ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನದಿಗೆ-ಸಾಗರದಲ್ಲಿ ಕಳೆದುಹೋಗುವ ಭೀತಿ ! 

ಗಿರಿ-ಶಿಖರಗಳಿಂದಿಳಿದು, ಬೆಟ್ಟ-ಗುಡ್ಡಗಳನ್ನು ಬಳಸಿ

ಬಳಕುತ್ತ ಊರು-ಕೇರಿಗಳನ್ನು ದಾಟಿ, 

ಸಾಗರದೆದುರು ನಿಂತಾಗ ಕಂಡಿದ್ದು :
ಪಾರವಿಲ್ಲದ ಅಪಾರ ಜಲರಾಶಿ !
ಕಡಲೊಡಲ ಸೇರಿದರೆ ನದಿಗೆ ಶಾಶ್ವತವಾಗಿ ಕಳೆದುಹೋಗುವ ಭೀತಿ!

ಆದರೆ ಆಯ್ಕೆಗಳಿಲ್ಲ.

ನದಿಗಳು ಹಿಂದಕ್ಕೆ ಹರಿಯುವುದಿಲ್ಲ !
 ಬದುಕಿನಲ್ಲಿ ಯಾರೂ ಹಿಂದೆ ಹೋಗಲಾರರು !

ನದಿಗೆ ಮುನ್ನಡೆಯಲೇಬೇಕು
ಸಾಗರವನ್ನು ಸೇರಲೇಬೇಕು.

ನದಿ ಸಾಗರವನ್ನು ಸೇರಿದಾಗ-ಭಯ ಮಾಯ ! 

About The Author

1 thought on “́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.”

Leave a Reply

You cannot copy content of this page

Scroll to Top