ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಧರ್ಮಗಳ ಹೆಸರಲಿ ಮುಸುಕಿದೆ ದ್ವೇಷ
ಮುಗ್ಧರನು ಆವರಿಸಿ ವಿಷಮಯ ತ್ವೇಷ
ಉಸಿರನ್ನೇ ಕಸಿದಿದೆ ಒತ್ತಿ ಕತ್ತುಗಳ
ಹಿಜಾಬ್ ನ ಶಾಲುಗಳ ಕಿತ್ತಾಟದ ಕೇಳಿ.

ಅವಿವೇಕಿ ಮನುಜರ ಏನೆನ್ನಲಿ ನಾನು
ಮಾನವತೆ ಮರೆತಂಥ ನೀಚರಲಿ ಇಂದು
ಹಮೀದಾ ಬೇಗಂ ದೇಸಾಯಿ ಕವಿತೆ-ವಿಶ್ವಶಾಂತಿ.

ಕಳಚಿವೆ ಬಾಂಧವ್ಯ ಕೊಂಡಿಗಳು ಮುರಿದು
ಹಗೆತನ ಸಾಧಿಸುವ ಛಲವನ್ನು ಹೊಂದಿ
ನಗುತಿದೆ ಸ್ವಾರ್ಥವದು ಗೆಲುವನ್ನು ಬೀರಿ
ನಲುಗಿದೆ ನೀತಿಯದು ನೋವಲ್ಲಿ ನರಳಿ.

ರಕ್ಕಸರ ಹೃದಯದಿ ಮೂಡಲಿ ಕರುಣೆ
ವಿಶ್ವಶಾಂತಿ ನೆಲೆಸಲಿ ನೀಗಿಸಿ ಬವಣೆ.
ಮನುಜಮತ ವಿಶ್ವಪಥ ನಮ್ಮದೆನ್ನೋಣ
ಮನುಜಕುಲ ಒಂದೆಂಬ ಭಾವ ಬೆಳೆಸೋಣ


About The Author

1 thought on “ಹಮೀದಾ ಬೇಗಂ ದೇಸಾಯಿ ಕವಿತೆ-ವಿಶ್ವಶಾಂತಿ”

Leave a Reply

You cannot copy content of this page

Scroll to Top