ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನ್ನಣೆಯ ಸಿಗದಾಗ ಕೊರಗದಿರು ಗೆಳತಿ
ಸೋತು ಹೋದೆನೆಂದು ಮರುಗದಿರು ಗೆಳತಿ

ಛಲ ಬಿಡದ ವಿಶ್ವಾಸ ನಿನ್ನ ನೆರಳಾಗಿರಲಿ
ಕಡೆಗಣಿಸಿದರೆಂಬ ಚಿಂತೆಯಲಿ ಸೊರಗದಿರು ಗೆಳತಿ

ಸನ್ಮಾನಿಸುವವರೆ ತಿರಸ್ಕರಿಸಿದರೆಂದು ಬೇಸರಿಸದಿರು
ನಿನ್ನ ಮನದ ಅಭಿರುಚಿಗಳ ತೊರೆಯದಿರು ಗೆಳತಿ

ಅನುದಿನವು ನಡೆಯುವುದು ಬಾಳ ಪರೀಕ್ಷೆ
ಸೋತವರೆ ಗೆಲ್ಲುವುದು ಎಂಬುದ ಮರೆಯದಿರು ಗೆಳತಿ

ಮಾನಸನ್ಮಾನಗಳ ಅಪೇಕ್ಷೆಯಲಿ ಬದುಕು ಗೋಜಲು
ಕಪಟಿಗಳ ಜೊತೆಯಲ್ಲಿ ಎಂದೂ ಬೆರೆಯದಿರು ಗೆಳತಿ

ಜಯವ ಹುಡುಕುವ ದಾರಿಯಲಿ ಸಾಗುತಿರು
ಮೋಸ ಅನ್ಯಾಯದ ಮುಳ್ಳ ತುಳಿಯದಿರು ಗೆಳತಿ

ನೀರ ಮೇಲಿನ ಗುಳ್ಳೆ ಸೋಲು ಎಂದಿದೆ ಶುಭಳ ಮನ
ಕ್ಷಣಿಕವಾದ ದುಃಖ ದುಗುಡಗಳಿಗೆ ಹೆದರದಿರು ಗೆಳತಿ


About The Author

2 thoughts on “ಶುಭಲಕ್ಷ್ಮಿ ಆರ್ ನಾಯಕ್ ಅವರ ಗಜಲ್”

  1. ಗೆಳತಿಗೆ ಗೆಲ್ಲಲು ಸಾಧ್ಯ ಎಂದು ಚೆನ್ನಾಗಿ ಮೂಡಿ ಬಂದಿದೆ.

Leave a Reply

You cannot copy content of this page

Scroll to Top