ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಗಜಲ್ ದುನಿಯಾ

ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ ನೆನಪು

ದಾಳಿಯನಿಡುತ್ತಿವೆ ಬಾಲ್ಯದ ನೆನಪುಗಳು
ನಿದ್ದೆ ಬಾರದ ರಾತ್ರಿಯಲಿ,
ಹಿಂದೆ ಕೂಡಿರಲು ಕನಸುಗಳು
ತಂದೆ ತಾಯಿ, ಅಣ್ಣ ಅಕ್ಕ ,ತಂಗಿ ತಮ್ಮಂದಿರು,
ಎಷ್ಟೊಂದು ಅತ್ಮೀಯತೆ,
ಅವಿನಾಭಾವ ಸಂಬಂಧಗಳು,
ಒಂದು ಐಸ್ ಕ್ಯಾಂಡಿಯನ್ನು ಎಲ್ಲರೂ ಕಚ್ಚಿ ತಿಂದು ಸಂಭ್ರಮಿಸಿದಾಗ
ಕಿಚ್ಚು ಹಚ್ಚೆಂದಿತ್ತು
ಮನಸ್ಸು
ನಾಕಕ್ಕೆ..!
ಅದರೆ
ತಬ್ಬಲಿಯಾದೆ ಮೊದಲ ಬಾರಿ ಅಪ್ಪ ಅಮ್ಮ ನ ಕಳೆದು,
ತಬ್ಬಲಿಯಾದೆ ಎರಡನೇ ಬಾರಿ ಒಡಹುಟ್ಟಿದವರೇ ದಾಯಾದಿಗಳಾದಾಗ,
ಮೊಳಕೆ ಬರುವಾಗಲೇ ಕರುಳ ಕುಡಿಯ ಚಿವುಟಿದಾಗ ಕೊನೆಯಬಾರಿ ತಬ್ಬಲಿಯಾದೆ,ಯಾಕೆ ಈ
ಬದುಕು…?
ಸಂಬಂಧ,ಅತ್ಮೀಯತೆ ಇಲ್ಲದ ,
ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!
ಶಂಕರ್ ಪಡಂಗ ಕಿಲ್ಪಾಡಿ

ಬೇಗಡೆಯ ಬೆಡಗು ಬಿನ್ನಾಣ ?
ನೆನಪುಗಳು ದಾಳಿಯನಿಡುವಾಗ…!!

ಶಂಕರ್ ಪಡಂಗ ಕಿಲ್ಪಾಡಿ ಅವರ ಕವಿತೆ ನೆನಪು Read Post »

ಕಾವ್ಯಯಾನ, ಗಜಲ್ ದುನಿಯಾ

ವಾಣಿ ಭಂಡಾರಿ ಅವರ ಗಜಲ್

ವಾಣಿ ಭಂಡಾರಿ ಅವರ ಗಜಲ್
ಸಂತೆಯಲಿ ಕೊಳೆತ ಹಣ್ಣುಗಳ ಕಡೆಯೇಕೆ ಈ ಪಾಟಿ ನೋಟ
ನೀನು ದೂರುವೆ ಎಂದು ಮೊದಲೇ ತಿಳಿದಿದ್ದರೆ ದೂರವೇ ಇರುತ್ತಿದ್ದೆ ಗೆಳೆಯ.

ವಾಣಿ ಭಂಡಾರಿ ಅವರ ಗಜಲ್ Read Post »

ಕಾವ್ಯಯಾನ, ಗಜಲ್ ದುನಿಯಾ

ಗಜಲ್-ರೇಷ್ಮಾ ಕಂದಕೂರ

ಗಜಲ್ಕಣ್ಣಾಲಿಗಳ ಕಿರು ಹನಿಗೆ ಗೊತ್ತು
ಒಳ ವೇದನೆಯ ಉಸಿರಿಗೆ ಗೊತ್ತು

ತಳಮಳದ ಭಾವ ಹಪಹಪಿಗೆ ಸೋತು
ಕಳವಳದ ಸಾರ ಬಸಿರಿಗೆ ಗೊತ್ತು

ತರುಲತೆ ಮಂಪಿನ ಬೇಗೆಗೆ ಸೇರಿತು
ಒಲವ ಮಂದಾರ ಸೊಬಗಿಗೆ ಕಳೆ ಗುಂದಿತ್ತು.

ಆಲಿಂಗನದ ಮಧುರ ತನುವಿಗೆ ತಿಳಿದಿತ್ತು
ಒಡನಾಟದ ಸವಿ ನಲಿವಿಗೆ ಕಂಟಕವಾಗಿತ್ತು

ಕೂಟದ ಆಟ ಅಹಮಿಕೆಯ ಬಲೆಗೆ ಬಿದ್ದಿತು
ನೋಟದ ಕೀಟ ರೇಷಿಮೆಗೆ ವಿಷಾದದ ನಗೆ ಬೀರಿತ್ತು.

ಗಜಲ್-ರೇಷ್ಮಾ ಕಂದಕೂರ Read Post »

ಕಾವ್ಯಯಾನ, ಗಜಲ್ ದುನಿಯಾ

ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ ಜುಲ್ ಕಾಫಿಯಾ ಗಝಲ್ ಸದ್ಭಾವಗಳ ತುಂಬಿಟ್ಟ ಮಾತಲ್ಲಿ ಹೃದಯಗಳ ಗೆಲ್ಲುವುದು ಖಾತ್ರಿಯಾಗಿದೆಸ್ವಾರ್ಥಿಗಳ ಲೋಕದಲ್ಲಿ ಮುಗ್ದ ಮನಸ್ಸುಗಳ ಕದಡುವುದು ಖಾತ್ರಿಯಾಗಿದೆ ಸ್ಫುರಿಸುತಿದೆ ಮನದೊಳಗೆ ಅನುಕ್ಷಣ ನೂತನ ಕನಸುಗಳ ನಿರವದ್ಯ ಚಿಲುಮೆಉದರದ ಕ್ಷುಧೆಗೆ ಕೈಗೂಡದ ಬಯಕೆಗಳ ಹೋಮಿಸುವುದು ಖಾತ್ರಿಯಾಗಿದೆ ಬೆರಗು ಕಣ್ಗಳಿಗೆ ಸಡಗರವು ತೀರವಿಲ್ಲದ ಜ್ಞಾನ ಸಾಗರದ ಸ್ವಚ್ಚಂದ ವಿಹಾರಹರಕಲು ಜೇಬಿಂದ ಆಸರೆಯಿಲ್ಲದ ಆಸೆಗಳ ಬೀಳಿಸುವುದು ಖಾತ್ರಿಯಾಗಿದೆ ಮುರುಕಲು ಮನೆಯೆದುರು ಜಗದ ತಾಪಕೆ ನಲುಗಿದ ಹೂವುಗಳ ತೋರಣಮರಣವೂ ಕರುಣೆ ತೋರದಂತೆ ಜೀವಗಳ ಹಿಂಸಿಸುವುದು ಖಾತ್ರಿಯಾಗಿದೆ ಅಲೆಯುತಿವೆ ನಿರಂತರ ನಿಶ್ಯಕ್ತ ಕಾಲ್ಗಳು ‘ವಿಜಯ’ ಪಥದ ಜಾಡು ಹಿಡಿದುಅಗಮ್ಯವ ಸೇರುವ ಭ್ರಮೆಯಲ್ಲಿ ಕನಸುಗಳ ಕಮರಿಸುವುದು ಖಾತ್ರಿಯಾಗಿದೆ. ———————————— ವಿಜಯಪ್ರಕಾಶ್ ಕೆ ರೆಪ್ಪೆಗಳನು ಮಿಟುಕಿಸದ ಕಂಗಳಲಿ ಅಪೇಕ್ಷೆಗಳ ಕೊಲ್ಲುವುದು ಖಾತ್ರಿಯಾಗಿದೆತುಡಿತಕೆ ಮಿಡಿಯದ ಮನದಿ ಮರುಕಗಳ ಮುದುಡಿಸುವುದು ಖಾತ್ರಿಯಾಗಿದೆ ಸ್ವೇಚ್ಛೆಯಲಿ ಘೀಳಿಡುತಿಹುದು ಮುಗ್ಧತೆಯ ಛಾಯೆ ಕುಣಿಕೆಗೆ ಕೊರಳೊಡ್ಡಿದಂತೆಆಸರೆಗಾಣದ ಅಕ್ಕರೆಯಲಿ ಹಿಂಜಿ ಭಾವನೆಗಳ ಹಿಸುಕುವುದು ಖಾತ್ರಿಯಾಗಿದೆ ಅನತಿ ದೂರದಲೇ ಹೊಳೆಯುತಿಹುದು ಹೊಂಗನಸು ಮುಗಿಲ ಚೆಲುವಿಗೆ ನೆಚ್ಚಿಬೆಚ್ಚಗಾಗದ ವಾಂಛೆಗಳೊಳು ಕ್ಲೇಶ ಅಶ್ರುಗಳ ಕುಂದಿಸುವುದು ಖಾತ್ರಿಯಾಗಿದೆ ನಂಟ ಸೆಳೆದ ಅಸುವಿನಲಿ ಮರೀಚಿಕೆಯಾಗುತಲಿದೆ ಹಿತದ ಸಖ್ಯ ಕಳಚಿ ಬೆಸುಗೆಹರೆಯದ ಹಂಬಲಿಕೆಯಲಿ ಹುಸಿಬಣ್ಣಗಳ ಮಸುಕಾಗಿಸುವುದು ಖಾತ್ರಿಯಾಗಿದೆ ಅಂಕೆ ಮೀರುತಿಹ ಚಲನೆಯಲಿ ಸ್ಥಿತಪ್ರಜ್ಞಳಾಗು ‘ನಯನ’ ಉತ್ಸುಕತೆಯ ಸೌಖ್ಯಕೆಹುಂಬತನದ ಪರಮಾವಧಿಯಲಿ ಹಸಿಸಂಚುಗಳ ಕಿವುಚುವುದು ಖಾತ್ರಿಯಾಗಿದೆ. ————————– ನಯನ. ಜಿ. ಎಸ್.

ಗಜಲ್ ಜುಗಲ್ ಬಂದಿ Read Post »

You cannot copy content of this page

Scroll to Top