ್ಯವನ್ನು ಮುದ್ರಣ ಮಾಧ್ಯಮ ನಿರ್ಲಕ್ಷಿಸುತ್ತಿದೆ ಎಂದು ಸಂಗಾತಿಯ ಸಂಪಾದಕರು ಅಲವತ್ತುಕೊಂಡಿದ್ದಾರೆ. ಪ್ರತಿ ಭಾನುವಾರ ಎಲ್ಲ ಪತ್ರಿಕೆಗಳ ಪುರವಣಿಗಳನ್ನು ಹರಡಿಕೊಂಡು ಓದುತ್ತಿದ್ದ ಅನುಭೂತಿ ಈ ಕೋವಿಡ್ ನೆವದಿಂದಾಗಿ ಇಲ್ಲವಾದದ್ದು ನೆನಪಾಗಿ ಸಂಗಾತಿಯ ಸಂಪಾದಕರ ಆರೋಪ ಸರಿ ಅನ್ನಿಸಿತು ಕೂಡ. ಆದರೆ ಸ್ವಲ್ಪ ಕಾಲ ಯೋಚಿಸಿದ ಮೇಲೆ ಆ ಅಭಿಪ್ರಾಯ ತಾತ್ಕಾಲಿಕ ಅನ್ನಿಸುತ್ತಿದೆ. ಓದುಗರೇ ಇಲ್ಲದೆ ಪ್ರಸರಣವೇ ಇಲ್ಲದೆ ಪತ್ರಿಕೆಗಳೇ ಮುಚ್ಚುತ್ತಿರುವ ಕಾಲದಲ್ಲಿ ಸಾಹಿತ್ಯ ಸಂಸ್ಕೃತಿ ಅಂತೆಲ್ಲ ಕೇಳುವುದು ಹೊಟ್ಟೆ ಹಸಿದು ಸಾಯುತ್ತಿರುವನ ಮುಂದೆ ಸಂಗೀತ ನುಡಿಸಿದಂತೆ ಅನ್ನಿಸಿತು. ಈ ನಡುವೆ ಬಾಗಿಲು ಹಾಕಿಕೊಂಡ ಟಿವಿ ವಾಹಿನಿಗಳು, ಕೆಲಸ ಕಳೆದುಕೊಂಡ ಮುದ್ರಣ ಮಾಧ್ಯಮದ ಗೆಳೆಯರು ನೆನಪಾದರು. ಕೋವಿಡ್ ಎನ್ನುವುದೇ ಒಂದು ನೆವವಾಗಿ ಒಳಗೊಳಗೇ,  ಸಾಯುತ್ತಿದ್ದ ಎಷ್ಟೊಂದು ಆರ್ಥಿಕ ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ಬಾಗಿಲು ಮುಚ್ಚಿದವು. ನಿವೃತ್ತಿಯ ಸೌಲಭ್ಯವನ್ನೇ ಮೊಟಕು ಮಾಡಿದ ಸಂಸ್ಥೆಗಳಂತೆಯೇ ಹೊಸ ನಿವೃತ್ತಿಯ ಯೋಜನೆ ಪ್ರಕಟಿಸಿದ ಸಂಸ್ಥೆಗಳೂ ಇವೆ. ಸದಾ ಸರ್ವದಾ ಜಾಹೀರಾತಿನ ಆದಾಯದ ಮೇಲೇ ನಿಂತಿರುವ ಪತ್ರಿಕೆಗಳಿಗೆ ಈ ಪುರವಣಿಗಳ ನಿರ್ವಹಣೆ ಯಾವತ್ತೂ ಸವಾಲಿನದೇ….ಏನೆಲ್ಲ ಮಾಡಿಯೂ ಒಂದು ಸಂಚಿಕೆ ತಂದರೆ ಅದಕ್ಕೆ ಬರುವ ಪ್ರತಿಕ್ರಿಯೆ ಪೂರಕವಾಗಿರುವುದಿರಲಿ ಆ ಸಂಚಿಕೆಯ ಹಿಂದಿನ ಉದ್ದೇಶಗಳನ್ನು ಮರೆತು ಅಲ್ಲಿ ಒಳಗೊಂಡ ಲೇಖಕರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುವವರೇ ಕಾಣುತ್ತಾರೆ. ಈ ವರ್ಷ ಕೋವಿಡ್ ದಾಳಿಯ ಪೂರ್ವದಲ್ಲಿ ಪ್ರಕಟವಾದ ಎಲ್ಲ ಪತ್ರಿಕೆಗಳ ದೀಪಾವಳಿ ಮತ್ತು ಯುಗಾದಿ ವಿಶೇಷಾಂಕಗಳನ್ನು ಹರಡಿಕೊಂಡು ಕೂತರೆ ಆ ಎಲ್ಲ ಪತ್ರಿಕೆಗಳೂ ವಿಶೇಷಾಂಕದ ಹೂರಣಕ್ಕಿಂತ ಜಾಹೀರಾತಿನ ಬಲ ಸಾಧಿಸುರುವುದೇ ಸಾಧನೆಯಾಗಿದೆ. ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಗೆ ತಕ್ಕನಾದ ಅವಕಾಶ ಬೇಕಾಗುವುದು ಬೌದ್ಧಿಕ ಹಸಿವೆಯ ನಿವಾರಣೆಗೆ. ಸದ್ಯದ ಸ್ಥಿತಿಯಲ್ಲಿ ಎಲ್ಲ ಸಮುದಾಯಗಳೂ ಆತಂಕ ಮತ್ತು ಭಯದಲ್ಲಿ ಇರುವಾಗ  ಮತ್ತು ಹೊಟ್ಟೆಯ ಹಸಿವೆಯನ್ನು ನೀಗಿಕೊಳ್ಳಲು ಯಾವುದಾದರೂ ಮಾರ್ಗ ಇದೆಯೇ ಎಂದು ಚಿಂತಿಸುತ್ತಿರುವಾಗ ಸಂಪಾದಕರ ಆಗ್ರಹಕ್ಕೆ ಅರ್ಥ ಇರುವಂತಿಲ್ಲ. ಏಕೆಂದರೆ ಸದ್ಯ ನಾವೆಲ್ಲರೂ ಎದುರಿಸುತ್ತಿರುವ ಮೂಲಭೂತ ಸಮಸ್ಯೆಯ ಮುಂದೆ ಸಾಹಿತ್ಯವೋ ಸಂಗೀತವೋ ಅಥವ ಸಂಸ್ಕೃತಿ ಚಿಂತನೆಯೋ ಅರ್ಥವಿಲ್ಲದ ಪ್ರಶ್ನೆಯಾಗಿಯೇ ಕಾಡುತ್ತಿದೆ…… ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ ನೆರವಿಗೆ ಬಂದೊದಗುತ್ತಲೇ ಇವೆ. ಅದು ಸಾಹಿತ್ಯ ಓದುವುದು, ಚಿತ್ರಕಲೆಯನ್ನೋ, ಶಿಲ್ಪಕಲೆಯನ್ನೋ ನೋಡುವುದು, ಸಂಗೀತವನ್ನು ಕೇಳುವುದು ಹಾಗೇ ನೋಡನೋಡುತ್ತಲೇ ಕೇಳುವುದೂ ಆಗಿರುವ ಸಿನಿಮಾ ಅಥವ ನಾಟಕ ಯಾವುದೋ ಒಂದು ಆಗಿ ನಮ್ಮ ವಿಷಾದದ ಹೊತ್ತುಗಳಲ್ಲಿ ಚೈತ್ರದ ಚಿಗುರನ್ನು ಪಲ್ಲವಿಸಿವೆ, ಸಂತಸದ ಸಮಯವನ್ನು ದುಪ್ಪಟ್ಟುಗೊಳಿಸಿವೆ. ಲಲಿತ ಕಲೆ ಮನುಷ್ಯನಿಗೆ ಬೇಕೇ ಬೇಕು ಅಂತ ವಾದಿಸುವವರ ಸಮಸಮವಾಗಿ ಅದೆಲ್ಲವನ್ನೂ ನಿರಾಕರಿಸಿ ಕಲೆಯ ಗೊಡವೆಗೆ ಕೈಹಾಕದೆಯೇ ಭವ್ಯವಾಗಿ ಬದುಕು ನಡೆಸಿದವರ, ನಡೆಸುತ್ತಿರುವವರ ದೊಡ್ದ ಪಟ್ಟಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೂ ಕಲೆ ಮನುಷ್ಯನಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವವನ್ನು ಪೂರೈಸಿಕೊಳ್ಳಲಾದರೂ ಬೇಕೇ ಬೇಕು. ಏಕೆಂದರೆ ಲಲಿತಕಲೆಯ ವಿವಿಧ ವಿಭಾಗಗಳಲ್ಲೂ ಒಂದು ಸಾಮಾನ್ಯವಾದ ಧರ್ಮವಿದೆ. ಅದೆಂದರೆ ಬದುಕನ್ನು ಪ್ರೀತಿಸುವಂತೆ ಉದ್ದೀಪಿಸಿ ಅದರ ಅರ್ಥವನ್ನು ಹಿಗ್ಗಲಿಸಿ ಸಾರ್ಥಕಪಡಿಸುವುದು. ಪ್ಲೇಟೋ ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಜಾಗವಿರುವುದಿಲ್ಲ ಅಂತ ಹೇಳಿದ್ದು ನೆನಪಿರುವ ಹಾಗೇ ಕಾಳಿದಾಸನಿಲ್ಲದ ಭೋಜರಾಜನನ್ನು, ಪಂಪನಿಲ್ಲದ ಅರಿಕೇಸರಿಯನ್ನೂ ಊಹಿಸಿಕೊಳ್ಳುವುದು ಅಸಾಧ್ಯ. ವ್ಯಾಂಗೋ ಗೆರೆಗಳಿಗೆ ಜೀವ ಬರಿಸಿದ್ದನ್ನು, ತನ್ನ ಗಾಯನದಿಂದಲೇ ದೀಪ ಬೆಳಗಿಸಿದ ಸಂಗೀತಗಾರನ ಕತೆಯಂಥ ಹಲವು ಕಥಾನಕಗಳನ್ನು, ಚಾಪ್ಲಿನ್‌ನಿಂದ ಹಿಡಿದು ನಿನ್ನೆ ಮೊನ್ನೆ ಸಿನಿಮಾದ ವ್ಯಾಕರಣ ಕಲಿತು ಅದ್ಭುತ ಚಿತ್ರಗಳನ್ನು ಮಾಡುತ್ತಲೇ ಇರುವ ಅಸಂಖ್ಯರನ್ನು, ನೀನಾಸಂ, ರಂಗಾಯಣ, ಎನೆಸ್ಡಿ ಮುಂತಾದ ಸಂಸ್ಥೆಗಳ ಮೂಲಕ ತಯಾರಾಗಿ ಈಗ ಸದ್ಯದ ಸಿನಿಮಾ, ರಂಗಭೂಮಿ, ದೂರದರ್ಶನಗಳಲ್ಲಿ ಹೊಸತನವನ್ನು ತಂದು ತಂದು ಪೇರಿಸುತ್ತಿರುವ ಪ್ರತಿಭೆಗಳನ್ನೂ ಹಾಗೆಲ್ಲ ನೇಪಥ್ಯಕ್ಕೆ ಸರಿಸುವ ಹಾಗಿಲ್ಲ. ಆದರೂ ಒಟ್ಟೂ ಪ್ರಜಾ ಸಂಖ್ಯೆಗೆ ಲಲಿತಕಲೆಗಳ ಮೋಡಿಗೆ ಸಿಲುಕಿದವರ ಸಂಖ್ಯೆಯನ್ನು ಹೋಲಿಸಿದರೆ ಅದು ಕಡಿಮೆಯೆಂದೇ ನಮಗೆಲ್ಲರಿಗೂ ಗೊತ್ತು. ಹಾಗಿದ್ದೂ ಸಾಹಿತಿಗಳ ನಡುವೆ, ಸಿನಿಮಾ ಮಾಡುವವರ ನಡುವೆ, ಸಂಗೀತಗಾರರ ನಡುವೆ, ಕಲಾವಿದರ ನಡುವೆ ಒಂದು ಅಘೋಷಿತ ಯುದ್ಧ ನಡೆಯುತ್ತಲೇ ಇರುತ್ತದೆ. ತಾನು ನಂಬಿದ್ದು, ಸೃಷ್ಟಿಸಿದ್ದೇ ಮಹತ್ವದ್ದು ಅನ್ನುವ ಇರಾದೆಯೇ ಇದಕ್ಕೆಲ್ಲ ಮೂಲ. “ಏಕಂ ಸತ್ ವಿಪ್ರಾ ಬಹುದಾ ವದಂತಿ” ಅನ್ನುವುದು ಗೊತ್ತಿದ್ದೂ ಇರುವ ಒಂದೇ ಸತ್ಯವನ್ನು ಸಾಹಿತಿಗಳೂ ಕಲಾವಿದರೂ ಅವರವರಿಗೆ ತಿಳಿದ ಮಟ್ಟದಲ್ಲಿ ವ್ಯಾಖ್ಯಾನಿಸುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ. ಲಲಿತ ಕಲೆಗಳ ಒಂದೊಂದು ವಿಭಾಗಕ್ಕೂ ಒಂದೊಂದು ವಿಶೇಷ ಲಕ್ಷಣಗಳಿವೆ. ಪ್ರತಿ ಕಲೆಗೂ ಸಾಧನಗಳು ಬೇರೆ,ಬೇರೆ. ಸಾಹಿತಿ ತಾನು ತನ್ನ ಕಾಲದಲ್ಲಿ ನೋಡಿದ್ದನ್ನು ಅನುಭವಿಸಿದ್ದನ್ನು ಆಗಿನ ಭಾಷೆ, ಶೈಲಿ, ಸಂಪ್ರದಾಯ, ಕಟ್ಟಳೆಗಳನ್ನು ಅನುಸರಿಸಿ ದಾಖಲು ಮಾಡುತ್ತಾನೆ. ತನ್ನ ಪ್ರತಿಭೆಗೆ ತಕ್ಕ ಶಬ್ದಾರ್ಥ,ಧ್ವನಿಗಳ ಮೂಲಕ ಆ ಸಮಯದಲ್ಲಿ ಹೊಳೆದ ಸೌಂದರ್ಯವನ್ನು ಬುದ್ಧಿಯಿಂದ ಸೆರೆಹಿಡಿದು, ಧಾರಣೆಯಿಂದ ನಿಲ್ಲಿಸಿ ತನ್ನ ಕೃತಿಯಲ್ಲೊಂದು ಜಾಗವನ್ನು ಕೊಟ್ಟು ಸಲಹಿರುತ್ತಾನೆ. ಸಾಹಿತ್ಯವೆಂಬುದು ಎಲ್ಲ ಕಾಲಕ್ಕೂ ಸಹಜವಾದ, ಮಾನವ ಪ್ರಪಂಚಕ್ಕೆಲ್ಲ ಸಾಮಾನ್ಯವಾಗಿ ಹೊಂದುವ, ರಸಸೃಷ್ಟಿಯಾಗಿರುವುದರಿಂದ ಸಾಹಿತಿಯೊಬ್ಬನ ಕೃತಿ ಮುಂದೆ ಎಲ್ಲ ಕಾಲದಲ್ಲೂ ಅದನ್ನು ಸವಿಯುವವರಿಗೆ ಅಕ್ಷಯಪಾತ್ರೆಯಾಗಿ ಒದಗುತ್ತಲೇ ಇರುತ್ತದೆ, ಅದಕ್ಕೆ ಅಂಥ ತಾಕತ್ತು ಇದ್ದರೆ. ಹಾಗೇ ದೂಷಿಸುವವರಿಗೂ ಅದು ಅಕ್ಷಯಪಾತ್ರೆಯೇ ಸರಿ! ಇನ್ನು ಚಿತ್ರಕಾರ-ಚಿತ್ರಕ್ಕೆ ಬೇಕಾಗುವ ಬಣ್ಣ, ರೂಪರೇಖೆ, ಕುಂಚ, ಹಲಗೆ, ಕಾಗದ,ಬಟ್ಟೆ ಇತ್ಯಾದಿ ಇತ್ಯಾದಿಗಳನ್ನು ಅನುಕೂಲಕ್ಕೆ ತಕ್ಕಂತೆ ಯೋಚಿಸಿ ಯೋಜಿಸುತ್ತಾನೆ. ಸಂಗೀತವಂತೂ ನಾದ, ಶಾರೀರ, ಪಕ್ಕ ವಾದ್ಯ, ಸಾಧನೆ ಇತ್ಯಾದಿಗಳಿಂದ ಹುಲುಸುಗೊಂಡರೆ, ಶಿಲ್ಪಿ ತನ್ನ ವ್ಯವಸಾಯಕ್ಕೆ ಮಣ್ಣು, ಕಲ್ಲು, ಗಾರೆ, ಮರ, ಲೋಹ, ಬಟ್ಟೆ, ಬೆಂಡು. ಉಳಿ, ಸುತ್ತಿಗೆ, ಚಾಣ ಇತ್ಯಾದಿಗಳನ್ನು ಬಳಸಿ ತನ್ನಿಷ್ಟದ ಕೃತಿಯನ್ನು ರಚಿಸುತ್ತಾನೆ. ರಸಾಸ್ವಾದನೆ ಅದನ್ನು ಸವಿಯುವವರ ಮಟ್ಟಕ್ಕೆ ತಕ್ಕ ಆಳ ಅಗಲಗಳ ವ್ಯಾಖ್ಯೆಯನ್ನು ತುಂಬಿಕೊಡುತ್ತದೆ. ‍ಬದುಕಿನ ಅರ್ಥವನ್ನು ಬಗೆಬಗೆಯಾಗಿ ಬಗೆಯುತ್ತಲೇ ಇರುವ ಸಾಹಿತಿ-ಕಲಾವಿದರನ್ನು ಅನುಮಾನಿಸುವುದು, ಸನ್ಮಾನಿಸುವುದು, ಸಾಮಾಜಿಕ ಸಾಂಸ್ಕೃತಿಕ ಕಾರಣಗಳಿಂದ ಅವನನ್ನು ಎತ್ತಿ ಮೆರಸುವುದು ಹಾಗೇ ಎತ್ತಿ ಎಸೆಯುವುದನ್ನೂ ಲೌಕಿಕ ಮಾಡುತ್ತಲೇ ಬಂದಿದೆ. ಟಿ.ಆರ್.ಪಿಗಳ ಕಾಲದಲ್ಲಿ ಇದು ಸಹಜವೂ, ನ್ಯಾಯವೂ ಆದುದೇ ಆಗಿದೆ! ಸಮಾಜದ ಆಶಯಕ್ಕೆ ಅಂದರೆ ಪ್ರಭುತ್ವಕ್ಕೆ ಪೂರಕವಾಗಿ ಕೃತಿ ರಚಿಸುವವನಿಗೆ ಇರುವ ಮಾನ ಮರ್ಯಾದೆಗಳು ಅದಕ್ಕೆ ವಿರೋಧಿಯಾಗಿರುವವನಿಗೆ ಸಲ್ಲುವುದು ಯಾವತ್ತೂ ವಿಳಂಬವೇ. ಏಕೆಂದರೆ ಸತ್ಯದ ಹುಡುಕುವಿಕೆಯಲ್ಲಿ ಯಾವತ್ತೂ ಪರಿಣಾಮಗಳು ತಟ್ಟಂತ ಸಿಕ್ಕ ಉದಾಹರಣೆಗಳು ಇಲ್ಲವೇ ಇಲ್ಲ. ಸತ್ಯ ಎನ್ನುವುದು ಸಿಗುತ್ತದೋ ಇಲ್ಲವೋ ಅಂಥದೊಂದು ಸತ್ಯವನ್ನು ಬೆನ್ನು ಹಿಡಿದು ಹೊರಡುವುದೇ ನಿಜಕ್ಕೂ ಅಗ್ನಿದಿವ್ಯದ ಅಸಲಿಯತ್ತು. ಉಪನಿಷತ್ತಿನಿಂದ ಓಷೋವರೆಗೂ ಈ ಇದೇ ಸತ್ಯದ ಹುಡುಕುವಿಕೆಯೇ ನಮ್ಮೆಲ್ಲ ಸಾಹಿತಿ-ಕಲಾವಿದರನ್ನೂ ಪೋಷಿಸಿದೆ, ತನ್ನ ಉದರದಲ್ಲಿಟ್ಟುಕೊಂಡು ಕಾಪಾಡಿದೆ. ತಾನು ಬದುಕಿದ್ದ ಕಾಲದಲ್ಲಿ ಅಜ್ಞಾತನಾಗಿದ್ದ ಬೋದಿಲೇರ್, ಸತ್ತ ನಂತರವೇ ತೀವ್ರ ತರದ ಚರ್ಚೆಗಳನ್ನು ಹುಟ್ಟುಹಾಕಿದ ಬ್ರೆಕ್ಟ್, ಎಂಟುನೂರು ವರ್ಷಗಳ ಹಿಂದೆ ರಚಿತವಾದರೂ ಇವತ್ತಿಗೂ ಹೊಸ ಹೊಸ ಜಿಜ್ಞಾಸೆಗಳಿಗೆ ಒಡ್ಡುವ ವಚನಗಳು, ಲಿಯಾನಾರ್ಡೊ ಡಾವಿಂಚಿಯ ಚಿತ್ರಗಳು, ಯಾವುದೋ ಉತ್ಖನನದಲ್ಲಿ ಸಿಕ್ಕುವ ಪುರಾತನರ ಜೀವನಶೈಲಿಯ ಪುರಾವೆಗಳು ಯಾವತ್ತೂ ವರ್ತಮಾನದ ಜನಜೀವನ ಆಧುನಿಕತೆಯ ಬಾಗಿಲಿನಲ್ಲಿದ್ದೂ ಹೇಗೆ ಇನ್ನೂ ತನ್ನ ಹಳೆಯ ಹೊಸಿಲಲ್ಲೇ ಏದುಸಿರು ಬಿಡುತ್ತಿದೆ ಅಂತ ಪ್ರಮಾಣೀಕರಿಸುತ್ತಲೇ ಬಂದಿವೆ. ವರ್ತಮಾನದ ಸಾಹಿತ್ಯ ನಿರ್ಮಾಪಕರನ್ನು, ಅದರಲ್ಲೂ ಪರಂಪರೆಯ ಹಂಗಿಲ್ಲದೇ ತಾನು ತಿಳಿದ ಸಂಗತಿಯೇ ದೊಡ್ಡದೆಂದು ವಾದಕ್ಕೆ ನಿಲ್ಲುವವರನ್ನು ಪರಂಪರೆಯೆಂಬ- ಬಳಸದೇ ಅಂದಗೆಟ್ಟ ಸರೋವರಕ್ಕೆ ಒಮ್ಮೆ ಕರೆದೊಯ್ದು-ಈಗಿನ ಬಹುತೇಕರು ಹೇಳುವ ಹಾಗೇ ಆ ಸರೋವರದ ನೀರು ಬಳಸುವವರಿಲ್ಲದೇ ಕೊಳಚೆಯಾಗಿ ಕೆಸರು ತುಂಬಿದೆ. ಹಸಿರು ಪಾಚಿಗಟ್ಟಿ ಹೂಳು ತುಂಬಿಕೊಂಡಿದೆ-ಅದರ ಹೂಳನ್ನೆತ್ತಿ ತೆಗೆದು ಎಸೆದು, ಸ್ವಲ್ಪ ಆಳಕ್ಕೆ ಅದನ್ನು ತೋಡಿ ವಿಸ್ತರಿಸಿ, ಎಲ್ಲೋ ಮುಚ್ಚಿ ಹೋಗಿರುವ ಜಲದ ಕಣ್ಣುಗಳನ್ನು ತೆರೆದು ಹೆಚ್ಚು ನೀರು ಬಂದು ಸೇರುವಂತೆ ಮಾಡಿದರೆ ಜೊತೆಗೇ ಕುಸಿದಿರುವ ಸೋಪಾನದ ಪಾವಟಿಗೆಗಳನ್ನು ದುರಸ್ತಿ ಮಾಡಿಸಿದರೆ ಆ ಕೊಳದ ನೀರನ್ನೇ ಆಶ್ರಯಿಸಿ ಉದ್ಯಾನವನ್ನೇ ಬೆಳಸಬಹುದು. ಉದ್ಯಾನ ನಿರ್ಮಾಣವಾದರೆ ಅಳುವ ಮಕ್ಕಳು ಆಟವಾಡಲು ಬಂದಾವು. ಹಕ್ಕಿ ಪಕ್ಷಿಗಳ ಜೊತೆಜೊತೆಗೇ ದಣಿವಾರಿಸಿಕೊಳ್ಳಲು ನಮಗೂ ಒಂದಿಷ್ಟು ತಾವು ಸಿಕ್ಕುತ್ತದೆ. ಆಗ ಆರಾಮವಾಗಿ ಕೂತು ಮುರಿದು ಕಟ್ಟಿದ ಸರೋವರದ ದಡದಲ್ಲಿ ಭಾಷೆಯ ಸಂಗತಿಗಳನ್ನು ಅರ್ಥಮಾಡಿಕೊಳ್ಳಬಹುದು. ಅದು ಬಿಟ್ಟು ಯಾವ ಮೂಲದಿಂದ ಮನೆಯ ನಲ್ಲಿಯಲ್ಲಿ ನೀರು ಬರುತ್ತದೋ ಎಂಬ ಅರಿವಿಲ್ಲದೇ ಬರಿದೇ ತೋಡಿ ತೋಡಿ ಬಳಸಿದರೆ ನೀರಿನ ಮಹತ್ವ ಅರಿಯುವುದಾದರೂ ಹೇಗೆ? ಭಾಷೆಯ ಸಂಗತಿ ಸಿದ್ಧಿಸುವುದಾದರೂ ಹೇಗೆ? ಸದ್ಯದ ವರ್ತಮಾನದಲ್ಲಿ ಸಾಹಿತ್ಯ ಸಂಸ್ಕೃತಿ ಭಾಷೆಗಿಂತಲೂ ಅತ್ಯಗತ್ಯವಾಗಿ ಆರ್ಥಿಕ ಚೇತರಿಕೆಗೆ ಸಹಾಯವಾಗುವ ಯೋಜನೆಗಳು ತುರ್ತಾಗಿ ಬೇಕಿವೆ. ಹೊಟ್ಟೆ ತುಂಬಿದ ನಂತರ ಉಳಿದೆಲ್ಲವನ್ನೂ ನಿಭಾಯಿಸಬಹುದು. ಆದರೆ ಬದುಕಿಗೆ ಆಸರೆಯಾಗಿ ಇಷ್ಟೂ ದಿನ ಇದ್ದ ಪರಿಕರಗಳು ಇದ್ದೂ ಇಲ್ಲದ ಹಾಗೆ ಆಗಿರುವ ಹೊತ್ತಲ್ಲಿ ಮುದ್ರಣ ಮಾಧ್ಯಮವೇನು ಬೇರೆ ಯಾರಿಗೂ ಸಾಹಿತ್ಯದ ಉಪಾಸನೆಗೆ ಸಮಯವಾಗಲೀ ವ್ಯವಧಾನವಾಗಲೀ ಇರಬೇಕೆನ್ನುವುದೇ ಅನುಚಿತ ಸಲಹೆ ಅನ್ನಿಸುತ್ತಿದೆ. *************************************

ಚರ್ಚೆ- ಮುದ್ರಣ ಮಾಧ್ಯಮ ಮತ್ತು ಸಾಹಿತ್ಯೋಪಾಸನೆ Read Post »

ಇತರೆ, ವಾರ್ಷಿಕ ವಿಶೇಷ

ಅವಳೇ ಕಾರಣ…

ಲಹರಿ ಅವಳೇ ಕಾರಣ… ಸ್ಮಿತಾ ಭಟ್ ಏನೇ ಹೇಳಿ ಮಕ್ಕಳನ್ನು ಸಂಭಾಳಿಸುವ ವಿಷಯದಲ್ಲಿ ತಾಯಿಗೇ ಹೆಚ್ಚಿನ ಪ್ರಶಸ್ತಿಗಳು ಸಲ್ಲಬೇಕು.ಎಲ್ಲದಕ್ಕೂ ಅಮ್ಮಾ ಎಂದೇ ಕೂಗುವ ಕಂದಮ್ಮಗಳನ್ನು ತೃಪ್ತಿ ಪಡಿಸುವುದು ಸುಲಭದ ವಿಷಯವಂತೂ ಅಲ್ಲ. ಏಕ ಕಾಲದಲ್ಲಿ ನೂರು ಮಕ್ಕಳನ್ನು ಗಾಂಧಾರಿ ಹೇಗೆ ಸಂಭಾಳಿಸಿದಳೋ ಎಂದು, ಒಂದೇ ಮಗುವಿನ ತಾಯಿಯಾದ ನನಗೆ ಸದಾ ಕಾಡುವ ಸಂಗತಿ. “ಅಯ್ಯೋ ನಮ್ಮ ಕಾಲದಲ್ಲಿ ಹೀಗಿರಲಿಲ್ಲಪ್ಪ” ಈಗಿನ ಕಾಲದ ಮಕ್ಳೇ ಹಾಗೋ, ಪಾಲಕರೇ ಹಾಗೋ ಅನ್ನುವ, ಅವಕಾಶ ವಂಚಿತರಾಗದಂತೆ ಹಿರಿಯರಾಡುವ ಮಾತುಗಳು ನೇರ ತಾಕುವುದು ತಾಯಿಯನ್ನೇ. “ತಾಯಿಯಂತೆ ಕರು ನೂಲಿನಂತೆ ಸೀರೆ”ಎಂದು ಗುಣಗಾನದಲ್ಲೋ,ಅವಹೇಳನದಲ್ಲೋ , ಅನಾವರಣ ವಾಗುವುದು ಒನ್ಸ್ ಅಗೇನ್ ತಾಯಿ. ಗಂಡನ ಮನೆಯಲ್ಲಿ ಕೆಲಸ ಕಾರ್ಯ, ಅಡುಗೆ, ಸೇವೆ,ಸಹಕಾರ, ಯಾವುದರಲ್ಲಿ ವ್ಯತ್ಯಾಸ ವಾದರೂ ಅಪ್ಪನ ಮನೇಲಿ ತಾಯಿ ಏನೂ ಕಲಿಸಿಲ್ವೆನೋ ಅಂತಲೇ ರಾಗ ತೆಗೆಯುವುದು. ಒಟ್ಟಿನಲ್ಲಿ ಕೆಟ್ಟದಕ್ಕೆಲ್ಲ ಶನೀಶ್ವರನೇ ಕಾರಣ ಎನ್ನುವಂತೆ ತಾಯಿ ಎನ್ನುವವಳು, ಮಕ್ಕಳ ವಿಷಯದಲ್ಲಿ ಚೌತಿ ಚಂದ್ರನ ನೋಡಿದವಳಂತೆ ಬದುಕುತ್ತಿರುತ್ತಾಳೆ. ಈ ಕರೋನಾ ಕಾಲದ ಕಾರಣದಿಂದ ನಿರಂತರವಾಗಿ ಮಕ್ಕಳು ಮನೆಯಲ್ಲೇ ಕಳೆಯುವುದರಿಂದ  ಸಂಭಾಳಿಸಿವುದಂತೂ ಅತೀವ  ಕಷ್ಟದ ಕೆಲಸ. ಮತ್ತದು ತಾಯಂದಿರ ಹೆಗಲಮೇಲೆ ಸದಾ ಹೊರುವ ಹೊರೆಯಾಗಿದೆ. ಚಿಕ್ಕ ಮಕ್ಕಳಿಗೆ ಗದರಿಯಾದರೂ ಮಾತು ಕೇಳಿಸಬಹುದು. ಆದರೆ ದೊಡ್ಡ ಮಕ್ಕಳು ಹಾಗಲ್ಲ, ಅವರು ನಿರಂತರವಾಗಿ ಮನೆಯೊಳಗೇ ಇರುವದರಿಂದ ಡಿಪ್ರೆಶನ್ ಗೂ ಕೂಡಾ ಒಳಗಾಗುತ್ತಾರೆ.ಪ್ರಪಂಚಕ್ಕೆ ತರೆದು ಕೊಳ್ಳುವ ವಯಸ್ಸಾದ್ದರಿಂದ ಯಾವ ಸಮಯವನ್ನೂ ಅವರು ನಾಲ್ಕು ಗೋಡೆಯ ಮಧ್ಯೆ ಕಳೆಯಲು ಬಯಸುವುದಿಲ್ಲ.ಶಾಲೆ ಸ್ನೇಹಿತರು.ಆಟ ಓಟ ಪಾಠ ಎನ್ನುತ್ತ ಸ್ವಚ್ಛಂದವಾಗಿ ಬೆಳಯಲು ಬಯಸುತ್ತಾರೆ. ಅದು ಸರಿ ಕೂಡಾ. ಆದರೆ ಈಗ ಅನಿವಾರ್ಯವಾಗಿ ಮನೆಯಲ್ಲೇ ನಿರಂತರವಾಗಿ ಕಾಲಕಳೆಯುಬೇಕಾಗಿದೆ ಆದ್ದರಿಂದ ಹಿರಿಯರ  “ಬೇಡ””ಬೇಡ”, ಗಳೇ ಹೆಚ್ಚು ಕಿವಿಗೆ ತಾಕಿ ಎಲ್ಲದಕ್ಕೂ  ತನ್ನ ಕಟ್ಟು ಪಾಡುಗಳಿಗೆ ಒಳಪಡಿಸುತ್ತಿದ್ದಾರೆ ಅನ್ನಿಸಲು ಶುರುವಾಗುತ್ತದೆ.ಅದೆಂತಹ ಪ್ರೀತಿಯೇ ಆದರೂ ಅವಡುಗಚ್ಚಿಕೊಂಡೇ ಇದ್ದರೆ ಉಸಿರುಗಟ್ಟುವುದು ನಿಜವಾದ್ದರಿಂದ ಬಿಡುಗಡೆಯನ್ನು ಬಯಸುವ ವಯಸ್ಸೂ ಜೊತೆ ಸೇರಿ ಮುಗಿಬೀಳಲು ಶುರು ಮಾಡುತ್ತಾರೆ. ಸ್ವಲ್ಪ ತಿದ್ದು ನೋಡುವಾ ಮಕ್ಕಳನ್ನು, ಏನಿದು ಸಂಸ್ಕಾರವೇ ಇಲ್ದಾಂಗೆ ಆಡ್ತಾರೆ. ನಿನ್ನ ಅತಿಯಾದ ಮುದ್ದೇ ಕಾರಣ ಇದ್ಕೆಲ್ಲ, ಎಂದು ಹೊರನಡೆಯುವ ಅಪ್ಪಂದಿರಿಗೆ ಅಮ್ಮಂದಿರ ಕಷ್ಟ ಎಂದೂ ಅರ್ಥವಾಗುವದಿಲ್ಲ. ಅಯ್ಯೋ,, ಬಯ್ಸ್ಕೊ ಬೇಡ್ವೊ, ಅಪ್ಪನ ಹತ್ರ ಸ್ವಲ್ಪ ಹೇಳಿದ ಮಾತು ಕೇಳೋ ಎಂದು ಪಿಸು ದನಿಯಲ್ಲಿ ಅಲವತ್ತು ಕೊಳ್ಳುತ್ತಾಳೆ ಅಮ್ಮ. ನನ್ನದೇ ಮಗ ಒಂದಿನ “ಈ ಶಾಲೆ ಆದ್ರೂ ಯಾವಾಗ ಶುರುವಾಗುತ್ತೋ ಏನೋ” ನಿಮ್ಗಳ ಹತ್ರ ಬೈಸ್ಕೊಂಡು ಬೈಸ್ಕೊಂಡು ಸಾಕಾಯ್ತು ಅಂತ ಗೊಣಗುತ್ತಿದ್ದ. ಹೌದು ಹೆಚ್ಚಿನ ಮಕ್ಕಳೊಳಗೆ ಇಂತಹದ್ದೊಂದು ಪ್ರಶ್ನೆ ಕಾಡಲಾರಂಭಿಸಿದೆ. ಏಕತಾನತೆಯಿಂದ ಕಂಗಾಲಾಗಿದ್ದಾರೆ. ಪಾಲಕರಿಗೆ ಮಕ್ಕಳು ಇಡೀದಿನ ಮೊಬೈಲ್ ನೊಳಗೇ ಇರುತ್ತಾರೆ ಎನ್ನುವುದು ದೊಡ್ಡ ಚಿಂತೆಯಾಗಿದೆ.ಷ್ಟ್ರಿಕ್ಟ್ ಆಗಿ ಮೊಬೈಲ್ ಕೊಡದೇ ಇರೋಣ ಅಂದ್ರೆ ಓನ್ ಲೈನ್ ಕ್ಲಾಸ್ ಗಳು, ಮಕ್ಕಳು ಏನು ಮಾಡ್ತಾರೆ ಅಂತ ಕಾಯುಬೇಕಾ?! ಕೆಲಸ ಮಾಡ್ಕೋಬೇಕಾ? ಅನ್ನುವ ಸಂದಿಗ್ಧ ಅಮ್ಮನದು, ಏಕೆಂದರೆ ಏನು ಮಾಡ್ತಿದ್ದಾರೆ ಮಕ್ಕಳು ಎಂದು ನೋಡೋಕಾಗಲ್ವಾ? ಎನ್ನುವ ಸಿದ್ಧ ಪ್ರಶ್ನೆಯೊಂದು ಇರುತ್ತಾದ್ದರಿಂದ. ಹಲವು ತಾಯಂದಿರು ಅಕ್ಷರಶಃ ಕಂಗಾಲಾಗಿದ್ದಾರೆ. ತನ್ನೆಲ್ಲ ಚಟುವಟಿಕೆಗಳನ್ನು ಕಟ್ಟಿಟ್ಟು ಹತಾಶಳಾಗಿದ್ದಾಳೆ. ಮೊನ್ನೆ ಗೆಳತಿಯೊಬ್ಬಳು ಸಿಕ್ಕಿದ್ದಳು ಈ ವರ್ಷ ಏನ್ ಕಥೆನೋ ಏನೋ ಶೂನ್ಯ ಅವಧಿ ಎಂದು ಘೋಷಣೆಯನ್ನೂ ಮಾಡುತ್ತಿಲ್ಲ, ಶಾಲೆನೂ ಶುರು ಮಾಡುತ್ತಿಲ್ಲ,ಬರೀ ಅಂತೆ ಕಂತೆಗಳು. ಈ ಓನ್ ಲೈನ್ ಕ್ಲಾಸ್ ಅನ್ನೋದು ಮಕ್ಕಳಿಗೆ ಮೊಬೈಲ್ ಹಿಡ್ಕೊಂಡು ಕೂತ್ಕೋಳೊಕೆ ಒಳ್ಳೆ ಕಾರಣ ಆಗ್ಬಿಟ್ಟಿದೆ ನೋಡು. ಈ ಅತಂತ್ರ ಪರಿಸ್ಥಿತಿಯಲ್ಲಿ ನಮ್ಮ ಮನೆ ರಣರಂಗವಾಗಿದೆ ಕಣೇ. ಮಗನಿಗೆ ನನ್ನ ಕಂಡರೇ ಅಗಲ್ಲ,ಕಾರಣ ನಾನು ಮೊಬೈಲ ಕೊಡಲ್ಲ. ಎಲ್ಕದಕ್ಕೂ ಸಿರ್ ಅಂತ ಸಿಡಿದು ಬೀಳ್ತಾನೆ.ಅವರಪ್ಪ ನೀನೇ ಮೊಬೈಲ್ ಕೊಟ್ಟು ಕೊಟ್ಟು ಹಾಳ್ಮಾಡಿದ್ದೀಯಾ ಅಂತ ನನ್ನೇ ಅಂತಾರೆ. ಕೊಡದೇ ಹೋದ್ರೆ ಸೂರೇ ಕಿತ್ತು ಹೋಗುವಂತೆ ಆಡ್ತಾನೆ. ಸಲೀಸಾಗಿ ಸಿಕ್ಕೋದು ಅಮ್ಮಂದೇ ಮೊಬೈಲ್ ಅಲ್ವಾ ಮಕ್ಕಳಿಗೆ. ನಾವೇನೂ ಮೊಬೈಲ್ ಹಿಡ್ಕೊಂಡೇ ಓಡಾಡೋಕೆ ಆಗುತ್ತಾ! ಕೆಲಸದ ಗಡಿಬಿಡಿಯಲ್ಲಿ ಎಲ್ಲೋ ಒಂದ್ಕಡೆ ಇಟ್ಟು ಬಿಡ್ತೀವಿ.ಅದ್ಯಾವ್ದೋ ಗ್ಯಾಪಲಿ ಎತ್ಕೊಂಡ್ಬಿಡ್ತಾರೆ. ಬೈಸ್ಕೊಳೋದು ಮಾತ್ರ ನಾವೇ. ಏನೇನೋ ನಡಿತಿದೆ ಮಾರಾಯ್ತಿ ಮನೆಲಿ, ನಡೆದಿದ್ದೆಲ್ಲ ಹೇಳೋಕಾಗುತ್ತಾ ಹೇಳು ಎಂದು ಪಿಸುಗುಟ್ಟಿದಳು. ನೀನೇ ಸರಿಯಾಗಿ ಕಲಿಸಿಲ್ಲ ಚಿಕ್ಕಂದಿನಿಂದ. ಅದ್ಕೆ ಹೀಗಾಡ್ತಾರೆ ಮಕ್ಕಳು, ಅನ್ನುವಲ್ಲಿಗೆ ಕೊನೆಯ ಮೊಳೆಯ ಸುತ್ತಿಗೆ ಪೆಟ್ಟು ನಮಗೇ ನೋಡು, ಎನ್ನುತ್ತ ಜೊತೆಗಿದ್ದ ಬರೋಬ್ಬರಿ ಮೂರು ಘಂಟೆ ಮಕ್ಕಳನ್ನು ಸಂಭಾಳಿಸುವ ಬಗ್ಗೆಯೇ ಅಲವತ್ತು ಕೊಂಡಳೆಂದರೆ, ಅವಳು ಸಂಪೂರ್ಣ ಕಂಗಾಲಾಗಿದ್ದು ನಿಚ್ಚಳವಾಗಿ ಗೋಚರಿಸುತ್ತಿತ್ತು. ಒಂದು ಮನೆಯಲ್ಲಿ ಏನೇ ಸಂಭವಿಸಿದರೂ ಕಷ್ಟ,ಸುಖ ನೋವು ನಲಿವು. ಮಕ್ಕಳ ನಡೆ ನುಡಿ ಪ್ರತಿಯೊಂದಕ್ಕೂ ಅವಳೇ ಕಾರಣವಾಗುತ್ತಾಳೆ. ಎನ್ನುವುದು ಅಕ್ಷರಶಃ ಸತ್ಯ. ಚಿಕ್ಕವರಿದ್ದಾಗ ಹೆಣ್ಣಿಗೆ ಸ್ವಲ್ಪವೂ ಬಾದಿಸದ ವಿಷಯ ಮದುವೆಯಾಗಿ ಬಲಗಾಲಿಟ್ಟು ಹೊಸ್ತಿಲೊಳಗೆ ಹೊಕ್ಕ ದಿನದಿಂದ ಒಳಿತು, ಕೆಡುಕು,ಆಗು,ಹೋಗುಗಳೆಲ್ಲ ಅವಳ ಕಾಲ್ಗುಣದಮೇಲೆ ನಿರ್ಧಾವಾಗತೊಡಗುತ್ತವೆ. ಮಕ್ಕಳು ಹುಟ್ಟುತ್ತಿದ್ದಂತೆ ಅದು ದುಪ್ಪಟ್ಟಾಗಿ ಸಂಪೂರ್ಣ ಧರಾಶಾಹಿ ಯಾಗಿ ಬಿಡುತ್ತಾಳವಳು, ಆರೋಗ್ಯ, ಆಟ ಪಾಟ, ಗಾಯ, ಗಲಾಟೆ,ಎಲ್ಲದಕ್ಕೂ ಅವಳಲ್ಲಿ ಉಪಸ್ಥಿತಳಿರಬೇಕು.ಮತ್ತವಳೇ ಅದರ ಜವಾಬ್ದಾರಿ ಹೊರಬೇಕು,of course ಅಮ್ಮನಾದವಳು ಇದೆಲ್ಲವನ್ನೂ ನಿಭಾಯಿಸಲೇ ಬೇಕು. ಅದು ಅವಳ ಜನ್ಮ ಸಿದ್ಧ ಹಕ್ಕು ಮತ್ತು ಅವಕಾಶ. ಆದರೆ ಮಕ್ಕಳ ಹೊಟ್ಟೆನೋವಿಗೂ,ಬಿದ್ದು ತರಚಿಕೊಂಡದ್ದಕ್ಕೂ, ತಾಯಿಯನ್ನೇ ಕಾರಣವಾಗಿಸಿ ಬೈಯುವುದರ ಬಗ್ಗೆ ತಕರಾರಿದೆ. ಆದರೂ ಅವಳು “ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ” ಎನ್ನುವ ಜಾನಪದ ನುಡಿಗಟ್ಟಿನಂತೆ ಎದೆಗವಚಿಕೊಂಡೇ ಪೊರೆಯುತ್ತಾಳೆ. ತಾಯಿತಂತೆ ಸಲಹುವ ಅಪ್ಪಂದಿರೂ ಇದ್ದಾರೆ ಆದರೆ ತೀರಾ ವಿರಳ. ಅವರ ಕಷ್ಟಗಳೂ ತೇಟ್ ಅಮ್ಮನಂತೆ ಬಿಡಿ. ಅಮ್ಮನಿಗಾದರೆ ದೈವದತ್ತ ವರವಾದರೂ ಇರುತ್ತದೆ.ಆದರೆ ಇಲ್ಲಿ ಅಪ್ಪನಾದವನ ಪಜೀತಿ ನಿಜಕ್ಕೂ ಶೋಚನೀಯವೇ.. ಇನ್ನು ದಾರ್ಶನಿಕರು, ಮನೆ ಮನೆಯಲ್ಲ, ಗೃಹಿಣಿಯೇ ನಿಜವಾದ ಮನೆ, ‘ ನ ಗೃಹಂ ಗೃಹಮಿತ್ಯಾಹು ಗೃಹಿಣೀ ಗೃಹ ಮುಚ್ಯತೇ”ಎಂದಿದ್ದಾರೆ ಹೆಣ್ಣಿಲ್ಲದೇ ಒಂದು ಮನೆ ರೂಪಗೊಳ್ಳಲು ಸಾಧ್ಯವೇ ಇಲ್ಲ. ಹೆಣ್ಣನ್ನು ಮಹಾಲಕ್ಷ್ಮಿ ಎಂದು ಮಡಿಲು ತುಂಬಿ ಮನೆ ಮನಗಳ ಒಳಗೆ ಬರಮಾಡಿಕೊಳ್ಳುತ್ತೇವೆ.ಒಳ್ಳೆಯ ಮನಸಿನಿಂದ ಸದಾ ಅವಳ ಪೊರೆಯ ಬೇಕು ಎನ್ನುತ್ತಾರೆ. ಹೆಣ್ಣು ಪ್ರೀತಿ, ಹೆಣ್ಣು ಸಹನಾ ಧರಿತ್ರಿ, ಎಂದೆಲ್ಲ ಹೆಣ್ಣನ್ನು ಹೊಗಳುತ್ತಾರೆ ಮತ್ತೆ ಹಲವರು ಹೇಳುತ್ತಾರೆ. ಹೆಣ್ಣಿನಿಂದಲೇ ಮಹಾ ಮಹಾ ಯುದ್ಧಗಳು ನಡೆದವು. ಹೆಣ್ಣಿನಿಂದ ಮಹಾಭಾರತವೇ ನಡೆಯಿತು. ಹೆಣ್ಣಿಂದ ರಾವಣ ಸತ್ತ. ರಾಮ ಕಾಡಿಗೆ ಹೋದ. ದಶರಥ ಜೀವವನ್ನೇ ತೊರೆದ ಅವಳು ಮಾಯೆ. ಅವಳು ಮೋಹನಾಂಗಿ, ಅವಳು ಮೋಸ,ಎಂದು. ಹೀಗೇ ಹಲವಾರು ರೀತಿಯಲ್ಲಿ ಆರಂಭದಿಂದ ಅಂತ್ಯದ ವರೆಗೂ ಲೋಕಕ್ಕೇ ಕಾರಣವಾಗಿ ನಿಲ್ಲುತ್ತಾಳೆ ಅವಳು. ಎಲ್ಲದಕ್ಕೂ ಅವಳನ್ನು ಬೊಟ್ಟುಮಾಡಿ ಹಳಹಳಿಸುವವರಿಗೆ ಹೇಳಬೇಕಿದೆ. ನಾರಿ ಪರರುಪಕಾರಿ ನಾರಿ ಸ್ವರ್ಗಕ್ಕೆ ದಾರಿ| ನಾರಿ ಸಕಲರಿಗೆ ಹಿತಕಾರಿ|ಮುನಿದರೆ ನಾರಿಯೇ ಮಾರಿ ಸರ್ವಜ್ಞ|| ಎಂದು. ಮಕ್ಕಳ ಆರೈಕೆ,ಪಾಲನೆ, ಪೋಷಣೆಗಳಲ್ಲಿ ಕೇವಲ ಅವಳು ಮಾತ್ರ ಕಾರಣಳಾಗುವುದಿಲ್ಲ.ಮಕ್ಕಳನ್ನು ಸಂಭಾಳಿಸುವುದು ಅತ್ಯಂತ ಸೂಕ್ಷ್ಮ ಸಂವೇದಿ ವಿಚಾರ.ಅಲ್ಲಿ ಇಡೀ ಕುಟುಂಬ,ಕುಟುಂಬದ ವಾತಾವರಣವೇ ಮುಖ್ಯ ಕಾರಣವಾಗಿ ನಿಲ್ಲುತ್ತದೆ. ಆದರೆ ತಾಯಿಯಾದವಳು “ತಾಯಿಯಂತೆ ಮಗಳು ನೂಲಿನಂತೆ ಸೀರೆ” ಎನ್ನುವ ವಿಚಾರವನ್ನೂ ಮರೆಯಬಾರದು.

ಅವಳೇ ಕಾರಣ… Read Post »

ಇತರೆ

ಡಿ.ಎಸ್.ರಾಮಸ್ವಾಮಿ ಕವಿತೆಗಳು ಗೆ; ಕವಿತೆಯ ಮೊಳಕೆಯೊಡೆಸುತ್ತದೆನಿನ್ನದೊಂದು ನಗು, ಸಣ್ಣ ಸಂದೇಶಎಂದಂದು ನಿನ್ನನ್ನು ಮರುಳುಮಾಡುವುದಿಲ್ಲ; ಜೊತೆಗಿರದೆಯೂ ಜೊತೆಗೇ ಇರುವಾಗ.ನಟ್ಟ ನಡುವೆ ಎದ್ದು ಹೋಗುವ ಮಾತಿಗೆಖಬರಿಲ್ಲ, ಅನ್ನುವುದಕ್ಕೆ ಪುರಾವೆ ಯೊದಗಿಸಲಾರೆ, ಬದುಕ ದುರಿತದ ನಡುವೆ.ಆಡದೇ ಉಳಿದ ಮಾತುಗಳು ಎದೆ ತುಂಬಉಳಿದದ್ದಕ್ಕೆ ಸಾಕ್ಷಿ, ಕವಿತೆಯ ಸಾಲುಗಳಲ್ಲಿ ನೀನು, ಪದೇ ಪದೇ ಇಣುಕುತ್ತೀಯ, ಮುಖಾಮುಖಿ-ಯಾಗದೆಯೂ, ಒಳಗೇ ಉಳಿದ ಬೆಳಕು.ಹಂಚಿಕೊಳ್ಳುವುದಕ್ಕೇನು ಉಳಿದಿದೆ ಎನ್ನುವುದೆಲ್ಲ ಬರಿಯ ಒಣ ತರ್ಕದ ದೇಶಾವರಿ ಹೇಳಿಕೆಇಬ್ಬರಿಗಲ್ಲದೇ ಮತ್ತಾರಿಗೂ ಗೊತ್ತಾಗಬಾರದ ಸತ್ಯ.ಹೆಗಲಿಗೊರಗಿ, ಬೆರಳ ಹೆಣೆದು ಅನೂಹ್ಯ ಲೋಕಕ್ಕೆ ಜಾರಿ, ಮನಸ್ಸಲ್ಲೇ ಕೂಡಿದ್ದು, ಮಿಥುನದುದ್ರೇಕಕ್ಕಿಂತಮಿಗಿಲೆಂದು ಗೊತ್ತಾಗಿದ್ದು, ಲೌಕಿಕದ ಎಂಜಲದಾಂಪತ್ಯದ ಗೆರೆ ದಾಟದ ನೈತಿಕದ ಗೆಲುವು. ಭಾವವಿಲ್ಲದ ಕವಿತೆ ಬರಿಯ ಹೇಳಿಕೆಯಾಗುವುದುಲೋಕ ಸತ್ಯದ ಮಾತು. ನೀನು ನೆನಯುವ ಕೃಷ್ಣನನ್ನ ಕಾಡುವ ರಾಧೆ, ಬರಿಯ ಪುರಾಣವೇನಲ್ಲ ನಮ್ಮೊಳಗೇ ಉಳಿದ ಬಾಂಧವ್ಯದ ಸೂನು.ಮುಗಿಲಂಚಿಗೆ ಹೆಣೆದ ಬಣ್ಣ ಬಣ್ಣದ ಕಮಾನು!! ———– ಹೆಣ್ಣು ಮತ್ತು ಹಾಡು ನೇಗಿಲ ಚೂಪಿಗೆ ಸಿಕ್ಕಿದ್ದಕ್ಕೆ ಸೀತೆ ಎಂದವರೇಇವಳು ಜನಕನ ಮಗಳು ಜಾನಕಿ ಎಂದಿರಿ.ಇವಳದಲ್ಲದ ತಪ್ಪಿಗೆ ಬೆಂಕಿಗೆ ಹಾಯುವಾಗಲು ತಡೆಯದವನನ್ನು ಪುರುಷೋತ್ತಮನೆಂದಿರಿ.ತ್ರೇತಾ ಯುಗದ ತಪ್ಪನ್ನು ದ್ವಾಪರಕ್ಕೂ ಮುಟ್ಟಿಸಿ ಪಾಂಚಾಲದಲ್ಲಿ ಹುಟ್ಟಿದುದಕ್ಕೇ ಪಾಂಚಾಲಿದೃಪದನ ಮಗಳಿಗೆ ದ್ರೌಪದಿಯ ಠಸ್ಸೆಯೊತ್ತಿದಿರಿಯಾರ ಮೇಲೆ ಯಾರಿಗೂ ಹಕ್ಕೇ ಇಲ್ಲದಿದ್ದರೂಜೂಜು ಕಟ್ಟೆಯ ಸ್ವತ್ತಾಗಿಸಿ ಲಿಲಾವಿಗಿಟ್ಟುದ್ವಾಪರದ ತಪ್ಪನ್ನು ಕಲಿಗಾಲಕ್ಕೂ ತಂದಿರಿಸಿದಿರಿ ಸೀತೆಯನ್ನು ಗೆಲ್ಲುವ ಮೊದಲೇ ದಾಶರಥಿ ಕಲ್ಲಂತಾಗಿದ್ದ ಅಹಲ್ಯೆಯನ್ನು ಹೂವಾಗಿಸಿದ್ದನ್ನುಸ್ವತಃ ಮರೆತದ್ದಕ್ಕೇ ಇರಬೇಕು, ಕಿಡಿಗೇಡಿಯ ಸಣ್ಣ ಮಾತಿಗೇ ಮತ್ತೆ ಕಾಡಿಗಟ್ಟಿದ ಅವಿವೇಕಹಾಡಂತೆ ಹಾಡುತ್ತಲೇ ಕುಶಲವರು ಗೆದ್ದದ್ದು. ಉಟ್ಟ ಸೀರೆಗೆ ಕೈಯಿಟ್ಟವನನ್ನು ಸುಸ್ತಾಗಿಸಿದ್ದುಕಟ್ಟಿಕೊಂಡವರೇನಲ್ಲ, ಮಾತು ತಪ್ಪದ ಸಖನೇ,ಮುಡಿ ಕಟ್ಟುವುದಿಲ್ಲ ತೊಡೆಮುರಿದ ಹೊರತೂಎಂದವಳು ಅವಳೇನಲ್ಲ,ಯಾರದೋ ಶಪಥಕ್ಕೆಪಗಡೆಯ ದಾಳವಾದದ್ದೂ ಆಕಸ್ಮಿಕವೇನಲ್ಲ, ಯುಗ ಯುಗಗಳ ಆವರ್ತದಲ್ಲೂ ಮತ್ತೆ ವ್ಯಥೆನೆಲವಲ್ಲದೇ ನೇಗಿಲ ಮೊನೆ ಸೀಳೀತೆ ಕಲ್ಲನ್ನುಬಂಡೆಗೆ ತಾಗಿದರೆ ಹಲದ ಹಲ್ಲೂ ಮುರಿದೀತುಅದಕ್ಕೇ ಯಾವತ್ತೂ ಮಿಗದ ಬೇಟೆಯ ನೆವಕ್ಕೆಈ ಇವನ ಕೈಯ ಭರ್ಜಿ,ಈಟಿ, ತಲವಾರುಗಳು. ಯಾವುವೂ ರಕ್ಷಣೆಗೆ ಸ್ವತಃ ನಿಲ್ಲುವುದಿಲ್ಲರಕ್ತದ ಹನಿ ನೆಲಕ್ಕೆ ಬಿದ್ದರೆ ಮತ್ತೆ ಅಸುರ ಶಕ್ತಿಎದ್ದೀತೆಂಬ ಎಚ್ಚರಿಕೆಯಲ್ಲೇ ನಾಲಿಗೆಯ ಹಾಸಿಶಕ್ತಿ ರೂಪಿಣಿಯ ಕೈಯಲ್ಲಿ ಆಯುಧದ ಸಾಲುಬರಿಯ ತೋರಿಕೆಗಲ್ಲ, ಅತ್ಯಗತ್ಯದ ವೇಷ. ತೊಡದೇ ಇದ್ದರೆ ಗೊತ್ತೇ ಆಗುವುದಿಲ್ಲ ಈ ಅವಿವೇಕಿಗಳಿಗೆ. ಇವಳು ತಾಯಿ, ಮಗಳುಅಕ್ಕ ತಂಗಿಯರ ಸಂಬಂಧದಲ್ಲಿ ಸೂಕ್ಷವಾಗಿ. **************************************

Read Post »

ಇತರೆ

ಸಜ್ಜನರ ಸಂಗ ಲೇಸು ಕಂಡಯ್ಯಾ…!

ಲೇಖನ ಸಜ್ಜನರ ಸಂಗ ಲೇಸು ಕಂಡಯ್ಯಾ…! ಬಾಲಾಜಿ ಕುಂಬಾರ, ಹನ್ನೆರಡನೇ ಶತಮಾನದ ಬಸವಣ್ಣನವರ ಸಮಕಾಲೀನ ಪ್ರಮಥರಲ್ಲಿ ವೀರಗೊಲ್ಲಾಳ ಎನ್ನುವ ತತ್ವನಿಷ್ಠೆಯ ವಚನಕಾರ ಹಾಗೂ ಅನುಭಾವಿ ಶರಣನಾಗಿದ್ದನು. ಈತನ ಮೂಲತಃ ಇಂದಿನ ವಿಜಾಪೂರ ಜಿಲ್ಲೆಯ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮ. ಈತನನ್ನು ‘ಕಾಟಕೋಟ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಕುರಿ ಕಾಯುವುದು ಈತನ ಕಾಯಕವಾಗಿತ್ತು.ಕುರಿಯ ಹಿಕ್ಕೆಯನ್ನೇ ಲಿಂಗವೆಂದು ಪೂಜಿಸಿ ಆತ್ಮಜ್ಞಾನ ಪಡೆದುಕೊಂಡು ಶರಣತತ್ವ ಪರಿಪಾಲಕನಾಗಿದ್ದನು.ತನ್ನ ವೃತ್ತಿ ಪರಿಭಾಷೆಯನ್ನು ಹಾಗೂ ತತ್ವಪರಿಭಾಷೆಯನ್ನು ಬಳಸಿಕೊಂಡು ರಚಿಸಿರುವ ಬಹುಚಿಂತನೆಯ 10 ವಚನಗಳು ಪ್ರಸ್ತುತವಾಗಿ ಲಭ್ಯವಾಗಿವೆ. ಅನುಭಾವಿ ವಚನಕಾರ, ವೀರಗೊಲ್ಲಾಳ ಒಬ್ಬ ಮುಗ್ಧ ಚಿಂತಕ, ಕಾಯಕ ಸಿದ್ಧಾಂತ ಮೈಗೂಡಿಸಿಕೊಂಡು ಸಾತ್ವಿಕ ಜೀವನ ಸಾಗಿಸಿದನು. “ವೀರಬೀರೇಶ್ವರ ಲಿಂಗಾ” ಎನ್ನುವ ವಚನಾಂಕಿತದಲ್ಲಿ ರಚಿಸಿದ ಈತನ ವಚನಗಳಲ್ಲಿ ‌ಲೌಕಿಕ ಬದುಕಿನ ಮೌಲ್ಯಗಳ ಅನಾವರಣಗೊಂಡಿದೆ. ಕುರಿ ಕಾಯುವ ವೃತ್ತಿ ಜೀವನದ ಅನುಭವದ ನುಡಿಗಳೇ ವಚನಗಳಾಗಿ ರೂಪಾಂತರ ಪಡೆದಿರುವುದು ಗಮನಿಸಬಹುದು. ಇದು ಕಾಯಕ ನಿಷ್ಠೆಯ ಬದ್ಧತೆಗೆ ಸಾಕ್ಷಿಯಾಗಿದೆ. ಆತ್ಮಜ್ಞಾನ ಪರಿಶುದ್ಧತೆ, ಸಾರ್ಥಕ ಬದುಕಿನ ಮೌಲ್ಯಗಳನ್ನು ಹೇಗೆ ಸಂಪಾದಿಸಿಬೇಕು ಎನ್ನುವ ‘ಜೀವನ ಸಂದೇಶ’ ವೀರಗೊಲ್ಲನು ತುಂಬಾ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾನೆ. “ಕಂಥೆಯ ಕಟ್ಟಿ, ತಿತ್ತಿಯ ಹೊತ್ತು, ಮರಿಯ ನಡಸುತ್ತ ,ದೊಡ್ಡೆಯ ಹೊಡೆವುತ್ತ,ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವತಿಟ್ಟುತ್ತ, ಹಿಂಡನಗಲಿ ಹೋಹ ದಿಂಡೆಯಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.ಈ ವಿಕಾರದ ಹಿಂಡ ಬಿಡಿಸಿ,ನಿಜ ನಿಳಯ ನಿಮ್ಮಂಗವ ತೋರಿ,ಸುಸಂಗದಲ್ಲಿರಿಸು, ಎನ್ನೊಡೆಯ ವೀರಬೀರೇಶ್ವರಲಿಂಗಾ.” ಸಾರ್ಥಕ ಬದುಕಿನ ಬಗ್ಗೆ ಸಲಹೆ ನೀಡುವ ಈ ಮೇಲಿನ ವಚನ ಸಾಲುಗಳು ಪ್ರಸ್ತುತ ಎನಿಸುತ್ತವೆ. ಹಾಗಾಗಿಯೇ ಇಂದಿಗೂ ಈತನು ಜನಪದರ ಹೃದಯದೊಳಗೆ ಅಚ್ಚಳಿಯದೇ ಉಳಿದುಕೊಂಡಿದ್ದಾನೆ. ವೀರಗೊಲ್ಲಾಳ ವಚನದಲ್ಲಿ ಮನುಷ್ಯನ ಅಂತರಂಗ ಮತ್ತು ಬಹಿರಂಗದ ತೊಳಲಾಟದ ಕುರಿತು ವಿಶ್ಲೇಷಿಸುತ್ತಾನೆ. ಲೋಕಿಕ ಬದುಕಿನ ಗಂಟು ಹಾಕಿ, ಚಿಂದಿಯ ಬಟ್ಟೆ ತೊಟ್ಟು, ಚರ್ಮವನ್ನು ಹೊದಿಕೆ ಮಾಡಿಕೊಂಡಿದ್ದೇನೆ, ಚರ್ಮದ ಚೀಲವನ್ನು ಹೊತ್ತು, ಕುರಿ – ಮರಿಗಳ ಹಿಂಡು ನಡೆಸುತ್ತಿದ್ದೇನೆ. ಕುರಿಯ ಹಿಂಡಿನಲ್ಲಿ ದೊಡ್ಡ ಕುರಿಗಳು ಮತ್ತು ಚಿಕ್ಕ ಕುರಿಗಳು ಇರುತ್ತವೆ, ಅವುಗಳನ್ನು ತಾಳ್ಮೆಯಿಂದ ಹೊಡೆದುಕೊಂಡು ಮುನ್ನಡೆಸುತ್ತಿದ್ದೇನೆ ಎಂದು ಹೇಳುತ್ತಾನೆ. ಇಲ್ಲಿ ‘ದೊಡ್ಡ ಕುರಿ, ಚಿಕ್ಕ ಕುರಿ’ ಎಂಬುದು ಆತನ ವೃತ್ತಿಪರಿಭಾಷೆಯ ಪದಗಳು, ಆದರೆ ಅದನ್ನು ಮಾನವನ ಬದುಕಿಗೆ ಹೋಲಿಕೆಯ ನುಡಿಗಳು ಎಂಬುದು ನಾವು ಅರಿತುಕೊಳ್ಳಬೇಕಾಗಿದೆ. ಮಾನವನ ಜೀವನದಲ್ಲಿ ಆಸೆ, ದುರಾಸೆ, ಅಪೇಕ್ಷೆ, ಆಕಾಂಕ್ಷೆ, ಕನಸುಗಳು ಇರುವುದು ಸಹಜ. ಸಣ್ಣ ಪುಟ್ಟ ತೊಂದರೆಗಳು ಎದುರಾದಾಗ ಅವೆಲ್ಲವೂ ಹಿಮ್ಮೆಟಿಸಿ ಮುನ್ನುಗ್ಗುವ ಪ್ರಯತ್ನ ಮಾಡಬೇಕು, ಬದುಕಿನ ಎಲ್ಲಾ ತೊಡಕುಗಳನ್ನು ಪ್ರೀತಿಯಿಂದ ಬಿಡಿಸಿಕೊಳ್ಳಬೇಕೆಂಬುದು ವಚನಕಾರ ವೀರಗೊಲ್ಲಾಳ ನೀಡುವ ಅನುಭವ. ದೊಡ್ಡ ಕೆಲಸಗಳು ಕೈಗೊಂಡಾಗ ದೊಡ್ಡ ಸವಾಲುಗಳು ಎದುರಾಗುವುದು ಸರ್ವೇಸಾಮಾನ್ಯ. ಅವುಗಳಿಗೆ ಹೆಚ್ಚು ಒತ್ತು ಕೊಟ್ಟು ಮುಂದಿನ ದಾರಿ ಹುಡುಕಬೇಕಾಗುತ್ತದೆ. ಹಾಗೇ ಸಣ್ಣ ಕುರಿಗಳು ಸಾಲಾಗಿ ಸರಿದಾರಿಗೆ ನಡೆದರೆ, ದೊಡ್ಡ ಕುರಿಗಳು ಅಡ್ಡದಾರಿ ಹಿಡಿಯುತ್ತವೆ. ಅವುಗಳಿಗೆ ಸರಿದಾರಿಗೆ ತರಲು ಜ್ಞಾನ ಎಂಬ ಕೋಲು ಅವಶ್ಯವಾಗಿದೆ ಎನ್ನುವ ಚಿಂತನೆ ವಚನಕಾರರು ಪ್ರತಿಪಾದಿಸುತ್ತಾರೆ. . ಸರಿದಾರಿ ಬಿಟ್ಟು ಅಡ್ಡದಾರಿ ಹಿಡಿಯುವ ಚುಕ್ಕಿ ಚುಕ್ಕಿ ಬಣ್ಣದ ಕುರಿಗಳನ್ನು ಬಯ್ಯುತ್ತೇನೆ, ಕೋಲಿನಿಂದ ಹೊಡೆದು ತಿದ್ದುತ್ತೇನೆ. ಅಂದರೆ ಸತ್ಯ, ನಿಷ್ಠೆ, ಸನ್ಮಾರ್ಗದಲ್ಲಿ ಹೋಗುವ ಮಾನವನು ಒಮ್ಮೊಮ್ಮೆ ಅಡ್ಡದಾರಿ ಹಿಡಿಯುತ್ತಾನೆ. ಅರಿವಿಲ್ಲದೆ ತಂತಾನೆ ಅಜ್ಞಾನದ ಕೂಪದಲ್ಲಿ ಮುಳುಗುತ್ತಾನೆ. ಅಂತಹ ಮಾನವರಿಗೆ ಅರಿವಿನ ಕೊರತೆ ಇರುತ್ತದೆ ಎಂದು ಹೇಳುತ್ತಾನೆ. ಕುರಿಗಳಲ್ಲಿ ಒಂದೇ ರೀತಿಯ ಕುರಿಗಳು ಇರುವುದಿಲ್ಲ. ಹಾಗೇ ಮನುಷ್ಯರಲ್ಲಿಯೂ ಕೂಡ ಒಂದೇ ವಿಚಾರಧಾರೆದವರು ಇರಲು ಸಾಧ್ಯವಿಲ್ಲ. ಒಬ್ಬರು ಸತ್ಯ ಶುದ್ಧ ಶಾಂತಿ ಪ್ರೀಯರು, ಇನ್ನೂ ಕೆಲವರು ಅಹಂಕಾರ ಭಾವನೆದವರು, ಮತ್ತೆ ಕೆಲವರು ದುಷ್ಟರು, ಅಜ್ಞಾನಿಗಳು ಇರುತ್ತಾರೆ. ಮನುಜ ಪಥ ಬಿಟ್ಟು ಅವಗುಣ ಬೆಳೆಸುಕೊಂಡು ಹೋಗುವರನ್ನು ನ್ಯಾಯಪಥಕ್ಕೆ ಬರುವಂತೆ ಸೂಚಿಸುತ್ತಾನೆ. ಕುರಿಯ ಹಿಂಡು ತೊರೆದು ಅಡ್ಡದಾರಿ ಹಿಡಿದು ಹೋಗುವ ಸೊಕ್ಕೇರಿದ ಟಗರನ್ನು ಕೋಲಿನಿಂದ ಬಾರಿಸಿ ಸತ್ಪಥದಲ್ಲಿ ಹೋಗುವಂತೆ ತಿರುಗಿಸುತ್ತೇನೆಂದು ಹೇಳುತ್ತಾನೆ. ಹಾಗೇ ಮನುಷ್ಯ ಕೂಡ ಸಾರ್ಥಕ ಜೀವನಕ್ಕೆ ಅವಶ್ಯವಾದ ಸದ್ಗುಣಗಳಿಗೆ ಒಳಗೊಳ್ಳದ ಕಾರಣ ಒಮ್ಮೊಮ್ಮೆ ಕೆಟ್ಟ ಪ್ರವೃತ್ತಿಗಳಿಗೆ ದಾಸನಾಗುತ್ತಾನೆ. ಅಂತಹ ದಾರಿಬಿಟ್ಟವರನ್ನು ಸರಿಪಡಿಸಲು ಪ್ರಜ್ಞಾವಂತರ ಅಗತ್ಯವಿದೆ. ಎಲ್ಲಿ ಕತ್ತಲೆ ಆವರಿಸುತ್ತದೆಯೋ ಅಲ್ಲಿ ಸುಜ್ಞಾನದ ಬೆಳಕು ಹರಿಯಬೇಕು, ಅಂತಹ ಕೋಲು ನಮ್ಮ ಕೈಯಲ್ಲಿ ಇರಬೇಕು ಎನ್ನುವ ರೂಪಕದ ನುಡಿಗಳು ಶರಣರು ಹೇಳುತ್ತಾರೆ. ಜೀವನದ ಸತ್ಪಥ ಕಂಡುಕೊಳ್ಳದವರು ಮದ, ಮತ್ಸರ, ಅಹಂಕಾರ ಎಂಬ ವ್ಯಸನಗಳಿಗೆ ಒಳಪಡುತ್ತಾರೆ. ಸೊಕ್ಕೇರಿದ ಟಗರು ಹಾಗೇ ಮನುಷ್ಯ ಕೂಡ ಒಮ್ಮೊಮ್ಮೆ ತನ್ನ ನೀಚ ಬುದ್ಧಿ, ಕೌರ್ಯ, ಹಿಂಸೆ, ಶೌರ್ಯ ಪ್ರದರ್ಶಿಸಲು ಮುಂದಾಗುತ್ತಾನೆ.ಇಂತಹ ದುರ್ಗುಣ, ದುರ್ಬುದ್ಧಿಯನ್ನು ಸರಿಪಡಿಸಲು ಶರಣರ ಮಾರ್ಗದರ್ಶನ, ಒಡನಾಟ, ತೀರ ಅಗತ್ಯವಿದೆ. ಇಂದು ಸಮಾಜದಲ್ಲಿ ಜೀವಪರ, ಜನಪರ ವಿಚಾರಧಾರೆಯ ವ್ಯಕ್ತಿತ್ವಗಳ ಸಂಖ್ಯೆ ಹೆಚ್ಚಾಗಬೇಕಾಗಿದೆ. ಮದವೇರಿದ ಟಗರುಗಳ ಸೊಕ್ಕು ಮುರಿಯಲು ಅಹಿಂಸೆಯೇ ಪರಮ ಅಸ್ತ್ರವಾಗಿದೆ. ಅದನ್ನು ಸಂಪ್ರೀತಿ, ಸುಜ್ಞಾನದ ದಾರಿ ಎಂದು ಕರೆಯುತ್ತೇವೆ. ಕುರಿಗಳ ಹಿಂಡಿನೊಳಗೆ ತಿರುಗಾಡುವ ಅನುಭಾವಿ ವಚನಕಾರ ವೀರಗೊಲ್ಲನು ಕುರಿಗಳ ಜೊತೆಗಿನ ತನ್ನ ಒಡನಾಟದ ಅನುಭವ ತತ್ವಸಾರ ಮನುಷ್ಯನ ಬದುಕಿಗೆ ಕೇಂದ್ರಿಕರಿಸಿ ಬೋಧಿಸಲು ಪ್ರಯತ್ನಿಸುತ್ತಾನೆ. ಈ ವಿಕಾರ ಬಿಡಿಸಿ ನನ್ನೊಳಗೆ ಅಡಗಿರುವ ಘನಜ್ಞಾನ ಕರುಣಿಸು, ನಿನ್ನ ನಿಜ ಸ್ವರೂಪ ತೋರುವ ಮೂಲಕ ನನ್ನ ಅರಿವಿನ ಬೆಳಕು ತೋರಯ್ಯಾ ಎಂದು ಬೇಡುತ್ತಾನೆ. ದೇವರ ದಿವ್ಯ ಜ್ಞಾನಕ್ಕಾಗಿ ‘ಶರಣ ಮಾರ್ಗ’ದಲ್ಲಿ ಇರಿಸು ನನ್ನೊಡೆಯನೇ ಎಂದು ಆಧ್ಯಾತ್ಮ ಗುರು ವೀರಬೀರೇಶ್ವರನಲ್ಲಿ ಬಿನ್ನಹಿಸಿಕೊಳ್ಳುತ್ತಾನೆ. ಬಸವಣ್ಣನವರ ಸ್ಥಾಪಿಸಿದ ಶರಣಮಾರ್ಗ ಸಾತ್ವಿಕ ಬದುಕಿನ ಸತ್ಪಥ ತೋರಿಸುತ್ತದೆ. ಶರಣರು ಕಾಯಕದ ಮೂಲಕ ಆತ್ಮಜ್ಞಾನ ಪಡೆದುಕೊಂಡು ದೈನಂದಿನ ಜೀವನಕ್ಕೆ ಒಳಗೊಳ್ಳುವಂತೆ ಸೂಚಿಸುತ್ತಾರೆ. ಜೀವನದಲ್ಲಿ ಎದುರಾಗುವ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೆ ಇರುತ್ತದೆ. ಆದರೆ ಪರಿಹಾರ ಕಂಡುಕೊಳ್ಳಲು ಬಹುತೇಕರು ವಿಫಲರಾಗುತ್ತಾರೆ. ಅದಕ್ಕೆ ಜ್ಞಾನ, ತಾಳ್ಮೆ, ಕಾಲ, ಸತ್ಯ ಮತ್ತು ಧೈರ್ಯದ ಅಗತ್ಯವಿದೆ. ಕಾಯಕದ ಅನುಭಾವದ ಮೂಲಕ ಜ್ಞಾನ ಚೈತನ್ಯ ವೃದ್ಧಿಸಿಕೊಳ್ಳಲು ಸಾಧ್ಯವಾಗಿದೆ. ಈ ದಿಸೆಯಲ್ಲಿ ಬಸವಾದಿ ಶರಣರು ಜೀವನ ಚೈತನ್ಯರಾಗಿ, ವಿಶ್ವಮಾನವರಾಗಿ ಜಗತ್ತಿಗೆ ಮಾದರಿಯಾಗಿದ್ದಾರೆ. ಶರಣರ ಜೀವನ ದರ್ಶನದ ಅನುಭಾವ ಸಾರ್ವಕಾಲಿಕ ಸತ್ಯವಾಗಿದೆ‌. ಶರಣರ ವಚನ ಅನುಭವದ ಮಾನವೀಯ ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ದಾರಿದೀಪವಾಗಿವೆ. “ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.” ಶರಣ ವೀರಗೊಲ್ಲಾಳ ಮತ್ತೊಂದು ವಚನದಲ್ಲಿ ಕಲ್ಲು, ಮಣ್ಣು, ಮರ ದೇವರಲ್ಲ, ಕಲ್ಲು ದೇವರು ಉಳಿಗೆ ಹೆದರಿತು, ಮರ.ದೇವರು ಉರಿಗೆ ಬೆಂದಿತು, ಮಣ್ಣು ದೇವರು ನೀರಿನಲ್ಲಿ ಕರಗಿತು. ಇಂತಹ ದೇವರು ದೇವರಲ್ಲ ಎನ್ನುವ ತಾತ್ವಿಕ ಚಿಂತನೆ ಶರಣ ವೀರಗೊಲ್ಲನು ದಾಖಲಿಸುತ್ತಾನೆ. ಒಬ್ಬ ಸಾಮಾನ್ಯ ಕಾಯಕ ಜೀವಿ, ಇಂತಹ ಅನನ್ಯವಾದ ತತ್ವಪರಿಭಾಷೆಯ ವಚನಗಳು ರಚಿಸಿರುವುದು ಈ ನೆಲದ ಹೆಮ್ಮೆ ಎಂದಷ್ಟೇ ಹೇಳಬಹುದು. ಶರಣರ ಸಂದೇಶಗಳನ್ನು ಮತ್ತೆ ಮುನ್ನೆಲೆಗೆ ಬಂದರೆ ಈ ನೆಲ ಶಾಂತಿ, ಸೌಹಾರ್ದತೆ ಹಾಗೂ ಕಲ್ಯಾಣ (ಸಮ ಸಮಾಜ) ರಾಜ್ಯವಾಗಿ ರೂಪುಗೊಳ್ಳಲು ಸಾಧ್ಯವಿದೆ. *****************************

ಸಜ್ಜನರ ಸಂಗ ಲೇಸು ಕಂಡಯ್ಯಾ…! Read Post »

ಇತರೆ, ಪ್ರಬಂದ

ಪಾತ್ರೆಗಳ ಲೋಕದಲ್ಲಿ..

ಲಲಿತ ಪ್ರಬಂಧ ಪಾತ್ರೆಗಳ ಲೋಕದಲ್ಲಿ.. ಜ್ಯೋತಿ ಡಿ.ಬೊಮ್ಮಾ. ಹಬ್ಬಗಳಲ್ಲೆ ದೊಡ್ಡ ಹಬ್ಬ ದಸರಾ .ನಮ್ಮ ಉತ್ತರ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದ ಕೆಲವು ಕಡೆ ಈ ಹಬ್ಬವನ್ನು ಅಂಬಾ ಭವಾನಿಯ ಹೆಸರಿನಲ್ಲಿ ಆಚರಿಸಲಾಗುತ್ತದೆ.ಪ್ರತಿಯೊಬ್ಬರ ಮನೆಗಳು ದಸರಾ ಹಬ್ಬಕ್ಕೆ ಸುಣ್ಣ ಬಣ್ಣ ಬಳಿದುಕೊಂಡು ದೇವಿಯ ಪ್ರತಿಷ್ಟಾಪನೆಗೆ ಸಜ್ಜುಗೊಳ್ಳುತ್ತವೆ. ನಾವು ಚಿಕ್ಕವರಿದ್ದಾಗ ಮನೆಗೆ ಸುಣ್ಣ ಬಣ್ಣ ಮಾಡುವ ಸಂದರ್ಭ ತುಂಬಾ ಸಂತೋಷದಾಯಕವಾಗಿರುತಿತ್ತು.ಆ ಸಂದರ್ಭ ದಲ್ಲಿ ಮನೆಯೊಳಗಿನ ಎಲ್ಲಾ ವಸ್ತುಗಳು ಅಂಗಳಕ್ಕೆ ಬಂದು ಬೀಳುತಿದ್ದವು. ಮನೆಯ ಹಿರಿಯರು ಡಬ್ಬದೊಳಗಿನ ದವಸ ಧಾನ್ಯಗಳನ್ನು ಒಣಗಿಸಿ ಪಾತ್ರೆಗಳನ್ನು ತೊಳೆಯುವಲ್ಲಿ ವ್ಯಸ್ತರಾದರೆ , ಚಿಕ್ಕವರು ಕೈ ಕಾಲಿಗೆ ತೊಡರುವ ಪಾತ್ರೆಗಳ ನಡುವೆ ಸಂಭ್ರಮ ದಿಂದ ಓಡಾಡುತ್ತ ಎನೋ ಖುಷಿ ಅನುಭವಿಸುತ್ತಿದ್ದೆವು.ತಮ್ಮ ಮುರಿದ ಹೋದ ಆಟಿಕೆಗಳು ಹಳೆ ಪುಸ್ತಕಗಳು ಎಂದೋ ಕಳೆದು ಹೋದ ಪೆನ್ನು ಪೆನ್ಸಿಲ್ ಗಳು ಸಿಕ್ಕಾಗ ಅವನ್ನು ಹೆಕ್ಕಿ ತೆಗೆದು ಜೋಪಾನವಾಗಿ ಎತ್ತಿಕ್ಕಿಕೊಂಡು ಸಂಭ್ರಮಿಸುತಿದ್ದೆವು.ಆಗ ಆ ಹಳೆಯ ಮುರಿದ ವಸ್ತುಗಳಲ್ಲಿ ಕಂಡುಕೊಳ್ಳುತ್ತಿದ್ದ ಖುಷಿ ಈಗಿನ ಯಾವ ವಸ್ತುವಿನಲ್ಲು ದೊರಕದು. ಮನೆ ಕ್ಲೀನ್ ಮಾಡುವ ಸಂದರ್ಭದಲ್ಲಿ ಹಿರಿಯರು ಕಿರಿಯರು ಎಲ್ಲರೂ ಸಕ್ರಿಯವಾಗಿ ಭಾಗವಹಿಸುವವರೆ.ಕೆಲಸದ ಒತ್ತಡದ ನಡುವೆಯೂ ಏನೋ ಸಂಭ್ರಮ. ಮನೆಯ ಮೂಲೆ ಮೂಲೆಗಳನ್ನೆಲ್ಲ ಸ್ವಚ್ಛಗೊಳಿಸಿ ಮನೆಗೆ ಸುಣ್ಣದ ಬಿಳಿಯ ಹೊಳಪು ಕೊಟ್ಟಾಗ ಮನೆಯೊಂದಿಗೆ ಮನೆಯವರಲ್ಲೂ ಹೊಸತನದ ಅನುಭೂತಿ ಮೂಡುತಿತ್ತು. ಅಟ್ಟದ ಮೇಲಿನ ಬಳಸದೆ ಇರುವ ತಾಮ್ರ ಹಿತ್ತಾಳೆ ಪಾತ್ರೆಗಳನ್ನೆಲ್ಲ ತೆಗೆದು , ಉಪ್ಪು ಹುಣಸೆಹಣ್ಣಿನಿಂದ ತಿಕ್ಕಿ ಹೊಳಪು ಬರಿಸಿ ಬಿಸಿಲಿಗೆ ಒಣಗಿಸಿ ಮತ್ತೆ ಅಟ್ಟದಲ್ಲೆ ವಿರಾಜಮಾನವಾಗಿಸುವದು ಒಂದು ಮಹತ್ಕಾರ್ಯವೆ .ಮನೆಯೊಳಗಿನ ಹೊಸ ಹಳೆ ಪಾತ್ರೆಗಳನ್ನು ತಿಕ್ಕುತ್ತ ಅಮ್ಮ ಅಜ್ಜಿಯರು ತಮ್ಮ ಜೀವಮಾನದೊಂದಿಗೆ ಸಾಗಿ ಬಂದ ಪಾತ್ರೆಗಳ ಲೋಕದಲ್ಲಿ ವಿಹರಿಸುತಿದ್ದರು. ಎಷ್ಟೊ ವರ್ಷದಿಂದ ಬಳಸಿ ಸವಕಲಾದ , ಹಿಡಿಕೆ ಮುರಿದ ,ನೆಗ್ಗು ಬಡಿದ ಪಾತ್ರೆಗಳು ಉಪಯೋಗಕ್ಕೆ ಬರದಿದ್ದರು ಬಿಸಾಡುವ ಮನಸ್ಸಾಗದೆ ಒಂದು ದೊಡ್ಡ ಡಬ್ಬದಲ್ಲಿ ತುಂಬಿಡಲಾಗುತಿತ್ತು.ಜೀವಮಾನದ ಇಡುಗಂಟಿನಂತೆ. ನನಗೆ ತಿಳುವಳಿಕೆ ಬಂದ ನಂತರ ಮನೆಯ ಅನುಪಯುಕ್ತ ಪಾತ್ರೆಗಳನ್ನೆಲ್ಲ ಗುಜರಿಗೆ ವರ್ಗಾಯಿಸಿದಾಗ ನನಗೂ ಅಮ್ಮನಿಗೂ ರಂಪಾಟವೆ ಆಗಿತ್ತು.ಹಳೆತನವೆಂದರೆ ಹಾಗೆ ಎನೋ ,ಇಟ್ಟುಕೊಳ್ಳಲು ಆಗದೆ ಬಿಸಾಡಲು ಆಗದೆ ಇಬ್ಬಂದಿತನ.ಆದರೂ ವಸ್ತುಗಳೆ ಆಗಲಿ ವ್ಯಕ್ತಿಯೆ ಆಗಲಿ ಹಳತಾದಂತೆ ನಮ್ಮೊಂದಿಗೆ ಬೆಸೆದು ಬಿಡುತ್ತವೆ.ನಮ್ಮೊಂದಿಗೆ ಒಂದಾಗಿ ಬಿಡುತ್ತವೆ. ನಿರ್ಜೀವ ಪಾತ್ರೆಗಳು ಒಂದೊಂದು ಪದಾರ್ಥಗಳ ಹೆಸರಿನಿಂದ ಕರೆಸಿಕೊಳ್ಳುತ್ತವೆ.ಹಾಲಿನ ಪಾತ್ರೆ ಮೊಸರಿನ ಗಿಂಡಿ ,ಮಜ್ಜಿಗೆ ಗ್ಲಾಸ್ , ಅನ್ನದ ತಪ್ಪಲೆ ,ಸಾರಿನ ಬೋಗುಣಿ ,ಪಲ್ಯದ ಕಡಾಯಿ ಇನ್ನೂ ಅನೇಕ..ಪ್ರತಿ ಮನೆಯಲ್ಲೂ ಪಾತ್ರೆಗಳು ಕೇವಲ ಪಾತ್ರೆಗಳಾಗಿರದೆ ಆ ಮನೆಯ ಗೃಹಿಣಿಯರ ಒಡನಾಡಿಗಳಾಗಿರುತ್ತವೆ.ಮನೆಯವರ ಹಸಿವು ತಣಿಸುವ ಅಕ್ಷಯ ಪಾತ್ರೆಗಳಾಗಿರುತ್ತವೆ. ಮನೆಯಲ್ಲಿರುವ ಹಣ ಒಡವೆಯ ನಿಖರವಾದ ಸಂಖ್ಯೆಯ ನೆನಪು ಇರದಿರಬಹುದು.ಆದರೆ ತಮ್ಮ ಮನೆಯಲ್ಲಿರುವ ಪಾತ್ರೆಗಳ ತಟ್ಟೆ ಲೋಟಗಳು ಎಷ್ಟಿವೆ ಎಂದು ನೆನಪಿರದ ಗೃಹಿಣಿ ಇರಲಿಕ್ಕಿಲ್ಲ.ಸಾಕಷ್ಟು ಪಾತ್ರೆಗಳಿದ್ದರು ಅದರಲ್ಲಿ ಒಂದು ಕಾಣೆಯಾದರು ಅಥವಾ ಪಕ್ಕದ ಮನೆಯವರಿಗೆ ಕೊಟ್ಟಿದ್ದರು ಅವರು ವಾಪಸು ಕೊಡುವದು ಸ್ವಲ್ಪ ತಡವಾದರು ನೆನಪಿಸಿ ಪಡೆದುಕೊಳ್ಳುವದರಲ್ಲಿ ಮುಜುಗುರ ಪಟ್ಟುಕೊಳ್ಳಲಾರೆವು. ನಾಗರಿಕತೆ ಬದಲಾದಂತೆಲ್ಲ ಪಾತ್ರೆಗಳು ಬದಲಾದವು.ಈಗ ಇರುವ ನಾನ್ ಸ್ಟಿಕ್ ಪಾತ್ರೆಗಳು ಮುಟ್ಟಿದರೆ ಜರುಗುವಂತಹವು.ನನಗೆ ಸ್ಟೀಲ್ ಮತ್ತು ಅಲೂಮಿನಿಯಮ್ ಪಾತ್ರೆಗಳ ಮೇಲೆ ಇರುವ ಮಮತೆ ಈ ನಾನ್ ಸ್ಟಿಕ್ ಪಾತ್ರೆಗಳ ಮೇಲೆ ಮೂಡಲೆ ಇಲ್ಲ. ಈಗ ಪ್ಲಾಸ್ಟಿಕ್ ಪೊಟ್ಟಣಗಳಲ್ಲಿ ಆಹಾರ ಹೊರಗಿನಿಂದ ಕಟ್ಟಿಸಿಕೊಂಡು ಬಂದು ಬಿಚ್ಚಿ ಅದರಲ್ಲೆ ಊಟ ಮಾಡುವ ಧಾವಂತದ ಜನರಿಗೆ ಪಾತ್ರೆಗಳ ಅವಶ್ಯಕತೆಯು ಅಷ್ಟಾಗಿ ಕಾಣದು. ಹಿಂದಿನವರಂತೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಬೇಯಿಸುವ ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ .ಇಬ್ಬರು ನಾಲ್ವರು ಇರುವ ಮನೆಗಳಲ್ಲಿ ಇರುವ ಪಾತ್ರೆಗಳು ಅವರ ಎರಡರಷ್ಟೆ. ಕೆಲವರು ಪಾತ್ರೆಗಳನ್ನು ತೊಳೆಯುವ ತಾಪತ್ರಯ ತಪ್ಪಿಸಿಕೊಳ್ಳಲು ಬಳಸಿ ಬಿಸಾಡುವ ತಟ್ಟೆ ಲೋಟಗಳನ್ನೆ ದಿನಾಲು ಉಪಯೋಗಿಸುವರು. ಕೆಲಸದ ಹೊರೆ ಕಡಿಮೆಯಾದಷ್ಟೂ ಮಾಲಿನ್ಯ ಹೆಚ್ಚುತ್ತಲೆ ಇದೆ. ಮಹಿಳೆಯರಿಗೂ ಮತ್ತು ಪಾತ್ರೆಗಳಿಗೂ ಇರುವ ನಂಟು ನಿರಂತರ ಬೆಸೆದಿರುವದು.ಬೆಳಗಾದರೆ ಗೃಹಿಣಿಯರ ಕೈಯಲ್ಲಾಡುವ ಪಾತ್ರೆಗಳ ಟಿನ್ ಟಿನಿ ನಾದ ಪ್ರತಿ ಮನೆಯ ಸುಪ್ರಭಾತ.ಅದರೊಂದಿಗೆ ಮನೆಯವರ ಮತ್ತೊಂದು ಭರವಸೆಯ ಬೆಳಕಿನ ಉದಯ. ******************************************************

ಪಾತ್ರೆಗಳ ಲೋಕದಲ್ಲಿ.. Read Post »

You cannot copy content of this page

Scroll to Top