ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನುಜನನು ಮೊದಲು ಸೃಷ್ಟಿಸಿದ ದೇವನು
ತನ್ನ ಕುಡಿಕೆಯಲಿರುವ ಕಾಣಿಕೆಗಳನೆಲ್ಲವನು
ಒಂದಾದ ಮೇಲೊಂದಂತೆ ನೀಡುತ್ತಲವಗೆ
ತನ್ನೆಲ್ಲ ಸಿರಿಗಳನ್ನು ಕೊಡಲವನು ಮುಂದಾದ

ಮೊದಲಿಗೆ ಹರಿಯಿತು ಶಕ್ತಿಯ ಮೂಲವದು
ನಂತರದ ಸ್ಥಾನವದು ಚೆಲುವಿನ ಪಾಲಾಯಿತು
ಜ್ಞಾನ, ಗೌರವ, ಸುಖ, ಸಂತೋಷಗಳು ಹರಿದು
ಕೊನೆಯ ಮಾಣಿಕ್ಯವುಳಿಯಿತು ಕುಡಿಕೆಯ ತಳದಲ್ಲಿ
ಅದುವೆ ಮನ:ಶಾಂತಿಯೆಂಬ ಅಮೂಲ್ಯ ರತ್ನ

ಆ ಮಾಣಿಕ್ಯವನೂ ನಾ ಮನುಜಗೆ ನೀಡಿದರೆ
ತನ್ನ ತಾ ಮರೆಯುತ ನನ್ನನೂ ಮರೆಯುವನು
ಎನಗೆ ಬದಲಾಗಿ ಎನ್ನ ಸಿರಿಗಳನು ಪೂಜಿಸುತ
ಮಾನವನಾಗುವ ಬದಲು ದಾನವನಾಗುವನು
ಕಳೆದುಕೊಳ್ಳುವೆವಾಗ ನಾವು ಒಬ್ಬೊರನೊಬ್ಬರು

ಅದಕೀಗ ನೀಡುವೆನು ಈ ಭವ್ಯ ಕಾಣಿಕೆಯ
ಆ ಶಾಂತಿಯೊಳಗೆ ಈ ಅಶಾಂತಿಯನ್ನೂ ತುರುಕಿ
ಅರಿಯುವನು ಆಗ ಶಾಂತಿಯಾ ಮೌಲ್ಯವನು
ಸಂತಸದ ಸಮಯದಿ ನೆನೆಯದಿದ್ದರೂ ನನ್ನ
ಸಂಕಟದ ಸಮಯದಲ್ಲಿ ಹಾರಿಬರುವ ನನ್ನೆಡೆಗೆ


About The Author

Leave a Reply

You cannot copy content of this page

Scroll to Top