
ಅಂಕಣ ಬರಹ
ವೃತ್ತಿ ವೃತ್ತಾಂತ
ಸುಜಾತಾ ರವೀಶ್
ವೃತ್ತಿ ಬದುಕಿನ ಹಿನ್ನೋಟ

ನೋಟ ೧
ನಿವೃತ್ತಿಗೆ ಇನ್ನು ಒಂದು ವರ್ಷವಷ್ಟೇ ಬಾಕಿ ಇರುವ ಈ ಸಮಯದಲ್ಲಿ ಅರವತ್ತರ ಅರಳು ಮರಳು ಕಾಡುವ ಮುನ್ನವೇ ನನ್ನ ವೃತ್ತಿ ಬದುಕಿನ ಪುಟಗಳನ್ನು ಒಮ್ಮೆ ತಿರುವಿ ಹಾಕಿ ನಿಮ್ಮ ಮುಂದೆ ಇಡುವ ಆಸೆ.
ಮೊದಲಿನಿಂದಲೂ ಓದಿ ಕೆಲಸಕ್ಕೆ ಸೇರಬೇಕೆಂಬುದು ನನ್ನ ಆಸೆ ಧ್ಯೇಯ ಗುರಿ ಎಲ್ಲವೂ. ಹಾಗಾಗಿಯೇ ಎಸ್ ಎಸ್ ಎಲ್ ಸಿ ಯ ನಂತರ ಕಾಮರ್ಸ್ ತೆಗೆದುಕೊಂಡಾಗ ಶಾರದಾವಿಲಾಸ್ ನ ಪ್ರಿನ್ಸಿಪಾಲ್ ಗೋಪಾಲ ರಾವ್ ಅವರು ಚೇಂಬರ್ಗೆ ಕರೆಸಿ ಇಷ್ಟು ಒಳ್ಳೇ ಅಂಕ ಇದೆ ವಿಜ್ಞಾನ ತೆಗೆದುಕೋ ಎಂದರೂ ಅವರ ಮಾತು ಕೇಳಿರಲಿಲ್ಲ. ಹಾಗೆಯೇ ಟೈಪಿಂಗ್ ಷಾರ್ಟ್ ಹ್ಯಾಂಡ್ ಕ್ಲಾಸುಗಳಿಗೂ ಸೇರಿದ್ದೆ.
ಆಗ ಎಸ್ ಎಸ್ ಎಲ್ ಸಿ ಯಲ್ಲಿ ಫಸ್ಟ್ ಕ್ಲಾಸ್ ಬಂದವರು ಬರೀ ಅಪ್ಲೈ ಮಾಡಿದರೆ ಸಾಕು ಆಗಿನ ಪೋಸ್ಟ್ ಅಂಡ್ ಟೆಲಿಗ್ರಾಫ್ ಇಲಾಖೆಯಲ್ಲಿ ನೇಮಕಾತಿ ಪತ್ರ ನೇರವಾಗಿ ಬರುತ್ತಿತ್ತು ಹಾಗಾಗಿ ಎಸ್ ಎಸ್ ಎಲ್ ಸಿ ಯಲ್ಲಿ ಒಳ್ಳೆಯ ಪರ್ಸೆಂಟೇಜ್ ಇದ್ದಿದ್ದರಿಂದ ಅದಂತೂ ಖಂಡಿತ ಸಿಕ್ಕೆ ಸಿಗುತ್ತದೆ ಎಂಬ ಆಸೆ ಇತ್ತು. ಆದರೆ ನನ್ನ ಹಣೆಬರಹದಲ್ಲಿ ಯಾವುದೊಂದು ಸುಲಭವಾಗಿ ಸಿಗುವುದಿಲ್ಲ. ಬಹಳಷ್ಟು ಹಂಬಲಿಸಿದ ನಂತರವೇ ಅದು ದಕ್ಕುವುದು. ನನಗೆ 18 ವರ್ಷ ಆಗುವ ವೇಳೆಗೆ ಆ ಇಲಾಖೆಯ ನೇಮಕಾತಿಗಳು ಸ್ಥಗಿತವಾಗಿ ನನಗೆ ಅಪ್ಲೈ ಮಾಡುವ ಅವಕಾಶವೇ ಸಿಗಲಿಲ್ಲ.
ಮುಂದೆ ಪ್ರಾರಂಭವಾದದ್ದೇ ಉದ್ಯೋಗದ ಬೇಟೆ. ಬೇರೆ ಯಾವುದೇ ಬ್ಯಾಂಕ್ ಗಳ ಅಥವಾ ಸರಕಾರಿ ಕಚೇರಿಗಳ ಇಲಾಖೆಗಳ ಯಾವುದೊಂದು ನೇಮಕಾತಿ ಪ್ರಕ್ರಿಯೆಗಳು ಆರಂಭವಾಗಲೇ ಇಲ್ಲ. ಮೊಟ್ಟಮೊದಲು ನಾನು ನೋಡಿದ ನೇಮಕಾತಿ ಆಹ್ವಾನ ಪ್ರಕ್ರಿಯೆ ಜೀವವಿಮಾ ನಿಗಮದ್ದು. ನನ್ನ ಆತ್ಮೀಯ ಗೆಳತಿ ಶಶಿ ಅವರ ಸೋದರ ಪೇಪರ್ ಕಟಿಂಗ್ ತೆಗೆದುಕೊಂಡು ಬಂದಿದ್ದು ಅದರ ಆಧಾರದ ಮೇಲೆ ಅವರದೇ ಪರಿಚಯದ ಜೀವ ವಿಮಾ ನಿಗಮದ ಉದ್ಯೋಗಿ ನಮಗೆ ಅರ್ಜಿ ಫಾರಂಗಳನ್ನು ತಂದುಕೊಟ್ಟರು. ಆಗಿನ್ನೂ ನಾವು ಪದವಿಯ ಕೊನೆಯ ವರ್ಷದಲ್ಲಿ ಇದ್ದೆವು. ಪದವಿ ಮುಗಿದ ನಂತರ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸುವ ಯೋಚನೆ ಇತ್ತು ಆದರೆ ಈ ಜೀವ ವಿಮಾ ನಿಗಮದ ಅರ್ಜಿಯಲ್ಲಿ ಒಂದು ಕಾಲ ಉದ್ಯೋಗ ವಿನಿಮಯ ಕೇಂದ್ರದ ದಾಖಲಾತಿ ನಂಬರ್ ಬರೆಯಬೇಕಿತ್ತು . ಹಾಗಾಗಿ ಆಗ ಪಿಯುಸಿ ಅರ್ಹತೆ ಜೊತೆಗೆ ಶಾರ್ಟ್ ಅಂಡ್ ಟೈಪಿಂಗ್ ಗಳ ಅರ್ಹತೆಗಳನ್ನು ಕೊಟ್ಟು ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಮ್ಮ ಹೆಸರು ನೋಂದಾಯಿಸಿದೆವು. ಹಾಗೆ ಈ ಉದ್ದೇಶಕ್ಕೆ ನೋಂದಾಯಿಸಿದ್ದು ಇಲ್ಲಿ ಕೆಲಸ ಸಿಕ್ಕ ನಂತರ ಸುಮಾರು ಕೆಲಸಗಳಿಗೆ ಇಲ್ಲಿಂದ ಸೂಚನೆ ಬಂದಿತ್ತು. DFRL ಕಾಫೀ ಬೋರ್ಡ್ ಎರಡು ನೆನಪಿದೆ ಮಿಕ್ಕದ್ದು ನೆನಪಿಲ್ಲ. ಆದರೆ ಆಗ ತುಂಬಾ ಜನ ಡಿ ಎಫ್ ಆರ್ ಎಲ್ ಸೇರಬೇಕಿತ್ತು. ಕೇಂದ್ರ ಸರ್ಕಾರಿ ನೌಕರಿ ಹಾಗೂ ನಿವೃತ್ತಿ ವೇತನವು ಇತ್ತು ಎಂದು ಆಕ್ಷೇಪಿಸಿದ್ದು ನೆನಪಿದೆ . ಆಗ ಜೀವ ವಿಮಾ ನಿಗಮದಲ್ಲಿ ನಿವೃತ್ತಿ ವೇತನ ಇರಲಿಲ್ಲ.
ಆದರೆ ನಾನು ಹೋಗಲಾಗಲಿಲ್ಲ.
ಸರಿ ಇನ್ನು ಅರ್ಜಿ ಗುಜರಾಯಿಸಿದ ಕಥೆ ಕೇಳಿ. ಹೀಗೆ ಉದ್ಯೋಗ ವಿನಿಮಯ ಕಚೇರಿಯ ನೊಂದಣಿ ಸಂಖ್ಯೆ ನಮೂದಿಸಿ ಉಳಿದ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿಯಲ್ಲಿ ನನ್ನ ಹವ್ಯಾಸ ಕನ್ನಡ ಸಾಹಿತ್ಯ ಎಂದು ಬರೆದು ಅರ್ಜಿ ಕಳಿಸಿಯಾಗಿತ್ತು. ಪದವಿ ಪೂರೈಸದಿದ್ದರೂ ಪಿಯುಸಿಯಲ್ಲಿ ಒಳ್ಳೆಯ ಅಂಕ ಇದ್ದುದರಿಂದ ಲಿಖಿತ ಪರೀಕ್ಷೆಗೆ ಆಹ್ವಾನ ಬಂತು.

ಈಗ ನಮಗೆ ಜೀವವಿಮಾ ನಿಗಮದ ಕಾರ್ಮಿಕ ಸಂಘಟನೆಗಳ ಪರಿಚಯ ಆಯಿತು. ಆಗ ಪ್ರಬಲವಾಗಿದ್ದ ಎರಡು ಕಾರ್ಮಿಕ ಸಂಘಟನೆಗಳು ಮಾರ್ಕ್ ವಾದದ ಎಡಪಂಥದ ಕಮ್ಯುನಿಸ್ಟ್ ಪಕ್ಷ ಪೋಷಿತ ಸಂಘಟನೆಗಳು ಒಂದು ಎ ಐ ಇ ಎ ಮತ್ತೊಂದು ಫೆಡರೇಷನ್. ಮೊದಲೇ ಹೇಳಿದಂತೆ ನನ್ನ ಗೆಳತಿಯ ಅಣ್ಣನ ಸ್ನೇಹಿತರಾದ ಕುಮಾರಸ್ವಾಮಿ ಎನ್ನುವವರು ನಮಗೆ ಅರ್ಜಿ ತಂದು ಕೊಟ್ಟದ್ದು. ಹಾಗಾಗಿಯೇ ನಮಗೆ ಲಿಖಿತ ಪರೀಕ್ಷೆಯ ಆಹ್ವಾನ ಬಂದಾಗ ಮತ್ತೆ ಅವರೇ ನಮ್ಮನ್ನು ಸಂಪರ್ಕಿಸಿದರು. ಅಲ್ಲದೆ ಇದ್ದ ಆಗ ಮೈಸೂರು ಶಾಖೆ ಎರಡರಲ್ಲಿದ್ದ ಪುರುಷೋತ್ತಮ್ ಅವರು ಸತತವಾಗಿ ನಮ್ಮ ಸಂಪರ್ಕದಲ್ಲಿದ್ದರು. ಫೆಡರೇಶನ್ ನ ಅಧ್ಯಕ್ಷರಾಗಿದ್ದ ನಾಗರಾಜ ಗುಪ್ತ ಸಹ ನಮಗೆ ಅದೇ ಏರಿಯಾದಲ್ಲಿದ್ದು ಪರಿಚಿತರು ಹಾಗಾಗಿ ನಮಗೆ ಎಲ್ಲಾ ವಿಷಯ ಮಾಹಿತಿಗಳನ್ನು ಕೊಡುತ್ತಿದ್ದವರು ಅವರೇ.
ಲಿಖಿತ ಪರೀಕ್ಷೆಗೆ ಬ್ಯಾಂಕ್ ಎಕ್ಸಾಮ್ ಅಥವಾ ಇನ್ನಿತರ ಎಕ್ಸಾಮ್ಗಳಂತೆ objective type ಇರದೆ ಮಾಮೂಲಿ ಕಾಲೇಜಿನ ಪರೀಕ್ಷೆಗಳಂತೆ 3 ಗಂಟೆಗಳ ಕಾಲ ಪರೀಕ್ಷೆ . ಬೆಳಿಗ್ಗೆ ಅಂಕಗಣಿತದ ಪರೀಕ್ಷೆಯಾದರೆ ಮಧ್ಯಾಹ್ನ ಜನರಲ್ ಇಂಗ್ಲಿಷ್ ಪರೀಕ್ಷೆ. ಹಾಗಾಗಿ ತಯಾರಿ ಅವಶ್ಯಕತೆ ಇದ್ದೇ ಇತ್ತು. ಈ ರೀತಿಯ ತಯಾರಿಗಳನ್ನು ಕಾರ್ಮಿಕ ಸಂಘಟನೆಗಳು ಏರ್ಪಡಿಸುತ್ತಿದ್ದವು. ಹೊರಗಿನ ಗಣಿತ ಪ್ರಾಧ್ಯಾಪಕರು ಇಂಗ್ಲಿಷ್ ಪ್ರಾಧ್ಯಾಪಕರನ್ನು ಕರೆಸಿ ತರಬೇತಿ ನೀಡುತ್ತಿದ್ದರು.
ಫೆಡರೇಶನ್ ವತಿಯಿಂದ ಸದ್ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಈ ರೀತಿಯ ತರಬೇತಿಗಳು ನಡೆಯುತ್ತಿದ್ದು ನಾನು ಮತ್ತು ನನ್ನ ಗೆಳತಿ ಕಾಲೇಜಿನ ನಂತರ ಅಲ್ಲಿಗೆ ಹೋಗಿ ಬರುತ್ತಿದ್ದೆವು. ಕ್ಲಾಸುಗಳು ೬ ಗಂಟೆಗೆ ಆರಂಭ. ಆದರೆ ಸಹಜವಾಗಿ ಸೋಂಬೇರಿಗಳಾಗಿದ್ದ ನಾವು ಎಲ್ಲಾ ಕ್ಲಾಸುಗಳನ್ನು ಅಟೆಂಡ್ ಮಾಡಲೇ ಇಲ್ಲ ಮನೆಯಲ್ಲೂ ಅಷ್ಟೇ. ತುಂಬಾ ಸೀರಿಯಸ್ ಆಗಿ ತಯಾರಿಯನ್ನು ನಡೆಸಲಿಲ್ಲ. ಆಮೇಲೆ ಮೊದಲ ಲಿಸ್ಟ್ ನಲ್ಲಿ ಸಿಗದಿದ್ದಾಗ ನಮ್ಮ ಈ ಬೇಜವಾಬ್ದಾರಿಗೆ ತುಂಬಾ ಬೇಸರ ಪಟ್ಟಿದ್ದಂತೂ ಹೌದು. ಇನ್ನು ಹೆಚ್ಚಿನ ತಯಾರಿ ನಡೆಸಿದಿದ್ದರೆ ಆಳವಾಗಿ ಅಭ್ಯಾಸ ಮಾಡಿದಿದ್ದರೆ ಲಿಖಿತ ಪರೀಕ್ಷೆಯಲ್ಲಿ ಮತ್ತಷ್ಟು ಹೆಚ್ಚಿನ ಅಂಕ ತೆಗೆಯಬಹುದಿತ್ತೇನೋ. ಆದರೆ ಸೀಮಿತ ತಯಾರಿಯಲ್ಲಿ ಲಿಖಿತ ಪರೀಕ್ಷೆಗೆ ಹೊರಟಿದ್ದು.
ಆದರೆ ಇಂಗ್ಲೀಷ್ ಗ್ರಾಮರ್ ಹಾಗೂ ಬೇಸಿಕ್ ಮಟ್ಟದ ಅಂಕಗಣಿತದ ಕ್ಲಾಸ್ ಗಳು ತುಂಬಾ ಚೆನ್ನಾಗಿಯೇ ಇದ್ದವು. ಮಾಡಲ್ ಪ್ರಶ್ನೆಪತ್ರಿಕೆಗಳನ್ನು ಕೊಟ್ಟು ಮಾಡಿಸುತ್ತಿದ್ದರು. ಆದರೆ ಅದರ ಸಂಪೂರ್ಣ ಉಪಯೋಗ ಮಾತ್ರ ನಾವು ತೆಗೆದುಕೊಳ್ಳಲಿಲ್ಲ.
ಪ್ರಬಂಧ ಬರೆಯುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ ಇದುದರಿಂದ ಹಾಗೂ ಅಂಕಗಣಿತ ಎಂದೆಂದೂ ನನ್ನ ಮೆಚ್ಚಿನ ವಿಷಯವಾದ್ದರಿಂದ ಒಂದು ರೀತಿಯ ಉಡಾಫೆಯೂ ಇತ್ತೇನೋ ಎಂದು ಈಗ ಅನ್ನಿಸುತ್ತದೆ.
ಮುಂದಿನ ಭಾಗದಲ್ಲಿ ” ಲಿಖಿತ ಪರೀಕ್ಷೆ”
ಸುಜಾತಾ ರವೀಶ್

ಚೆನ್ನಾಗಿದೆ ಅಂಕಣ ಬರೆಹ ಮೇಡಮ್…….
……ಶುಭಲಕ್ಷ್ಮಿ ನಾಯಕ್
ತಮ್ಮ ಸಹೃದಯಿ ಓದು ಹಾಗೂ ಸವಿ ಸ್ಪಂದನೆಗಾಗಿ ತುಂಬು ಹೃದಯದ ಧನ್ಯವಾದಗಳು ಮೇಡಂ
ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ನೆನಪಿನಂಗಳ
ಧನ್ಯವಾದಗಳು ಶೋಭಾ
ಸುಜಾತಾ ರವೀಶ್
ವೃತ್ತಿ ಜೀವನದ ಆರಂಭಿಕ ಹಂತದ ಗೊಂದಲದ ಮನಸ್ಥಿತಿ ಜೊತೆಗೆ ಸಹಾಯ ಹಸ್ತ ನೀಡಿರುವವರನ್ನೂ ನೆನೆದಿದ್ದೀರಿ.
ನನ್ನ ಆ ದಿನಗಳು ಕಣ್ಣ ಮುಂದೆ ಸುಳಿದು
ಹೋದವು.ಚೆಂದದ ಬರಹ.
ಅತ್ಯಂತ ಸೂಕ್ತ ಹಾಗೂ ಸುಂದರ ಸಾಂದರ್ಭಿಕ ಚಿತ್ರಗಳೊಂದಿಗೆ ನನ್ನ ಅಂಕಣ ಬರಹವನ್ನು ಪ್ರಕಟಿಸಿದ ಸಂಗಾತಿ ಸಂಪಾದಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಸುಜಾತಾ ರವೀಶ್
ಆಪ್ತವಾಗಿ ಕಟ್ಟಿಕೊಡುವ ಅನುಭವಕಥನ ಲವಲವಿಕೆಯಿಂದ ಕೂಡಿದೆ.ಜೊತೆಗೆ, ನೇರ ಅನುಭವಜನ್ಯವಾದ ಘಟನೆಗಳು ಯಾವುದೇ ಆಡಂಬರದ ಭಾಷೆ, ಭಾವ ಇರದೆ ನಿರಾಡಂಬರ ಮತ್ತು ನಿರಲಂಕಾರದ ಮೂಲಕ ಮನಸ್ಸಿಗೆ ಹಾಯಾದ ಪಯಣದ ಸುಖ ನೀಡುತ್ತದೆ. ಸರಳವಾಗಿ ಬರೆಯುವುದು ವಾಸ್ತವದಲ್ಲಿ ಸರಳ ಅಲ್ಲ.ಆದರೆ ಸರಳವಾಗಿ, ಎದುರು ಬದುರು ಸಂಭಾಷಣೆ ನಡೆಸುವ ರೀತಿಯಲ್ಲಿ ಬರೆಹ ತುಂಬಿಕೊಂಡ ಕ್ರಮ ಮತ್ತು ಕಲೆ ಬಹಳ ಸ್ವಾಗತಾರ್ಹ. ಈ ತರಹದ ಸ್ವೋಪಜ್ಞತೆ ಸ್ವಯಂ ಸ್ವಭಾವಸಿದ್ಧ ಬರೆಹಗಳು ನಿಮ್ಮೊಳಗಿನ. ಲೇಖಕಿಯನ್ನು ವಿಶ್ವಾಸಾರ್ಹ ನಂಬಿಕೆಯನ್ನು ಕಾಪಿಡಲಿ. ಶುಭವಾಗಲಿ ಶ್ರೀಮತಿ ಸುಜಾತ ರವೀಶ್ ಅವರಿಗೆ. ನೆನಪುಗಳ ಹಾಯಿದೋಣಿಯ ಯಾನದಲ್ಲಿ ನಮ್ಮನ್ನೂ ಒಳಗೊಂಡು ಸಹಚಾರರಾಗಿಸಿದ್ದೀರಿ.ಈ ಜೀವತಂತು ಬಂಧ ಸ್ಪಂದಗಳ ಆಪ್ಯಾಯವಹೀಗೇ ಸಾಗಲಿ.
ಕಣ್ಣ ಮುಂದೆಯೇ ನಡೆಯುವಂತೆ ಅನುಭೂತಿ ಮೂಡಿಸಿದ ಚಿತ್ರಣ ಸುಜಾತಾ ಅವರೇ….
ಹೃತ್ಪೂರ್ವಕ ಅಭಿನಂದನೆಗಳು.
ಧನ್ಯವಾದಗಳು ನಿಮ್ಮ ಸವಿ ನ್ಪಂದನೆಗೆ ನನ್ನ ಅನಂತ ನಮನಗಳು
ನಿಮ್ಮ ಸಹೃದಯೀ ಪ್ರೋತ್ಸಾಹದ ನುಡಿಗಳು ಈ ಅಂಕಣ ಬರೆಯಬಹುದೇ ಎಂಬ ಬಗ್ಗೆ ನನಗಿದ್ದ ಹಿಂಜರಿಕೆಯನ್ನು ದೂರ ಮಾಡಿದವು. ಅನಂತ ಧನ್ಯವಾದಗಳು. ಮುಂದಿನ ಸಂಚಿಕೆಗಳಿಗೂ ನಿಮ್ಮ ಪ್ರೋತ್ಸಾಹ ಹೀಗೇ ಮುಂದುವರಿಯಲಿ.
ಸುಜಾತಾ ರವೀಶ್
ಚೆಂದದ ಅಂಕಣ ಬರಹ ಸುಜಾತಾಜೀ
ದೀಪಿಕಾ ಚಾಟೆ
ಬೆಳಗಾವಿ
ಧನ್ಯವಾದಗಳು ದೀಪಿಕಾ ಜೀ
ಸುಜಾತಾ ರವೀಶ್
ನೀವು ನಡೆದು ಬಂದ ದಾರಿಯನ್ನು ಚೆನ್ನಾಗಿ ಬರಯುತ್ತಿದ್ದೀರ
ಪದ್ಮಾ ನಾಗರಾಜ್ ಬೆಂಗಳೂರು.
ನೀವು ನಡೆದು ಬಂದ ದಾರಿಯನ್ನು ಚೆನ್ನಾಗಿ ಬರೆದಿದ್ದೀರ
ತುಂಬಾ ತುಂಬಾ ಧನ್ಯವಾದಗಳು
ಸುಜಾತಾ ರವೀಶ್
ಚಂದದ ಬರಹ ಮೇಡಂ. ಮುಂದಿನ ಭಾಗಕ್ಕೆ ಕಾಯುತಿರುವೆ.
— ಇಂದುಮತಿ ಶ್ರೀನಿವಾಸ, ಮೈಸೂರು
ಧನ್ಯವಾದಗಳು ಇಂದು
Super ಸುಜಾತಾ ಹಳೆ ಕಸ್ಟ ಕೆಲಸ etcdhanyavaad
ಧನ್ಯವಾದಗಳು
ಸುಜಾತಾ ರವೀಶಗ
ಬಹಳ ಚೆನ್ನಾಗಿದೆ ನಿಮ್ಮ ಬರಹ ಅಕ್ಕ, ನಾನಿನ್ನೂ ಅಂಡಮಾನ್ ನಲ್ಲಿ ಇರುವೆ.
ಧನ್ಯವಾದಗಳು ವಿನಿ
ಸುಜಾತಾ ರವೀಶ್
ಹಳೇ ನೆನಪುಗಳ ಬರಹ ಸಹಜವಾಗಿದೆ…….ಇದರಲ್ಲಿ ನಿಮ್ಮ ಬರಹದ ತುಡಿತ ಹೇಳಿಕೊಳ್ಳುವ ಹಂಬಲ ಅನನ್ಯವಾಗಿದೆ. ಹೀಗೆ ಮುಂದುವರಿಸಿ.
ಧನ್ಯವಾದಗಳು
ಸುಜಾತಾ ರವೀಶ್
ವೃತ್ತಿ ವೃತ್ತಾಂತವನ್ನು ಎಳೆ ಎಳೆಯಾಗಿ ತೆರೆದಿಟ್ಟಿದ್ದೀರಿ.ತುಂಬ ಚಂದದ ನಿರೂಪಣೆ.