ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಅನುವಾದ ಸಂಗಾತಿ

ಸುನೀತ ಸಹಮನಸ್ಕರ ಮದುವೆಗೆ ತಡೆಯ ತರಲಾರೆನಾನು. ಪ್ರೀತಿಯದು ಪ್ರೀತಿಯಲ್ಲ ಕಂಡಂತೆಬದಲಾದ ಪರಿಸರವ ತಾನೂ ಬದಲುತ್ತಲಿರೆ,ಅಥವಾ ಪ್ರೇಮಿ ನಿಲುವಲ್ಲಿ ಪಲ್ಟಿಯಾದಂತೆ:ಇಲ್ಲವೇ ಇಲ್ಲ! ಅದೊಂದು ಸದಾಸ್ಥಿರ ಚಿನ್ಹೆಬಿರುಗಾಳಿಯೆದುರಿಗೂ ಕಂಪಿಸದೆ ನಿಲುವದು.ಅಲೆವ ಹಡಗುಗಳಿಗೆಲ್ಲ ಅದುವೆ ಸ್ಥಾಯಿ ಚುಕ್ಕೆದೂರ ತಿಳಿದರೂ ಅದರ ಬೆಲೆ ಅರಿವ ಮೀರಿದ್ದುಪ್ರೀತಿಯಲ್ಲ ಕಾಲನ ಗುಲಾಮ, ಸುಂದರಾಂಗಗಳುಇವೆ ಅವನ ಡೊಂಕು ಕುಡುಗೋಲಿನ ಅಂಕೆಯಲಿಪ್ರೀತಿಯ ಬದಲಿಸದು ಅವನ ಕ್ಷಣಿಕ ತಾಸು ವಾರಗಳುನಾಶದಂಚಿನವರೆಗೂ ತಾಳುವುದು ಕೆಚ್ಚಿನಲಿ.ರುಜುಮಾಡಿ ತೋರಿದರೆ ನನ್ನೀ ಮಾತು ತರವಲ್ಲನಾನು ಕವಿಯೇ ಅಲ್ಲ, ಪ್ರೇಮಿಯೂ ಎಲ್ಲಿಲ್ಲ. ***** Let me not to the marriage of true mindsAdmit impediments. Love is not loveWhich alters when it alteration finds,Or bends with the remover to remove.O no! it is an ever-fixed markThat looks on tempests and is never shaken;It is the star to every wand’ring bark,Whose worth’s unknown, although his height be taken.Love’s not Time’s fool, though rosy lips and cheeksWithin his bending sickle’s compass come;Love alters not with his brief hours and weeks,But bears it out even to the edge of doom.If this be error and upon me prov’d,I never writ, nor no man ever lov’d. ******** ಮೂಲ: ವಿಲಿಯಂ ಶೇಕ್ಸ್ ಪಿಯರ್ ಕನ್ನಡಕ್ಕೆ: ಕಮಲಾಕರ ಕಡವೆ

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಜಾನ್ ಆಶ್ಬರಿ ಅಮೇರಿಕಾ ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಒಳ ಬರುವ ಮಳೆ” ಅಟ್ಟದಲ್ಲಿ ಹಸನು ಉದ್ದಿಟ್ಟ ಬ್ಲಾಕ್ ಬೋರ್ಡು. ತಾರೆಗಳ ಬೆಳಕನ್ನು ಈಗ ಗಟ್ಟಿಯಾಗಿಸಿದೆ ಗಾಳಿ. ಯಾರಿಗಾದರೂ ಕಾಣಸಿಗುತ್ತೆ. ಯಾರಿಗಾದರೂ ಗೊತ್ತಾಗುತ್ತೆ. ಈ ಮಹಾನ್ ಗ್ರಹದ ಮೇಲೆಲ್ಲಾದರೂ ಸತ್ಯವ ಕಂಡುಕೊಂಡರೆ – ಒಂದು ತುಂಡು, ಬಿಸಿಲಲ್ಲಿ ಒಣಗಿಸಿದ್ದು – ತನ್ನದೇ ಅಪಖ್ಯಾತಿ ಮತ್ತು ದೈನ್ಯತೆಯಲ್ಲಿ ಅದು ಹುಲ್ಲು ಕಡ್ಡಿಯ ಆಧಾರದಲ್ಲಿ ಇರುತ್ತೆ. ಯಾರೂ ಉದ್ದಾರವಾಗಲಾರರು, ಆದರೂ ಪರಿಸ್ಥಿತಿ ಇನ್ನೂ ಎಷ್ಟು ಹದಗೆಡಲು ಸಾಧ್ಯ? ಮುಂದುವರಿಯಲಿ ಆಟ, ಆಡುತ್ತಾ ಪಡೆದು ಪ್ರಾವೀಣ್ಯತೆ ಈ ಅಶಾಂತಿಯೊಳಗೆ ಕಾಲಿಡಲು. ಕಾಣಲಾರೆಯೇ ನೀನು, ಇಷ್ಟೇ ಮಾಡಲಾದೀತು ನಮಗೆ. ಅಷ್ಟರಲ್ಲಿಯೇ, ಕಿಚ್ಚು ಹೊತ್ತಿ ಕೊಂಡಿದೆ, ಮೆದೆಗೆ ಬೆಂಕಿ ಬಿದ್ದಂತೆ. ಗಡಿಯಾರದ ಮುಳ್ಳನ್ನು ಹೊಂದಿಸಿ ಆಗಿದೆ ಅದು ಮಾತ್ರ ಅನಿಷ್ಟ ಸೂಚಿಸಿದೆ. ಬಾಳ್ವೆಯ ಸೌಜನ್ಯ ಅದರೊಂದಿಗೆ ಸಂಚು ಹೂಡಿದೆ. ಇಲ್ಲಿಯೇ ಇನ್ನೀಗ ನಮ್ಮ ಮನೆಯೂ. ಎಲ್ಲಿಂದ ಎಂದು ಸೂಚಿಸಲು, ಜನರಿಗೂ ಕೇಳಲು ಒಂದು ಜಾಗ. ******* Rain Moving In” The blackboard is erased in the attic And the wind turns up the light of the stars, Sinewy now. Someone will find out, someone will know. And if somewhere on this great planet The truth is discovered, a patch of it, dried, glazed by the sun, It will just hang on, in its own infamy, humility. No one Will be better for it, but things can’t get any worse. Just keep playing, mastering as you do the step Into disorder this one meant. Don’t you see It’s all we can do? Meanwhile, great fires Arise, as of haystacks aflame. The dial has been set And that’s ominous, but all your graciousness in living Conspires with it, now that this is our home: A place to be from, and have people ask about.

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಗುಂಟರ್ ಗ್ರಾಸ್ -ಜರ್ಮನ್ ಲೇಖಕ ಕನ್ನಡಕ್ಕೆ: ಕಮಲಾಕರ ಕಡವೆ ಪ್ರೀತಿ” ಇಷ್ಟು ಮಾತ್ರ:ಹಣಹೀನ ವ್ಯವಹಾರ.ಯಾವಾಗಲೂ ತೀರಾ ಕಮ್ಮಿಯಾಗುವ ಹಾಸಿಗೆ.ತೆಳು ತೆಳು ಸಂಬಂಧ. ಕ್ಷಿತಿಜದಾಚೆ ಹುಡುಕುವುದುಬಿದ್ದ ತರಗೆಲೆಗಳನ್ನು ಬೂಟಿನಿಂದ ಗುಡಿಸುವುದುಮತ್ತು ಮನಸಿನಲ್ಲಿಯೇ ನಗ್ನ ಪಾದಗಳನ್ನು ಹೊಸಕಿ ಕೊಳ್ಳುವುದು.ಕನ್ನಡಿ, ಸ್ನಾನಕ್ಕೆ ಷವರು ಇರುವ ಕೋಣೆಯಲ್ಲಿ,ಚಂದಿರನ ಕಡೆ ಮುಖ ಮಾಡಿದ ಬಾನೆಟ್ಟಿನ ಬಾಡಿಗೆ ಕಾರಿನಲ್ಲಿ,ಹೃದಯ ಕೊಟ್ಟು, ಹರಿದು ಹಾಕುವುದು;ಅಮಾಯಕತೆ ನಿಂತುತನ್ನ ಉಪಾಯಗಳ ಸುಡುವಲ್ಲೆಲ್ಲಕಳ್ಳದನಿಯ ಶಬ್ದ ಬೇರೆಯೇ ಆಗಿಧ್ವನಿಸುತ್ತದೆ, ಮತ್ತು ಪ್ರತಿ ಸಲವೂ ಹೊಸತಾಗಿ. ಇಂದು, ಇನ್ನೂ ತೆರೆದಿಲ್ಲದ ಬಾಕ್ಸ ಆಫೀಸಿನ ಎದುರುಕೈಯಲ್ಲಿ ಕೈಯಿಟ್ಟು ನಕ್ಕರುವಿಷಣ್ಣ ಮುದುಕ ಮತ್ತು ನಾಜೂಕು ಮುದುಕಿ.ಪ್ರೀತಿಯ ಭರವಸೆ ಕೊಟ್ಟಿತ್ತು ಸಿನೆಮಾ. ******* “Love” That’s it:The cashless commerce.The blanket always too short.The loose connexion. To search behind the horizon.To brush fallen leaves with four shoesand in one’s mind to rub bare feet.To let and rent hearts;or in a room with shower and mirror,in a hired car, bonnet facing the moon,wherever innocence stopsand burns its programme,the word in falsetto soundsdifferent and new each time. Today, in front of a box office not yet open,hand in hand crackledthe hangdog old man and the dainty old woman.The film promised love.”

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮಂಗ್ಲೇಶ್ ಡಬರಾಲ್ ಹಿಂದಿ ಕವಿ ಕನ್ನಡಕ್ಕೆ:ಕಮಲಾಕರ ಕಡವೆ “ನಮ್ಮ ಹೆದರಿಸುವಾತ” ನಮ್ಮನ್ನು ಹೆದರಿಸುವವಹೇಳುತ್ತಾನೆ ಹೆದರುವಂತದ್ದು ಏನೂ ಇಲ್ಲನಾನು ಯಾರನ್ನೂ ಹೆದರಿಸುತ್ತಿಲ್ಲನಮ್ಮನ್ನು ಹೆದರಿಸುವವಗಾಳಿಯಲ್ಲಿ ಸೆಟೆದ ತನ್ನ ಬೆರಳು ತಿವಿದು ಹೇಳುತ್ತಾನೆಯಾರಿಗೂ ಹೆದರುವ ಅಗತ್ಯವಿಲ್ಲಅವನು ತನ್ನ ಮುಷ್ಟಿ ಬಿಗಿದು ಗಾಳಿಯಲ್ಲಿ ಬೀಸುತ್ತಾನೆಮತ್ತು ಹೇಳುತ್ತಾನೆ ನೀವು ಹೆದರುತ್ತಿಲ್ಲ ತಾನೇ.ನಮ್ಮನ್ನು ಹೆದರಿಸುವವಕನ್ನಡಕದ ಹಿಂದಿನಿಂದತನ್ನ ತಣ್ಣಗಿನ ಕ್ರೂರ ಕಣ್ಣಿಂದ ನಮ್ಮೆಡೆ ದುರುಗುಟ್ಟುತ್ತಾನೆನೋಡುತ್ತಾನೆ ಯಾರು ಯಾರು ಹೆದರಿದ್ದಾರೆಯಾವಾಗ ಜನರು ಹೆದರ ತೊಡಗುತ್ತಾರೋ ಅವನು ಹಿಗ್ಗಲು ತೊಡಗುತ್ತಾನೆಮುಗುಳ್ನಗುತ್ತ ಹೇಳುತ್ತಾನೆ ಹೆದರುವ ಪ್ರಸಂಗವೇನೂ ಇಲ್ಲನಮ್ಮನ್ನು ಹೆದರಿಸುವವತಾನೇ ಹೆದರಿಕೊಳ್ಳುತ್ತಾನೆಯಾರೂ ಹೆದರುತ್ತಿಲ್ಲವೆಂದು ಅವನಿಗೆ ಕಂಡಂತೆ ====

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಮಹಮೂದ್ ದಾರ್ವೀಶ್ ಪ್ಯಾಲೆಸ್ತಿನ್ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಈಗ, ನೀನು ಎಚ್ಚರಗೊಂಡಂತೆ…” ಈಗ, ನೀನು ಎಚ್ಚರಗೊಂಡಂತೆ, ಹಂಸದ ಅಂತಿಮ ನೃತ್ಯವ ನೆನಪಿಸಿಕೊ.ಕನಸಲ್ಲಿ ದೇವಕನ್ಯೆಯರೊಡನೆ ನೃತ್ಯ ಮಾಡಿದೆಯೇನು?ಗುಲಾಬಿಯ ನಿರಂತರ ಬೆಳಕಿಂದ ದಹಿಸಿದ ಚಿಟ್ಟೆ ನಿನ್ನನ್ನು ಬೆಳಗಿತೇನು?ನಿನ್ನೆದುರು ಸ್ಪಷ್ಟ ರೂಪದಲ್ಲಿ ಅವತರಿಸಿದ ಫೀನಿಕ್ಸ ಹೆಸರ ಹಿಡಿದು ನಿನ್ನ ಕರೆಯಿತೇನು?ನಿನ್ನ ಪ್ರಿಯತಮೆಯ ಬೆರಳುಗಳ ಮೂಲಕ ಬೆಳಗಾಗುವುದ ಕಂಡೆಯೇನು?ನಿನ್ನ ಕೈಯಿಂದ ಕನಸನ್ನು ಮುಟ್ಟಿದೆಯಾ ಅಥವಾನಿನ್ನದೇ ಅನುಪಸ್ಥಿತಿ ಥಟ್ಟನೆ ಅರಿವಿಗೆ ಬಂದುಅದರ ಪಾಡಿಗೆ ಕನಸುತಿರಲು ಬಿಟ್ಟೆಯಾ?ಕನಸುಗಾರರು ಕನಸುಗಳ ತೊರೆಯುವುದಿಲ್ಲಕನಸಿನೊಳಗಿನ ತಮ್ಮ ಜೀವನವನ್ನು ಅವರು ಧಗಧಗನೆ ಮುಂದುವರಿಸುವರುನಿನ್ನ ಕನಸನ್ನು ಒಂದು ಜಾಗದಲ್ಲಿ ಹೇಗೆ ಬಾಳಿದೆ ಹೇಳು,ನೀನು ಯಾರೆಂದು ನಾನು ಹೇಳುವೆ. ಈಗ ನೀನು ಎಚ್ಚರಗೊಂಡಂತೆನಿನ್ನ ಕನಸಿಗೆ ನೀನೇನಾದರೂ ಅಪಚಾರ ಮಾಡಿದ್ದರೆ, ನೆನಪಿಸಿಕೊ.ಮಾಡಿದ್ದು ಹೌದಾದರೆ ಹಂಸದ ಅಂತಿಮ ನೃತ್ಯವ ನೆನಪಿಸಿಕೊ. ********************

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಬಶೀರ್ ಬದ್ರ್ ಉರ್ದು ಕವಿ ಕನ್ನಡಕ್ಕೆ: ಕಮಲಾಕರ ಕಡವೆ “ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲು” ಜನ ಸೋತು ಹೋಗುತ್ತಾರೆ ಮನೆಯೊಂದ ಕಟ್ಟಲುಮರುಕ ಬಾರದೇ ನಿನಗೆ ಕೇರಿಗಳ ಸುಟ್ಟುಹಾಕಲು ಈ ಹೆಂಡದಂಗಡಿಯಲ್ಲಿ ಬಟ್ಟಲುಗಳು ಮುರಿಯುತ್ತವೆಋತುಗಳು ಬರುತಿರಲು ಋತುಗಳು ಹೋಗುತಿರಲು ಮಿಡಿವ ಎಲ್ಲ ಕಲ್ಲುಗಳಿಗೂ ಜನ ಹೃದಯ ಎಂದಿದ್ದಾರೆಆಯುಷ್ಯವೇ ಕಳೆದು ಹೋಗುತ್ತದೆ ಎದೆಯ ಹೃದಯವಾಗಿಸಲು ಪಾರಿವಾಳದ ಕಷ್ಟ ಏನೆಂದರೆ ಕೇಳಲಾಗದು ಅದುಯಾರೋ ಅದರ ಗೂಡಲ್ಲಿ ಹಾವನಿಟ್ಟಿರಲು ಬೇರೆ ಹುಡುಗಿ ಬಾಳಿನಲ್ಲಿ ಬರುವುದೇನೋ ನಿಜಎಷ್ಟು ಕಾಲ ಬೇಕಾಗುವದು ಅವಳ ಮರೆತುಬಿಡಲು ********* लोग टूट जाते हैं एक घर बनाने मेंतुम तरस नहीं खाते बस्तियाँ जलाने में और जाम टूटेंगे इस शराब-ख़ाने मेंमौसमों के आने में मौसमों के जाने में हर धड़कते पत्थर को लोग दिल समझते हैंउम्रें बीत जाती हैं दिल को दिल बनाने में फ़ाख़्ता की मजबूरी ये भी कह नहीं सकतीकौन साँप रखता है उस के आशियाने में दूसरी कोई लड़की ज़िंदगी में आएगीकितनी देर लगती है उस को भूल जाने में

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

 ವಾಷಿಂಗ್ಟನ್ ಕುಕುರ್ಟೋ ಅರ್ಜೆಂಟೀನಾದ ಕವಿ ಕನ್ನಡಕ್ಕೆ: ಕಮಲಾಕರ ಕಡವೆ ಚೆ ಗುವೆರಾನ ಮುಖ ಇದ್ದ ಮನುಷ್ಯ ಅವನು ಚೆ ಯ ಟ್ಯಾಟೂವ ತನ್ನ ತೋಳುಗಳ ಮೇಲೆ ಹೊಂದಿದ್ದಆ ಕಾಲದಲ್ಲಿ ಯಾರೂ ಟ್ಯಾಟೂ ಹಾಕಿ ಕೊಳ್ಳುತ್ತಿರಲಿಲ್ಲಆ ಕಾಲದಲ್ಲಿ ಯಾರಿಗೂ ಚೆ ಗೊತ್ತೂ ಇರಲಿಲ್ಲಹಾಗಿದ್ದಾಗ ಅವನು ಟ್ಯಾಟೂ ಹಾಕಿಸಿ ಕೊಂಡಿದ್ದ “ಯಾಕಪ್ಪಾ ಹಾಗೆ ಟ್ಯಾಟೂ ಹಾಕಿಸ್ ಕೊಂಡಿದ್ದಿ”ನನ್ನ ಅಜ್ಜಿ ಕೇಳಿದಳು, “ಒಳ್ಳೇ ಜೈಲಿಂದ್ ಹೊರ ಬಂದೋರುಹಾಕಿಸ್ಕೊತಾರಲ್ಲ ಹಾಂಗೆ”.“ಅಮ್ಮ, ಇನ್ನೇನು ನಮ್ ಲೈಫು ಅಂದ್ರೆ,ದೊಡ್ಡದೊಂದು ಜೈಲು ಅಲ್ದಿದ್ರೆ?”ಚೆ ಇನ್ನೂ ಚೆ ಆಗೋಕೆ ಶತಮಾನ ಇರೋವಾಗ್ಲೇಅವನು ತೋಳುಗಳ ಮೇಲೆ ಟ್ಯಾಟೂ ಹಾಕಿಸಿ ಕೊಂಡಿದ್ದಯಾರೂ ಟ್ಯಾಟೂ ಹಾಕಿಸ್ಕೊಳ್ಳೋ ಇರ್ತಾ ಇರದ ಕಾಲದಲ್ಲಿ.ಇಂದು, ಕ್ರಿಸ್ಮಸ್ ನ ಒಂದು ದಿನದ ಮೊದಲುನಾನು ಅವನಿಗೆ ಫೋನು ಮಾಡಿದ್ದೆ, ಹ್ಯಾಪಿ ಹೋಲಿಡೇಸ್ ಹೇಳಲು.ಅವನು ಫೋನು ಉತ್ತರಿಸಿದಾಗ ಪೂರಾ ಕುಡಿದಿದ್ದನನ್ನ ದನಿ ಕೇಳಿ ಅವನಿಗೆ ಖುಷಿ ಆಗಿತ್ತುಆದರೂ ಅವನು ಅದೇನೋ ಹಿಮದ ಕುರಿತು ಮಾತಾಡಿದ್ದ“ಹಿಮದಲ್ಲಿ ಸಿಮ್ಯುಲೇಷನ್ ಮಾಡಿದಂಗೆ ನೀನು ಕಣೋ”ನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದಅವನು ಅವಳಿಗೆ ವಾಪಸಾಗಿದ್ದ“ನಿನ್ನ ಮಕ್ಳು ಎಷ್ಟು ಚಂದ ಇದಾರೋ, ಅಣ್ಣ”ಅಪ್ಪ ನನ್ನ ಅಣ್ಣ ಅಂತ ಕರೆಯೋದು“ಅಪ್ಪಾ, ನಾಳೆ ಕ್ರಿಸ್ಮಸ್”.“ಚೆ ಟ್ಯಾಟೂ ಯಾಕಪ್ಪಾ ಹಾಕಿಸಕೊಂಡೆ ಅಂತ ಬೇಸರ ಆಗ್ತಾ ಇದೆ.ನನಗೆ ಎಲ್ಲದರ ಬಗ್ಗೂ ಬೇಸರಾನೇ, ಚೆ ಕುರಿತೂ”.ಅವನ ಚೆ! ನಮ್ಮ ಬಾಲ್ಯದ ಹೀರೊ ಚೆ!“ನನ್ನ ತೋಳಿನ ಮೇಲೆ ಚೆಗೆನನಗಿಂತಾ ಹೆಚ್ಚು ವಯಸ್ಸಾಗಿ ಬಿಟ್ಟಿದೆ” ನನಗಂದ ಅವನುನನ್ನ ಅಪ್ಪ ಸಾರಾಯಿ ಸಾಹೇಬಾಳ ಬಳಿ ಮರಳಿ ಹೋಗಿದ್ದನನ್ನಪ್ಪ ಅವನ ತೋಳಿನ ಮೇಲೆ ಒರಗಿದ“ಮರೀ ಬೇಡಪ್ಪ ನನ್ನ, ಅಣ್ಣ” ಹೇಳಿದ ಅಪ್ಪ.ಎಂದಿಗೂ ಇಲ್ಲ. ನಾನೆಂದೆ. ಮತ್ತು ಫೋನು ಕೆಳಗಿಟ್ಟೆ. ********

ಅನುವಾದ ಸಂಗಾತಿ Read Post »

ಅನುವಾದ

ಹಳೆಯ ವರ್ಷಕ್ಕೊಂದುವಿದಾಯ

2019ಮುಗಿಯುತ್ತಿದೆ… ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹಳೆಯ ವರ್ಷಕ್ಕೊಂದು ವಿದಾಯ ಹೇಳಬೇಕಾಗಿದೆ ಖ್ಯಾತ ಕವಿ ಗುಲ್ಜಾರರ ಕವಿತೆ ಹೇಳಿರುವ ವಿದಾಯದ ಸಾಲುಗಳು ನಿಮಗಾಗಿ ಮೆಲ್ಲ ಮೆಲ್ಲನೆ ನಡೆ ಜೀವನವೆ ತೀರಿಸಬೇಕಾದ ಋಣವಿನ್ನು ಉಳಿದಿದೆ ! ಇನ್ನಷ್ಟು ನೋವುಗಳ  ನಿವಾರಿಸಬೇಕಿದೆ, ನಿಭಾಯಿಸುವ ಕರ್ತವ್ಯ ಇನ್ನಷ್ಟಿದೆ.  ಹೊರಳಿ ನಡೆಯುವ ನಿನ್ನ ವೇಗಕೆ, ಕೆಲವು ಕೈ ಜಾರಿದವು ಕೆಲವು ಮುನಿದವು  ಮುನಿದವರ ಮನವೊಲಿಸಬೇಕಿದೆ, ಅಳುವವರ ಮತ್ತೆ ನಗಿಸಬೇಕಿದೆ. ಮನದ ಬಯಕೆಗಳದೆಷ್ಟೋ ಅಪೂರ್ಣವಾಗಿವೆ, ಕೆಲ ಅಗತ್ಯ ಕರ್ಮಗಳ ಮುಗಿಸಬೇಕಿದೆ.  ಈಡೇರಿಸಲಾಗದ ಎದೆಯ ಬಯಕೆಗಳ  ಅಲ್ಲೇ ಸಮಾಧಿ ಮಾಡಬೇಕಿದೆ. ಅರಳಿ ಮುರಿದವು ಕೆಲ ಸಂಬಂಧಗಳು, ಕೊಂಡಿ ಬೆಸೆದರೂ ಕೈ ತಪ್ಪಿದವು ಕೆಲವು. ಕಡಿದುಕೊಂಡ ಸಂಬಂಧಗಳು ಉಳಿಸಿಹೋದ ಗಾಯಗಳ  ಮಾಗಿಸಬೇಕಿದೆ. ನಡೆ ಮುಂದೆ ನೀನು,ಬರುವೆ ನಾ ಹಿಂದೆ ಹಿಂದೆ. ಬದುಕಲಾಗುವುದೇ ನಾ ನಿನ್ನನಗಲಿ? ಈ ಉಸಿರ ಮೇಲೆ ಹಕ್ಕಿದೆ ಯಾರಿಗೆ, ಅದ ಮನವರಿಕೆ ಮಾಡಿಸುವುದಿನ್ನೂ ಬಾಕಿ ಇದೆ. ಮೆಲ್ಲ ಮೆಲ್ಲನೆ ನಡೆ ಜೀವನವೆ ತೀರಿಸಬೇಕಾದ ಋಣವಿನ್ನು ಉಳಿದಿದೆ! ಕವಿತೆ ಕನ್ನಡಕ್ಕೆ ಅನುವಾದಿಸಿದವರು-ಅವ್ಯಕ್ತ

ಹಳೆಯ ವರ್ಷಕ್ಕೊಂದುವಿದಾಯ Read Post »

ಅನುವಾದ

ಅನುವಾದ ಸಂಗಾತಿ

ನಿಕ್ಕಿ ಗಿಯೊವಿನ್ನಿ ಅಮೇರಿಕಾದ ಕವಿಯಿತ್ರಿ ಕನ್ನಡಕ್ಕೆ: ಕಮಲಾಕರ ಕಡವೆ “ನೀನೂ ಸಹ ಬಂದೆ” ನಾನು ಬಂದೆ ಸರ್ವರ ಸಮ್ಮುಖ ಸ್ನೇಹಿತರ ಅರಸಿನಾನು ಬಂದೆ ಸರ್ವರ ಸಮ್ಮುಖ ಒಲವ ಅರಸಿನಾನು ಬಂದೆ ಸರ್ವರ ಸಮ್ಮುಖ ಸಹಾನುಭೂತಿಗಾಗಿ ನಿನ್ನ ಕಂಡುಕೊಂಡೆನಾನು ಬಂದೆ ಸರ್ವರ ಸಮ್ಮುಖ ಅಳಲುನಾನು ಬಂದೆ ಸರ್ವರ ಸಮ್ಮುಖ ನಗಲು ನೀನು ನನ್ನ ಕಣ್ಣೊರೆಸಿದೆನೀನು ನನ್ನ ಸಂತೋಷವ ಹಂಚಿಕೊಂಡೆನಾನು ಸರ್ವರ ಸಮ್ಮುಖ ತೊರೆದು ನಿನ್ನ ಅರಸಿ ಹೊರಟೆ ನಾನು ಸರ್ವರ ಸಮ್ಮುಖ ತೊರೆದು ಹೋದೆ ನನ್ನನೇ ಅರಸಿನಾನು ಸದಾಕಾಲಕ್ಕೆ ಸರ್ವರ ಸಮ್ಮುಖ ತೊರೆದೆನೀನೂ ಸಹ ಜೊತೆಯಾದೆ. ========= ಆಂಗ್ಲ ಮೂಲ: You Came , Too” I came to the crowd seeking friendsI came to the crowd seeking loveI came to the crowd for understanding I found youI came to the crowd to weepI came to the crowd to laugh You dried my tearsYou shared my happinessI went from the crowd seeking you I went from the crowd seeking meI went from the crowd foreverYou came, too ============

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ಓಂಪ್ರಕಾಶ್ ವಾಲ್ಮೀಕಿ ಉತ್ತರಭಾರತದ ದಲಿತ ಕಾವ್ಯ ಕನ್ನಡಕ್ಕೆ-ಕಮಲಾಕರ ಕಡವೆ ಠಾಕೂರನ ಬಾವಿ ಒಲೆ ಮಣ್ಣಿಂದುಮಣ್ಣು ಕೊಳದ್ದುಕೊಳ ಠಾಕೂರಂದು ಹಸಿವು ರೋಟೀದುರೋಟಿ ರಾಗಿಯದುರಾಗಿ ಗದ್ದೇದುಗದ್ದೆ ಠಾಕೂರಂದು ಎತ್ತು ಠಾಕೂರಂದುನೇಗಿಲು ಠಾಕೂರಂದುನೇಗಿಲ ಮೇಲಿನ ಕೈ ನಮ್ದುಫಸಲು ಠಾಕೂರಂದು ಬಾವಿ ಠಾಕೂರಂದುನೀರು ಠಾಕೂರಂದುಗದ್ದೆ-ಕಣಜ ಠಾಕೂರಂದುರಸ್ತೆಬೀದಿ ಠಾಕೂರಂದುಮತ್ತೆ ನಮ್ದೇನುಂಟು?ಹಳ್ಳಿ?ಪೇಟೆ?ದೇಶ? ********************************* ಮೂಲಕವಿತೆ ठाकुर का कुआँ / ओमप्रकाश वाल्मीकि चूल्‍हा मिट्टी कामिट्टी तालाब कीतालाब ठाकुर का । भूख रोटी कीरोटी बाजरे कीबाजरा खेत काखेत ठाकुर का । बैल ठाकुर काहल ठाकुर काहल की मूठ पर हथेली अपनीफ़सल ठाकुर की । कुआँ ठाकुर कापानी ठाकुर काखेत-खलिहान ठाकुर केगली-मुहल्‍ले ठाकुर केफिर अपना क्‍या ?गाँव ?शहर ?देश ?

ಅನುವಾದ ಸಂಗಾತಿ Read Post »

You cannot copy content of this page

Scroll to Top