ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದ ಬೇಗುದಿಯ ಮರೆತು ಹೇಗಿರಲಿ
ಕನಸು ನುಚ್ಚು ನೂರಾಗಿದೆ
ತನುವು ಬಳಲಿ ಬೆಂಡಾಗಿ ಹೋಗಿರಲು
ಜನುಮ ವ್ಯರ್ಥ ಎನಿಸಿದೆ

ನೂರು ಆಸೆಯು ಎದೆಯ ತುಂಬಲು
ಬೇರು ಬಿಟ್ಟಿದೆ ಆಳಕೆ
ಸೂರು ಕಳಚುತ ಜಾರುತ ಬಿದ್ದಿರಲು
ಗುರಿಯಾಗಿದೆ ಶಾಪಕೆ

ರೆಕ್ಕೆ ಮುರಿದ ಹಕ್ಕಿ ಹಾರಲಾಗದೆ
ಮೂಕ ರೋಧನೆ ಮಾಡಿದೆ
ದುಃಖ ಮರೆಯುತ ನೆಲದಿ ಹೊರಳಿದೆ
ಸುಖದ ಭಾವನೆ ನರಳಿದೆ

ಬಯಸಿ ಬಂದ ಬದುಕು ಬವಣೆಯ
ತೋಯಿಸಿ ಮುಳುಗಿ ಹೋಗಿದೆ
ಮಾಯೆಯ ಮುಸುಕಲಿ ಬೆಳಕು ಕಾಣದೆ
ಛಾಯೆಯಾಗಿ ಕಾಡಿದೆ


About The Author

Leave a Reply

You cannot copy content of this page