́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.

ನದಿಗೆ-ಸಾಗರದಲ್ಲಿ ಕಳೆದುಹೋಗುವ ಭೀತಿ ! 

ಗಿರಿ-ಶಿಖರಗಳಿಂದಿಳಿದು, ಬೆಟ್ಟ-ಗುಡ್ಡಗಳನ್ನು ಬಳಸಿ

ಬಳಕುತ್ತ ಊರು-ಕೇರಿಗಳನ್ನು ದಾಟಿ, 

ಸಾಗರದೆದುರು ನಿಂತಾಗ ಕಂಡಿದ್ದು :
ಪಾರವಿಲ್ಲದ ಅಪಾರ ಜಲರಾಶಿ !
ಕಡಲೊಡಲ ಸೇರಿದರೆ ನದಿಗೆ ಶಾಶ್ವತವಾಗಿ ಕಳೆದುಹೋಗುವ ಭೀತಿ!

ಆದರೆ ಆಯ್ಕೆಗಳಿಲ್ಲ.

ನದಿಗಳು ಹಿಂದಕ್ಕೆ ಹರಿಯುವುದಿಲ್ಲ !
 ಬದುಕಿನಲ್ಲಿ ಯಾರೂ ಹಿಂದೆ ಹೋಗಲಾರರು !

ನದಿಗೆ ಮುನ್ನಡೆಯಲೇಬೇಕು
ಸಾಗರವನ್ನು ಸೇರಲೇಬೇಕು.

ನದಿ ಸಾಗರವನ್ನು ಸೇರಿದಾಗ-ಭಯ ಮಾಯ ! 

One thought on “́ನದಿಯ ಭೀತಿ….́ಕವಿತೆ ಮೂಲ: ಖಲೀಲ್ ಗಿಬ್ರಾನ್ ಕನ್ನಡಕ್ಕೆ : ರಾಮಚಂದ್ರ ಎಲ್.ಕನಕ.

Leave a Reply

Back To Top