ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಕೃಷ್ಣನ ಲೀಲೆಗಳು

ಗೋಕುಲದ ಮುದ್ದು ಕೃಷ್ಣ
ಮಧುರೆಯ ಸೆರೆಮನೆಯಲ್ಲಿ
ದೇವಕಿಯ ಗರ್ಭದಿ ಜನಿಸಿ
ತಂದೆ ವಸುದೇವಗೆ ದಾರಿ ಕಲ್ಪಿಸಿದ

ಯಶೋಧೆಯ ಮಡಿಲ ಸೇರಿದ ಬಾಲ
ಪುತನಿ ಶಕಟಾಸುರ ರಕ್ಷಸರ ಕೊಂದು
ಯಶೋಧೆ ಕೃಷ್ಣನ ಶಿಕ್ಷಿಸುವಲ್ಲಿ ಮಣ್ಣು ತಿಂದ
ಬಾಯಿಂದ ಬ್ರಹ್ಮಾಂಡವನ್ನೇ ತೋರಿಸಿದ

ಕೃಷ್ಣನು ಮಾಡುವ ತುಂಟಾಟದಲಿ
ಕಲಿಸುವ ಸಂದೇಶವೊಂದು ತಾನಿತ್ತ
ಶಾಪಗ್ರಸ್ತರ ಶಾಪಮುಕ್ತ ಮಾಡುತ
ಎಲ್ಲರಲ್ಲೂ ದೇವರ ಪ್ರತಿರೂಪನಾದ

ಕಾಳಿಂಗ ಸರ್ಪದ ಮೇಲೆ ನರ್ತಿಸಿ
ಯಮುನೆಯ ವಿಷವ ತೊಳೆದ
ಸ್ನೇಹಿತರೆಲ್ಲ ಸೇರಿ ಸ್ವಾಧಿಸಲು
ಮನೆ ಮನೆಯ ಬೆಣ್ಣೆ ಕದ್ದ

ಕಾಡಲಿ ಬೆಂಕಿ ಹೊತ್ತು ಉರಿಯುವಲ್ಲಿ
ಗೋವು ಗೊಲ್ಲರ ರೋಧನೆ ಕೇಳಿ
ಕಣ್ಣು ಮುಚ್ಚಿ ತೆರೆಯುದರೊಳಗೆ
ಗೋಪಾಲ ಆ ಬೆಂಕಿಯನೆಲ್ಲ ನಂದಿಸಿದ

ಗೋವರ್ಥನ ಗಿರಿ ಕಿರುಬೆರಳಲ್ಲಿ ಎತ್ತಿ
ವೃಂದಾವನದ ಜನರ ಮೆಚ್ಚುಗೆ ಪಡೆದ
ವರುಣ ದೇವನು ಮಾಡಿದ ತಪ್ಪಿಗಾಗಿ
ಇಂದ್ರದೇವ ಬಂದು ಕ್ಷಮೆಯಾಚಿಸಿದ

ಕೃಷ್ಣನ ತುಂಟಾಟದ ದಿನಗಳಲ್ಲಿ
ಕೊಳಲನು ಉದುವ ನಾದದಲಿ
ಗೋವುಗಳನೆಲ್ಲ ಜೊತೆಗೂಡಿಸುತ
ಸಖಿಯರ ಮನ ತಾ ಸೆಳೆದ 

ರಾಧೆಯ ಪುನರ್ಜನ್ಮ ಪಡೆದ ಮೀರಾ
ಮೋಕ್ಷ ಪಡೆದಳು ಶ್ರೀ ಕೃಷ್ಣನಿಂದ
ಸೂರದಾಸ ಪುರಂದರದಾಸ ಕನಕದಾಸರ
ರಚಿತ ಪದ್ಯಗಳಲ್ಲಿ ಶ್ರೀಕೃಷ್ಣನ ನೆನೆವು ಚಂದ

ಧರ್ಮದ ಉಳಿವಿಗೆ ಕಂಸ ಮಾವನ ಹತ್ತೆಗೈದ
ವಿಷ್ಣು ಶ್ರೀ ಕೃಷ್ಣನ ಅವತಾರದಲ್ಲಿ ಜನಿಸಿ
ಕೌರವರ ಉದ್ಧಟತನಕೆ ದ್ರೌಪದಿಯ ಅಣ್ಣನಾಗಿ
ತಂಗಿಗೆ ಸಿರೆ ಧಾರೆ ಎರೆದು ಮಾಯಾವಿಯಾದ

—————————–

Leave a Reply

Back To Top