ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ದುರಾಸೆ ಹಿಂದೆ ದುಃಖ

ಕಥೆ ದುರಾಸೆ ಹಿಂದೆ ದುಃಖ ಲಕ್ಷ್ಮೀದೇವಿ ಪತ್ತಾರ   ಮಂಗಲಾ, ಸುಮಾ ನೆರೆಹೊರೆಯವರು.ಸಾಯಂಕಾಲದ ಹೊತ್ತಾದರೆ ಸಾಕು ಎದುರು ಮನೆ ಸುಮಾ,ಮಂಗಲಾಳ ಮನೆ ಕಟ್ಟಿ ಮೇಲೆ ಕುಳಿತು ಹರಟೆ ಹೊಡೆಯುತ್ತಾ ಕೂಡುವುದು ಎಷ್ಟೋ ವರ್ಷಗಳಿಂದ ನಡೆದುಕೊಂಡು ಬಂದಿದೆ.ಹೀಗೆ ಸಾಯಂಕಾಲ ಎಂದಿನಂತೆ ಬಂದ ಸುಮಾಳನ್ನು ಕುರಿತು “ಏನೇ ಸುಮಾ ನಿನ್ನೆ ಎಲ್ಲಿಗೋ ಹೋದಂಗಿತ್ತು ಎಲ್ಲಿಗೆ ಹೋಗಿದ್ದೆ” ಕೇಳಿದಳು ಮಂಗಲಾ. “ಏನು ಕೇಳ್ತೀಯಾ ಮಂಗಲಾ ಹಂಪೆ ಉತ್ಸವದ ಅಂದ-ಚಂದ. ನೋಡಲು ಎರಡು ಕಣ್ಣು ಸಾಲೋದಿಲ್ಲ. ಅಬ್ಬಾ ಒಂದೊಂದು ಕಡೆ ಒಂದೊಂದು ಕಾರ್ಯಕ್ರಮ. ಬಗೆ ಬಗೆ ಸಾಮಾನು. ಮಸ್ತ ಊಟದ ವ್ಯವಸ್ಥೆ. ಕೈಯಾಗ ದುಡ್ಡಿದ್ದರ ಸಾಕು. ಏನು ಬೇಕು ಅದನ್ನು ತಗೋಬಹುದು. ಅಲ್ಲದೆ ಫ್ರೀ ಬಸ್ ಬಿಟ್ಟಾರ. ಫ್ರೀ ಊಟ, ಫ್ರೀ ಬಸ್ ನೀನು ಹೋಗಿ ಬಾರಲ್ಲ “ಎಂದಳು ಸುಮಾ. ನನ್ನ ಗಂಡಂದು ಬರೇ ದುಡ್ಡೇ ಹುಚ್ಚು. ಮುಂಜಾಲೆ ಹೋದರೆ ಒಮ್ಮೆಲೆ ಕತ್ತಲಾದ ಮೇಲೆ ಮನೆ ಕಾಣೋದು. ಎಲ್ಲಿಗೂ ಕರೆದುಕೊಂಡು ಹೋಗುವುದಿಲ್ಲ ಎಂದು ಮಂಗಲಾ ತನ್ನ ದುಃಖ ತೋಡಿಕೊಂಡಳು. ಅದಕ್ಕೆ ಸುಮಾ ಒಳ್ಳೆಯ ಉಪಾಯವನ್ನೇ ಸೂಚಿಸಿದಳು. ಹೇಗೂ ನಿನ್ನ ಗಂಡ ದುಡೀಲಿಕ್ಕೆ ಹೋದಾಗ ನೀನು, ನಿನ್ನ ಮಗನೊಂದಿಗೆ ಹೋಗಿ ಬಾ. ನಮ್ಮ ಊರು ಜನ ಬೇಕಾದಷ್ಟು ಮಂದಿ ಹೊಂಟಾರ. ನೀನು ಹೋಗಿ ಸಾಯಂಕಾಲದೊಳಗೆ ಬಂದು ಬಿಡು” ಎಂದಳು. ಇಷ್ಟು ಹೇಳೋದು ಒಂದೇ ತಡ ಮೊದಲೇ ಗಯ್ಯಾಳಿ, ಎಲ್ಲದರ ಹಪಾಹಪಿ ಇರುವ ಮಂಗಲಾ ತನ್ನ  ಮಗನನ್ನು          ಕರೆದುಕೊಂಡು ಫ್ರೀ ಬಸ್ ಹತ್ತಿ ಹೊರಟೇ ಬಿಟ್ಟಳು. ಹಾಗೆ 4-5 ವರ್ಷದ ಮಗನಿಗೆ, ಮಂಗಲಾಗೆ ಹಂಪಿಯ ಸೋಬುಗು ಮೆರಗು, ಜನದಟ್ಟಣೆ ಕಂಡು ಬೆರಗಾಗಿ ನಾವು ಎಲ್ಲಿಗೆ ಬಂದಿದ್ದೇವೆ ಎಂದು ಹೌಹಾರುವಂತಾಯಿತು. ಗಟ್ಟಿಗಿತ್ತಿ ಮಂಗಲಾ ಓಡ್ಯಾಡಿ ತನ್ನ ಮಗನಿಗೆ ಆಟಿಗೆ ಸಾಮಾನು ತನಗೆ ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಂಡು ಊಟದ ವ್ಯವಸ್ಥೆ ಮಾಡಿದ್ದಲ್ಲಿಗೆ ಬಂದಳು. ಅಲ್ಲೆ ಇದ್ದ ಪರಿಚಿತೆ ಮಹಿಳೆ ಜೊತೆ ಮಾತಾಡಿದಳು. ನಂತರ ಬಹಳ ನುಕೂ-ನುಗ್ಗಲು ಇದ್ದ ಕಾರಣ ಮಗುವನ್ನು ಪರಿಚಿತಳಿಗೆ ಕೊಟ್ಟು “ನಿನಗೂ ಒಳಗ್ಹೋಗಿ ಊಟ ತರುವೆ. ಇಲ್ಲೆ ನನ್ನ ಮಗು ನೋಡಿಕೊಂಡಿರಿ” ಎಂದು ಹೇಳಿ ಒಳಗ್ಹೋದಳು. ಅಲ್ಲೆಗೆ ಆಕಸ್ಮಿಕವಾಗಿ VIP ಆಗಮನವಾಗಿ ಅವನ ಗುಂಪಿನ ಹಿಂದೆ ಮಂಗಳಾ ವಿಶೇಷ ಊಟವಿದ್ಹೆಡೆಗೆ ಹೋದಳು. ನೋಡಿದರೆ ಬಗೆ ಬಗೆ ಅಡುಗೆ ಮೊದಲೇ ಅತಿ ಆಶೆಯ ತಿನಿಸು ಬಡಕಿ ಮಂಗಳ ಒಂದೊಂದೆ ಅಡುಗೆ ತಿನ್ನುತ್ತಾ ಹೋದಳು. ಒಂದೊಂದು ವಿಶೇಷ ರುಚಿ ಹೊಂದಿರುವ ಅಪರೂಪದ ಅಡುಗೆ. ಈ ತರದ ಊಟ ಒಮ್ಮೆಯೂ ಮಾಡಿರದ ಮಂಗಳ ಉಣ್ಣುತ್ತಾ ಉಣ್ಣುತ್ತಾ ತನ್ನ ಮಗುವನ್ನು, ಮಗುವನ್ನು ಕರೆದುಕೊಂಡು ಕುಳಿತಿರುವ ಪರಿಚಯದವಳನ್ನು ಮರೆತಳು. ಆಕೆಗೆ ಊಟ ಒಯ್ಯಬೇಕೆಂಬುದ ಮರೆತು ಹಾಗೆ ಗದ್ದಲದ ನಡುವೆ ಹೊರಬಂದಳು. VIP ನೋಡಲು ನೂಕು ನುಗ್ಗಲು. ಈ ಗದ್ದಲದಲ್ಲೆ ಪ್ಲಾಸ್ಟಿಕ ಡಬ್ಬಿಗಳನ್ನು ಹೊತ್ತು ಮಾರುವನು ಗದ್ದಲದಲ್ಲೆ ಸಿಕ್ಕೂ ಅವನ ಸಾಮಾನುಗಳು ಚೆಲ್ಲಾಪಿಲ್ಲಿಯಾದವು. ಅವನ್ನು ಕೆಲವರು ಎತ್ತಿಕೊಂಡು ಹೋದರು. ಈಕೆಗೂ ತೆಗೆದುಕೊಂಡು ಒಯ್ಯಬೇಕೆಂದು ಯೋಚಿಸುವಷ್ಟರಲ್ಲೆ ಮಗುವಿನ ನೆನಪಾಯಿತು. ಓಡಿ ಹೋಗಿ ನೋಡುತ್ತಾಳೆ. ಮಗುವು ಇಲ್ಲ. ಅಪರಿಚಿತ ಹೆಂಗಸು ಇಲ್ಲ. ಹುಚ್ಚಿಯಂತೆ ಹುಡುಕುತ್ತಾ ಹೋದಳು. ಗದ್ದಲಿನಲ್ಲೆ ಕಂಡಕಂಡವರಿಗೆ ತನ್ನ ಮಗು ಹೀಗೆ ಇತ್ತು. ನೋಡಿದಿರಾ ಎಂದು ಕೇಳಿದಳು. ಎಲ್ಲಿ ನೋಡಿದರೆ ಸುಳಿವಿಲ್ಲ. ಹೀಗೆ ಹುಡುಕುವಾಗ ಮಗುವನ್ನು ನೋಡಿಕೊಂಡಿರಲು ಹೇಳಿದ ಹೆಂಗಸು ಸಿಕ್ಕಳು.ಮಂಗಲಾ “ನನ್ನ ಮಗು ಎಲ್ಲಿ” ಎಂದರೆ, “ಎಷ್ಟು ಹೊತ್ತು ಅಂತ ಕಾಯೋದು. ನನ್ನ ಹೊಟ್ಟೆಯೂ ಚುರುಗುಟ್ಟಿತು. ನಾನು ಮೊದಲೇ ಒಂತರಾ ಮನುಷ್ಯಳು. ಯಾವಾಗ ಹೇಗೆ ಇರುತ್ತೇನೂ ನನಗೆ ಗೊತ್ತಿರುವುದಿಲ್ಲ. ನನಗೂ ನೀನು ಬೇಗ ಬರದೇ ಇರುವುದು ಬೇಸರವಾಗಿ ನಿನ್ನ ಮಗುವನ್ನು ಅಲ್ಲೆ ಬಿಟ್ಟು ಬಂದೆ “ಎಂದಳು. ಮಂಗಲಾಗೆ ಆಕಾಶವೇ ಕಳಚಿ ಬಿದ್ದಾಂತಾಯಿತು. ನಿಂತ ನೆಲವೇ ಕುಸಿದಂತಾಯಿತು. ತರ ತರ ನಡುಗಿ ಹೋದಳು. ತನ್ನ ಒಂದು ಕ್ಷಣದ ಬಾಯಿ ರುಚಿ ಆಶೆಗೆ (ದುರಾಶೆಗೆ) ಮುಂದಿನ ಪರಿಣಾಮ ಯೋಚಿಸಲಿಲ್ಲವಲ್ಲ. ನನ್ನ ಮಗು ಏಲ್ಲಿ ಹೋಯಿತು. ಯಾರು ಎತ್ತಿಕೊಂಡು ಹೋದರು. ನನ್ನ ಮಗುವನ್ನು ಏನೂ ಮಾಡುವರೊ. ಎಂತಹ ಮುದ್ದಾದ ಸುಂದರ ಮಗು ನನ್ನದು. ದೇವರು ನನಗೇಕೆ ಇಂತಹ ಬುದ್ಧಿ ಕೊಟ್ಟೆ ಎಂದು ಒಂದೇ ಸಮನೆ ಹಲುಬುತ್ತಾ, ಕಣ್ಣೀರಿಡುತ್ತಅ ಕಂಡ ಕಂಡವರನ್ನೂ ತನ್ನ ಮಗು ಕುರಿತು ಕೇಳುತ್ತಾ ಹುಚ್ಚಿಯಂತೆ ಹುಡುಕುತ್ತಾ ಹೊರಟಳು. ************************

ದುರಾಸೆ ಹಿಂದೆ ದುಃಖ Read Post »

ಕಥಾಗುಚ್ಛ

ಸಂದಣಿ

ವಿಶೇಷ ಕಥೆ ಸಂದಣಿ ಅಶ್ವಥ್ ಬೆಳಗಿನ ಆಮೆವೇಗದ ಟ್ರಾಫಿಕ್ಕಿನಲ್ಲಿ ಸಿಕ್ಕಿಕೊಂಡು ಕಾಯುತ್ತಾ ಸಂಯಮ ಸಮಾಧಾನಗಳನ್ನೊಂದಿಷ್ಟು ಅಭ್ಯಾಸ ಮಾಡಿ ಆಫೀಸು ತಲುಪುವುದು ಸತೀಶನಿಗೆ ನಿತ್ಯಕರ್ಮವಾಗಿತ್ತು. ಅಕಸ್ಮಾತಾಗಿ ಬೆಳಗಿನ ಜಾವ ಮೂರು ನಾಲ್ಕುಗಂಟೆಯಲ್ಲೋ ಅಥವಾ ಅರ್ಧದಿನ ರಜಾಹಾಕಿ ಮನೆಗೆ ಮರಳುವಾಗಲೋ ಟ್ರಾಫಿಕ್ನಲ್ಲಿ ಸಿಕ್ಕಿಕೊಳ್ಳದೇ ಮನೆ ತಲುಪಿದ ದಿನ ತನ್ನ ಬೈಕಿಗೆ ರೆಕ್ಕೆ ಬಂದಿವೆಯೇನೋ ಅನಿಸುವಷ್ಟರ ಮಟ್ಟಿಗೆ ಹದಿನೈದು ನಿಮಿಷದ ಕಿರು ಪ್ರಯಾಣವಾಗಿರುತ್ತಿತ್ತು. ಬೆಂಗಳೂರಿನಲ್ಲಿರುವ ಹತ್ತು ವರ್ಷಗಳಲ್ಲಿ ‍ಮೂರು ಕಂಪನಿಗಳನ್ನು ಬದಲಾಯಿಸಿದರೂ ಎಲ್ಲೂ ಈಗಿನಷ್ಟು ಹತ್ತಿರವಾಗಿರಲಿಲ್ಲ. ಮೊದಲೆಲ್ಲಾ ೩ ಪ ಗಂಟೆಗಳವರೆಗಿನ ಆಫೀಸ್ ಪ್ರಯಾಣವಾಗಿದ್ದುದು ಈಗ ಎರಡು ಗಂಟೆಗೆ ಬಂದಿರುವುದು ನಿರಾಳವಾಗಿತ್ತು. ಬೆಳಗಿನ ಒಂಭತ್ತರ ಆಫೀಸ್ ಕೆಲಸಕ್ಕೆ ಆರೂವರೆ -ಏಳರ ಹೊತ್ತಿಗೆ ಬೈಕನ್ನು ಹೊಸ್ತಿಲಿನಾಚೆ ಎಳೆದು ರಸ್ತೆಯಲ್ಲಿ ಜಾಗ ಹಿಡಿದುಬಿಡಬೇಕಿತ್ತು. ರಸ್ತೆ ಸೇರುವಾಗ ಹಿಡಿದ ಜಾಗದಿಂದ ಪಟ್ಟುಬಿಡದೇ ಮುಂದೆ ಮುಂದೆ ಹೋಗಿಸಿಲ್ಕ್ಬೋರ್ಡ್ಸರ್ಕಲ್ಲಿನಾಚೆಫ್ಲೈಓವರ್ ಸೇರುವ ಹೊತ್ತಿಗೆ ಆತುರದಲ್ಲಿ ಆದ ಕಾಫಿ, ತಿಂಡಿಯೆಲ್ಲ ಈಗ ಜೀರ್ಣ ಆಗಬಹುದಾ! ಅನ್ನುತ್ತಲೇ ಅನ್ನಚೀಲದೊಳಗೆ ಕುಲುಕುತ್ತಾ ಇರುತ್ತಿತ್ತು. ದಾರಿಮಧ್ಯೆ ಅದೇ ಕೆಲವು ಹಳೆಮುಖಗಳು, ಮತ್ತ್ಯಾವುದೋ ಲಗ್ಗೇಜುಗಾಡಿ, ಕೆಲವೊಮ್ಮೆ ಬಿಎಂಟಿಸಿಯ ಬಸ್ಸುಗಳು, ಟ್ರಾಫಿಕ್ಕುಗಳನ್ನು ಆಗ್ಗಾಗ್ಗೆ ಕೆದಕುತ್ತಾ ಮುಂದೆ ತಳ್ಳುವುದಕ್ಕೆ ಹಾವಿನಾಕಾರದಲ್ಲಿ ಹೊರಳಿಕೊಂಡು ಹೋಗುವ ಸ್ಕೂಟಿಗಳು. ಆಟೋ, ಟ್ಯಾಕ್ಸಿಗಳು. ಹೀಗೆಆವಾಹನದಟ್ಟಣೆಯದೀರ್ಘನೋಟ ಒಂದು ರೀತಿಯ ಹಲಬಗೆಯ ವಾಹನಗಳ ಸೂಪರ್ಮಾರ್ಕೆಟ್ಟಿನ ಹಾಗೆ ಕಾಣುತ್ತಿತ್ತು. ತರಹೇವಾರಿ ಹೊಗೆಪೈಪುಗಳಲ್ಲಿ ಪೆಟ್ರೋಲ್ & ಡೀಸೆಲ್ ಉರಿದುಗುಳುವ ದಟ್ಟಹೊಗೆ ಆ ಓಪನ್ಮಾರ್ಕೆಟ್ನಿಂದ ಸೂಸುವ ಘಾಟಿನಂತಿರುತ್ತಿತ್ತು. ಅದೊಂದು ದಿನ ಮೋಡ ಕವಿದ ವಾತಾವರಣ, ಇನ್ಯಾವ ಕ್ಷಣದಲ್ಲಾದರೂ ಮಳೆ ಬಂದು ಬಿಡಬಹುದು ಅನಿಸುತ್ತಿದ್ದರಿಂದ ರೈನ್ಕೋಟ್ಹಿಡಿದೇ ಬೈಕ್ ಏರಿದ ಸತೀಶ. ನಿಧಾನವಾಗಿ ದಾರಿ ಮಧ್ಯದಲ್ಲಿ ಟ್ರಾಫಿಕ್ಕಿನಲ್ಲಿ ತನ್ನೆರಡೂ ಕಾಲುಗಳನ್ನು ಬೈಕಿನ ಹೆಚ್ಚುವರಿ ಚಕ್ರಗಳ ಹಾಗೆ ಉಜ್ಜುತ್ತಾ ಎಳೆಯುತ್ತಾ ಕೆಲವೊಮ್ಮೆನಾಲ್ಕು ಚಕ್ರ ಕೆಲವೊಮ್ಮೆ ಮೂರು ಮತ್ತೆ ಎರಡು ಹೀಗೆ ಚಕ್ರಗಳ ಬಹುಕೃತ ವೇಷವನ್ನು ಬದಲಾಯಿಸುತ್ತಿರುವಾಗ ಪಕ್ಕದಲ್ಲೇ ಬಂದು ಬೈಕ್ನ ಮುಂದೆ ಮುದ್ದಾದ ಹಾಲುಗಲ್ಲದ ಮಗು, ಅದಕ್ಕೆ ತಕ್ಕನಾದ ಪುಟ್ಟ ಹೆಲ್ಮೆಟ್ಟು ಹೊದ್ದು ಇನ್ನೇನು ನಿದ್ರೆ ಹತ್ತೀತೇನೋ ಅನ್ನುವಂತೆ ತಲೆತೂಗುತ್ತಿತ್ತು. “ಸಾರ್, ಮಗು ತೂಕಡಿಸೋ ತರ ಕಾಣ್ತಿದೆ ಎಚ್ಚರ ಮಾಡಿ” ಅಂದ ಸತೀಶ. “ನೋ! ಐ ಆಮ್ಜಸ್ಟ್ಟಯರ್ಡ್” ಅನ್ನುತ್ತಾ ತೊದಲುವ ಮುಖ ನೋಡಿ, ಚೆಂದದ ನಗೆ ಬೀರಿ ಬಲಗೈ ಹೆಬ್ಬೆರಳಿನ ಲೈಕ್ ಒತ್ತುತ್ತಾ ಹಾಗೇ ನೋಡುತ್ತಾ ನಿಂತ. “ಏನ್ಮಾಡೋದುಸಾರ್… ಈ ಹಾಳಾದ್ಟ್ರಾಫಿಕ್ಕಲ್ಲಿ ನಾನು ಬೇಯೋದಲ್ಲದೇ ದಿನಾವಇವನ್ನೂ ಬೇಯಿಸ್ಕೊಂಡೇ ಹೋಗ್ಬೇಕು. ಬೇರೆ ದಾರಿ ಇಲ್ಲ. ಪಾಪ, ದಿನಾ ಇದೇ ನೋಡಿ ನೋಡಿ ಇದಕ್ಕೇ ಹೊಂದ್ಕೊಂಡಿದ್ದಾನೆ” ಮಗು ಎಡಕ್ಕೆ ಓರೆಯಾಗುತ್ತ “ಯೆಸ್ಸ್” ಅನ್ನುತ್ತಾ ಕಣ್ಣುಗುಡ್ಡೆ ಮೇಲು ಮಾಡಿ ಬೇಸರಿಸಿಕೊಂಡಿದ್ದರೂ, ಕೈಬೆರಳುಗಳನ್ನು ಪಾರ್ಲೆ ಬಿಸ್ಕೆಟ್ಪ್ಯಾಕ್ನ ಬೇಬಿಯ ಹಾಗೆ ಕಾಣಿಸಿ ಮತ್ತಷ್ಟು ಮುಗ್ಧತೆಯನ್ನು ಹೊರಸೂಸಿತು. “ಅಯ್ಯೋ ಕಂದಾ! ಕನ್ನಡ ಅರ್ಥಆಗ್ತದೇನೋ? ಎಷ್ಟು ರಿಯಾಕ್ಟ್ ಮಾಡ್ತಾನೆ ನೋಡಿ ! ಎಷ್ಟ್ವಯಸ್ಸು ಸಾರ್?ಎನ್ನುತ್ತಾ ಮುಂದೆ ಸರಿಯುತ್ತಿದ್ದ ಟ್ರಾಫಿಕ್ಕಿಗೆ ಎರಡೂ ಬೈಕುಗಳು ನಿಧಾನವಾಗಿ ಹೊಂದಿಕೊಂಡು ಸಂಭಾಷಣೆ ಮುಂದುವರಿದೇ ಇತ್ತು. “ನಾವು ಮೈಸೂರ್ನವರು ಕನ್ನಡ ಅರ್ಥ ಆಗತ್ತೆ. ಬಾಡಿಗೆಮನೆ ನೈಬರ್ಸು, ಡೇಕೇರು ಎಲ್ಲಾ ಸೇರಿ ಇಂಗ್ಲೀಷ್ಮಯ ಆಗಿದೆ. ಅಲ್ಲದೇ ನಾವೂ ಏನು ಕಡಿಮೆಯಾ? ಬೆಳಿಗ್ಗೆ ಬರೋ ಪೇಪರಿಂದ ಹಿಡಿದು ಆಫೀಸ್ಕೆಲಸದಲ್ಲೆಲ್ಲ ಇಂಗ್ಲೀಷಿನವರೇ ಆಗಿ ಹೋಗಿದ್ದೀವಿ, ಎಳೆವಯಸ್ಸಿನಲ್ಲಿ ಹೀಗೇನೇ ಅಲ್ವಾ ಕಲಿಯೋದು”? ಅನ್ನುತ್ತಾ ಬೇಸರದ ಬೆಳಗಿಗೊಂದಿಷ್ಟು ತಿಳಿಯೆನಿಸುವ ಆಪ್ತತೆಯನ್ನು ತೋರಿದರು ತಂದೆ. ಅಷ್ಟೂ ಹೊತ್ತು ಚಿಂತಾಕ್ರಾಂತನಾಗಿದ್ದ ಪುಟ್ಟಮಗು ಅಚಾನಕ್ಕಾಗಿ ಸಿಕ್ಕ ಸತೀಶನತ್ತ ಹೊರಳಿದ್ದೇ ಅವನ ನವಿರಾದ ಮಾತಿಗೆ ಕಿವಿಗೊಡುತ್ತಾ ಕಣ್ಣು ಹೊರಳಿಸುತ್ತಾ ಪರಿಚಯ ಬೇಕು ಅನ್ನುವಂತೆ “ನೀಯಾರು” ಅಂತು. ” ನಾನೂ ನಿಮ್ಮ ಅಪ್ಪನ ಹಾಗೇ, ನಿತ್ಯ ಟ್ರಾಫಿಕ್ಕಿನೊಳಗೆ ಬೇಯೋವ್ನು” ನಮ್ಮೂರು ಹಳೆಬೀಡು ಹತ್ರ ಹಳ್ಳಿ. ನಿನ್ನಂಗಿದ್ದಾಗ ನಮ್ಮ ಹಳ್ಳಿಯಲ್ಲಿ ಹೇಗಿತ್ತು ಗೊತ್ತಾ ಪುಟ್ಟಾ?” ಅನ್ನುವಷ್ಟರಲ್ಲಿ “ನೈಸ್ ಟಾಕಿಂಗ್ಟುಯೂ ರೀ ನೆಕ್ಸ್ಟ್ಟರ್ನಲ್ಲಿ ಡೇಕೇರ್ಗೆ ಬಿಟ್ಟು ಮತ್ತೆ ಈ ರೋಡ್ನೇ ಸೇರ್ಕೊಬೇಕು” ಅನ್ನುತ್ತಾ ಅಪ್ಪ ಗಾಡಿಯನ್ನು ಬಲಕ್ಕೆ ಹೊರಳಿಸುವುದಕ್ಕೆ ನೋಡುತ್ತಿದ್ದಂತೆ, ಮಗುವಿಗೆ ಮತ್ತೆ ಬೇಸರ ಮಡುಗಟ್ಟಿ “ಐ ವಾಂಟು ಟಾಕ್ಮೋರ್” ಅನ್ನುತ್ತಾ ಗೊಣಗಿದ. ನಿದ್ರೆ ಬಂದೇ ಬಿಟ್ಟಿತು ಅನ್ನುವಂತೆ ತೂಗುತ್ತಲಿದ್ದವನು ಇದ್ದಕ್ಕಿದ್ದ ಹಾಗೆ ಚುರುಕಾಗಿದ್ದು ಕಂಡು, “ನೋಡಿ, ಏನೋ ಪರಿಚಯಕ್ಕೆ ಸಿಕ್ಕರೆ ಸಾಕು, ತಲೆತಿಂತಾನೆ! ಈಗ ನಿದ್ರೆಮಾಡಿಯಾನು ನೋಡಿ ಅಂದಿದ್ದು ನಿಮ್ಮದೇ ತ ಪ್ಪೇನೋ ಅನ್ನೋ ಹಾಗೆ ಮಾಡಿಬಿಟ್ಟಾನು”. ಅನ್ನುತ್ತಾ ಅಪ್ಪ ತಮಾಷೆ ಮಾಡಿದ. ಇರಲಿ ಬಿಡಿ ಸಾರ್.ಅರ್ಥ ಆಗತ್ತೆ. ಮಕ್ಕಳನ್ನು ಬೆಳೆಸೋಕೆ ಜಾಗ ಅಲ್ಲ ಇದು. ಏನ್ಮಾಡೋದು, ಲೈಫ್ಸ್ಟೈಲೇ ಹಾಗಾಗಿದೆ. ನಮ್ಮ ಕಾಲ ನಮ್ಮ ಮಕ್ಕಳಿಗೆ ಇಲ್ಲ. ಇನ್ನು ಮುಂದೆ ಹೇಗೋ ಎನ್ನುತ್ತಾ ಕಣ್ಣು ಮೇಲು ಮಾಡುವ ಸರದಿ ಈಗ ಸತೀಶನದ್ದಾಗಿತ್ತು. ರೈಟ್ .ಯಾಕಾದ್ರೂ ಈ ಎಂಜಿನಿಯರಿಂಗ್ ಮಾಡಿದೆನೋ ಅನ್ಸುತ್ತೆ ರೀ ಒಂದೊಂದ್ಸಾರ್ತಿ. ಅಂದ್ಹಾಗೆ ನನ್ನ ಹೆಸರು ಅವಿನಾಶ್, ಇಲ್ಲೇ ವಿಪ್ರೋದಲ್ಲಿರೋದು ಅನ್ನುತ್ತಾ ಬಲಗೈ ಚಾಚಿದರು. ನಾನು ಸತೀಶ್, ಹನಿವೆಲ್ಲು ಬಟ್ನಾಟ್ಸೋವೆಲ್ಲ್ . ಊರು ನೆನಪಾದ್ರೆ ಎಲ್ಲಾ ಬಿಟ್ಹಾಕಿ ಹೊರಟ್ಹೋಗೋಣ ಅನ್ಸುತ್ತೆ ಏನ್ಮಾಡೋದೇಳಿ ಫಜೀತಿ. ಈಗ ಅಲ್ಲೂ ಏನೂ ಸುಲಭ ಅಲ್ಲ. ಕರೆಕ್ಟ್.ನಮ್ಮದೂ ಮೈಸೂರ್ಹತ್ರ ಸ್ವಲ್ಪ ಜಮೀನಿದೆ. ನಮ್ಮ ತಾತ ಮಾಡಿಸ್ತಿದ್ರು. ನಾವೆಲ್ಲ ಹುಟ್ಟಿ ಬೆಳೆದಿದ್ದು ಮೈಸೂರಲ್ಲೇ. ಹಳ್ಳಿ ಅಲ್ಲದಿದ್ರೂ, ಇಷ್ಟು ಕೆಟ್ಟ ಪಟ್ಟಣ ಆಗಿರ್ಲಿಲ್ಲ ಬಿಡಿ. ಅನ್ನುತ್ತಾ ಹಳೆಯ ಮೈಸೂರಿನ ನೆನಪಿಗಿಳಿದ ಅವಿನಾಶ್, ನಮ್ಮ ಪುಟ್ಟಂಗೆ ಇವತ್ತು ನಿಮ್ಮ ಜೊತೆ ಮಾತಾಡೋ ಮನಸಾಗಿದೆ. ನೆಕ್ಸ್ಟ್ಕ್ರಾಸ್ತೊಗೊಳ್ತೀನಿ. ಅರ್ಧಗಂಟೆ ಆಗತ್ತೆ ಮಿನಿಮಮ್. ಅಷ್ಟರಲ್ಲೆಲ್ಲ ತೊಂದ್ರೆ ಕೊಟ್ಬಿಡಪ್ಪಾ ಸತೀಶ್ ಅವ್ರಿಗೆ” ಅಂದು ಮತ್ತೆನ ಕ್ಕರು. ಮಗು ಹಿಗ್ಗಿದ. ” ಇರಲಿ ಬಿಡಿ ಸಾರ್.ಇದರಲ್ಲಿ ತೊಂದ್ರೆ ಏನಿದೆ. ಆದರೆ ರಸ್ತೆಯಲ್ಲಿ ಹೀಗೆ ಟೈಮ್ಪಾಸ್ಮಾಡೋದಕ್ಕೆ ನಗೋದೋ ಅಳೋದೋ ಗೊತ್ತಾಗಲ್ಲ” ಅನ್ನುತ್ತಾ ಮಗುವಿನ ಮುಗ್ಧಮುಖ ನೋಡುತ್ತಾ ಟ್ರಾಫಿಕ್ಕಿನ ಧಾರುಣತೆಯನ್ನೆಲ್ಲವನ್ನು ಇಲ್ಲವಾಗಿಸಿ ಮಗುವಿನೊಂದಿಗೆ ಸಂಭಾಷಣೆಗಿಳಿದ. ಸಮರ್ಥ್. ಏನ್ಮಾಡ್ತೀಯಾ ಡೇಕೇರಲ್ಲಿ? ತಿಂಡಿ ಆಯ್ತಾ? ಲಂಚ್ಬಾಕ್ಸ್ನಲ್ಲಿ ಏನಿದೆ? ಓಯೆಸ್.ಇಡ್ಲಿವಿತ್ಸಕ್ರೆ ಚಟ್ನಿ. ಲಂಚ್ಬಾಕ್ಸ್ನಲ್ಲೂ ಅದೇ. ನಂಗ್ಬೇಕಿತ್ತಲ್ಲ. ನನ್ನಲಂಚ್ಬಾಕ್ಸ್ತಂದಿಲ್ಲ. ತೊಗೊಳ್ಳಲಾ ಅನ್ನುತ್ತಾ ಕೈಚಾಚಿದ. “ಹ್ಹಿಹಿ…. ಇದುಸ್ಮಾಲ್ಬಾಕ್ಸ್….” ಅನ್ನುತ್ತಾ ಬ್ಯಾಗನ್ನು ಗಟ್ಟಿಯಾಗಿ ಹಿಡಿದು, ಸಮಾಧಾನಕ್ಕೆನ್ನುವಂತೆ “ಡ್ಯಾಡಿದೂ ಇಲ್ಲ”. ಅಂದ. ಮಾತು ಹಾಗೇ ಮುಂದುವರಿದು ಹೆಚ್ಚಿನವಪರಿಚಯ ಹೇಳಿಕೊಳ್ಳುತ್ತಾ, ಹಳೆಬೀಡಿನ ನೆನಪುಗಳನ್ನೆಲ್ಲ ಹೊಸದೆನ್ನುವಂತೆ ಮಾಡಿಕೊಂಡು ತನ್ನ ಬಾಲ್ಯದ ಕೆಲವು ತುಣುಕುಗಳನ್ನೆಲ್ಲ ಮಗುವಿನೊಂದಿಗೆ ಹಂಚಿಕೊಳ್ಳುತ್ತಾ, ತನ್ನ ಹಳೆಯ ಗೋಲಿಯಾಟ, ಮರಕೋತಿಆಟ, ಹಳ್ಳಿ, ಹೊಸ, ಮರ, ಹಸು ಹಕ್ಕಿ ಇತ್ಯಾದಿ ಹೊಸಲೋಕವನ್ನೇ ಅವಸರವಸರವಾಗಿ ತೆರೆದಿಡುತ್ತಾ ಸರಿಯುತ್ತಿದ್ದ. ಪರಿಚಯ ಆಗಿದ್ದು ಖುಷಿಯಾಯ್ತು ಸಾರ್.ನಾನು ಜೆಪಿನಗರದಿಂದ ಹೊರಡೋದು ದಿನಾ… ಮತ್ತೆ ಯಾವಾಗಲಾದರೂ ಸಿಗೋಣ. ಮುಂದಿನ ಕ್ರಾಸ್ಬಂದೇ ಬಿಡ್ತು. ಇಫ್ಯುಡೋಂಟ್ಮೈಂಡ್, ಫೋನ್ನಂಬರ್ಶೇರ್ಮಾಡಿ. ನನ್ನದು ನೈನ್ಡಬಲ್ಎಂಟ್ ಎನ್ನುತ್ತಾ ಒಂದರ ಮಗ್ಗಿ ಶುರು ಮಾಡಿದ. ‘ಶ್ಯೂರ್ಶ್ಯೂರ್ʼ ನಮ್ರೂಮ್ಕೂಡ ಅಲ್ಲೇ ಜೆಪಿನಗರ. ಖಂಡಿತಾ ಸಿಗೋಣ. ಬಾ ಇಂಟರೆಸ್ಟಿಂಗ್ ಇದಾನೆ ಮಗ ಅಂದು ತನ್ನ ಮೊಬೈಲ್ತೆಗೆದು ಅವಿನಾಶ್ಹೇಳಿದ ಒಂದರವಮಗ್ಗಿ ಒತ್ತಿಟ್ಟುಕೊಳ್ಳುತ್ತಾ, ಒಂದುರಿಂಗ್ಮಾಡಿ, ಮಿಸ್ಡ್ಕಾಲ್ ಇದೆ ನೋಡಿ ನಂದು ಅನ್ನುತ್ತಾ ಮಗುವಿಗೆ “ಬಾಯ್!” ಅನ್ನುತ್ತಲೇ… ಅವನನ್ನು ಅಣಕಿಸುವಂತೆ ಮಗು “ಅಂಕಲ್!” ಅಂದ. ಎಲಾ ಇವನಾ? ಒಂದರ್ಧ ಗಂಟೆ ಮಾತಿಗೆ ಎಷ್ಟು ಪರಿಚಯದವನ ಹಾಗೆ ಆಗಿಬಿಟ್ಟ ಅಂದುಕೊಳ್ಳುತ್ತಲೇ ಸತೀಶ ಟ್ರಾಫಿಕ್ಕಿನ ಉದ್ದನೆಯ ಸಾಲಿನತ್ತ ದೃಷ್ಟಿ ನೆಟ್ಟ. ಆ ದಿನ ಸಂಜೆ ಮನೆಗೆ ಬರುವಾಗಲೂ ಮತ್ತೆ ಅದೇ ಸಾಲುಗಟ್ಟಿದ ವಾಹನಗಳ ನಡುವೆ ಬೇಯುತ್ತಾ ಬರುವ ದಾರಿಯಲ್ಲಿ ಸಿಕ್ಕ ಪುಟ್ಟ ಗೆಳೆಯನ ನೆನಪು ಮಾಡಿಕೊಳ್ಳುತ್ತಾ ಇನ್ನಷ್ಟು ಬೇಸರವಾದ. ಆ ರಾತ್ರಿ ಆ ಮಗುವಿನ ನೆನಪಾಗಿ ತಾನು ಮೊದಲು ಕಂಡ ಆ ತೂಕಡಿಸುವಂತಹ ಮುಗ್ದ ಮುಖ ಮತ್ತೆ ದಿಟ್ಟಿಸಿದ ಹಾಗನಿಸಿ ಕಸಿವಿಸಿಗೊಂಡು ದೀರ್ಘವಾಗಿ ಯೋಚನೆಗಿಳಿದ. ನನ್ನ ಬಾಲ್ಯದ ದಿನಗಳಿಗೂ, ಈ ಮಗುವಿನ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ… ನಮಗೆ ನಿದ್ರೆ ಮಾಡಿಸುವುದಕ್ಕೆ ಮನೆಯಲ್ಲಿ ಹರಸಾಹಸ ಪಡಬೇಕಾಗುತ್ತಿತ್ತು. ಮನೆಯಲ್ಲಿ ಇರಿಸಿಕೊಳ್ಳುವುದೇ ಕಷ್ಟವಾಗಿರುತ್ತಿದ್ದು ಸದಾ ಅಂಗಳ ಬೀದಿ ಹೊಲಗದ್ದೆಗಳ ಕಡೆಯೇ ಆಟವಾಡುತ್ತಾ, ಇದ್ದ ಆ ಹಳ್ಳಿಗೂ, ಬೆಳಗಾದರೆ ಟ್ರಾಫಿಕ್ಕಿನ ಸುಪ್ರಭಾತ, ಮತ್ತೆ ಸಂಜೆ ಅದೇ ಟ್ರಾಫಿಕ್ಕಿನ ಮಂಗಳಾರತಿಯ ನಡುವೆ ಈ ಹೊಸ ತಲೆಮಾರಿನ ಬದುಕು ಎಷ್ಟೊಂದು ವಿಚಿತ್ರವಾಯಿತಲ್ಲ, ಇದಕ್ಕೆ ತಾನೂ ಒಬ್ಬ ಕಾರಣನಾದನಲ್ಲ ಅನಿಸುವಂತಾಯಿತು. ಟ್ರಾಫಿಕ್ಕು , ಜನಜಂಗುಳಿ ನಗರದ ದಟ್ಟಣೆಗಳೆಲ್ಲವೂ ನಾವೇ ಜನರೇ ಮಾಡಿಕೊಂಡಿರುವ ಸ್ವಯಂಕೃತ ಸಮಸ್ಯೆಗಳಲ್ಲವೇ? ಎಲ್ಲರಿಗೂ ಚಂದದ ಬಾಲ್ಯಬೇಕು ಅನ್ನುತ್ತಾ ಇನ್ನೂ ಹಳ್ಳಿ ಯನ್ನೇ ಅವಲಂಬಿಸಿದರೆ ಊರಿನಲ್ಲಿ ಸವಲತ್ತುಗಳೇನೇನೂ ಇಲ್ಲ. ಸವಲತ್ತುಗಳನ್ನು ಸೃಷ್ಟಿಸಿಕೊಳ್ಳುವ ಧಾವಂತದಲ್ಲಿ ಚದುರಿಹೋಗಿದ್ದ ಸಣ್ಣಊರುಗಳನ್ನೆಲ್ಲ ಕಲೆಹಾಕಿ ಮಹಾನಗರಗಳನ್ನಾಗಿ ಬೆಳೆಸಿಕೊಂಡು, ಅಲ್ಲಿ ಒಂದಿಷ್ಟು ಆಸ್ತಿ, ಸೈಟು, ಅಪಾರ್ಟ್ಮೆಂಟುಗಳನ್ನೆಲ್ಲ ಮಾಡಿಕೊಂಡು, ಹಣದ ಒಟ್ಟು ಮೊತ್ತವನ್ನು ಮನಸ್ಸಿನಲ್ಲೇ ಲೆಕ್ಕಮಾಡಿಕೊಂಡು ಪ್ರತಿವರ್ಷ ಐಟಿ ಟ್ಯಾಕ್ಸ್ಕಟ್ಟುವಾಗ ಆ ಲೆಕ್ಕ ಮರುಪರಿಶೀಲನೆಯನ್ನೂ ಮಾಡಿಕೊಂಡು ವಿಚಿತ್ರ ಅಂಕಿಸಂಖ್ಯೆಯ ಲೆಕ್ಕದಲ್ಲಿ ಸಿರಿವಂತಿಕೆಯ ನೆಮ್ಮದಿಯೊಳಗೆ ಮುಳುಗಿ ನಿಜದ ನೆಮ್ಮದಿಯ ನೆನಪೂ ಇಲ್ಲದ ಹಾಗಾಗಿದೆ. ಎಷ್ಟು ಹೊತ್ತು ಯೋಚಿಸಿದರೂ ನಿದ್ರೆ ಹತ್ತದೆ ಹಾಗೇ ಕೂತಲ್ಲೇ ಕೂತಿದ್ದವನಿಗೆ ಊಟ ಮಾಡಿಲ್ಲವೆನ್ನುವುದು ಗೊತ್ತಾಗಿ, ಈಗ ಒಲೆ ಹೊತ್ತಿಸುವ ಮನಸ್ಸಿಲ್ಲದ್ದಕ್ಕೆ ಮನೆಯ ಪಕ್ಕದ ಬೀದಿಯ ಬೇಕರಿ ಬಾಗಿಲು ಮುಚ್ಚುವ ಮೊದಲೇ ಏನಾದರೂ ಸಿಕ್ಕೀತು ಅಂದುಕೊಂಡು ದಾಪುಗಾಲಿಡುತ್ತಾ ಗೇಟು ದಾಟಿದ. ರಾತ್ರಿ ಒಂದರ ನಂತರವೂ ನಿದ್ರೆ ಬಾರದವನಾಗಿ ತನ್ನ ಬಾಲ್ಯವನ್ನೇ ಮತ್ತೆ ಮೆಲುಕು ಹಾಕಿಕೊಂಡು ಒಂದಿಷ್ಟು ಸಂತೊಷಪಟ್ಟುಕೊಳ್ಳುತ್ತಾ, ಬೆಳಗಿನ ಟ್ರಾಫಿಕ್ಕಿನ ಬಗ್ಗೆ ಮಾಮೂಲಿನಂತೆ ಅಲ್ಲದೇ ಏನೋ ವಿಚಿತ್ರ ಆಯಾಸದ ಭಾವನೆ ಮೂಡಿ ಬೆಳಗಿನ ಆ ಮುಗ್ದ ಮಗುವಿನ ತೂಕಡಿಕೆಗೆ ಪ್ರತಿಕ್ರಯಿಸುವವನಂತೆ ತಾನೂ ತೂಕಡಿಸುತ್ತಾ ಕೂತ. ಮಾರನೆಯ ದಿನ ಟ್ರಾಫಿಕ್ಕಿನೊಳಗೆ ಬೈಕನ್ನು ಈಜಿಸಿಕೊಂಡು ಆಫೀಸೆಂಬೋ ದಡ ಮುಟ್ಟಿದರೂ ಈ ನೆನಪಿನ ಗುಂಗಿನಿಂದ ಸತೀಶ ಹೊರಬಂದಿರಲಿಲ್ಲ. ಹಿನ್ನೆಲೆಯಲ್ಲಿ ಯೋಚನೆ ಮುಂದುವರಿದೇ ಇತ್ತು. ಸಮಸ್ಯೆ ಎಲ್ಲಾಗ್ತಾ ಇದೆ? ನಾವೆಲ್ಲ ವ್ಯವಸ್ಥೆಯನ್ನ ಬೆನ್ನುಹತ್ತಿ ವ್ಯವಸ್ಥೆಯೂ ಇಲ್ಲ, ಕಡೆಗೆ ಹಳ್ಳಿಯ ಸಮೃದ್ಧತೆಯೂ ಇಲ್ಲ ಅನಿಸುವಂತೆ ಎಲ್ಲರೂ ಒಬ್ಬರಿಗೊಬ್ಬರು ಪೈಪೋಟಿಯಲ್ಲಿ ಹಣಜಮಾವಣೆಯ ವ್ಯಾಪಾರಕ್ಕಿಳಿದು ಬಿಟ್ಟೆವೇ? ಪುಟ್ಟಪಟ್ಟಣಗಳನ್ನು, ನಗರಗಳನ್ನು ಮಹಾನಗರಗಳನ್ನಾಗಿ ದೈತ್ಯಾಕಾರಕ್ಕೆ ಬೆಳೆಸಿದ ಆ ಆಸಕ್ತಿ ಹಳ್ಳಿಗಳನ್ನೂ, ಅಲ್ಲಿನ ಸುತ್ತಲಿನ ಸಣ್ಣಪಟ್ಟಣಗಳನ್ನೂ ವ್ಯವಸ್ಥಿತಗೊಳಿಸಿಕೊಳ್ಳುವುದು ಅಷ್ಟೊಂದುಕಷ್ಟವೇ? ಇಲ್ಲಿ ನಗರಗಳಲ್ಲಿ ನೋಡಿದರೆ ಎಲ್ಲರೂ ಎಲ್ಲರನ್ನೂ ಬೈದುಕೊಳ್ಳುತ್ತಾ, ಕಾರ್ಪೊರೇಷನ್ನವರಿಗೊಂದಿಷ್ಟು ದೂರುತ್ತಾ ಇದ್ದುಬಿಡುತ್ತೇವೆ. ಹೇಗೋ ದೈನಂದಿನ ಸಾಮಾನ್ಯ ವ್ಯವಸ್ಥೆಗಳ ಏರ್ಪಾಡಿಗಾದರೂ ಕಾರ್ಪೊರೇಷನ್ನು, ಎಸ್ಕಾಮ್, ವಾಟರ್ಬೋರ್ಡ್ಗಳೆಲ್ಲ ನೀರು, ವಿದ್ಯುತ್ತು, ಚರಂಡಿ, ಕಸ ವಿಲೇವಾರಿಗಳನ್ನಂತೂ ಹೇಗೋ ಹಾಗೆ ತೂಗಿಸಿ, ಕೊಟ್ಟ ತೆರಿಗೆಗೆ ತಿಪ್ಪೆ ಸಾರಿಸ್ತಾರೆ. ನಮ್ಮ ಹಳ್ಳಿಗಳಲ್ಲಿ ಬೇರೆಯದೇ ರೀತಿಯ ಸಮಸ್ಯೆ. ಜಾತಿಜಾಡ್ಯದಿಂದ ಹಿಡಿದು, ಶೀತಕೆಮ್ಮಿಗೂ ಒಂದು ಆಸ್ಪತ್ರೆಗೆ ಹತ್ತಾರು ಮೈಲಿಯಾಚೆಯ ಪಟ್ಟಣಕ್ಕೆ ಹೋಗಿ ಟೋಕನ್ಹಿಡಿದುಕೊಳ್ಳಬೇಕಾದ; ಪ್ರಾಥಮಿಕ ಮಾಧ್ಯಮಿಕ ಶಾಲೆಗಳೆಲ್ಲವಕ್ಕೂ ಹಳದಿವ್ಯಾನುಗಳನ್ನು ಅವಲಂಬಿಸಿಕೊಂಡು, ಅದಕ್ಕೆ ಫೀಸು ಕಟ್ಟುವುದಕ್ಕೆಂದು ತಿಣುಕಾಡುವ; ಬೆಳೆಹೊತ್ತಿನಲ್ಲಿ ಮಳೆಯಿಲ್ಲದೆ ಕೊಯ್ಲಿನ ಹೊತ್ತಿಗೆ ನೆರೆ ಬರುವಂತಹ ಪರಿಸ್ಥಿತಿಯಿದ್ದರೂ, ಹೇಗೋ ಹಾಗೆ ಬೆಳೆದಿದ್ದ ಫಸಲಿಗೂ ಎಷ್ಟೋ ಸಿಕ್ಕಷ್ಟು ಅನ್ನುವ ಹಾಗೆ ಸಂಪಾದನೆ ಮಾಡಿಕೊಂಡು ಪ್ರತಿವರ್ಷ ಮುಂದಿನ ಬೆಳೆ ಸಾಲ, ಅದನ್ನ ಮನ್ನಾ ಮಾಡಬೇಕಾದ ಸರ್ಕಾರ, ಅದರಲ್ಲಿ ಕಮೀಷನ್ನು; ಈ ರೀತಿಯ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದ ಸತೀಶನ ತಲೆಭಾರವಾಗಿತ್ತು. ಬ್ರೇಕ್ಹೊತ್ತಿನಲ್ಲಿ ಒಂದು ಕಾಫಿ ಹೀರುತ್ತಾ, ಕಳೆದ ತಿಂಗಳಷ್ಟೇ ಅಮೇರಿಕಾದ ಆನ್ಸೈಟ್ಕೆಲಸದಿಂದ ಮರಳಿದ್ದ ಸಹೋದ್ಯೋಗಿ

ಸಂದಣಿ Read Post »

ಕಥಾಗುಚ್ಛ

ಯಾರು ಹೊಣೆ ?

ಕಥೆ ಯಾರು ಹೊಣೆ ? ಎಂ.ಆರ್.ಅನಸೂಯ ಅಮ್ಮಾ ,ಅಮ್ಮಾ’ ಎಂದು ಚಂದ್ರಮ್ಮ ಬಾಗಿಲು ತಟ್ಟುತ್ತಾ ಕೂಗಿದಂತಾಯಿತು . ಟಿ.ವಿ ನೋಡುತ್ತ ಕೂತಿದ್ದ ಸುಮಿತ್ರ  ಗಡಿಯಾರದ ಕಡೆ ನೋಡಿದಳು. ಆಗಲೇ ರಾತ್ರಿ ಒಂಭತ್ತು  ಗಂಟೆಯಾಗಿತ್ತು. ಈಗ್ಯಾಕೆ ಬಂದಳಪ್ಪಾ ಎಂದುಕೊಳ್ಳುತ್ತಾ ಸುಮಿತ್ರ ಬಾಗಿಲು ತೆಗೆದು “ಏನು ಚಂದ್ರಮ್ಮ ಇಷ್ಟೊತ್ನಲ್ಲಿ ಯಾಕೆ  ಬಂದೆ’ ಎಂದು ಬಾಗಿಲತ್ರನೇ ನಿಂತು ಕೇಳಿದಳು. “ಅಮ್ಮಾ, ನಡಿರಮ್ಮ ಒಳಗೆ ಸ್ವಲ್ಪ ಮಾತಾಡ್ಬೇಕು”ಎನ್ನುತ್ತ   ಚಂದ್ರಮ್ಮ ಒಳಗೆ ಬಂದು ಕುಳಿತಳು. ಸುಮಿತ್ರ ಸೋಫದ ಮೇಲೆ ಕುಳಿತು”ಏನ್ಸಮಾಚಾರ ಚಂದ್ರಮ್ಮ” ಎಂದರು “ನೋಡ್ರಮ್ಮ ನಮ್ಮ ಹುಡುಗಿ ಗೀತ ಎಂಥ ಹಲ್ಕಾ ಕೆಲಸ  ಮಾಡ್ಕಂಡು ಕುಂತವಳೆ. ಮೂರೂ ಬಿಟ್ಟವಳು ” ಎಂದು ಅಳಲು ಶುರು ಮಾಡಿದಾಗ “ಅದೇನು ಸರ್ಯಾಗಿ ಹೇಳು ಚಂದ್ರಮ್ಮ” “ಏನೇಳನ್ರಮ್ಮ ನಂ ಹುಡುಗಿ ಗೀತ ಬಸ್ರಾಗಿ ಕುಂತವಳೆ.  ಸರೀಕರೆದ್ರುಗೆ ತಲೆಯೆತ್ಕಂಡು ಓಡಾಡ್ದಂಗೆ ಮಾಡ್ಬಿಟ್ಲು. ಎಲ್ಲನ ಹೋಗಿ ಸತ್ರೆ ಸಾಕು ಅನ್ಸು ಬಿಟ್ಟೈತೆ ಏನ್ಮಾಡದೊ ಒಂದು ಗೊತ್ತಾಗಕಿಲ್ಲ”ಎಂದು ಅಳುತ್ತಿದ್ದಳು ಆಗ ಸುಮಿತ್ರಾ “ನಿನ್ನದೇ ತಪ್ಪುಬೆಂಗಳೂರಿಗೆ  ನೀನ್ಯಾಕೆ ಕಳಿಸ್ದೆ .ಇಲ್ಲೇ ಮನೆ ಕೆಲಸ ಸಿಕ್ತಿರಲಿಲ್ವೆ.ಯಾರಾದ್ರೂನು  ವಯಸ್ಸಿಗೆ ಬಂದಿರ ಹುಡುಗಿನ ಬೇರೆ ಊರಿಗೆ ಕಳಿಸ್ತಾರ ಈಗ ಅತ್ರೆ ಏನು ಬಂತು”ಎಂದು ಒರಟಾಗಿ ಹೇಳಿದಳು.  “ಇಲ್ಲೆ ಇರಂಗಿದ್ರೆ ನಾನ್ಯಾಕ್ರಮ್ಮ ಬೆಂಗಳೂರಿಗೆ ಕಳಿಸ್ತಿದ್ದೆ”  “ಇಲ್ಲಿರಕಾಗ್ದೆ ಇರೋ ಅಂಥಾದ್ದು ಏನಾಗಿತ್ತು” “ಏನು ಹೇಳನ್ರಮ್ಮ.ನನ್ನ ಹಣೆಬರಾನೇ  ಸರ್ಯಾಗಿಲ್ಲ. ನನ್ನ ಗಂಡ ಕುಡ್ದೂ ಕುಡ್ದೂ ಸತ್ತ. ಆ ನನ್ನ ಎರಡ್ನೆ ಮಗಾನು  ಅವರಪ್ಪನಂಗೆ ಕುಡಿಯ ಚಟಕ್ಕೆ ಬಿದ್ದು ಹಾಳಾದ.ದಿನಾ ಕುಡ್ಕಂಡು ಬಂದು ಆ ಹುಡುಗೀನ ಬಾಯಿಗೆ ಬಂದಂಗೆ ಬೈದು ಹೊಡಿಯಕ್ಕೆ ಹೋಗ್ತಿದ್ದ. ಈ ಹುಡುಗಿ ಹೆದರ್ಕಂಡು ಪಕ್ಕದ ಮನೆಗೆ ಓಡೋಗದು. ದಿನಾ ಈ ರಗಳೆ ನೋಡಕ್ಕೆ ಆಗ್ತಿರಲಿಲ್ಲ. ಬೆಂಗ್ಳೂರನಗಿರ ನನ್ನ ಎರಡ್ನೆ ಮಗಳು ಮನೆ ಕೆಲ್ಸ ಒಂದು ನೋಡಿದೀನಿ ಕಳ್ಸು ಅಂದ್ಲು. ಅದಕ್ಕೆ ಕಳಿಸ್ದೆ ಕಣ್ರಮ್ಮ.ಇನ್ನೇನು ಮಾಡ್ಲಿ ನೀವೇ ಹೇಳ್ರಮ್ಮ” ಎಂದಾಗ ಸುಮಿತ್ರಾಳಲ್ಲೂ ಉತ್ತರವಿರಲಿಲ್ಲ. ನಮ್ಮ ಘನ ಸರ್ಕಾರ ಘೋಷಿಸಿರುವ ಭೇಟಿ ಬಚಾವೋ ಯೋಜನೆ ನೆನಪಿಗೆ ಬಂತು. ಅ‌ಸಹಾಯಕಳಾದ ಚಂದ್ರಮ್ಮನಿಗೆ ಬೇರೆ ದಾರಿ ಇರಲಿಲ್ಲ ಅನಿಸಿತು. ಆಗ ಸುಮಿತ್ರಾಳು ಸಹಾ ಮೌನಕ್ಕೆ ಶರಣಾದಳು.ಸ್ವಲ್ಪ ಹೊತ್ತಿನ ನಂತರ ಚಂದ್ರಮ್ಮ ಮೆಲ್ಲಗೆ “ನನ್ನ ದೊಡ್ಮಗಳು ಡಾಕ್ಟರತ್ರ ಕರ್ಕೊಂಡು ಹೋಗ್ತವಳೆ. ಒಂದೆರಡು ಸಾವ್ರ ಕೊಡ್ರಮ್ಮ. ನನ್ನ ಮಾನ ಮರ್ಯಾದೆ ಹೋಗುತ್ತೆ. ಈಗ್ಲೆ ಕರ್ಕೊಂಡು ಹೋಗ್ಬೇಕು” ಎಂದು ಹೇಳಿ ಅತ್ತಳು.ಸುಮಿತ್ರ ದುಡ್ಡು ಕೊಟ್ಟ ತಕ್ಷಣವೇ “ಬರ್ತಿನಮ್ಮ ನಿಮ್ಮ ಉಪಕಾರ ಮರೆಯಂಗಿಲ್ಲ” ಎನ್ನುತ್ತಾ ಹೊರಟಳು ಚಂದ್ರಮ್ಮ ಸುಮಿತ್ರಾಳ ಮನೆಕೆಲಸಕ್ಕೆ ಸೇರಿ ಹದಿನೈದು ವರ್ಷಗಳ ಮೇಲಾಗಿತ್ತು.ಎಲ್ಲ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಚಂದ್ರಮ್ಮ ಸುಮಿತ್ರನ ಮನಸ್ಸನ್ನುಗೆದ್ದಿದ್ದಳು ಯಾವ ಕೆಲಸವನ್ನು ಹೇಳಿದರೂ ಇಲ್ಲ ಎನ್ನದೆ ಮಾಡುವ ಚಂದ್ರಮ್ಮನ ಮಾತು ಕಡಿಮೆ.ಸುಮಿತ್ರಳು ಸಹ ಅವಳೆಲ್ಲ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಳು. ಇವರ ಆಪ್ತತೆಯನ್ನು ಕಂಡ ಸುಮಿತ್ರನ ಮಗಳು “ನಿನ್ನ ಆಪ್ತ ಸಖಿ ಹೇಗಿದ್ದಾಳೆ” ಎಂದು ತಮಾಷೆ ಮಾಡುತ್ತಾಳೆ. ಇಂತಹ ಚಂದ್ರಮ್ಮನಿಗೆ ಐದು ಜನ ಮಕ್ಕಳಿದ್ದರು. ಮೂರುಹೆಣ್ಣು ಎರಡು ಗಂಡು. ಗಂಡ ಕುಡಿತದ ಚಟಕ್ಕೆ ಬಿದ್ದು ಆರೋಗ್ಯ ಕೆಡಿಸಿಕೊಂಡು ತೀರಿಕೊಂಡಿದ್ದ. ಹಿರಿಮಗ ಮದುವೆ ಆದ ಮೇಲೆ ಬೇರೆ ಮನೆ ಮಾಡಿದ್ದ. ದೊಡ್ಡ ಮಗಳನ್ನು ತಮ್ಮನಿಗೆ ಕೊಟ್ಟು ಮದುವೆ ಮಾಡಿದ್ದಳು. ಬಸ್ ಅಪಘಾತವೊಂದರಲ್ಲಿ ತಮ್ಮ ಸತ್ತ ಮೇಲೆ ಮಗಳು ಪುಟ್ಟ ಹೆಣ್ಣುಮಗುವನ್ನು ಕರೆದುಕೊಂಡು ತವರು ಮನೆ ಸೇರಿದ್ದಳು. ಕೂಲಿ ಮಾಡಿ ದುಡಿದು ತರುತ್ತಿದ್ದರಿಂದ ಯಾರಿಗೂ ಭಾರವಾಗಿರಲಿಲ್ಲ. ಚಂದ್ರಮ್ಮನ ಎರಡನೆ ಮಗನೂ ಸಹಾ ಅವರಪ್ಪನಂತೆ ಕುಡಿತಕ್ಕೆ ದಾಸನಾಗಿದ್ದ. ಅವನು ದುಡಿದದ್ದೆಲ್ಲ ಅವನ ಕುಡಿತಕ್ಕೇ ಸರಿ ಹೋಗುತ್ತಿತ್ತು. ಎರಡನೆ ಮಗಳು ಮತ್ತು ಅವಳ ಗಂಡ ಇಬ್ಬರೂ ಬೆಂಗಳೂರು ಸೇರಿದ್ದರು. ಇನ್ನು ಮೂರನೆ ಮಗಳು ಗೀತ ಹತ್ತನೆ ತರಗತಿಯ ತನಕ ಓದಿ ಫೇಲಾಗಿ ಶಾಲೆ ಬಿಟ್ಟಿದ್ದಳು. ಚಂದ್ರಮ್ಮಮೂರು ಮನೆಗಳ ಮನೆ ಕೆಲಸ ಮಾಡಿದರೆ, ಗೀತ ಎಲ್ಲೂ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಅಡುಗೆ ಮಾಡ್ಕೊಂಡು ಅಕ್ಕನ ಮಗಳನ್ನ  ನೋಡಿಕೊಂಡಿದ್ದಳು.ಒಟ್ಟಾರೆ ಮನೆಯ ಹೆಣ್ಣುಮಕ್ಕಳೇ ಸಂಸಾರದ ಆಧಾರದ ಸ್ತಂಭವಾಗಿದ್ದರು. ಚಂದ್ರಮ್ಮನಿಗೆ ಹುಷಾರಿಲ್ಲದಾಗ ಮನೆ ಕೆಲಸ ಮಾಡಿ ಕೊಡುತ್ತಿದ್ದ ಗೀತ ಲಕ್ಷಣವಾಗಿದ್ದಳು.ಕುಡುಕನಾಗಿದ್ದ ಎರಡನೆ ಅಣ್ಣನ ಕಾಟ ತಡೆಯಲಾಗದೆ ಗೀತ ಬೆಂಗಳೂರಿನಲ್ಲಿದ್ದ ಅಕ್ಕನ ಮನೆಗೆ  ಬಂದು ಅವಳ ಮನೆ ಹತ್ತಿರವೇ ಇದ್ದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆಯಲ್ಲಿದ್ದ ಮಗುವನ್ನು ನೋಡಿ ಕೊಳ್ಳ ಬೇಕಾಗಿತ್ತು. ಮನೆಯಲ್ಲಿದ್ದಂಥ ಮಗುವಿನ ಅಜ್ಜಿಗೆ ಸಹಾಯಕಿಯಾಗಿ ಇರಬೇಕಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಹೋದರೆ ಸಂಜೆ ಎಂಟು ಗಂಟೆಗೆ ವಾಪಸಾಗುತ್ತಿದ್ದಳು ಊಟ ತಿಂಡಿ ಎಲ್ಲಾ ಅಲ್ಲೇ ಆಗುತ್ತಿದ್ದರಿಂದ ಅಕ್ಕನಿಗೂ ಸಹ ಭಾರವಾಗಿರಲಿಲ್ಲ. ಕೈಗೆ ನಾಲ್ಕು ಸಾವಿರ ಸಿಗುತ್ತಿತ್ತು. ಪ್ರತಿ ಭಾನುವಾರ ರಜೆ ಸಿಗುತ್ತಿತ್ತು. ಮನೆಯಲ್ಲಿನ ಇತರ ಕೆಲಸಗಳನ್ನು ಬೇರೆಯವರು ಮಾಡಿ ಕೊಡುತ್ತಿದ್ದರಿಂದ ಮಗು ನೋಡಿಕೊಳ್ಳುವ ಕೆಲಸ ಅಷ್ಟೇ. ಇಷ್ಟೇ ಆಗಿದ್ದರೆ ಚಂದ್ರಮ್ಮ ಇಷ್ಟೊತ್ನಲ್ಲಿ ಸುಮಿತ್ರನ ಮನೆಗೆ  ಬಂದು ಹೀಗೆ ಗೋಳಾಡುವ ಪ್ರಮೇಯವೇ ಇರುತ್ತಿರಲಿಲ್ಲ.ಗೀತಳ ಅಕ್ಕ ಗಾರ್ಮೆಂಟ್ ಕೆಲ್ಸಕ್ಕೆ ಹೋದ್ರೆ ಅವಳ ಗಂಡ ಹೋಟೆಲ್ ಕೆಲ್ಸಕ್ಕೆ ಹೋಗುತ್ತಿದ್ದ. ಅವನ ಜೊತೆ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದನು ಅವನೊಡನೆ ಗೀತಳ ಸ್ನೇಹವು ಬೆಳೆದು ಅವರಿಬ್ಬರೂ  ಪ್ರೇಮಿಗಳಾಗುವ ಹಂತಕ್ಕೆ ಬಂದಿತ್ತು.ಅವಳ ಅಕ್ಕನಿಗೆ  ನಾವಿಬ್ಬರೂ ಮದುವೆಯಾಗುತ್ತೇವೆ ಎಂದು ಹೇಳಿದ್ದಳು  ಅವಳ ಅಕ್ಕ ಸ್ವಲ್ಪ ಸಲಿಗೆ ಬಿಟ್ಟಿದ್ದೇ ಈಗ ತಪ್ಪಾಗಿತ್ತು. ಪ್ರತಿ ಭಾನುವಾರ ಅವನ ಜತೆ ಸಿನಿಮಾ ಹೋಟೆಲ್ ಗೆ ಹೋಗಿ ಬರುತ್ತಿದ್ದಳು. ಅವಳ ಅಕ್ಕನ ಕಣ್ಣಿಗೆ ಗೀತಳ ಹೊಟ್ಟೆಯು ಸ್ವಲ್ಪ ದಪ್ಪಗಾದಂತೆ ಎನಿಸಿ ಅನುಮಾನದಿಂದ ಕೇಳಿದಾಗ ಗೀತ ನಿಜವನ್ನು ಬಾಯ್ಬಿಟ್ಟಳು.”ಏನೇ ಇದೆಲ್ಲಾ ಮದ್ವೆಗೆ ಮುಂಚೆನೆ” ಎಂದು ಕೇಳಿದರೆ “ನಾವಿಬ್ರು, ದೇವಸ್ಥಾನದಗೆ  ಮದ್ವೆ ಆಗಿದೀವಿ.”ಎಂದು ಹೇಳಿ ತೆಗೆದಿಟ್ಟಿದ್ದ ಕರಿಮಣಿ ಸರವನ್ನು ಹಾಕಿಕೊಂಡಳು.ಇದನ್ನು ಕೇಳಿದ ಅವಳಕ್ಕನ ಗಂಡ ಸಿಟ್ಟಾಗಿ “ನೀನು ಇಲ್ಲಿರಬೇಡ ಮೊದ್ಲು ಊರಿಗೆ ಹೊರಡು” ಎಂದು ಕೂಗಾಡಿದನು ಮಾರನೆ ದಿನವೇ ಅವಳ ಅಕ್ಕ ಗೀತ ಕೆಲಸ ಮಾಡುತ್ತಿದ್ದ ಮನೆಗೆ ಅವಳ  ಜೊತೆಗೆ ಹೋಗಿ ಅವರಲ್ಲೇ ಬಿಟ್ಟಿದ್ದ ಸಂಬಳದ ದುಡ್ಡು ಸುಮಾರು ನಲ್ವತ್ತು ಸಾವಿರದಷ್ಟಿದ್ದ ದುಡ್ಡು ಕೇಳಿ ತರಲು  ಹೋದಾಗ ಗೊತ್ತಾಯ್ತು ಆಗಲೇ ಐದು ಸಾವಿರವನ್ನು ಗೀತ  ಖರ್ಚು ಮಾಡಿದ್ದಳು. ಸ್ವಲ್ಪ ದಿನ ಊರಿಗೆ ಹೋಗಿ ಬರ್ತಳೆ. ನಮ್ಮಮ್ಮಂಗೆ ಹುಷಾರಿಲ್ಲ ಎಂದು ಮನೆಕೆಲಸದ ಯಜಮಾನಿಗೆ ಸುಳ್ಳು ಹೇಳಿ ಇಬ್ರು ಬಂದರು. ಗಂಡನ ಮಾತಿನಂತೆ ಅವಳ ಅಕ್ಕನೂ ಗೀತನ ಜತೆಗೆ ಊರಿಗೆ ಬಂದಿದ್ದಳು. ಚಂದ್ರಮ್ಮನಿಗೆ ಇರೋ ವಿಷ್ಯಾನೆಲ್ಲಾ ತಿಳಿಸಿ ಗಾರ್ಮೆಂಟ್ನವರು ರಜಾ ಕೊಡಲ್ಲ ಎಂದು ಹೇಳಿ ಹೊರಟೆ ಬಿಟ್ಟಿದ್ದಳು. ಬೆಳಿಗ್ಗೆ ಮನೆ ಕೆಲ್ಸಕ್ಕೆ ಬಂದ ಚಂದ್ರಮ್ಮ ಏನೂ ಮಾತಾಡದೆ ಮೌನವಾಗಿದ್ದಳು. ಸುಮಿತ್ರಾ ಟೀ ಕೊಟ್ಟು ಕೇಳಿದ್ರು”ಏನಂದ್ರು ಡಾಕ್ಟರ್”. ಅಬಾಷನ್ ಮಾಡಕ್ಕಾಗಲ್ಲವಂತೆ. ಆಗ್ಲೆ ನಾಕ್ ತಿಂಗಳು ತುಂಬೈತಂತೆ “ಎಂದಳು ಸೋತು ಸುಣ್ಣವಾದ ಧ್ವನಿಯಲ್ಲಿ  ನಾಲ್ಕು ತಿಂಗಳಾದ್ರೂ ನಿಮಗೆ ಅಷ್ಟೂ ಗೊತ್ತಾಗಲಿಲ್ವೆ ” ಸ್ವಲ್ಪ ಒರಟಾಗೇ ಕೇಳಿದಳು ಸುಮಿತ್ರ.”ಆಗೆಲ್ಲ ಎನೇನೊ ಹೇಳ್ಕಂಡು ಅವ್ರ ಅಕ್ಕನ್ನ ಏಮಾರಿಸಿ ಬಿಟ್ಟವಳೆ.ಮೂರೂ ಬಿಟ್ಟವಳು ಅವರಕ್ಕನಿಗೆ ಗೊತ್ತಾಗಿರದೆ ಈಗ. ಗೊತ್ತಾದ ತಕ್ಷಣವೇ ಇಲ್ಲಿಗೆ ಕರ್ಕೊಂಡು ಬಂದವಳೆ” ಅದರ ಬಗ್ಗೆ ಮಾತಾಡಕ್ಕೆ ಅವಳಿಗೆ ಇಷ್ಟವಿಲ್ಲವೆಂದರಿತ ಸುಮಿತ್ರಾನೂ ಸುಮ್ಮನಾದಳು. ಹೋಗುವಾಗ “ಒಂದು ವಾರ ಕೆಲ್ಸಕ್ಕೆ ಬರಲ್ಲಮ್ಮ.ನನ್ನ ದೊಡ್ಡ ಮಗಳ್ನ ಕಳಿಸ್ತಿನಿ”ಎಂದು ಹೇಳಿ ಹೋದಳು. ಮಧ್ಯಾಹ್ನ ಒಂದು ಗಂಟೆಗೆ ಚಂದ್ರಮ್ಮನು ಅವಳ ಎರಡನೆ ಮಗಳು ಬಂದರು.ಅವಳ ಮಗಳು ತಾನು ತಂದಿದ್ದ ಲಗೇಜ್ ಬ್ಯಾಗಿನಿಂದ ಒಂದು ಕೆಂಪು ಪ್ಲಾಸ್ಟಿಕ್ ಕವರ್ ತೆಗೆದು ಅವರಮ್ಮನ ಕೈಗೆ ಕೊಟ್ಟಳು ಚಂದ್ರಮ್ಮಅದನ್ನು ಸುಮಿತ್ರಾ ಕಡೆ ಕೊಡುತ್ತಾ” ಇದ್ರಗೆ ಮುವತ್ತು ಸಾವಿರ ಐತ್ರಮ್ಮ.ನಾನು ಕೇಳಗಂಟ ಇದು ನಿಮ್ಮತ್ರನೇ ಇರಲಿ.ನನ್ ಮಗನ ಕಣ್ಣೀಗೇನಾರ ಬಿದ್ರೆ ಎಗರಿಸಬಿಡ್ತನೆ”ಎಂದಳು. ಆಗ ಸುಮಿತ್ರಾ “ಬೇಡಬೇಡ ಚಂದ್ರಮ್ಮ .ಬ್ಯಾಂಕ್ನಲ್ಲಿಡು”ಎಂದಾಗ ಅವಳ ಮಗಳು “ನಮ್ಮಮ್ಮನ ಹೆಸರಿನಗ ಐತಂತ ಅವ್ನಿಗೆ ಗೊತ್ತಾದರೆ ನಮ್ಮಮ್ಮನ ಪ್ರಾಣ ಹಿಂಡಿ ತಗಂಡು ಬಿಡ್ತನೆ. ಅದಕ್ಕೆ ಒಂದು ಹದಿನೈದು ದಿನ ಕಳೆದ ಮೇಲೆ ಗೀತನ ಅಕೌಂಟ್ ಗೆ ಹಾಕ್ಕಂತಳೆ ಅಲ್ಲಿತನಕ ನಿಮ್ಮತ್ರನೆ ಇರಲಿ” ಎಂದಾಗ ಸುಮಿತ್ರಾ ದುಡ್ಡನ್ನು ಎಣಿಸಿ ಕೊಂಡು “ಹದಿನೈದು ದಿನ ಆದ ಮೇಲೆ ತಗೊಂಡು ಹೋಗಿ ಬ್ಯಾಂಕಲ್ಲಿ ಇಡಬೇಕು” ಎಂದು ತಾಕೀತು ಮಾಡಿದರು.ನಂತರ ನೆನ್ನೆ ರಾತ್ರಿ ತಾನೆ ತಗೊಂಡಿದ್ದ ಎರಡು ಸಾವಿರ ವಾಪಸ್ ಕೊಟ್ಟರು.ಒಂದು ವಾರ ಕಳೆದ ಮೇಲೆ ಚಂದ್ರಮ್ಮ ಬಂದಳು. ನೋಡಿದರೆ ಅದೇ ಚಿಂತೆಯಲ್ಲಿ ಸೊರಗಿದಾಳೆ ಎನಿಸಿತು. ಕೆಲಸವೆಲ್ಲ ಮುಗಿಸಿದ ಮೇಲೆ ಸುಮಿತ್ರಾ”ಏನು ಆ ಹುಡುಗನ್ನ ಸುಮ್ನೆ ಬಿಟ್ಬಿಟ್ರಾ”ಎಂದು ಕೇಳಿದಳು.”ಅದೆಂಗರಮ್ಮ ಸುಮ್ತಿರಕಾಗುತ್ತೆ. ತಂಗಿ ಗಂಡ,ಚಂದ್ರಮ್ಮನ ಮಗಮತ್ತು ಅಳಿಯ ಎಲ್ಲ ಹೋಗಿ ಜೋರು ಮಾಡಿದರಂತೆ.”ಆಗ ನಾವಿಬ್ರೂ ಒಪ್ಪಿನೇ ಮದ್ವೆ ಆಗಿರೋದು.ದೇವಸ್ಥಾನದಲ್ಲಿ ಮದ್ವೆ ಮಾಡ್ಕಂಡಿದೀವಿ.ಈಗಲೇ ಮನೆ ಮಾಡಕ್ಕೆ ನನ್ನತ್ರ ದುಡ್ಡಿಲ್ಲ. ವರ್ಷ ಕಳೆದ್ಮೇಲೆ ನಾನೇ ಬಂದು ಕರ್ಕೊಂಡು ಹೋಗ್ತೀನಿ. ಈಗ ನನ್ನ ಹತ್ರ ಇರೋದು ಹತ್ತು ಸಾವಿರ ಅಷ್ಟೆ”ಎಂದು ಹೇಳಿ ದುಡ್ಡು ಕೊಟ್ಟು ಕಳಿಸಿದ್ದ. ನಮ್ಮ ಹುಡುಗಿ ಹಳ್ಳಕ್ಕೆ ಬಿದ್ದೈತೆ.ಇಂಥ ಪರಿಸ್ಥಿತಿಯಾಗೆ ಇನ್ನೇನು ಮಾಡಾದು ಅಂತ ಬಾಯ್ಮುಚ್ಚಿಕೊಂಡು ಬಂದವ್ರೆ.ಅವಳ ಹಣೆಬರನ ನಾವು ತಿದ್ದಕ್ಕಾಗುತ್ತೇನು. ಮಾಡಿದ್ದುಣ್ಣೋ ಮಹರಾಯ. ಉಪ್ಪುತಿಂದ ಮ್ಯಾಲೆ ನೀರು ಕುಡಿಬೇಕು ಚಂದ್ರಮ್ಮನ ತಂಗಿ ಗಂಡ ಬಂದು ಚಂದ್ರಮ್ಮನ ಎರಡ್ನೆ ಮಗನಿಗೆ “ಆ ಹುಡುಗಿ ಸುದ್ದಿಗೆ ಹೋಗ್ಬೇಡಪ್ಪ ಹುಷಾರ್ ಪ್ರಾಣಗೀಣ ಕಳ್ಕೊಂಡ್ರೆ ಏನ್ಮಾಡಾದು.ಆಗಬಾರದಾಗಿತ್ತು ಆಗೋಗೈತೆ. ಅವಳ ಹಣೆಬರ ಇದ್ದಂಗಾಗುತ್ತೆ. ನಮ್ಮ ಕೈ ಮೀರೈತೆ”ಅಂತ ಹೇಳಿ ಹೋದ. ನಮ್ಮ ಅಕ್ಕಪಕ್ಕದ ಮನೆ ಜನಗಳಿಗೆಲ್ಲ ಗೊತ್ತಾಗಿ ಬಿಟ್ಟೈತೆ. ಆಡ್ಕಂಡು ನಗೋವ್ರ ಮುಂದೆನೇ ಎಡವಿ ಬಿದ್ದಂಗಾಯ್ತು. ಜನಕ್ಕೆ ಆಡ್ಕಳ್ಳ ಕತೆ ಆಗೋಯ್ತು ನಮ್ಮನೆ ಬದುಕು.ನೆಂಟರೆಲ್ಲ ಆಡಿಕ್ಯಂಡು ನಗ್ತಾವರೆ.ನಮ್ಮತ್ರಯಾರೂ ಮಾತಾಡಲ್ಲ.ಎಲ್ಲಾದ್ರು ತಲೆ ಮರೆಸ್ಕಂಡು ಹೋಗಿ ನೇಣಾಕ್ಕಂಡು ಸಾಯಂಗಾಗೈತೆ ನಾನ್ ತಲೆಎತ್ಕಂಡ್  ಒಡಾಡಕ್ಕಾಗದಂಗೆ ಮಾಡ್ಬಿಟ್ಟಳು” ಅಳುತ್ತಾ ಕಣ್ಣೀರು ಹಾಕಿದಳು.ಮತ್ತೆ ಮತ್ತೆ ಅದೇ ವಿಶ್ಯಾ ಕೆದಕಿ ಕೇಳುತ್ತಾ ಬೇಜಾರು ಮಾಡೋದು ಬೇಡವೆಂದು  ಸುಮಿತ್ರಾ ಏನೂ ಕೇಳಲಿಕ್ಕೆ ಹೋಗಲಿಲ್ಲ. ಒಂದಿಪ್ಪತ್ತು ದಿನಗಳಾಗಿರಬಹುದು. ಒಂದು ದಿನ “ನಮ್ಮ ದೊಡ್ಮಗಳು  ನೆನ್ನೆ ಡಾಕ್ಟ್ರತ್ರಕ್ಕೆ ಗೀತನ್ನ  ಕರ್ಕೊಂಡು ಹೋಗಿದ್ದಳು. ಅವಳಿಗೆ ರಕ್ತ ಕಡಿಮೆ ಐತಂತ ಹೇಳವ್ರೆ”ಎಂದಳು. ಈಗ ಮಗಳ ಬಗ್ಗೆ ಸಿಟ್ಟಿಗಿಂತ ಮರುಕವೇ ಎದ್ದು ಕಾಣುತ್ತಿತ್ತು. ಎಷ್ಟೇ ಆಗಲಿ ಹೆತ್ತ ತಾಯಿ ಅಲ್ವೆ ! ಆ ಕ್ಷಣ ಚಂದ್ರಮ್ಮನ್ನ  ನೋಡಿದ ಸುಮಿತ್ರಳಿಗೆ ಅಯ್ಯೋ ಅನಿಸಿತು.ಆ ಕ್ಷಣದಲ್ಲಿ ಸುಮಿತ್ರಳಿಗೆ  ಟಿ.ವಿ.ನಲ್ಲಿ ನೋಡಿ ಕೇಳಿದ ಮರ್ಯಾದಾ ಹತ್ಯೆಗಳು ನೆನಪಿಗೆ ಬಂತು. ಚಂದ್ರಮ್ಮನ ತಾಯ್ತನವೇ ಗೆದ್ದಿತ್ತು.ತಂದೆತಾಯಿಗಳು ಹೆತ್ತ ಮಕ್ಕಳನ್ನೇ ಕೊಲ್ಲುವಷ್ಟು  ಕಟುಕರಾಗಲು ಹೇಗೆ ಸಾದ್ಯ ? ಮಕ್ಕಳ ಪ್ರೇಮ ಪ್ರಕರಣ  ತಮ್ಮ ಕೈ ಮೀರಿ ಬೆಳೆದಾಗ ಅದಕ್ಕೆ ಬೇರೆ ರೀತಿಯಲ್ಲಿಯೇ ಪರಿಹಾರಗಳನ್ನು ಹುಡುಕಬೇಕು. ಅದನ್ನು ಬಿಟ್ಟು ತಮ್ಮ ಹೆತ್ತ ಮಕ್ಕಳನ್ನೆ ಕೊಲ್ಲುವ ಮಟ್ಟಕ್ಕಿಳಿಯಬಾರದು.ಏನೂ ಮಾಡಲಾಗದಿದ್ದರೆ ಕಡೆ ಪಕ್ಷ ಸುಮ್ಮನೆ ಇದ್ದು ಬಿಡಬೇಕು ಚಂದ್ರಮ್ಮನ ಅಸಹಾಯಕ ಪರಿಸ್ಥಿತಿಗೆ ಯಾವ ರೀತಿಯ ಸಮಾಧಾನ  ಹೇಳಬೇಕೆಂದು ಸುಮಿತ್ರಳಿಗೆ ತೋಚಲಿಲ್ಲ. ಚಂದ್ರಮ್ಮನ ಸಂಸಾರ ನೆರೆಹೊರೆಯವರ ನಗು ಪಾಟ್ಲಿಗೆ  ಗುರಿಯಾಗಿ ಅವಳ ನೆಮ್ಮದಿಯನ್ನು ಕೆಡಿಸಿತ್ತು. ಅದೂ

ಯಾರು ಹೊಣೆ ? Read Post »

ಕಥಾಗುಚ್ಛ

ಹೆಣ್ಣು

ಕಥೆ ಹೆಣ್ಣು ಸಹನಾ ಪ್ರಸಾದ್ ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. “ ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು ಇರಬೇಕೆ0ದು, ರಮ್ಯಳ ರೂಮು ಖಾಲಿಯಾಗಿದೆಯಲ್ಲ, ಅಲ್ಲಿ ನಾನಿರುತ್ತೇನೆ” ಎ0ದು ಮಗಳ ರೂಮಿಗೆ ಶಿಫ್ಟ್ ಆಗಿದ್ದಳು. ಮದುವೆಯಾಗಿ ಗ0ಡನ ಮನೆಗೆ ಹೋದ ಮಗಳು ಬರುವುದು ವಾರಕೊಮ್ಮೆ. ಬ0ದರೂ ಜಾಸ್ತಿ ಹೊತ್ತು ಇರುತ್ತಿರಲಿಲ್ಲ. ಇಡೀ ಕೋಣೆ ತನ್ನದಾದರೂ ನಿದ್ರೆ ದೂರವಾಗಿದೆ. “ ಪರವಾಗಿಲ್ಲ ರೀ, ಇದ್ದೊಬ್ಬ ಮಗಳ ಮದುವೆ ಮಾಡಿ ನಿಷ್ಚಿ0ತೆಯಾದಿರಿ. ಇನ್ನು ನೀವು, ನಿಮ್ಮ ಪತ್ನಿ, ನಿಮ್ಮ ಕೆಲಸ, ಹಾಯಾಗಿರಬಹುದು” ಮಗಳ ಮದುವೆಯಲ್ಲಿ ಬಹಳ ಜನ ಹೇಳಿದ ಮಾತಿದು. ಅದು ನಿಜ ಕೂಡ. ತಡವಾಗಿ ಮದುವೆಯಾದರೂ, ತನ್ನದು, ಸ0ಧ್ಯಳದು ಅನ್ಯೋನ್ಯ ದಾ0ಪತ್ಯ.ತನಗಿ0ತಾ ಹೆಚ್ಚು ಸಿರಿವ0ತಿಕೆ ಅವಳ ತವರು ಮನೆಯದು. ನೋಡಲು ಸು0ದರ, ಅಷ್ಟೇ ಒಳ್ಳೆಯ ಮನಸ್ಸು. ತನ್ನ0ತಹ ಸುಮಾರಾದ  ಗ0ಡನ್ನು ಮದುವೆಯಾದುದ್ದು ಅಚ್ಚರಿಯೆ. ಇಲ್ಲ, ಅದು ಅನಸೂಯ ಅತ್ತೆಯ ದಯೆ. ಥೂ, ಯಾಕೊ ಅತ್ತೆಯನ್ನು ಮನಸ್ಸಿನಿ0ದ ತೆಗೆದು ಹಾಕಲೇ ಆಗುತ್ತಿಲ್ಲ. ತನ್ನ ಬದುಕಲ್ಲಿ ಅವಳು ಒ0ದಾಗಿಬಿಟ್ಟಿದ್ದಾಳೆ. ಮಗ್ಗಲು ಬದಲಾಯಿಸಿದ. ಸ0ಧ್ಯಳಿಗೆ ಚೊಚ್ಚಲು ಬಸಿರು, ರಮ್ಯಳದ್ದು. ಮೊದಲೇ ಇಬ್ಬರಿಗೂ  ಲೇಟ್ ಮದುವೆ, ಬಸಿರಾದಾಗ ಮದುವೆಯಾಗಿ ಎರಡು ವರುಷಗಳ ಮೇಲಾಗಿ ಪರಿಸ್ಥಿತಿ ನಾಜೂಕಾಗಿತ್ತು. ಮಗಳ0ತೆ ಜೋಪಾನ ಮಾಡಿದವಳು ಅತ್ತೆಯೆ. ಅವಳು ಇಲ್ಲದಿದ್ದರೆ ದೂರದ ತವರಿಗೆ ಕಳುಹಿಸಿ, ಅಲ್ಲಿ ಅವಳ ವಯಸಾದ ತಾಯಿಯ ಮಡಿಲಲ್ಲಿ ಬಿಡಬೇಕಿತ್ತು. ಓಡಾಟ ಬೇಡವೇ ಬೇಡ, ಸ0ಪೂರ್ಣ ವಿಶ್ರಾ0ತಿ  ಎ0ದು ಬೇರೆ ಹೇಳಿಬಿಟ್ಟಿದ್ದರಲ್ಲ. ಆ ಸಮಯಕ್ಕೆ ಅನಸೂಯ ಅತ್ತೆಯ ನೆರವಿಲ್ಲದಿದ್ದರೆ ಇ0ದು ರಮ್ಯಾ ಇರುತ್ತಲೇ ಇರಲ್ಲಿಲ್ಲ…. ಇನ್ನು ಮಲಗಲು ಸಾದ್ಯವೇ ಇಲ್ಲ ಎ0ದು ಎದ್ದು ಕುಳಿತ. ಸ0ಧ್ಯಳನ್ನು ಎಬ್ಬಿಸಿ ಎಲ್ಲವನ್ನು ಹೇಳಿಬಿಡಲೇ, ಅವಳ ಮಡಿಲಲ್ಲಿ ಮುಖವಿಟ್ಟು ಅತ್ತು ಹಗುರವಾಗಲೇ, ದಯವಿಟ್ಟು ಅತ್ತೆಗೆ ಎಲ್ಲಾ ವಿವರಿಸಿ ನನ್ನನ್ನು ಕ್ಷಮಿಸಲು ಹೇಳು ಎ0ದು ಕಾಲಿಗೆ ಬೀಳಲೇ, ಉದ್ವಿಗ್ನನಾಗಿ ಎದ್ದು ನಿ0ತ.  ಕಾಲುಗಳು ಆಗುವುದೇ ಇಲ್ಲವೆ0ದು ಮುಷ್ಕರ ಹೂಡಿದವು. ಹೇಳಲು ಉಳಿದಿರುವುದಾದರೂ ಏನು? ಎಲ್ಲ ಕಾಗದ ಪತ್ರಗಳು, ಡಾಕ್ಯುಮೆ0ಟುಗಳು ತಯ್ಯಾರಾಗಿವೆ. ವಕೀಲರು, ಲೀಗಲ್ ಅಡ್ವೈಸರ್ಗಳು ಎಲ್ಲಕ್ಕು ಸಹಿ ಹಾಕಿ ರೆಡಿ ಮಾಡಿದ್ದಾರೆ. ಇದೇನು ನೆನ್ನೆ ಮೊನ್ನೆಯ ಮಾತಲ್ಲ. ಸುಮಾರು ಮೂರು ತಿ0ಗಳು ಹಗಲು ರಾತ್ರಿ ಯೋಚಿಸಿ ಮಾಡಿದ ಯೋಜನೆ. ನಾಳೆ ಇದಕ್ಕೆಲ್ಲ ತೆರೆ ಬಿದ್ದು, ಇನ್ನು ತನ್ನ ಮಾತು, ಬೇರೆ ಡೈರೆಕ್ಟರ್ಗಳ ಇಷ್ಟದ0ತೆ ಕ0ಪನಿ ನಡೆಯುವುದು. ಅನಸೂಯ ಅತ್ತೆಗೆ ನಾಳೆ ವಿದಾಯ. ತನ್ನ ಮಗುವಿಗಿ0ತ ಪ್ರೀತಿಸಿ, ತನ್ನೆಲ್ಲ್ಲಾ ಸಾರವನ್ನುಣಿಸಿ ಈ ಕ0ಪನಿಯ ಏಳಿಗೆಗೆ ಕಾರಣಳಾದ ಅವಳನ್ನು ತಾವು ಹೊರಕಳಿಸುತ್ತಿರುವುದು. “ ಅವರದು ಹಳೇ ಕಾಲದ ತರ್ಕಗಳು, ಯೋಚನೆಗಳು. ಆ ಥರಹದ ಮೋರಾಲಿಟಿ ಈಗಿನ ಕಾಲಕ್ಕೆ ಸರಿಹೋಗಲ್ಲ. ನಮ್ಮ ಕ0ಪನಿಗೆ ಬ್ಯುಸಿನೆಸ್ಸ್ ಮುಖ್ಯ, ಧರ್ಮ, ಅಧರ್ಮ, ಈ ತರಹದ ಗೊಡ್ಡು ಯೋಚನೆಗಳಲ್ಲ. ನ್ಯಾಯ,ಅನ್ಯಾಯ ಅ0ತ ತೆಲೆಕೆಡಿಸಿಕೊಳ್ಳುವುದು, ಲ0ಚ ತಿಳಿದು ಕೊಡುವುದಿಲ್ಲ,ಯಾರನ್ನೂ ಒಲಿಸಿಕೊಳ್ಳುವುದಿಲ್ಲ ಎ0ದೆಲ್ಲಾ ಹೇಳುತ್ತಾ ಕುಳಿತರೆ ಲಾಸ್ ಆಗದೆ ಮತ್ತಿನ್ನೇನು? ಅವತ್ತು ಆ ಮನುಷ್ಯನನ್ನು  ಸರಿಯಾಗಿ ನೋಡಿಕೊ0ಡಿದ್ದರೆ , ಆ ಕಾ0ಟ್ರಾಕ್ಕ್ಟ್  ನಮ್ಮದಾಗುತ್ತಿತ್ತು., ಧರ್ಮಭೀರುಗಳಾಗಿ ವ್ಯಾಪಾರ, ವ್ಯವಹಾರ ಸಾಧ್ಯವಿಲ್ಲ. ಅನಸೂಯ ಮೇಡಮ್ ರಿಟೈರಾಗಲಿ, ಕ0ಪನಿಯ ಏಳ್ಗೆಗೆ   ಅವರಿರುವವರೆಗೆ ಸಾಧ್ಯವೆ ಇಲ್ಲ” ಬಹಳ ದಿನಗಲಿ0ದ ಅತ್ತೆಯ ಬಗ್ಗೆ ಉಚ್ಚ ವಲಯದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಕ0ಪನಿಯ ಪ್ರಗತಿಗೆ ಅವಳ ಕೊಡುಗೆ ಅಪಾರ ಎನ್ನುವುದೇನೋ ಸರಿ, ಆದ್ರೆ ಈಗಿನ ಕುಸಿತಕ್ಕೆ ಅವಳ ನೀತಿಯುತವಾದ ಯೋಚನೆಗಳು, ಅನಿಸಿಕೆಗಳು ಸುಮಾರು ಮಟ್ಟಿಗೆ  ಕಾರಣ ಎನ್ನುವುದೂ ಸುಳ್ಳಲ್ಲ. ನಾಳೆ ಅತ್ತೆಗೆ ಫೇರ್ ವೆಲ್ ಪಾರ್ಟಿ. ಅವಳಿಗೆ ದೊಡ್ಡ ಬೊಕೆಯಿತ್ತು, ಬೆಳ್ಳಿ ಗಣಪನ ವಿಗ್ರಹ ಕೊಟ್ಟು “ ಆಯಿತು, ನೀನಿನ್ನು ಹೊರಡಮ್ಮ” ಎನ್ನುವ ಕಾರ್ಯಕ್ರಮ. ಅವಳನ್ನು ಈ ರೀತಿ ವೀ ಅರ್ ಎಸ್ ತೆಗೆದುಕೊಳ್ಳುವುದಕ್ಕೆ ಕಮಿಟಿಗೆ ಸಪೋರ್ಟ್ ನೀಡಿದವನಲ್ಲಿ ತಾನೂ ಒಬ್ಬ. ಅತ್ತೆಗೂ ಇದು ಗೊತ್ತು. ಇದುವರೆಗೂ ಅವಳು ತನಗೇನೂ ಹೇಳಿಲ್ಲ. ಸ0ಧ್ಯಳಿಗೂ ಗೊತ್ತಿಲ್ಲ. ಮೊದಲೇ ಅವಳ ದೃಷ್ಟಿಯಲ್ಲಿ ತಾನು ಹಣಕ್ಕಾಗಿ ಮಾನವೀಯತೆಯನ್ನು ಮರೆಯುವ0ತಹವನು. ಈಗ ಅತ್ತೆಯನ್ನು ಕ0ಪನಿಯಿ0ದ ಹೊರ ಕಳಿಸುವುದರಲ್ಲಿ ತನ್ನ ಪಾತ್ರವಿದೆ ಎ0ದರೆ ಭೂಮ್ಯಾಕಾಶವನ್ನು ಒ0ದು ಮಾಡಿಬಿಡುವಳು. ಬೆಳಗು ಹರಿದೇ ಬಿಟ್ಟಿತು. ತಿ0ಡಿಯನ್ನೂ ತಿನ್ನದೆ ಮನೆಯಿ0ದ ಹೊರಬಿದ್ದ. ಆಫೀಸು ತಲುಪಿ ಬೋರ್ಡ್ ರೂಮಿನಲ್ಲಿ ಸೇರಿ ಮೂಲೆ ಹಿಡಿದು ಕುಳಿತಾಗಲೂ, ಅಲ್ಲಿ ಕೊಟ್ಟ ತ0ಪು ಪಾನೀಯ ಕುಡಿದಾಗಲೂ, ಅತ್ತೆ, ಸು0ದರ ರೇಷ್ಮೆ ಸೀರೆ ಉಟ್ಟು ನಸುನಗುತ್ತಾ ಒಳ ಬ0ದದ್ದು, ಅವಳ ಬಗ್ಗೆ ಹೊಗಳಿಕೆಯ ಮಾತು ಬೇರೆಯವರು ಹೇಳಿದ್ದು ಕೇಳಿದಾಗಲೂ ಮನಸ್ಸಿನ ಚಡಪಡಿಕೆ, ಎದೆಯ ಡವಡವ ನಿಲ್ಲಲಿಲ್ಲ. ಸಭೆಯನ್ನು ಉದ್ದೇಶಿಸಿ ಎರಡು ಮಾತುಗಳನ್ನಾಡಲು ಕೇಳಿಕೊಳ್ಳಲು, ಅವಳು ಎದ್ದು ನಿ0ತಳು. ತನ್ನ ಬಗ್ಗೆ ಈಗ ಹೇಳುವಳು, ತಾನೆ0ತಹ ದ್ರೋಹಿ ಎನ್ನುವಳು, ತನ್ನ ಯೌವನ, ಜೀವನವೆಲ್ಲಾ ಧಾರೆ ಎರೆದ ಈ ಕ0ಪನಿ ತನ್ನನ್ನೆಷ್ಟು ಕ್ರೂರವಾಗಿ ಹೊರಕಳುಹಿಸುತ್ತಾ ಇದೆ ಎನ್ನುವಳು, ಬೇರೆಯವರಿರಲಿ, ಸ್ವ0ತ ಅಣ್ಣನ ಮಗನಾದ ತಾನು ಹೀಗೆ ಮಾಡಬಾರದಾಗಿತ್ತು ಎನ್ನುವಳು…. ಕಾಯುತ್ತಾ ಕುಳಿತವನಿಗೆ, ಕೈಯಲ್ಲಿದ್ದ ಗ್ಲಾಸು ಬಿದ್ದು ಒಡೆದಿದ್ದು, ಎಲ್ಲಾ ತನ್ನತ್ತ ನೋಡಿದ್ದು, ಅತ್ತೆ ಮುಗುಳ್ನಗುತ್ತ ಎಲ್ಲರಿಗೂ ವಿದಾಯ ಹೇಳಿದ್ದು, ಕ0ಪನಿಗೆ ಒಳ್ಳೆಯದಾಗಲಿ ಎ0ದು ಹರಸಿದ್ದು, ಇನ್ನು ಮು0ದೆ ಅವಳ ಜಾಗವನ್ನಾಕ್ರಮಿಸುವ ತನಗೆ ಶುಭ ಕೋರಿದ್ದು, ಯಾವುದೇ ದ್ವೇಷ, ರೋಷದ ಮಾತಾಡದಿದ್ದು, ಅತ್ತೆಯ ಎದುರು ತಾನು ತೀರ ಸಣ್ಣವನಾಗಿಬಿಟ್ಟೆ ಎ0ಬ ನೋವಿನ ವಿನಹ ಏನೂ ಅರಿವಾಗಲಿಲ್ಲ. *************************************************

ಹೆಣ್ಣು Read Post »

ಕಥಾಗುಚ್ಛ

ಹೇಮಾ

ಕಥೆ ಹೇಮಾ ಎಂ.ಆರ್.ಅನಸೂಯ ವಿಜಯಾ  ಸಂಜೆ ಕಾಫಿ ಕುಡಿದು ಕೂತಿದ್ದಾಗ ಪಕ್ಕದಲ್ಲೇ ಇದ್ದ ಮೊಬೈಲ್ ರಿಂಗಣಿಸಿತು. ನೋಡಿದರೆ  ಹೇಮಾ !  ” ನಮಸ್ತೆ ಮೇಡಂ “ ಹೇಮಾ, ಆರಾಮಾಗಿದೀಯಾ ,  ಹೇಗಿದಾನಮ್ಮ ನಿನ್ನ ಮಗ ? ಚೆನ್ನಾಗಿದ್ದಾನೆ  ಮಿಸ್.  ಮಿಸ್ ಮುಂದಿನ ಭಾನುವಾರ ನಾಮಕರಣ ಶಾಸ್ತ್ರವಿದೆ ಖಂಡಿತ ಬರಬೇಕು ಮೇಡಂ   ಹೌದಾ ಎಷ್ಟು ತಿಂಗಳು ಮಗುವಿಗೆ ಐದು ತಿಂಗಳು  ಮಿಸ್ ಹೇಮಾ , ನೀನು ಊರಿಗೆ ಬಂದಾಗ ತಿಳಿಸು. ಪಾಪುನ  ನೋಡಲು  ಬರುತ್ತೇನೆ. ಪಾಪುಗೆ ಏಳು ತಿಂಗಳಾದಾಗ  ಊರಿಗೆ ಬರ್ತಿನಿ ಮಿಸ್ ಅಜ್ಜಿಗೆ ಆಗುವುದಿಲ್ಲ. ಕಷ್ಟ ಆಗುತ್ತೆ. ಬೇಡ  ಅಂದ್ರು ಅತ್ತೆ ಹೌದಲ್ವಾ ನಿಮ್ಮತ್ತೆ ಹೇಳೋದು ಸರಿಯಾಗೇ ಇದೆ ಹೌದು  ಮಿಸ್  ನಮ್ಮತ್ತೆ ತುಂಬಾ ಒಳ್ಳೆಯವರು   ಹೇಮಾ ನೀನು ಊರಿಗೆ ಬಂದಾಗ  ಫೋನ್ ಮಾಡು ಆಯ್ತು ಮಿಸ್ . ಮಗು ಅಳುವ  ಧ್ವನಿ ಕೇಳಿಸಿತು. ಸರಿ  ಈಗ ಮಗುವನ್ನು ನೋಡು ಹೇಮಾ ಎಂದು ಹೇಳಿ ವಿಜಯಾ ಫೋನಿಟ್ಟರು. ಆದರೂ ಹೇಮಾಳ ಗುಂಗು ಮನದಲ್ಲಿ ಉಳಿಯಿತು.  ಹೇಮಾ  ವಿಜಯಾಳ  ಶಿಷ್ಯೆ. ಅವಳು ಪ್ರೌಢಶಾಲೆಯಲ್ಲಿ  ಓದುತ್ತಿದ್ದ ಕಾಲದಿಂದಲೂ  ಅವಳ ನಡೆನುಡಿಗಳು  ಇಷ್ಟ  ಮಧ್ಯಮ ವರ್ಗಕ್ಕೆ ಸೇರಿದ ಹೇಮಾ ಚುರುಕು ಹುಡುಗಿ ಹೆತ್ತತಾಯಿಯಿಲ್ಲದೆ ಅಜ್ಜಿ ತಾತನ ಆಶ್ರಯದಲ್ಲಿ ಬೆಳೆದ ಸಂಕೋಚ ಸ್ವಭಾವದ ಅವಳು ಓದಿನಲ್ಲಿ ಜಾಣೆ. ಒಮ್ಮೆ ಅವರ ಅಜ್ಜಿ ಪೋಷಕರ ಸಭೆಗೆ ಬಂದಾಗ ಅವರ ಆಜ್ಜಿ ಹೇಳಿದ್ದು ಅವರು ನೆನಪಿಗೆ ಬಂತು.  ಅವಳ ತಾಯಿಯು ಹೇಮಾಳ ತಮ್ಮನಿಗೆ ಜನ್ಟ ಕೊಟ್ಟ ನಂತರ  ತೀರಿಕೊಂಡ ದುರ್ದೈವಿ. ಹೆರಿಗೆಗಾಗಿ ತವರು ಮನೆಗೆ ಬಂದಿದ್ದರಿಂದ ಮಕ್ಕಳು ಇಲ್ಲೇ ಉಳಿದವು. ಹೇಮಾಳ ತಂದೆಯ ತಾಯಿ ತಂದೆಯರೂ ಇಲ್ಲದ ಕಾರಣ ಆ ಮಕ್ಕಳನ್ನು ಸಲಹಲು ಯಾರೂ ಮುಂದೆ ಬರಲಿಲ್ಲ. ಹೇಮಾಳ ತಾಯಿ ಒಬ್ಬಳೆ ಪ್ರೀತಿಯ ಮಗಳಾದ್ದರಿಂದ ಅವಳ ಮಕ್ಕಳಿಬ್ಬರು ಅನಾಥ ತಬ್ಬಲಿಗಳಂತೆ ಬೆಳೆಯುವುದು ಬೇಡವೆಂದು ಮಕ್ಕಳನ್ನು ತಾವೇ ಸಾಕಲು ನಿರ್ಧರಿಸಿದರು. ಹೇಮಾಳ ಇಬ್ಬರು  ಸೋದರ ಮಾವಂದಿರು ಸಹ ಒಪ್ಪಿದರು. ಉದ್ಯೋಗದ ನಿಮಿತ್ತ ಬೇರೆ ಬೇರೆ ಊರುಗಳಲ್ಲಿದ್ದರೂ ಸಹಾ ತಾವು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದರು. ಹೇಮಾಳ ತಾತ ಚಿಕ್ಕ ಹಿಟ್ಟಿನ ಗಿರಣಿ ನಡೆಸುತ್ತಿದ್ದರು. ಮೊದಲಿಗೆ ಹೇಮಾಳ ತಂದೆಯು ತಿಂಗಳಿಗೊಮ್ಮೆ ಬರುತ್ತಿದ್ದವರು ಎರಡನೆ ಮದುವೆಯಾದ ನಂತರ ಆರು ತಿಂಗಳಿಗೊಮ್ಮೆ ಬಂದಾಗ  ಮಕ್ಕಳಿಗೆ ಒಂದಿಷ್ಟು ಬಟ್ಟೆಗಳನ್ನು ಕೊಡಿಸಿ ಅವರ ಕೈಯಲ್ಲಿಷ್ಟು ಹಣ ಕೊಟ್ಟರೆ ತನ್ನ ಜವಾಬ್ದಾರಿಯು ಮುಗಿಯಿತೆಂದು ಭಾವಿಸಿದ್ದ ಮಹಾನುಭಾವ. ತಾಯಿ  ಸತ್ತ ಮೇಲೆ ತಂದೆ ಚಿಕ್ಕಪ್ಪ ಎಂಬ ಗಾದೆಗೆ ತಕ್ಕಂತಿದ್ದರು. ಮಗಳ ಮಕ್ಕಳು ಓದಿನಲ್ಲಿ ಮುಂದಿರುವುದು ಹೇಮಾಳ ಅಜ್ಜಿ ತಾತನಿಗೆ ನೆಮ್ಮದಿ. ಹೇಮಾಳಂತೂ ಅವಳಮ್ಮನ ಪಡಿಯಚ್ಚು.  ಮಗಳ ಸಾವಿನ ಸಂಕಟವನ್ನು ಇಬ್ಬರು ಮೊಮ್ಮಕ್ಕಳ ಆಟ ಪಾಠಗಳು ಮರೆಸಿದ್ದವು‌. ಇಬ್ಬರೂ ಸೋದರ ಮಾವಂದಿರಿಗೂ ತಂಗಿಯ ಮಕ್ಕಳನ್ನು ಕಂಡರೆ ಬಲು ಅಕ್ಕರೆ. ತನ್ನ ಪ್ರೀತಿಯ ಅಜ್ಜಿಯನ್ನು ಬಿಟ್ಟು ಒಂದು ದಿನವೂ ಇರಲಾರಳು ಹೇಮಾ. ಶಾಲೆಗೆ ರಜೆ ಬಂದಾಗ ಮಾವಂದಿರು “ಬಾ ಪುಟ್ಟಿ ನಮ್ಮ ಮನೆಯಲ್ಲಿ ಒಂದೆರಡು ದಿನ ಇದ್ದು ಬರುವೆಯಂತೆ”ಎಂದು ಕರೆದರೆ ಅಜ್ಜಿ ಬಂದ್ರೆ ಮಾತ್ರ  ಬರ್ತಿನಿ’ ಎಂದು ಮುದ್ದಾಗಿ ಹೇಳಿದರೆ  ಅಜ್ಜಿಗೆ ಪ್ರೀತಿಯುಕ್ಕಿ ಬರಸೆಳೆದು ಮುತ್ತಿಡುತ್ತಿದ್ದರು.  ಹೇಮಾಳಿಗೆ ತಮ್ಮನನ್ನು ಕಂಡರೆ ಬಲು ಪ್ರೀತಿ.  ಯಾವುದನ್ನೇ ಆಗಲಿ ತಮ್ಮನೊಡನೆ ಹಂಚಿಕೊಂಡು ತಿಂದರೆ ಮಾತ್ರ  ಅವಳಿಗೆ ಸಮಾಧಾನ. ಹೇಮಾಳ ಅಜ್ಮಿ ಹೇಳಿದ ಒಂದು ಪ್ರಸಂಗ ನೆನಪಿಗೆ ಬಂತು. ಆ ಸಂಗತಿಯನ್ನು ಹೇಳುತ್ತಾ ಕಣ್ತುಂಬಿ ಕೊಂಡಿದ್ದರು. ಒಮ್ಮೆ ಅವರ ಮನೆಯಿದ್ದ ಬೀದಿಯ ಮನೆ ಒಂದರಲ್ಲಿ ನಡೆದಿದ್ದು. ಚಿಕ್ಕ ಮಗುವಿನ ತಾಯಿಯೊಬ್ಬಳು ಏನೋ ಖಾಯಿಲೆಯಿಂದ ತೀರಿಕೊಂಡಿದ್ದರು. ಅದನ್ನು ಕಂಡ ಜನರು ಆ ತಬ್ಬಲಿ ಮಗುವಿನ ಬಗ್ಗೆ ಅನುಕಂಪದ ಮಾತುಗಳನ್ನಾಡುವುದನ್ನು ಕೇಳಿದ ಹೇಮಾ ‘ಅಜ್ಜಿ ಆ ಪಾಪುಗೆ ಇನ್ಮುಂದೆ ಎಷ್ಟು ಕಷ್ಟ ಆಗುತ್ತಲ್ವ ‘ಎಂದು ಕೇಳಿ ಕಣ್ಣೀರು ಹಾಕಿದ್ದಳಂತೆ. ರಾತ್ರಿ ಮಲಗುವಾಗ ಅಜ್ಜಿಯನ್ನು ತಬ್ಬಿಕೊಂಡು ‘ಅಮ್ಮ ಇಲ್ಲದಿದ್ರೂ ನೀನು ನಮ್ಮನ್ನು ಸಾಕಿ ನೋಡಿಕೊಂಡಂಗೆ ಅವರಜ್ಜಿನೂ ಹಾಕ್ತಾರೆ ಅಲ್ವಾ ಅಜ್ಜಿ’ ಎಂದು ಕೇಳಿದ್ದನ್ನು ನೆನೆಸಿಕೊಂಡು ಕಣ್ಣೀರು ಹಾಕಿದ್ದರು. ನಾವಿಲ್ಲದಿದ್ರೆ ಈ ಮಕ್ಕಳ ಗತಿ ಏನಾಗ್ತಿತ್ತೋ ಎನ್ನುತ್ತಾ ಸಂಕಟ ಪಟ್ಟಿದ್ದರು. ಅವರಿಬ್ಬರು  ಒಳ್ಳೆಯ ರೀತಿಯಲ್ಲಿ ಜೀವನದಲ್ಲಿ ನೆಲೆ ಕಂಡರೆ ಸಾಕೆಂಬ ಹಾರೈಕೆ ಅವರದು ಪ್ರೌಢ ಶಾಲಾ ವಿದ್ಯಾಭ್ಯಾಸದ ನಂತರವೂ ಸಹ  ಹೇಮಾ ಆಗಾಗ್ಗೆ ವಿಜಯಾ ಟೀಚರ್ ಗೆ ಫೋನ್ ಮಾಡುವುದು ಹಾಗೂ ಸಲಹೆಗಳನ್ನು ಕೇಳುತ್ತಾ ಸಂಪರ್ಕದಲ್ಲಿದ್ದಳು . ಹೇಮಾ ಈಗ ಎರಡನೆ ವರ್ಷದ  ಪದವಿ  ಓದುತ್ತಿದ್ದಳು. ಅವಳ ತಮ್ಮ ಹತ್ತನೆ ತರಗತಿಯಲ್ಲಿದ್ದ. ಅಕ್ಕತಮ್ಮಂದಿರು ವಿಜಯಾ ಟೀಚರ್  ಶಿಷ್ಯರೆ. ಇತ್ತೀಚೆಗೆ ಅವಳು ಫೋನ್ ಮಾಡಿ ಮಾತನಾಡುತ್ತ ಅವರ ಅಜ್ಜಿಗೆ ಮೊದಲಿನಂತೆ ಹೆಚ್ಚು ಕೆಲಸ ಮಾಡಲಾಗುತ್ತಿಲ್ಲ. ತಾನು ಅವರಿಗೆ ಈಗ ಮೊದಲಿಗಿಂತ ಹೆಚ್ಚು ಸಹಾಯ ಮಾಡುತ್ತಿರುವೆ ಎಂದು ಹೇಳಿ ತಮ್ಮನ ಓದಿನ ಬಗ್ಗೆ ವಿಚಾರಿಸುತ್ತಾ ತಾನೆ ಅವನಿಗೆ ಗಣಿತವನ್ನು ಹೇಳಿಕೊಡುತ್ತಿದ್ದೇನೆ ಎಂದಿದ್ದಳು. ವಾರದ ಹಿಂದೆ ಅವಳ ತಮ್ಮ ಎರಡು ದಿನ ಶಾಲೆಗೆ ಬಂದಿರಲಿಲ್ಲ. ಏಕೆ ಎಂದು ಕೇಳಲು ಅವರ ತಾತ ಜಾರಿ ಬಿದ್ದು ಫ್ರಾಕ್ಚರ್ ಆಗಿದ್ದು  ಹಾಸ್ಪಟಲ್ ಗೆ ಸೇರಿಸಿದ್ದರು. ಹಾಗಾಗಿ ಬರಲು ಆಗಲಿಲ್ಲ ಎಂದು ಹೇಳಿದ. ಹೇಮಾಳಿಗೆ ಫೋನ್ ಮಾಡಿ ಕೇಳಿದಾಗ  ಈಗ ಮನೆಗೆ  ಕರೆದುಕೊಂಡು ಬಂದಿದ್ದೇವೆ. ಮಾವಂದಿರೆ ಇಲ್ಲೇ ಇದ್ದು ಎಲ್ಲವನ್ನು ನೋಡುತ್ತಿದ್ದಾರೆ  ಎಂದಳು. ಆವರ  ತಾತ ಮನೆಯಿಂದ ಹೊರಗೆ  ಎಲ್ಲೂ ಹೋಗದೆ ಮನೆಯ ಮಟ್ಟಿಗೆ ಓಡಾಡಿಕೊಂಡಿದ್ದರು. ಗಿರಣಿಯ ಮೇಲ್ವಿಚಾರಣೆ ನಡೆಸುವುದು ಕಷ್ಟವಾದರೂ ವಿಧಿಯಿರಲಿಲ್ಲ. ಆದರೂ  ಅಜ್ಜಿಯ ಸಹಾಯದಿಂದ ಹೇಗೋ ನಿಭಾಯಿಸುತ್ತಿದ್ದರು. ಇತ್ತೀಚೆಗೆ  ಹೇಮಾಳ ಮದುವೆಯ ಮಾತನ್ನು ಪದೇಪದೇ ಪ್ರಸ್ತಾಪಿಸುತ್ತಿದ್ದರು.. ಇದರಿಂದ  ಓದುವ ಆಸೆ ಬಲವಾಗಿ ಇಟ್ಟುಕೊಂಡಿದ್ದ  ಹೇಮಳಿಗೆ ಆತಂಕವು ಶುರುವಾಯಿತು.  ಕಾಲೇಜ್ ನ್ನು  ಮುಗಿಸಿ ಮನೆಗೆ ಹೋಗುವಾಗ ವಿಜಯಾ  ಟೀಚರ್  ಮನೆಗೆ ಬಂದು ತಮ್ಮ ತಾತ ತನಗೆ ಮದುವೆ  ಮಾಡಲು  ಆತುರ ಮಾಡುತ್ತಿದ್ದಾರೆಂದು ಹೇಳಿದಳು. ಇರಲಿ ಬಿಡು ಮದುವೆ ಎಂದು ಹೇಳಿದಾಕ್ಷಣ ಆಗುತ್ತಾ .ನೀನು ಮಾತ್ರ ಚೆನ್ನಾಗಿ ಓದು ಎಂದು ಸಮಾಧಾನ ಹೇಳಿದರು.ವಿಜಯ ಟೀಚರ್ ರಾತ್ರಿ ಊಟ ಮಾಡಿ  ಅಡುಗೆಮನೆ ಕೆಲಸವನ್ನು  ಮುಗಿಸಿ  ವಾರ ಪತ್ರಿಕೆಯನ್ನು ಓದುತ್ತಿದ್ದಾಗ ಮೊಬೈಲ್ ರಿಂಗ್ ಆಯಿತು. ನೋಡಿದರೆ  ಹೇಮಾಳದು. ಅತ್ತಲಿಂದ “ಮೇಡಂ . . ಬಿಕ್ಕಿ ಬಿಕ್ಕಿ ಅಳುವ ಸದ್ದು. “ಹಲೋ, ಹೇಮ  . . .  ಹಲೋ”ಎಂದರೆ ಮಾತಿಲ್ಲ ಸುಮ್ಮನೇ ಅಳುವುದು ಹಾಗೇ ಫೋನ್ ಕಟ್ ಆಯ್ತು. ಹತ್ತು ನಿಮಿಷದ ನಂತರ ಮತ್ತೆ ಫೋನ್. ಅವಳು ಫೋನ್ ಮಾಡುವಾಗ ಯಾರೊ ಬಂದಿರಬೇಕು.ಅದಕ್ಕೆ ಫೋನ್ ಕಟ್ ಆಗಿದೆಯೆನಿಸಿತು. ಮತ್ತೆ ಫೋನ್ ಬಂದಾಗ “ಹಲೋ ಹೇಮಾ,ಯಾಕಮ್ಮ ಏನಾಯ್ತು” ಮತ್ತೆ ಅಳು. ” ಹಲೋ,ಹೇಮಾ ನಾಳೆ ನಮ್ಮ ಮನೆಗೆ ಬಾ. ಅಳಬೇಡ  ಸುಮ್ನೆ ಮಲಗು” ಎನ್ನುತ್ತಿದ್ದಂತೆ ಫೋನ್ ಕಟ್. ಮತ್ತೆ  ಫೋನ್ ಬರಲಿಲ್ಲ. ಯಾರೋ ಪಕ್ಕದಲ್ಲಿರಬೇಕೆನ್ನಿಸಿತು ನಾನು ಫೋನ್ ಮಾಡಲಿಲ್ಲ.  ಮಾರನೆಯ ದಿನ ಭಾನುವಾರ ಸಂಜೆ ನಾಲ್ಕಕ್ಕೆ ಹೇಮಾ ಬಂದಳು. ತುಂಬಾ ಡಲ್ ಆಗಿದ್ದಳು. ಕಾಫಿ ಕುಡಿಯುತ್ತಾ ವಿಜಯಾ ಕೇಳಿದರು. “ಏನಾಯ್ತು ಹೇಳು ಹೇಮಾ” ಮೇಡಂ, ತಿಂಗಳು ಹಿಂದೆ ನಮ್ಮ ತಾತನಿಗೆ ಲೋ ಬಿ.ಪಿ. ಆಗಿ ಮತ್ತೆ ಹಾಸ್ಪಿಟಲ್ ಗೆ ಸೇರಿಸಿದ್ವಿ.  ಹಾಸ್ಪಿಟಲ್ ನಿಂದ ಬಂದ ದಿನದಿಂದ  ಒಂದೇ ಮಾತು ಮೇಡಂ  ಹೇಮಾಳ ಮದುವೆ ಬೇಗ ಮಾಡ್ಬೇಕು. ನಾನು ಹೆಚ್ಚು ದಿನ ಬದುಕಲ್ಲ ನಾನಿರುವಾಗಲೇ ಅವಳಿಗೆ ಒಂದು ನೆಲೆ ಕಾಣಿಸಬೇಕು  ಅದೊಂದು ಜವಾಬ್ದಾರಿಮುಗಿದ್ರೆ ನೆಮ್ಮದಿಯಾಗಿ ಪ್ರಾಣ ಬಿಡ್ತೀನಿ ಎಂದು ಹಠ ಮಾಡಿ ನಮ್ಮ ಮಾವಂದಿರನ್ನು ಒಪ್ಪಿಸಿದ್ದಾರೆ ನಂತರ ನಮ್ಮ ತಂದೆಗೂ ಫೋನ್ ಮಾಡಿ ವಿಷಯ ತಿಳಿಸಿ ಬರಲು ಹೇಳಿದ್ದಾರೆ. ಇನ್ನು ಒಂದೂವರೆ ವರ್ಷ ತಡೆದರೆ ನನ್ನ ಗ್ರಾಜುಯೇಷನ್ ಕಂಪ್ಲೀಟಾಗ್ತಿತ್ತು . ನನಗೆ ಈಗಲೆ ಮದುವೆ ಬೇಡ ಎಂದರೆ  ನೀನಿನ್ನು  ಚಿಕ್ಕ ಹುಡುಗಿ ಸುಮ್ನಿರಮ್ಮ ನಿನಗಿದೆಲ್ಲ ಅರ್ಥ ಆಗೋದಿಲ್ಲ ಎನ್ನುತ್ತಾರೆ..ಅಜ್ಜಿನೂ ಸಹಾ ನಿಮ್ಮ ತಾತ ಹೇಳಿದ ಹಾಗೆ ಕೇಳು. ನಿನ್ನ ಒಳ್ಳೆಯದಕ್ಕೆ ನಾವು ಹೇಳೋದು ಅಂತಾರೆ . ನನಗೇನಾದ್ರೂ ಹೆಚ್ಚು ಕಡಿಮೆ ಆದರೆ ನಿನ್ನನ್ನು  ನೋಡಿ ಕೊಳ್ಳೋದು ಯಾರು? ನಿಮ್ಮಪ್ಪ ಬಂದು ಕರ್ಕೊಂಡು ಹೋಗಿ ನಿನ್ನನ್ನು ಸಾಕ್ತಾನಾ ಹೇಳು. ಆ ನಂಬಿಕೆ ನಿನಗೆ ಇದ್ಯಾ. ಒಂದು ವೇಳೆ ಕರೆದುಕೊಂಡು ಹೋದ್ರು ನಿನ್ನ ಸ್ಥಿತಿ ಎಷ್ಟರಮಟ್ಟಿಗೆ ಇರುತ್ತೆ ಅಂತ ಯೋಚನೆ ಮಾಡು ನಾವ್ಯಾರು ಶ್ರೀಮಂತರಲ್ಲ. ಅವರವರ ಸಂಸಾರಗಳೇ ಅವರಿಗೆ ಭಾರ ಆಗಿರೋ ಕಾಲದಲ್ಲಿ ನಿನ್ನನ್ನ ಒಂದು ನೆಲೆ ಮುಟ್ಟಿಸೋ ಜವಾಬ್ದಾರಿ ನನ್ನದು. ಅದನ್ನು ಮಾಡದಿದ್ರೆ ನಿನ್ನನ್ನು ಇಷ್ಟು ವರ್ಷ ಪ್ರೀತಿಯಿಂದ  ಸಾಕಿ ಸಲಹಿದ್ದಕ್ಕೆ ಏನು ಪ್ರಯೋಜನ ? ನೀನೇ ಹೇಳು. ಇನ್ನು ನಿನ್ನ ತಮ್ಮ ರಾಘು ಗಂಡು ಹುಡುಗ ಹೇಗೋ ಆಗುತ್ತೆ . ಅವನ ಬಗ್ಗೆ ಯೋಚನೆ ಮಾಡ್ಬೇಡ. ಜಾಣ ಹುಡುಗ ಚೆನ್ನಾಗಿ ಓದ್ಬಿಟ್ಟು ಕೆಲಸಕ್ಕೆ ಸೇರಿದರೆ ಮುಗೀತು. ನಮಗೆ ನಿನ್ನದೆ ಚಿಂತೆ . ಈ ಮನೆ ಬಿಟ್ರೆ ನಿನಗೆ ಎಲ್ಲೂ ಸರಿಯಾದ ಜಾಗ ಇಲ್ಲಮ್ಮ. ನೀನು ಚೆನ್ನಾಗಿದ್ರೆ ನಮಗೆ ನೆಮ್ಮದಿ ಎಂದು ಅಜ್ಜಿ ತಾತ ಹೇಳ್ತಾರೆ ಮೇಡಂ ಎಂದು ಕಣ್ಣೀರುಹಾಕಿದಳು.ನೀವಾದ್ರು ಒಂದು ಮಾತು ಹೇಳಿ ಮೇಡಂ. ನಾನು ಇನ್ನೂ ಓದ್ಬೇಕು  ಮೇಡಂ. ನಾನು ಬಿ.ಇಡಿ. ಮಾಡೋ ಆಸೆಯಿದೆ. ಮದ್ವೆ ಆದ ಮೇಲೆ ಯಾರು ಓದಿಸ್ತಾರೆ ಮೇಡಂ. ಪ್ರೀತಿಯಿಂದ  ಸಾಕಿದ ಅಜ್ಜಿ ತಾತನಿಗೆ ಹೇಗೆ ಹೇಳಿ ಒಪ್ಪಿಸಬೇಕು ಅಂತ ಗೊತ್ತಾಗ್ತಿಲ್ಲ ಎಂದು ಹೇಳುತ್ತ ಬೇಸರ ಪಟ್ಟಳು. ಜಾಣೆ ಯಾಗಿದ್ದು ಅವಳಲ್ಲಿ ಓದುವ ಆಸೆ ಅದಮ್ಯವಾಗಿತ್ತು.  ಆದರೆ ಅವರ ಅಜ್ಜಿ ತಾತ ಹೇಳೋ ಮಾತಿನಲ್ಲಿ ಸತ್ಯಾಂಶ ಇದ್ದಿದ್ದರಿಂದ” ಹೌದು ಹೇಮಾ ಅವರು ಹೇಳಿರುವುದೆಲ್ಲಾ ಸರಿಯಾಗಿದೆ. ಯೋಚನೆ ಮಾಡು. ನೀನು ಮದುವೆ ಆದ ಮೇಲೆ ನಿನ್ನ ಗಂಡನನ್ನು ಒಪ್ಪಿಸಿ ಓದಬಹುದಲ್ವ. ನಿಮ್ಮ ತಾತನಿಗೂ ಹೇಳು ಮದುವೆಯ ನಂತರವು ನೀನು ಓದು  ಮುಂದುವರಿಸಲು ಅವಕಾಶ ಕೊಡಿರಿ ಎಂದು ಕೇಳಲು. ನೋಡೋಣ. ಇನ್ನೂ ಗಂಡು ಸಿಕ್ಕಿ ಮದುವೆಯಾಗುವ ವೇಳೆಗೆ ಪದವಿಯ ಎರಡನೆ ವರ್ಷಮುಗಿಯುತ್ತೆ. ನೀನು ಅಜ್ಜಿ ತಾತ ಹೇಳಿದಂತೆ ಕೇಳು. ಒಳ್ಳೆಯದಾಗುತ್ತೆ.ಓದಿನ ಕಡೆ ಗಮನ ಕೊಡು ಎಂದು ಸಮಾಧಾನಪಡಿಸಿದರು.   ಮನೆಗೆ ಬಂದ ಹೇಮಾ ಆ ದಿನ ರಾತ್ರಿ ಮಲಗಿದ್ದ ತಾತನ ಕಾಲನ್ನು ಒತ್ತುತ್ತಾ ” ತಾತ, ನಾನೊಂದು ಮಾತು ಹೇಳ್ತಿನಿ ಸಿಟ್ಟು ಮಾಡ್ಕೋಬಾರದು”ಎಂದಳು. ಅದೇನು ಹೇಳಮ್ಮ ಎಂದಾಗ ” ಆಯ್ತು ತಾತ ಮದುವೆ ಆಗ್ತೀನಿ. ಮದುವೆ ಸೆಟ್ ಆದರೆ ಮದುವೆ ಆದ ಮೇಲೆ ಒಂದು ವರ್ಷ ಓದಕ್ಕೆ ಅವಕಾಶ ಕೊಟ್ರೆ ಡಿಗ್ರಿ ಆಗೋಗುತ್ತೆ ತಾತ.ಇದನ್ನು ನೀನು ಗಂಡಿನವರಿಗೆ ಹೇಳಿ ಒಪ್ಪಿಸು.” ಎಂದು ಕೇಳಿಕೊಂಡಾಗ ಅವಳಿಗೆ ನಿರಾಶೆ ಮಾಡಬಾರದೆಂದು ಯೋಚಿಸುತ್ತಲೆ “ಆಯ್ತು, ದೈವಿಚ್ಛೆ ಎಂಗಿದೆಯೋ ನೋಡೋಣ”ಎಂದರು  ಆಗ ಅಜ್ಜಿಯು ಸಹಾ ಓದಕ್ಕೆ ಒಪ್ಪುವಂಥ ಗಂಡನೇ ನನ್ನ ಮೊಮ್ಮಗಳಿಗೆ ಸಿಗಲಪ್ಪ ದೇವರೇ ಎಂದು ಮನಪೂರ್ವಕ ಕೇಳಿಕೊಂಡರು. ಮೊಮ್ಮಗಳಿಗೆ ಗಂಡು ನೋಡಲು ತಮ್ಮ ಇಬ್ಬರುಗಂಡು ಮಕ್ಕಳಿಗೆ ಒತ್ತಾಯ

ಹೇಮಾ Read Post »

ಕಥಾಗುಚ್ಛ

ಸಹನಾರವರ ನ್ಯಾನೊ ಕಥೆಗಳು

ಸಹನಾರವರ ನ್ಯಾನೊ ಕಥೆಗಳು ಸಹನಾ ಪ್ರಸಾದ್ ಆಡಲಾಗದ ಮಾತು “ಅಲ್ಲಕಣೆ, ಏನಾಗಿದೆ ನಿನಗೆ? ಮಾತಿಲ್ಲ, ಮೆಸೇಜು ಇಲ್ಲ. ಎಲ್ಲಿ ಅಡಗಿದ್ಯಾ?”ಅವಳಿಂದ ಬಂದ ೫ನೆ ಸಂದೇಶಕ್ಕೆ ಇಷ್ಟವಿಲ್ಲದೆ ಇದ್ರೂಪ್ರತಿಕ್ರಿಯಿಸಿದೆ. “ಏನಿಲ್ಲ, ಸ್ವಲ್ಪ ಹುಷಾರಿಲ್ಲ, ಸ್ವಲ್ಪ ದಿನ ಬಿಟ್ಟುಸಿಗ್ತೀನಿ” ಟೈಪಿಸಿದವಳಿಗೆ “ಹೋದ ತಿಂಗಳು ನೀ ಮಾಡಿದ ಮಿತ್ರದ್ರೋಹ ಮನಸ್ಸನ್ನು ಕೊರೆಯುತ್ತ ಇದೆ. ಅದರ ಹಿಂಸೆಯಿಂದ ಇನ್ನೂ ಹೊರಬಂದಿಲ್ಲ. ಯಾಕೆ ಹೀಗೆ ಮಾಡಿದೆ? ಮೊದಲು ಹೇಳು!” ಎನ್ನುವ ಮಾತುಗಳು ಮನದಲ್ಲೇ ಉಳಿದವು. ಸೊಪ್ಪಿನವಳು “ಅವಳು ಯಾವಾಗ್ಲೂ ಜಾಸ್ತಿನೇ ಹೇಳೋದು. ನಿನ್ನ ಬುದ್ದಿ ಎಲ್ಲಿ ಹೋಗಿತ್ತು? ಇಷ್ಟು ಸಣ್ಣ ಕಂತೆಗೆ ೨೦ ರೂಪಾಯಿಗಳಾ? ಹೂ, ಕೊಡು, ಕೊಡು, ನನ್ನ ಮಗ ದುಡಿದ್ದಿದ್ದೆಲ್ಲ ನಿನ್ನ ದುಂದುವೆಚ್ಚಕ್ಕೆ ಸರಿಹೋಗುತ್ತದೆ!” ಸೀತಮ್ಮ ಸೊಸೆಯನ್ನು ಗದರುತ್ತಿದ್ದದ್ದು ಇಡೀ ವಠಾರದಲ್ಲಿ ಕರ್ಕಶವಾಗಿ ಕೇಳಿಬರುತ್ತಿತ್ತು. ಮರುದಿನ ದೊಡ್ಡ ಕಂತೆ ಕೊತ್ತಂಬರಿಸೊಪ್ಪು ಸೊಸೆಯ ಕೈಲಿಟ್ಟು ಸೊಪ್ಪಿನವಳು ಮೆಲು ನುಡಿದಳು ”ನೀ ೧೦ ರೂಪಾಯಿ ಕೊಡು, ಸಾಕು” ಹೊರಗಿನವರ ಅಂತಃಕರಣ ಮನೆಯವರಿಗಿಲ್ಲವಲ್ಲ ಎಂದು ಹಲುಬುತ್ತಾ ಬಸುರಿ ಹೆಣ್ಣು ಭಾರವಾದ ಹೆಜ್ಜೆಹಾಕುತ್ತಾ ನಡೆದಳು. ಹೊಸಸೀರೆ “ಇದ್ಯಾವಗ್ರೂಪ್” ಅಕ್ಕನ ಫೋನಿನಲ್ಲಿರೋ ಫೋಟೋ ನೋಡುತ್ತಾ ಕೇಳಿದಳು ವಿನುತ. “ಹೊಸದುಕಣೆ, ಸೀರೆಗ್ರೂಪ್. ನಮ್ಮ ಹತ್ತಿರ ಇರುವ ಸೀರೆಗಳನ್ನು ಒಂದೊಂದಾಗಿ ಉಟ್ಟು, ಪಟತೆಗೆದು, ಅದರ ಬಗ್ಗೆ ಬರೆದು ಪೋಸ್ಟ್ಮಾಡುವುದು”. “ಅಬ್ಬಾ, ಒಂದೊಂದು ಸೀರೆನೂ ಎಷ್ಟು ಸೊಗಸಾಗಿದೆ. ಇನ್ನು ಆ ರವಿಕೆಗಳೂ, ಅವುಗಳ ಶೈಲಿ, ಮಾದರಿಗಳೋ..ಸಕ್ಕತ್! ನನ್ನೂ ಸೇರಿಸೆ ಇದಕ್ಕೆ! ಮೊನ್ನೆ ತಾನೆ ಇವರು ಸುಮಾರು ಹೊಸ ಸೀರೆಗಳನ್ನು ಕೊಡಿಸಿದ್ದಾರೆ”ಮೆಚ್ಚುಗೆಯಿಂದ, ಹೆಮ್ಮೆಯಿಂದ ಹೇಳಿದ ತಂಗಿಯನ್ನು ನೋಡಿ ಅಕ್ಕ ಮೆಲುನುಡಿದಳು ”ಇಲ್ಲಿ ಒಂದೊಂದು ಸೀರೆ ಕೊಂಡಾಗಲೂ ಒಂದು ಹಳೆಸೀರೆಯನ್ನು ಯಾರಿಗಾದರೂ ಕೊಡಬೇಕು, ಆಗುತ್ತಾನಿನಗೆ?!” ಎಳೆಮನಸ್ಸು “ಅಪ್ರಯೋಜಕ,ದಡ್ಡ ನಿನ್ನಮಗ” ಅಪ್ಪನ ಕರ್ಣಕಠೋರ ಮಾತುಗಳು ಅವನನ್ನು ಚೂರುಚೂರು ಮಾಡಿದ್ದು ಇದು ಮೊದಲ ಸಲವಲ್ಲ. ಆದರೆ ಕೊನೆಯದಾಗುತ್ತೆ ಎಂದು ನಿರ್ಧಾರ ಮಾಡಿ, ಕಣ್ಣೀರನ್ನು ತೊಡೆದು ಎದ್ದ ಮಾಧವ. “ವಿಜ್ಞಾನ ನನಗೆ ಓದಲಿಕ್ಕೆ ಆಗೋಲ್ಲ, ಅಪ್ಪ. ನಾನು ಆರ್ಟ್ಸ್ ತೊಗೋತೀನಿ. ಅಮ್ಮ, ನೀ ಸಪೋರ್ಟ್ಮಾಡ್ತಿ ತಾನೇ” ಮಗನ ಮಾತಿಗೆ ಸುಮ್ಮನೆ ತಲೆಆ ಡಿಸಿದರೂ ಕಣ್ಣಲ್ಲಿ ಭರವಸೆ ಇತ್ತು. 5 ವರುಷದ ನಂತರ ಮಗ ಪತ್ರಿಕೋದ್ಯಮದ ಪ್ರಶಸ್ತಿ ಸ್ವೀಕರಿಸಿದಾಗ ಅಪ್ಪನ ಕಣ್ಣಲ್ಲೂ ಸಂತಸದ ಹೊನಲು! ಇಷ್ಟೇಬದುಕು “ಬೆಳಗ್ಗೆ ಸಂಜೆ ಬರೀ ಕೆಲಸ, ಕೆಲಸ, ಕೆಲಸ. ಕಚೇರಿಯಲ್ಲಿ ಮುಗಿಸಿ ಬಂದರೆ ಮನೆಯಲ್ಲೂಹೊರೆಗೆಲಸ. ಥೂ, ಇದೂ ಒಂದು ಬದುಕೇ!” ಗೊಣಗುತ್ತಾ ಕೆಲಸ ಮಾಡುತ್ತಿದ್ದ ಮಡದಿಯನ್ನು ನೋಡಿ ರವೀಂದ್ರನಿಗೆ ಕನಿಕರ, ಬೇಸರ ಎರಡೂ ಉಕ್ಕಿತು. ತಾನು ಬೇಸರಿಸಿ ಸಿಟ್ಟಾದರೆ ಅವಳೂ ಕಿರುಚಾಡಿ ಮನೆ ರಣರಂಗವಾಗುತ್ತದೆ ಎಂದು ಕ್ಷಣಕಾಲ ದೀರ್ಘ ಉಸಿರೆಳೆದುಕೊಂಡ. ಹೆಂಡತಿಯನ್ನಪ್ಪಿ “ಈ ಭಾನುವಾರ ಖಂಡಿತ ಹೊರಗೆ ಹೋಗೋಣ, ಆಯ್ತಾ”ಎಂದವಳ ನೆತ್ತಿಗೆ ಮುತ್ತನಿತ್ತಾಗ ಅವಳ ಅರಳಿದ ಮುಖ ತಾವರೆಯನ್ನೂ ನಾಚಿಸುವಂತಿತ್ತು! ನಾಏನುಮಾಡಲಿ ಆರ್ಜಿಯನ್ನೊಮ್ಮೆ, ಅವಳನ್ನೊಮ್ಮೆ ದಿಟ್ಟಿಸಿ ನೋಡಿದರು ಹೆಡ್ಮ್ಯಾಡಮ್. “ಸರಿಯಾಗಿ ಯೋಚಿಸಿದೀರ, ಸೀಮಾ?”ಅವರ ಮಾತಿಗೆ ತುಂಬಿ ಬಂದ ಕಣ್ಣೊರೆಸಿಕೊಂಡು ಧೈರ್ಯವಾಗಿನುಡಿದಳು“ಜಾಸ್ತಿಯೋಚಿಸಿಲ್ಲ. ಏಕೆಂದರೆ ಯೋಚಿಸಿದಷ್ಟೂ ಸಮಸ್ಯೆ ಹೆಚ್ಚಾಗುತ್ತಿದೆ” ಮರುಮಾತಾಡದೆ ಟ್ರಾನ್ಸ್ಫ ರ್ ಬರೆದು ಕೊಟ್ಟರು. ಗಂಡನಿಗೆ ಯಾವಾಗಲೂ ಕೆಲಸದ ಚಿಂತೆ, ಮನಸ್ಸು ಸದಾ ಆಫೀಸಿನಲ್ಲಿ. ಒಂಟಿಯಾಗಿ ಸಮಯ ಕಳೆದು ಸಾಕಾಗಿತ್ತು ಸೀಮಾಳಿಗೆ. ಓಡಿ ಹೋಗುವುದು ಸರಿಯಾದ ಆಯ್ಕೆಯಲ್ಲ, ಆದರೂ ಕಷ್ಟಪಟ್ಟು ಜತೆಯಲ್ಲಿರುವುದಕ್ಕಿಂತ ಇದು ಮೇಲು ಎಂದು ಧೈರ್ಯ ಮಾಡಿದಳು. *********************************** *********************************

ಸಹನಾರವರ ನ್ಯಾನೊ ಕಥೆಗಳು Read Post »

ಕಥಾಗುಚ್ಛ

ಸಣ್ಣ ತಪ್ಪು

ಕಥೆ ಸಣ್ಣ ತಪ್ಪು ಲಕ್ಷ್ಮೀದೇವಿ ಪತ್ತಾರ ಬೆಳಗ್ಗಿನ ಆಹ್ಲಾದಕರ ವಾತಾವರಣ ತಣ್ಣನೆ ಗಾಳಿ ಬೀಸುತ್ತಿತ್ತು. ವಾಕಿಂಗ್ ಮಾಡಿ ಬಂದಿದ್ದರಿಂದ ಸಣ್ಣದಾಗಿ ಬೇವರು ಬರುತ್ತಿತ್ತು. ಸ್ವಲ್ಪ ಹೊತ್ತು ಹೊರಗೆ ಕುಳಿತು ಒಳಗೆ ಹೋದರಾಯಿತು ಎಂದು ವರಾಂಡದ ಮೆಟ್ಟಿಲು ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿರುವಷ್ಟರಲ್ಲೇ ಬಂದ ಅಕ್ಕಮ್ಮ “ಇವತ್ತೇನು ಅಡುಗೆ ಮಾಡಬೇಕ್ರಿ” ಎಂದಳು. ಅಕ್ಕಮ್ಮ ನಮ್ಮ ಮನೆ ಅಡುಗೆಯಾಕೆ. ಮಗ ಬೆಳಿಗ್ಗೆ 7.30ಕ್ಕೆ ಶಾಲೆಗೆ ಹೋಗುವನು. ಅವನು ಹೋಗುವಷ್ಟರಲ್ಲಿ ಉಂಡು ಬಾಕ್ಸಿಗೆ ಹಾಕಿಕೊಂಡು ಹೋಗಲು ಅಡುಗೆ ಸಿದ್ಧವಾಗಿರಬೇಕು. ಅವಳು ಬಂದರೆ ನನಗೆ ನೀರಾಳ ತುಂಬಾ ರುಚಿಯಾಗಿ ಶುಚಿಯಾಗಿ ಅಡುಗೆ ಮಾಡುವಳು. ಅವಳು ಬಂದಾಗಿನಿಂದ ನನ್ನ ಅಡುಗೆ ಕೆಲಸ ನಿಂತುಬಿಟ್ಟಿದೆ. 4-5 ವರ್ಷವಾಯಿತು, ಅವಳುಬಂದು, ಲಘುಬಗೆಯಿಂದಲೆ ಪಟ್‍ಪಟ್ ಅಡುಗೆ ಮಾಡಿ ಹೋಗುವಳು. ಮೊದಲಾದರೆ (ಅವಳು ಬರುವ ಮುಂಚೆ) ಆಗ ಅಡುಗೆಯವರನ್ನು ನೇಮಿಸಿದ್ದಿಲ್ಲ. ನಾನೇ ಮಾಡಿಕೊಂಡು ಹೋಗುತಿದ್ದೆ. ಮೇಲಿನ ಕೆಲಸಕ್ಕೆ ಹಚ್ಚಿದರೂ ಅಡುಗೆ ಮಾಡಿ ಮಗನಿಗೆ ಉಣ ಸಿ ಬಾಕ್ಸ್ ಕಟ್ಟುವಷ್ಟರಲ್ಲೇ ಅವರು ಹೋಗುವುದಕ್ಕೆ ರೆಡಿ ಆಗಿರುತ್ತಿದ್ದರು. ಅವರಿಗೂ ಊಟಕ್ಕೆ ಕೊಟ್ಟು ಮುಂದೆ ನಾನು ಶಾಲೆಗೆ ಹೋಗಲು ತಯಾರಿ ಮಾಡಿಕೊಳ್ಳಬೇಕಿತ್ತು. ನಾನು ತಾಲೂಕು ಪ್ಲೇಸಿನಿಂದ 10 ಕಿ.ಮೀ ದೂರದಲ್ಲಿರುವ ಮಲ್ಲಾಪುರ ಮುಟ್ಟಲು ಮನೆಯನ್ನು 8.30 ರಿಂದ 9.00ಗಂಟೆ ಒಳಗೆ ಬಿಡಬೇಕಿತ್ತು. ಹೈಸ್ಕೂಲ್ ಶಿಕ್ಷಕಿಯಾಗಿ ಕೈ ತುಂಬ ಸಂಬಳ ಬರುತ್ತಾದರೂ ಚೆನ್ನಾಗಿ ಕುಳಿತು ಉಣ್ಣದಿದ್ದರೆ ಎಷ್ಟು ದುಡಿದರೂ ಏನು ಪ್ರಯೋಜನ ಎನ್ನಿಸಿಬಿಟ್ಟಿತು.ನಾವು ದುಡಿಯುವುದೇ ಉಂಡು, ತಿಂದು ಚೆನ್ನಾಗಿರಲು ಅದೇ ಇಲ್ಲದಿದ್ದರೆ ಹೇಗೆ ಎನಿಸಿಬಿಟ್ಟಿತು. ಯಾಕೆಂದರೆ ಬೆಳಿಗ್ಗೆ ಎಂದಾಕ್ಷಣದಿಂದಲೇ ಅಡುಗೆ ಮನೆ ಸೇರುವುದು ಲಘುಬಗೆಯಿಂದ ಅಡುಗೆ ಮಾಡಿ ಎಲ್ಲರಿಗೂ ಉಣ್ಣಲು ಕೊಟ್ಟು, ಬಾಕ್ಸ್ ಕಟ್ಟುವುದರಲ್ಲೆ ನನಗೆ ಉಣ್ಣಲು ಪುರುಸೊತ್ತಿರಲಿಲ್ಲ. ಗಂಟಿಲಕ್ಕತ್ತುವಂತೆ 4-5 ತುತ್ತು ಉಂಡು, ನೀರು ಕುಡಿದು ಮುಗಿಸುತ್ತಿದ್ದೆ. ಒಮ್ಮೊಮ್ಮೆ ಮಾಡಿದ ಅಡುಗೆ ಕಡಿಮೆ ಬಿದ್ದು ಮತ್ತೆ ಪೇಚಾಟ. ಅವಗೇನು ಹುರುಪು, ವಯಸ್ಸು ಹುಮ್ಮಸು ಸೇರಿ ಬೇಗ ಎದ್ದು ಮಾಡುತ್ತಿದ್ದೆ. ಈಗೀನ 40 ವರ್ಷ ದಾಟಿದ ಮೇಲೆ ದೇಹದಲ್ಲೆ ನೂರೆಂಟು ಬದಲಾವಣೆ ತಲೆ ಸುತ್ತುವುದು, ಅಲ್ಲಿ ನೋವು, ಇಲ್ಲಿ ನೋವು, ಮುಟ್ಟಿನ ಸಮಸ್ಯೆ ಒಂದೊಂದೆ ಕಾಣ ಸಿಕೊಳ್ಳಲಾರಂಭಿಸಿದವು.ಸಾಕಪ್ಪ ಈ ಒದ್ದಾಟ. ಇಷ್ಟು ದಿನ ಕಷ್ಟಪಟ್ಟದ್ದು ಸಾಕು ನಾವು ದುಡಿಯುವುದಾದರೂ ಏತಕ್ಕೆ ಸುಖಕ್ಕೆ (ಬಯಸಿ) ಹಂಬಲಿಸಿ ದುಡಿಯುತ್ತೇವೆ. ಮತ್ತೆ ಕಷ್ಟ ಪಡುತ್ತೇವೆ. ಬರೀ ಗಳಿಕೆ ಯೋಚನೆ ಗಳಿಸಿಯಾದರೂ ಏನು ಮಾಡಬೇಕು ಮಕ್ಕಳಿಗೆ ಏನು ಬೇಕೂ, ಎಷ್ಟೂ ಬೇಕೂ ಅಷ್ಟು ಮಾಡಿದ್ದಾಗಿದೆ. ಅವರು ಸ್ವಾವಲಂಬಿಗಳಾಗಲಿ. ಎಲ್ಲಾ ನಾವೇ ಮಾಡಬೇಕೆಂದರೆ ಹೇಗೆ? ಈಗಿನ ಮಕ್ಕಳಿಗೂ ನಮ್ಮ ಕಾಲದ ಕಕ್ಕುಲಾತಿ ಕಾಳಜಿ ಕಡಿಮೆ. ನಾವು ಇಷ್ಟು ಮಾಡಿದ್ದರು ಅವರು ನಮ್ಮನ್ನು ನಾವು ಸಾಯುವರೆಗೂ ಚೆನ್ನಾಗಿ ನೋಡಿಕೊಳ್ತಾರೆಂಬ ನಂಬಿಕೆ ಇಲ್ಲ. ಸುಮ್ಮನೆ ನಮ್ಮ ಕರ್ತವ್ಯ ನಾವು ಮಾಡಿದ್ದೇವೆಂದು ಸ್ಥೀತಪ್ರಜ್ಞರಾಗಿರಬೇಕೆನಿಸಿತು. ಅದಕ್ಕಾಗಿ ಅಡುಗೆಯಾಕೆಯನ್ನು ನೇಮಿಸಿದೆ.ನಮ್ಮ ಮನೆಯವರೂ ತಾವಾಯಿತು. ತಮ್ಮ ಡ್ಯುಟಿಯಾಯಿತು. ತಮಗೆ ಹೊತ್ತಿಹೊತ್ತಿಗೆ ಸರಿಯಾಗಿ ಊಟೋಪಚಾರವಾದರೆ ಸಾಕು. ಹಾಗಂತ ನಾನು ಕಷ್ಟ ಪಡಲು ಅವರೇನು ಹೇಳಿರಲಿಲ್ಲ. “ನಿನಗೆ ಹೇಗೆ ಬೇಕೂ ಹಾಗೆ ಮಾಡು” ಎಂದು ಸ್ಥಿತಪ್ರಜ್ಞರಂತೆ ಇದ್ದುಬಿಡುವರು ಅದರಂತೆ ನನಗಿರಲು ಬರುವುದಿಲ್ಲ ನನ್ನ ಗುಣ ಸ್ವಭಾವ ನನಗೆ.ಹಾಗೇ ಬಂದವಳೆ ಅಕ್ಕಮ್ಮ. ಅಕ್ಕಮ್ಮನೇನು ಸೀದಾ ಅಡುಗೆ ಮನೆಗೆ ಹೋಗಿ ನಾನು ಹೇಳಿದ ತಿಂಡಿ, ಅಡುಗೆ ಮಾಡಿದ್ದು, ನಾನು ಕೊಟ್ಟ ಉಳಿದ ಅಡುಗೆ ತೆಗೆದುಕೊಂಡು ಹೋಗಿ ಬೀಡುತ್ತಿದ್ದಳು. ಚುರುಕು ಸ್ವಭಾವದ ಮಾತಿನ ಮಲ್ಲೆ ಅಕ್ಕಮ್ಮ ನಾನು ಅಡುಗೆ ಮನೆಗೆ ಹೋಗಿ ಹಾಗೇ ನೋಡುತ್ತಿದ್ದರೆ ಏನಾದರೂ ಒಟ ಒಟ ಮಾತನಾಡುವಳು ನನಗೂ ಶಾಲೆಗೆ ಹೋಗುವ ಅವಸರ ಸುಮ್ಮನೆ ಮಾತಿಗೆ ನಿಂತರೆ ಕೆಲಸ ಕೆಟ್ಟಿತೆಂದು ಅವಳಷ್ಟಕ್ಕೆ ಅವಳನ್ನು ಅಡುಗೆ ಮನೆಗೆ ಬಿಟ್ಟು ಬಿಡುತ್ತಿದ್ದೆ. ಬರೆ ಮಗನಿಗೆ, ನಮ್ಮವರಿಗೆ ಊಟಕ್ಕೆ ಬಡಿಸಿ, ಬಾಕ್ಸ್ ಕಟ್ಟಿ ನಾನು ರೆಡಿಯಾಗುತ್ತಾ ಇರುತ್ತಿದ್ದೆ. ನಂತರ ಸ್ವಲ್ಪ ನೆಮ್ಮದಿಯಿಂದ ಉಣ್ಣಲು ಸಾಧ್ಯವಾಗಿತ್ತು. ಆದರೆ ಇತ್ತಿಚ್ಚಿಗೆ ರೆಡಿಯಾಗುವಾಗ, ದೇವರ ಪೂಜೆ ಮಾಡುವಾಗ ಬರೇ ಅಡುಗೆ ಮನೆಕಡೆಗೆ ಲಕ್ಷ್ಯ. ಅವಳೇನಾದರೂ ತೆಗೆದುಕೊಂಡು ಹೋಗುತ್ತಿರುವಳೇ ಎಂದು. ಅದಕ್ಕೆ ಕಾರಣ ಬರುವಾಗ ನೀಟಾಗಿ ಬರುವ ಅವಳು ಹೋಗುವಾಗ ಸೊಂಟಕ್ಕೆ ಸೀರೆ ಸಿಕ್ಕಿಸಿಕೊಂಡೇ ಹೋಗುತ್ತಿದ್ದಿದ್ದು. ಇದು ಇತ್ತೀಚಿಗೆ ನನ್ನ ಗಮನಕ್ಕೆ ಬಂತು. ಅವಾಗಿನಿಂದ ಹೊರಗೆ ನಾನು ರೆಡಿಯಾಗುತ್ತಿದ್ದರೂ ಅವಳ ಕಡೆಗೆ ಗಮನ ಸಂಶಯದ ಹುಳುಗೆ ಆಸ್ಪದ ಕೊಟ್ಟರೆ ಅದು ಕೊರೆದು ತಲೆ ಹಾಳು ಮಾಡಿ ಬಿಡುವುದೆಂದು ನಿಶ್ಚಯಿಸಿ ಇವತ್ತೇನಾದÀರೂ ಆಗಲಿ ಅವಳು ಹೋಗುವಾಗ ಮೇಲೆ ಸಿಕ್ಕಿಸಿದ ಸೀರೆ ನೀರಿಗೆ ಬಿಚ್ಚಿ ಸರಿಯಾಗಿ ಹೋಗಲು ಹೇಳುವುದು. ಅವಳೇನಾದರೂ ಅಂದುಕೊಳ್ಳಲಿ ನನ್ನ ಮೇಲೆ ಸಂಶಯವೇ ನಿಮಗೆ ಎಂದು ನೋಂದುಕೊಂಡರು ಚಿಂತೆಯಿಲ್ಲ. ನನ್ನ ಅನುಮಾನ ಹಾಗೇ ಕಂಡಿಲ್ಲ ಮಾತಿನ ಮಲ್ಲಿ ಅವಸರದಲ್ಲಿ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿರುತ್ತಾಳೆ. ಅವೇರಡನ್ನು ಬಿಟ್ಟರೆ ಕೈ ಶುದ್ಧ ಇಲ್ಲಿವರೆಗೂ ಅಂತು ಏನೂ ಬದಲಾವಣೆ ಕಂಡಿಲ್ಲ. ಒಮ್ಮೊಮ್ಮೆ ಮಸಾಲ ಡಬ್ಬಿದಲ್ಲಿನ ಸಾಮಾನು ಬೇಗ ಆದಂಗೆ ಅನಿಸಿದರೂ ಮಾಡಿದ ಅಡುಗೆ ಲೆಕ್ಕ ಹಾಕಿದರೆ ಖರ್ಚು ಆಗಿರಬಹುದು ಎನಿಸುತ್ತೆ. ಹೆಚ್ಚೆಚ್ಚು ಅಡುಗೆ ಮಾಡ್ತಾಳಾದರೂ ಅದು ನಾನು ಕೊಟ್ಟದಲ್ಲವೆ. ಕಡಿಮೆ ಕೊಟ್ಟರೆ ನನಗೇ ಉಳಿಯುವುದಿಲ್ಲ. ಇಲ್ಲವೆ ಮಾಡಿದ ಅವಳಿಗೊಂದಿಷ್ಟೂ ಕೊಡದಿದ್ದರೆ ನಮಗೂ ಸಮಾಧಾನ ಇರುವುದಿಲ್ಲ. ಹೆಚ್ಚಿಗೆ ಕೊಟ್ಟರೆ ಮಾಡಿದ್ದು ಹೆಚ್ಚಾಗಿ ಅವಳು ಬಂದಷ್ಟು ಹೆಚ್ಚಿಗೆ ಓಯ್ಯಬಹುದು. ಅದು ಬಿಟ್ಟರೆ ಅದು ನಾನೇ ಕೊಟ್ಟರೆ ಓಯ್ಯುವುದನ್ನು ಬಿಟ್ಟರೆ ಅವಳು ಕದ್ದದ್ದು ಕಂಡಿಲ್ಲ. ಸುಮ್ಮನೆ ಅನುಮಾನಿಸುತ್ತಿರುವೆ ಎಂದು ಮತ್ತೊಮ್ಮೆ ಅನಿಸುತ್ತೆ. ಏನಾದರೂ ಆಗಲಿ ಇವತ್ತು ಒಂದು ನಿರ್ಧಾರ ಆಗಬೇಕು. ಅವಳನ್ನು ಪರೀಕ್ಷಿಸಿಬೇಕು. ಸಿಕ್ಕರೆ ನಾಳೆಯಿಂದ ನೀನು ಬರಬೇಡ ಎಂದು ಬಿಡಬೇಕು. ಮತ್ತೊಬ್ಬರನ್ನು ನೋಡಿಕೊಂಡಿರಾಯಿತು. ನಮ್ಮ ವಿಶ್ವಾಸಕ್ಕೆ ದ್ರೋಹ ಬಗೆದವರನ್ನು ಎಂದೂ ಸಹಿಸಿಕೊಳ್ಳುವುದು ಬೇಡ, ಎಂದು ನಿರ್ಧರಿಸಿ ಇನ್ನೇನು ಅವಳು ಅಡುಗೆ ಮುಗಿಸುವಷ್ಟರಲ್ಲೇ ನನ್ನ ಎದೆ ಬಡಿತ ನನಗೆ ಕೇಳಿಸುತ್ತೀದೆ. ದೇವರೇ ಕೆಲಸದವರು ಸಿಗುವುದೇನು ಸುಲಭದ ಮಾತಲ್ಲ. ಅವಳು ಪ್ರಾಮಾಣ ಕಳಾಗಿರಲಿ ಸರಿ ಇದ್ದರೆ ನಾನೇ ಕ್ಷಮೆ ಕೇಳಿ ಮುಂದುವರಿಯಲು ಹೇಳಿದರಾಯಿತೆಂದು ಕೊಂಡೆ. ಸರಿ “ಅಮ್ಮಾರೆ ಕೆಲಸ ಆಯಿತು ನಾ ಹೋರಡಲೇ” ಎಂದಳು ಅಕ್ಕಮ್ಮ. ತಡೆ ಅಕ್ಕಮ್ಮ ಸ್ವಲ್ಪ ನಾಷ್ಟ ಬಡಿಸಿಕೋಡ್ತಿನಿ” ಎಂದು ಒಳಗೆ ಬಂದು ಇಡ್ಲಿ ಚಟ್ನಿ ಹಾಕಿಕೊಂಡು ಹೊರಗೆ ಬರುವಷ್ಟರಲ್ಲೆ ನನಗೆ ಒಳಗೊಳಗೆ ಡವಡವ. ಧೈರ್ಯ ಮಾಡಿ “ಏ ಅಕ್ಕಮ್ಮ ಸೀರೆ ಸರಿ ಮಾಡಿಕೊ, ಎಷ್ಟೂ ಮೇಲೆ ಸಿಕ್ಕಿಸಿಕೊಂಡಿಯಲ್ಲಾ” ಎಂದೆ. “ಇಲ್ಲ ಬಿಡ್ರಿ ಅಮ್ಮಾರೆ ಮನೆಗೆ ಹೋಗೆ ಉಣ ್ತನಿ. ನನ್ನ ಮಗನು ಉಣ್ತಾನ” ಎಂದಳು. ನಾನು ಹಠಕ್ಕೆ ಬಿದ್ದವಳಂತೆ “ನಾನು ನೋಡಬೇಕು, ನೀನು ಸಿಕ್ಕಿಸಿಕೊಂಡ ಸೀರೆ ಬಿಚ್ಚಲೇ ಬೇಕು” ಎಂದೇ ಅಷ್ಟರಲ್ಲಾಗಲೇ ಅವಳ ಮುಖ ಕಪ್ಪಿಟ್ಟಿತ್ತು. ಮೊದಲಿದ್ದ ಧೈರ್ಯ ನಾನು ಜೋರು ಮಾಡುವಷ್ಟಾರಲ್ಲಾಗಲೇ ಉಳಿಯಲಿಲ್ಲ. ಅಂಜುತಾ ಬಿಚ್ಚಿದವಳ ಸೀರೆಯಲ್ಲೇ, ಚಕ್ಕಿ, ಲವಂಗ, ಯಾಲಕ್ಕಿ, ಮೊಗ್ಗುಗಳು ಸರ ಸರ ಬಿದ್ದವು. ನನಗೂ ಶಾಕ್. ಅವಳೂ ಇದನ್ನು ನೀರಿಕ್ಷಿಸಿರಲಿಲ್ಲ ಅವಳಿಗೂ ಗಾಬರಿ. ಗರಬಡಿದವಳಂತೆ ಮಾತು ಮರೆತು ನಿಂತಿದ್ದಳು. ನಾನು ಒಂದೇ ಮಾತಿನಲ್ಲಿ “ನಾಳೆಯಿಂದ ನೀನು ಬರಬೇಡ” ಎಂದು ಬಿಟ್ಟೆ ಅವಳಿಗೆ ಈ ನಾಲ್ಕೈದು ವರ್ಷದಲ್ಲೆ ನನ್ನ ಗುಣ ಸ್ವಭಾವ ಗೊತ್ತಾಗಿತ್ತು ಎಷ್ಟೂ ಮೃದು, ಉದಾರಿಯೂ ಒಮ್ಮೆ ಅಷ್ಟೆ ಕಠಿಣ ಕಬ್ಬಿಣವೆಂದು ಅವಳು ಮುಂದೆ ಮಾತಾಡದೆ ಅಳುತ್ತಾ ಹೊರಟು ಹೋದಳು. ಅವಳು ಹೋದ ಮೇಲೆ ಸ್ವಲ್ಪ ಹೊತ್ತು “ಹೊತ್ತಿ ಉರಿಯುವ ಒಲೆಯಂತೆ ಮನಸ್ಸು ದಗದಗಿಸುತ್ತಿತ್ತು”. ನಂತರ ತಿಳಿಗೊಂಡ ಕೊಳದಂತೆ ಆದಮೇಲೆ ವಿಚಾರ ಮಾಡಿ ನೋಡಿದೆ. ಇವತ್ತೇನು ಅವಳನ್ನು ಬೈಯ್ದು ಕಳಿಸಿದೆ. ನಾಳೆ ಹೇಗೆ ಇವತ್ತು ರವಿವಾರ ನಾಳೆ ಬೆಳಗೆದ್ದರೆ ಸೋಮವಾರ ಶಾಲೆಗೆ ಓಡಬೇಕು. ಅವಳು ಬಂದ ಮೇಲೆ ನಿಶ್ಚಿಂತೆಯಿಂದ ಉಂಡು ತಿಂದು ನೆಮ್ಮದಿಯಿಂದ ಇದ್ದೆ. ನಾನು ದುಡುಕಿದರೆ ಇಷ್ಟು ಚೆನ್ನಾಗಿ ಅಡುಗೆ ಮಾಡುವರು ಸಿಗುವರೇ ಕೆಲಸದವರು ಸಿಗುವುದೇ ಬಹಳ ಕಷ್ಟ. ಯಾರು ಏನು ಸಾಚಾ. ಅವಕಾಶ ಸಿಕ್ಕರೆ ಬಡತನದ ಕಾರಣಕ್ಕೆ ಅಲ್ಪಸ್ವಲ್ಪ ಕಳ್ಳತನ ಮಾಡುವರೇ. ಕದ್ದಿದ್ದಾದರೂ ಎಷ್ಟು?, ಹೆಚ್ಚೆಂದರೆ 50 ರೂ ಯಾ ಅಲ್ಲವೆಂದು ಒಮ್ಮೆ ಎನಿಸಿದರೆ. ದಿನದಿನಾ ಇಷ್ಟೇಷ್ಟೆ ಒಯ್ಯುತ್ತಿದ್ದರೆ ಹೇಗೆ, ನಂಬಿಕೆಗೆ ಅರ್ಹಳಲ್ಲದವಳನ್ನು ಹೊರಗೆ ಹಾಕಬೇಕು ಎಂದು ಮತ್ತೆ ಯೋಚಿಸಿತು. ತಲೆ ಕೆಟ್ಟು ಮೂರಾ ಬಟ್ಟೆಯಾಯಿತು. ಈ ಸಣ್ಣ ಘಟನೆಯಿಂದ.ಆದರೆ ನಿಜಕ್ಕೂ ಅಕ್ಕಮ್ಮ ಪ್ರಾಮಾಣ ಕಳೇ ಆಗಿದ್ದಳು. ಅವಳು ಕಳ್ಳಿಯಲ್ಲ. ಅವತ್ತು ಮಗ. ಒಂದೇ ಸವನೆ “ಆ ಟೀಚರ ಮನೆಯಲ್ಲೆ ಮಾಡುವಂತೆ ನಮ್ಮ ಮನೆಯಲ್ಲಿ ಪಲಾವ ಮಾಡು” ಎಂದು ಗಂಟು ಬಿದ್ದಿದ್ದನಂತೆ. ಅವರ ಮನೆಯಲ್ಲಿ ಇದ್ದಂತೆ ನಮ್ಮ ಮನೆಯಲ್ಲಿ ಮಸಾಲೆ ಸಾಮಾನು ಇಲ್ಲಪ್ಪ” ಎಂದರೆ ಕೇಳಿ ತೆಗೆದುಕೊಂಡು ಬಾ ಎಂದಿನಂತೆ. “ನಿನ್ನೆಯಾದರೂ ಕೇಳಿ ಒಂದೇರೆಡು ಲಿಂಬೆ ಹಣ್ಣು ತಂದಿದ್ದೆ. ಮತ್ತೆ ಕೇಳಿದರೆ ಹೇಗೆ “ಎಂದು ಅವಳ ಚಿಂತೆಗೀಡಾಗಿ ಎಂದೂ ಮಾಡದ ತಪ್ಪನ್ನು ಮಗನ ಮಮಕಾರಕ್ಕೆ ಬಿದ್ದು ಆ ತಪ್ಪು ಮಾಡಿಸಿತಂತೆ. ಇದನೆಲ್ಲ ಹೇಳಿ ಹೇಳಿದ್ದು ಅವಳ ಮನೆ ಪಕ್ಕದ ಜೋತೆ ಗೂಡಿ ಕೆಲಸ ಮಾಡುವ ಮಲ್ಲಮ್ಮ ಮೊನ್ನೆ ಶಾಲೆ ಮೂಡಿಸಿಕೊಂಡು ಬರುವಾಗ ದಾರಿಯಲ್ಲಿ ಸಿಕ್ಕಾಗ ಹೇಳಿದ್ದು.”ಪಾಪ ಅಕ್ಕಮ್ಮ . ತುಂಬಾ ಒಳ್ಳೆಯವಳು. ನಿಮ್ಮನ್ನು ಎಷ್ಟು ಹಚ್ಚಿಕೊಂಡಿದ್ದಳು ಅವಳನ್ನು ಯಾಕೆ ಬಿಡಿಸಿದರಿ ಎಂದು ಹೇಳುತ್ತಾ ಅಕ್ಕಮ್ಮ ಆಕೆಯ ಮುಂದೆ ತನ್ನ ದುಃಖ ಹಂಚಿಕೊಂಡ ವಿಷಯ ಬಾಯ್ಬಿಟ್ಟಳು. ಈ ವಿಷಯ ತಿಳಿದ ಮೇಲೆ ನನಗೆ ನನ್ನ ದುಡುಕು ಬುದ್ಧಿ ಬಗ್ಗೆ ತುಂಬಾನೇ ಬೇಸರವಾಯಿತು. ಯಾಕೋ ಅವಳ ಮುಂದೆ ನಾನು ಸಣ್ಣವಳಾಗಿ ಬಿಟ್ಟೆನೆ ಅನಿಸಿತು.ಮತ್ತೆ ಕೆಲಸಕ್ಕೆ ಕರೆಯಲು ಹಿಂಜರಿಕೆ ಆಯಿತು **********************************

ಸಣ್ಣ ತಪ್ಪು Read Post »

ಕಥಾಗುಚ್ಛ

ಭಯ

ಕಥೆ ಭಯ ಲಕ್ಷ್ಮೀದೇವಿ ಪತ್ತಾರ ಸಂಜನಾ ಬೆಳಗ್ಗೆದ್ದ ತಕ್ಷಣ ಪಾರಿಜಾತದ ಗಿಡದತ್ತ ಹೂ ತರಲು ಹೋದಳು. ಹೊತ್ತಾದರೆ ಹೂಗಳು ನೆಲಕ್ಕುರುಳಿ ಬಿಳುವುದೆಂದು ಹೂಬುಟ್ಟಿ ಹಿಡಿದು ಗಿಡದ ಬಳಿ ಹೋದಳು. ಆ ಹೂವೆ ಹಾಗೆ. ಅತಿಸೂಕ್ಷ್ಮವೂ ಅತ್ಯಾಕರ್ಷಕವೂ ಅಲ್ಲದೆ ರಾತ್ರಿ ಅರಳಿ ಬೆಳಗಾಗುವಷ್ಟರಲ್ಲಿ ನೆಲಕ್ಕೆ ಅಲಂಕಾರ ಮಾಡಿದಂತೆ ನೆಲದ ತುಂಬಾ ಅರಳಿ ಬೀಳುತ್ತಿದ್ದವು. ಕೆಲವಷ್ಟು ಗಿಡದ ಮೇಲೆಯೂ ಇರುತ್ತಿದ್ದವು. ಇನ್ನು ಪೂರ್ಣ ಬೆಳಕು ಹರಿಯುವ ಮುನ್ನವೇ ಅವನು ತಂದು ಬಿಡುತ್ತಿದ್ದಳು ಸಂಜನಾ. ಅಂದು ಸ್ವಲ್ಪ ಲೇಟಾಗಿ ಎದ್ದಿರುದರಿಂದ ದೌಡಾಯಿಸಿ ಹೋದಳು . ಗಾಳಿಗೆಲ್ಲಿ ಹೂಗಳೆಲ್ಲಾ ಬಿದ್ದುಬಡುವವೂ ಎಂದು ಅವಸರವಾಗಿ ಎಲೆಗಳ ಮೇಲಿನ ಹೂಗಳನ್ನು ಆಯ್ದುಕೊಂಡು ಬುಟ್ಟಿಗೆ ಹಾಕಿಕೊಂಡಳು. ಹೂಗಳೆಂದರೆ ಬಲು ಇಷ್ಟ ಸಂಜನಾಗೆ. ಗಿಡಗಳಿಗೆ ನೀರು ಹಾಕುವುದು, ಪೂಜೆಗೆ ಮತ್ತು ತನಗೂ ಹೂ ಕಿತ್ತು ತರುವುದು ಅವಳಿಗೆ ಅಚ್ಚುಮೆಚ್ಚಿನ ಕೆಲಸ. ಚೆಂದದ ಹೂಗಳನ್ನು ನೋಡುತ್ತಾ ಇರಬೇಕಾದರೆ ಅವುಗಳ ಮೇಲೆ ಸಣ್ಣದಾದ ಬಿಳಿ ಜೇಡ ಹರಿದಾಡಿದ್ದು ಕಾಣಿಸಿತು. ಅದನ್ನು ತೆಗೆಯಲು ಹೋದಾಗ ಅದು ಕೆಳಗೆ ಜಾರಿತು. ಹೂ ಸರಿಸಿ ಬುಡದಲ್ಲಿದ್ದ ಜೇಡರಹುಳು ತೆಗೆಯುವಷ್ಟರಲ್ಲಿ ಹೂಗಳ ಬುಡದಲ್ಲಿದ್ದ ಅತಿ ಸೂಕ್ಷ್ಮವಾದ ಸಣ್ಣ ಸಣ್ಣ ಹುಳುಗಳು ಹರಿದಾಡುತ್ತಿರುವದನ್ನು ಕಂಡಳು. ಅಂತಹ ಹುಳುಗಳನ್ನು ಈ ಮೋದಲು ಅವಳು ಗಮನಿಸಿರಲಿಲ್ಲ.ಅವು ಅವಳ ಕೈಮೇಲೆ ಸರಸರ ಏರಲಾರಂಭಿಸಿದವು . ಅಷ್ಟು ಸಣ್ಣ ಹುಳುಗಳಾಗಿದ್ದರು ಅವು ಹಾರುತ್ತಿದ್ದವು. ನಂತರ ಅವಳ ಮೈ ಮೇಲೆಲ್ಲಾ ಹರಿದಾಡಲಾರಂಭಿಸಿದವು. ಅವಳು ಆತಂಕದಿಂದ ಬುಟ್ಟಿ ದೇವರ ಜಗುಲಿ ಮೇಲೆ ಇಟ್ಟವಳೆ ತನ್ನ ಬಟ್ಟೆ ಜಾಡಿಸಲು ಆರಂಭಿಸಿದಳು .ಮೈಯೆಲ್ಲಾ ತುರುಸಲಾರಂಭಿಸಿತು .ಜೊತೆಗೆ ಬೊಬ್ಬೆಗಳು ಏಳಲಾರಂಭಿಸಿದವು. ಸ್ನಾನ ಮಾಡಿದರು ಗುಳ್ಳೆಗಳು ಹೋಗಲಿಲ್ಲ. ಎಣ್ಣೆ ಸವರಿದರು ಹೋಗಲಿಲ್ಲ .ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೊಬ್ಬೆಗಳು ದೊಡ್ಡವಾಗಿ ನೀರುಗುಳ್ಳೆಯಂತಾದವು . ತಡಮಾಡದೇ ಸ್ಕಿನ್ ಡಾಕ್ಟರ್ ಬಳಿ ಕರೆದೊಯ್ದರು. ಇನ್ಫೆಕ್ಷನ್ ಆಗಿದೆ ಎಂದು ಡಾಕ್ಟರ್ ಔಷದಿ, ಮುಲಾಮು ಬರೆದುಕೊಟ್ಟರು. ಆದರೂ ವಾರ ಕಳೆದರೂ ಗುಳ್ಳೆಗಳು ಮಾಯಲಿಲ್ಲ .ಯಾವುದನ್ನೇ ಆಗಲಿ ಮನಸ್ಸಿಗೆ ಬೇಗ ಹಚ್ಚಿಕೊಳ್ಳುವ ಸಂಜನಾ ಅಂಜಿಕೆ ಆತಂಕದಿಂದ ಕುಗ್ಗಿ ಹೋದಳು. ತಂದೆ-ತಾಯಿಯರು ಗಾಬರಿಗೊಂಡರು. ಧಾರ್ಮಿಕ ಸ್ವಭಾವದವರಾದ ಅವರು ಇದು ದೇವರ ಶಾಪವು ಏನು. ನಾವೇನಾದರೂ ತಪ್ಪು ಮಾಡಿರಬೇಕು ಅದಕ್ಕೆ ನಮ್ಮ ಮಗಳಿಗೆ ಶಿಕ್ಷೆಯಾಗಿದೆ. ಇರುವುದು ಒಬ್ಬಳೇ ಒಬ್ಬಳು ಮಗಳು .ಅವಳಿಗೆ ಏನಾದರೂ ಆದರೆ ಅದು ನಮಗೆ ಆದಂತೆ ಎಂದು ಚಡಪಡಿಸಿದರು. ಅವಳ ತಂದೆ ತಾಯಿ ಕೊನೆಗೆ ಸ್ವಾಮಿಯರ ಬಳಿ ಕೇಳಿಬರಲು ನಿರ್ಧರಿಸಿದರು. ಮರುದಿನ ರವಿವಾರ ಸ್ವಾಮಿಯರ ಬಳಿ ಓಡಿ ಹೋದರು.ಆದದ್ದು ತಿಳಿಸಿದ ದಂಪತಿಗಳು ಹೀಗೇಕಾಗಿದೆ ನಮ್ಮ ಮಗಳಿಗೆ , ಪರಿಹಾರ ಏನು ಎಂದು ವಿಚಾರಿಸಲು ಗಣಪತಿ ಆಚಾರ್ಯರು “ಇದು ಖಚಿತವಾಗಿಯೂ ನಾಗದೋಷ ನೀವು ಕುಕ್ಕೆ ಗೆ ಹೋಗಿ ಬನ್ನಿ ಎಲ್ಲಾ ಪರಿಹಾರ ಆಗುತ್ತೆ “ಎಂದು ಹೇಳಿದರು. ಸರಿಯೆಂದು ಕುಕ್ಕೆಗೆ ಪ್ರಯಾಣಮಾಡಿದರು ಸಂಜನಾಳ ತಂದೆ ನಾಗರಾಜ ,ತಾಯಿ ರತ್ನಮ್ಮ. ಹೋಗಿ ಹರಕೆ ತೀರಿಸಿ ಅಂದು ರಾತ್ರಿ ಅಲ್ಲೇ ಉಳಿದು ಮರುದಿನ ಸೇವೆಮಾಡಿ ಮನೆಗೆ ಬಂದರು .ಬಂದು ನೋಡಿದರೆ ಗುಳ್ಳೆಗಳ ಮಂಗಮಾಯ. ನಾಗರಾಜ ರತ್ನಮ್ಮಗಂತು ಹೇಳಲಾಗದಷ್ಟು ಸಂತೋಷ. ಸ್ವಾಮೇರ ಶಕ್ತಿ, ದೇವರ ಮಹಿಮೆ ಎಲ್ಲರ ಮುಂದೆ ಹೇಳಿ ಹೊಗಳಿದ್ದೆ ಹೊಗಳಿದ್ಧು. ಆದರೆ ನಿಜಕ್ಕೂ ಆದದ್ದೆ ಬೇರೆ .ಸಂಜನ ಯಾವುದನ್ನೇ ಆಗಲಿ ಬಹಳ ದೀರ್ಘವಾಗಿ ವಿಚಾರ ಮಾಡುತ್ತಿದ್ದಳು . ಓದುವಾಗ ನೋಡುವಾಗ ,ಕುಲಂಕುಶವಾಗಿ ತಿಳಿದುಕೊಳ್ಳುತ್ತಿದ್ದಳು. ಇತ್ತೀಚಿಗೆ ವಾಟ್ಸಾಪ್ ಫೇಸ್ಬುಕ್ನಲ್ಲಿ ಬರುವ ಆರೋಗ್ಯ ಸೌಂದರ್ಯವರ್ಧಕಗಳ ಬಗ್ಗೆ ಓದುವುದು ಹೆಚ್ಚಾಗಿತ್ತು. 21ರ ಹರೆಯದ ಸಂಜನಾಗೆ ಸಹಜವಾಗಿ ವಯೋಧರ್ಮಕ್ಕೆ ತಕ್ಕಂತೆ ಮುಖದ ಮೇಲೆ ಮೊಡವೆ ಬಂದಿದ್ದವು. ಹೀಗಾಗಿ ದೇಹ ಸೌಂದರ್ಯದ ಬಗ್ಗೆ ತಲೆಕೆಡಿಸಿಕೊಂಡು ಅತಿ ವಿಷಯ ವಿಷಕ್ಕೆ ಸಾಮಾನ ಎಂಬಂತೆ ಸ್ವಲ್ಪ ಮೊಡವೆಯಾದರೂ ಅತಿಯಾಗಿ ಯೋಚಿಸುತ್ತಿದ್ದಳು. ಮೊದಲೇ ಸೈನ್ಸ್ ಸ್ಟೂಡೆಂಟ್. ಪಾರಿಜಾತ ಗಿಡದಲ್ಲಿನ ಸಣ್ಣ ಸಣ್ಣ ಹುಳಗಳು ದಿನಾ ಆ ಗಿಡದಲ್ಲಿ ಇರುತ್ತಿದ್ದವು.ಹೂವು ಕೀಳಿದವರ ಮೈಮೇಲೆ ಏರುತ್ತಿದ್ದವು. ಅದನ್ನು ಸಂಜನಾ ಮಬ್ಬುಬೆಳಕಿನಲ್ಲಿ ಗಮನಿಸಿರಲಿಲ್ಲ .ಆದರೆ ಆ ದಿನ ಸ್ವಲ್ಪ ತಡವಾಗಿದ್ದರಿಂದ ಜೇಡರ ಹುಳು ವಿನ ಕಾರಣದಿಂದ ಅವಳ ಗಮನಕ್ಕೆ ಬಂತು.ಆ ಹುಳುಗಳು ಮೇಲೇರಿ ಏನೇನು ಆಗಬಹುದು ಎಂದು ಅತಿಯಾಗಿ ಯೋಚಿಸುತ್ತಾ ಕಳೆದ ಪರಿಣಾಮ ಅವಳ ದೇಹದ ಮೇಲೂ ಆ ರೀತಿಯ ಪರಿಣಾಮ ಬೀರಿತ್ತು. ಅವಳ ಭಾವನೆ ತೀವ್ರವಾಗಿ ಅವಳ ಯೋಚನೆಯಂತೆ ಘಟಿಸಿತ್ತು. ಯಾವಾಗ ಕುಕ್ಕೆಗೆ ಹೋದರು ಅಲ್ಲೇ ದೇವರ ಮೇಲಿನ ಅತಿಯಾದ ನಂಬಿಕೆಯಿರುವದರಿಂದ ರೋಗ ಹೋಗುವದೆಂದು ಪೂರ್ಣವಾಗಿ ನಂಬಿದಳು.ಅದೂ ಪರಿಣಾಮ ಬೀರಿತು.ಅವಳು ಆರಾಮ ವಾದಳು. ಭಯದೊಂದಿಗೆ ಬಂದ ರೋಗ ಭಯ ಹೋದೊಡನೆ ಹೊರಟುಹೋಗಿತ್ತು ಆದರೆ ಇದು ಅವಳಿಗೆ ಗೊತ್ತಾಗಿದೆ ತನ್ನ ಮೆಚ್ಚಿನ ಪಾರಿಜಾತ ಹೂವುಗಳನ್ನು ತರುವುದನ್ನೇ ಅವಳು ಬಟ್ಟುಬಿಟ್ಟಳು. **************************************

ಭಯ Read Post »

ಕಥಾಗುಚ್ಛ

ಧೃಡ ಚಿತ್ತ

ಕಥೆ ಧೃಡ ಚಿತ್ತ ವಾಣಿ ಸುರೇಶ್ ರಾತ್ರಿ ಎಲ್ಲಾ ಕೆಲಸ ಮುಗಿಸಿ ರೂಮಿಗೆ ಹೋದ ಹರಿಣಿ ಬಾಲ್ಕನಿಯಲ್ಲಿ ಆಕಾಶ ನೋಡುತ್ತಾ ಸುಮ್ಮನೆ ನಿಂತಳು.ಧಾತ್ರಿ ಹೇಳಿದ ಮಾತು ಇನ್ನೂ ಅವಳ ಕಿವಿಯಲ್ಲಿ ಗುಣಗುಣಿಸುತ್ತಿತ್ತು.ನನಗ್ಯಾಕೆ ಅವಳಂತೆ ಮನೆಯಲ್ಲಿ ಹೇಳಕ್ಕಾಗಲ್ಲ ಎಂದು ಯೋಚಿಸುತ್ತಿರುವಾಗ ಗಂಡ ವಿಜಯ್ ಬಂದು ಪಕ್ಕದಲ್ಲಿ ನಿಂತನು.” ಇನ್ನು ಕೂಡ ಆ ನೆಟ್ ಫ್ಲಿಕ್ಸ್ ಬಗ್ಗೆ ಯೋಚನೆ ಮಾಡುತ್ತಿದ್ಯಾ? ಈಗಿನ ಮಕ್ಕಳು ಗೊತ್ತಲ್ವಾ ಹರಿಣಿ? ನಾವು ನೆಟ್ ಫ್ಲಿಕ್ಸ್ ಸಬ್ಸ್ಕ್ರೈಬ್ ಮಾಡದಿದ್ರೆ ಅವ್ಳು ಯಾರದ್ದೋ ಅಕೌಂಟ್ ಶೇರ್ ಮಾಡಿ ತನಗೆ ಬೇಕಾದ್ದನ್ನು ನೋಡುತ್ತಾಳೆ.ಅವ್ರೆಲ್ಲಾ ಹಿಂದಿ ನಿಂದ ಆಡ್ಕೊಳ್ತಾರೆ ಆಮೇಲೆ! ಅದ್ರ ಬದ್ಲು ಟ್ಯೂಷನ್ ಆದ ಮೇಲೆ ಒಂದೇ ಗಂಟೆ ಸೀರೀಸ್ ನೋಡು ಅಂತ ಸ್ಟ್ರಿಕ್ಟ್ ಆಗಿ ಹೇಳೋಣ. ಅದೇನು ನೋಡ್ತಾಳೆ ಅಂತ ನಮ್ಗೂ ಕಣ್ಣಿಡಬಹುದು” ಅಂದಾಗ ಹರಿಣಿಗೂ ಸರಿಯೆನಿಸಿ ತಲೆಯಾಡಿಸಿದಳು. ” ನಿನ್ನ ಮಗರಾಯನಿಗೂ ಸ್ವಲ್ಪ ಬುದ್ದಿ ಹೇಳು! ಇನ್ನೂ ಎಳೇಮಗೂ ತರ ಆಡ್ತಾನೆ.ನಾನು ನಾಳೆ ಬೆಳಗ್ಗೆ ಹತ್ತು ಗಂಟೆ ಹೊತ್ತಿಗೆ ಮಂಗಳೂರಿಗೆ ಹೊರಡುತ್ತೇನೆ.ರವಿ ಬರ್ತಾನೆ ನಂಜೊತೆ.ನಾಡಿದ್ದು ಮದ್ವೆ ಊಟ ಮುಗಿಸಿಕೊಂಡು ಹೊರಟ್ರೆ ರಾತ್ರಿ ಇಲ್ಲಿ ತಲುಪ್ತೇವೆ.” ” ನಿನ್ನ ಮಗರಾಯ” ಎಂದು ಗಂಡ ಹೇಳಿದ್ದಕ್ಕೆ ಸಿಟ್ಟು ಬಂದರೂ ತಡೆದುಕೊಂಡು , ” ಸರಿ ಹಾಗೇ ಮಾಡಿ” ಅಂದಳು.       ಮದುವೆಯಾಗಿ ಐದು ವರ್ಷಗಳ ನಂತರ, ಜನರ ಕೊಂಕು ಮಾತುಗಳನ್ನು ಕೇಳಿ ಹೈರಾಣಾಗಿ ಹೋದವಳಿಗೆ, ಮಗ ಹುಟ್ಟಿದಾಗ ಆದ ಸಂಭ್ರಮ ಹೇಳತೀರದು! ಮಗನಿಗೆ ಐದು ವರ್ಷ ತುಂಬುವವರೆಗೆ ಕೆಲಸಕ್ಕೆ ಹೋಗದೆ ಅವನ ಆಟಪಾಠಗಳಲ್ಲಿ ಮಗ್ನಳಾಗಿ ತಾಯ್ತನದ ಸುಖ ಅನುಭವಿಸಿದ್ದಳು ಅವಳು.ಅಜ್ಜಿ, ತಾತ ,ಅಮ್ಮನ ಅತಿಯಾದ ಮುದ್ದಿನಿಂದಾಗಿ ಅವನು ಸೋಮಾರಿಯಾಗಿ ಬೆಳೆದಿದ್ದ.ಆರು ವರ್ಷದ ನಂತರ ಹುಟ್ಟಿದ ಮಗಳನ್ನು ಕೂಡ ಮುದ್ದಾಗಿ ಬೆಳೆಸಿದರೂ ಮಗನಷ್ಟಲ್ಲ.ಅದಕ್ಕೇನೇ ಆವಾಗಾವಾಗ ” ನಿನ್ನ ಮಗ” ಎಂದು ಗಂಡ ಹೇಳುವಾಗ ಸಿಟ್ಟು ಬರುವುದು ಹರಿಣಿಗೆ. **”****** ನಾಳೆಯ ಸ್ವಾತಂತ್ರ್ಯ ದಿನಾಚರಣೆಗೆ ಸ್ಟೇಜ್ ಪ್ರ್ಯಾಕ್ಟೀಸ್ ಮಾಡಿಸುತ್ತಿರುವಾಗ  ಓಡೋಡಿ ಬಂದ ಆಯಾ ಹರಿಣಿ ಗೆ ಫೋನ್ ಕೊಟ್ಟು,  “ನಾಲ್ಕೈದು ಸಲ ನಿಮ್ಮತ್ತೆ ಫೋನ್ ಮಾಡಿದ್ರಂತ ಗೀತಾ ಮೇಡಂ ನಿಮ್ಮತ್ತೆ ಜತೆ ಮಾತಾಡಿದ್ರಂತೆ. ಏನೋ ಅರ್ಜೆಂಟಂತೆ, ನೀವು ಈವಾಗ್ಲೇ ಫೋನ್ ಮಾಡ್ಬೇಕಂತೆ” ಅಂದಳು. ಹರಿಣಿಗೆ ಭಯದಿಂದ ಎದೆ ಧಸಕ್ಕೆಂದಿತು!! ಗಂಡ ಕೂಡ ಇಲ್ಲಿಲ್ಲವಲ್ಲ ಅಂದುಕೊಳ್ಳುತ್ತಾ ಫೋನ್ ಮಾಡಿದಾಗ , ಮಾತಾಡಿದ್ದು ಪಕ್ಕದ ಮನೆಯ ಸೋಮು ಅಂಕಲ್. ” ನಿನ್ನ ಮಾವನಿಗೆ ಆಗಾಗ ಆಗೋವಂತೆ  ಶುಗರ್ ಜಾಸ್ತಿಯಾಗಿ ತಲೆಸುತ್ತು ಬರ್ತಿದೆ, ಜೊತೆಗೆ ವಿಪರೀತ ಸುಸ್ತು. ಗಾಬ್ರಿ ಮಾಡ್ಕೊಳ್ದೆ ಆರಾಮವಾಗಿ ಸ್ಕೂಟರ್ ನಲ್ಲಿ ಬಾಮ್ಮ ನೀನು. ನಾವಿದ್ದೀವಲ್ಲಾ ಇಲ್ಲಿ” ಅಂದಾಗ ಅವರ ಕಾಳಜಿಯ ಮಾತಿಗೆ ಹರಿಣಿಯ ಕಣ್ಣು ತುಂಬಿ ಬಂತು! ಮಾವನದೇ ವಯಸ್ಸಿನವರಾದರೂ ಆರೋಗ್ಯದ ಬಗ್ಗೆ ಎಷ್ಟು ಗಮನಕೊಡುತ್ತಾರೆ ಅವರು!!  “ಅರ್ಧ ಗಂಟೆಯಲ್ಲಿ ಅಲ್ಲಿರ್ತೇನೆ ಅಂಕಲ್” ಎಂದು ಫೋನಿಟ್ಟಳು. ಶಾಲೆಯ ಸಮಯ ಮುಗಿದಿದ್ದರಿಂದ ಸೀದಾ ಮನೆಗೆ ಬಂದು , ಅತ್ತೆ ಮಾವನನ್ನು ಆಸ್ಪತ್ರೆಗೆ ಕರೆದೊಯ್ದಳು. ಇವರ ಕತೆ ಮೊದಲೇ ಗೊತ್ತಿದ್ದ ಡಾಕ್ಟರ್, ಹರಿಣಿಯ ಅತ್ತೆ ಮಾವನ ಮೇಲೆ ಹರಿಹಾಯ್ದರು.” ಪ್ರತಿ ತಿಂಗಳೂ ಈ ತರ ಸಮಸ್ಯೆ ತಗೊಂಡು ಬರ್ತೀರಲ್ವಾ ನೀವು?ಸ್ವಲ್ಪ ನಾದ್ರೂ ಆರೋಗ್ಯದ ಕಡೆಗೆ ಗಮನ ಕೊಡಬಾರ್ದಾ? ಇವತ್ತು ಅಡ್ಮಿಟ್ ಮಾಡ್ಬೇಕಾಗತ್ತೆ ಇವ್ರನ್ನು” ಅಂದಾಗ ಹರಿಣಿ ಚಿಂತಾಕ್ರಾಂತಳಾದಳು. ನಾಳೆ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆ ವಹಿಸಿರುವ ತನಗೆ ರಜೆ ಸಿಗುವುದು ಸಾಧ್ಯವೇ ಇಲ್ಲ. ಏನಾದರೂ ಉಪಾಯ ಮಾಡೋಣ ಅಂದುಕೊಳ್ಳುತ್ತಾ ಕೌಂಟರ್ ಕಡೆಗೆ ನಡೆದಳು.       ಮಾವನನ್ನು ರೂಮಿಗೆ ಕರೆದೊಯ್ದು ಟ್ರೀಟ್ಮೆಂಟ್ ಶುರು ಮಾಡಿದ ನಂತರ ಮಗನಿಗೆ ಫೋನ್ ಮಾಡಿ ” ತಾತನನ್ನು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದ್ದಾರೆ. ಸ್ವಲ್ಪ ಹೊತ್ತಲ್ಲಿ ನೀನು ಇಲ್ಲಿಗೆ ಬಾ.ಇವತ್ತು ರಾತ್ರಿ ನೀನು ತಾತನ ಜೊತೆಗಿರು” ಅಂದಳು. ಮಗ ಅಚ್ಚರಿಯಿಂದ ” ನಾನಾ? ” ಎಂದಾಗ  , ” ಹೌದು ನೀನೇ. ನಂಗೆ ನಾಳೆ ಬೆಳಗ್ಗೆ ಆರು ಗಂಟೆಗೆ ಶಾಲೆಯಲ್ಲಿರ್ಬೇಕು.ರಾತ್ರಿ ಹೊತ್ತು ಅಜ್ಜಿ ಇಲ್ಲಿರೋದು ಸರಿಯಲ್ಲ. ಬೇಗ ಬಾ” ಅಂದಳು. ” ನೀನು ರಜೆ ಹಾಕಲ್ವಾ? ” ಎಂದು ಅಚ್ಚರಿಯಿಂದ ಕೇಳಿದ ಅತ್ತೆಗೆ ಶಾಂತವಾಗಿಯೇ ” ಈ ತರದ ಪರಿಸ್ಥಿತಿಯನ್ನು ನೀವಾಗೇ ತಂದುಕೊಂಡದ್ದಲ್ವಾ ಅತ್ತೆ? ನಾನು ಎಷ್ಟಂತ ರಜೆ ಹಾಕ್ಲಿ? ಮಕ್ಳು ಹೆಲ್ಪ್ ಮಾಡ್ತಾರೆ ” ಅಂದಳು. ತಪ್ಪು ತಮ್ಮದಿರುವಾಗ ಸೊಸೆಯ ಹತ್ತಿರ ಮಾತನಾಡಿದರೆ ಕಷ್ಟ ಎಂದು ಅವರೂ ಸುಮ್ಮನಾದರು. ಮಗನನ್ನು ಮಾವನ ಬಳಿ ಬಿಟ್ಟು ಅತ್ತೆಯ ಜೊತೆ ಹರಿಣಿ ಮನೆಗೆ ಹೋದಳು. ಟಿವಿ ನೋಡುತ್ತಾ ಕುಳಿತ ಮಗಳನ್ನು ಕರೆದು,  “ನಾನು ನಾಳೆ ಶಾಲೆಗೆ ಹೋಗುತ್ತೇನೆ. ನೀನು ಕ್ಯಾಬ್ ಬುಕ್ ಮಾಡಿ ಅಜ್ಜಿಯ ಜೊತೆ ಆಸ್ಪತ್ರೆಗೆ ಹೋಗು” ಅಂದಳು. ” ನಾನಾ?” ಎಂದು ಪ್ರಶ್ನಿಸಿದ ಮಗಳಿಗೆ , ” ಹೌದು ನೀನೇ. ನಾಳೆ ಬೆಳಗ್ಗೆ ಬೇಗ ಎದ್ದು ಅಜ್ಜಿಗೆ ಅಡುಗೆಮನೆಯಲ್ಲಿ ಹೆಲ್ಪ್ ಮಾಡು” ಎಂದು ಹೇಳುತ್ತಾ ನಾಳೆಯ ಕಾರ್ಯಕ್ರಮಕ್ಕೆ ಬೇಕಾದ ತಯಾರಿಗೆ ತೊಡಗಿದಳು. ********* ಮಾರನೇ ದಿನ ಬೆಳಗ್ಗೆ ಶಾಲೆಗೆ ಹೊರಟ ಹರಿಣಿಗೆ ಈ ಸೂರ್ಯೋದಯ ಹೊಸತೆಂಬಂತೆ ಕಂಡಿತು.ಮಗನಿಗೆ ಫೋನ್ ಮಾಡಿದಾಗ ಮಾವ ಚೇತರಿಸುತ್ತಿದ್ದಾರೆಂದು ಕೇಳಿ ಇನ್ನಷ್ಟು ಸಮಾಧಾನವಾಯಿತು. ಶಾಲೆಯ ಕಾರ್ಯಕ್ರಮ ಸುಸೂತ್ರವಾಗಿ ನಡೆದು ಊಟಕ್ಕೆ ಕುಳಿತು, ಧಾತ್ರಿಗೆ ಮನೆಯ ಕತೆ ಹೇಳಿದಾಗ ಅವಳಿಗೆ ಅಚ್ಚರಿಯೋ ಅಚ್ಚರಿ!! ಅವಳು  “ನಿಜಾನಾ ? ನಂಬಕ್ಕಾಗ್ತಿಲ್ಲ ನಂಗೆ!!!” ಎಂದು ಕೇಳಿದಾಗ ಹರಿಣಿ ನಗುತ್ತಾ  “ಹೌದಮ್ಮಾ..ಜವಾಬ್ದಾರಿ ಯನ್ನು ನಾವಾಗೇ ವಹಿಸಿಕೊಡೋವರ್ಗೂ ಎಲ್ರೂ ಸುಮ್ನಿರ್ತಾರೆ. ಇದೊಂದು ಪಾಠ, ಕಲ್ತು ಕೋ ” ಅಂದಳು. *************************************

ಧೃಡ ಚಿತ್ತ Read Post »

ಕಥಾಗುಚ್ಛ

ಮನಸೆಂಬ ಮರ್ಕಟ

ಕಥೆ ಮನಸೆಂಬ ಮರ್ಕಟ ವಾಣಿ ಸುರೇಶ್ ಕೆ. ಸ್ಕೂಟರ್ ಕೀ , ಬ್ಯಾಗನ್ನು ತೆಗೆದುಕೊಂಡು ಧಾತ್ರಿ ಟಿವಿ ನೋಡುತ್ತಿದ್ದ ಮಗಳು, ಪೇಪರ್ ಓದುತ್ತಿದ್ದ ಗಂಡ, ತಿಂಡಿ ತಿನ್ನುತ್ತಿದ್ದ ಅತ್ತೆಗೆ ಕೇಳಿಸುವಂತೆ ಜೋರಾಗಿ , ” ಇನ್ನು ಮುಂದೆ ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳಲ್ಲ ಅಂತ ಡಿಸೈಡ್ ಮಾಡಿದ್ದೇನೆ.ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಗಳನ್ನು  ಪಾಲಿಸಿದರೆ , ನನಗೂ ಆ್ಯಂಗ್ಸೈಟಿ, ಮೈಗ್ರೇನ್‌ ಕಡಿಮೆಯಾಗತ್ತೆ. ಸಣ್ಣಪುಟ್ಟ ವಿಷಯಕ್ಕೆ ನನಗೆ ಮೆಸೇಜ್ ಮಾಡೋದು, ಫೋನ್ ಮಾಡೋದು ಮಾಡ್ಬೇಡಿ. ಫೋನನ್ನು ಸೈಲೆಂಟ್ ಮೋಡಲ್ಲಿ ಇಡ್ತಾ ಇದ್ದೇನೆ ನಾನು. ಬರ್ಲಾ, ಬೈ” ಎಂದು ಲಿಫ್ಟ್ ಹತ್ತಿದಳು.       ಸ್ಕೂಟರ್ ಓಡಿಸುತ್ತಿರುವಾಗ ಇವತ್ತು ಮೈ ಮನಸ್ಸು ಹಗುರವಾದಂತೆ ಅನಿಸಿತು ಧಾತ್ರಿಗೆ. ಗೆಳತಿ ಹರಿಣಿ ಹೇಳಿದ್ದು ಎಷ್ಟು ನಿಜ! ತರಗತಿಯಲ್ಲಿ ಪಾಠ ಮಾಡುವಾಗಲೂ ಬರುವ ಮೆಸೇಜ್ ಮತ್ತು ಕಾಲ್ ಗಳು ತಲೆ ಚಿಟ್ಟು ಹಿಡಿಸುತ್ತಿದ್ದವು. ಬ್ಯಾಂಕ್ ಸ್ಟೇಟ್ ಮೆಂಟ್ ತಗೊಂಡು ಬಾ ಇವತ್ತೇ ಲಾಸ್ಟ್ ಡೇಟು ಅನ್ನುವ ಗಂಡ, ದೇವಸ್ಥಾನಕ್ಕೆ ಹೋಗ್ಬೇಕು ಮನೆ ಕೀ ಕಾಣಿಸ್ತಿಲ್ಲ ಅನ್ನೋ ಅತ್ತೆ, ಯಾವತ್ತೋ ಕೊಟ್ಟ ಪ್ರಾಜೆಕ್ಟ್ ವರ್ಕ್ ಮಾಡದೆ ,ಟೀಚರ್ ಕೈಯಲ್ಲಿ ಪನಿಷ್ಮೆಂಟ್ ತಗೊಂಡು ‘ ಇವತ್ತೇ ತಗೊಂಡು ಬಾ’ ಅಂತ ಮಗಳು ಕಳಿಸಿದ ಮೆಟೀರಿಯಲ್ಸ್ ಲಿಸ್ಟ್…. ಇವೆಲ್ಲಾ ಒಂದೊಂದು ಉದಾಹರಣೆ ಅಷ್ಟೇ. ನಾನು ಮಾಡಿದ್ದು ಜಾಸ್ತಿ ಆಯಿತು, ಇನ್ನು ಮುಂದೆ ಮೂವರೂ ಸ್ವಲ್ಪವಾದರೂ ಜವಾಬ್ದಾರಿ ವಹಿಸಿಕೊಳ್ಳಲಿಅಂದುಕೊಳ್ಳುತ್ತಾ ಶಾಲೆ ತಲುಪಿದಳು.      ಧಾತ್ರಿ ಮತ್ತು ಹರಿಣಿ ಹೇಗೆ ಗೆಳತಿಯರಾದರು ಎನ್ನುವುದೇ ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ!! ಧಾತ್ರಿ ಮಿತಭಾಷಿಯಾದರೆ, ಹರಿಣಿಯದ್ದು ಮಲೆನಾಡಿನ ಮಳೆಯಂಥ ಮಾತು.ಕೇಳುವ ಎರಡು ಕಿವಿಗಳಿದ್ದರೆ ಸಾಕು ಹರಿಣಿಗೆ, ಮತ್ತೇನೂ ಬೇಕಿಲ್ಲ.ಅದಕ್ಕೇನೇ ಪಾಪದ ಧಾತ್ರಿಯ ಗೆಳೆತನ ಮಾಡಿದ್ದಾಳೆ ಎಂದು ಎಲ್ಲರ ಅಭಿಪ್ರಾಯ.    ಇವತ್ತು ಫಸ್ಟ್ ಪೀರಿಯಡ್ ಫ್ರೀ ಇದ್ದುದರಿಂದ ಇವರಿಬ್ಬರೂ ಸ್ಟಾಫ್ ರೂಮಿನಲ್ಲಿದ್ದರು. ಹರಿಣಿ ಅಸಹನೆಯಿಂದ ವಾಟ್ಸಾಪ್ ನಲ್ಲಿ ಮೆಸೇಜ್ ಟೈಪ್ ಮಾಡುತ್ತಿದ್ದನ್ನು ನೋಡಿ ಧಾತ್ರಿ ನೋಟ್ ಬುಕ್ ತಿದ್ದುತ್ತಾ ಕುಳಿತಳು. ಮೆಸೇಜ್ ಕಳಿಸಿ ಧಾತ್ರಿ ಕಡೆಗೆ ತಿರುಗಿದ ಹರಿಣಿ ಮಾತಿಗೆ ಶುರು ಹಚ್ಚಿದಳು ” ನೋಡು, ನನ್ನ ಮಗಳದು ಒಂದು ವಾರದಿಂದ ಒಂದೇ ಹಠ, ನೆಟ್ ಫ್ಲಿಕ್ಸ್ ಬೇಕಂತ. ಈವಾಗ ಸೆಕೆಂಡ್ ಪಿಯುಸಿ ಅವಳು. ಹಾಳುಮೂಳು ಸೀರೀಸ್ ನೋಡಿ ಕೂತ್ರೆ ಓದೋದು ಯಾವಾಗ? ಅವಳ ಅಪ್ಪನೂ ಅವಳ್ಗೇ ಸಪೋರ್ಟು. ಏನು ಬೇಕಾದ್ರೂ ಮಾಡ್ಕೊಳ್ಳಿ ಅಂತ ಗಂಡಂಗೆ ಮೆಸೇಜ್ ಹಾಕ್ದೆ.ತಲೆ ಕೆಟ್ಟು ಹೋಗ್ತಿದೆ ನಂದು” ಧಾತ್ರಿಗೆ ಏನು ಹೇಳಬೇಕೆಂದು ತೋಚಲಿಲ್ಲ.ಅಷ್ಟರಲ್ಲಿ ಹರಿಣಿಗೊಂದು ಕಾಲ್ ಬಂತು.” ಯಾವ ಟೀ ಶರ್ಟ್? ಬ್ಲ್ಯಾಕ್ ಕಲರ್ ಯೂ.ಎಸ್ ಪೋಲೋ ನಾ? ಮೊನ್ನೆ ಇಸ್ತ್ರಿಗೆ ಕೊಟ್ಟು ನಿನ್ನ ಕಪಾಟಿನಲ್ಲಿ ಇಟ್ಟಿದ್ದೇನೆ ನೋಡು.” ಕಾಲ್ ಕಟ್ ಮಾಡಿ ಪುನಃ ಧಾತ್ರಿ ಕಡೆಗೆ ತಿರುಗಿ, ” ಇವತ್ತು ಫೈನಲ್ ಇಯರ್ ಬಿ.ಇ. ಯವರೆಲ್ಲಾ ಸೇರಿ ಪಾರ್ಟಿ ಮಾಡ್ತಾ ಇದ್ದಾರಂತೆ. ಈ ಮಹಾರಾಯ ಈವಾಗ ಎದ್ದು ಶರ್ಟು ಕಾಣಿಸ್ತಿಲ್ಲ ಅಂತೆ! ಇವರಿಗೆಲ್ಲಾ ಕೈ ಕಾಲ ಹತ್ತಿರ ಕೆಲಸ ಮಾಡಿಕೊಟ್ಟು ಅಭ್ಯಾಸ ಆಗಿಹೋಗಿದೆ.ತಲೆ ಕೆಟ್ಟು ಹೋಗ್ತಿದೆ ನಂದು!” ಅಂದಳು. ಧಾತ್ರಿ ಹೇಗೋ ಕಷ್ಟ ಪಟ್ಟು ನಗು ತಡೆದುಕೊಂಡಳು.       ಅಷ್ಟರಲ್ಲಿ ಹರಿಣಿಯ ಫೋನಿಗೆ ಠಣ್ ಅಂತ ಒಂದು ಮೆಸೇಜ್ ಬಂತು. ಧಾತ್ರಿ ನೋಟ್ಸ್ ತಿದ್ದುತ್ತಿದ್ದರೂ ಹರಿಣಿಯ ಟೈಪಿಂಗ್ ಸ್ಪೀಡ್ ನೋಡಿ ಏನೋ ಸೀರಿಯಸ್ ವಿಷಯ ಇರಬೇಕೆಂದುಕೊಂಡಳು.ಐದು ನಿಮಿಷ ಮಾತುಕತೆಯಾದ ಮೇಲೆ ಪುನಃ ಹರಿಣಿ ಇವಳ ಕಡೆ ತಿರುಗಿ , ” ನಿನ್ನೆ ನಮ್ಮನೆಯೋರು ಆಫೀಸ್ ನಿಂದ ಬರ್ತಾ ಜಲೇಬಿ ತಗೊಂಡು ಬಂದಿದ್ರು. ಮಾವ ಹೈ ಶುಗರ್ ಪೇಷಂಟ್ ಆದ್ರೂ ಎರಡು ಜಲೇಬಿ ತಿಂದ್ರು!! ಅದಕ್ಕೆ ನಮ್ಮತ್ತೆ ಸಪೋರ್ಟ್ ಬೇರೆ. ಇದನ್ನೇ ನನ್ನ ಓರಗಿತ್ತಿಗೆ ಹೇಳಿದ್ದು ಈವಾಗ.ಇವ್ರಿಗೆ ಹೆಲ್ತ್ ಅಪ್ಸೆಟ್ ಆದ್ರೆ ನಾನೇ ನೋಡಿಕೊಳ್ಬೇಕು ತಾನೇ? ನಂಗಂತೂ ತಲೆ ಕೆಟ್ಟು ಹೋಗ್ತಿದೆ ಕಣೇ.”      ಈವಾಗ ಧಾತ್ರಿ ಜೋರಾಗಿ ನಕ್ಕಳು! ಆಶ್ಚರ್ಯದಿಂದ ನೋಡುತ್ತಿದ್ದ ಹರಿಣಿಗೆ, ” ನಿನ್ನೆ ನೀನು ನನಗೆ ಒಂದು ದೊಡ್ಡ ಭಾಷಣ ಮಾಡ್ದೆ, ನಾವು ಯಾರ ಬಗ್ಗೆಯೂ ತಲೆಕೆಡಿಸಿ ಕೊಳ್ಳಬಾರದು ಅಂತ.ಇವತ್ತು ನೀನು ಮಾಡ್ತಿರೋದು ಏನು?” ಎಂದು ಕೇಳಿದಳು. ಹರಿಣಿ  “ಇನ್ನೇನು ಮಾಡ್ಲಿ ನಾನು?” ಅನ್ನುವಷ್ಟರಲ್ಲಿ ಬೆಲ್ ಹೊಡೆಯಿತು. ಮುಂದಿನ ಕ್ಲಾಸಿಗೆ ಬೇಕಾದ ಪುಸ್ತಕ ತೆಗೆದುಕೊಂಡು ಹೊರಟ ಧಾತ್ರಿಗೆ ಹರಿಣಿ, ” ನೀನು ಇವತ್ತು ಮೊಬೈಲ್ ತರಲಿಲ್ವಾ?” ಎಂದು ಕೇಳಿದಳು. ” ತಂದಿದ್ದೇನೆ. ಆದ್ರೆ ನಿನ್ನ ಭಾಷಣದಿಂದ ಪ್ರಭಾವಿತಳಾಗಿ ಸೈಲೆಂಟ್ ಮೋಡ್ ನಲ್ಲಿಟ್ಟಿದ್ದೇನೆ.” ಎಂದು ನಗುತ್ತಾ ತರಗತಿಯ ಕಡೆಗೆ ಹೊರಟಳು. ” ಅಂತೂ ಒಬ್ಬರಾದ್ರೂ ನನ್ನ ಮಾತಿಗೆ ಬೆಲೆ ಕೊಟ್ರಲ್ಲಾ ” ಎಂದು ಗೊಣಗುತ್ತಾ ಹರಿಣಿಯೂ ಹಿಂಬಾಲಿಸಿದಳು. *******************************************

ಮನಸೆಂಬ ಮರ್ಕಟ Read Post »

You cannot copy content of this page

Scroll to Top