ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪರಿಸರ

“ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ.

ಪರಿಸರ ಸಂಗಾತಿ “ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ. ‘ಬರದೆಡೆಗೆ ಹಸಿರಿಡುವ’ ಎನ್ನುವ ಪರಿಕಲ್ಪನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಆಲೋಚನೆ ಮಾಡಿದಾಗ, ಬೇರೆ ಬೇರೆ ವಿಚಾರಗಳು ಹೊಳೆಯುತ್ತವೆ. ಬರ ಎಂದರೆ ಬೇಕಾದದ್ದು ಸಿಗದೇ ಇರುವುದು, ಕೊರತೆ ಕಾಣಿಸುವುದು ಎಂದರ್ಥ. ಮಳೆ ಬಾರದೆ, ಬೆಳೆ ಬೆಳೆಯದೆ, ಹಸಿರು ಕಾಣದೆ ಭುವಿಯಲ್ಲಿ ಜೀವಿಗಳು ಬದುಕಲು ಬೇಕಾದ ಎಲ್ಲದರ ಕೊರತೆ ಉಂಟಾಗುವುದೇ ಬರ. ಆ ಬರ ಬರುವಂತಹ ಭುವಿಯಲ್ಲಿ ಹಸಿರಿಟ್ಟರೆ,ಆ ಹಸಿರಿನಿಂದ ಜೀವಸಂಕುಲ ಉಸಿರಾಡುತ್ತಲೇ, ಭುವಿಯಲ್ಲಿ ಆರೋಗ್ಯಯುತವಾಗಿ ಕಾಲ ಕಳೆಯಬಹುದು ಎಂಬುದು ಒಂದು ಆಯಾಮ. ಇನ್ನೊಂದು ರೀತಿಯಲ್ಲಿ ಬರವನ್ನು ಪ್ರೀತಿಯ ಬರ ಎಂದು ಕೂಡ ತೆಗೆದುಕೊಳ್ಳಬಹುದು ಅಥವಾ ಸಂಸ್ಕಾರದ ಪರ ಎಂದು ಕೂಡ ಊಹಿಸಬಹುದು.ಮೊದಲನೆಯದು ಅಂದರೆ ಬರಡು ನೆಲದಲ್ಲಿ ಹಸಿರಿಡುವ, ಮರಗಳ ಗಿಡಗಳನ್ನು ನೆಡುವ, ಜೀವಸಂಕುಲವನ್ನು ಪೋಷಿಸುವ ಕೆಲಸವು ಅಗತ್ಯವಾಗಿಯೇ ಆಗಬೇಕಾಗಿದೆ.ಮನುಷ್ಯನಿಗೆ ಅಥವಾ ಜೀವಿಗಳಿಗೆ ಉಸಿರಾಡಲು ಬೇಕಾದ ಶುದ್ಧ ಗಾಳಿಯ ಬರ ಇವತ್ತು ಭುವಿಯಲ್ಲಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಹಸಿರನ್ನು ಬೆಳೆಸಿದರೆ ಮಳೆಯು ಚೆನ್ನಾಗಿ ಸುರಿದು, ಭುವಿಯು ಮತ್ತಷ್ಟು ಹಸಿರಾಗಿ, ಪ್ರಾಣಿಗಳು,ಮನುಷ್ಯರು ಮತ್ತು ಸಸ್ಯಗಳು ಚೆನ್ನಾಗಿ ಬದುಕುವಂತಹ ವಾತಾವರಣವನ್ನು ಕಲ್ಪಿಸಬಹುದು. ಹಾಗಾಗಿ ಪ್ರಸ್ತುತ ಮಲಿನಗೊಂಡ ಪರಿಸರದಲ್ಲಿ,ನಾವು ಪರಿಸರವನ್ನು ಸ್ವಚ್ಛ ಮಾಡಿ ಹಸಿರನ್ನು ಬೆಳೆಸಿದರೆ ಅದು ವಾಸಿಸಲು ಯೋಗ್ಯವಾದ ಪರಿಸರವಾಗುವುದಲ್ಲದೆ, ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸಿದರೆ, ಪ್ರಕೃತಿಯ ಸೌಂದರ್ಯ ಹೆಚ್ಚುತ್ತದೆ. ಮನಸು ಅಹ್ಲಾದಕರವಾಗಿರುತ್ತದೆ.ಸ್ವಚ್ಛ ಪರಿಸರದಿಂದ ಸತ್ವಯುತವಾದ ಬೆಳೆಗಳು ಬೆಳೆದರೆ,ಅದು ಮನುಷ್ಯನ ಆಹಾರವಾಗಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ .  ಶುದ್ಧ ಗಾಳಿಯ ಬರದ ಕಡೆಗೆ ಹಸಿರಿಡಿಸುವ ಕೆಲಸ ಮುಗಿದ ಮೇಲೆ, ಮನುಷ್ಯನ ಮನಸ್ಸಲ್ಲಿ ಹಸಿರಿಡುವ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ನಾವು ಕಂಡುಕೊಂಡಂತೆ ಮನುಷ್ಯನಲ್ಲಿ ಮಾನವೀಯತೆಗೆ ಬರ ಬಂದಿದೆ.”ಮಾನವೀಯತೆ ಇಲ್ಲದ ಮನುಷ್ಯ ಪಶುವಿಗೆ ಸಮಾನ”ನಮ್ಮ ಮನಸ್ಸು ಬೇರೆಯವರ ಕಷ್ಟಕ್ಕೆ ಬೇರೆಯವರ ದುಃಖಕ್ಕೆ ಮಿಡಿಯಬೇಕು.ಅವರ ಕಷ್ಟದಲ್ಲಿ ಸಮಭಾಗಿಗಳಾಗಿ ಎದುರಿಸುವ ಎದೆಗಾರಿಕೆ ನಮ್ಮಲ್ಲಿರಬೇಕು. ಮನೆಯವರೊಂದಿಗೆ ನೆರೆಕೆರೆಯವರೊಂದಿಗೆ ಹಾಗೂ ಇತರರೊಂದಿಗೆ ದ್ವೇಷ- ರೋಷವನ್ನು ಬೆಳೆಸದೆ, ಒಂದಾಗಿ ಬೆರೆತು, ಕೋಪ ತಾಪವನ್ನು ಮರೆತು, ಪ್ರೀತಿ ಪ್ರೇಮವು ಬಲಿತು,ಹಸಿರಿಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಲೇಬೇಕಾಗಿದೆ . ಇನ್ನೂ “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ಮಾತಿನಂತೆ ನಮ್ಮ ಮಕ್ಕಳನ್ನು ಬಹಳ ಪ್ರೀತಿಯಿಂದಲೇ ಕಾಣಬೇಕು.ಈಗ “ಮಕ್ಕಳಿಗೆ ಹೊಟ್ಟೆಯ ಹಸಿವೆ ಗಿಂತ ಪ್ರೀತಿಯ ಹಸಿವೆಯೇ ಜಾಸ್ತಿ” ಆದಂತೆ ಕಂಡುಬರುತ್ತದೆ. ಪ್ರೀತಿಗೆ ಬರ ಎಲ್ಲೆಲ್ಲಿದೆಯೋ ಗಮನಿಸಬೇಕಾದ ಅನಿವಾರ್ಯತೆ ಇದೆ. ಪ್ರೀತಿಗೆ ಬರ ಇದ್ದಲ್ಲೆಲ್ಲ ಪ್ರೀತಿಯನ್ನು ಕೊಡುವ  ಮೂಲಕ, ಮಕ್ಕಳನ್ನು ಸಮಾಜದ ಯೋಗ್ಯ ಪ್ರಜೆಗಳನ್ನಾಗಿಸುವ ಜವಾಬ್ದಾರಿ ನಮ್ಮದಲ್ಲವೇ? ಹಾಗಾಗಿ ಪ್ರೀತಿಯ ಬರವಿದ್ದಲ್ಲೆಲ್ಲ ಹಸಿರಿಡುವ ಕೆಲಸ ಬಹಳ ಪ್ರಮುಖವಾಗಿ ಆಗಬೇಕಾದ ಅನಿವಾರ್ಯತೆ ಇದೆ . ಮಕ್ಕಳಿಗೆ ತಂದೆ ತಾಯಿ ಹಾಗೂ ಮನೆಯವರು ತೋರಿಸುವ ಪ್ರೀತಿಗೆ ಬರ ಉಂಟಾದರೆ, ಮುಂದೆ ಖಂಡಿತವಾಗಿಯೂ ವಯೋವೃದ್ಧ ಹೆತ್ತವರು ಮತ್ತು ಪೋಷಕರಲ್ಲಿ ಮಕ್ಕಳು ತೋರಿಸುವ ಪ್ರೀತಿಗೆ ಬರ ಬಂದೇ ಬರುತ್ತದೆ. “ಮಾಡಿದ್ದುಣ್ಣೋ ಮಾರಾಯ” ಎಂಬಂತೆ ನಾವು ಮಕ್ಕಳಿಗೆ ಅಗತ್ಯವಾಗಿ ತೋರಬೇಕಾದ ಪ್ರೀತಿಯನ್ನು ನೀಡಿದರೆ ನಮ್ಮನ್ನು ಕೂಡ ನಮ್ಮ ಮಕ್ಕಳು ವೃದ್ಧಾಪ್ಯದಲ್ಲಿ ಪ್ರೀತಿಯಿಂದಲೇ ಕಾಣುತ್ತಾರೆ. ನಮಗೆ ಪ್ರೀತಿ ಬೇಕಾದರೆ ನಾವು ಕೂಡ ಅವರನ್ನು ಪ್ರೀತಿಸಬೇಕಾಗುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ಒತ್ತಡದ ಬದುಕಿನಲ್ಲಿ ಮಕ್ಕಳನ್ನು ಪ್ರೀತಿಸಲು ಸಮಯ ವೆಲ್ಲಿಯದು,? ಅವರ ಆಗು ಹೋಗುಗಳ ಬಗ್ಗೆ ಅರಿತು,ಆಸೆ ಆಕಾಂಕ್ಷೆಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ  ಕೊಡಬೇಕು ಎಂಬುದನ್ನು ಅರಿತು ತಿಳಿಸುವ ವರಾರು? ಎಲ್ಲಾ ಮನೆಗಳಲ್ಲೂ ಪ್ರೀತಿಗೆ ಬರ ಬಂದಿದೆ ಎಂದು ಹೇಳಿದರೆ ತಪ್ಪಾಗದು ಎಂಬುದು ನನ್ನ ಭಾವನೆ. ಅಂತಹ ಪ್ರೀತಿಯ ಬರದಿಂದ ಪರದಾಡುವ ಮಕ್ಕಳಿಗೆ ಹಸಿರಿಡುವಂತೆ ಪ್ರೀತಿಯನ್ನು ತೋರಿಸಬೇಕಾದ ಅನಿವಾರ್ಯತೆ ಇಂದಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ . ಇನ್ನು ಇಂದಿನ ಮಕ್ಕಳಲ್ಲಿ ಸಂಸ್ಕಾರದ ಬರ ಇದೆ. ಹೆಚ್ಚಿನ ಮಕ್ಕಳಲ್ಲಿ ಪ್ರೀತಿ, ಕರುಣೆ, ಮಮತೆ ,ಸಹಾಯ ಮಾಡುವ ಗುಣ,ಹಂಚಿ ತಿನ್ನುವ ಮನಸ್ಸು, ಹಿರಿಯರಿಗೆ ಗೌರವ ಕೊಡುವಂತಹ ಗುಣ ಇದಕ್ಕೆಲ್ಲಾ ಕೊರತೆ ಕಂಡು  ಬರುತ್ತಿದೆ.ಅಂದರೆ ಮಕ್ಕಳಿಗೆ ಸಂಸ್ಕಾರದ ಕೊರತೆ ಇದೆ .ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅವರು ತೋರಿಸುವ ಪ್ರೀತಿ ಕಾಳಜಿ ಬಗ್ಗೆ ಒಂದಿಷ್ಟನ್ನು ನಾವು ಹೇಳಿಕೊಡಲೇಬೇಕಾಗುತ್ತದೆ .ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ ಎಂದು ಹೇಳಿದರೆ ಸಾಕಾಗಲಾರದು ಅದನ್ನು ಬೆಳೆಸುವಂತಹ ಅಂದರೆ ಸಂಸ್ಕಾರದ ಬರ ಇರುವಲ್ಲಿ ಹಸಿರಿಡುವ ಕೆಲಸವನ್ನು ನಾವು ಮಾಡಬೇಕಾಗಿದೆ ‘ಮಕ್ಕಳು ಹೇಳಿದ್ದನ್ನು ಮಾಡುವುದಕ್ಕಿಂತ ಮಾಡಿದ್ದನ್ನು ನೋಡಿ ಕಲಿತುಕೊಳ್ಳುವ ಕುತೂಹಲದ ಮನಸ್ಸಿನವರು’ಹಾಗಾಗಿ ನಾವು ಮಕ್ಕಳ ಮುಂದೆ ಒಳ್ಳೆಯ ಸಂಸ್ಕಾರವಂತರಾಗಿ ಬದುಕಿದರೆ ಸಂಸ್ಕಾರದ ಬರವಿರುವ ಮಕ್ಕಳ ಮನಸ್ಸಿನಲ್ಲಿ ಹಸಿರಿಡುವಂತಹ ಕೆಲಸ ನಮ್ಮಿಂದ ಆಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬರದೆಡೆಗೆ ಹಸಿರಿಡುವ ಎಂದರೆ ಮನುಷ್ಯ ಜೀವನದಲ್ಲಿ ಯೋಗ್ಯ ವ್ಯಕ್ತಿಯಾಗಿ ಬಾಳಬೇಕಾದರೆ ಯಾವುದೆಲ್ಲ ಬೇಕೋ ಅದರಲ್ಲಿ ಕೊರತೆ ಉಂಟಾದರೆ, ಮನುಷ್ಯ ಯೋಗ್ಯತೆಯಿಂದ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಅಂತಹ ಬರವನ್ನು ತೊರೆಸಲು ಹಸಿರಿಡುವ ಅಂದರೆ ಕೊರತೆಯನ್ನು ನೀಗಿಸುವ ಕೆಲಸ ನಮ್ಮಿಂದಾಗಬೇಕು. ಹಾಗಿದ್ದರೆ ಮಾತ್ರ ಈ ಜಗದಲ್ಲಿ ಜನಜೀವನ ಸುಖಮಯವಾಗಲು ಸಾಧ್ಯವಿದೆ. ಸಂಸ್ಕಾರವಂತ ಮಕ್ಕಳು ಬೆಳೆದು ದೇಶದ ಪ್ರಗತಿಯಾಗಲು ಅನುವಾಗುತ್ತದೆ. ಡಾ.ಸುಮತಿ ಪಿ

“ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ. Read Post »

ಇತರೆ, ಪರಿಸರ

“ಗಣೇಶೋತ್ಸವ ಮತ್ತು ಜೀವ ಸಾಮರಸ್ಯ” ವಿಶೇಷ ಬರಹ ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ

ಸಾಮರಸ್ಯ ಸಂಗಾತಿ

ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ

“ಗಣೇಶೋತ್ಸವ

ಮತ್ತು ಜೀವ ಸಾಮರಸ್ಯ”
ಪರಿಸರಕ್ಕೆ ಹಾನಿ ಎಸಗುವಂತಹ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಉಂಟು ಮಾಡುವ ಪಟಾಕಿಗಳಿಗೆ ವಿದಾಯ ಹೇಳಬೇಕಾಗಿದೆ.
ಕಿವಿಗಡಚಿಕ್ಕುವ ಧ್ವನಿವರ್ಧಕಗಳ ಬಳಕೆಯನ್ನು ನಿಲ್ಲಿಸಬೇಕಾಗಿದೆ… ಆ ಮೂಲಕ ಮೂಕ ಪ್ರಾಣಿಗಳ, ಹಸುಗೂಸುಗಳ, ವೃದ್ಧರ, ಅಶಕ್ತರ, ರೋಗಿಗಳ ಕಾಳಜಿ ಮಾಡಬೇಕಾಗಿದೆ.

“ಗಣೇಶೋತ್ಸವ ಮತ್ತು ಜೀವ ಸಾಮರಸ್ಯ” ವಿಶೇಷ ಬರಹ ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರಿಂದ Read Post »

ಇತರೆ, ಪರಿಸರ

“ಮಾನವೀಯ ಹೊಣೆಗಾರಿಕೆ ಮತ್ತು ಪರಿಸರ”ಪರಿಸರ ಕಾಳಜಿಯ ಬರಹ ಮಮತಾ ಜಾನೆ ಅವರಿಂದ

“ಮಾನವೀಯ ಹೊಣೆಗಾರಿಕೆ ಮತ್ತು ಪರಿಸರ”ಪರಿಸರ ಕಾಳಜಿಯ ಬರಹ ಮಮತಾ ಜಾನೆ ಅವರಿಂದ

“ಮಾನವೀಯ ಹೊಣೆಗಾರಿಕೆ ಮತ್ತು ಪರಿಸರ”ಪರಿಸರ ಕಾಳಜಿಯ ಬರಹ ಮಮತಾ ಜಾನೆ ಅವರಿಂದ Read Post »

ಇತರೆ, ಪರಿಸರ

“ವಿಶ್ವ ಜೀವ ವೈವಿಧ್ಯ ದಿನ”—ವಿಶೇಷ ಲೇಖನ ಗಾಯತ್ರಿ ಸುಂಕದ ಅವರಿಂದ

“ವಿಶ್ವ ಜೀವ ವೈವಿಧ್ಯ ದಿನ”—ವಿಶೇಷ ಲೇಖನ ಗಾಯತ್ರಿ ಸುಂಕದ ಅವರಿಂದ
ಜೇನುಹುಳುಗಳು ಈ ಜಗತ್ತಿನಿಂದ ಮಾಯವಾದರೆ ದೊಡ್ಡ ಸಸ್ಯ ಕ್ಷಾಮಕ್ಕೆ ಎಡೆ ಮಾಡಿ ಕೊಡುತ್ತದೆ. ಅಷ್ಟರ ಮಟ್ಟಿಗೆ ಜೀವ ವೈವಿಧ್ಯಗಳು ನಿಸರ್ಗದ ಶ್ರೀಮಂತಿಕೆಗೆ ಕಾರಣೀಭೂತ ವಾಗಿವೆ.

“ವಿಶ್ವ ಜೀವ ವೈವಿಧ್ಯ ದಿನ”—ವಿಶೇಷ ಲೇಖನ ಗಾಯತ್ರಿ ಸುಂಕದ ಅವರಿಂದ Read Post »

ಇತರೆ, ಪರಿಸರ

“ಜೀವನ ಧರ್ಮ” ಜಯಲಕ್ಷ್ಮಿ ಕೆ. ಅವರ ಲೇಖನ

ಜೀವನ ಸಂಗಾತಿ

ಜಯಲಕ್ಷ್ಮಿ ಕೆ.

“ಜೀವನ ಧರ್ಮ”
ನಾವು ವಾಸಿಸುವ ವಾತಾವರಣದಲ್ಲಿ ಶಾಂತಿ ನೆಮ್ಮದಿ ನೆಲೆಯಾಗಬೇಕಾದರೆ ಐದು ಅಂಶಗಳನ್ನು ನಾವು ರೂಢಿಸಿಕೊಳ್ಳಲೇಬೇಕು. ಮೊದಲನೆಯದು, ಚಿಕ್ಕ -ಪುಟ್ಟ ವಿಚಾರಗಳಿಗೆ ವಿಚಲಿತಗೊಳ್ಳದೆ, ತತ್ಕ್ಷಣ ಪ್ರತಿಕ್ರಿಯೆ ತೋರದೆ ತಾನು ತಾನಾಗಿ ಉಳಿಯುತ್ತೇನೆ ಎನ್ನುವ ಸಂಯಮ. ಎರಡನೆಯದ್ದು,

“ಜೀವನ ಧರ್ಮ” ಜಯಲಕ್ಷ್ಮಿ ಕೆ. ಅವರ ಲೇಖನ Read Post »

ಇತರೆ, ಪರಿಸರ

‘ಪ್ರಕೃತಿಯ ಮುನಿಸು’ ಲೇಖನ-ಮಾಲಾ ಹೆಗಡೆ

‘ಪ್ರಕೃತಿಯ ಮುನಿಸು’ ಲೇಖನ-ಮಾಲಾ ಹೆಗಡೆ
ಅತಿಯಾದರೆ ಅಮೃತವೂ ವಿಷವಾಗುವುದಂತೆ ಈಗ ಆಗಿರುವುದು ಅದೇ. ನಮ್ಮಗಳ ಅತಿಯಾದ ಆಲೋಚನೆ, ಸ್ವಾರ್ಥ, ನಮಗೆ ಮುಳುವಾಗಿ ಪರಿಣಮಿಸಿರುವುದು.

‘ಪ್ರಕೃತಿಯ ಮುನಿಸು’ ಲೇಖನ-ಮಾಲಾ ಹೆಗಡೆ Read Post »

ಇತರೆ, ಪರಿಸರ

‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ.

‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ.

‘ಸುರಿಯುತ್ತಿರುವ ಮಳೆ; ಕೊಚ್ಚಿ ಹೋಗುತ್ತಿರುವ ಕನಸುಗಳು….!’ಲೇಖನ-ಐಗೂರು ಮೋಹನ್ ದಾಸ್, ಜಿ. Read Post »

ಇತರೆ, ಪರಿಸರ

“ವಿಶ್ವ ಪರಿಸರ ದಿನಾಚರಣೆ ” ವೀಣಾ ಹೇಮಂತ್ ಗೌಡ ಪಾಟೀಲ್

“ವಿಶ್ವ ಪರಿಸರ ದಿನಾಚರಣೆ ” ವೀಣಾ ಹೇಮಂತ್ ಗೌಡ ಪಾಟೀಲ್

ಮುಂದೆ ಪರಿಸ್ಥಿತಿ ಗಂಭೀರವಾಗದಿರಲು ಭಾರತ ದೇಶಕ್ಕೆ ಐದು ನೂರು ಕೋಟಿ ಮರಗಳ ಅವಶ್ಯಕತೆ ಇದೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಗಿಡ ಮರಗಳು ನಮ್ಮ ಬದುಕಿಗೆ ಜೀವದಾಯಿನಿಗಳು ಎಂಬುದನ್ನು ಅರಿತು ಪ್ರತಿ ಮನೆಯ ಮುಂದೆ ಒಂದು ಪುಟ್ಟ ತೋಟವನ್ನು ಮಾಡಿಕೊಂಡು ಗಿಡ ಮರಗಳನ್ನು ಬೆಳೆಸಿ ಪರಿಸರವನ್ನು ನಮ್ಮ ಕೈಲಾದಷ್ಟು ಉಳಿಸಿ ಬೆಳೆಸೋಣ

“ವಿಶ್ವ ಪರಿಸರ ದಿನಾಚರಣೆ ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಪರಿಸರ

ಪರಿಸರ ಮಾಲಿನ್ಯ ಮತ್ತು ಪ್ರತಿಬಂಧಕೋಪಾಯಗಳು. ಸಿದ್ಧಾರ್ಥ ಟಿ ಮಿತ್ರಾ

ಪರಿಸರ ಮಾಲಿನ್ಯ ಮತ್ತು ಪ್ರತಿಬಂಧಕೋಪಾಯಗಳು. ಸಿದ್ಧಾರ್ಥ ಟಿ ಮಿತ್ರಾ
ಪರಿಸರ ಮಾಲಿನ್ಯ ಮತ್ತು ಪ್ರತಿಬಂಧಕೋಪಾಯಗಳು. ಸಿದ್ಧಾರ್ಥ ಟಿ ಮಿತ್ರಾ

ಪರಿಸರ ಮಾಲಿನ್ಯ ಮತ್ತು ಪ್ರತಿಬಂಧಕೋಪಾಯಗಳು. ಸಿದ್ಧಾರ್ಥ ಟಿ ಮಿತ್ರಾ Read Post »

ಇತರೆ, ಪರಿಸರ

“ಬೇಸಿಗೆಯ ಸುತ್ತ ಮುತ್ತ”ಒಂದು ಬರಹ ಡಾ.ಕವಿತಾ

“ಬೇಸಿಗೆಯ ಸುತ್ತ ಮುತ್ತ”ಒಂದು ಬರಹ ಡಾ.ಕವಿತಾ

  ಹೌದು ಯಾಕೆ ಹೀಗೆ ವರ್ಷದಿಂದ ವರ್ಷ ತಾಪಮಾನ ಏರುತ್ತಿರುವುದು? ಹವಾಮಾನದಲ್ಲಿ ಯಾಕೆ ಇಷ್ಟು ವೈಪರೀತ್ಯ?? ಎಲ್ಲರಿಗೂ ತಿಳಿದ ವಿಷಯ ಜಾಗತಿಕ ತಾಪಮಾನ (global warming).

“ಬೇಸಿಗೆಯ ಸುತ್ತ ಮುತ್ತ”ಒಂದು ಬರಹ ಡಾ.ಕವಿತಾ Read Post »

You cannot copy content of this page

Scroll to Top