ಗಿರೀಶ ಕಾಗದ ಕಾರ್ಖಾನೆಯ ಉದ್ಯೋಗಿ, ಊಟಕ್ಕೆ ಬಟ್ಟೆಗೆ ಕೊರತೆ ಇಲ್ಲದೆ ಸುಂದರವಾದ ಎರಡು ಗಂಡು ಮಕ್ಕಳ ಸುಖೀ ಸಂಸಾರ ಅವನದಾಗಿತ್ತು. ಪತ್ನಿ ಕೂಡ ಮನೆ ಕೆಲಸ ಮುಗಿಸಿ ಮಕ್ಕಳನು ಶಾಲೆಗೆ ಕಳಿಸಿ ಮಿತವ್ಯದಿಂದ ಸಂತೋಷವಾಗಿ ಜೀವನ ಸಾಗಿತ್ತು. ಇತ್ತೀಚೆಗೆ  ತಾನು ನೌಕರಿ ಮಾಡುವ ಕಾರ್ಖಾನೆಯ ಸಮೀಪದ ಹಳ್ಳಿಯಲಿ ಪುಟ್ಟ ಜಾಗಕೊಂಡು    ಎರಡೇ ಆಳುಗಳೊಂದಿಗೆ ಗಂಡ ಹೆಂಡತಿಕೂಡ ಸೇರಿ  ಆಡಂಬರವಿಲ್ಲದ ಸಾಧಾರಣವಾದ ಹಂಚಿನ ಮನೆಯನ್ನು ಕಟ್ಟಿ  ಶೌಚಾಲಯ ಹಾಗೂ ಸ್ನಾನಕೋಣೆಯನ್ನು ಕಟ್ಟಿ ಊರಲ್ಲಿ ಇರುವ ಎರಡೆಕರೆ ಹೊಲದ ಮೇಲೂ ಸಾಲ ಪಡೆದು ಇನ್ನೇನು ಮನೆ ಒಂದು ಹಂತಕ್ಕೆ ಬಂತು ಎಂದು ಶ್ರಮಜೀವಿಗಳಾದ ಅವರು ನಿಟ್ಟುಸಿರು ಬಿಟ್ಟುಕಷ್ಟನೋ ಸುಖಾನೋ ಒಂದು ನೆರಳು ಅಂತ ಬೇಕಲ್ವ  ಮನೆ ಏನೋ
ಜೀವನವೆಂಬುದು ಕಷ್ಟಸುಖಗಳ ಸರಮಾಲೆ ಎಂಬ ಮಾತಿದೆ. ಕಷ್ಟ ಪಟ್ಟು ಬಟ್ಟೆ ಹೊಲೆದು ಇಟ್ಟ ಹಣವನ್ನು ಕೂಡ ಮನೆಕೆಲಸಕ್ಕೆ ಖರ್ಚು ಮಾಡಿಯಾಗಿತ್ತು. ಸಕಲಕಲಾವಲ್ಲಭನಾಗಿದ್ದ ಗಿರೀಶ ಕಾರ್ಖಾನೆಯ ರಜಾ ದಿನ ಬೇರೆಯವರ ಮನೆ ಕಟ್ಟುವ ಇಟ್ಟಿಗೆ ಕಾರ್ಮಿಕರ ಕೆಲಸ ಮಾಡುತಿದ್ದ. “ಇನ್ನೂ ನಮ್ಮ ಮಕ್ಕಳು ದೊಡ್ಡವ ಮೂರನೇ ತರಗತಿ ಚಿಕ್ಕವ ಒಂದನೇ ತರಗತಿ ಕಲಿಯುತ್ತಿದ್ದಾರೆ. ಅದಕೆ ನಾವು ವಿಚಾರ ಮಾಡಿ ಪುಟ್ಟ ಮನೆ ಕಟ್ಟಿದ್ದೇವೆ. ಬಾಡಿಗೆ ನಾಲ್ಕು ಸಾವಿರ ತಿಂಗಳಿಗೆ ಉಳಿಯುತ್ತೆ, ಈಗ ಸಾಲವಾದರೂ ಇಬ್ಬರೂ ಕಷ್ಟ ಪಟ್ಟು ತೀರಿಸುತ್ತೇವೆ ಎಂಬ ಗಿರೀಶನ ಪತ್ನಿಯ ಧೈರ್ಯ ಎಂತವರಲ್ಲೂ ಆತ್ಮಸ್ಥೈರ್ಯ ತುಂಬುವಂತಿತ್ತು. ಆದರೆ ಅವರ ದುರಾದೃಷ್ಟಕ್ಕೆ ಹೆಚ್ಚಿನ ವೇತನಕ್ಕಾಗಿ ಕಾಗದ ಕಾರ್ಖಾನೆಯ ಕಾರ್ಮಿಕರೆಲ್ಲ ಧರಣಿ ಮಾಡಿದ್ದರಿಂದ ಹನ್ನೆರಡು ವರ್ಷವಾದರೂ ಕೆಲಸ ಖಾಯಂ ಆಗದ ಗಿರೀಶ ಶಾಶ್ವತವಾಗಿ ಕೆಲಸ ಕಳೆದುಕೊಂಡ. ಧರಣಿಯಲ್ಲಿ ಭಾಗವಹಿಸಿದ್ದರಿಂದ ಅವನನ್ನು ಕೆಲಸದಿಂದ ತೆಗೆದುಹಾಕಲಾಯಿತು. ಇದರಿಂದ ತುಸು ಬೇಸರವಾದರೂ ಎದೆಗುಂದದ ದಂಪತಿಗಳಿಬ್ಬರೂ ಮನೆಯ ಸಾಲ ತೀರಿಸಲು  ಕೂಲಿ ಕೆಲಸಕ್ಕೆ ಹೋಗತೊಡಗಿದರು. ಮನೆಗೆ ಬಂದು ಸಮಯ ಸಿಕ್ಕಾಗ ಬಟ್ಟೆ ಹೊಲಿಯುವ ಕೆಲಸವನ್ನು ಪತ್ನಿ ಮಾಡಿದರೆ  ಗಿರೀಶ ಬೇರೆಯವರ ಗದ್ದೆ, ಮನೆ ಕಟ್ಟುವ ಕೆಲಸ ಮಾಡುತ್ತ ಅನ್ಯೋನ್ಯವಾಗಿ ಬಾಳುತಿದ್ದಾರೆ. ಹೀಗೆ ಬದುಕಿನಲ್ಲಿ ಆಕಸ್ಮಿಕವಾಗಿ ಎದುರಾಗುವ ತಲ್ಲಣಗಳು ಬದುಕನ್ನೇ ಘಾಸಿಗೊಳಿಸುವ ಹಂತಕ್ಕೆ ಬಂದರೂ ದೃತಿಗೆಡದೆ ತಾಳ್ಮೆಯಿಂದ ವಿಚಾರಿಸಿ ನಿರ್ಧಾರ ತೆಗೆದುಕೊಂಡಾಗ ಜೀವನ ಸುಗಮವಾಗುತ್ತದೆ. ಕೆಲವರು ಚಿಕ್ಕ ಪುಟ್ಟ ಸಮಸ್ಯೆಗೂ ಆಕಾಶವೇ ತಲೆಮೇಲೆ ಬಿದ್ದಂತೆ ಆಡುತ್ತಾರೆ. ಪ್ರತಿಯೊಂದಕ್ಕೂ ಒಂದು ಪರಿಹಾರವೆಂಬುದು ಇದ್ದೇ ಇರುತ್ತದೆ.

ಎ. ಪಿ. ಜೆ. ಅಬ್ದುಲ್ ಕಲಾಂ ಹೇಳುವಂತೆ”just a moment is not a life, every moment is turning point of iur life. think slowly then you can get  actual meaning of life “ಜೀವನದ ಪ್ರತಿಯೊಂದು ಕ್ಷಣವೂ ಕೂಡ ಜೀವನದ ತಿರುವಿಗೆ ಮಹತ್ವದ್ದಾಗಿದೆ. ತಾಳ್ಮೆಯಿಂದ ನಿಧಾನವಾಗಿ ಕಾರ್ಯತತ್ಪರರಾದಾಗ ನಮಗೆ ನಿಜವಾದ ಜೀವನದ ಅರ್ಥ ಕೃತಕೃತ್ಯತೆಯನು ತಂದುಕೊಡುತ್ತದೆ.

ಅಂತೆಯೆ ಹಿರಿಯರ ಅನುಭವದ ಮಾತೊಂದಿದೆ “ತಾಳಿದವನು ಬಾಳಿಯಾನು”ಎಂದು ತಾಳ್ಮೆಯ ಫಲ ಸಿಹಿಯಾಗಿರುತ್ತದೆ.

ಕಷ್ಷಗಳ ಕುಲುಮೆಯಲಿ ಬಾಗಿ ಮಾಗಿದಾಗ ಅನುಭವದೊಂದಿಗಿನ ಅನುಭೂತಿಯ ಅರಿವಾಗುತ್ತದೆ. ಎಲ್ಲ ಸಮಯದಲ್ಲೂ ತಾಳ್ಮೆಯ ಅವಶ್ಯಕತೆ ಬೇಡ. ನಮ್ಮ ಸ್ವಾಭಿಮಾನಕ್ಕೆ ಚ್ಯುತಿ ಬರದಂತೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವಾಗ  ಮಾಡದ ತಪ್ಪಿಗೆ ನಿರಪರಾಧಿಗೆ ಶಿಕ್ಷೆ ಆಗದಂತೆ ಪ್ರತಿಭಟಿಸಬೇಕಿದೆ. ಜಗತ್ತಿನಲ್ಲಿ ಎಷ್ಟೋ ಜನರಿಗೆ ಒಂದು ಹೊತ್ತು ಉಣ್ಣಲು ಅನ್ನ ಸಿಗುತ್ತಿಲ್ಲ  ಅಂದಾಗ ದೇವರು ನಮಗೆ ಜೀವನೋಪಾಯದ ಕೆಲಸ ಕಲ್ಪಿಸಿದ್ದಾನೆ. ನಾವು ಅವರಿಗಿಂತಕಷ್ಟದಲಿ ತುಸು ಮಿಗಿಲು ಅವರಷ್ಟು ಕಷ್ಟ ನಮಗಿಲ್ಲ ಭಗವಂತ ನೀಡಿದ ಜನ್ಮವನು ಸತ್ಯದ ನಡೆನುಡಿಯಿಂದ ಸಾರ್ಥಕಗೊಳಿಸಲು ಕಾಯಕವೇ ಕೈಲಾಸ ಎಂಬಂತೆ ಇದ್ದುದರಲ್ಲಿ ತೃಪ್ತಿ ಪಟ್ಟು ಭಗವಂತನಿಗೆ ವಿಧೇಯರಾಗಿ ಅವನ ಕೃಪೆಯಿಂದ ಇನ್ನೂ ಕಷ್ಟ ಪಟ್ಟು ದುಡಿದು ಬದುಕ ನಾವೆಯ ನಡೆಸುವ ಮತಿಯಿರಬೇಕು.

ಇದ್ದುದರಲಿ ಸಂತೋಸದಿಂದ ಹಂಚಿ ತಿನ್ನುವ, ಕುಟುಂಬದ ಕಾಳಜಿ ಇರಬೇಕೇ ಹೊರತು ಪ್ರತಿಷ್ಠೆಗಾಗಿ  ತೋರಿಕೆಯ ಪ್ರೀತಿ ಸಲ್ಲದು. ದೇವರು ನಮಗೆ ಎಲ್ಲಾ ಅಂಗಾಂಗಳನ್ನು ಸರಿಯಾಗಿ ಕೊಟ್ಟಿರುವಾಗ ದುಡಿದು ತಿನ್ನಲು ನಮಗೇಕೆ? ಭಯ, ಆಲಸ್ಯತನ ಅಲ್ಲವೇ.

ಬಾಳಬಂಡಿಯ ನಡೆಸಲು ಪ್ರೀತಿ ತಾಳ್ಮೆಯ ಅರಿಕೆ
ಫಲಿಸಲು ಮೊದಲಿರಲಿ ಬಾಂಧವ್ಯದ ಹರಕೆ
ಮೂರು ದಿನಗಳ ಬದುಕಿದು ಸಹಜ
ಮಾನವೀಯತೆಯಲಿ ಬದುಕ ಸವೆಯಿಸು ನೀ ಮನುಜ

ಎಂಬಂತೆ ಕಾಲಘಟ್ಟದ ಪರಿಮಿತಿರಲಿ ನಮ್ಮ ಹೊಣೆಯನರಿತು ಸೂಕ್ತ ಕಾಲದಲಿ ಸೂಕ್ತ ಅಡಿಯಿಡುವದು ಬದುಕ ಪಯಣಕೆ ಮೆರುಗು.

ದಿನಪತ್ರಿಕೆಗಳಲಿ ಓದಿದಂತೆ ಸಾಲ ಹೆಚ್ಚಾದರೆ ಪತ್ನಿ ಮಕ್ಕಳನ್ನು ಕೊಂದು ತಾನು ಸಾಯುವ ಹೇಡಿತನ ಭಂಡ ಬಾಳು ತರವೇ? ಇಲ್ಲ ಪತಿ ಪತ್ನಿಯರಿಬ್ಬರು ತಮ್ಮ ಹೊಣೆಯರಿತು ಹಿತಮಿತವಾದ ಜೀವನ ಮಾಡಿದರೆ ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ಅವರ ಬದುಕದು ನಂಧನವನವಾಗುತ್ತದೆ.

“ಬದುಕೊಂದು ಕರ್ಮವೆಂದಂಜಿ ಬಿಟ್ಟೋಡುವರು
ಬಿದಿಯ ಬಾಯಿಗೆ ಕವಳವಾಗದುಳಿಯುವನು
ಎದೆಯನುಕ್ಕಾಗಿಸುತ ಮತಿಗದೆರ ಪಿಡಿದು ನೀ
ನೆದುರುನಿಲೆ ಬಿದಿರನೋಲಿವ ಮಂಕುತಿಮ್ಮ”

ಎಂಬುವಂತೆ ಜೀವನ ಒಂದು ಕದನವೆಂದು ಅದಕ್ಕೆ ಹೆದರಿ ಬಿಟ್ಟು ಓಡಿಹೋಗುವವನು ವಿಧಿಯ ವಿನ್ಯಾಸದಿಂದ ಹೊಲಗುಳಿಯಲು ಸಾಧ್ಯವೇ? ಹಾಗೆ ಹೆದರಿ ಹೋದರೆ ವಿಧಿಯು ವಿಧಿಸಿದ ಕರ್ಭವ ಸವೆಸದೇಈ ಬದುಕಿನಿಂದ ಹೋಗಲು ಸಾಧ್ಯವೇ? ಹಾಗಾಗಿ ಮನದಲಿ ಧೈರ್ಯವನು ತುಂಬಿಕೊಂಡು ವಿವೇಕವನ್ನೆ ಆಯುಧವನ್ನಾಗಿಸಿಕೊಂಡು ಬಂದುದೆಲ್ಲವ ಎದುರಿಸುತ್ತೇನೆ ಮತ್ತು ಸಹಿಸುತ್ತೇನೆ. ಎಂದು ಗಟ್ಟಿಯಾಗಿ ನಿಂತರೆ ಭವಸಾಗರ ಈಜಲು ನಮ್ಮ ಪ್ರಯತ್ನಕ್ಕೆ ವಿಧಿ ಸಹಾಯ ಮಾಡುತ್ತದೆ.

̲———————

3 thoughts on “

Leave a Reply

Back To Top