ಕಾಡಜ್ಜಿ ಮಂಜುನಾಥ ಅವರ ಕವಿತೆ-ಅಧಿಕಾರ

ನೊಂದ
ಜನರ ನೋವುಗಳಿಗೆ
ಸ್ಪಂದಿಸುವ
ಹೃದಯವಾಗಬೇಕು;

ಕಷ್ಟದ ಸಮಯಕ್ಕೆ
ಸಹಾಯ ಹಸ್ತವ ಚಾಚುವ
ಕರವಾಗಬೇಕು;

ಹಸಿವಿನಿಂದ ನರಳುವ
ಒಡಲುಗಳಿಗೆ
ಅನ್ನ ನೀಡುವ
ಕಾಮಧೇನುವಾಗಬೇಕು;

ರೋಗದಿಂದ ಬಳಲುವ
 ಕಾಯಗಳಿಗ
ಅನ್ನ ಔಷಧಿ ನೀಡಿ
ಸಂತೈಸುವ
ಶಕ್ತಿಕೇಂದ್ರವಾಗಬೇಕು;

ಬಡತನದಿ ಬಸವಳಿದ
ಸೂರಿಲ್ಲದ
ನಿರ್ಗತಿಕರಿಗೆ
ಆಶ್ರಯ ನೀಡುವ
ತಾಣವಾಗಬೇಕು;

ಮುಗ್ದ ಜನರಿಗೆ
ಯೋಜನೆಗಳ
ಹೆಸರಲಿ
ಕರಭಾರವ ಹೊರಿಸಿ
ಹಿಂಸಿಸದ
ಮನವಾಗಬೇಕು;

ಪ್ರಜೆಗಳ ಅಶೋತ್ತರಗಳಿಗೆ
ಬರೀ ಕಿವಿಯಾಗದೇ
 ಸಂಕಟಗಳ
ಪರಿಹರಿಸೋ
ಹೃನ್ಮನವಾಗಬೇಕು;

———————————————————————————————

One thought on “ಕಾಡಜ್ಜಿ ಮಂಜುನಾಥ ಅವರ ಕವಿತೆ-ಅಧಿಕಾರ

Leave a Reply

Back To Top