ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ವಾರದ ಕವಿತೆ

ವಾರದ ಕವಿತೆ

ಬದುಕುಮರುಗುತ್ತಿದೆ ಸುಜಾತಾ ಲಕ್ಮನೆ ಬದುಕು ಮರುಗುತ್ತಿದೆಕನಸುಗಳು ಶಿಥಿಲಗೊಂಡು ರಚ್ಚೆ ಹಿಡಿದುಮುರುಟ ತೊಡಗಿದಂತೆಲ್ಲಬದುಕ ಭಿತ್ತಿಯ ಆಚೀಚೆ ನೀನು ಎಗ್ಗಿಲ್ಲದೇ ಜಡಿದ ಮೊಳೆಗಳುಆಳಕ್ಕಿಳಿದಂತೆಲ್ಲಾ ಹೊರಳಿ ನರಳಿ ಅನಾಮತ್ತಾಗಿ ಹರಡಿಬೆದರುಬೊಂಬೆಗಳಾಗಿ ನಿಲ್ಲುತ್ತವೆ ಭಾವಗಳು !!ದಿಕ್ಕೆಟ್ಟು, ಸೋತು ಹೆಜ್ಜೆ ಮೂಡಿಸಲಾಗದ ಕೊರಗು ತುಂಬಿ ನಿಂತಈ ಭಾವಗಳ ತಬ್ಬಿದರೆಬರೀ ನಿಟ್ಟುಸಿರ ಮೇಳಗಳು !!ಧೂಳು ಹೊದ್ದು ಮಸುಕಾದ ಗೋಡೆಗಂಟಿದ ನಮ್ಮೀವಿವಾಹದ ಜೋಡಿ ಪಟದಿಂದ ಒಳಗೊಳಗೇ ನಕ್ಕು ಸೂಸುವ ಹಳವಂಡಗಳು!ಜೇಡ ನೇಯ್ದ ಬಲೆಯೊಳಗೆ ಬಿದ್ದು ಹೊರಳಾಡುವ ಪಟದ ಬಗ್ಗೆ ನಮಗೇಕೆ ಚಿಂತೆ?ಬದುಕೇ ಚೌಕಟ್ಟು ಮೀರಿ ಮೂರಾಬಟ್ಟೆಯಾದ ಮೇಲೆ ಇನ್ನೇನಂತೆ ?ಅದೆಷ್ಟು ಬೆಳ್ಳಗೆಯಲ್ಲಿ ಮುಖವಾಡ ಹೊದ್ದು ಹಗಲು ತಳ್ಳಿದರೂಎದೆ ಸುಡುವ ಮಂಚದ ಮೇಲೆರಾಗ ಲಯಗಳು ಸತ್ತ ಬಾಳು ರಿಕ್ತಗೊಂಡ ಸತ್ಯದರ್ಶನ !ನಿದ್ದೆ ತಬ್ಬದ ರಾತ್ರಿಗಳಲ್ಲಿ ಕಣ್ಣಾಲಿಗಳ ಸುತ್ತ ಸತ್ತ ಕನಸುಗಳ ಒಸರುಗಿರಕಿ ಹೊಡೆಯುವ ತವಕ-ತಲ್ಲಣ !!ಈ ಉತ್ಕಲಿಕೆ ತಾಳಲಾರದೇ ತಟ್ಟಿ ಮಲಗಿಸಿದಂತೆಲ್ಲಾಉಟ್ಟ ಸೀರೆಯ ಸೆರಗಿನಂಚೇ ಪಿಸುಗುಡಲು ಶುರುವಿಟ್ಟುಕೊಳ್ಳುತ್ತದೆ ನನ್ನಲ್ಲಿ !ಎದೆಯ ಬೀದಿಯ ಮೇಲೆ ಗೀಚಿದ ಒಲುಮೆ ಅಕ್ಷರಗಳುಇದ್ದಕ್ಕಿದ್ದಂತೆ ಮಾಯವಾಗಿದ್ದಾದರೂ ಎಲ್ಲಿ?ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದುಹೋಗುವ ಈ ಅನಿವಾರ್ಯತೆಯಆರ್ತನಾದಕ್ಕೆ ಕೊನೆಯಲ್ಲಿ ?ಸಾಲ್ಗೊಳಿಸಲಾಗದ ಪ್ರೀತಿಯ ವ್ಯಾಖ್ಯೆ ಎಡವಿದಂತೆಲ್ಲಸುಕರಗೊಳ್ಳದ ಬದುಕು ಅನಂತ ಸುಳ್ಳುಗಳಿಂದ ತುಂಬಿ ಅಣಕಿಸುತ್ತಿದೆ!!ನಿನ್ನ ಮೆಲ್ನುಡಿ, ಮೆಲ್ದನಿ, ಮೆಲ್ನಗೆಗೆ ಹಾತೊರೆದು ಹೀಗೆ ಗೀಚುವ ಕವನ ಕನಲುತ್ತಿದೆ: ಕರಗುತ್ತಿದೆ: ಕನವರಿಸುತ್ತಿದೆ!!ಕಂಡೂ ಕಾಣದ ಆಸೆ ಕುಡಿಯು ಚಿಗುರಲಾರದೇ ಇತ್ತ ಸಾಯಲಾರದೇ-ಗೆಜ್ಜೆಕಟ್ಟಿದ ಹೆಜ್ಜೆ ಪ್ರೀತಿಯ ರಂಗಸ್ಥಳದಲ್ಲಿ ನರ್ತಿಸಲಾರದೇಬದುಕೇ ಮರುಗುತ್ತಿದೆ : ನರಳುತ್ತಿದೆ : ನೋಯುತ್ತಿದೆ !!ಸಾಂಗತ್ಯ ಗೊಳ್ಳದ ಬದುಕ ಪದುಳಿಸಲು ಒಮ್ಮುಖವಾಗಿನಾನು ಹೆಣಗಿದಂತೆಲ್ಲ ನಿನ್ನ ವಿಮುಖತೆಯೇ ಮೂರ್ತೀಭವಿಸಿದಿನ-ರಾತ್ರಿಗಳು ಬಸವಳಿದು ಚಾದರ ದಡಿಯಲ್ಲಿ ಬಿಕ್ಕುತಿವೆ!!ನಾನು ನೀನು ದಾಂಪತ್ಯದಲ್ಲಿ ಕಾಲಿಟ್ಟ ಸಂಭ್ರಮದ ಆ ದಿನಕ್ಕೆಬೇಕಿತ್ತೇ ದಿಬ್ಬಣ ಒಡ್ಡೋಲಗ ಮಂತ್ರಗಳ ಘೋಷ ಹೂ ಮಾಲೆ?ಸನಿಹವಿದ್ದೂ ನಿನ್ನ ಬಿಸುಪೇ ತಾಗದೆ ಸಾಯುವ ನನ್ನ ಭಾವಲಹರಿಯ ಬಿಕ್ಕಿಗೆಇನ್ನೆಷ್ಟು ತೇಪೆ ಹಚ್ಚುವ ಶ್ರಮ –ಮನಸ್ಸಿಗೆ ಮನಸ್ಸೇ ಬೆಸೆಯದಿದ್ದ ಮೇಲೆ?ಪ್ರೀತಿ ಇಲ್ಲದ ಮೇಲೆ ಎಲ್ಲ ತೊರೆದು ಕಾರಣವ ಕೊಟ್ಟು ಹೊರಟು ಬಿಡು !ವಿಕ್ಷೋಭ ವಿಕ್ಲಬಗಳೆಲ್ಲ ದೂರಾಗಿ ಹೋಗಲಿನನ್ನ ಬಿಸಾಕಿ ಬಿಡು ನಿನ್ನ ಬಾಳಿಂದಒಳ ಕುದಿತ ತಹಬಂದಿಗೆ ಬಂದುಇನ್ನುಳಿದ ಎನ್ನ ಬಾಳಾದರೂ ಆಗಲಿ ಅಂದ ಚಂದ !! *******************

ವಾರದ ಕವಿತೆ Read Post »

ಕಾವ್ಯಯಾನ

ಅಪ್ಪನ ಆತ್ಮ

ಕವಿತೆ ಫಾಲ್ಗುಣ ಗೌಡ ಅಚವೆ. ಇಲ್ಲೇ ಎಲ್ಲೋಸುಳಿದಾಡಿದಂತೆ ಭಾಸವಾಗುವಅಪ್ಪನ ಅತ್ಮನನ್ನ ತೇವಗೊಂಡ ಕಣ್ಣುಗಳನ್ನುನೇವರಿಸುತ್ತದೆ. ಅಪ್ಪನ ಹೆಜ್ಜೆ ಗುರುತುಗಳಿರುವಗದ್ದೆ ಹಾಳಿಯ ಮೇಲೆನಡೆದಾಡಿದರೆಇನ್ನೂ ಆಪ್ತವಾಗಿಸುಪ್ತ ಭಾವನೆಗಳನ್ನುಆಹ್ಲಾದಕರಗೊಳಿಸುತ್ತದೆ. ನಾನು ನಡೆದಲ್ಲೆಲ್ಲನೆರಳಿನಂತೆ ಬರುವ ಅದುನನಗೆ ಸದಾ ಗೋಚರಿದಂತೆ ಭಾಸ! ನನ್ನನ್ನೇ ಕುರಿತು ನೇರಬೊಟ್ಟು ಮಾಡಿ ತೋರಿಸಿದಂತೆಏನನ್ನೋ ಹೇಳುತ್ತದೆ!ದ್ವೇಷದ ಬೆಂಕಿಯಲ್ಲಿಮಗನ ಮುಖವ್ಯಗ್ರವಾಗಿರುವುದ ಕಂಡುಬೇಸರಿಸಿಕೊಂಡಿದೆಆತ್ಮದ ಮ್ಲಾನ ವದನ!! ಅನ್ಯರಿಗೆ ಅಗೋಚರವೆನಿಪಅಪ್ಪನ ಅತ್ಮಕ್ಕೂ ನನಗೂಅದೆಂಥದೋಅಲೌಕಿಕ ನಂಟು! ಅವನ ನೆನಪಿನೊಂದಿಗಿನಮುಕ್ತ ತಾದಾತ್ಮ್ಯವೇನನ್ನ ಅದ್ಯಾತ್ಮ!!! ********

ಅಪ್ಪನ ಆತ್ಮ Read Post »

ಕಾವ್ಯಯಾನ

ನನ್ನಜ್ಜ

ಕವಿತೆ ಚೈತ್ರಾ ಶಿವಯೋಗಿಮಠ ಬಸ್ಟ್ಯಾಂಡ್ ನ್ಯಾಗ ನಿಂತುಬಾರಕೋಲು ಬೇಕಾ ಅಂದಾಗಮಂದಿ ಬೇಡಿ ಕೊಡಿಸ್ದಾವ ನನ್ನಜ್ಜಇದ ಕಥಿ ನೂರ ಸರತಿ ಹೇಳಿ“ಹಠಮಾರಿ ಚೈತ್ರಾ” ಅಂದಾವ ನನ್ನಜ್ಜ ಹೆಗಲ ಮ್ಯಾಲೆ ಹೊತ್ತು ಓಣಿತುಂಬಾ ತಿರಗ್ಯಾಡಿದಾವ ನನ್ನಜ್ಜಬಾಯಿ ಒಡದರ, ತುಂಬಾ ಬಿಳಿ ಬೀಜಕೆಂಪಗ ಕಾಣೂ ಪ್ಯಾರಲ ಹಣ್ಣ ತರಾವ ನನ್ನಜ್ಜನಿಂಬುಹುಳಿ, ಪೇಪರಮಟ್ಟಿ, ಚಾಕಲೇಟ್ಗಾಂಧಿ ಮುತ್ಯಾನ ಫೋಟೋ ಮುಂದ ನಿಂದರೀಸಿಕಣ್ಮುಚ್ಚಿಸಿ, ಮುತ್ಯಾ ಕೊಟ್ಟ ನೋಡನ್ನವ ನನ್ನಜ್ಜ ಮುದುಕಿ, ನರಿ-ಒಂಟಿ ಅಂತ ನೂರ ಕಥಿಅವನ ಅಂಗಿ ಕಿಶೆದಾಗ. ಸ್ವತಂತ್ರ ಸಿಕ್ಕಾಗನಡುರಾತ್ರಿ ಮಾಸ್ತಾರ ಎಬ್ಬಿಸಿದ್ದನ್ನ ಕಥಿಮಾಡಿ ಹೇಳಿದಾಗ ಹೀರೋ ಗತೆ ಕಂಡಾವ ನನ್ನಜ್ಜಓಡಿಹೋಗಾವ ಇದ್ದೆ ಅಂತರಪಟ ಸರದು ಬೆಳ್ಳನ್ನಚೆಲುವಿ ಕಂಡ್ಲು, ಬದುಕಿದ್ನಪಾ ಅಂತಹೇಳಿ ಅಜ್ಜಿನತಾ ಲಗ್ನಾದ ಕಥಿ ಹೇಳಿ ನಗಸಾವ ನನ್ನಜ್ಜ. ತಾಯಿ ಸೇವಾ ಮಾಡಿ ತುಂಬು ಜೀವನ ಕಂಡುತನಗಿಂತ ಕಿರಿಯರ ಕಣ್ಮುಂದ ಕಳ್ಕೊಂಡುನೂವಿನ ನಂಜೆಲ್ಲಾ ಎದಿಯಾಗಾ ಮಂಜ ಮಾಡಿಗಟ್ಟಿ ಮನಸು, ಗಟ್ಟಿ ಶರೀರದಾವ ನನ್ನಜ್ಜಸೈಕಲ್ ಏರಿ ದೂರದೂರಿಗೆ ಹೋಗಿ ಸಾಲಿಕಲಿಸಿ ಬಂದು, ರಾತ್ರಿ ಹೊಲಕ್ಕ ನೀರ ಕಟ್ತಿದ್ದ ರೈತ ಮಾಸ್ತಾರನನ್ನಜ್ಜ ಸ್ವಚ್ಛ ಆಕಾಶದಾಗ ಹತ್ತಿಯಂತ ಮಾಡ ತೇಲಿಹಚ್ಚ ಹಸುರು ಶ್ರಾವಣ ಬಂತಂತ ಹಿಗ್ಗುಮುಂದಊರಿಗ ಹೊಂಟ್ರ “ಬಾರವಾ ಚೈತ್ರಾ’ ಅಂತಬಚ್ಚ ಬಾಯಿ ತಗದ ಬೆಚ್ಚಗ ಕರಿಯಾಕ ಇನ್ನಿಲ್ಲ ನನ್ನಜ್ಜ.ಮೊಮ್ಮಕ್ಕಳ ಸಾಮ್ರಾಜ್ಯದಾಗಿನ ಮಹರಾಜಾ ನೀ, “ಪ್ರಭುಗಳೆ, ಹೀಗೆ ಬನ್ನಿ” ಅಂತ ಆಡಿಶ್ಯಾಡಿದ್ರನಗಾವ ದೊರೆ ಆಳ್ವಿಕಿ ಮುಗಿಸಿ ಹೊಂಟ ನನ್ನಜ್ಜ! ***************************

ನನ್ನಜ್ಜ Read Post »

ಕಾವ್ಯಯಾನ

ವಿನಂತಿಯಷ್ಟೇ…

ಕವಿತೆ ಮಧುಸೂದನ ಮದ್ದೂರು ನಿನ್ನ ಒಂದೇ ಒಂದು ಕನಸಿಗೆ ಇಷ್ಟು ಪರಿತಪಿಸ ಬೇಕಿತ್ತೆ…..? ನಿನ್ನ ಕುಡಿಮಿಂಚ ಕಣ್ಣೋಟಎದೆ ಇರಿದಿದ್ದರೆ ಸಾಕಿತ್ತು..ಎದೆಗೆ ನಿನ್ನ ನೆನಪುಗಳ ಭರ್ಜಿಯಿಂದಇರಿದುಕೊಳ್ಳಬೇಕಿರಲಿಲ್ಲ..ನಿನ್ನ ತುಸು ಸ್ಪರ್ಶದ ಕೆನೆಗಾಳಿ ಎದೆಗೆ ಸೊಂಕಿದ್ದರೆ ಸಾಕಿತ್ತು… ನಿನ್ನ ಸಿಹಿ ಮುತ್ತೊಂದು ಸಿಕ್ಕಿದ್ದರೆ ಸಾಕಿತ್ತು..ಮಧುಶಾಲೆಗೆ ಎಡತಾಕಿ ಮತ್ತಿನ ಬಾಟಲಿಗಳಿಗೆ ಮುತ್ತಿಕ್ಕುವ ಪ್ರಮೇಯವೇ ಇರುತ್ತಿರಲಿಲ್ಲ… ನಿನ್ನ ನವಿರು ಬಿಸಿಯುಸಿರು ನನ್ನೆದೆಗೆ ಸುಳಿಗಾಳಿಯಾಗಿದ್ದರೆ ಸಾಕಿತ್ತು..ಧೂಮಲೀಲಾ ವಿನೋದವಳಿಗೆ ಅಗ್ನಿಮಿತ್ರನಾಗುತ್ತಿರಲಿಲ್ಲ.. ಈಗಲೂ ಕಾಲ‌ಮಿಂಚಿಲ್ಲ..ಒಂದೇ ಒಂದು ಬಾರಿ ಕನಸಿಗೆ ಬಂದು ಬಿಡು ಸಾಕುಈ‌ ನನ್ನಿ ವ್ಯಸನಗಳ ಸಾಮ್ರಾಜ್ಯವ ಸೋಲಿಸಿಎದೆಯ ಸಿಂಹಾಸನದ ಪಟ್ಟದ ಸಾಮ್ರಾಜ್ಞಿಯಾಗು…ಇದೀಷ್ಟೇ ಈ ಬಡ ಪಕೀರನ ವಿನಂತಿ ಮಾತ್ರವಷ್ಟೇ… **********

ವಿನಂತಿಯಷ್ಟೇ… Read Post »

ಕಾವ್ಯಯಾನ

ಗಝಲ್

ಗಝಲ್ ಶಶಿಕಾಂತೆ ನಿನ್ನನ್ನು ಎದೆಯಾಳದಿಂದ ಅನಂತವಾಗಿ ಪ್ರೀತಿಸುತಿರುವೆನುಆಣೆ ಇಡಲೇ,ನನ್ನೊಲವನ್ನೆಲ್ಲಾ ನಿನಗಾಗೇ ಮುಡಿಪಾಗಿಡುವೆನು. ಜೀವನವೆಂಬುದು ಮೂರು ದಿನದ ಸಂತೆಯಂತೆ ಚೆಲುವೆ.ಆ ಸಂತೆಯಲ್ಲಿ ನೀ ನೀಡಿದೆ ನನಗೆ ಯಾರೂ ನೀಡದ ಸ್ನೇಹವನು. ನೀನೀಗ ಹೃದಯ ವೀಣೆ ಮೀಟಿಯಾಗಿದೆ ದೂರ ಹೋಗದಿರು ಸಖಿ ತಾಳಿಕೊಳ್ಳಲಾರದು ನನ್ನೆದೆ ವಿರಹದ ಬೇಗೆಯನು. ಈ ಬಾಳು ಬರಡು ಬಂಜರುಭೂಮಿ ಆಗಿತ್ತು ನಿನ್ನಾಗಮದ ಮೊದಲು.ಪ್ರೇಮ ಸಿಂಚನದಿಂದ ಮನದಲಿ ನೀ ಮೂಡಿಸಿದೆ ಹೊಸ ಬಯಕೆಗಳನು ನಿನ್ನ ಹೆಸರೇ ನನ್ನುಸಿರಾಗಿದೆ ನಾವು ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿದಾಗದಿಂದ.ಬಾ ಜಾನು, ನನ್ನೆದೆಗೊರಗಿ ಮಲಗಿ ಕೇಳು ನನ್ನ ಪ್ರೇಮದೇವತೆಯ ಹೆಸರನು. ಮನಸುಗಳು ಒಂದಾದ ಮೇಲೆ ಬಳಿ ಇರಲು ಭಯವೇತಕಿನ್ನು ನಿನಗೆ.ಅಧರಗಳ ಮಧುಪಾನ ಮಾಡೋಣ ಮರೆಯಲು‌ ಎಲ್ಲಾ ಚಿಂತೆಯನು. ನಗುವ ಶಶಿಯಿಲ್ಲದ ಬಾನಿನಲ್ಲಿ ಏನಾದರೂ ಕಳೆ ಇದೆಯೇ ಹೇಳು ಚಿನ್ನು.ನಿನ್ನ ಪ್ರೀತಿಯಿಲ್ಲದೆ ಹೋದರೆ ಈ ಜೀವನ ಶೂನ್ಯವಲ್ಲವೇನು.

ಗಝಲ್ Read Post »

ಕಾವ್ಯಯಾನ

ಉತ್ತರ ಏನು?

ಕವಿತೆ ನಂದಿನಿ ಹೆದ್ದುರ್ಗ ಅವನೆನ್ನ ಅಗತ್ಯವಲ್ಲ.ಅನಿವಾರ್ಯವಲ್ಲಅಭೇದ್ಯವೂ ಅಲ್ಲ.ನಡುದಾರಿಯಲಿ ಸಿಕ್ಕ ದಾರಿಹೋಕ.ನನ್ನ ನೋಡಿ ಸಣ್ಣಗೆ ನಕ್ಕ. ಒಡ್ಡಿಕೊಂಡೆವು ಎಂದುಎರಡುಅಲುಗಿನ ನಡೆಗೆ ನಾವಿಬ್ಬರೂ.? ಅವನೀಗ ನನ್ನೆದೆಯ ರಾಗ.ಬೆವರ ಬೆಳಕು.ಹೆರಳ ಸಿಕ್ಕು.ಕಣ್ಣ ಚುಕ್ಕಿ.ಒಳಗಿನೊಳಗಿನ ಭಕ್ತಿ. ಅವನೆನ್ನ ಬಯಕೆ ಎನ್ನ ಬಳಲಿಕೆಮಳೆಗರೆವ ಮುಗಿಲುಆಳದ ದಿಗಿಲುಅವನೆನ್ನ ಬೇಕುಪದ್ಯದ ಪರಾಕು.ಅವನು…ಸಿಹಿಯಾದ ಕತ್ತಲುಹೂ ಹಿಡಿದ ಹಿತ್ತಿಲು.ಅವನೆನ್ನ ಸುಖ ನನ್ನ ಮೋಹದ ಸಖ ಜಗದ ಆ ಬದಿಯಲಿ ಅವನುಸಮೃದ್ಧ ಏಕಾಂತದಲಿ ನಾನುಹರಿದು ಅಲೆಗಳ ಬಣ್ಣಸುತ್ತೆಲ್ಲಾ ತಿಳಿಗೆಂಪು ಉದ್ಯಾನ.ಹೊರಳಿದರೆ ಹಗಲುಅವನೆದೆಯ ಮಗ್ಗುಲು ನನ್ನಇಂದು ನಾಳೆ ನಿನ್ನೆಗಳೆಲ್ಲಾಕಣ್ಣು ಕೂಡಿದಕ್ಷಣದ ಧ್ಯಾನದಲ್ಲಿ ಅದೇ ಹಾದಿಯಲಿ ಮರಳುವಾಗಮಂಡಿಯೂರಿದ ಸ್ಥಳವ ಮರೆಯದೇನೋಡೆನ್ನುವಅವನಕಣ್ಣು ಹೊಮ್ಮಿಸುವಸಣ್ಣ ಹಾಡಿನ ನಾದ ನಾನು ಸುಮ್ಮನೆ ಇಣುಕಿಣುಕಿನೋಡುವ ನನ್ನ ಕಂಡುಹುಟ್ಟುವಅವರಿವರ ಪ್ರಶ್ನೆಗಳಿಗೆ ಉತ್ತರ ಏನು.? *******

ಉತ್ತರ ಏನು? Read Post »

ಕಾವ್ಯಯಾನ

ನನ್ನೊಳಗಿನ ನೀನು.

ಕವಿತೆ ಶೀಲಾಭಂಡಾರ್ಕರ್ ಹುಡುಕುತ್ತೇನೆ ನಿನ್ನನ್ನು ಲೆಕ್ಕವಿಲ್ಲದನಕ್ಷತ್ರಗಳ ಮಿಣುಕು ಮಿಣುಕುನಾಟ್ಯದೊಳಗೆ.ಆತುರಗಾರ ಚಂದ್ರನೂನಿನ್ನ ನೆನಪಿಸುತ್ತಾನೆ..ಅವಸರದಿ ಅವಿತುಕೊಳ್ಳುವಾಗಮೋಡದ ಸೆರಗಿನೊಳಗೆ ಬೀಸಿ ಬರುವ ತಂಗಾಳಿಯೊಂದುಸದ್ದಿಲ್ಲದೆ ತುಟಿಗಳಿಗೆಮುತ್ತಾಗಿ ಬಿಸಿಯಾಗುವತುಂಟ ಸಮಯದಿನೀನೇ ಇರುವೆ ಆ ಇರುವಿನೊಳಗೆ. ಹಿತ್ತಲ ಮೂಲೆಯ ಗಿಡದಲ್ಲೀಗಅಬ್ಬಲಿಗೆಯ ಶ್ರಾಯ.ಹೂ ಅರಳುವ ಮೃದು ಮಧುರಪರಿಮಳವಾಗಿ ನೀನಿರುವೆ.ಗಂಧ ಸುಗಂಧದೊಳಗೆ. ಸಂಜೆಗಳಲಿ ಕೆಂಪಾಗಿಸೂರ್ಯ ಮುಳುಗುವಾಗಕಾಡುವ ನೆನಪಾಗುವೆ..ಅಂಗಳದಲ್ಲಿ ಆಟವಾಡುವಬುಲ್‍ಬುಲ್ ಜೋಡಿ ಹಕ್ಕಿಗಳಲಲ್ಲೆ ಸಲ್ಲಾಪಗಳ ಸದ್ದು ಗದ್ದಲದೊಳಗೆ. ನಿಶ್ಶಬ್ದವಾಗಿ ಪಿಸುನುಡಿಯೊಂದುಒಳಗಿನಿಂದ ಉಸುರಿದಾಗಯುಗಗಳಿಂದ ಹುಡುಕುತಿದ್ದನನ್ನನ್ನೇ ಎಲ್ಲೆಡೆ.. ಕಂಡುಕೊಂಡೆ.,ನಿನ್ನ ಕಂಡಾಗ ನನ್ನೊಳಗೆ. **************************

ನನ್ನೊಳಗಿನ ನೀನು. Read Post »

ಕಾವ್ಯಯಾನ

ಎರಡು ಕವಿತೆಗಳು

ಶೋಭಾ ನಾಯ್ಕ ಹಿರೇಕೈ ಅವರ ಎರಡು ಕವಿತೆಗಳು ಶೋಭಾ ನಾಯ್ಕ ಹಿರೇಕೈ ಕವಿತೆ – ೧…ಹೆಚ್ಚೆಂದರೇನು ಮಾಡಿಯೇನು? ಅವರಂತೆ ತಣ್ಣೀರಲ್ಲಿ ಮಿಂದುನಲವತ್ತೆಂಟನೆಯ ದಿನದವ್ರತ ಮುಗಿಸಿ,ಆ ಕೋಟೆ ಕೊತ್ತಲಗಳ ದಾಟಿಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿನಿನ್ನ ಬಳಿ ನಡೆದೇ….ಬಂದೆನೆಂದು ಇಟ್ಟುಕೋಹೆಚ್ಚೆಂದರೆ ನಾನಲ್ಲಿಏನು ಮಾಡಿಯೇನು? ‘ಬಾಲಕನಾಗಿಹೆ ಅಯ್ಯಪ್ಪ’ ಈಹಾಡು ಹಾಡು ಕೇಳಿ ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ..ನಿನಗೂ..ಯಾವ ಪರಕ್ಕೂ ..ಉಳಿದಿಲ್ಲ ನೋಡು ಎಷ್ಟೋ ವರ್ಷ ನಿಂತೇ ಇರುವೆಬಾ ಮಲಗಿಕೋ ಎಂದುಮಡಿಲ ಚೆಲ್ಲಿನನ್ನ ಮುಟ್ಟಿನ ಕಥೆಯನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯನಿನಗೆ ಹೇಳಿಯೇನು ಹುಲಿ ಹಾಲನುಂಡ ನಿನಗೆತಾಯ ಹಾಲ ರುಚಿ ನೋಡುಹುಳಿಯಾಗಿದೆಯೇನೋ ..ಎನ್ನುತ್ತಲೇತೇಗಿಸಲು ಬೆನ್ನ ನೀವಿಯೇನು ದೃಷ್ಟಿ ತೆಗೆದು ನಟಿಗೆ ಮುರಿದುಎದೆಗೊತ್ತಿಕೊಂಡು,ಹಣೆಗೊಂದು ಮುತ್ತಿಕ್ಕಿಥೇಟ್ ನನ್ನ ಮಗನಂತೆ ಎನ್ನುತ್ತಹದಿನೆಂಟನೆಯ ಕೊನೆಯ ಮೆಟ್ಟಿಲ ಕೆಳಗಿಳಿದ ಮೇಲೂ….ಮತ್ತೊಮ್ಮೆ ಮುಗುದೊಮ್ಮೆ ನಿನ್ನತಿರುತಿರುಗಿ ನೋಡಿಯೇನು ಈಗ ಹೇಳುನನ್ನ ಮುಟ್ಟು ನಿನಗೆ ಮೈಲಿಗೆಯೇನು?…………….. ಕವಿತೆ -೨ ಗುರ್ ಮೆಹರ್ ಅಂತರಂಗ ಅವರಿವರ ಬಂದೂಕ ತುದಿಯಲ್ಲಿಹೂವಿನ ಮೊನಚಿತ್ತೇ?ಇಲ್ಲವಲ್ಲಮತ್ತೇಯುದ್ಧವನ್ನು ಯುದ್ಧವಲ್ಲದೆಇನ್ನೇನನ್ನಲಿ? ಯಾವ ಕಣಿವೆ ಬದುಕಿಸುವುದುನಾ ಕಳಕೊಂಡವಾತ್ಸಲ್ಯವನ್ನು ?ಯಾವ ಕುರ್ಚಿಯ ಬಳಿಕೇಳಲಿ ನ್ಯಾಯ? ಬೇಕೇ?ನಮ್ಮ ಬಿಸಿ ರಕ್ತಕೂಕೊಳಚೆಯ ಗಬ್ಬುಕಪ್ಪು -ಕೇಸರಿಗಳ ಜಿದ್ದಾ ಜಿದ್ದು ಬಣ್ಣದ ಮೇಲೂ ರಾಡಿಯಎರಚುತಿರುವವರಾರೋ?ಈಚೆಗಿರುವುದೇ ಅಚೆಆಚೆಗಿರುವುದೇ ಈಚೆಈಚೆ ಅಚೆಗಳಾಚೆಅದೇ ಮಣ್ಣು ,ಅದೇ ನೀರುಅದೇ ಗಂಧ, ಅದೇ ಗಾಳಿರಕ್ತ ಬೇರೆಯೇ ಮತ್ತೆ? ಬೇಕೆ ಯುದ್ಧ?ನನ್ನಂಥ ತಬ್ಬಲಿಗಳ ಕೇಳಿ ಹೇಳು ಅಶೋಕ‘ಕಳಿಂಗ’ ನಿನ್ನ ಕಾಡಿದಂತೆ‘ಕಾರ್ಗಿಲ್ ‘ ನನ್ನ ಕಾಡುತ್ತಿದೆಯುದ್ಧವನ್ನು ಯುದ್ಧವೆನ್ನದೆಇನ್ನೇನನ್ನಲಿ?…….(ಗುರ್ ಮೆಹರ್: ಕಾರ್ಗಿಲ್ ಯುದ್ಧದಲ್ಲಿ ತಂದೆಯನ್ನು ಕಳೆದುಕೊಂಡು ಅನಾಥಳಾದ ಮಗಳು) ****************

ಎರಡು ಕವಿತೆಗಳು Read Post »

ಕಾವ್ಯಯಾನ

ಕೊಡುವುದಾದರೂ ಯಾರಿಗೆ ?

ಚಿತ್ರ ಮತ್ತು ಕವಿತೆ : ವಿಜಯಶ್ರೀ ಹಾಲಾಡಿ. ಹೌದುಈ ಪ್ರೀತಿಯನ್ನುಮೊಗೆಮೊಗೆದುಕೊಡುವುದಾದರೂ ಯಾರಿಗೆ ? ನೇರಳೆಮರಕ್ಕೆ ಅಳಿಲಿಗೆಬೆಚ್ಚನೆ ಗೂಡಿನ ಹಕ್ಕಿಗೆ ? ಹೆಣ್ತನದ ಪರಿಧಿಗೆ ಎಂದೂ ದಕ್ಕದಮುಖ –ಮುಖವಾಡಗಳು …ರಾತ್ರಿ -ಹಗಲುಗಳನ್ನುಗೆಜ್ಜೆಕಾಲಿನಲ್ಲಿ ನೋಯಿಸಲೆ …ಯಾತನೆಯನ್ನು ನುಂಗುತ್ತಿರುವೆಸಂಜೆಯ ಏಕಾಂತಗಳಲ್ಲಿಹೆಪ್ಪುಗಟ್ಟಿದ ಇರುಳುಗಳಲ್ಲಿ .. ಬೊಗಸೆಯೊಡ್ಡಿದ್ದೇನೆಮಂಡಿಯೂರಿದ್ದೇನೆಹಟಮಾರಿ ಕಡಲಾಗಿದ್ದೇನೆ..ತರ್ಕಕ್ಕೆ ನಿಲುಕದ ಗಳಿಗೆ-ಗಳಲ್ಲಿ ಒಂಟಿಹೂವಂತೆನಿಂತುಬಿಟ್ಟಿದ್ದೇನೆ .. ಲೆಕ್ಕವಿಟ್ಟಿಲ್ಲ ಕೋಗಿಲೆಹಾಡಿದ ಹಾಡುಗಳನ್ನು… ಉದುರಿಬಿದ್ದ ಗರಿಗಳನ್ನುಮತ್ತೆ ಹುಟ್ಟಿಸಿಕೊಳ್ಳಲುಸಾಧ್ಯವಾಗುವುದಾದರೆಪ್ರೀತಿಯಿಂದ ಆರ್ತಳಾಗಿದ್ದೇನೆ.

ಕೊಡುವುದಾದರೂ ಯಾರಿಗೆ ? Read Post »

ಕಾವ್ಯಯಾನ

ನಾವೀಗ ಹೊರಟಿದ್ದೇವೆ

ಕವಿತೆ ಶೀಲಾ ಭಂಡಾರ್ಕರ್ ನಾವೀಗ ಹೊರಟಿದ್ದೇವೆಒಂದೊಮ್ಮೆ ನಮ್ಮದಾಗಿದ್ದನಮ್ಮ ಊರಿಗೆ. ಯಾರೊಬ್ಬರಾದರೂತಡೆಯುವವರಿಲ್ಲವೇ!! ನಮ್ಮನ್ನುಹೋಗಬೇಡಿರೆಂದು ಕೈ ಹಿಡಿದು.ಈ ಪಟ್ಟಣ ನಿಮ್ಮದೂ ಕೂಡ ಎಂದು. ಇಟ್ಟಿಗೆ ಮರಳು ಹೊತ್ತ ತೋಳುಗಳುಸುತ್ತಿಗೆ ಉಳಿ ಹಿಡಿದ ಕೈಗಳುಗಂಟು ಮೂಟೆಗಳನ್ನುಹೊತ್ತು ಕೊಂಡು ಹೊರಟಿವೆ,ಭಾರವಾದ ಮನಸ್ಸನ್ನುಎದೆಯೊಳಗೆ ಮುಚ್ಚಿಟ್ಟು. ಯಾರಿಗೂ ನೆನಪಾಗಲಿಲ್ಲವೇ..ತಮ್ಮ ಮನೆಗಳಿಗೆಗಾರೆ ಮೆತ್ತಿದ, ಬಣ್ಣ ಹಚ್ಚಿದಕೈಗಳ ಹಿಂದೆ ಒಂದು ಉಸಿರುಹೊತ್ತ ಜೀವವಿದೆ.ನಮಗಾಗಿ ದುಡಿದ ಚೇತನವಿದೆ.ಅನಿಸಲಿಲ್ಲವೇ ಒಮ್ಮೆಯೂ. ಕಾಲೆಳೆದು ನಡೆದಿದ್ದೇವೆ.ದೇಹಕ್ಕಿಂತ ಭಾರವಾದಉಸಿರನ್ನು ಹೊತ್ತುಕೊಂಡು.ಊರು ತಲುಪುವ ಆಸೆಯಿಂದ.ನಮ್ಮದೇನಾದರೂ ಜಾಗ,ಒಂದಾದರೂ ಕುರುಹು..ಅಲ್ಲಿಯಾದರೂ..ಉಳಿದಿರಬಹುದೆಂಬ ನಿರೀಕ್ಷೆಯಿಂದ. ಹೊರಟಿದ್ದೇವೆ ಒಂದೊಮ್ಮೆನಮ್ಮದಾಗಿದ್ದ ನಮ್ಮ ಊರಿಗೆ. *******************

ನಾವೀಗ ಹೊರಟಿದ್ದೇವೆ Read Post »

You cannot copy content of this page

Scroll to Top