ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಮೂಲ-ಜಯಂತ ಮಹಾಪಾತ್ರ ಒರಿಸ್ಸಾದ ಭಾರತೀಯ ಆಂಗ್ಲ ಕವಿ ಅನುವಾದ–ಕಮಲಾಕರ ಕಡವೆ “ಪುರಿಯಲ್ಲಿ ಬೆಳಗು” ಕೊನೆಯಿರದ ಕಾಗೆಗಲಭೆಪವಿತ್ರ ಮರಳಲ್ಲಿ ತಲೆಬುರುಡೆಯೊಂದುಹಸಿವಿನೆಡೆಗೆ ವಾಲಿಸುತ್ತದೆ ಖಾಲಿ ದೇಶವನ್ನು. ಬಿಳಿತಳೆದ ವಿಧವೆಯರುತಮ್ಮ ಬಾಳಿನ ಮಧ್ಯದಾಚೆಮಹಾಮಂದಿರದೊಳಗೆ ಹೊಗಲು ಕಾದಿದ್ದಾರೆ. ಅವರ ವಿರಕ್ತ ಕಣ್ಣುಗಳುಬಲೆಯಲ್ಲಿ ಸಿಕ್ಕಿಬಿದ್ದವರಂತೆ ದಿಟ್ಟಿಸುತ್ತವೆ,ಬೆಳಬೆಳಗ್ಗೆ ಶ್ರದ್ಧೆಯ ಬೆಳಗಿನೆಳೆಗೆ ಜೋತುಬಿದ್ದು. ನಿತ್ರಾಣ ಮುಂಜಾನೆ ಬೆಳಕಿಗೆ ಬಿದ್ದಿವೆಒಂದನಿನ್ನೊಂದು ಆತಿರುವ ಪಾಳು ತೊನ್ನುಭರಿತ ಚಿಪ್ಪುಗಳು,ಹೆಸರಿರದೆ ಕುಗ್ಗಿಹೋದ ಮುಖಗಳ ಮುಂದೆ, ತಟ್ಟನೆ ನನ್ನ ತೊಗಲೊಳಗಿಂದ ಹೊರಬೀಳುವ ಬಿಕ್ಕುಸೇರುತ್ತದೆ ಏಕಾಕಿ ಮಂಕು ಚಿತೆಯೊಂದರ ಹೊಗೆಯನನ್ನ ಮುದಿ ಅಮ್ಮನ ಕವಿಯುವ ಧಗೆಯ: ತನ್ನನಿಲ್ಲಿ ಸುಡಬೇಕೆಂಬ ಅವಳ ಕೊನೆಯಾಸೆನೆಲೆಬದಲುವ ಮರಳದಿಣ್ಣೆಯ ಮೇಲೆಬೆಳಕಂತೆ ಸಂದಿಗ್ಧವಾಗಿ ತಿರುಚಿ. ಮೂಲ ಕವಿತೆ: Endless crow noisesA skull in the holy sandstilts its empty country towards hunger. White-clad widowed Womenpast the centers of their livesare waiting to enter the Great Temple Their austere eyesstare like those caught in a nethanging by the dawn’s shining strands of faith. The fail early light catchesruined, leprous shells leaning against one another,a mass of crouched faces without names, and suddenly breaks out of my hideinto the smoky blaze of a sullen solitary pyrethat fills my aging mother: her last wish to be cremated heretwisting uncertainly like lighton the shifting sands

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

Solitary! ತೆಲುಗು ಮೂಲ : ರವಿ ವೀರೆಲ್ಲಿ ಅನುವಾದ : ರೋಹಿಣಿಸತ್ಯ ಒಂಟಿ ಮೇಘದಂತೆ ಅಲ್ಲಿ ಇಲ್ಲಿ ಎಷ್ಟುಹೊತ್ತು ಅಡ್ಡಾಡಲು ಸಾಧ್ಯ?! ಸ್ವಲ್ಪಹೊತ್ತಿಗೆ ಸಾವಿರವಾಗಿ ಸೀಳಿಹೋಗುತ್ತೇನೆ ಕಡೆಗೆ ಹನಿಗಳೆಲ್ಲವನ್ನು ಒಟ್ಟುಗೂಡಿಸಿಕೊಂಡು ದೊಡ್ಡ ಸಮೂಹವಾಗಿ ದಾಳಿಯಿಡುತ್ತೇನೆ ಯುದ್ಧ ಮುಗಿದಮೇಲೆ ಯಾವ ತೊರೆಯಲ್ಲೋ ಏಕಾಂಗಿಯಾಗಿ ಹರಿಯುತ್ತೇನೆ ಒಂಟಿಯಾಗಿ ಬಾಳಲಾಗದಿರುವುದಕ್ಕೆ ಸಮೂಹದಲ್ಲಿ ನಡೆಯಲಾಗದಿರುವುದಕ್ಕೆ ನಡುವೆ ಎಷ್ಟೋ ಕಾಲಗಳು ಹಾಗೆ ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿರುತ್ತವೆ ಮತ್ತೆಷ್ಟೋ ಕ್ಷಣಗಳು ಕಾಯದೆ ಅನುಕಂಪದಿಂದ ಕದಲುತ್ತಿರುತ್ತವೆ ಯಾವ ಕೈಯಾಸರೆ ನನ್ನನ್ನು ಲಾಲಿಸುವುದಿಲ್ಲವೆಂದು ಯಾವ ಮೊಗ್ಗು ನನಗಾಗಿ ಮೂಡುವುದಿಲ್ಲವೆಂದು ತಿಳಿದಾಗ ನನ್ನ ಕಾಲುಗಳ ಕೊರಡಿನ ಮೇಲೆ ನಾನೇ ಬೆಳೆದು ನನ್ನ ಬೇರುಗಳ ತುದಿಗಳನ್ನು ನಾನೇ ಚಿಗುರಿಸಿಕೊಂಡು ನನ್ನೊಳಗೆ ನಾನೇ ಹೊರಲಾರದಂತಹ ಹುವ್ವಾಗಿ ಅರಳುತ್ತೇನೆ ಎಂದೋ ಒಂದು ದಿನ ನನ್ನನ್ನು ನಾನೇ ತುಂಡರಿಸಿಕೊಂಡು ಬೀಜಗಳನ್ನ ಅಪ್ಪಿಕೊಂಡು ತೇಲುವ ಹತ್ತಿಹೂವಿನಂತೆ ಯಾವುದೊ ಗಾಳಿಯ ದೋಣಿಯಲ್ಲಿ ತೇಲುತ್ತಾ ಕದಲುವ ಕಾಲಗಳ ಬಾಗಿಲುಗಳನ್ನು ಒಂದೊಂದಾಗಿ ತಟ್ಟುತ್ತಾ ಸಾಗುತ್ತಿರುತ್ತೇನೆ ಕೂಡಿಬರುವ ಕಾಲವೊಂದು ಹಿತ್ತಲ ಬಾಗಿಲು ತೆರೆದು ನನ್ನನ್ನು ಬಯಸಿ ಬಿತ್ತಿಕೊಳ್ಳುವವರೆಗು!

ಅನುವಾದ ಸಂಗಾತಿ Read Post »

ಅನುವಾದ

ಅನುವಾದ

ವಸಂತನಾಗಮನ ಮೂಲ ತೆಲುಗು ರಚನೆ: ಗುಂಟೂರು ಶೇಷೇಂದ್ರಶರ್ಮ ಗುಂಟೂರು ಶೇಷೇಂದ್ರ ಶರ್ಮಾ ಬಿ.ಏ.ಬಿ.ಯಲ್ 1927 -2007 ತೆಲುಗು ಸಾಹಿತ್ಯದಲ್ಲಿ ಜನಪ್ರಿಯ ಕವಿ ಯುಗಕವಿ ಎಂದು ಹೆಸರುಗಳಿಸಿದವರು. ಇವರು ಕವಿ, ವಿಮರ್ಶಕ ಹಾಗೂ ಬರಹಗಾರರು.1994 ರಲ್ಲಿ ಇವರಿಗೆ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಇವರು ನೋಬಲ್ ಬಹುಮಾನಕ್ಕೂ ಭಾರತದಿಂದ ನಾಮಿನೇಟ್ ಆಗಿದ್ದರು. ಇವರ ಹಲವಾರು ರಚನೆಗಳು ಕನ್ನಡ, ಇಂಗ್ಲೀಷು ಹಿಂದೀ ಉರ್ದೂ ಬೆಂಗಾಲೀ ನೇಪಾಲಿ ಹಾಗೂ ಗ್ರೀಕ್ ಭಾಷೆಗಳಿಗೂ ಅನುವಾದಗೂಂಡಿವೆ ಕನ್ನಡಕ್ಕನುವಾದ: ನಾರಾಯಣ ಮೂರ್ತಿ ಬೂದುಗೂರು ಹೂಗಳು ತುಟಿಯರಳಿಸಿವೆ ರಹಸ್ಯವ ತಿಳಿಸಲೂ!! ಈಗ…ಪ್ರತಿಯೊಂದು ಮರವೂ ಒಂದು ದೇವಳವೇ… ಹಕ್ಕಿಗಳೆಲ್ಲಾ ಹಾರುವಾ ದೇವತೆಯರೇ!!! ರೆಂಬೆ, ರೆಂಬೆಯಲೂ ಹಾಡಿನಾ ಸ್ಪರ್ಧೆಯೇ ಹುಲ್ಲುಕಡ್ಡೀಯಲ್ಲೂ ಗಂಧರ್ವಲೋಕವೇ.. ವೀಣೆಯು ಮೀಟಿದಂತೆ ಸ್ವರಗಳ ಅಪ್ಸರಸೆಯರು…. ಈ ಹೂಗಳಲನ್ನ ಯಾರು ಎಬ್ಬಿಸಿದರೋ…? ಏನೋ ನನ್ನ ಬೆನ್ಹತ್ತಿದೇ!!! ಯಾವುದೋ ನೆನಪುಗಳಿಗೆ ನನ್ನ ತೀಕ್ಷ್ಣವಾಗಿ ಒಳಪಡಿಸುತ್ತಿವೇ!!! ಈ ಕೋಗಿಲೆಗಳನ್ನ ಆ ಮಾವಿನಮರದ ಮೇಲೆ ಯಾರು ಇಟ್ಟರೋ ? ಅದು ಲೋಕವನ್ನ ನಿದ್ದೆ ಮಾಡಲಿಕ್ಕೆ ಬಿಡುತ್ತಿಲ್ಲ!! ವಸಂತನನ್ನ ಕರೆದು.. ಕೋಗಿಲೆಯನ್ನ, ಸುಮ್ಮನಿರಲು ಹೇಳಿದರೇ…ಅದು ಕೇಳುವುದಾ ? ನಾನು ಋಷಿಯಲ್ಲಾ..ಕೋಗಿಲೆಯ, ಸ್ವರ ಕೇಳಿ ಬೆಚ್ಚಿಬೀಳಲು… ನಮ್ಮೂರ ಮಣ್ಣಿನಿಂದ ಮಾಡಿದ ಸ್ನಾಯುಗಳು ಎನ್ನ ದೇಹದ್ದು!!! ಹಸಿರಾಗಿ ಪಂಚಮ… ದಲ್ಲಿ ಹಾಡುವಾ ಮಾವಿನಾ ಮರಾ… ನಡೆದಾಡುವದೊಂದು… ವಿನಹಾ… ಚೈತ್ರದ ಆಗಮನಕ್ಕೆ ಏನು ಬೇಕಾದರೂ ಮಾಡುವೆ ಎನ್ನುತಿದೇ!!!! ವಸಂತ ಋತುವೆಂದರೇ!!! ಕೋಗಿಲೆಗಳ ಹಾಡಿನಾ ಪಾಠಶಾಲೆ.. ಹಕ್ಕಿಗಳಾ ಸಂಗೀತ ಅಕಾಡೆಮೀ… ಒಂದೊಂದು ಹಕ್ಕೀ….ಸಾವಿರ ಹಾಡೂಗಳಾಗಿ ರೂಪಾಂತರಗೊಳ್ಳುವಾ ಋತೂ ಇದೂ!!! ಅದಕ್ಕೇ ಪ್ರಪಂಚವೆಲ್ಲಾ ಯಾವಾಗಲೂ ಒಂದು ಹೊಸ ವಸಂತಕ್ಕಾಗಿಯೇ. ನಿರೀಕ್ಷಣೇ ಮಾಡುತ್ತಿರುತ್ತೇ!!! ಚೈತ್ರವೂ…ಒಂದು ಜೇಡರಹುಳಾ…. ಹೂವುಗಳಾ ಅರಳಿಸುತ್ತೇ.. ಮೊಟ್ಟೇನೂ ಇಡುತ್ತೇ… ಹೂವುಗಳಲ್ಲೀ ಬಣ್ಣಾನೂ ತುಂಬುತ್ತೇ!!! ಬಲೆಯಲ್ಲಿ…. ಇತಿಹಾಸವನ್ನೂ.. ನೇಯುತ್ತೇ… ಏನೋ….ಪಿಸಪಿಸ ಮಾತಿನೊಂದಿಗೆ ಏಕಾಂತವನ್ನೂ ಕಾಡುತ್ತೇ!!! ಮರುಭೂಮಿಗಳ ದಾಟಿ…ದಾಟಿ.. ಹೂವರಳುವಾ ಬನಗಳಕಡೇ ಪ್ರಯಾಣ ಬೆಳಸುವೆ!!! ಸಮಯವೂ…. ಮಾವಿನಾ ಹಣ್ಣಿನಾ ಹಾಗೇ, ಮಧುರ ಸುವಾಸನೇ ಬೀರುತ್ತಾ.. ಇರುವುದನ್ನ ಅಲ್ಲಿ ಸಾಕ್ಷಾತ್ಕಾರಗೊಳಿಸುತ್ತೆ. ಉದರುವ ಎಲೆಗಾಗಿ ಭೂತಾಯಿಯಾ ನಿರೀಕ್ಷಣೇ… *****************************.

ಅನುವಾದ Read Post »

ಅನುವಾದ

ಅನುವಾದ

ತೆಲುಗು ಮೂಲ- ಡಾ.ಕತ್ತಿ ಪದ್ಮಾರಾವು ಕನ್ನಡಕ್ಕೆ ನಾರಾಯಣಮೂರ್ತಿ ಬೂದುಗೂರು ಯಾರು ಕೊಲೆಪಾತಕರು? ಸಮುದ್ರ ಹಿಮದಿಂದ ಗಾಢವಾಗಿ ಗಡ್ಡೆಕಟ್ಟಿದೆ ನಡುವೆ ಒಂದು ನೀರಿನ ಝರೀ ತಿಮಿಂಗಲಗಳು ಈಜುತ್ತಾ ಸಾಗುತ್ತಿವೆ ಹೆಚ್ಚಾಗಿ ಇಬ್ಬನಿ ಸುರಿದಾಗ, ಅವಕ್ಕೆ ಉಸಿರಾಡಲು ಕಷ್ಟವೆನಿಸುತ್ತದೆ ಈಗ ತಿಮಿಂಗಲಗಳದೇ ಬೇಟೇ ಬಲೆಗಳೆಲ್ಲಾ ಖಾಲೀ,ಖಾಲೀ ಬಿದ್ದಿವೆ ಇತ್ತೀಚೆಗೆ ಮೀನುಗಳೂ… ಬಲೆಯನ್ನು ಗುರ್ತು ಹಚ್ಚುತ್ತಿವೆ. ಆ ಕಾಲುವೆ ಬದಿಯಲ್ಲಿ ತುಂಬಾ ನಾಯೀಕೊಡೆಗಳ ಸಾಲು ರಸ್ತೆ ಒದ್ದೆ ಒದ್ದೆಯಾಗಿ ಕಿರುಪಾದಗಳ ಸಪ್ಪಳಕೆ ನೀರು ಚೆಲ್ಲುತಿದೆ. ಮನುಷ್ಯನಿಗೆ  ಈ ಚಳೀಯಲ್ಲೂ ಬೆವರು ಕಿತ್ತುಬರುತ್ತಿದೆ ಕಟಕಟೆಯಲ್ಲಿ ಒಬ್ಬೊಬ್ಬರೇ ನಿಂತು ತಪ್ಪುಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ. ಆ ನೀರಿನ ಮೋಟಾರುಪಂಪು ನಿಂತುಹೋಗಿದೇ ಗದ್ದೆಗಳೆಲ್ಲಾ ಒಣಗಿಹೋಗಿವೆ. ಬಿತ್ತನೆಯ ಕತ್ತನ್ನು ಯಾರೋ ಹೊಸಕಿಹಾಕಿದರು. ರಿಲಯನ್ಸ್ ಷಾಪಿನೊಳಗೆ ಹೊಳೆಯುತ್ತಿರುವ ಆಪಲ್ ಒಳಗೆಲ್ಲಾ ಕೊಳೆತುಹೋಗಿದೆ. ತಿನ್ನಬಾರದೇ ಮತ್ತೇ… ಗಾಜಿನ ಒಳಗೆ, ಏಸೀ ಯಲ್ಲಿ ಇಟ್ಟಿದ ತೊಗರೀ ಬೇಳೇ ಆರ್ಗಾನಿಕ್ ಪದ್ದತಿಯಲ್ಲಿ ಬೆಳದದ್ದು ಎನ್ನುತ್ತಾರೇ. ಬೆಲೆ ಮಾತ್ರ ಬೆಟ್ಟದಷ್ಟು. ನರಕಾಸುರನನ್ನ ಕೃಷ್ಣ ಸಾಯಿಸಿದ್ದಕ್ಕೆ ಇಷ್ಟು ಕಾಲುಷ್ಯವೇಕೇ? ನರಕಾಸುರ, ಜರಾಸಂಧ ಒಬ್ಬರೇನು ? ಎಷ್ಟೋಜನರನ್ನ ಸಾಯಿಸಿದ, ಸಾಯುವಂತೆ ಮಾಡಿದ ಕೃಷ್ಣನಿಗೆ ಯಾವ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಶಂಭೂಕನ ಶಿರಚ್ಚೇದನೇ ಮಾಡಿದ, ವಾಲಿಯನ್ನ ಹಿಂಬದಿಯಿಂ ಕೊಂದ ರಾಮನಿಗೆ ಯಾವ ಶಿಕ್ಷೆ ವಿದಿಸಿದರು. ಕೊಲೆಪಾತಕರೆಲ್ಲರೂ ದೇವರುಗಳೇ. ಅವರ ಕೈಯಲ್ಲಿ ಮಾರಣಾಯುಧಗಳು. ಸತ್ತವ ರಾಕ್ಷಸ ಸಾಯಿಸಿದವ ದೈವ ಇದೆಲ್ಲಿಯ ನ್ಯಾಯ ? ಅನಾರ್ಯರೆಲ್ಲಾ ದುಷ್ಟರು ಆರ್ಯರೆಲ್ಲಾ ಶಿಷ್ಟರಾ ? ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ ? ಈಗ ಕಾರಾಗೃಹಗಳೆಲ್ಲಾ ಸಾಮಾನ್ಯರಿಗಲ್ಲಾ….. ಅಸಾಮಾನ್ಯರಿಗೇನೇ. ಹಡುಗು ತುಂಬಾ ಮಾದಕ ವಸ್ತುಗಳು ಅಮದಾಗುತ್ತಿವೆ. ನಿಜಾನೇ ಅಕ್ಷರಗಳ ತುಂಬಾ ವ್ಯಾಪಾರವೇ ಅಕ್ಷರ ದೊಳಗಿನ ಜ್ಞಾನವೆಂಬ ತಿರುಳನ್ನು ತೆಗೆದು ಹಾಕಿ ಅಮಲನ್ನು (ನಿಷೆ) ತುಂಬಿಸುತ್ತಿದ್ದಾರೆ. ನಿರಕ್ಷರಕುಕ್ಷಿಯಾ ! ಅಕ್ಷರಸ್ಥನಾ!! ಎನ್ನುವುದಲ್ಲ ಭ್ರಷ್ಟಾಚಾರವೇ ಒಂದು ಕಿರೀಟವಾಗಿದೆ. ಈಗ ಯೋಚಿಸುವವನೇ ನಿಜವಾದ ಮನುಷ್ಯ. ಆ ಅನ್ವೇಷಣೆಯಲ್ಲೇ ಈ ಪಯಣ. ================= ಕನ್ನಡಾನುವಾದ: ನಾರಾಯಣ ಮೂರ್ತಿ ಬೂದುಗೂರು ಮೂಲ ತೆಲುಗು ರಚನೆ: ಡಾ.ಕತ್ತಿ ಪದ್ಮಾರಾವು ಬಿ.ಕಾಂ.ಎಲ್.ಎಲ್.ಬಿ ವೃತ್ತಿ: ಬೆಂಗಳೂರಿನಲಿ ವಕೀಲರು ಹವ್ಯಾಸ: ಕನ್ಶಡ ಮತ್ತು ತೆಲುಗು ಸಾಹಿತ್ಯ, ಓದುವುದು, ಸಣ್ಣಪುಟ್ಟ ಬರೆಯುವುದು, ಅನುವಾದ ಮಾಡುವುದು. ಮೊ: 9448316432

ಅನುವಾದ Read Post »

You cannot copy content of this page

Scroll to Top