ವ್ಯಾಸ ಜೋಶಿ ಅವರ ತನಗಗಳು

ಹದಿ ಹರೆಯದಾಗ
ತುಂಬಿದ ಮೈ ಮನಸು
ಆ ಸೋಗಲಾಡಿತನ
ಮಾತುಗಳೇ ಕವನ.

ಶೋಡಷಿಯ ಮನಸು
ಕಳವಳಿಸುತಿದೆ,
ದೃಷ್ಟಿ ಆಕಾಶದಲಿ
ಹೇಳಿದ್ದು ಕೇಳಿಸದೆ.

ದೃಷ್ಟಿಯುದ್ಧ ಮಾಡುತ
ಮಾತಾಡದೆ ನೋಡುತ
ಪರಸ್ಪರ ಹೃದಯ-
-ಕದ್ದ ಕಳ್ಳರಿವರು.

ಉಬ್ಬುಗಲ್ಲದ ಪೋರಿ
ಕನ್ನಡಿಯ ನೋಡುತ,
ಮನಸು ಕದ್ದವನ
ಕಣ್ಣಲ್ಲಿ ಹುಡುಕುತ.

ರಂಗೇರಿದ ಮುಖದ
ನಿನ್ನ ಚಿತ್ರ ಬರೆದೆ,
ನಿನ್ನಷ್ಟೇ ಸರಳವು
ನನ್ನ ಕೈಯ ಕುಂಚವು.

ಮುಂಗುರುಳ ಚೆಲುವೆ
ತನ್ನಲ್ಲೇ ಕಳೆದಳು,
ಕನ್ನಡಿಯ ಒಳಗೆ
ತನ್ನನ್ನೇ ಹುಡುಕೋಳು.


Leave a Reply

Back To Top