ಭೂಮಿ ತೂಕದ ನಡಿಗೆ
ಕಲಿಯಲು ಶಾಲೆ
ಕಲಿಸಲು ಗುರು
ತಿರುಗಾಡಲು ಗಾಡಿಯೂ ನನಗೆ
ಅವಳಿಗೇನಿದೆ
ಕಾವ್ಯಯಾನ ಯಕ್ಷ ಪ್ರಶ್ನೆ ನೇತ್ರ ಪ್ರಕಾಶ್ ಹಲಗೇರಿ ದಿನೇ ದಿನೇ ನನ್ನಸಾವಿರಾರು ಪ್ರಶ್ನೆಬೆಳೆಸಿದ ಪರಿಯೇಬೇರೆ ನನ್ನಮ್ಮ ಇಂದಿನ ನನ್ನ ಬದುಕೇಬೇರೆ ಭಿನ್ನಾವಿಭಿನ್ನ !ಸಂಸ್ಕೃತಿ ಸಂಸ್ಕಾರಗಳೇಮೌಢ್ಯಗಳಿಲ್ಲಿ ಕೇಳಿನ್ನ ಸರಿ ತಪ್ಪು ನೈತಿಕ ನೈಮಿತ್ತಿಕನೆಲೆಗಟ್ಟನ್ನು ಕಲಿಸಿದೆ ನೀನುತಿಳಿ ಹೇಳಿದ್ದನ್ನು ಕಲಿತೆ ನಾನುಪೂಜೆ ಪುನಸ್ಕಾರ ಬೇಡವೇನು!? ದೇವರು ದಿಂಡರು ಶಾಸ್ತ್ರಸಂಪ್ರದಾಯಗಳೆಲ್ಲ ಗೊಡ್ಡುಈ ಜನರಂತೆ ಬದುಕಲಾಗುತ್ತಿಲ್ಲಏಕೆ ಹೀಗೆ ಪ್ರಪಂಚ ಅರ್ಥವಾಗುತ್ತಿಲ್ಲ! ನೇರಕ್ಕೆ ನೇರ ಖಾರಕ್ಕೆ ಖಾರಸರಿ ಕಾಣದ ವರ್ತನೆಗಳ ಖಂಡನೆಸಹಿಸಲಾಗದ ಮನ ಮಂಡನೆಹೊಂದಿಕೆ ಎಷ್ಟು ಕಷ್ಟವಮ್ಮ!? ನಿನ್ನ ಮತ್ತು ನೀ ಕಲಿಸಿದಮಾನ ಮರ್ಯಾದೆಯೇ ಬೇರೆಲೋಕದ ಅಪಾರ ನಿದಿಯಲ್ಲಿ ಅಡಗಿದೆಯೆ? ಗೌರವಧಾರೆ? ಇನ್ನೂ ಮಿಕ್ಕಿದೆ ನನ್ನಮ್ಮನಲ್ಲಿಕೇಳುವ ಯಕ್ಷ ಪ್ರಶ್ನೆ ಮಂಡಲಪ್ರಶ್ನೆಗೆ ಪ್ರಶ್ನೆಯೇ ಉತ್ತರಗಳೇ ಹೌಹಾರಿ ಬದುಕುತ್ತಿರುವೆ ಅಮ್ಮ ನೀ ಹೇಳು ಉತ್ತರ ನನ್ನ ಯಕ್ಷಾತೀತ ಪ್ರಶ್ನೆಗಳಿಗೆ ಕಾತರ!? ***************************
ಕ್ಷಣಕ್ಷಣಕೂ ಬಯಕೆ ಭಾವದ ಮೀನು
ನೀನೋ ನೀರವ ನಿಂತ ನೀರು..
“ಕರುಣೆ ಇಲ್ಲವೇ ನಿನ್ನೊಳು” Read Post »
ಕಾವ್ಯಯಾನ ಚಿಕ್ಕುಡದಮ್ಮನ-ಗಿರಿ ನೇತ್ರ ಪ್ರಕಾಶ್ ಹಲಗೇರಿ (ನನ್ನ ತವರೂರ ಬಳಿ ಇರುವ ಚಿಕ್ಕುಡದಮ್ಮನ ಗಿರಿಯ ಜೊತೆಗಿನ ಬಾಲ್ಯದ ನೆನಪುಗಳ ಮೆಲುಕು ಈ ಕವಿತೆ) ಅಂದು ಕಡೇ ಶ್ರಾವಣದ ಮಂಗಳವಾರಜಿಟಿ ಜಿಟಿ ಮುಸುಲಧಾರೆಯ ಹೊದಿಕೆಬದುಕಿಗೆ ವಿರಾಮ ಜನಸ್ತೋಮ ಆರಾಮಮಜ್ಜನ ಊರು- ಕೇರಿಯದು ಮಕ್ಕಳೊಂದಿಗೆ ಚಕ್ಕಡಿ, ಟ್ರೈಲರ್, ಟ್ರಾಕ್ಟರ್ ಅಲ್ಲಿಲ್ಲಿ ಕಾರುವ್ಯಾನ್ ಬೈಕ್ ಗಳು ಥರಾವರಿ ಒನಪು ಒಯ್ಯಾರಹೆಂಗೆಳೆಯರ ಒಗ್ಗಟ್ಟಿನ ರುಚಿಕಟ್ಟಿನಾ ಅಡುಗೆದನಕರು ಕಾಯುವ ಕಾವಲು ದೇವಿಯ ಹರಕೆಗೆ ಹರ್ಲಿಪುರ ಯೆಲೋದಳ್ಳಿ ಮದ್ಯೆ ಚಿಕ್ಕದೊಂದುಗಿರಿ ಸಾಲು ಅದರ ಮೇಲೊಂದು ಕಲ್ಲ ಗುಡಿಬಸವಾಪಟ್ನದಿಂದ ಯೆಕ್ನಳ್ಳಿವರೆಗೆ ಹಬ್ಬಿದ ಅರಾವಳಿಪರ್ವತ ನೆನಪಿಗೆ ತರುವ ತರುಲತೆಗಳ ಚಿಕ್ಕುಡ್ದ ಗುಡ್ಡವೆಂದರೂ ಬೆಟ್ಟದಂತೇ ಭಾವ ಅದಕ್ಕಾಗಿ ಏರಲೇಬೇಕು ತಾಯಿ ನೋಡಲು ಉಘೇ ಹಾಡಲುರಂಗು ರಂಗಿನ ಬಣ್ಣದುಡಿಗೆಗಳ ಚಿಟ್ಟೆಯೋಪಾದಿಯಲ್ಲಿಸಾಗುತಿರುವ ಸರದಿ ಮಂದಿ ಅಲ್ಲಿಲ್ಲ ಸಂದಿ ಗೊಂದಿ ಅಲ್ಲಿಂದ ಸುತ್ತಲೂ ವೀಕ್ಷಣೆ ಹಾಲಸ್ವಾಮಿ ದುರ್ಗಮ್ಮಪುಣ್ಯ ಸ್ಥಳದ ಗಿರಿವೃಂದ ಸೂಳೆಕೆರೆಯಿಂದ ಬರುವ ಥಳುಕುಬಳುಕಿನ ದೊಡ್ಡ ಚಾನಲ್ ಜೊತೆಗೆ ಮರಿ ಕಾಲುವೆ ಝರಿಸುತ್ತೆಲ್ಲ ಅಡಿಕೆ ಬಾಳೆ ತೆಂಗು ಕಂಗು ಭತ್ತ ಮುತ್ತುಗಳ ಐಸಿರಿ ಕೆಮ್ಮಣ್ಣಿನ ಕಾಲ್ದಾರಿಗಳ ಅಂಕುಡೊಂಕು ಬಳುಕು ಬೆಡಗಿಯಂತೆಅಕ್ಕಪಕ್ಕದ ಊರುಗಳ ವಿಹಂಗಮ ನೋಟ ಕಣ್ಮನ ಸೆಳೆತಸಾಲಾಗಿ ನಿಲ್ಲಿಸಿ ಮನುಷ್ಯರಿಗೆ ತೊಡಿಸಿದ ಬಿಳಿಯಂಗಿ ಕೆಂಪುಕರಿ ಟೋಪಿಯಂತೆ ಕಂಗೊಳಿಸುವ ವಿವಿಧ ಹೆಂಚಿನ ಮನೆಗಳು! ಗುಡ್ಡದ ತಪ್ಪಲಲ್ಲಿ ಖಾರಾ ಮಂಡಕ್ಕಿ ಮಿರ್ಚಿ ಬೋಂಡಾಒಗ್ಗರಣೆ ಘಮ ಇದರೊಂದಿಗೆ ಬೆಂಡು ಬತ್ತಾಸು ಜಿಲೇಬಿಮೈಸೂರು ಪಾಕ್ ರುಚಿ ಪೀಪಿ ಬಲೂನ್ ಬಾಲ್ ಕೊಳಲುಬಳೆ ಸರ ಕೇಣಿಯವರತ್ತ ಧಾಪುಗಾಲು ಅವನ್ನು ಬೇಗ ಕೊಳ್ಳಲು ದೇವಿ ದರ್ಶನ ಮುಗಿಸಿ ಹಿಂತಿರುಗುವಾಗ ಚಾನಲ್ ದಡದಲ್ಲಿಭೋಜನ ಅಲ್ಲಿ ಗಿಳಿ ಕೋಗಿಲೆಗಳ ಕೂಜನ ಜಿಬುರಿನ ಮಳೆಸ್ನಾನಬಾಳೆ ಎಲೆಯ ಆಸ್ವಾದ ರೊಟ್ಟಿ ಚಟ್ನಿ ಬುತ್ತಿ ಹಿಂಡಿ ಪಲ್ಯ ಪಚಡಿರವೆ ಉಂಡಿ ಕೇಸರಿಬಾತ್ ರಸದೌತಣ ಸುಖದೊರತೆಯ ಸಿಹಿ ತಾಣ… ***********************
You cannot copy content of this page